Tag: viral video

  • ಯೋಧರ ಕಂಡು ಮುಗಿಲುಮುಟ್ಟಿದ ಪುಟಾಣಿಗಳ ಘೋಷಣೆ – ವಿಡಿಯೋ ವೈರಲ್

    ಯೋಧರ ಕಂಡು ಮುಗಿಲುಮುಟ್ಟಿದ ಪುಟಾಣಿಗಳ ಘೋಷಣೆ – ವಿಡಿಯೋ ವೈರಲ್

    ನವದೆಹಲಿ: ಯೋಧರು ತಮ್ಮ ಮುಂದೆ ಹೋಗುತ್ತಿರುವುದನ್ನು ಗಮನಿಸಿದ ಪುಟಾಣಿಗಳ ತಂಡವೊಂದು ಜೋರಾಗಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವ ಮನಮುಟ್ಟುವ ವಿಡಿಯೋ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    ಈ ವಿಡಿಯೋವನ್ನು ಇದೀಗ ಬಿಜೆಪಿ ನಾಯಕ, ಮೇಜರ್ ಸುರೇಂದ್ರ ಪೂನಿಯಾ ಅವರು ತಮ್ಮ ಟ್ವಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. “ಚುನಾವಣಾ ಭರ್ಜರಿ ಪ್ರಚಾರದ ಬ್ಯುಸಿ ಮಧ್ಯೆಯೂ ಮಕ್ಕಳ `ಭಾರತ್ ಮಾತಾಕಿ ಜೈ ಹಾಗೂ ಹೌ ಈಸ್ ದಿ ಜೋಶ್ ಅನ್ನೋ ಘೋಷಣೆ ನನ್ನ ಮನಮುಟ್ಟಿದೆ. ಈ ವಿಡಿಯೋ ನೋಡಿದ ಬಳಿಕ ನನ್ನ ಡ್ರೈವರ್, ಮೇಜರ್ ಸಾಬ್ ಈ ಮಕ್ಕಳ ದೇಶಪ್ರೇಮ ಹಾಗೂ ಸೈನಿಕರ ಮೇಲಿ ಅಭಿಮಾನವನ್ನು ನೋಡಿದ್ರೆ ಸಿನಿಮಾದಲ್ಲಿ ಹೀರೋಗಳು ಬದಲಾಗುತ್ತಲೆ ಇರುತ್ತಾರೆ. ಆದ್ರೆ ನಮ್ಮ ದೇಶದ ಯೋಧರು ಶಾಶ್ವತ ಹೀರೋಗಳು ಎಂಬುದನ್ನು ನಾವು ಅರಿತುಕೊಳ್ಳಬಹುದು” ಎಂದಿದ್ದಾರೆ. ಇದು ಒಬ್ಬ ನಾಗರಿಕ ದೇಶದ ಮೇಲಿಟ್ಟಿರುವ ಗೌರವ ಎಂದು ಟ್ವಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ವಿಡಿಯೋದಲ್ಲೇನಿದೆ?
    30 ಸೆಕೆಂಡಿನ ಈ ವಿಡಿಯೋದಲ್ಲಿ ಮಕ್ಕಳ ಜೋಶ್ ಎಷ್ಟಿದೆ ಎಂಬುದನ್ನು ನಾವು ಕಾಣಬಹುದು. ರಸ್ತೆಯಲ್ಲಿ ಸೈನಿಕರು ಸಾಲಾಗಿ ಹೋಗುತ್ತಿರುವಾಗ ಮಕ್ಕಳ ಗುಂಪಿನಲ್ಲಿದ್ದ ಬಾಲಕನೊಬ್ಬ `ಭಾರತ್ ಮಾತಾ ಕೀ ಜೈ’ ಹಿಂದೂಸ್ತಾನ್ ಜಿಂದಾಬಾದ್ ಎಂದು ಜೋರಾಗಿ ಘೋಷಣೆ ಕೂಗುತ್ತಾನೆ. ಇದಕ್ಕೆ ಉಳಿದ ಮಕ್ಕಳು ಹಾಗೂ ಸೈನಿಕರು ದನಿಗೂಡಿಸುವುದನ್ನು ನಾವು ವಿಡಿಯೋದಲ್ಲಿ ಗಮನಿಸಬಹುದು.

    ಮಕ್ಕಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮಕ್ಕಳ ದೇಶಾಭಿಮಾನ, ಉತ್ಸಾಹ ಹಾಗೂ ಅಭಿಮಾನವನ್ನು ಕೊಂಡಾಡುತ್ತಿದ್ದಾರೆ.

    https://twitter.com/MajorPoonia/status/1118354199916556290

  • ಪರೀಕ್ಷೆಗೆ ಲೇಟ್-ಕುದುರೆ ಏರಿ ಬಂದ ವಿದ್ಯಾರ್ಥಿನಿ

    ಪರೀಕ್ಷೆಗೆ ಲೇಟ್-ಕುದುರೆ ಏರಿ ಬಂದ ವಿದ್ಯಾರ್ಥಿನಿ

    ತಿರುವನಂತಪುರ: ಪರೀಕ್ಷೆಗೆ ತಡವಾಗಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಕುದುರೆ ಏರಿ ಬಂದಿದ್ದಾಳೆ. ವಿದ್ಯಾರ್ಥಿನಿಯ ಕುದುರೆ ಸವಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

    ಕೇರಳದ ತ್ರಿಶೂರ್ ರಸ್ತೆಯಲ್ಲಿ ವಿದ್ಯಾರ್ಥಿನಿ ಕುದುರೆ ಸವಾರಿ ಮೂಲಕ ಪರೀಕ್ಷಾ ಕೇಂದ್ರ ತಲುಪಿದ್ದಾಳೆ. ಕೇವಲ 17 ಸೆಕೆಂಡ್ ವಿಡಿಯೋವನ್ನು ನೆಟ್ಟಿಗರು ಶೇರ್ ಮಾಡಿಕೊಂಡು ವಿದ್ಯಾರ್ಥಿನಿಯ ಧೈರ್ಯವನ್ನು ಕೊಂಡಾಡಿದ್ದಾರೆ.

    ಕುದುರೆ ಸವಾರಿ ನಡೆಸಿದ ವಿದ್ಯಾರ್ಥಿನಿಯ ಹೆಸರು ತಿಳಿದು ಬಂದಿಲ್ಲ. ವಿಡಿಯೋ ನೋಡಿದ ಮಹಿಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರಾ, ತ್ರಿಶೂರ್ ನಲ್ಲಿ ಈ ವಿದ್ಯಾರ್ಥಿನಿಯನ್ನು ನೋಡಿದ್ದೀರಾ? ನನಗೆ ಬಾಲಕಿಯ ಕುದುರೆ ಸವಾರಿ ನಡೆಸುವ ವಿದ್ಯಾರ್ಥಿನಿಯ ಫೋಟೋವನ್ನು ನಾನು ಸೇವ್ ಮಾಡಿಕೊಳ್ಳುತ್ತೇನೆ. ಆಕೆ ನನ್ನ ಹೀರೋ. ಆಶಾವಾದದೊಂದಿಗೆ ಶಾಲೆಗೆ ಹೋಗುತ್ತಿರುವ ಆಕೆ ಬಹು ಜನರಿಗೆ ಸ್ಪೂರ್ತಿಯಾಗಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

  • ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದ ಯುವಕನ ಮಿರರ್ ಸೆಲ್ಫಿ ವಿಡಿಯೋ

    ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದ ಯುವಕನ ಮಿರರ್ ಸೆಲ್ಫಿ ವಿಡಿಯೋ

    ವಾಷಿಂಗ್ಟನ್ : ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬನ ಸೆಲ್ಫಿ ವಿಡಿಯೋ ಭಾರೀ ಸಂಚಲನ ಸೃಷ್ಟಿಸಿದೆ.

    ಕೆಲವೊಂದು ಫೋಟೋಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಸಂಚರಿಸುತ್ತವೆ. ಇದೀಗ ಅಂತಹುದೇ ವಿಡಿಯೋ ನೋಡುಗರನ್ನು ಕನ್ಫ್ಯೂಸ್ ಮಾಡುತ್ತಿದೆ. ಅಮೆರಿಕದ ಯುವಕನೊಬ್ಬ ಶೋ ರೂಮ್ ನಲ್ಲಿ ಮಾಡಿರುವ ಸೆಲ್ಫಿ ವಿಡಿಯೋ ನೋಡುಗರನ್ನು ಒಂದು ಕ್ಷಣ ಚಕಿತಗೊಳಿಸುತ್ತದೆ.

    ಶಾನ್ ಎಂಬ ಯುವಕ ತನ್ನ ಸೋದರನ ಜೊತೆಗೆ ಬಟ್ಟೆ ಖರೀದಿಗಾಗಿ ಶೋ ರೂಮಿಗೆ ತೆರಳಿದ್ದಾನೆ. ಡ್ರೆಸ್ ಟ್ರಯಲ್ ರೂಮ್ ನಲ್ಲಿ ಬಹಳಷ್ಟು ಕನ್ನಡಿಗಳನ್ನು ನೋಡಿದ ಕೂಡಲೇ ಈ ವಿಡಿಯೋ ಮಾಡಿದ್ದಾನೆ. ಕನ್ನಡಿಯಲ್ಲಿ ಆತನ ಪ್ರತಿಬಿಂಬ ಕಾಣುತ್ತಿರುತ್ತದೆ. ವಿಡಿಯೋ ಜೂಮ್ ಮಾಡುತ್ತಾ ಹೋದಂತೆ ಮತ್ತೊಮ್ಮೆ ಶಾನ್ ಕಾಣಿಸಿಕೊಳ್ಳುತ್ತಾನೆ. ಹೀಗೆ ವಿಡಿಯೋ ಜೂಮ್ ಆಗುತ್ತಾ ಹೋದಂತೆ ಕ್ಷಣಾರ್ಧದಲ್ಲಿ ಶಾನ್ ಅಂಗಡಿ ಮಧ್ಯೆ ಕಾಣಿಸಿಕೊಂಡು ನಗುತ್ತಾನೆ.

    ನೆಟ್ಟಿಗರು ಇದೊಂದು ಎಡಿಟ್ ವಿಡಿಯೋ ಎಂದ್ರೆ, ಕೆಲವರು ಈ ರೀತಿ ಮಾಡಲು ಸಾಧ್ಯ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇಬ್ಬರು ಅವಳಿ ಸೋದರರು ಸೇರಿ ಸೆಲ್ಫಿ ವಿಡಿಯೋ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಫೇಸ್‍ಬುಕ್, ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಮ್ ನಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಪತ್ರಿಕೆ ಜೊತೆ ಮಾತನಾಡಿರುವ ಶಾನ್, ಯಾವುದೇ ಎಡಿಟಿಂಗ್ ವಿಡಿಯೋ ಅಲ್ಲ. ಅಲ್ಲಿಯ ಕನ್ನಡಿಗಳಿಂದ ಈ ರೀತಿ ಮಾಡಲು ಸಾಧ್ಯವಾಯ್ತು ಎಂದು ಸ್ಪಷ್ಟಪಡಿಸಿದ್ದಾನೆ.

    https://www.instagram.com/p/BscEVsbhm-j/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಕಲಿ ಕುದುರೆಯನ್ನೇರಿ ಯುದ್ಧ ಮಾಡಿದ ಕಂಗನಾ ರಣಾವತ್-ವಿಡಿಯೋ ನೋಡಿ

    ನಕಲಿ ಕುದುರೆಯನ್ನೇರಿ ಯುದ್ಧ ಮಾಡಿದ ಕಂಗನಾ ರಣಾವತ್-ವಿಡಿಯೋ ನೋಡಿ

    ಮುಂಬೈ: ಮಣಿಕರ್ಣಿಕಾ 2019ರಲ್ಲಿ ತೆರೆಕಂಡ ಐತಿಹಾಸಿಕ ಕಥೆಯುಳ್ಳ ಸಿನಿಮಾ. ವಿವಾದಗಳ ಜೊತೆಯೇ ಸಿನಿಮಾ ಸೆಟ್ಟೇರಿ ತೆರೆಕಂಡು ನೂರು ಕೋಟಿಯ ಕ್ಲಬ್ ಸೇರಿಕೊಂಡಿದೆ. ಝಾನ್ಸಿ ರಾಣಿ ಲಕ್ಷ್ಮಿಭಾಯಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ತಮ್ಮ ಪ್ರಬುದ್ಧತೆಯ ನಟನೆಯ ಮೂಲಕವೇ ಚಿತ್ರಮಂದಿರದತ್ತ ನೋಡುಗರನ್ನು ಸೆಳೆದುಕೊಂಡರು. ಯುದ್ಧ ಸನ್ನಿವೇಶದ ಶೂಟಿಂಗ್ ವೇಳೆ ನಕಲಿ ಕುದುರೆಯನ್ನೇರಿದ ಕಂಗನಾ ಖಡ್ಗ ಬೀಸಿದ್ದಾರೆ.

    ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕಂಗಾನ ನಕಲಿ ಕುದುರೆ ಮೇಲಿನ ಚಿತ್ರೀಕರಣದ ದೃಶ್ಯದ ತುಣುಕು ಹರಿದಾಡುತ್ತಿದೆ. ಸಹ ಕಲಾವಿದರು ಕುದುರೆಯ ಮೇಲೆ ಬಂದ್ರೆ ಕಂಗನಾರಿಗಾಗಿಯೇ ವಿಶೇಷ ನಕಲಿ ಅಶ್ವವೊಂದನ್ನು ಸಿದ್ಧಪಡಿಸಲಾಗಿತ್ತು. ಆಟಿಕೆಯಂತೆ ಚಲಿಸುವ ರೀತಿಯಲ್ಲಿ ಸಿದ್ಧಪಡಿಸಲಾಗಿದ್ದ ಕುದುರೆಯ ಮೇಲೆ ಕುಳಿತ ಕಂಗನಾ ಎದುರಾಳಿಗಳೊಂದಿಗೆ ಯುದ್ಧ ಮಾಡುತ್ತಾರೆ.

    ನೋಡುಗರಿಗೆ ಮಾತ್ರ ಎಲ್ಲಿಯೂ ಅದೊಂದು ನಕಲಿ ಅಶ್ವ ಎಂಬುವುದು ಗೊತ್ತಾಗಲ್ಲ. ಚಿತ್ರದ ಪೋಸ್ಟರ್ ಗಳಲ್ಲಿ ಸಹ ಇದೇ ಕುದುರೆಯ ಮೇಲೆ ಕಂಗನಾ ಕುಳಿತಿರುವುದನ್ನು ಕಾಣಬಹುದು. ಈ ಹಿಂದೆ ಬಂದಂತಹ ಚಿತ್ರಗಳಲ್ಲಿ ನಟಿಯರು ಸಿನಿಮಾಗಾಗಿ ಕುದುರೆ ಸವಾರಿಯನ್ನು ಕಲಿಯುತ್ತಿದ್ದರು. ಟಾಲಿವುಡ್ ಬಾಹುಬಲಿಯ ಸಿನಿಮಾದಲ್ಲಿ ತಂತ್ರಜ್ಞಾನದಿಂದಲೇ ಮಾಯಾ ಲೋಕ ಸೃಷ್ಟಿ ಮಾಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 1 ಎಸೆತಕ್ಕೆ 6 ರನ್ : ರನ್ ಹೊಡೆಯದೇ ಗೆದ್ದು ಬೀಗಿದ್ರು – ವೈರಲ್ ವಿಡಿಯೋ

    1 ಎಸೆತಕ್ಕೆ 6 ರನ್ : ರನ್ ಹೊಡೆಯದೇ ಗೆದ್ದು ಬೀಗಿದ್ರು – ವೈರಲ್ ವಿಡಿಯೋ

    ಮುಂಬೈ: ಕ್ರಿಕೆಟ್ ರೋಚಕತೆಯ ಆಟ ಎಂಬುವುದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದ್ದು, ಪಂದ್ಯದ ಅಂತಿಮ ಎಸೆತದಲ್ಲಿ 6 ರನ್ ಸಿಡಿಸುವ ಒತ್ತಡದಲ್ಲಿದ್ದ ತಂಡ ಯಾವುದೇ ರನ್ ಹೊಡೆಯದೇ ಜಯ ಗಳಿಸಿದ ಘಟನೆ ಮುಂಬೈ ಕ್ಲಬ್ ಕ್ರಿಕೆಟ್ ಪಂದ್ಯದಲ್ಲಿ ನಡೆದಿದೆ.

    ಆದರ್ಶ್ ಕ್ರಿಕೆಟ್ ಕ್ಲಬ್ 2019 ಟೆನ್ನಿಸ್ ಬಾಲ್ ಟೂರ್ನಿಯ ದೇಸಾಯಿ ಹಾಗೂ ಜೂನೈ ದೊಂಬಿವಿಲಿ ತಂಡದ ನಡುವೆ ನಡೆದ ಪಂದ್ಯದಲ್ಲಿ ಘಟನೆ ನಡೆದಿದೆ. ದೇಸಾಯಿ ತಂಡದ 5 ಓವರ್ ಗಳಲ್ಲಿ 76 ರನ್ ಗುರಿಯನ್ನು ಬೆನ್ನಟ್ಟಿತ್ತು. ಪಂದ್ಯ ಅಂತಿಮ ಹಂತಕ್ಕೆ ತಲುಪಿದ ವೇಳೆ ಗೆಲುವು ಪಡೆಯಲು ಕೊನೆಯ ಎಸೆತದಲ್ಲಿ 6 ರನ್ ಗಳಿಸುವ ಒತ್ತಡವನ್ನು ಎದುರಿಸಿತ್ತು. ಆದರೆ ಎದುರಾಳಿ ತಂಡದ ಬೌಲರ್ ಮಾಡಿದ ಎಡವಟ್ಟಿನಿಂದ ದೇಸಾಯಿ ತಂಡದ ಬ್ಯಾಟ್ಸ್ ಮನ್ ರನ್ ಸಿಡಿಸುವ ಅಗತ್ಯವಿಲ್ಲದೇ ಜಯ ಪಡೆಯಿತು.

    https://twitter.com/Amit_smiling/status/1082707807307264000?

    ಜೂನಿ ದೊಂಬಿವಿಲಿ ತಂಡದ ಬೌಲರ್ ಕೊನೆಯ ಎಸೆತದ ವೇಳೆ 6 ವೈಡ್ ಬಾಲ್ ಹಾಕುವ ಮೂಲಕ ಎದುರಾಳಿ ತಂಡದ ಗೆಲುವಿಗೆ ಕಾರಣರಾದರು. ಇದರೊಂದಿಗೆ ಒಂದು ಎಸೆತ ಬಾಕಿ ಇರುವಂತೆ ದೇಸಾಯಿ ತಂಡ ಗೆಲುವು ಪಡೆಯಿತು. ಲೆಫ್ಟ್ ಹ್ಯಾಂಡ್ ಬೌಲರ್ ಸತತ ವೈಡ್ ಎಸೆದರೂ ಕೂಡ ಬೌಲಿಂಗ್ ಸೈಡ್ ಬದಲಾವಣೆ ಮಾಡದೇ ಅಚ್ಚರಿ ಮೂಡಿಸಿದ್ದ. ವಿಶೇಷ ಎಂದರೆ ಅಂತಿಮ ಎಸೆತ ಸಿಕ್ಸ್ ನೀಡಬಾರದು ಎಂದು ಬೌಲ್ ಮಾಡಿದ್ದ ವೇಳೆ ಸ್ಟ್ರೈಕ್ ನಲ್ಲಿ ದೇಸಾಯಿ ತಂಡದ ಬೌಲರ್ ಬ್ಯಾಟ್ ಬೀಸುತ್ತಿದ್ದ. ಅಲ್ಲದೇ ವೈಡ್ ಬಾಲಿಗೆ ಔಟ್ ಎಂದು ಕೂಡ ಬೌಲರ್ ಮನವಿ ಮಾಡಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪತ್ನಿಗೆ ಮಾತ್ರ ಸಲಹೆ ನೀಡ್ಬೇಡಿ- ನಿತ್ಯಾನಂದ ವಿಡಿಯೋ ಸಖತ್ ವೈರಲ್

    ಪತ್ನಿಗೆ ಮಾತ್ರ ಸಲಹೆ ನೀಡ್ಬೇಡಿ- ನಿತ್ಯಾನಂದ ವಿಡಿಯೋ ಸಖತ್ ವೈರಲ್

    ಬೆಂಗಳೂರು: ಮಾಡರ್ನ್ ಸ್ವಾಮೀಜಿ ಎಂದೇ ಖ್ಯಾತರಾಗಿರೋ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಯ ಭಾಷಣದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗಿ ಹರಿದಾಡುತ್ತಿದೆ.

    ಇತ್ತೀಚೆಗಷ್ಟೇ ನಿತ್ಯಾನಂದ ಅವರು ಹೆಂಡತಿ ಬಗ್ಗೆ ಉಪನ್ಯಾಸ ನೀಡಿದ್ದರು. ಈ ಉಪನ್ಯಾಸದ ವಿಡಿಯೋ ತುಣುಕೊಂದು ವಾಟ್ಸಪ್ ಹಾಗೂ ಫೇಸ್ ಬುಕ್ ಗಳಲ್ಲಿ ಶೇರ್ ಆಗುತ್ತಿದೆ. ಹೆಂಡತಿ ಕಾಟಕ್ಕೆ ಬೇಸತ್ತ ಗಂಡಸರು ಈ ವಿಡಿಯೋವನ್ನು ತಮ್ಮ ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡಿಕೊಳ್ಳುತ್ತಿದ್ದಾರೆ.

    ವಿಡಿಯೋದಲ್ಲೇ ನಿತ್ಯಾನಂದ ಹೇಳಿದ್ದೇನು?
    ಯಾವುದೇ ಕಾರಣಕ್ಕೂ ಹೆಂಡತಿಗೆ ಸಲಹೆ ಕೊಡಲು ಹೋಗಬೇಡಿ. ಬೇರೆ ಯಾರಿಗೆ ಬೇಕಾದ್ರ ಅಡ್ವೈಸ್ ಮಾಡಿ. ಆದ್ರೆ ನಿಮ್ಮ ಪತ್ನಿಯರಿಗೆ ಮಾತ್ರ ಮಾಡಬೇಡಿ. ಇದು ನಾನು ನಿಮಗೆ ಕೊಡುತ್ತಿರುವ ಸಲಹೆ.

    ಮಹಾದೇವ ಕೂಡ ಆತನ ಹೆಂಡತಿಗೆ ಸಲಹೆ ನೀಡಲು ಸಾಧ್ಯವಾಗಿಲ್ಲ. ಮತ್ತೆ ನೀವು ಯಾಕೆ ಸಲಹೆ ಕೊಡುತ್ತೀರಿ. ಮಹಾದೇವ ಕೊನೆಗೆ ದಕ್ಷನನ್ನು ಕೊಲ್ಲಲು ವೀರಭದ್ರನನ್ನು ಕಳುಹಿಸಬೇಕಾಯಿತು. ಆದ್ರೆ ತನ್ನ ಸತಿಗೆ ಸಲಹೆ ನೀಡಲು ಆತನಿಂದ ಸಾಧ್ಯವಾಗಿಲ್ಲ. ಹೀಗಾಗಿ ಸರಿಯಾಗಿ ಅರ್ಥ ಮಾಡಿಕೊಳ್ಳಿ. ಪತ್ನಿಯನ್ನು ಮನವೊಲಿಸಲು ನಿಮ್ಮಿಂದ ಮಾತ್ರವಲ್ಲ ಮಹಾದೇವನಿಂದಲೂ ಸಾಧ್ಯವಾಗಿಲ್ಲ ಎಂದು ಹೇಳಿ ಜೋರಾಗಿ ನಕ್ಕಿದ್ದಾರೆ.

    ಇದೀಗ ಗಂಡಂದಿರುವ ವಿಡಿಯೋವನ್ನು ವಾಟ್ಸಾಪ್ ಮೂಲಕ ತಮ್ಮ ಪತ್ನಿಯಂದಿರಿಗೆ ಕಳುಹಿಸಿ ನೋಡಿ ಅಂತ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಿತ್ಯಾನಂದರ ಈ ವಿಡಿಯೋಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ.

    2.39 ನಿಮಿಷದ ವಿಡಿಯೋದಲ್ಲಿ 1.56 ಸೆಕೆಂಡ್ ನಿಂದ ಪತ್ನಿಗೆ ಸಲಹೆ ನೀಡ್ಬೇಡಿ ಎಂಬ ವಿಚಾರ ಪ್ರಸ್ತಾಪವಾಗಿದೆ.

    https://www.youtube.com/watch?v=WxG81DHBfq4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮ್ಮನನ್ನು ಕಳೆದುಕೊಂಡ ನಾಯಿ ಮರಿಗಳಿಗೆ ಹಾಲುಣಿಸಿದ ಗೋ ಮಾತೆ

    ಅಮ್ಮನನ್ನು ಕಳೆದುಕೊಂಡ ನಾಯಿ ಮರಿಗಳಿಗೆ ಹಾಲುಣಿಸಿದ ಗೋ ಮಾತೆ

    ಳೆದ ಕೆಲವು ದಿನಗಳಿಂದ ಹಸುವೊಂದು ನಾಯಿ ಮರಿಗಳಿಗೆ ಹಾಲುಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

    ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡ ನಾಲ್ಕೈದು ನಾಯಿಮರಿಗಳಿಗೆ ಹಸು ತಾನಾಗಿಯೇ ಹಾಲು ನೀಡುತ್ತಿದೆ. ಸಾಮಾನ್ಯವಾಗಿ ಹಸು ನಿಂತಿದ್ದರೆ, ಅದರ ಕರು ಹಾಲು ಕುಡಿಯವಷ್ಟು ಎತ್ತರವಾಗಿರುತ್ತದೆ. ಇಲ್ಲಿ ಪುಟ್ಟ ನಾಯಿ ಮರಿಗಳಿಗೆ ಕಷ್ಟವಾಗಬಾರದು ಅಂತಾ ಗೋ ಮಾತೆ ಮಲಗಿ ಹಾಲು ನೀಡುತ್ತಿದೆ. ಘಟನೆ ನಿಖರವಾಗಿ ಎಲ್ಲಿ ನಡೆದಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲವಾದರೂ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

    ಮನುಷ್ಯರಲ್ಲಿ ನಾನು, ನೀನು ಎಂಬ ಭೇದ ಭಾವವಿರುತ್ತೆ ಹೊರತು ಪ್ರಾಣಿಗಳಲ್ಲಿರಲ್ಲ ಎಂಬುವುದಕ್ಕೆ ತಾಜಾ ಉದಾಹರಣೆ ಇಂದು ನಮ್ಮ ಮುಂದಿದೆ. ಕೆಲ ಪ್ರಾಣಿಗಳು ಪರಸ್ಪರ ಬದ್ಧವೈರಿಗಳಾಗಿದ್ದರು, ಒಂದಕ್ಕೊಂದು ಹಾಲುಣಿಸುವ ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಜಾತಿ-ಧರ್ಮ ಎಂದು ಹೊಡೆದಾಡುತ್ತಿರುವ ಮನುಷ್ಯ ಜನ್ಮ ಕೆಲವೊಮ್ಮೆ ಮೂಕ ಪ್ರಾಣಿಗಳ ಪ್ರೀತಿ-ಸಾಮರಸ್ಯವನ್ನು ನೋಡಿ ಕಲಿಯಬೇಕಾಗುತ್ತದೆ.

    ಚೆನ್ನೈನ ಪುದುಕೊಟ್ಟೈ ಗ್ರಾಮದಲ್ಲಿ ಅನಾಥ ಮೇಕೆ ಮರಿಗೆ ಶ್ವಾನವೊಂದು ತಾಯಿಯಾಗಿತ್ತು. ಕನ್ನ ಎಂಬ ಮೇಕೆ ಮರಿ ಕೆಲ ದಿನಗಳ ಹಿಂದೆ ನಡೆದ ಗಜ ಚಂಡಮಾರುತದಿಂದಾಗಿ ತನ್ನ ತಾಯಿಯನ್ನು ಕಳೆದುಕೊಂಡು ಅನಾಥವಾಗಿತ್ತು. ತಬ್ಬಲಿ ಮೇಕೆಗೆ ಅದೇ ಮನೆಯಲ್ಲಿದ್ದ ಶ್ವಾನವೇ ತಾಯಿಯಾಗಿ ಆಸರೆಯಾಗಿತ್ತು.

    https://www.youtube.com/watch?v=uQca3sM_wfw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೈಕಲ್ ಗುದ್ದಿದ ರಭಸಕ್ಕೆ ಕಾರಿನ ಬಂಪರ್ ನಜ್ಜುಗುಜ್ಜಾಯ್ತು – ವಿಡಿಯೋ ನೋಡಿ

    ಸೈಕಲ್ ಗುದ್ದಿದ ರಭಸಕ್ಕೆ ಕಾರಿನ ಬಂಪರ್ ನಜ್ಜುಗುಜ್ಜಾಯ್ತು – ವಿಡಿಯೋ ನೋಡಿ

    ಬೀಜಿಂಗ್: ಸೈಕಲ್ ಗುದ್ದಿದ ರಭಸಕ್ಕೆ ಕಾರೊಂದರ ಮುಂಭಾಗ ನಜ್ಜುಗುಜ್ಜಾಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಫೋಟೋ ನೋಡಿದ ನೆಟ್ಟಿಗರು ಇದು ಸುಳ್ಳು ಸುದ್ದಿಯಾಗಿದ್ದು, ಈ ರೀತಿ ಆಗಲು ಸಾಧ್ಯವಿಲ್ಲ ಎಂದು ಹೇಳಿ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಅಪಘಾತ ನಿಜವಾಗಿ ನಡೆದಿದ್ದು ಪೊಲೀಸರೇ ಅಧಿಕೃತವಾಗಿ ವಿಡಿಯೋ ರಿಲೀಸ್ ಮಾಡಿ ಸ್ಪಷ್ಟಪಡಿಸಿದ್ದಾರೆ.

    ನಡೆದಿದ್ದು ಎಲ್ಲಿ?
    ದಕ್ಷಿಣ ಚೀನಾದ ಶೇನ್ಜೆನ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಸೈಕಲ್ ಸವಾರ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬಂದ ಕಾರಣ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಸೈಕಲ್ ಸವಾರನಿಗೆ ಸಣ್ಣಪುಟ್ಟ ಗಾಯವಾಗಿದ್ದು ಪಾರಾಗಿದ್ದಾನೆ.

    ಈ ಫೋಟೋ ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳು ಪೊಲೀಸ್ ಠಾಣೆಯನ್ನು ಸಂಪರ್ಕಿಸಿವೆ. ಈ ವೇಳೆ ಪೊಲೀಸರು ಅಪಘಾತ ನಡೆದ ಸ್ಥಳದ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ.

    ನಾಯಿ ಕಚ್ಚಿದರೆ ಸುದ್ದಿಯಲ್ಲ, ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ ಎನ್ನುವಂತೆ ಈಗ ಸೈಕಲ್ ಗುದ್ದಿದ ರಭಸಕ್ಕೆ ಕಾರಿನ ಬಂಪರ್ ನಜ್ಜುಗುಜ್ಜಾಗಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಯ ಬುಡದಲ್ಲಿ 30ಕ್ಕೂ ಅಧಿಕ ಹಾವುಗಳು ಪತ್ತೆ-ವಿಡಿಯೋ ನೋಡಿದ್ರೆ ಮೈ ಜುಮ್ಮೆನ್ನುತ್ತೆ

    ಮನೆಯ ಬುಡದಲ್ಲಿ 30ಕ್ಕೂ ಅಧಿಕ ಹಾವುಗಳು ಪತ್ತೆ-ವಿಡಿಯೋ ನೋಡಿದ್ರೆ ಮೈ ಜುಮ್ಮೆನ್ನುತ್ತೆ

    ಗೊರ್ಮಾನ್(ಟೆಕ್ಸಾಸ್): ತಾತ್ಕಲಿಕ ಮನೆಯ (ಕಟ್ಟಿಗೆ ಮನೆ) ಬುಡದಲ್ಲಿ 30 ಅಧಿಕ ಹಾವುಗಳು ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಬೇಟೆಗೆ ತೆರಳುವರಿಗಾಗಿ ನಿರ್ಮಿಸಲಾಗಿದ್ದ ಮನೆಯ ಬುಡದಲ್ಲಿ ಹಾವುಗಳು ಪತ್ತೆಯಾಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಶಾಕಿಂಗ್ ಪ್ರತಿಕ್ರಿಯೆಗಳನ್ನು ಕಮೆಂಟ್ ಮೂಲಕ ನೀಡಿದ್ದಾರೆ. ಬಾಬಿ ಕೋವನ್ ಎಂಬವರ ಮನೆಯ ಅಡಿಯಲ್ಲಿ ಹಾವುಗಳು ಪತ್ತೆಯಾಗಿದ್ದು, ಬಾಬಿ ತಮ್ಮ ಫೇಸ್‍ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಟೆಕ್ಸಾಸ್ ನ ಗೋರ್ಮಾನ್ ಎಂಬಲ್ಲಿ ಮಂಗಳವಾರ ಹಾವುಗಳು ಕಂಡುಬಂದಿವೆ.

    ಸಾಂದರ್ಭಿಕ ಚಿತ್ರ

    ಮಂಗಳವಾರ ಬಾಬಿ ತನ್ನ ಗೆಳೆಯರೊಂದಿಗೆ ಮನೆಯಲ್ಲಿ ಕೆಲಸದಲ್ಲಿ ನಿರರತಾಗಿದ್ದರು. ಈ ವೇಳೆ ಮನೆಯ ತಳದ ಕಟ್ಟಿಗೆ ಚಿಕ್ಕ ರಂಧ್ರದಿಂದ ಹಾವು ಬಂದಿದೆ. ಹೀಗೆ ಒಂದರ ನಂತರ ಎರಡ್ಮೂರು ಹಾವುಗಳು ಕಾಣಿಸಿಕೊಂಡಿವೆ. ಭಯಬೀತರಾದ ಬಾಬಿ ಗೆಳೆಯರೊಂದಿಗೆ ಚರ್ಚಿಸಿ ಮನೆಯ ತಳಭಾಗವನ್ನು ಎತ್ತಿದ್ದಾರೆ. ಮನೆಯ ತಳಭಾಗ ಮೇಲೆ ಎತ್ತಿದ್ದ ಕೂಡಲೇ ಸುಮಾರು 30ಕ್ಕೂ ಅಧಿಕ ಹಾವುಗಳು ಕಾಣಿಸಿಕೊಂಡಿವೆ.

    ಫೇಸ್‍ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡ ಕೆಲವೇ ಗಂಟೆಯಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಹಲವರು ಅಲ್ಲೇ ಅವುಗಳಿಗೆ ಬೆಂಕಿ ಹಚ್ಚಿ. ಅಪಾಯಕಾರಿ ಹಾವುಗಳು ಎಂದು ಬರೆದ್ರೆ. ಪ್ರಾಣಿಗಳಿಗೂ ಜೀವವಿದೆ ರಕ್ಷಿಸಿ ಎಂದು ಕಮೆಂಟ್ ಮಾಡಿದ್ದಾರೆ.

    ಬಾಬಿ ಸ್ಥಳಕ್ಕೆ ಉರಗ ತಜ್ಞರನ್ನು ಕರೆಸಿ ಎಲ್ಲ ಹಾವುಗಳನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    https://www.facebook.com/bobbyjessica.cowan/videos/10217172379971129/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೂಡ್ಸ್ ರೈಲಿನ ಅಡಿ ಮಲಗಿ ಪ್ರಾಣ ಉಳಿಸಿಕೊಂಡ- ವೈರಲ್ ವಿಡಿಯೋ ನೋಡಿ

    ಗೂಡ್ಸ್ ರೈಲಿನ ಅಡಿ ಮಲಗಿ ಪ್ರಾಣ ಉಳಿಸಿಕೊಂಡ- ವೈರಲ್ ವಿಡಿಯೋ ನೋಡಿ

    ಅಮರಾವತಿ: ಗೂಡ್ಸ್ ರೈಲಿನ ಅಡಿ ಮಲಗಿ ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನು ಉಳಿಸಿಕೊಂಡ ಘಟನೆ ಆಂಧ್ರಪ್ರದೇಶದ ಅನಂತಪುರ ರೈಲು ನಿಲ್ದಾಣದಲ್ಲಿ ನಡೆದಿದೆ.

    ಶನಿವಾರ ರೈಲು ನಿಲ್ದಾಣದಲ್ಲಿ ಲಕ್ನೋ-ಯಶವಂತಪುರ ಟ್ರೈನ್‍ನಿಂದ ಇಳಿದ ಅಪರಿಚಿತ ವ್ಯಕ್ತಿಯೊಬ್ಬರು, ತಮ್ಮ 2ನೇ ಪ್ಲಾಟ್ ಫಾರಂನಿಂದ 1ನೇ ಪ್ಲಾಟ್ ಫಾರಂಗೆ ಹೋಗಲು ಮೇಲುಸೇತುವೆಯನ್ನು ಬಳಸದೇ, ರೈಲ್ವೇ ಹಳಿಗಳನ್ನು ದಾಟುವ ಯತ್ನ ಮಾಡುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಗೂಡ್ಸ್ ರೈಲು ಬಂದಿದೆ.

    ತಾನಿದ್ದ ಹಳಿಯಲ್ಲೇ ರೈಲು ಬರುತ್ತಿರುವುದನ್ನು ಅರಿತ ವ್ಯಕ್ತಿ ಧೃತಿಗೆಡದೇ ಟ್ರಾಕ್ ಮೇಲೆಯೇ ಮಲಗಿದ್ದಾರೆ. ನಂತರ ಗೂಡ್ಸ್ ರೈಲು ಆ ವ್ಯಕ್ತಿಯ ಮೇಲೆ ಹರಿದು ಹೋಗಿದೆ. ರೈಲು ಹೋದ ಬಳಿಕ ತನ್ನಪಾಡಿಗೆ ತಾನು ಎದ್ದು, ಏನೂ ಆಗದಂತೆ ವ್ಯಕ್ತಿ ಹೋಗಿದ್ದಾನೆ. ಇದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ಅನಂತಪುರ ರೈಲ್ವೇ ಪೊಲೀಸರು ಪ್ರತಿಕ್ರಿಯಿಸಿ, ವ್ಯಕ್ತಿಯೊಬ್ಬರು ರೈಲ್ವೇ ಹಳಿಯನ್ನು ದಾಟುತ್ತಿರುವಾಗ ಏಕಾಏಕಿ ಗೂಡ್ಸ್ ರೈಲು ಆಗಮಿಸಿತ್ತು. ಈ ವೇಳೆ ವ್ಯಕ್ತಿ ಹಳಿ ಮೇಲೆಯೇ ಮಲಗಿಕೊಂಡು, ಆಗಬಹುದಾಗಿದ್ದ ಅನಾಹುತದಿಂದ ಪಾರಾಗಿದ್ದಾರೆ. ಆದರೆ ಈ ಬಗ್ಗೆ ರೈಲ್ವೇ ನಿಲ್ದಾಣದಲ್ಲಿದ್ದ ಯಾವುದೇ ಪ್ರಯಾಣಿಕರು ನಮ್ಮ ಗಮನಕ್ಕೆ ತಂದಿರಲಿಲ್ಲ. ವಿಡಿಯೋ ವೈರಲ್ ಬಳಿಕ ಮಾಹಿತಿ ಲಭಿಸಿದೆ. ಈ ಘಟನೆ ಶನಿವಾರ ನಡೆದಿದೆ. ಪ್ರಯಾಣಿಕ ಹಳಿಯನ್ನು ದಾಟುವುದಕ್ಕೆ ಮೇಲುಸೇತುವೆಯನ್ನು ಬಳಸದೇ ಇರುವುದೇ ಕಾರಣ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews