Tag: viral video

  • 60 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಗೆಳೆಯನ ಕಾರಿನಿಂದ ಜಿಗಿದ ಮಹಿಳೆ-ಮುಂದೆ ನಡೆದಿದ್ದು ರೋಚಕ

    60 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಗೆಳೆಯನ ಕಾರಿನಿಂದ ಜಿಗಿದ ಮಹಿಳೆ-ಮುಂದೆ ನಡೆದಿದ್ದು ರೋಚಕ

    ತೈನಾನ್: ಗೆಳೆಯನೊಂದಿಗೆ ಜಗಳ ಮಾಡಿಕೊಂಡು ಚಲಿಸುತ್ತಿರುವ ಕಾರಿನಿಂದ ಪತ್ನಿ ಜಿಗಿದಿರುವ ಘಟನೆ ನೈರುತ್ಯ ತೈವಾನ್ ದೇಶದ ತೈನಾನ್ ನಗರದಲ್ಲಿ ನಡೆದಿದೆ.

    ಈ ಘಟನೆ ಮಧ್ಯಾಹ್ನ 2 ಗಂಟೆಗೆ ಕ್ಷಿನಿಯಿಂಗ್ ಜಿಲ್ಲೆಯಲ್ಲಿ ನಡೆದಿದ್ದು, ಮಹಿಳೆ ಕಾರಿನಿಂದ ಜಿಗಿಯುವ ಎಲ್ಲ ದೃಶ್ಯಗಳು ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ದಂಪತಿ ಕಾರಿನಲ್ಲಿ ಪ್ರಯಾಣಿಸುವಾಗ ಇಬ್ಬರ ಮಧ್ಯೆ ಜಗಳ ನಡೆದಿದೆ. ಮಹಿಳೆ ಕಾರು ನಿಲ್ಲುವರೆಗೂ ಕಾಯದೇ ಬಾಗಿಲು ತೆರೆದು ಇಳಿಯಲು ಪ್ರಯತ್ನಿಸಿದ್ದು, ಕಾರು ಒನ್ ವೇ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರಣ ಹಿಂದೆ ಬರುತ್ತಿರುವ ವಾಹನಗಳು ಆಕೆಯ ಹರಿಯುವ ಸಾಧ್ಯತೆಗಳಿದ್ದವು.

    ಮಹಿಳೆ ಕಾರಿನಿಂದ ಇಳಿಯುವ ಪ್ರಯತ್ನ ಮಾಡುತ್ತಿದ್ದ ಆಕೆಯ ಗೆಳೆಯ ಕಾರನ್ನು ರಸ್ತೆಯ ಒಂದು ಬದಿಗೆ ತಂದ ಕಾರಣ ಯಾವುದೇ ಅಪಾಯವಾಗಲಿಲ್ಲ. ಈ ಘಟನೆ ನಡೆಯುವಾಗ ಕಾರು ಗಂಟೆಗೆ 60 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿತ್ತು ಎಂದು ವರದಿಯಾಗಿದೆ.

    ಕಾರು ಚಲಿಸುತ್ತಿದ್ದಂತೆ ಬದಿಯ ಬಾಗಿಲು ತೆರೆದುಕೊಳ್ಳುತ್ತದೆ. ಕಾರಿನಿಂದ ಹೊರ ಬಂದ ಮಹಿಳೆ ಭಯಬೀತಳಾಗಿ ಡೋರನ್ನು ಆಸರೆಯಾಗಿ ಹಿಡಿದುಕೊಂಡು ನೇತಾಡುವುದನ್ನು ಕಾಣಬಹುದು. ಕಾರು ಸ್ವಲ್ಪ ಮುಂದೆ ಚಲಿಸಿದ ಕೂಡಲೇ ಮಹಿಳೆ ಹಾರಿದ್ದು, ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಪೊಲೀಸರ ಮುಂದೆ ತಾನಾಗಿಯೇ ಕೋಪಗೊಂಡು ಕಾರಿನಿಂದ ಹೊರ ಜಿಗಿಯುವ ಪ್ರಯತ್ನ ಮಾಡಿದ್ದೇನೆ ಎಂದು ಮಹಿಳೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ಘಟನೆ ಸಂಬಂಧ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಳ್ಳದೇ ಇಬ್ಬರ ಜಗಳವನ್ನು ಬಗೆಹರಿಸಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

    https://www.youtube.com/watch?v=rpRDuCG3yhE

  • ಹಾರರ್ ಸಿನಿಮಾ ಶೂಟಿಂಗ್ ವೇಳೆ ಸಹನಟಿಯ ಮೇಲೆ ದಾಳಿ ಮಾಡಿದ್ಳು ದೆವ್ವ ಪಾತ್ರಧಾರಿ ನಟಿ- ವಿಡಿಯೋ ವೈರಲ್

    ಹಾರರ್ ಸಿನಿಮಾ ಶೂಟಿಂಗ್ ವೇಳೆ ಸಹನಟಿಯ ಮೇಲೆ ದಾಳಿ ಮಾಡಿದ್ಳು ದೆವ್ವ ಪಾತ್ರಧಾರಿ ನಟಿ- ವಿಡಿಯೋ ವೈರಲ್

    ನೋಮ್ ಪೆನ್: ಸಿನಿಮಾ ಚಿತ್ರೀಕರಣದ ವೇಳೆ ದೆವ್ವದ ವೇಷ ಧರಿಸಿದ್ದ ನಟಿಯೊಬ್ಬಳು ತನ್ನ ಸಹನಟಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು, ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಕಾಂಬೋಡಿಯಾದಲ್ಲಿ ಹಾರರ್ ಸಿನಿಮಾ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ದೆವ್ವದ ಪಾತ್ರ ನಿರ್ವಹಿಸುತ್ತಿದ್ದ ನಟಿ ಕಪ್ಪು ಸೀರೆಯುಟ್ಟಿದ್ದು, ವಿಕಾರವಾಗಿ ಮೇಕಪ್ ಮಾಡಲಾಗಿತ್ತು.

    ಸಿನಿಮಾ ಸೆಟ್‍ನಲ್ಲಿ ಇದ್ದಕ್ಕಿದ್ದಂತೆ ಆಕೆ ವಿಚಿತ್ರವಾಗಿ ವರ್ತಿಸಿದ್ದು, ತೆಳುವಾದ ವೈರ್‍ನಿಂದ ಬೇರೊಬ್ಬ ನಟಿಯ ಕತ್ತು ಬಿಗಿದಿದ್ದಾಳೆ. ದಾಳಿಗೊಳಗಾದ ನಟಿಗೆ ಕತ್ತಿನ ಭಾಗದಲ್ಲಿ ಗಾಯವಾಗಿದೆ.

    ವಿಡಿಯೋದಲ್ಲಿ ಚಿತ್ರತಂಡ ನಟಿಯ ಮೈಮೇಲೆ ದೆವ್ವ ಬಂದಿದೆ ಎಂಬಂತೆ ಬಿಂಬಿಸಿದ್ದು, ಆಕೆಯ ಜೊತೆ ಮಾತನಾಡಿ ನಟಿಯ ದೇಹವನ್ನು ಬಿಟ್ಟುಹೋಗುವಂತೆ ಕೇಳಿಕೊಳ್ತಿರೋದನ್ನ ಕಾಣಬಹುದು. ಘಟನೆಯ ಫೋಟೋ ಹಾಗೂ ವಿಡಿಯೋವನ್ನ ಫೇಸ್‍ಬುಕ್ ಬಳಕೆದಾರರಾದ ಖೋಮ್ ಸೊಖ್ಖಾಯ್‍ತಿಟ್ ಎಂಬವರು ಹಂಚಿಕೊಂಡಿದ್ದಾರೆ.

    ಹಲ್ಲೆಗೊಳಗಾದ ನಟಿ ಫೋನಿನಲ್ಲಿ ಮಾತನಾಡುತ್ತಾ ಅಳುತ್ತಿರೋದನ್ನ ಕಾಣಬಹುದು. ಘಟನೆಯಿಂದಾಗಿ ಆಕೆ ತುಂಬಾ ಭಯಭೀತಳಾಗಿದ್ದಳು ಎಂದು ವರದಿಯಾಗಿದೆ. ವಿಡಿಯೋ ನೋಡಿದವರು ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಕೆಲವರು ಈ ಬಗ್ಗೆ ತಮಾಷೆ ಮಾಡಿದ್ರೆ, ಇನ್ನೂ ಕೆಲವರು ಇದು ನಿಜಾನಾ ಅಂತ ಹುಬ್ಬೇರಿಸಿದ್ದಾರೆ.

    ಆದ್ರೆ ನಟಿ ಬೇಕಂತಲೇ ಹೀಗೆಲ್ಲಾ ಮಾಡಿದಳಾ? ಇದೆಲ್ಲಾ ಸಿನಿಮಾ ಪ್ರಮೋಷನ್‍ಗಾಗಿ ನಡೆದ ಗಿಮಿಕ್ಕಾ ಎಂಬ ಪ್ರಶ್ನೆಗಳು ಮೂಡಿವೆ.

    https://www.facebook.com/visalsak.ratanak/videos/pcb.1410207952441699/1410207595775068/?type=3&theater

  • ಮಗನ ಮೇಲೆ ವಿಕೃತಿ ಮೆರೆದ ತಂದೆ ಪ್ರಕರಣ- ಪತಿಯ ಕೃತ್ಯಕ್ಕೆ ಪತ್ನಿ ಸಮರ್ಥನೆ!

    ಮಗನ ಮೇಲೆ ವಿಕೃತಿ ಮೆರೆದ ತಂದೆ ಪ್ರಕರಣ- ಪತಿಯ ಕೃತ್ಯಕ್ಕೆ ಪತ್ನಿ ಸಮರ್ಥನೆ!

    ಬೆಂಗಳೂರು: 10 ವರ್ಷದ ಮಗನ ಮೇಲೆ ತಂದೆ ವಿಕೃತಿ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಾಯಿ ತನ್ನ ಗಂಡನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ನಮ್ಮ ಗಂಡ ಮಗುವಿಗೆ ಬೇಕು ಅಂತ ಹೊಡೆದಿಲ್ಲ. ಬುದ್ಧಿ ಕಳಿಸೋದಿಕೆ ಅಂತ ಹೊಡೆದಿದ್ದಾರೆ. ಶಾಲೆ ಮತ್ತು ಟ್ಯೂಷನ್ ಗೆ ಆತ ಸರಿಯಾಗಿ ಹೋಗುತ್ತಿರಲಿಲ್ಲ. ಈ ಘಟನೆ ಒಂದೂವರೆ ತಿಂಗಳ ಹಿಂದೆ ನಡೆದಿದೆ. ನನ್ನ ಮೊಬೈಲ್ ರಿಪೇರಿ ಮಾಡಲು ಕೊಟ್ಟಿದ್ದೆ. ಈ ವೇಳೆ ಯಾರೋ ಈ ವಿಡಿಯೋ ನೋಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಅಂತ ಹೇಳಿದ್ದಾರೆ.

    ಆರೋಪಿ ತಂದೆ ಬಂಧನ: ತನ್ನ 11 ವರ್ಷದ ಮಗ ಸುಳ್ಳು ಹೇಳುತ್ತಾನೆಂದು ಮನಬಂದಂತೆ ಥಳಿಸಿರುವ ಆರೋಪಿ ತಂದೆ ಮಹೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿದಾಗ, ನನ್ನ ಮಗ ನನ್ನ ಮಾತು ಕೇಳುತ್ತಿರಲಿಲ್ಲ. ಏನೇ ಹೇಳಿದ್ದರೂ ತಿರಸ್ಕರಿಸುತ್ತಿದ್ದ. ಹಾಗಾಗಿ ಅವನ ತಾಯಿ ಮುಂದೆನೇ ಆತನನ್ನು ನಾನು ಹೊಡೆಯುತ್ತಿದ್ದೆ. ಅದನ್ನು ಚಿತ್ರಿಕರಿಸಲು ನಾನೇ ನನ್ನ ಹೆಂಡತಿಗೆ ಹೇಳಿದ್ದೆ. ನನ್ನ ಮಗ ಮತ್ತೊಮ್ಮೆ ಗಲಾಟೆ ಮಾಡಿದರೆ ಆತನಿಗೆ ಹೆದರಿಸಲೆಂದು ಆ ವಿಡಿಯೋ ಮಾಡಲು ನಾನೇ ಹೇಳಿದ್ದೆ ಎಂದು ಮಹೇಂದ್ರ ತನ್ನ ತಪ್ಪೊಪ್ಪಿಕೊಂಡಿದ್ದಾನೆ.

    ವಿಡಿಯೋದಲ್ಲೇನಿದೆ?: ಈ ಘಟನೆ ಕೆಂಗೇರಿ ಬಳಿಯ ಗ್ಲೋಬಲ್ ವಿಲೇಜ್ ಸಮೀಪದಲ್ಲಿ ನಡೆದಿದೆ. ಮಗ ಸುಳ್ಳು ಹೇಳುತ್ತಾನೆಂದು ಸಿಟ್ಟುಗೊಂಡ ಕ್ರೂರ ತಂದೆ ಆತನಿಗೆ ಮನಬಂದಂತೆ ಥಳಿಸಿದ್ದಾನೆ. ತನ್ನ ಕೈಯಲ್ಲಿ ಹೊಡೆಯುವುದಲ್ಲದೆ ಕಾಲಿನಿಂದ ತುಳಿದು ವಿಕೃತಿ ಮೆರೆದಿದ್ದಾನೆ. ಬಾಲಕ ಸುಳ್ಳು ಹೇಳಿಲ್ಲ ಎಂದು ಹೇಳುತ್ತಿದ್ದರೂ ಬಿಡದೇ ಚೆಂಡಿನಂತೆ ಬಿಸಾಡಿದ್ದಾನೆ. ಎಷ್ಟು ಸಲ ಸುಳ್ಳು ಹೇಳುತ್ತೀಯಾ ಎಂದು ತಂದೆ ಬೆಲ್ಟ್‍ನಲ್ಲಿ ಹೊಡೆದಿದ್ದಾನೆ. ಮಗ ಪದೇ ಪದೇ ಸುಳ್ಳು ಹೇಳ್ತಾನೆ ಎಂದು ತಂದೆ ಕಾಲಿನಲ್ಲಿ ಒದ್ದು, ವಿಕೃತವಾಗಿ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.

    ವಿಡಿಯೋ ವೈರಲ್ ಆಗಿದ್ದು ಹೇಗೆ?: ಕೆಲವು ದಿನಗಳ ಹಿಂದೆ ಮೊಬೈಲ್ ಹಾಳಾಗಿದ್ದ ಕಾರಣ ರಿಪೇರಿಗೆಂದು ಮೊಬೈಲ್ ಶಾಪ್ ಗೆ ಕೊಟ್ಟಿದ್ದರು. ಈ ವೇಳೆ ಅಂಗಡಿಯವನು ಮೊಬೈಲ್ ಫ್ಲ್ಯಾಶ್ ಮಾಡುವಾಗ ಎಲ್ಲಾ ಫೋಟೋ, ವಿಡಿಯೋಗಳನ್ನು ತನ್ನ ಕಂಪ್ಯೂಟರ್‍ನಲ್ಲಿ ಹಾಕಿದ್ದಾರೆ. ಆಗ ಈ ವಿಡಿಯೋವನ್ನು ನೋಡಿದ್ದಾರೆ. ನೋಡಿದ ತಕ್ಷಣ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿದ್ದಾರೆ. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಂದೆಯ ಈ ಕ್ರೂರ ವರ್ತನೆಗೆ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು.

    ಸದ್ಯ ಪ್ರಕರಣ ಸಂಂಬಂಧಿಸಿದಂತೆ ಕೆಂಗೇರಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಈಗಾಗಲೇ ಬಾಸ್ಕೊ (ಮಕ್ಕಳ ಮೇಲೆ ನಡೆಯುವ ಹಲ್ಲೆ ಬಗ್ಗೆ ತಿಳಿಸುವುದು) ಗೆ ಮಾಹಿತಿ ನೀಡಿದ್ದಾರೆ.

    https://www.youtube.com/watch?v=e0WobI4CVJk

    https://www.youtube.com/watch?v=j-PFEhOIDnc

  • ಕೂಗಿದ್ರೂ ಕೇಳಲಿಲ್ಲ, 1 ನಿಮಿಷ… ಅಂತ ಸ್ಮೈಲ್ ಕೊಟ್ಟು ಸೆಲ್ಫಿಗೆ ನಿಂತ ಯುವಕನಿಗೆ ರೈಲು ಡಿಕ್ಕಿ

    ಕೂಗಿದ್ರೂ ಕೇಳಲಿಲ್ಲ, 1 ನಿಮಿಷ… ಅಂತ ಸ್ಮೈಲ್ ಕೊಟ್ಟು ಸೆಲ್ಫಿಗೆ ನಿಂತ ಯುವಕನಿಗೆ ರೈಲು ಡಿಕ್ಕಿ

    ಹೈದರಾಬಾದ್: ಸಖತ್ತಾಗಿ ಸೆಲ್ಫಿ ತೆಗೆಯಬೇಕು ಅಂತ ಹುಚ್ಚು ಸಾಹಸಗಳನ್ನ ಮಾಡಲು ಹೋಗಿ ಅನೇಕ ಜನ ಪ್ರಾಣ ಕಳೆದುಕೊಂಡಿರೋ ಬಗ್ಗೆ ವರದಿಯಾಗ್ತಾನೆ ಇದ್ದರೂ ಅಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಸೆಲ್ಫಿ ವಿಡಿಯೋ ಯುವಕನೊಬ್ಬನಿಗೆ ಮಾರಣಾಂತಿಕವಾಗಿ ಪರಿಣಮಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.

     

    ಸೆಲ್ಫಿ ವಿಡಿಯೋ ಮಾಡುತ್ತಿದ್ದಾಗಲೇ ರೈಲು ಡಿಕ್ಕಿಯಾಗಿ ಶಿವ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿವೆ. ಹೈದರಾಬಾದ್‍ನ ಭರತ್‍ನಗರ ರೈಲ್ವೆ ನಿಲ್ದಾಣದಲ್ಲಿ ಭಾನುವಾರದಂದು ಈ ಘಟನೆ ನಡೆದಿದ್ದು, ಬುಧವಾರದಂದು ವಿಡಿಯೋ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ.

    ಯುವಕ ಶಿವಾ ರೈಲ್ವೆ ಹಳಿಯ ಬಳಿ ತನ್ನ ಸ್ಮಾರ್ಟ್‍ಫೋನ್ ಹಿಡಿದು ಸೆಲ್ಫಿ ವಿಡಿಯೋ ಮಾಡಿದ್ದಾನೆ. ಈ ವೇಳೆ ಅದೇ ಹಳಿಯಲ್ಲಿ ಎಮ್‍ಎಮ್‍ಟಿಎಸ್(ಮಲ್ಟಿ ಮೋಡಲ್ ಟ್ರಾನ್ಸ್‍ಪೋರ್ಟ್ ಸಿಸ್ಟಮ್) ರೈಲು ಬಂದಿದೆ. ರೈಲು ಬರುತ್ತಿರೋದನ್ನ ನೋಡಿ ಹಿಂದಿನಿಂದ ಒಬ್ಬರು ಏಯ್ ಏಯ್ ಎಂದು ಯುವಕನನ್ನು ಕೂಗಿದ್ದಾರೆ. ಆದ್ರೆ ಆತ ಅದಕ್ಕೆ ಸೊಪ್ಪು ಹಾಕದೆ, ಒಂದು ನಿಮಿಷ ಎಂದು ಹೇಳಿ, ರೈಲು ಸಮೀಪ ಬರುತ್ತಿದ್ದಂತೆ ಸ್ಮೈಲ್ ಕೊಟ್ಟು ನಿಂತಿದ್ದಾನೆ.

    ಜೊತೆಗೆ ತನ್ನ ಕೈ ರೈಲಿನ ಕಡೆ ತೋರಿಸುತ್ತಾ ವಿಡಿಯೋ ಮಾಡುವುದನ್ನ ಮುಂದುವರೆಸಿದ್ದಾನೆ. ರೈಲು ವೇಗವಾಗಿ ಬಂದಿದ್ದು, ಯುವಕನ ಸಮೀಪ ಬಂದಾಗ ಆತನ ಕೈಗೆ ಎಂಜಿನ್ ತಾಗಿ ಆತ ಕೆಳಗೆ ಬಿದ್ದಿದ್ದಾನೆ. ಇವೆಲ್ಲವೂ ಯುವಕನ ಸೆಲ್ಫಿ ವಿಡಿಯೋದಲ್ಲೇ ಸೆರೆಯಾಗಿದೆ. ರೈಲು ಯುವಕನಿಗೆ ಡಿಕ್ಕಿಯಾಗಿ ಆತ ಕೆಳಗೆ ಬೀಳೋದನ್ನ ನೋಡಿದ್ರೆ ಎದೆ ಜಲ್ಲೆನಿಸುವಂತಿದೆ.

    ಈ ಬಗ್ಗೆ ವಿಷಯ ತಿಳಿದ ಕೂಡಲೇ ಆರ್‍ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವಕನನ್ನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಆತನ ಸ್ಥಿತಿ ಸುಧಾರಿಸಿದೆ ಎಂದು ಪೊಲಿಸರು ಹೇಳಿದ್ದಾರೆ. ರೈಲ್ವೆ ಪೊಲೀಸರು ಯುವಕನ ವಿರುದ್ಧ ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 147ರ ಅಡಿ ಪ್ರಕರಣ ದಾಖಲಿಸಿಕೊಂಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಆದರೂ ಯುವ ಜನಾಂಗ ಈ ರೀತಿಯ ಹುಚ್ಚು ಸಾಹಸ ಮಾಡೋ ಮುನ್ನ ಎಚ್ಚರಿಕೆ ವಹಿಸಬೇಕು ಅನ್ನೋದಕ್ಕೆ ಇದೊಂದು ಸೂಕ್ತ ಉದಾಹರಣೆಯಾಗಿದೆ. ಇದನ್ನೂ ಓದಿ: ರೈಲ್ವೆ ಹಳಿ ಮೇಲೆ ಮಲಗಿ ಸ್ಟಂಟ್ ಮಾಡಿದ ವ್ಯಕ್ತಿಯ ವಿಡಿಯೋ ವೈರಲ್

    https://www.youtube.com/watch?v=9cEbK3v-0EE

  • ಇಲ್ಯಾಸ್ ಹತ್ಯೆಗೆ ಪ್ರತೀಕಾರ ತೀರಿಸದೇ ಬಿಡಲ್ಲ: ಬ್ಯಾರಿ ಭಾಷೆಯ ಆಡಿಯೋ ವೈರಲ್

    ಇಲ್ಯಾಸ್ ಹತ್ಯೆಗೆ ಪ್ರತೀಕಾರ ತೀರಿಸದೇ ಬಿಡಲ್ಲ: ಬ್ಯಾರಿ ಭಾಷೆಯ ಆಡಿಯೋ ವೈರಲ್

    ಮಂಗಳೂರು: ಉಳ್ಳಾಲ ಟಾರ್ಗೆಟ್ ಗ್ರೂಪ್ ರೂವಾರಿ, ನಟೋರಿಯಸ್ ರೌಡಿ ಇಲ್ಯಾಸ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿಕೊಳ್ಳುವ ಆಡಿಯೋ ಈಗ ವೈರಲ್ ಆಗಿದೆ.

    ಮೊನ್ನೆ ಶನಿವಾರ ಬೆಳಗ್ಗೆ ಟಾರ್ಗೆಟ್ ಇಲ್ಯಾಸ್ ನ್ನು ಮಂಗಳೂರಿನ ಜೆಪ್ಪು ಕುದ್ಪಾಡಿಯಲ್ಲಿರುವ ಆತನ ಫ್ಲಾಟ್ ಗೆ ಸ್ನೇಹಿತರ ನೆಪದಲ್ಲಿ ನುಗ್ಗಿದ ಆಗಂತುಕರಿಬ್ಬರು ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. ಟಾರ್ಗೆಟ್ ಗ್ಯಾಂಗಿನಲ್ಲಿ ಒಂದು ಕಾಲದಲ್ಲಿ ಒಟ್ಟಿಗಿದ್ದವರೇ ಕೃತ್ಯ ನಡೆಸಿದ್ದರೆಂಬ ಶಂಕೆ ವ್ಯಕ್ತವಾಗಿತ್ತು.

    ಇಲ್ಯಾಸ್ ಕಾಂಗ್ರೆಸ್ ಪಕ್ಷದಲ್ಲಿ ಮತ್ತು ಉಳ್ಳಾಲ ಭಾಗದಲ್ಲಿ ಸಕ್ರಿಯವಾಗಿದ್ದರಿಂದ ಮುಸ್ಲಿಂ ಯುವಕರ ಬೆಂಬಲಗಳಿಸಿದ್ದ. ಇದೀಗ ಮಂಗಳೂರು ಮುಸ್ಲಿಮರ ಆಡು ಭಾಷೆ ಬ್ಯಾರಿ ಭಾಷೆಯಲ್ಲಿರುವ ಆಡಿಯೋದಲ್ಲಿ ಇಲ್ಯಾಸ್ ಹಂತಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

    ಇಷ್ಟೇ ಅಲ್ಲದೆ ಇಲ್ಯಾಸ್ ಹತ್ಯೆಗೆ ಪ್ರತೀಕಾರ ತೀರಿಸದೇ ಬಿಡುವುದಿಲ್ಲ. ಮಲಗಿದ ಹೆಣಕ್ಕೆ ಹೊಡೆದು ಸಾಯಿಸಿದ್ದರಲ್ಲ. ಬಿಡುವುದಿಲ್ಲ. ನಿಮ್ಮನ್ನೂ ನಾಯಿ ಕೊಂದ ಹಾಗೆ ಕೊಲ್ತೀವಿ. ಯಾರನ್ನೂ ಉಳಿಸುವುದಿಲ್ಲ ಅಂತ ಇಲ್ಯಾಸ್ ಗೆಳೆಯನೊಬ್ಬ ಹೇಳುತ್ತಿರುವ ಆಡಿಯೋ ಈಗ ಮುಸ್ಲಿಂ ವಾಟ್ಸಪ್ ಗ್ರೂಪ್ ಗಳಲ್ಲಿ ಭಾರೀ ವೈರಲ್ ಆಗಿದೆ. ಇಲ್ಯಾಸ್ ನೇತೃತ್ವದ ಟಾರ್ಗೆಟ್ ಗ್ಯಾಂಗ್ ಸಕ್ರಿಯವಾಗಿತ್ತು ಎಂಬುದಕ್ಕೆ ಅವರೇ ಮಾಡಿಕೊಂಡಿದ್ದ ಎಕ್ಸ್ ಕ್ಲೂಸಿವ್ ವಿಡಿಯೋಗಳು ಲಭ್ಯವಾಗಿದೆ.

    https://www.youtube.com/watch?v=2zDo8oHyHWI

    https://www.youtube.com/watch?v=nu7UjCAWt8o

  • ಕಪಾಳಕ್ಕೆ ಹೊಡೆದಿದ್ದಕ್ಕೆ ಕಾಂಗ್ರೆಸ್ ಶಾಸಕಿಯ ಕೆನ್ನೆಗೆ ಬಾರಿಸಿದ ಮಹಿಳಾ ಪೊಲೀಸ್ ಪೇದೆ: ವಿಡಿಯೋ ವೈರಲ್

    ಕಪಾಳಕ್ಕೆ ಹೊಡೆದಿದ್ದಕ್ಕೆ ಕಾಂಗ್ರೆಸ್ ಶಾಸಕಿಯ ಕೆನ್ನೆಗೆ ಬಾರಿಸಿದ ಮಹಿಳಾ ಪೊಲೀಸ್ ಪೇದೆ: ವಿಡಿಯೋ ವೈರಲ್

    ಶಿಮ್ಲಾ: ಹಿಮಾಚಲ ಪ್ರದೇಶ ಕಾಂಗ್ರೆಸ್ ಶಾಸಕಿ ಆಶಾ ಕುಮಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆಯೊಬ್ಬರಿಗೆ ಕಪಾಳಕ್ಕೆ ಹೊಡೆದಿದ್ದು, ಇದರಿಂದ ಕೋಪಗೊಂಡ ಪೇದೆ ಪುನಃ ಕ್ಷಣ ಮಾತ್ರದಲ್ಲೇ ಶಾಸಕಿಯ ಕಪಾಳಕ್ಕೆ ಏಟು ಕೊಟ್ಟಿದ್ದು ವಿಡಿಯೋ ವೈರಲ್ ಆಗಿದೆ.

    ಇಂದು ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಹಿಮಾಚಲ ಪ್ರದೇಶ ಚುನಾವಣೆಯಲ್ಲಿನ ಪಕ್ಷದ ನಿರ್ವಹಣೆ ಕುರಿತ ಪರಾಮರ್ಶನ ಸಭೆಯಲ್ಲಿ ಭಾಗವಹಿಸಲು ಆಶಾಕುಮಾರಿ ಆಗಮಿಸಿದ್ದರು. ಆದರೆ ಸಭೆಯಲ್ಲಿ ಭಾಗವಹಿಸಲು ಪೊಲೀಸರು ತಡೆ ಒಡ್ಡಿದ್ದಕ್ಕೆ ಸಿಟ್ಟಾದ ಆಶಾ ಕುಮಾರಿ ಮಹಿಳಾ ಪೇದೆಯ ಮೇಲೆ ಹಲ್ಲೆ ನಡೆಸಿದ್ದಾರೆ.

    ಆಶಾ ಕುಮಾರಿ ಪಂಜಾಬ್ ರಾಜ್ಯದ ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿಯಾಗಿದ್ದು, ದಾಲ್‍ಹೌಸಿ ಕ್ಷೇತ್ರದ ಶಾಸಕಿಯಾಗಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಆಶಾ ಕುಮಾರಿ, ಪೊಲೀಸ್ ಪೇದೆ ನನ್ನನ್ನು ನಿಂದಿಸಿದಲ್ಲದೇ ತಳ್ಳಿದಳು. ನಾನು ಒಳಗಡೆ ಪ್ರವೇಶಿಸಲು ತಡೆ ಒಡ್ಡಲಾಯಿತು. ನಾನು ಆಕೆಯ ತಾಯಿಯ ವಯಸ್ಸಿನ ಮಹಿಳೆ. ಆದ್ರೆ ನಾನು ಆ ವೇಳೆ ಕೋಪವನ್ನು ನಿಯಂತ್ರಿಸಿಕೊಳ್ಳಬೇಕಿತ್ತು. ಈ ಘಟನೆ ಸಂಬಂಧ ನಾನು ಮಹಿಳಾ ಪೇದೆಯಲ್ಲಿ ಕ್ಷಮೆ ಕೇಳುತ್ತೇನೆ ಅಂತಾ ಅಂದ್ರು.

    ಹಿಮಚಾಲಪ್ರದೇಶ ಚುನಾವಣೆ ಬಳಿಕ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದು, ಪಕ್ಷದ ಕಾರ್ಯಕರ್ತರೊಂದಿಗೆ ಚುನಾವಣೆಯ ಫಲಿತಾಂಶದ ಪರಮಾರ್ಶನ ಸಭೆ ನಡೆಸುತ್ತಿದ್ದಾರೆ. ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ್ದು ರಾಹುಲ್ ಗಾಂಧಿಗೆ ಅಸಮಧಾನ ತರಿಸಿದ್ದು, ಬೇರೆಯೊಬ್ಬರ ಮೇಲೆ ಕೈ ಎತ್ತುವುದು ತಪ್ಪಾಗುತ್ತದೆ. ಇದು ಕಾಂಗ್ರೆಸ್ ಸಂಸ್ಕೃತಿ ಅಲ್ಲ ಎಂದು ಹೇಳಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.

    ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 68 ಕ್ಷೇತ್ರಗಳಲ್ಲಿ ಬಿಜೆಪಿ 44, ಕಾಂಗ್ರೆಸ್ 20 ಮತ್ತು ಪಕ್ಷೇತರ ಅಭ್ಯರ್ಥಿಗಳು 4 ಕ್ಷೇತ್ರಗಳಲ್ಲಿ ಜಯಶಾಲಿಯಾಗಿದ್ದರು.

    https://www.youtube.com/watch?v=j1YQrDgW4dM

  • ವಿಡಿಯೋ: ರಸ್ತೆ ದಾಟುವಾಗ ಟ್ರಕ್ ಕೆಳಗೆ ಸಿಲುಕಿದ್ರೂ ಮಹಿಳೆ ಪಾರು!- ಡ್ರೈವರ್‍ಗೆ ಭೇಷ್ ಅಂದ್ರು ಜನ

    ವಿಡಿಯೋ: ರಸ್ತೆ ದಾಟುವಾಗ ಟ್ರಕ್ ಕೆಳಗೆ ಸಿಲುಕಿದ್ರೂ ಮಹಿಳೆ ಪಾರು!- ಡ್ರೈವರ್‍ಗೆ ಭೇಷ್ ಅಂದ್ರು ಜನ

    ಬೀಜಿಂಗ್: ಮಹಿಳೆಯೊಬ್ಬರು ರಸ್ತೆ ದಾಟುವಾಗ ಟ್ರಕ್ ಕೆಳಗೆ ಸಿಲುಕಿದ್ರೂ ಪವಾಡ ಸದೃಶವಾಗಿ ಪಾರಾಗಿರೋ ಘಟನೆ ಚೀನಾದಲ್ಲಿ ನಡೆದಿದೆ.

    ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಲ್ಲಿನ ಮಾಧ್ಯಮವೊಂದು ಫೇಸ್ ಬುಕ್ ನಲ್ಲಿ ವಿಡಿಯೋವನ್ನ ಹಂಚಿಕೊಂಡಿದೆ. ಮಹಿಳೆ ಮೊದಲು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಿದ್ದಾರೆ. ನಂತರ ಕೈಯಲ್ಲಿ ಏನೋ ಹಿಡಿದು ಮರಳಿ ಮತ್ತೊಂದು ಬದಿಗೆ ಹೋಗುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಟ್ರಕ್ ಬಂದಿದ್ದು ಮಹಿಳೆ ಗಾಬರಿಯಿಂದ ನಿಲ್ಲಲು ಪ್ರಯತ್ನಿಸಿದ್ದಾರೆ. ಆದ್ರೆ ಕಾಲು ಜಾರಿ ಟ್ರಕ್ ಕೆಳಗೆ ಹೋಗಿದ್ದಾರೆ.

    ಬಿದ್ದ ರಭಸಕ್ಕೆ ಮಹಿಳೆ 180 ಡಿಗ್ರಿಯಲ್ಲಿ ತಿರಿಗಿದ್ದಾರೆ. ಟ್ರಕ್ ನ ಟೈರ್ ಮಹಿಳೆ ತಲೆಯಿಂದ ಕೆಲವೇ ಇಂಚಿನಷ್ಟು ದೂರವಿತ್ತು. ಆದ್ರೆ ಚಾಲಕ ಸೂಕ್ತ ಸಮಯಕ್ಕೆ ಬ್ರೇಕ್ ಹಾಕಿದ್ದರಿಂದ ಆಕೆ ಪಾರಾಗಿದ್ದಾರೆ.

    ತಕ್ಷಣ ಚಾಲಕ ಟ್ರಕ್ ಕೆಳಗೆ ಇಳಿದು ಮಹಿಳೆಯನ್ನು ರಕ್ಷಿಸಲು ಬಂದಿದ್ದಾರೆ. ಆದರೆ ಮಹಿಳೆಗೆ ಯಾವುದೇ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಡಿಯೋವನ್ನ ಸಮಾಜಿಕ ಜಾಲತಾಣದಲ್ಲಿ ನೋಡಿದವರು ಚಾಲಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಾಲಕ ಸರಿಯಾದ ಸಮಯಕ್ಕೆ ಬ್ರೇಕ್ ಹಾಕಿದ್ದಕ್ಕೆ ಆಕೆಯ ಜೀವ ಉಳಿದಿದೆ ಎಂದು ಕಮೆಂಟ್ ಮಾಡಿದ್ದಾರೆ.

  • ಶಾಕಿಂಗ್ ವಿಡಿಯೋ: ರಸ್ತೆಯಲ್ಲಿ ಹೋಗ್ತಿದ್ದ ವಿದ್ಯಾರ್ಥಿನಿಗೆ ಹಾಡಹಗಲೇ ಯುವಕರಿಂದ ಲೈಂಗಿಕ ಕಿರುಕುಳ

    ಶಾಕಿಂಗ್ ವಿಡಿಯೋ: ರಸ್ತೆಯಲ್ಲಿ ಹೋಗ್ತಿದ್ದ ವಿದ್ಯಾರ್ಥಿನಿಗೆ ಹಾಡಹಗಲೇ ಯುವಕರಿಂದ ಲೈಂಗಿಕ ಕಿರುಕುಳ

    ಭುವನೇಶ್ವರ್: ಕಾಲೇಜು ವಿದ್ಯಾರ್ಥಿನಿಗೆ ಯುವಕರ ತಂಡ ಹಾಡಹಗಲೇ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಒಡಿಶಾದ ಬಾರ್‍ಘರ್ ಜಿಲ್ಲೆಯಲ್ಲಿ ನಡೆದಿದೆ. ಇದರ ವಿಡಿಯೋ ವೈರಲ್ ಆದ ನಂತರ ಪೊಲೀಸರು ಎಚ್ಚೆತ್ತುಕೊಂಡಿದ್ದು, 6 ಜನರನ್ನ ಬಂಧಿಸಿದ್ದಾರೆ.

    ಬಟ್ಟೆಯಿಂದ ಮುಖ ಮುಚಿಕೊಂಡಿದ್ದ ಆರೋಪಿಗಳು ರಸ್ತೆಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಯುವತಿಯ ಜೊತೆಗಿದ್ದ ಮತ್ತೊಬ್ಬ ಯುವಕನನ್ನ ಥಳಿಸಿದ್ದಾರೆ. ಯುವತಿ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಯುವಕರು ಕಿವಿಗೊಡದೆ ಆಕೆಯ ಮೇಲೆ ದೌರ್ಜನ್ಯವೆಸಗಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದವರೊಬ್ಬರು ಇದನ್ನ ಮೊಬೈಲ್‍ನಲ್ಲಿ ಸರೆಹಿಡಿದಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ನಾಲ್ವರು ಪ್ರಮುಖ ಆರೋಪಿಗಳು ಹಾಗೂ ಮತ್ತಿಬ್ಬರನ್ನು ಬಂಧಿಸಲಾಗಿದೆ. ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಗುಂಪಿನಲ್ಲಿದ್ದ ಇತರರ ಬಂಧನಕ್ಕಾಗಿ ಪ್ರಯತ್ನಿಸುತ್ತಿದ್ದೇವೆ ಎಂದು ಪದ್ಮಪುರ್‍ನ ಪೊಲೀಸ್ ಅಧಿಕಾರಿ ಲಕ್ಷ್ಮೀನಾರಾಯಣ್ ಪಾಂಡಾ ಹೇಳಿದ್ದಾರೆ.

    ಆರೋಪಿಗಳ ವಿರುದ್ಧ ಐಟಿ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದೆ. ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಒಡಿಶಾದ ಡಿಜಿಪಿ ರಾಕೇಂದ್ರ ಪ್ರಸಾದ್ ಶರ್ಮಾ ತಿಳಿಸಿದ್ದಾರೆ.

    https://www.youtube.com/watch?time_continue=22&v=HbCjiab8tKA

     

  • ಪಿಸ್ತೂಲ್ ಹಿಡಿದು ಚಿರತೆಗಾಗಿ ಹುಡುಕ್ತಿದ್ದ ಸಚಿವರ ವಿಡಿಯೋ ವೈರಲ್

    ಪಿಸ್ತೂಲ್ ಹಿಡಿದು ಚಿರತೆಗಾಗಿ ಹುಡುಕ್ತಿದ್ದ ಸಚಿವರ ವಿಡಿಯೋ ವೈರಲ್

    ಮುಂಬೈ: ಕೈಯಲ್ಲಿ ಪಿಸ್ತೂಲ್ ಹಿಡಿದು ಚಿರತೆಯನ್ನ ಹುಡುಕುತ್ತಿದ್ದ ತಂಡದ ಜತೆ ಸೇರಿಕೊಂಡು ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ವಿವಾದಕ್ಕೆ ಸಿಲುಕಿದ್ದಾರೆ.

    ಇಲ್ಲಿನ ಜಲ್‍ಗಾಂವ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಸಾವಿಗೆ ಕಾರಣವಾದ ಚಿರತೆಯನ್ನ ಹುಡುಕಲಾಗ್ತಿತ್ತು. ಈ ವೇಳೆ ಗನ್ ಹಿಡಿದು ತಾವೂ ಚಿರತೆಗಾಗಿ ಹುಡುಕಾಡಿದ ಸಚಿವರ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿರೋ ಸಚಿವರು, ಚಿರತೆಗೆ ಹಾನಿ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಅದನ್ನ ಹೆದರಿಸಿ ಓಡಿಸಬೇಕೆಂದಿದ್ದೆವು ಎಂದು ಹೇಳಿದ್ದಾರೆ.

    ಮಂಗಳವಾರದಂದು ಮಹಾಜನ್ ಅವರು ಚಿರತೆ ದಾಳಿಯಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಸಾಂತ್ವನ ಹೇಳಿ ಹಿಂದಿರುಗುತ್ತಿದ್ದರು. ಈ ವೇಳೆ ವಾರ್ಖೇಡೆ ಗ್ರಾಮದ ನವೇಗಾಂವ್ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದ ಮಾಹಿತಿ ಅವರಿಗೆ ತಲುಪಿತ್ತು.

    ನಾಮ್ಮ ವಾಹನಗಳಿದ್ದ 400 ಅಡಿ ದೂರದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಶೋಧ ಕಾರ್ಯದಲ್ಲಿ ಭಾಗಿಯಾದೆ ಎಂದು ಮಹಾಜನ್ ಹೇಳಿದ್ದಾರೆ. ಸಚಿವರು ಪಿಸ್ತೂಲ್ ಹಿಡಿದು ಚಿರತೆಗಾಗಿ ಹುಡುಕಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಸ್ಥಳೀಯ ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಯಾಗಿದೆ.

    ಚಿರತೆಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ, ಆದ್ರೆ ಗಾಳಿಯಲ್ಲಿ ಗುಂಡು ಹಾರಿಸಬೇಕೆಂದಿದ್ದೆ ಅಷ್ಟೆ. ನಾನು ಹೊರತೆಗೆದ ಗನ್‍ಗೆ ಲೈಸೆನ್ಸ್ ಇದೆ. ಜನರನ್ನ ಕೊಂದಿರೋ ಚಿರತೆ ಕಂಡ ಕೂಡಲೇ ಕೊಲ್ಲುವಂತೆ ಅರಣ್ಯ ಸಚಿವ ಸುಧೀರ್ ಮುಂಗಾಂತಿವಾರ್ ಆದೇಶಿಸಿದ್ದರು ಎಂದು ಅರಣ್ಯ ಅಧಿಕಾರಿಗಳು ನಮಗೆ ಹೇಳಿದ್ರು ಎಂದು ಮಹಾಜನ್ ಹೇಳಿದ್ದಾರೆ.

    ನಾನು ಇದುವರೆಗೂ ಒಂದು ಪಾರಿವಾಳವನ್ನೂ ಕೊಂದಿಲ್ಲ. ಅದು ನನ್ನ ಲೈಸೆನ್ಸ್‍ಯುಕ್ತ ಗನ್. ಅದನ್ನ ಕಳೆದ 20 ವರ್ಷಗಳಿಂದ ಜೊತೆಯಲ್ಲಿಟ್ಟುಕೊಂಡು ಓಡಾಡ್ತಿದ್ದೀನಿ. ನಿಯಮಿತವಾಗಿ ಲೈಸೆನ್ಸ್ ನವೀಕರಣ ಮಾಡಿದ್ತೀನಿ ಎಂದು ಹೇಳಿದ್ದಾರೆ.

    ಕೊನೆಗೂ ಈ ತಂಡ ಚಿರತೆಯನ್ನ ಪತ್ತೆಹಚ್ಚುವಲ್ಲಿ ವಿಫಲವಾಗಿದೆ.

  • ನಾಯಿ ವರ್ಕೌಟ್ ಮಾಡೋದನ್ನ ಎಲ್ಲಾದ್ರೂ ನೋಡಿದ್ದೀರಾ?- ಈ ವೈರಲ್ ವಿಡಿಯೋ ನೋಡಿ

    ನಾಯಿ ವರ್ಕೌಟ್ ಮಾಡೋದನ್ನ ಎಲ್ಲಾದ್ರೂ ನೋಡಿದ್ದೀರಾ?- ಈ ವೈರಲ್ ವಿಡಿಯೋ ನೋಡಿ

    ವಾಷಿಂಗ್ಟನ್: ಸಾಮಾನ್ಯವಾಗಿ ನಾಯಿಗಳು ಮಾಲೀಕರು ಹೇಳಿದಂತೆ ಕೈ ಮುಗಿಯೋದು, ಕೇಳಿದ ವಸ್ತುಗಳನ್ನ ತೆಗೆದುಕೊಡೋದು ಹೀಗೆ ಮುಂತಾದ ಕೆಲಸಗಳನ್ನ ಮಾಡೋದನ್ನ ನೋಡಿರ್ತೀರ. ಆದ್ರೆ ಎಲ್ಲಾದ್ರೂ ನಾಯಿ ವರ್ಕೌಟ್ ಮಾಡೋದನ್ನ ನೋಡಿದ್ದೀರಾ?

    ಹಾಗಿದ್ರೆ ಇಲ್ನೋಡಿ. ಪೊಲೀಸ್ ನಾಯಿಯೊಂದು ಅಧಿಕಾರಿಗಳ ಜೊತೆಗೂಡಿ ಪುಶ್ ಅಪ್ಸ್ ಮಾಡಿದ್ದು, ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಇಬ್ಬರು ಅಧಿಕಾರಿಗಳು ಪುಶ್ ಅಪ್ಸ್ ಮಾಡ್ತಿದ್ರೆ ನಾಯಿ ಕೂಡ ಅವರ ಮಧ್ಯೆ ಕುಳಿತು ಪುಶ್ ಅಪ್ಸ್ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಖತ್ ಹಿಟ್ ಆಗಿದೆ.

    ಸ್ಥಳೀಯ ಮಾಧ್ಯಮವೊಂದರ ವರದಿಯ ಪ್ರಕಾರ ಈ ನಾಯಿಯ ಹೆಸರು ನಿತ್ರೋ. 2 ವರ್ಷದ ಈ ಡಚ್ ಶೆಫರ್ಡ್ ನಾಯಿ ಇದೇ ವರ್ಷ ಅಲಬಾಮಾದ ಗಲ್ಫ್ ಶೋರ್ಸ್ ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ಸೇರ್ಪಡೆಯಾಗಿದೆ.

    ಅಧಿಕಾರಿ ಕೋವನ್ ಹಾಗೂ ಹ್ಯಾನ್‍ಕಾಕ್ ಅವರೊಂದಿಗೆ ಕೆ9 ನಿತ್ರೋ ಕೂಡ ಕಾನೂನು ಉಲ್ಲಂಘಿಸೋ ಕಿಡಿಗೇಡಿಗಳನ್ನ ಮಟ್ಟ ಹಾಕಲು ರೆಡಿಯಾಗ್ತಿದೆ ಅಂತ ಪೊಲೀಸ್ ಇಲಾಖೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಈ ವಿಡಿಯೋವನ್ನ ಹಂಚಿಕೊಂಡಿದೆ.

    ಭಾನುವಾರದಂದು ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದ್ದು ಈವರೆಗೆ 9 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. 31 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ವಿಡಿಯೋ ನೋಡಿದವರು ನಾಯಿಯ ವರ್ಕೌಟ್ ಕಂಡು ಹುಬ್ಬೇರಿಸಿದ್ದಾರೆ. ಅಧಿಕಾರಿಗಳೇ ನೀವಿನ್ನೂ ಇಂಪ್ರೂವ್ ಆಗ್ಬೇಕು. ನಾಯಿ ಚಲಿಸುತ್ತಾ ಪುಶ್ ಅಪ್ಸ್ ಮಾಡ್ತಿರೋದು ಕಾಣ್ತಿಲ್ವಾ ಅಂತ ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.

    https://www.facebook.com/gulfshorespolice/videos/1725293160814732/