Tag: viral video

  • ಫಸ್ಟ್ ಟೈಂ ದೀಪಾವಳಿ ಆಚರಣೆ ವೇಳೆ ದುಬೈನಲ್ಲಿ ಮೊಳಗಿತು ರಾಷ್ಟ್ರಗೀತೆ: ವಿಡಿಯೋ ವೈರಲ್

    ಫಸ್ಟ್ ಟೈಂ ದೀಪಾವಳಿ ಆಚರಣೆ ವೇಳೆ ದುಬೈನಲ್ಲಿ ಮೊಳಗಿತು ರಾಷ್ಟ್ರಗೀತೆ: ವಿಡಿಯೋ ವೈರಲ್

    ದುಬೈ: ಈ ಬಾರಿ ಅದ್ಧೂರಿಯಾಗಿ ದುಬೈನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ದುಬೈ ಸರ್ಕಾರವು ಭಾರತೀಯ ರಾಯಬಾರ ಕಚೇರಿ ಜೊತೆಗೂಡಿ 10 ದಿನಗಳ ದೀಪಾವಳಿ ಉತ್ಸವವನ್ನು ಆಯೋಜಿಸಿದೆ.

    ದೀಪಾವಳಿಯ ಮೊದಲ ದಿನವಾದ ನವೆಂಬರ್ 1ರಂದು ದುಬೈ ಪೊಲೀಸ್ ಬ್ಯಾಂಡ್ ಸಿಬ್ಬಂದಿ ಭಾರತದ ರಾಷ್ಟ್ರಗೀತೆಯನ್ನು ಇಂಪಾಗಿ ಬಾರಿಸಿದ್ದಾರೆ. ಇದೇ ವೇಳೆ ಅವರ ಹಿಂದೆಯಿದ್ದ ಎಲ್‍ಇಡಿ ಪರದೆಯ ಮೇಲೆ ಭಾರತದ ತ್ರೀವರ್ಣ ಧ್ವಜವನ್ನು ಬಿಂಬಿಸಿ ಗೌರವ ಸಲ್ಲಿಸಲಾಗಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.

    ಒಟ್ಟು 10 ದಿನಗಳ ಕಾಲ ನಡೆಯುವ ದೀಪಾವಳಿ ಉತ್ಸವದಲ್ಲಿ ವಿವಿಧ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ರಾತ್ರಿ ಆಗುತ್ತಿದ್ದಂತೆ ದುಬೈ ನಗರಿಯಲ್ಲಿ ಬಣ್ಣ ಬಣ್ಣದ ಬೆಳಕಿನ ದೀಪಗಳು, ಪಟಾಕಿ ಭಾರೀ ಸದ್ದು ಮಾಡುತ್ತಿವೆ. ಇದೇ ಮೊದಲ ಬಾರಿಗೆ ಇಷ್ಟು ಅದ್ಧೂರಿಯಾಗಿ ದುಬೈನಲ್ಲಿ ದೀಪಾವಳಿ ಆಚರಿಸಲಾಗುತ್ತಿದೆ. ಈ ಉತ್ಸವವು ನವೆಂಬರ್ 10ರಂದು ಮುಕ್ತಾಯವಾಗಲಿದೆ.

    ದುಬೈ ಮೂಲದ ವಿಮಾನಯಾನ ಕಂಪೆನಿ ಎಮಿರೈಟ್ಸ್ ಕೂಡ ದೀಪಾವಳಿಯನ್ನು ಆಚರಿಸುತ್ತಿದೆ. ಎಮಿರೈಟ್ಸ್ ಗಗನಸಖಿಯರು ಫುಡ್ ಟ್ರಕ್ ಮೂಲಕ ಭಾರತೀಯ ಸಂಪ್ರದಾಯದ ಸಿಹಿ ಖಾದ್ಯ ಹಾಗೂ ತಿನಿಸುಗಳನ್ನು ಹೊತ್ತು ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ನೀಡಿ ದೀಪಾವಳಿಯ ಶುಭಕೋರುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾರು ಚಲಿಸಿದ ಕೂಡ್ಲೇ ಉರುಳಿ ಬಿದ್ದು ಧಗಧಗನೇ ಉರಿಯಿತು ಪೆಟ್ರೋಲ್ ಪಂಪ್!- ವಿಡಿಯೋ

    ಕಾರು ಚಲಿಸಿದ ಕೂಡ್ಲೇ ಉರುಳಿ ಬಿದ್ದು ಧಗಧಗನೇ ಉರಿಯಿತು ಪೆಟ್ರೋಲ್ ಪಂಪ್!- ವಿಡಿಯೋ

    ವಾಷಿಂಗ್ಟನ್: ಕಾರು ಚಾಲಕನ ಎಡವಟ್ಟಿನಿಂದಾಗಿ ಪೆಟ್ರೋಲ್ ಬಂಕ್ ಹೊತ್ತಿ ಉರಿದ ಘಟನೆ ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದಿದೆ.

    ಕಾರು ಚಾಲಕ ಬಂಕ್ ಗೆ ಬಂದು ಪೆಟ್ರೋಲ್ ತುಂಬಿಸಿದ್ದಾನೆ. ತುಂಬಿಸಿದ ಬಳಿಕ ಟ್ಯಾಂಕ್‍ನಿಂದ ಪೈಪ್ ತೆಗೆಯಲಾಗಿದೆ ಎಂದು ಭಾವಿಸಿ ಕಾರನ್ನು ಓಡಿಸಿದ್ದಾನೆ. ಆದರೆ ಪೈಪ್ ಟ್ಯಾಂಕ್‍ನಲ್ಲೇ ಇದ್ದ ಕಾರಣ ಕಾರು ಚಲಿಸಿದ ರಭಸಕ್ಕೆ ಪಂಪ್ ಕುಸಿದು ಬಿದ್ದಿದೆ. ಕುಸಿದು ಬಿದ್ದ ರಭಸಕ್ಕೆ ಕೂಡಲೇ ಬೆಂಕಿ ಹೊತ್ತಿಕೊಂಡಿದೆ.

    ಕೂಡಲೇ ಅಲ್ಲಿಂದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಹ್ಯಾಕ್ಸಾಕ್ ಅಗ್ನಿಶಾಮಕ ಸಿಬ್ಬಂದಿ ಫೇಸ್‍ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

     

  • ಕಳ್ಳತನಗೈದು ಪರಾರಿಯಾಗುವ ವೇಳೆ ಸಿಸಿಟಿವಿ ಕ್ಯಾಮೆರಾ ಮುಂದೆ ಕಳ್ಳನ ಡ್ಯಾನ್ಸ್!

    ಕಳ್ಳತನಗೈದು ಪರಾರಿಯಾಗುವ ವೇಳೆ ಸಿಸಿಟಿವಿ ಕ್ಯಾಮೆರಾ ಮುಂದೆ ಕಳ್ಳನ ಡ್ಯಾನ್ಸ್!

    ಗಾಂಧಿನಗರ: ಕಳ್ಳರ ಗುಂಪೊಂದು ಕಳ್ಳತನ ಮಾಡಿ ಪರಾರಿಯಾಗುವ ವೇಳೆ ತಂಡದಲ್ಲಿಯ ಕಳ್ಳನೊಬ್ಬ ಸಿಸಿಟಿವಿ ಕ್ಯಾಮೆರಾ ಮುಂದೆ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

    ಶನಿವಾರ ರಾತ್ರಿ ಗಾಂಧಿ ನಗರ ಜಿಲ್ಲೆಯ ಸರಗಾಸನ ಎಂಬಲ್ಲಿ ಈ ಘಟನೆ ನಡೆದಿದೆ. ಕಳ್ಳರ ಗುಂಪಿನಲ್ಲಿದ್ದ ಓರ್ವ ಬೆಡ್ ಶೀಟ್ ಹೊದ್ದುಕೊಂಡು ಡ್ಯಾನ್ಸ್ ಮಾಡಿ ಪರಾರಿಯಾಗಿದ್ದಾನೆ. ಶನಿವಾರ ಅಪಾರ್ಟ್ ಮೆಂಟ್ ಗೆ ನುಗ್ಗಿದ ಮೂವರು ಕಳ್ಳರು ಎರಡು ಫ್ಲ್ಯಾಟ್ ನಲ್ಲಿ ಕೈಚಳಕ ತೋರಿಸಿದ್ದಾರೆ. ಕಳ್ಳತನದ ಬಳಿಕ ಕಳ್ಳರು ಓಡಿ ಹೋಗುವ ದೃಶ್ಯಗಳು ಕಟ್ಟಡದ ಪ್ರವೇಶ ದ್ವಾರದ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ವಿಡಿಯೋವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಅರವಿಂದ್ ಪಟೇಲ್ ಎಂಬವರ ಮನೆಗೆ ನುಗ್ಗಿದ ಕಳ್ಳರು 1.81 ಲಕ್ಷ ರೂ. ದೋಚಿದ್ದಾರೆ. ನಂತರ ಅದೇ ಕಟ್ಟಡದ ಕಲ್ಪನಾ ಶುಕ್ಲಾ ಎಂಬ ಮಹಿಳೆ ಮನೆಗೆ ನುಗ್ಗಿ 61 ಸಾವಿರ ನಗದು ಮತ್ತು ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಕಟ್ಟಡದಿಂದ ಹೊರ ಹೋಗುತ್ತಿರುವಾಗ ಗುಂಪಿನಲ್ಲಿದ್ದ ಕಳ್ಳನೊಬ್ಬ ಸಿಸಿಟಿವಿ ಡ್ಯಾನ್ಸ್ ಮಾಡಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

  • ಮುಸ್ಲಿಂ ಯುವಕನ ಜೊತೆಯಲ್ಲಿದ್ದ ಹಿಂದೂ ಯುವತಿಗೆ ಥಳಿಸಿದ ಯುಪಿ ಮಹಿಳಾ ಪೊಲೀಸ್!

    ಮುಸ್ಲಿಂ ಯುವಕನ ಜೊತೆಯಲ್ಲಿದ್ದ ಹಿಂದೂ ಯುವತಿಗೆ ಥಳಿಸಿದ ಯುಪಿ ಮಹಿಳಾ ಪೊಲೀಸ್!

    ಲಕ್ನೋ: ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಇದ್ದಳು ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಮಹಿಳಾ ಪೊಲೀಸ್ ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

    ಈ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. ಮಹಿಳಾ ಪೊಲೀಸ್ ಯುವತಿಗೆ ಥಳಿಸುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಇದೀಗ ಮಹಿಳಾ ಪೊಲೀಸನ್ನ ಕೆಲಸದಿಂದ ವಜಾ ಮಾಡಲಾಗಿದೆ.

    ವಿಡಿಯೋದಲ್ಲೇನಿದೆ?:
    ಯುವತಿಯನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ. ಯುವತಿ ಮಹಿಳಾ ಪೊಲೀಸ್ ಪಕ್ಕದಲ್ಲೇ ಕುಳಿತಿದ್ದಾಳೆ. ಈ ವೇಳೆ ಪೊಲೀಸ್ ಕಾನ್ಸ್ ಸ್ಟೇಬಲ್, ಯುವತಿಗೆ ಅಸಭ್ಯ ಶಬ್ಧಗಳಿಂದ ಬೈದು, ದೈಹಿಕ ಹಿಂಸೆ ನೀಡಿದ್ದಾಳೆ. ಅಲ್ಲದೇ ನೀನ್ಯಾಕೆ ಮುಸ್ಲಿಂ ಯುವಕನನ್ನು ಫ್ರೆಂಡ್ ಮಾಡಿಕೊಂಡಿದ್ದೀಯಾ ಅಂತ ಪ್ರಶ್ನಿಸಿದ್ದಾಳೆ. ಈ ಎಲ್ಲಾ ಘಟನೆಗಳನ್ನು ವಾಹನದಲ್ಲಿ ಅವರಿಬ್ಬರ ಎದುರು ಕುಳಿತಿದ್ದ ಪೊಲೀಸ್ ವಿಡಿಯೋ ಮಾಡಿದ್ದು, ಆ ಬಳಿಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಅಲ್ಲದೇ ವಿಡಿಯೋ ಕುರಿತು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಭಾರೀ ಆಕ್ರೋಶವ್ಯಕ್ತವಾಗಿತ್ತು. ಯುವತಿಯ ಮೇಲೆ ಕೈ ಮಾಡಿದ್ದ ಮಹಿಳಾ ಪೊಲೀಸ್ ಕಾನ್ಸ್ ಸ್ಟೇಬಲ್ ವಿರುದ್ಧ ಟ್ವಿಟ್ಟಿಗರು ಕಿಡಿಕಾರಿದ್ದರು.

    `ಈವರೆಗೆ ಕೋಮುವಾದದ ಬೀಜ ಬಿತ್ತುತ್ತವೆ ಅಂತ ರಾಜಕೀಯ ಪಕ್ಷಗಳ ವಿರುದ್ಧ ಮಾತನಾಡುತ್ತಿದ್ದೆವು. ಆದ್ರೆ ಇದೀಗ ಪಕ್ಷಗಳಿಗಿಂತ ಪೊಲೀಸರೇ ಕೋಮವಾದದ ಬೀಜ ಬಿತ್ತುತ್ತಿದ್ದಾರೆ. ಹೀಗಾಗಿ ಯುವತಿ ಮೇಲೆ ಕೈ ಮಾಡಿದ್ದ ಮಹಿಳಾ ಪೊಲೀಸ್ ಕಾನ್ಸ್ ಸ್ಟೇಬಲ್ ವಿರುದ್ಧ ಕ್ರಮಕೈಗೊಳ್ಳಬೇಕು. ಹಾಗೆಯೇ ಈ ಪ್ರಕರಣಕ್ಕೆ ಮುಖ್ಯಮಂತ್ರಿ ಯೋಗಿ ಆದಿನಾಥ್ ಅವರು ಮಧ್ಯಪ್ರವೇಶಿಸಬೇಕು’ ಅಂತ ಟ್ವಿಟ್ಟಗನೊಬ್ಬ ಬೇಡಿಕೆ ಇಟ್ಟಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಂಡಸ್ತನದ ಬಗ್ಗೆ ಮಾತಾಡಿ ಸುದ್ದಿಯಾದ್ರು ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್

    ಗಂಡಸ್ತನದ ಬಗ್ಗೆ ಮಾತಾಡಿ ಸುದ್ದಿಯಾದ್ರು ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್

    ಕಲಬುರಗಿ: ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವರೊಬ್ಬರು ಗೂಂಡಾ ಪ್ರಚೋದನೆ ನೀಡಿ ಸುದ್ದಿಯಾಗಿದ್ದಾರೆ. ವಿರೋಧ ಪಕ್ಷದವರು 10 ಏಟು ಹೊಡೆದ್ರೆ ನೀವು ಒಂದಾದ್ರು ಹೊಡಿರಿ. ಅದು ಬಿಟ್ಟು ಸುಮ್ಮನೆ ಇರೋದು ಗಂಡಸ್ತನ ಅಲ್ಲಾ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.

    ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಅಡಕಿ ಗ್ರಾಮದಲ್ಲಿ ಮಾತನಾಡಿರುವ ಶರಣಪ್ರಕಾಶ್ ಪಾಟೀಲ್, ನಾನು ಬಹಿರಂಗವಾಗಿ ಹೊಡೀರಿ ಬಡೀರಿ ಅಂತ ಹೇಳೋದಕ್ಕೆ ಆಗೋದಿಲ್ಲ ಅಂದಿದ್ದಾರೆ. ಸಚಿವರು ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಚೋದಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.

    ವೈರಲ್ ವಿಡಿಯೋದಲ್ಲಿ ಏನಿದೆ?;
    ವಿಧಾನಸಭೆ ಚುನಾವಣೆ ಮುನ್ನ ಅಡಕಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿತ್ತು. ಆಮೇಲೆ ನಾನೂ ಬಂದಾಗಲೂ ಕೂಡ ಜನ ನನ್ನ ಕಾರ್ ತಡೆದು ಪ್ರತಿಭಟನೆ ಮಾಡಲು ಬಂದಿದ್ದರು. ಆವಾಗ ನಾನು ಕೇಳಿದೆ ಯಾಕೆ ಅವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಅಂತ. ಆ ಸಂದರ್ಭದಲ್ಲಿ ಮಂತ್ರಿಯಾಗಿದ್ದೆ. ನಾನು ಮನಸ್ಸು ಮಾಡಿದಿದ್ರೆ ಆವಾಗಲೇ ಅವರನ್ನು ಒದ್ದು ಒಳಗೆ ಹಾಕಬಹುದಾಗಿತ್ತು. ಆದ್ರೆ ಜನ ನಾವೇನು ಕೇಳಕ್ಕೆ ಬಂದ್ವಿ ಆವಾಗ ಅವರು ನಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ ಅಂತ ಹೇಳೋದು ಬೇಡ. ಅಲ್ಲದೇ ಹಾಗೆ ಮಾಡಿದ್ರೆ ಅಧಿಕಾರ ದುರುಪಯೋಗ ಮಾಡಿಕೊಂಡ್ರು ಅಂತಾರೆ ಅದಕ್ಕೆ ಸುಮ್ಮನಿದ್ದೆ. ಆದ್ರೆ ಈವಾಗ ನಾನು ಅಧಿಕಾರದಲ್ಲಿಲ್ಲ. ಹೀಗಾಗಿ ಈಗ ಏನಾದ್ರು ಮಾಡಿದ್ರೆ ಸುಮ್ಮನಿರೋದಿಲ್ಲ ಅಂತ ಹೇಳಿದ್ದಾರೆ.

    ನೀವ್ಯಾಕೆ ನಮಗೆ ಅವರು ಹೊಡೆದ್ರು, ಇವರು ಹೊಡೆದ್ರು ಹೇಳುತ್ತೀರಾ. ಹೊಡೆಸಿಕೊಳ್ಳೋಕೆ ಬಿಟ್ಟಿದ್ದಕೆ ನಿಮಗೆ ಹೊಡೀತಾರೆ. ಸ್ಪಷ್ಟವಾಗಿ ಹೇಳುತ್ತೇನೆ. ಯಾರ ತಂಟೆಗೂ ನಾವು ಹೋಗಬಾರದು, ಯಾರಿಗೂ ಹೊಡೆಯೋದಕ್ಕೆ ಹೋಗಬಾರದು. ನಮ್ಮ ತಂಟೆಗೆ ಬಂದ್ರೆ ಅವರು 10 ಏಟು ಕೊಟ್ರೆ ನಿಮಗೆ ಒಂದು ಹೊಡೆಯೋದಕ್ಕೆ ಆಗಲ್ವ ಅಂತ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ.

    ಹೊಡೀರಿ ಬಡೀರಿ ಅಂತ ಬಹಿರಂಗವಾಗಿ ಹೇಳೋದಿಕೆ ಆಗಲ್ಲ. ಅವರು ಹೊಡೀತಾರೆ ಅಂತ ಹೇಡಿಯಂತೆ ಮನೆಯಲ್ಲಿ ಕುಳಿತುಕೊಳ್ಳೋದು ಗಂಡಸ್ತನ ಅಲ್ಲ. ಒಟ್ಟಿನಲ್ಲಿ ನಿಮಗೆ ಹೊಡೆದ್ರೆ ನೀವೂ ವಾಪಸ್ ಹೊಡಿಬೇಕು ಅಂತ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಸ್ತೆಯಲ್ಲಿ ಹೋಗ್ತಿದ್ದ ಹಾವಿನ ಮರಿಯನ್ನು ಹಿಡಿದು ತಿಂದೇ ಬಿಟ್ಟ

    ರಸ್ತೆಯಲ್ಲಿ ಹೋಗ್ತಿದ್ದ ಹಾವಿನ ಮರಿಯನ್ನು ಹಿಡಿದು ತಿಂದೇ ಬಿಟ್ಟ

    ಪಾಟ್ನಾ: ಪಾನಮತ್ತ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದ ಹಾವಿನ ಮರಿಯನ್ನು ತಿಂದು ಸಾವನ್ನಪ್ಪಿರುವ ವಿಚಿತ್ರ ಘಟನೆ ಶನಿವಾರ ನಡೆದಿದೆ.

    ಮಹಿಪಾಲ್ ಹಾವಿನ ಮರಿ ತಿಂದು ಸಾವನ್ನಪ್ಪಿದ ವ್ಯಕ್ತಿ. ಅಮರೋಹಾ ಜಿಲ್ಲೆಯ ನಿವಾಸಿಯಾಗಿದ್ದ ಮಹಿಪಾಲ್ ಶನಿವಾರ ನಶೆಯಲ್ಲಿ ತೂರಾಡುತ್ತಾ ಬರುತ್ತಿದ್ದನು. ಈ ಮಧ್ಯೆ ಆತನಿಗೆ ಪುಟಾಣಿ ಹಾವಿನ ಮರಿಯೊಂದು ಸಿಕ್ಕಿದೆ. ಕೂಡಲೇ ಹಾವಿನ ಮರಿಯನ್ನು ಕೈಯಲ್ಲಿ ಹಿಡಿದುಕೊಂಡ ಮಹಿಪಾಲ್ ಅದರೊಂದಿಗೆ ಆಟವಾಡಿದ್ದಾನೆ.

    ರಸ್ತೆಯಲ್ಲಿ ನಿಂತಿದ್ದ ಮಹಿಪಾಲ್ ನೋಡ ನೋಡುತ್ತಿದ್ದಂತೆ ಜೀವಂತ ಹಾವಿನ ಮರಿಯನ್ನು ಬಾಯಿಗೆ ಹಾಕಿಕೊಂಡಿದ್ದಾನೆ. ಮರಿಯನ್ನ ಹೊರ ಉಗುಳದೇ ಒಂದೆರಡು ಸಾರಿ ಅಗಿದು ನುಂಗಿದ್ದಾನೆ ಎಂದು ಹೇಳಲಾಗಿದೆ. ಹಾವಿನ ಮರಿಯನ್ನು ಬಾಯಿಯಲ್ಲಿ ಹಾಕಿಕೊಳ್ಳತ್ತಿದ್ದಂತೆ ಜನರು ಸೇರಿದ್ದಾರೆ. ಆರಂಭದಲ್ಲಿ ಆರೋಗ್ಯವಾಗಿ ಕಾಣಿಸುತ್ತಿದ್ದರೂ, ಕೆಲ ಸಮಯದ ಬಳಿಕ ಆತನ ದೇಹದಲ್ಲಿ ಬದಲಾವಣೆ ಕಾಣಿಸಿಕೊಂಡಿದೆ.

    ಸ್ಥಳೀಯರು ಕೂಡಲೇ ಅಸ್ವಸ್ಥಗೊಂಡ ಮಹಿಪಾಲನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾವು ತಿಂದ ಬಳಿಕ ಬರೋಬ್ಬರಿ 4 ಗಂಟೆಯ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮಹಿಪಾಲ್ ಹಾವು ತಿನ್ನುತ್ತಿರುವ ವಿಡಿಯೋವನ್ನು ಕೆಲವರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

    ಮಹಿಪಾಲ್‍ನ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವನ್ನಪ್ಪಿದ ಮಹಿಪಾಲ ಪತ್ನಿ ಹಾಗು ನಾಲ್ವರು ಮಕ್ಕಳನ್ನು ಅಗಲಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿ ಸಂಸದನ ಪಾದಪೂಜೆ ನೆರವೇರಿಸಿ ಅದೇ ಗಲೀಜು ನೀರು ಕುಡಿದ ಕಾರ್ಯಕರ್ತ

    ಬಿಜೆಪಿ ಸಂಸದನ ಪಾದಪೂಜೆ ನೆರವೇರಿಸಿ ಅದೇ ಗಲೀಜು ನೀರು ಕುಡಿದ ಕಾರ್ಯಕರ್ತ

    ರಾಂಚಿ: ಕಾರ್ಯಕರ್ತರೊಬ್ಬರ ಬಿಜೆಪಿ ಸಂಸದರೊಬ್ಬರ ಪಾದ ಪೂಜೆ ಮಾಡಿ, ಕೊನೆಗೆ ಅದೇ ಗಲೀಜು ನೀರು ಕುಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಜಾರ್ಖಂಡ್ ರಾಜ್ಯದ ಗೊಡ್ಡಾ ಲೋಕಸಭಾ ಕ್ಷೇತ್ರದ ಸಂಸದ ನಿಶಿಕಾಂತ್ ದುಬೆ ಪಾದಪೂಜೆ ಮಾಡಿಸಿಕೊಂಡ ಸಂಸದರು. ಸಾರ್ವಜನಿಕ ಸಮಾರಂಭದಲ್ಲಿ ಪಾದ ಪೂಜೆ ಮಾಡಿಸಿಕೊಂಡು ಟ್ವಿಟ್ಟರ್ ಮತ್ತು ಫೇಸ್‍ಬುಕ್ ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.

    ಗುಡ್ಡಾ ಜಿಲ್ಲೆಯ ಕಲಾಲಿ ಗ್ರಾಮದ ಸೇತುವೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಂಸದ ನಿಶಿಕಾಂತ್ ದುಬೆ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಈ ವೇಳೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಬಿಜೆಪಿ ಕಾರ್ಯಕರ್ತನೋರ್ವ, ಸಂಸದರು ಸೇತುವೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಸೇತುವೆ ನಿರ್ಮಾಣದಿಂದ ನಮಗೆ ಅನುಕೂಲವಾಗಿದೆ. ಹಾಗಾಗಿ ನನಗೆ ಇಂದು ಸಂಸದರ ಪಾದಪೂಜೆ ಮಾಡಬೇಕು ಅಂತಾ ಅನಿಸುತ್ತಿದೆ ಅಂತಾ ಹೇಳಿದರು.

    ತಮ್ಮ ಭಾಷಣ ಮುಗಿಸಿದ ಕಾರ್ಯಕರ್ತ ತಾವು ಹೇಳಿದಂತೆ ತುಂಬಿದ ಸಮಾರಂಭದಲ್ಲಿಯೇ ಸಂಸದ ಪಾದ ಪೂಜೆಗೆ ಮುಂದಾದರು. ಆದ್ರೆ ಸಂಸದರು ಮಾತ್ರ ಪಾದ ಪೂಜೆಗೆ ಯಾವುದೇ ವಿರೋಧ ವ್ಯಕ್ತಪಡಿಸದೇ ಖುಷಿಯಾಗಿ ಕಾಲುಗಳನ್ನು ತೊಳೆಸಿಕೊಂಡಿದ್ದಾರೆ. ಕಾರ್ಯಕರ್ತ ಇಷ್ಟಕ್ಕೆ ಸುಮ್ಮನಾಗದ ಪಾದಪೂಜೆ ಮಾಡಿದ ನೀರನ್ನು ಅಮೃತ ಅಂತಾ ಸೇವನೆ ಮಾಡಿದ್ದಾರೆ.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಸಂಸದರ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕಾರ್ಯಕರ್ತ ಪಾದಪೂಜೆಗೆ ಮುಂದಾದ್ರೆ ಸಚಿವರು ತಡೆಯುವ ಪ್ರಯತ್ನ ಮಾಡಬಹುದಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 4ನೇ ಅಂತಸ್ತಿನ ಕಿಟಕಿಯಲ್ಲಿ ನೇತಾಡ್ತಿದ್ದ ಬಾಲಕಿಯನ್ನು ರಕ್ಷಿಸಿದ್ರು ಸೂಪರ್ ಹೀರೋಗಳು

    4ನೇ ಅಂತಸ್ತಿನ ಕಿಟಕಿಯಲ್ಲಿ ನೇತಾಡ್ತಿದ್ದ ಬಾಲಕಿಯನ್ನು ರಕ್ಷಿಸಿದ್ರು ಸೂಪರ್ ಹೀರೋಗಳು

    ಬೀಜಿಂಗ್: ಕಟ್ಟಡದ ನಾಲ್ಕನೇ ಅಂತಸ್ತಿನ ಫ್ಲ್ಯಾಟ್ ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ಇಬ್ಬರು ಯುವಕರು ರಕ್ಷಣೆ ಮಾಡಿದ್ದಾರೆ. ಬಾಲಕಿಯನ್ನು ರಕ್ಷಣೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಯುವಕರನ್ನು ‘ಸೂಪರ್ ಹೀರೋ’ ಅಂತಾ ಕೊಂಡಾಡುತ್ತಿದ್ದಾರೆ.

    ಚೀನಾದ ಜಿಯಾಂಗ್ಸು ಪ್ರಾಂತ್ಯದ ಚಾಂಗ್ಸು ಎಂಬಲ್ಲಿ ಸೆಪ್ಟೆಂಬರ್ 7ರಂದು ಈ ಘಟನೆ ನಡೆದಿದೆ. ಅಪಾಯದಲ್ಲಿ ಸಿಲುಕಿದ್ದ ಬಾಲಕಿಯನ್ನು ನೋಡಿದ ಯುವಕರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಆಕೆಯನ್ನು ರಕ್ಷಿಸಿದ್ದಾರೆ. ಒಂದು ವೇಳೆ ಯುವಕರು ಕೊಂಚ ಆಯತಪ್ಪಿದ್ರೂ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಸಾಧ್ಯತೆ ಇತ್ತು.

    ಏನದು ವಿಡಿಯೋ?
    ಐದು ಅಂತಸ್ತಿನ ಕಟ್ಟಡದಲ್ಲಿ ಬಾಲಕಿ 4ನೇ ಫ್ಲೋರ್ ಮನೆಯ ಕಿಟಕಿಯಿಂದ ಹೊರ ಬಿದ್ದು ಎಸಿಯ ಕಂಡೆನ್ಸರ್ ಯೂನಿಟ್ (AC Condenser Unit) ಮೇಲೆ ನೇತಾಡುತ್ತಿದ್ದಳು. ಸ್ಥಳದಲ್ಲಿ ಜನರು ಚೀರಾಡುತ್ತಿದ್ದಂತೆ ಯುವಕರಿಬ್ಬರು ಹಾಗೇ ನೇರವಾಗಿ ಏಣಿಯನ್ನು ಸಹ ಬಳಸದೇ ನೋಡ ನೋಡುತ್ತಿದ್ದಂತೆ ಕಟ್ಟಡವನ್ನು ಹತ್ತಿದ್ದಾರೆ. ಬಾಲಕಿಯ ಬಳಿ ತಲುಪಿದ ಇಬ್ಬರು ಆಕೆಯನ್ನು ರಕ್ಷಣೆ ಮಾಡಿದ್ದಾರೆ.

    ಈ ಘಟನೆ ನಡೆದಾಗ ಬಾಲಕಿ ಮನೆಯಲ್ಲಿ ಯಾರು ಇರಲಿಲ್ಲ. ಆಕೆ ಮಲಗಿದ್ದರಿಂದ ಬಾಗಿಲು ಹಾಕಿಕೊಂಡು ಪೋಷಕರು ಹೊರ ಹೋಗಿದ್ದರು. ನಿದ್ದೆಯಿಂದ ಎಚ್ಚರಗೊಂಡ ಬಾಲಕಿ ಮಂಪರಿನಲ್ಲಿ ಕಿಟಕಿ ಬಳಿ ಬಂದಿದ್ದರಿಂದ ಆಯತಪ್ಪಿ ಬಿದ್ದಿದ್ದಾಳೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

    ನನ್ನ ಮಗಳ ಜೀವವನ್ನು ಉಳಿಸಿದ ಇಬ್ಬರು ಸೂಪರ್ ಹೀರೋಗಳಿಗೆ ನಾನು ಚಿರಋಣಿ ಆಗಿದ್ದೇನೆ. ಯುವಕರು ತಮ್ಮ ಜೀವವನ್ನ ಪಣಕ್ಕಿಟ್ಟು ನನ್ನ ಮಗಳನ್ನು ರಕ್ಷಿಸಿದ್ದಾರೆ. ಇನ್ನು ಮುಂದೆ ಮಗಳನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಎಲ್ಲಿಯೂ ಹೋಗಲಾರೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಕ್ಷದಲ್ಲಿನ ಆಂತರಿಕ ವಿಚಾರ ಬಹಿರಂಗಪಡಿಸಿದ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ

    ಪಕ್ಷದಲ್ಲಿನ ಆಂತರಿಕ ವಿಚಾರ ಬಹಿರಂಗಪಡಿಸಿದ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ

    ಶ್ರೀನಗರ: ಬಿಜೆಪಿಯಲ್ಲಿ ಹಿರಿಯ ನಾಯಕರಿಂದ ಮಹಿಳಾ ಕಾರ್ಯಕರ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಜಮ್ಮು ಮಹಿಳಾ ಮೋರ್ಚಾ ಸದಸ್ಯೆ ಪ್ರಿಯಾ ಜರಲ ಗಂಭೀರ ಆರೋಪ ಮಾಡಿದ್ದಾರೆ. ಹಿರಿಯರ ಸಮ್ಮುಖದಲ್ಲಿಯೇ ಪ್ರಿಯಾ ಜರಲ್ ಆರೋಪಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ನಾವು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಟೀಕಿಸುತ್ತೇವೆ. ಮಷೀನ್ ನಲ್ಲಿ ಈ ಕಡೆಯಿಂದ ಆಲೂಗಡ್ಡೆ ಹಾಕಿದ್ರೆ ಮತ್ತೊಂದು ಕಡೆ ಬಂಗಾರ ತೆಗೆಯಲಾಗುತ್ತದೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಬಿಜೆಪಿ ನಾಯಕರು ವ್ಯಂಗ್ಯ ಮಾಡುತ್ತಾರೆ. ಆದ್ರೆ ನಮ್ಮ ಪಕ್ಷದಲ್ಲಿ ಹೋಟೆಲ್ ಒಳಗಡೆ ಹೋದ ಸಾಮಾನ್ಯ ಕಾರ್ಯಕರ್ತೆಯೊಬ್ಬಳು, ಹೊರಗಡೆ ಬರುವಾಗ ಬಿಜೆಪಿಯ ದೊಡ್ಡ ನಾಯಕಿಯಾಗಿ ಹೊರಹೊಮ್ಮುತ್ತಾಳೆ ಎಂದು ಹೇಳುವ ಮೂಲಕ ಪಕ್ಷದಲ್ಲಿಯ ಆಂತರಿಕ ವಿಚಾರವನ್ನು ಪ್ರಿಯಾ ಜರಲ್ ಬಹಿರಂಗಗೊಳಿಸಿದ್ದಾರೆ.

    ಬಿಜೆಪಿ ಸಭೆಯಲ್ಲಿ ಪ್ರಿಯಾ ಜರಲ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕೆಲ ಸದಸ್ಯೆಯರು ಪ್ರಿಯಾರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತ ಹಿರಿಯ ನಾಯಕರು ಈ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಿಯಾರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ.

    ಸಭೆಯಿಂದ ಹೊರ ಬಂದ ಮೇಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾ ಜರಲ್, ನಾವು ರಾಹುಲ್ ಗಾಂಧಿಯವರ ಎಲ್ಲ ಹೇಳಿಕೆಗಳನ್ನು ಟೀಕಿಸುತ್ತೇವೆ. ಆದ್ರೆ ನಮ್ಮಲ್ಲಿ ಎಲ್ಲವೂ ಸರಿ ಇಲ್ಲ. ಹೋಟೆಲ್ ಒಳ ಹೋಗಿದ್ದ ಸಾಮನ್ಯ ಕಾರ್ಯಕರ್ತೆ, ಹೊರ ಬಂದ ಮೇಲೆ ಆಕೆ ದೊಡ್ಡ ನಾಯಕಿಯಾಗಿ ಬರುತ್ತಾಳೆ. ಯಾರು ಈ ಕೆಲಸಕ್ಕೆ ಒಪ್ಪಿಕೊಳ್ಳುವುದಿಲ್ಲ. ಅವರನ್ನು ಎಲ್ಲ ಸ್ಥಾನದಿಂದ ಕೆಳಗೆ ಇಳಿಸಲಾಗುತ್ತದೆ. ಕೆಲ ಮಹಿಳೆಯರು ನನ್ನ ಹೇಳಿಕೆ ಸುಳ್ಳು ಎಂದು ವಾದಿಸಬಹುದು. ಅವರು ಎಂಥವರು ಎಂಬುವುದೇ ನಿಮಗೆ ಗೊತ್ತಾಗಲಿದೆ. ಪಕ್ಷದಲ್ಲಿ ಹಿರಿಯ ನಾಯಕರಿಂದ ತುಳಿತಕ್ಕೊಳಗಾದ ನಿಜವಾದ ಕಾರ್ಯಕರ್ತರು ನನ್ನನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ.

    ಪಕ್ಷದ ಹಿರಿಯ ನಾಯಕರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದ ಪ್ರಿಯಾ ಜರಲ್ ಅವರನ್ನು ಮಹಿಳಾ ಮೋರ್ಚಾದ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಲಮನ್ನಾ ಬೇಡ, ನಮ್ಗೆ ನೀರು ಕೊಡಿ ಸ್ವಾಮಿ- ಹಾಸನದಲ್ಲಿ ನೀರಿಗಾಗಿ ರೈತನ ಅಳಲು

    ಸಾಲಮನ್ನಾ ಬೇಡ, ನಮ್ಗೆ ನೀರು ಕೊಡಿ ಸ್ವಾಮಿ- ಹಾಸನದಲ್ಲಿ ನೀರಿಗಾಗಿ ರೈತನ ಅಳಲು

    ಹಾಸನ: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಗೆ ಅನ್ನದಾತರೊಬ್ಬರು ಮನವಿ ಮಾಡಿಕೊಂಡ ವಿಡಿಯೋ ವೈರಲ್ ಆಗಿದೆ.

    ಹಾಸನದ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕರಸಳ್ಳಿ ರೈತ ನಂಜೇಶಿಯವರು ನಮಗೆ ಸಾಲಮನ್ನಾ ಬೇಡ. ದಯವಿಟ್ಟು ನೀರು ಒದಗಿಸಿ ಸ್ವಾಮಿ ಎಂದು ಪರಿಪರಿಯಾಗಿ ಅಲವತ್ತುಕೊಂಡಿರೋ ಈ ವಿಡಿಯೋ ಮನಕಲಕುವಂತಿದೆ.

    ಬಾಗೂರು-ನವಿಲೆ ಸುರಂಗ ಮಾರ್ಗದ ಸಮೀಪದಲ್ಲಿರುವ ತೆಂಗಿನ ತೋಟ ನೀರಿನ ಕೊರತೆಯಿಂದ ಒಣಗಿ ಹೋಗಿದೆ. ಹಾಗಾಗಿ ನೀರಾವರಿ ಸೌಲಭ್ಯ ಒದಗಿಸಿಕೊಡಿ ಎಂದು ಮುಖ್ಯಮಂತ್ರಿ ತವರೂರಿನಲ್ಲಿ ಅನ್ನದಾತನ ನಂಜೇಶಿ ವಿಡಿಯೋ ಮಾಡುವ ಮೂಲಕ ತನ್ನ ಅಲವತ್ತುಕೊಂಡಿದ್ದಾರೆ.

    ವಿಡಿಯೋದಲ್ಲೇನಿದೆ?:
    ಕುಮಾರಣ್ಣ ನಿಮ್ಮೂರು ಕಣಣ್ಣ ನಮ್ದು. ನಮ್ಮ ಪಾಡು ನೋಡಣ್ಣ ಇಲ್ಲಿ ಯಾವ ಮಟ್ಟಕ್ಕೆ ಆಗಿದೆಯೆಂದು. ಇಲ್ಲೇ ಪಕ್ಕದಲ್ಲಿ 5 ಕಿ.ಮೀ ಸುರಂಗ ಹೋಗಿದೆಯಲ್ಲಣ್ಣ. ನಿಮ್ಮೂರಿನ ಪಕ್ಕದಲ್ಲೇ ಇದ್ದೀವಿ ಅಣ್ಣ ನಾವು. ನಮ್ಮನ್ನ ಜ್ಞಾಪಿಸಲೇ ಇಲ್ವಲ್ಲಣ್ಣ. ಎಲೆಕ್ಷನ್ ಬಂದಾಗ ಮಾತ್ರ ನಮ್ಮನ್ನ ನೆನಪು ಮಾಡಿಕೊಳ್ತೀರಲ್ವ ಅಣ್ಣ. ನಮ್ಮ ಪಾಡು ನೋಡಣ್ಣ ಅಂತ ಕಣ್ಣೀರು ಹಾಕಿದ್ದಾರೆ.

    ಒಂದು ಬಾರಿ ಇಲ್ಲಿ ನೋಡಣ್ಣ. ಇಲ್ಲಿ ಬಂದು ನೋಡಿದ್ರೆ ನಮ್ಮ ಕಷ್ಟ ನಿಮಗೆ ಅರ್ಥವಾಗುತ್ತೆ ಅಣ್ಣ. ಸಾಲಮನ್ನಾ ಬೇಡ ಅಣ್ಣ. ನಮಿಗೆ ನೀರು ಕೊಟ್ರೆ ಸಾಕಣ್ಣ. ಕೈ ಮುಗಿದು ಬೇಡಿಕೊಳ್ಳುತ್ತೇನೆ ಅಣ್ಣ. ನನ್ನ ಪರಿಸ್ಥಿಯನ್ನು ಬಂದು ನೋಡ್ಬೇಕು ಅಣ್ಣ ನೀನು ಅಂತ ಕಣ್ಣೀರು ಸುರಿಸುತ್ತಲೇ ಸಿಎಂ ಅವರನ್ನು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

    https://www.youtube.com/watch?v=3L9QDMumJvE&feature=youtu.be