Tag: viral

  • ಮತ್ತೆ ಸದ್ದು ಮಾಡ್ತಿದೆ ನಟಿ ಎದೆ ಪಕ್ಕದಲ್ಲಿ ಪವನ್ ಕಲ್ಯಾಣ್ ಟ್ಯಾಟೋ

    ಮತ್ತೆ ಸದ್ದು ಮಾಡ್ತಿದೆ ನಟಿ ಎದೆ ಪಕ್ಕದಲ್ಲಿ ಪವನ್ ಕಲ್ಯಾಣ್ ಟ್ಯಾಟೋ

    ಹೈದರಾಬಾದ್: ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರ ಹೆಸರು ಹಾಗೂ ಅವರ ಭಾವಚಿತ್ರವನ್ನು ತಮ್ಮ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳಾ ಅಭಿಮಾನಿ ಮತ್ತು ನಟಿ ತನ್ನ ನೆಚ್ಚಿನ ನಟನ ಹೆಸರನ್ನ ಎದೆಯ ಪಕ್ಕದ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

    ನಟಿ ಆಶು ರೆಡ್ಡಿ ಪವನ್ ಕಲ್ಯಾಣ್ ಹೆಸರನ್ನು ಟ್ಯಾಟೋ ಹಾಕಿಸಿಕೊಂಡು ಅನೇಕ ದಿನಾಗಳಾಗಿವೆ. ಆದರೆ ಇದೀಗ ಅವರ ಫೋಟೋ ಮತ್ತೆ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿದೆ. ಆಶು ರೆಡ್ಡಿ ಅವರ ನೆಚ್ಚಿನ ನಟ ಪವನ್ ಕಲ್ಯಾಣ್. ಹೀಗಾಗಿ ಅವರ ಹೆಸರನ್ನು ಎದೆಯ ಭಾಗದಲ್ಲಿ (ಎದೆಯ ಪಕ್ಕದಲ್ಲಿ) ಟ್ಯಾಟೂ ಹಾಕಿಸಿಕೊಂಡಿದ್ದರು.

    ಟ್ಯಾಟೂ ಫೋಟೋವನ್ನು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿ “ಟ್ಯಾಟೋ ಹಾಕಿಸಿಕೊಂಡರೆ ಪವನ್ ಕಲ್ಯಾಣ್ ಜೊತೆ ನನಗೆ ಅಫೇರ್ ಇದ್ಯಾ?” ಎಂದು ಪ್ರಶ್ನೆ ಮಾಡಿದ್ದು, ಜೊತೆ ಉತ್ತರ ಕೊಡಿ ಎಂದು ನಿರ್ದೇಶಕ ಕತ್ತಿ ಮಹೇಶ್ ಅವರಿಗೆ ಟ್ಯಾಗ್ ಮಾಡಿದ್ದರು. ಆಶು ರೆಡ್ಡಿ ಈಗ ತೆಲುಗಿನ ಬಿಗ್‍ಬಾಸ್ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಬಂದಿದ್ದಾರೆ. ಹೀಗಾಗಿ ಹಳೆಯ ಫೋಟೋ ಇದೀಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿದೆ.

    ನಟಿ ಆಶು ರೆಡ್ಡಿ ಅವರು ಡಬ್‍ಸ್ಮಾಶ್ ವಿಡಿಯೋಗಳನ್ನು ಮಾಡುವ ಮೂಲಕ ಖ್ಯಾತಿ ಪಡೆದಿದ್ದು, ಕೆಲವು ಸಿನಿಮಾಗಲ್ಲಿ ಕೂಡ ನಟಿಸಿದ್ದಾರೆ. ಇವರು ನಟಿ ಸಮಂತಾ ಅವರನ್ನೆ ಹೋಲುವಂತೆ ಕಾಣುತ್ತಾರೆ. ಹಾಗಾಗಿ ಇವರನ್ನ ಜೂನಿಯರ್ ಸಮಂತಾ ಎಂದು ಕರೆಯುತ್ತಾರೆ. ಆಶು ರೆಡ್ಡಿ ಅವರು ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿ. ಹಾಗಾಗಿ ಪವನ್ ಹೆಸರನ್ನ ತನ್ನ ಎದೆಯ ಭಾಗದಲ್ಲಿ ಟ್ಯಾಟೂ ಹಾಕಿಕೊಂಡಿದ್ದಾರೆ.

  • ಹಸಿ ಮಾಂಸದ ತಟ್ಟೆಯಿಂದ ಬಿತ್ತು ಕೋಳಿ – ವಿಡಿಯೋ ವೈರಲ್

    ಹಸಿ ಮಾಂಸದ ತಟ್ಟೆಯಿಂದ ಬಿತ್ತು ಕೋಳಿ – ವಿಡಿಯೋ ವೈರಲ್

    ಬೆಂಗಳೂರು: ಹಸಿ ಮಾಂಸ ಇರುವ ಪ್ಲೇಟಿನಿಂದ ಕೋಳಿ ಎಂದು ಹೇಳಲಾಗುತ್ತಿರುವ ಪ್ರಾಣಿ ತೆವಳುತ್ತಾ ನೆಲಕ್ಕೆ ಬೀಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೈರಲ್ ಆಗಿರುವ ವಿಡಿಯೋ ಸತ್ಯವೋ ಸುಳ್ಳೋ ಎನ್ನುವುದರ ಬಗ್ಗೆ ಈಗ ಪ್ರಶ್ನೆ ಎದ್ದಿದೆ. ಕೆಲವರು ಇದು ನಿಜವಾಗಿ ನಡೆದಿದೆ ಎಂದು ಹೇಳಿದರೆ ಮತ್ತೆ ಕೆಲವರು ಎಡಿಟೆಡ್ ವಿಡಿಯೋ ಎಂದು ಹೇಳುತ್ತಿದ್ದಾರೆ.

    ಕೆಲವೊಂದು ಫ್ಯಾಕ್ಟ್ ಚೆಕ್ ವೆಬ್‍ಸೈಟ್ ಗಳು ಇದು ಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡಿದೆ ಎಂದು ಹೇಳಿದ್ದರೆ ಕೆಲ ಇಂಗ್ಲೀಷ್ ತಾಣಗಳು ಹಾಂಕಾಂಗ್ ನಲ್ಲಿ ಮೊದಲು ವಿಡಿಯೋ ಅಪ್ಲೋಡ್ ಆಗಿದೆ ಎಂದು ಹೇಳಿವೆ.

    https://twitter.com/lizardtoess/status/1154973048937832448

    ಪ್ರಾಣಿ ಶಾಸ್ತ್ರಜ್ಞರು ಇದು ಕೋಳಿಯೂ ಅಲ್ಲ ಕಪ್ಪೆಯೂ ಅಲ್ಲ. ಮೀನು ಆಗಿರುವ ಸಾಧ್ಯತೆಯಿದೆ. ತೆವಳುತ್ತಾ ಹಾರಬೇಕಾದರೆ ಮೀನು ಮಾತ್ರ ಆಗಿರಬೇಕು. ಚರ್ಮ ತೆಗೆದ ಮೀನು ಈ ರೀತಿ ಹಾರಿರಬಹುದು ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಇದು ನೈಜವೋ? ಎಡಿಟೆಡ್ ವಿಡಿಯೋ ಎನ್ನುವುದರ ಬಗ್ಗೆ ಗೊಂದಲವಿದೆ. ಈ ಸುದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಮೆಂಟ್ ಮಾಡಿ ತಿಳಿಸಿ.

  • ಮಹಿಳೆ ಜೊತೆ ಸಂಭಾಷಣೆಯ ಆಡಿಯೋ ವೈರಲ್: ಹೆಚ್. ವಿಶ್ವನಾಥ್ ಸ್ಪಷ್ಟನೆ

    ಮಹಿಳೆ ಜೊತೆ ಸಂಭಾಷಣೆಯ ಆಡಿಯೋ ವೈರಲ್: ಹೆಚ್. ವಿಶ್ವನಾಥ್ ಸ್ಪಷ್ಟನೆ

    ಬೆಂಗಳೂರು: ಹುಣಸೂರು ಶಾಸಕ ಹೆಚ್. ವಿಶ್ವನಾಥ್ ಅವರ ಧ್ವನಿ ಎನ್ನಲಾದ ಆಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ ಜೊತೆಯ ಸರಸ ಸಲ್ಲಾಪದ ಆಡಿಯೋ ಇದು ಎನ್ನಲಾಗಿದೆ. ಈ ಆಡಿಯೋ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ಯಾರೋ ಮಿಮಿಕ್ರಿ ಮಾಡಿ ಈ ಆಡಿಯೋ ಹರಿಬಿಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಯಾರೋ ಈ ಆಡಿಯೋದಲ್ಲಿ ಮಿಮಿಕ್ರಿ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಈ ರೀತಿ ಮಾಡುವುದು ಸಹಜ. ನಾವು ಪಕ್ಷ ಬಿಟ್ಟಿದ್ದಕ್ಕೆ ನಮ್ಮ ರಾಜಕೀಯದ ಎದುರಾಳಿಗಳು ಕೆಟ್ಟ ಹೆಸರು ತರಲು ಈ ರೀತಿಯ ಕೆಲಸವನ್ನು ಮಾಡಿಸುತ್ತಾರೆ ಎಂದು ಆರೋಪಿಸಿದರು.

    ರಾಜಕೀಯಕ್ಕಾಗಿ ಈ ರೀತಿ ಮಾಡಿಸಿದ್ದಾರೆ. ನಾನು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲ್ಲ. ನಾನು ಏನು, ಯಾವ ತರಹ ಹಾಗೂ ನನ್ನ ಲವ್ ಸ್ಟೋರಿ ಬಗ್ಗೆ ಪುಸ್ತಕ ಬರೆದಿದ್ದೇನೆ. ಯಾರೋ ನಮಗೆ ಆಗದೇ ಇರುವವರು ಈ ರೀತಿ ಮಾಡಿದ್ದಾರೆ. ನಮ್ಮ ಹುಣಸೂರಿನಲ್ಲಿ ಶವಸಂಸ್ಕಾರ ಕೂಡ ಮಾಡಿದ್ದರು. ಈ ರೀತಿ ಆಗುತ್ತಿರುತ್ತದೆ. ಈಗಿನ ರಾಜಕೀಯದ ಸ್ಥಿತಿ ಕೂಡ ಹಾಗೆಯೇ ಇದೆ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ ಎಂದು ಹೇಳಿದರು.

    ಸರಸ ಸಲ್ಲಾಪ ವಿಚಾರ ಜನರ ಕಣ್ಣಿಗೆ, ಕಿವಿಗೆ ಬೇಗ ಹೋಗುತ್ತದೆ. ಹಾಗಾಗಿ ಅವರು ಈ ವಿಷಯ ಇಟ್ಟುಕೊಂಡು ನನಗೆ ಈ ರೀತಿ ಮಾಡುತ್ತಿದ್ದಾರೆ. ಇದರಿಂದ ಏನೂ ಆಗುವುದಿಲ್ಲ. ಇದು ಕೇವಲ ಕ್ಷಣಿಕ ಅಷ್ಟೇ. ರಾಜೀನಾಮೆ ನೀಡಿದ ಬಳಿಕ ಈ ರೀತಿಯ ಆಡಿಯೋವನ್ನು ಹರಿಬಿಟ್ಟಿದ್ದಾರೆ. ನನಗೆ ಯಾರ ಮೇಲೂ ಅನುಮಾನ ಇಲ್ಲ. ಈ ಆಡಿಯೋ ರಿಲೀಸ್ ಆಗುವ ಮೊದಲು ನನಗೆ ಇಬ್ಬರು ಕರೆ ಮಾಡಿ ನಿಮ್ಮ ವಿರುದ್ಧ ಸೆಕ್ಸ್ ಸ್ಕ್ಯಾಂಡಲ್ ಆರೋಪ ಮಾಡುತ್ತಿದ್ದಾರೆ, ಹುಷಾರಾಗಿರಿ ಎಂದಿದ್ದರು ಎಂದು ವಿಶ್ವನಾಥ್ ತಿಳಿಸಿದರು.

    ನಮ್ಮ ಸಾರ್ವಜನಿಕ ಬದುಕು ಜನರಿಗೆ ಗೊತ್ತಿದೆ. ದೊಡ್ಡವರಿಂದ ಚಿಕ್ಕವರವರೆಗೂ ನನ್ನ ವೈಯಕ್ತಿಕ ವಿಚಾರ, ಹಣಕಾಸು ವಿಚಾರ ಎಲ್ಲರಿಗೂ ಗೊತ್ತು. ನಾನು ನನ್ನ ವೈಯಕ್ತಿಕ ವಿಷಯದ ಬಗ್ಗೆ ಪುಸ್ತಕ ಬರೆದಿದ್ದೇನೆ. ಹಾಗಾಗಿ ನಾನು ಈ ವಿಷಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

  • ಸಿಎಂ ನೇರವಾಗಿ ಧಾರವಾಡಕ್ಕೆ ಬಂದ್ರೆ 3 ದಿನಗಳಲ್ಲಿ ಸರ್ಕಾರ ಉಳಿಯುತ್ತೆ: ಸ್ವಾಮೀಜಿ ಭವಿಷ್ಯ

    ಸಿಎಂ ನೇರವಾಗಿ ಧಾರವಾಡಕ್ಕೆ ಬಂದ್ರೆ 3 ದಿನಗಳಲ್ಲಿ ಸರ್ಕಾರ ಉಳಿಯುತ್ತೆ: ಸ್ವಾಮೀಜಿ ಭವಿಷ್ಯ

    ಧಾರವಾಡ: ಶಾಸಕರ ರಾಜೀನಾಮೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಮೈತ್ರಿ ಸರ್ಕಾರ ಉಳಿಯಬೇಕು ಎಂದರೆ ಮುಖ್ಯಮಂತ್ರಿಗಳು ಅಮೆರಿಕಾದಿಂದ ನೇರವಾಗಿ ಧಾರವಾಡಕ್ಕೆ ಬಂದರೆ ಮೂರು ದಿನಗಳಲ್ಲಿ ಸರ್ಕಾರ ಉಳಿಯುತ್ತೆ ಎಂದು ಸ್ವಾಮೀಜಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

    ಧಾರವಾಡದ ಮೈಲಾರ ಸ್ವಾಮೀಜಿಯವರು ಈ ರೀತಿಯ ಭವಿಷ್ಯವೊಂದನ್ನು ನುಡಿದಿದ್ದಾರೆ. ಜಿಲ್ಲೆಯ ರಾಜೀವಗಾಂಧಿ ನಗರದಲ್ಲಿರುವ ತಮ್ಮ ದೇವಸ್ಥಾನದಲ್ಲಿ ಭವಿಷ್ಯವನ್ನು ಸ್ವಾಮೀಜಿ ಹೇಳಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಕತ್ತಿನ ಮಧ್ಯೆ ತ್ರಿಶೂಲದ ಅಂಚು ಸಿಕ್ಕಿಸಿಕೊಂಡು ನಂತರ ಅದನ್ನು ಕಣ್ಣಿನ ಮೇಲಿಟ್ಟುಕೊಂಡು ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ. ಮೈತ್ರಿ ಸರ್ಕಾರ ಸಂಕಷ್ಟದಲ್ಲಿರುವ ಸಮಯದಲ್ಲಿ ಅಮೆರಿಕ ಪ್ರವಾಸಕ್ಕೆ ಹೋಗಿರುವ ಮುಖ್ಯಮಂತ್ರಿಗಳು ನೇರವಾಗಿ ಧಾರವಾಡಕ್ಕೆ ಬಂದು ಆದಿಶಕ್ತಿ ಹೊಳೆಮ್ಮನ ದರ್ಶನ ಪಡೆದು ನಂತರ ವಿಧಾನಸೌಧ ಪ್ರವೇಶಿಸಿದರೆ ಮೂರು ದಿನದಲ್ಲಿ ಸರ್ಕಾರ ಉಳಿಯುತ್ತೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

  • ಮಾರ್ಕ್ಸ್‌ಗಾಗಿ ವಿದ್ಯಾರ್ಥಿನಿ ಜೊತೆ ಪ್ರಿನ್ಸಿಪಾಲ್ ಕಾಮದಾಟ

    ಮಾರ್ಕ್ಸ್‌ಗಾಗಿ ವಿದ್ಯಾರ್ಥಿನಿ ಜೊತೆ ಪ್ರಿನ್ಸಿಪಾಲ್ ಕಾಮದಾಟ

    ಗದಗ: ಕಾಲೇಜಿನ ಕಾಮುಕ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿನಿ ಜೊತೆ ಅಶ್ಲೀಲವಾಗಿ ವರ್ತಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಖಾಸಗಿ ಕಾಲೇಜಿನ ಕನ್ನಡ ಉಪನ್ಯಾಸಕರು ಹಾಗೂ ಕಾಲೇಜಿನ ಪ್ರಾಂಶುಪಾಲ ಬಸವರಾಜ್ ವಿದ್ಯಾರ್ಥಿನಿ ಜೊತೆ ಅಶ್ಲೀಲವಾಗಿ ವರ್ತಿಸಿದ ಕಾಮುಕ. ಈತ ಕಾಲೇಜಿನ ವಿದ್ಯಾರ್ಥಿನಿ ಜೊತೆ ಚಿನ್ನ, ರನ್ನಾ, ಬಂಗಾರ ಎಂದು ಸೆಕ್ಸ್ ಪಾಠ ಮಾಡಿರುವುದು ಬೆಳಕಿಗೆ ಬಂದಿದೆ. ಇಂಟರ್ನಲ್ ಮಾರ್ಕ್ಸ್‌ ಗಾಗಿ ನಡೆದ ವಿದ್ಯಾರ್ಥಿನಿ ಹಾಗೂ ಪ್ರಾಂಶುಪಾಲನ ಕಾಮಪುರಾಣ ಈಗ ಬೆಳಕಿಗೆ ಬಂದಿದೆ.

    ಬೆಳಗ್ಗೆ ಸಭ್ಯನ ಹಾಗೆ ಬಂದು ಪಾಠ ಮಾಡುತ್ತಿದ್ದ ಬಸವರಾಜ್, ಆ ಬಳಿಕ ವಿದ್ಯಾರ್ಥಿನಿಯರ ಇಂಟರ್ನಲ್ ಮಾರ್ಕ್ಸ್‌ ಮುಂದಿಟ್ಟುಕೊಂಡು ಕಾಮದ ಪಾಠ ಶುರು ಮಾಡಿಕೊಳ್ಳುತ್ತಿದ್ದನು. ಇದೇ ರೀತಿ ಅರೆಬೆತ್ತಲಾಗಿ ಓರ್ವ ವಿದ್ಯಾರ್ಥಿನಿಗೆ ವಿಡಿಯೋ ಕಾಲ್ ಮಾಡಿ, ಅದರ ಸ್ಕ್ರೀನ್‍ಶಾಟ್ ತೆಗೆದು ಸರಿಯಾಗೇ ತಗಲಾಕ್ಕೊಂಡಿದ್ದಾನೆ. ಈ ಫೋಟೋ, ಮೆಸೇಜ್‍ಗಳು ವೈರಲ್ ಆಗಿದ್ದು, ಕಾಲೇಜಿನ ಹಳೆ ವಿದ್ಯಾರ್ಥಿಗಳು ಬಸವರಾಜ್‍ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಬಸವರಾಜ್ ಈ ರೀತಿ ಮಾಡಿರುವುದು ಇದೇ ಮೊದಲೇನಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ರೀತಿ ಕಾಮಪುರಾಣ ಮುಂದುವರಿಸಿದ್ದಾನೆ. ಈ ಬಗ್ಗೆ ಕಾಲೇಜ್ ಆಡಳಿತಕ್ಕೆ ಕೇಳಿದರೆ ಸೂಕ್ತ ದಾಖಲೆ ನೀಡಿ, ರೈಟಿಂಗ್‍ನಲ್ಲಿ ಬರೆದುಕೊಡಿ ಎನ್ನುತ್ತಿದ್ದಾರೆ.

    ಏನು ಸಾರ್ ಹೀಗೆಲ್ಲಾ ಮಾಡುತ್ತಿರಲ್ಲ ಎಂದು ಬಸವರಾಜ್‍ನನ್ನು ಕೇಳಿದರೆ, ನಾನು ವಿದ್ಯಾರ್ಥಿನಿಯೊಂದಿಗೆ ಮೆಸೇಜ್ ಮಾಡಿದ್ದು ನಿಜ. ಆದರೆ ಇದು ನನ್ನ ಖಾಸಗಿ ಬದುಕು. ಯಾರೋ ನನ್ನ ಮತ್ತು ಆ ಹುಡುಗಿ ಮೊಬೈಲ್ ಹ್ಯಾಕ್ ಮಾಡಿ ಈ ಫೋಟೋ, ಮೆಸೇಜ್ ಕದ್ದಿದ್ದಾರೆ. ಅವರನ್ನು ಸುಮ್ನೆ ಬಿಡಲ್ಲ, ಕೇಸ್ ಹಾಕುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾನೆ.

    ಭಾರತೀಯ ಪರಂಪರೆಯಲ್ಲಿ ಶಿಕ್ಷಕರಿಗೆ ಒಂದು ಮಹತ್ವದ ಸ್ಥಾನ ಇದೆ. ಆದರೆ ಇಂತಹ ಕೆಲ ನೀಚರಿಂದ ಶಿಕ್ಷಕರ ಹೆಸರು ಹಾಳಾಗುತ್ತಿದೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಯಾವ ರೀತಿ ಕ್ರಮಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

  • ಸಂಸದ ಬಸವರಾಜ್ ಜೊತೆಗೆ ಮುದ್ದೆ ಊಟ ಸವಿದ ಪ್ರಜ್ವಲ್ ರೇವಣ್ಣ

    ಸಂಸದ ಬಸವರಾಜ್ ಜೊತೆಗೆ ಮುದ್ದೆ ಊಟ ಸವಿದ ಪ್ರಜ್ವಲ್ ರೇವಣ್ಣ

    ಹಾಸನ: ತುಮಕೂರು ಸಂಸದ ಬಸವರಾಜ್ ಜೊತೆಗೆ ಮುದ್ದೆ ಊಟ ಮಾಡಿದ ಹಾಸನದ ನೂತನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

    ಸಂಸದ ಪ್ರಜ್ವಲ್ ರೇವಣ್ಣ, ಬಸವರಾಜ್ ಅವರು ಜೊತೆ ಕುಳಿತು ಊಟ ಮಾಡುತ್ತಿರುವ ಫೋಟೋವನ್ನು ಪ್ರಜ್ವಲ್ ರೇವಣ್ಣ ಅಭಿಮಾನಿಗಳು ಟ್ವಿಟ್ಟರ್ ಮತ್ತು ಫೇಸ್‍ಬುಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಡೆಲ್ಲಿ ಅಲ್ಲ ಅಮೆರಿಕಕ್ಕೆ ಹೋದ್ರೂ ನಮಗೆ ರಾಗಿ ಮುದ್ದೆ ಇರ್ಬೇಕ್” ಎಂದು ಬರೆದುಕೊಂಡಿದ್ದರು.

    https://twitter.com/NammaMP_Prajwal/status/1146099514907873280

    ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ದೇವೇಗೌಡರು ತಮ್ಮ ಸ್ವಕ್ಷೇತ್ರ ಹಾಸನವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟು ತುಮಕೂರಿನಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈಗ ದೇವೇಗೌಡರನ್ನು ಸೋಲಿಸಿದ ಬಿಜೆಪಿ ಸಂಸದರ ಜೊತೆ ಊಟಮಾಡಿದ ಪ್ರಜ್ವಲ್ ಅವರನ್ನು ಕೆಲವರು ಟೀಕಿಸಿ ಕಾಮೆಂಟ್ ಮಾಡಿದ್ದಾರೆ.

    ಕೆಲವರು ನೀವು ದೇವೇಗೌಡರ ಮೊಮ್ಮಗನಾಗಿದ್ದರೆ ಬಸವರಾಜು ಅವರ ಜೊತೆ ಕುಳಿತು ಊಟ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಯಾವುದೇ ಕಾರಣಕ್ಕೂ ತುಮಕೂರು ಸಂಸದರ ಜೊತೆ ಕುಳಿತುಕೊಳ್ಳಬಾರದು ಎಂದು ಕಾಮೆಂಟ್ ಮಾಡಿದ್ದಾರೆ.

  • ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ – ಕಾಮುಕರಿಗೆ ಲಾಠಿ ರುಚಿ

    ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ – ಕಾಮುಕರಿಗೆ ಲಾಠಿ ರುಚಿ

    ಮಡಿಕೇರಿ: ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ತೋರಿದ ಕೇರಳ ಮೂಲದ ಇಬ್ಬರಿಗೆ ಪೊಲೀಸರು ಲಾಠಿ ರುಚಿ ತೋರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದಲ್ಲಿ ನಡೆದಿದೆ. ಕೇರಳದ ಮಲಪುರಂ ಮಹಮ್ಮದ್ ಫುತಾಲಿಕ್ (32), ಶರೀಫ್ (30) ಇಬ್ಬರಿಗೂ ಪೊಲೀಸರು ಚೆನ್ನಾಗಿ ಥಳಿಸಿದ್ದಾರೆ. ಜೂ. 18 ರಂದು ಪಾಲಿಬೆಟ್ಟದ ಪದವಿ ಪೂರ್ವ ಕಾಲೇಜಿನ ಮುಂಭಾಗ ಇಬ್ಬರು ಕೇರಳದಿಂದ ಕಾರಿನಲ್ಲಿ ಬಂದು ನಿಂತಿದ್ದರು.

    ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ತೋರಿದ್ದರು. ಕಾಲೇಜು ಪ್ರಾಂಶುಪಾಲರು ದೂರಿನ ಮೇರೆಗೆ ಪಾಲಿಬೆಟ್ಟ ಉಪಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಇಬ್ಬರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಲಾಠಿ ರುಚಿ ತೋರಿಸಿದ್ದಾರೆ. ಈ ವೇಳೆ ಪೊಲೀಸ್ ಠಾಣೆಯಲ್ಲಿದ್ದ ವಿದ್ಯಾರ್ಥಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು. ಇದೀಗ ಆ ವಿಡಿಯೋ ವಾಟ್ಸಪ್, ಫೇಸ್‍ಬುಕ್‍ಗಳಲ್ಲಿ ವೈರಲ್ ಆಗಿದೆ.

    ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ ತೋರಿದ್ದ ಕೇರಳ ಮೂಲದ ವ್ಯಕ್ತಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಆಕಾಶದಲ್ಲಿ ಮೂಡಿದ ಮೋಡಗಳ ಅಲೆ: ಫೋಟೋ ವೈರಲ್

    ಆಕಾಶದಲ್ಲಿ ಮೂಡಿದ ಮೋಡಗಳ ಅಲೆ: ಫೋಟೋ ವೈರಲ್

    ವಾಷಿಂಗ್‍ಟನ್: ಆಕಾಶದಲ್ಲಿ ಮೋಡಗಳ ಅಲೆ ಮೂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ಜನರು ಆಶ್ಚರ್ಯಪಡುತ್ತಿದ್ದಾರೆ.

    ಮೋಡಗಳ ಫೋಟೋವನ್ನು ಮಂಗಳವಾರ ಸಂಜೆ ವರ್ಜೀನಿಯಾದ ಲೇಕ್ ಸ್ಮಿತ್ ಪರ್ವತದಲ್ಲಿ ಕ್ಲಿಕ್ಕಿಸಲಾಗಿದೆ. ಈ ಅಲೆಗಳ ಮೋಡವನ್ನು ಕೆಲ್ವಿನ್ ಹೆಲ್ಮ್‍ಹೋಲ್ಟ್ಜ್ ವೇವ್ ಎಂದು ಕರೆಯಲಾಗುತ್ತದೆ. ಇದರ ಫೋಟೋವನ್ನು ಆ್ಯಮಿ ಕ್ರಿಸ್ಟೈ ಹಂಟರ್ ಸೆರೆ ಹಿಡಿದಿದ್ದಾರೆ.

    ಆ್ಯಮಿ ಕ್ರಿಸ್ಟೈ ಈ ಫೋಟೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಾಕಿ ಅದಕ್ಕೆ, ಇಂದು ಸಂಜೆ ಸ್ಮಿತ್ ಮೌಂಟೇನ್‍ನಲ್ಲಿ ಅತ್ಯಂತ ತಂಪಾದ ಮೋಡಗಳು ಪರ್ವತದ ಮೇಲ್ಭಾಗದಲ್ಲಿ ಉರುಳುತ್ತಿದೆ. ಇದಕ್ಕೆ ಕೆಲ್ವಿನ್ ಹೆಲ್ಮ್‍ಹೋಲ್ಟ್ಜ್ ಮೋಡ ಎಂದು ಕರೆಯುತ್ತಾರೆ. ನಾನು ಈ ಫೋಟೋವನ್ನು ಹವಾಮಾನ ತಜ್ಞರಿಗೆ ಕಳುಹಿಸಿದ್ದೇನೆ. ಆಗ ಅವರು ಇದು ಅಪರೂಪದ ಮೋಡ ಹಾಗೂ ಇದರ ಬಗ್ಗೆ ವ್ಯಾಖ್ಯಾನ ಮಾಡಲು ಆಗುವುದಿಲ್ಲ ಎಂದು ಹೇಳಿದರು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಾಕುತ್ತಿದ್ದಂತೆ 600ಕ್ಕೂ ಹೆಚ್ಚು ಶೇರ್ ಪಡೆದುಕೊಂಡಿದೆ. ಅಲ್ಲದೆ 144ಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ. ಈ ಫೋಟೋ ನೋಡಿ ಕೆಲವರು ‘ಇದು ತುಂಬಾ ಸುಂದರವಾಗಿದೆ’ ಎಂದು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ‘ವಾವ್ ಇದು ಪೇಟಿಂಗ್ ರೀತಿ ಕಾಣಿಸುತ್ತಿದೆ’ ಎಂದು ಬಣ್ಣಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಇಂಡೋ-ಪಾಕ್ ಪಂದ್ಯ- ಕೆನಡಾ ದಂಪತಿಗಳ ಜೆರ್ಸಿಗೆ ನೆಟ್ಟಿಗರು ಫಿದಾ

    ಇಂಡೋ-ಪಾಕ್ ಪಂದ್ಯ- ಕೆನಡಾ ದಂಪತಿಗಳ ಜೆರ್ಸಿಗೆ ನೆಟ್ಟಿಗರು ಫಿದಾ

    ನವದೆಹಲಿ: ಭಾನುವಾರ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಭಾರತ ಮತ್ತು ಪಾಕ್ ನಡುವಿನ ಪಂದ್ಯ ನೋಡಲು ಅಭಿಮಾನಿಗಳು ತಮ್ಮದೇ ವಿನೂತನ ಶೈಲಿಯಲ್ಲಿ ಬಂದು ತಮ್ಮ ತಮ್ಮ ತಂಡಗಳನ್ನು ಹುರಿದುಂಬಿಸಿದರು.

    ಅದರಂತೆ ಕೆನಡಾ ದಂಪತಿ ಧರಿಸಿದ್ದ ವಿನೂತನ ಶೈಲಿಯ ಜೆರ್ಸಿ ಈಗ ಎಲ್ಲರ ಗಮನ ಸೆಳೆದಿದೆ. ಪಂದ್ಯವನ್ನು ವಿಕ್ಷೀಸಲು ಬಂದಿದ್ದ ಕೆನಡಾ ಜೋಡಿ ಪಾಕಿಸ್ತಾನ ಮತ್ತು ಭಾರತ ಎರಡು ದೇಶಗಳನ್ನು ಪ್ರತಿನಿಧಿಸುವ ಉಡುಪನ್ನು ಧರಿಸಿ ಕ್ರೀಡಾಭಿಮಾನ ಮೆರೆದಿದ್ದಾರೆ.

    ದಂಪತಿಗಳು ಅವರ ಟಿ-ಶರ್ಟ್‍ನಲ್ಲಿ ಅರ್ಧದಷ್ಟು ಭಾಗ ಭಾರತದ ಜೆರ್ಸಿಯಾದರೆ ಇನ್ನುಳಿದ ಅರ್ಧದಷ್ಟು ಭಾಗ ಪಾಕಿಸ್ತಾನ ಜೆರ್ಸಿ ಇರುವ ಟಿ-ಶರ್ಟ್ ಧರಿಸಿ ಬಂದಿದ್ದರು. ಈ ಮೂಲಕ ಎರಡು ರಾಷ್ಟ್ರಗಳ ಮೇಲೆ ತಮಗಿರುವ ಅಭಿಮಾನವನ್ನು ತೋರಿದ್ದಾರೆ.

    ಈ ಫೋಟೋವನ್ನು ಲಂಡನ್ ಮೂಲದ ಲಕ್ಷ್ಮಿ ಕೌಲ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದು ಈಗ ಈ ಫೋಟೋ ಸಖತ್ ವೈರಲ್ ಆಗಿದೆ. ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಟ್ವೀಟ್‍ಗೆ 2,500 ರೀಟ್ವೀಟ್‍ಗಳು ಮತ್ತು 13,305 ಲೈಕ್‍ಗಳು ಬಂದಿವೆ.

    ಈ ದಂಪತಿಗಳ ಫೋಟೋ ಹಾಕಿದ ಲಕ್ಷ್ಮಿ ಕೌಲ್ ಅವರು, ಈ ವ್ಯಕ್ತಿ ಪಾಕಿಸ್ತಾನ ಮೂಲದವನು ಮತ್ತು ಅವನ ಹೆಂಡತಿ ಭಾರತ ಮೂಲದವಳು ಎಂದು ಬರೆದುಕೊಂಡಿದ್ದಾರೆ. ಈ ದಂಪತಿಗಳು ಕ್ರಿಕೆಟ್ ಆಟವನ್ನು ಆಚರಿಸಲು ಬಂದಿದ್ದಾರೆ. ಕ್ರಿಕೆಟ್ ಆಟದ ನಿಜವಾದ ಸಾರವನ್ನು ಪ್ರಪಂಚಕ್ಕೆ ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ.

    ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದನ್ವಯ 89 ರನ್‍ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೇವಲ 113 ಎಸೆತಗಳಿಗೆ ಭರ್ಜರಿ 140 (14 ಬೌಂಡರಿ, 3 ಸಿಕ್ಸರ್) ಬಾರಿಸಿದ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಸ್ಥಾನಕ್ಕೆ ಭಾಜನರಾದರು.

  • ಮದುಮಗಳಾಗಿ ಮಿಂಚಿದ ಬಾಲಿವುಡ್ ನಟಿ ಕತ್ರಿನಾ

    ಮದುಮಗಳಾಗಿ ಮಿಂಚಿದ ಬಾಲಿವುಡ್ ನಟಿ ಕತ್ರಿನಾ

    ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಮದುಮಗಳಾಗಿ ಮಿಂಚಿದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಇತ್ತೀಚೆಗೆ ಬಿಡುಗಡೆಯಾದ ‘ಭಾರತ್’ ಚಿತ್ರದಲ್ಲಿ ಕತ್ರಿನಾ ಮದುಮಗಳಾಗಿ ಮಿಂಚಿದ್ದರು. ಈ ಫೋಟೋವನ್ನು ಭಾರತ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಕತ್ರಿನಾ ಈ ಫೋಟೋಗೆ ಪೋಸ್ ನೀಡಿದ್ದರು. ಸದ್ಯ ಈ ಫೋಟೋ ಈಗ ವೈರಲ್ ಆಗುತ್ತಿದೆ.

    ಈ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ಅವರನ್ನು ಮದುವೆಯಾಗಲು ಕತ್ರಿನಾ ಕ್ಯಾಥೋಲಿಕ್ ಬ್ರೈಡೆಡ್ ಲುಕ್‍ನಲ್ಲಿ ನಟಿಸಿದ್ದರು. ಈ ಲುಕ್‍ನಲ್ಲಿ ಕತ್ರಿನಾ ಬಿಳಿ ಬಣ್ಣದ ಗೌನ್ ಧರಿಸಿ ಸುಂದರವಾಗಿ ಕಾಣಿಸುತ್ತಿದ್ದಾರೆ. ಕತ್ರಿನಾ ಈ ಗೌನ್ ಧರಿಸಿ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡಿದ್ದಾರೆ.

    ಕತ್ರಿನಾ ಕೈಫ್ ಧರಿಸಿರುವ ಈ ಗೌನ್‍ನನ್ನು ಸಲ್ಮಾನ್ ಖಾನ್ ಅವರ ಪರ್ಸನಲ್ ಡಿಸೈನರ್ ಎಶೇಲೆ ರೆಬೆಲೋ ವಿನ್ಯಾಸ ಮಾಡಿದ್ದಾರೆ. ಸದ್ಯ ಭಾರತ್ ಚಿತ್ರದಲ್ಲಿ ಕತ್ರಿನಾ ಕುಮುದ್ ರೈನಾ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಇದು ಅವರ ಬೆಸ್ಟ್ ಲುಕ್ ಆಗಿದೆ.

    ಸದ್ಯ ಭಾರತ್ ಚಿತ್ರ ಭಾರತದಲ್ಲಿ ಇದುವರೆಗೂ 160 ಕೋಟಿ ರೂ. ಕಲೆಕ್ಷನ್ ಆಗಿದ್ದು, ವಿಶ್ವಾದ್ಯಂತ 250 ಕೋಟಿ ರೂ. ಕಲೆಕ್ಷನ್ ಆಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ದಿಶಾ ಪಠಾನಿ ಸೇರಿದಂತೆ ಜಾಕಿ ಶ್ರಾಫ್, ಸುನಿಲ್ ಗ್ರೋವರ್, ತಬು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.