Tag: viral video

  • ನೆಟ್ಟಿಗರ ಮನಗೆದ್ದ ಟೂರ್ ಗೈಡ್ ಡ್ಯಾನ್ಸ್- ವಿಡಿಯೋ ವೈರಲ್

    ನೆಟ್ಟಿಗರ ಮನಗೆದ್ದ ಟೂರ್ ಗೈಡ್ ಡ್ಯಾನ್ಸ್- ವಿಡಿಯೋ ವೈರಲ್

    ಚೆನ್ನೈ: ಇತ್ತೀಚೆಗಷ್ಟೇ ಅಂಕಲ್ ಹಾಗೂ ವೈದ್ಯರೊಬ್ಬರು ಡ್ಯಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಇದೀಗ ತಮಿಳುನಾಡಿನ ಟೂರ್ ಗೈಡ್ ಹಾಕಿರುವ ಸ್ಟೆಪ್ಸ್ ಕೂಡ ಸಖತ್ ವೈರಲ್ ಆಗಿದೆ.

    ಟೂರ್ ಗೈಡ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಐಎಎಸ್ ಅಧಿಕಾರಿ ಪ್ರಿಯಾಂಕ ಶುಕ್ಲಾ ಮಂಗಳವಾರ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಈ ವಿಡಿಯೋ ನನಗೆ ವಾಟ್ಸಪ್ ನಲ್ಲಿ ಬಂದಿತ್ತು ಎಂದು ಹೇಳಿದ್ದು, ಟೂರ್ ಗೈಡ್ ನನ್ನು ಅಧಿಕಾರಿ ಹೊಗಳಿದ್ದಾರೆ. ಈ ಯುವಕ ಸ್ಥಳೀಯ ಪ್ರವಾಸ ಮಾರ್ಗದರ್ಶಕನಾಗಿದ್ದು, ಈತನ ಹೆಸರು ಪ್ರಭು ಎಂದಾಗಿದೆ. ತುಂಬಾ ಟ್ಯಾಲೆಂಟೆಡ್ ಆಗಿದ್ದಾನೆ. ಒಂದು ಬಾರಿ ಆತನ ಎಕ್ಸ್ ಪ್ರೆಶನ್ ನೋಡಿ.. ಸಖತ್ತಾಗಿದೆ ಎಂದು ಪ್ರಿಯಾಂಕ ಬರೆದುಕೊಂಡಿದ್ದಾರೆ.

    ವೈರಲ್ ಆದ ವಿಡಿಯೋದಲ್ಲಿ ಪ್ರಭು ಅವರು ಡ್ಯಾನ್ಸ್ ನಲ್ಲಿರುವ ವಿವಿಧ ರೀತಿಯ ‘ಮುದ್ರ’ಗಳ ಬಗ್ಗೆ ವಿವರಣೆ ನೀಡುತ್ತಿದ್ದಾರೆ. ವಿಡಿಯೋ ಬಗ್ಗೆ ಸಾಕಷ್ಟು ಕಮೆಂಟ್ ಗಳು ಬಂದಿವೆ. ಕೆಲವರು ಇದು ‘ಕಥಕ್ಕಳಿ’ ಎಂದು ಹೇಳಿದರೆ ಇನ್ನೂ ಕೆಲವರು ಇವರ ಎಕ್ಸ್ ಪ್ರೆಶನ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಂಕಲ್ ಬಳಿಕ ವೈರಲ್ ಆಯ್ತು ಡಾಕ್ಟರ್ ಡ್ಯಾನ್ಸ್

    ಅಧಿಕಾರಿ ಶೇರ್ ಮಾಡಿದ ಬಳಿಕ ವಿಡಿಯೋ ಸುಮಾರು 4 ಸಾವಿರ ವ್ಯೂವ್ ಆಗಿದ್ದು, ಪ್ರಭುವನ್ನು ಹೊಗಳಿ ಸಾವಿರಾರು ಕಮೆಂಟ್ ಗಳು ಬಂದಿವೆ. ತಮ್ಮ ವೃತ್ತಿಯ ನಡುವೆಯೂ ಪ್ರವಾಸಗರಿಗೆ ಡ್ಯಾನ್ಸ್ ಹೇಳಿಕೊಡುತ್ತಿರುವ ಪ್ರಭು ಆಸಕ್ತಿಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.

    https://twitter.com/Narendr04934812/status/1178887430755119104

  • ಅದು ಬೇರೆ ಕುಮಟಳ್ಳಿ, ಅನರ್ಹ ಕುಮಟಳ್ಳಿ ಅಲ್ಲ: ಲಕ್ಷ್ಮಣ ಸವದಿ

    ಅದು ಬೇರೆ ಕುಮಟಳ್ಳಿ, ಅನರ್ಹ ಕುಮಟಳ್ಳಿ ಅಲ್ಲ: ಲಕ್ಷ್ಮಣ ಸವದಿ

    – ಕುಮಟಳ್ಳಿ, ನನ್ನ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಯತ್ನ

    ಚಿಕ್ಕೋಡಿ (ಬೆಳಗಾವಿ): ವೈರಲ್ ಆಗಿರುವ ವಿಡಿಯೋದಲ್ಲಿ ನಾನು ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ಮಾತನಾಡಿಲ್ಲ. ಅದು ಬೇರೆ ಕುಮಟಳ್ಳಿ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

    ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಡಿಸಿಎಂ ಲಕ್ಷ್ಮಣ ಸವದಿ, ಮಹಾ ಮಳೆಗೆ ಕೃಷ್ಣಾ ನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿತ್ತು. ಈ ವೇಳೆ ಅಥಣಿ ಕ್ಷೇತ್ರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಾಗ ಕೆಲ ಮಾಧ್ಯಮಗಳು ನಾನು ಫೋನ್‍ನಲ್ಲಿ ಮಾತನಾಡಿದ ದೃಶ್ಯವನ್ನು ಸೆರೆ ಹಿಡಿದಿದ್ದವು. ಆ ವಿಡಿಯೋವನ್ನು ಈಗ ಪ್ರಸಾರ ಮಾಡಿ ಮಹೇಶ್ ಕುಮಟಳ್ಳಿ ಅವರ ಬಗ್ಗೆ ಮಾತನಾಡಿದ್ದೇನೆ ಎಂಬಂತೆ ಬಿಂಬಿಸಲಾಗುತ್ತಿದೆ. ನಾನು ಅನರ್ಹ ಶಾಸಕರ ಬಗ್ಗೆ ತಪ್ಪಾಗಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನು ಓದಿ: ಮಹೇಶ್ ಕುಮಟಳ್ಳಿ ಬಗ್ಗೆ ಡಿಸಿಎಂ ಮಾತನಾಡಿದ್ದು ದುರ್ದೈವ: ರಮೇಶ್ ಜಾರಕಿಹೊಳಿ

    ನಾನು ಮಾತಾಡಿರುವ ವಿಡಿಯೋ ಬೇರೆ ಕುಮಟಳ್ಳಿ ಅವರಿಗೆ ಸಂಬಂಧಿಸಿದ್ದು. ಅವರು ನಮ್ಮ ಸ್ನೇಹಿತರು. ಯಾವುದೋ ವಿಚಾರಕ್ಕೆ ಫೋನ್ ಮಾಡಿದ್ದರು. ಆಗ ನಾನು ಕುಮಟಳ್ಳಿ ಬಗ್ಗೆ ಯಾಕ ತಲೆ ಕೆಡಿಸಿಕೊಳ್ಳುತ್ತಿಯಾ, ಓಡಿ ಹೋಗತಾನೆ ಬಿಡು ಎಂದು ಹೇಳಿದ್ದೆ. ಆದರೆ ಈಗ ನಾನು ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಅವರ ಬಗ್ಗೆ ಮಾತನಾಡಿದ್ದೇನೆ ಎಂಬಂತೆ ತೋರಿಸಲಾಗುತ್ತಿದೆ ಎಂದು ಮಾಧ್ಯಮಗಳ ವಿರುದ್ಧವೇ ಆರೋಪ ಮಾಡಿದ್ದಾರೆ.

    ಮಹೇಶ್ ಕುಮಟಳ್ಳಿ ಹಾಗೂ ನನ್ನ ಮಧ್ಯೆ ಭಿನ್ನಾಭಿಪ್ರಾಯ ತಂದಿಡಲು ಯಾರೋ ಸ್ಥಳೀಯ ನಾಯಕರು ಹೀಗೆ ಮಾಡಿದ್ದಾರೆ. ಉಪ ಚುನಾವಣೆಯ ಲಾಭ ಪಡೆಯಲು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅನರ್ಹ ಶಾಸಕ ಹಾಗೂ ನನ್ನ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ನಾವು ಸ್ನೇಹಿತರಾಗಿಯೇ ಇರುತ್ತೇವೆ. ಹೀಗಾಗಿ ವಿಡಿಯೋ ಬಗ್ಗೆ ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

    ಸವದಿ ಹೇಳಿದ್ದೇನು?
    ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಕ್ಕೆ ಲಕ್ಷ್ಮಣ ಸವದಿ ಭೇಟಿ ನೀಡಿದ್ದರು. ಈ ವೇಳೆ ಅಥಣಿ ಮತ ಕ್ಷೇತ್ರದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಕುರಿತು ಅಪನಿಂದನೆ ಮಾಡಿದ್ದಾರೆ. ಸವದಿ ತಮ್ಮ ಬೆಂಬಲಿಗನ ಜೊತೆ ಮೊಬೈಲ್ ಮಾತನಾಡುತ್ತಾ ಕುಮುಟಳ್ಳಿ ವಿರುದ್ಧ ಆಕ್ಷೇಪಾರ್ಹ ಮಾತಾಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪ್ರವಾಹ ಪೀಡಿತ ಗ್ರಾಮಗಳಿಗೆ ಸಂತ್ರಸ್ತರ ಅಳಲು ಕೇಳಲು ಹೋಗುತ್ತಿದ್ದಾಗ ಮೊಬೈಲ್‍ನಲ್ಲಿ ಮಾತನಾಡುತ್ತಾ ಮುಂಜಾನೆ ಕುಮಟಳ್ಳಿ ಅಂತಹ ದರಿದ್ರ ಮಕ್ಕಳ ಹೆಸರು ನೆನಪಿಸಬೆಡಿ. ಅವನ ಸುದ್ದಿ ತಗೊಂಡ್ ನಾನೇನು ಮಾಡಲಿ. ನನ್ನ ಮೂಡ್ ಹಾಳು ಮಾಡಬೇಡಿ ಎಂದಿದ್ದರು.

    ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿ ಬಿಜೆಪಿ ಸರ್ಕಾರದ ಆಸ್ತಿತ್ವಕ್ಕೆ ಮಹೇಶ್ ಕುಮುಟಳ್ಳಿ ಬಲ ತುಂಬಿದ್ದರು. ಆದರೆ ಇದೀಗ ಅವರ ವಿರುದ್ಧವೇ ಡಿಸಿಎಂ ಗರಂ ಆಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

  • ಟ್ರಾಫಿಕ್ ಪೊಲೀಸ್ ಕಾರ್ಯಕ್ಕೆ ವ್ಯಕ್ತವಾಯ್ತು ಶ್ಲಾಘನೆ- ವಿಡಿಯೋ

    ಟ್ರಾಫಿಕ್ ಪೊಲೀಸ್ ಕಾರ್ಯಕ್ಕೆ ವ್ಯಕ್ತವಾಯ್ತು ಶ್ಲಾಘನೆ- ವಿಡಿಯೋ

    ಬೆಂಗಳೂರು: ಇತ್ತೀಚೆಗೆ ಸಾರ್ವಜನಿಕರಿಗೆ ಟ್ರಾಫಿಕ್ ಪೊಲೀಸರು ಕಿರಿಕಿರಿ ಉಂಟು ಮಾಡಿದ್ದನ್ನು ನೋಡಿದ್ದೀರಿ. ಟ್ರಾಫಿಕ್ ಪೊಲೀಸರು ಅವಾಚ್ಯ ಶಬ್ದಗಳಿಂದ ವಾಹನ ಸವಾರರನ್ನ ಬೈದಿದ್ದು ಹಾಗೂ ಅಲ್ಲದೆ ಗೂಂಡಾವರ್ತನೆ ತೋರಿದ್ದನ್ನೂ ಗಮನಿಸಿದ್ದೀರಿ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದವು. ಆದರೆ ಇದೀಗ ಟ್ರಾಫಿಕ್ ಪೊಲೀಸರೊಬ್ಬರ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ.

    ಹೌದು. ಟ್ರಾಫಿಕ್ ಪೊಲೀಸರ ಕರ್ತವ್ಯ ಪ್ರಜ್ಞೆಗೆ ಈ ವಿಡಿಯೋ ಸಾಕ್ಷಿಯಾಗಿದೆ. ಜನರ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಅವರು ಈ ಕೆಲಸ ಮಾಡಿದ್ದು, ಇದೀಗ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಕೆಲಸವೇನು?
    ಸಿಲಿಕಾನ್ ಸಿಟಿಯಲ್ಲಿ ಮಳೆ ಬಂದರೆ ಸಾಕು ರಸ್ತೆ ತುಂಬಾ ನೀರು ನಿಂತು ವಾಹನ ಸವಾರರು ನರಕ ಅನುಭವಿಸುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಿದೆ. ಇದರಿಂದ ಸಿಲಿಕಾನ್ ಸಿಟಿಯ ರಸ್ತೆಗಳು ಕೆರೆಗಳಂತಾಗಿದೆ. ಹೀಗೆ ಕೆರೆಯಂತಾದ ರಸ್ತೆಯಲ್ಲಿ ನಿಂತ ನೀರನ್ನ ಗುದ್ದಲಿ ಹಿಡಿದು ನೀರನ್ನ ರಸ್ತೆ ಪಕ್ಕದಲ್ಲಿದ್ದ ಮೋರಿಗೆ ಹೋಗುವಂತೆ ಟ್ರಾಫಿಕ್ ಪೊಲೀಸ್ ಒಬ್ಬರು ಮಾಡಿದ್ದಾರೆ.

    ಇವರು ಈ ರೀತಿ ಗುದ್ದಲಿ ಹಿಡಿದು ಬ್ಲಾಕ್ ಆಗಿದ್ದ ನೀರನ್ನ ಸರಾಗವಾಗಿ ಮೋರಿಗೆ ಹೋಗುವಂತೆ ಮಾಡುತ್ತಿದ್ದ ಕಾರ್ಯವನ್ನ ಯಾರೋ ಮೊಬೈಲ್ ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ರಾಫಿಕ್ ಪೊಲೀಸ್ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತವರು ನಿಜವಾದ ಟ್ರಾಫಿಕ್ ಪೊಲೀಸ್ ಇದು ನಮ್ಮ ಹೆಮ್ಮೆ ಎಂದು ಶ್ಲಾಘಿಸಿದ್ದಾರೆ.

    https://twitter.com/AkshayVandure1/status/1177182634687942656

     

  • ಟ್ರ್ಯಾಕ್ಟರ್ ಚಾಲನೆ ವೇಳೆ ಹೆಲ್ಮೆಟ್ ಧರಿಸಿದ ಚಾಲಕ

    ಟ್ರ್ಯಾಕ್ಟರ್ ಚಾಲನೆ ವೇಳೆ ಹೆಲ್ಮೆಟ್ ಧರಿಸಿದ ಚಾಲಕ

    ಬೆಂಗಳೂರು: ಹೊಸ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯ ಹೊಸ ದಂಡಕ್ಕೆ ಭಯಗೊಂಡ ಚಾಲಕನೋರ್ವ ಟ್ರ್ಯಾಕ್ಟರ್ ಚಾಲನೆ ವೇಳೆಯೂ ಹೆಲ್ಮೆಟ್ ಧರಿಸಿದ್ದಾರೆ. ಚಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಬಳಿ ಚಾಲಕ ಹೆಲ್ಮೆಟ್ ಧರಿಸಿ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿರೋ ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಹೆಲ್ಮೆಟ್ ಧರಿಸಿ ಮುಖ್ಯ ರಸ್ತೆ ಪ್ರವೇಶಿಸುವ ಚಾಲಕ ಒಮ್ಮೆ ಅತ್ತಿತ್ತ ನೋಡಿ ಹೋಗುತ್ತಾನೆ. ಜನರು ಮಾತ್ರ ಚಾಲಕನನ್ನು ನೋಡುತ್ತಾ ನಿಂತಿರೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

    ಕೇಂದ್ರ ಸರ್ಕಾರದ ವಿಧಿಸಿದ ದಂಡಕ್ಕೆ ವ್ಯಾಪಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೊತ್ತದ ಪ್ರಮಾಣವನ್ನು ಇಳಿಸಿದೆ. ಸೆಪ್ಟೆಂಬರ್ 21ರಂದು ರಾಜ್ಯ ಸರ್ಕಾರ ಹೊಸ ದಂಡದ ಪರಿಷ್ಕೃತ ದರವನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ.

    ರಾಜ್ಯ ಸರ್ಕಾರ ಸಂಚಾರಿ ನಿಯಮ ಉಲ್ಲಂಘನೆಯ ದಂಡದ ಮೊತ್ತ ಇಳಿಸಿದ್ದರೂ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಮಂಗಳವಾರ ಒಂದೇ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರು ಬರೋಬ್ಬರಿ 21.5 ಲಕ್ಷಕ್ಕೂ ಅಧಿಕ ದಂಡ ಸಂಗ್ರಹಿಸಿದ್ದಾರೆ. 24 ಗಂಟೆಯಲ್ಲಿ ಅಂದರೆ ಮಂಗಳವಾರ ಒಂದೇ ದಿನಕ್ಕೆ 6,782 ಟ್ರಾಫಿಕ್ ನಿಯಮ ಉಲ್ಲಂಘನೆಯ ಪ್ರಕರಣಗಳು ಸಿಲಿಕಾನ್ ಸಿಟಿ ವಾಹನ ಸವಾರರಿಂದ ದಾಖಲಾಗಿವೆ.

  • ಸಾರಿಗೆ ಬಸ್‍ನಲ್ಲಿಯೇ ಮೈಮರೆತ ಜೋಡಿ – ಒಬ್ಬರಿಗೊಬ್ಬರು ಚುಂಬನದ ಸುರಿಮಳೆ

    ಸಾರಿಗೆ ಬಸ್‍ನಲ್ಲಿಯೇ ಮೈಮರೆತ ಜೋಡಿ – ಒಬ್ಬರಿಗೊಬ್ಬರು ಚುಂಬನದ ಸುರಿಮಳೆ

    ಹಾಸನ: ಯುವ ಪ್ರೇಮಿಗಳು ಬಸ್ ನಲ್ಲಿಯೇ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಹಾಸನ-ಬೆಂಗಳೂರು ನಾನ್ ಸ್ಟಾಪ್ ಬಸ್ ನಲ್ಲಿ ಪ್ರೇಮಿಗಳ ಸರಸ ಸಲ್ಲಾಪದ ವಿಡಿಯೋ ವೈರಲ್ ಆಗಿದೆ. ಬಸ್‍ನಲ್ಲಿ ಅಕ್ಕ-ಪಕ್ಕ ಕುಳಿತು ಜೋಡಿ ಪ್ರಯಾಣಿಕರು ಕುಳಿತಿದ್ದರೂ ಒಬ್ಬರಿಗೊಬ್ಬರು ತಬ್ಬಿಕೊಂಡು ಚುಂಬನ ನೀಡುತ್ತಾ ಮೈ ಮರೆತಿದ್ದಾರೆ. ಜೋಡಿ ಕುಳಿತಿದ್ದ ಪಕ್ಕದ ಸೀಟ್ ನಲ್ಲಿ ಕುಳಿತಿದ್ದ ಸಹ ಪ್ರಯಾಣಿಕರೊಬ್ಬರು ಪ್ರೇಮಿಗಳು ವರ್ತನೆಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡಿದ್ದಾರೆ. ಇದನ್ನೂ ಓದಿ:  ಹೊರಗಿನಿಂದ ಸುಂದರ ಪಾರ್ಕ್-ಒಳಗೆ ಪ್ರೇಮಿಗಳ ಅಸಭ್ಯ ವರ್ತನೆ

    ಯುವಕ-ಯುವತಿ ಯಾರು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ವಿಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದ್ದು, ಸಾರಿಗೆ ವಾಹನದಲ್ಲಿ ಎಲ್ಲ ವರ್ಗದ ಜನರು ಪ್ರಯಾಣಿಸುತ್ತಿರುತ್ತಾರೆ. ಈ ರೀತಿ ಜೋಡಿಗಳು ಅಸಭ್ಯವಾಗಿ ವರ್ತಿಸಿದ್ರೆ ಸಹ ಪ್ರಯಾಣಿಕರು ಮುಜುಗರಕೊಳ್ಳಗಾಗುತ್ತಾರೆ. ಬಸ್ ನಲ್ಲಿ ಮಕ್ಕಳು ಸಹ ಪ್ರಯಾಣ ಮಾಡುತ್ತಿರುತ್ತಾರೆ. ಇಂತಹ ಘಟನೆಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಜೋಡಿಯ ನಡವಳಿಕೆಯನ್ನು ಸಾರ್ವಜನಿಕರು ಖಂಡಿಸಿದ್ದಾರೆ. ಇದನ್ನೂ ಓದಿ: ಕಬ್ಬನ್ ಪಾರ್ಕ್ ನಲ್ಲಿ ರೊಮ್ಯಾನ್ಸ್ ಮಾಡುವ ಪ್ರೇಮಿಗಳೇ ಹುಷಾರ್..!

    ಈ ಮೊದಲು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಕಾಲೇಜು ವಿದ್ಯಾರ್ಥಿಗಳದ್ದು ಎಂದು ಹೇಳಲಾದ ವಿಡಿಯೋ ವೈರಲ್ ಆಗಿತ್ತು. ಕಾಲೇಜಿಗೆ ಚಕ್ಕರ್ ಹಾಕಿದ್ದ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ರೊಮ್ಯಾನ್ಸ್ ನಲ್ಲಿ ತೊಡಗಿಕೊಂಡಿದ್ದರು. ರಸ್ತೆಯ ಎರಡು ಬದಿ ಇಬ್ಬರನ್ನು ಕಾವಲು ನಿಲ್ಲಿಸಿ ಹುಡುಗ ಹುಡುಗಿಯನ್ನು ಕಿಸ್ ಮಾಡಿದ್ದನು. ವಿಡಿಯೋದಲ್ಲಿ 4 ಜನ ವಿದ್ಯಾರ್ಥಿಗಳು ಅಂದರೆ ಇಬ್ಬರು ವಿದ್ಯಾರ್ಥಿಯರು ಹಾಗೂ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಬದಿಯಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ಇಬ್ಬರು ವಿದ್ಯಾರ್ಥಿಯರು ಮುಚ್ಚಿದ್ದ ಅಂಗಡಿಯ ಮುಂದೆ ಕುಳಿತ್ತಿದ್ದು, ಇನ್ನೂ ಇಬ್ಬರು ವಿದ್ಯಾರ್ಥಿಗಳು ಅವರಿಗೆ ಕಾವಲು ಆಗಿ ರಸ್ತೆಯ ಬದಿ ನಿಂತಿದ್ದರು. ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲೇ ಕಿಸ್ ಮಾಡಿ, ಮೈಮೇಲೆ ಕೈ ಹಾಕ್ತಾ, ತಳ್ಳಾಡಿದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು!

    ಹುಡುಗ ತನ್ನ ಪ್ರೇಯಸಿಯನ್ನು ಕಿಸ್ ಮಾಡಲು ಪ್ರಯತ್ನಿಸುತ್ತಿರುತ್ತಾನೆ. ಈ ವೇಳೆ ಆ ರಸ್ತೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ತಿರುಗಾಡುತ್ತಿದ್ದು, ಆತ ಸುಮ್ಮನಾಗುತ್ತಾನೆ. ನಂತರ ರಸ್ತೆಯಲ್ಲಿ ಯಾರೂ ಇಲ್ಲದ ವೇಳೆ ಹುಡುಗ ಆ ಹುಡುಗಿಯನ್ನು ಕಿಸ್ ಮಾಡಿ ಅಲ್ಲಿಂದ ಹೋಗಿದ್ದನು. ಕಿಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 2018ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೇಟೆಯ ಹೃದಯಭಾಗದಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಾರ್ವಜನಿಕ ಜಾಗದಲ್ಲಿ ಕಿಸ್ ಮಾಡುತ್ತಾ, ಮೈ ಮೇಲೆ ಕೈಹಾಕುತ್ತಾ, ತಳ್ಳಾಡುತ್ತಾ ಅಸಭ್ಯ ವರ್ತನೆ ತೋರಿದ್ದ ವಿಡಿಯೋ ವೈರಲ್ ಆಗಿತ್ತು. ಇದನ್ನೂ ಓದಿ: ಬೇಲೂರಿನಲ್ಲಿ ಟ್ಯೂಶನ್ ಗೆಂದು ಹೇಳಿ ಶಾಲೆಯ ಹಿಂಭಾಗದಲ್ಲಿಯೇ ಲವ್ವಿ-ಡವ್ವಿ!

  • ಹಿಂಭಾಗಕ್ಕೆ ಬೋನಿ ಕಪೂರ್ ಟಚ್ – 5 ತಿಂಗಳ ಬಳಿಕ ಊರ್ವಶಿ ಮೌನ ಸ್ಫೋಟ

    ಹಿಂಭಾಗಕ್ಕೆ ಬೋನಿ ಕಪೂರ್ ಟಚ್ – 5 ತಿಂಗಳ ಬಳಿಕ ಊರ್ವಶಿ ಮೌನ ಸ್ಫೋಟ

    ಮುಂಬೈ: ಐದು ತಿಂಗಳ ಹಿಂದೆ ಬಾಲಿವುಡ್ ಸಿನಿಮಾ ನಿರ್ದೇಶಕ ಬೋನಿ ಕಪೂರ್ ಮದುವೆಯಲ್ಲಿ ನಟಿ ಊರ್ವಶಿ ರೌಥೆಲಾರ ಹಿಂಭಾಗಕ್ಕೆ ಟಚ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಐದು ತಿಂಗಳ ಬಳಿಕ ಊರ್ವಶಿ ವಿಡಿಯೋಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.

    ಏಪ್ರಿಲ್ ನಲ್ಲಿ ಸ್ನೇಹಿತರ ಮದುವೆ ಸಮಾರಂಭದಲ್ಲಿ ನಾನು ಭಾಗಿಯಾಗಿದ್ದಾಗ ಅಲ್ಲಿ ಬೋನಿ ಕಪೂರ್ ಸಹ ಬಂದಿದ್ದರು. ವೇದಿಕೆ ಮೇಲೆ ನವದಂಪತಿ ಜೊತೆ ಫೋಟೋಗೆ ಪೋಸ್ ಕೊಡುತ್ತಿದ್ದ ಸಂದರ್ಭದಲ್ಲಿ ಬೋನಿ ಕಪೂರ್ ಕೈ ನನಗೆ ತಾಕಿದ್ದು, ಅದಕ್ಕಿಂತ ಹೆಚ್ಚಿನದು ಅಲ್ಲಿ ಏನು ನಡೆದಿಲ್ಲ. ಅವರ ಕೈ ನನಗೆ ತಾಕಿದ್ದಾಗ ನಾನು ಯಾವುದೇ ಪ್ರತಿಕಿಯೆ ಸಹ ನೀಡಿರಲಿಲ್ಲ. ಆದ್ರೆ ಬೆಳಗ್ಗೆ ಆಗುವಷ್ಟರಲ್ಲಿ ಈ ಸಣ್ಣ ಘಟನೆಯೊಂದು ಹಲವು ಆಯಾಮಗಳನ್ನು ಪಡೆದುಕೊಂಡು ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಬಿತ್ತರವಾಗಿತ್ತು. ಸತತ ಒಂದು ವಾರಗಳ ಕಾಲ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು ಎಂದು ಊರ್ವಶಿ ಬೇಸರ ವ್ಯಕ್ತಪಡಿಸಿದ್ದಾರೆ.

    ವಿಡಿಯೋ ವೈರಲ್ ಬಳಿಕ ಬೋನಿ ಕಪೂರ್ ಸಹ ಜೊತೆ ಮಾತನಾಡಿದ್ದೇನೆ. ಬೋನಿ ಕಪೂರ್ ಯಾವುದೇ ಪ್ರತಿಕ್ರಿಯೆ ನೀಡದೇ ಅಸಮಾಧಾನ ಹೊರ ಹಾಕಿದ್ದರು. ವಿಡಿಯೋವನ್ನು ಕೆಟ್ಟದಾಗಿ ಬಿಂಬಿಸಿದವರ ವಿರುದ್ಧ ಬೇಸರ ಹೊರಹಾಕಿದ್ದರು ಎಂದು ಊರ್ವಶಿ ತಿಳಿಸಿದ್ದಾರೆ.

    ಏನದು ವಿಡಿಯೋ?
    ಮದುವೆ ಕಾರ್ಯಕ್ರಮದಲ್ಲಿ ನವದಂಪತಿ ಜೊತೆ ಫೋಟೋ ತೆಗೆದುಕೊಳ್ಳುವಾಗ ಬೋನಿ ಕಪೂರ್ ಪಕ್ಕದಲ್ಲಿದ್ದ ಊರ್ವಶಿ ಯ ಹಿಂಭಾಗ ಟಚ್ ಮಾಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಣ್ಣದ ಕಥೆಗಳೊಂದಿಗೆ ಸಂಚರಿಸಿತ್ತು.

  • ಒಗ್ಗಟ್ಟಿನಲ್ಲಿ ಬಲ- ಸಾಬೀತುಪಡಿಸಿದ ಇರುವೆ ಸೈನ್ಯ

    ಒಗ್ಗಟ್ಟಿನಲ್ಲಿ ಬಲ- ಸಾಬೀತುಪಡಿಸಿದ ಇರುವೆ ಸೈನ್ಯ

    -ಸ್ಪೂರ್ತಿ ಚಿಲುಮೆಯ ವಿಡಿಯೋ ನೋಡಿ

    ಬೆಂಗಳೂರು: ಓರ್ವನಿಂದ ಸಾಧ್ಯವಾಗದಿದ್ದರೆ ಅದಕ್ಕೆ ಮತ್ತೋರ್ವನ ಸಹಾಯ ಪಡೆದುಕೊಳ್ಳಬೇಕು. ಒಗ್ಗಟ್ಟಿನಿಂದ ಯಾವುದೇ ಕೆಲಸ ಮಾಡಿದ್ದಲ್ಲಿ ಅದಕ್ಕೆ ಯಶಸ್ಸು ಸಿಗುತ್ತೆ ಎಂಬ ಮಾತನ್ನು ಇರುವೆಗಳ ಸೈನ್ಯವೊಂದು ಸಾಬೀತು ಮಾಡಿದೆ. ಇರುವೆ ಸೈನ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇದೊಂದು ಸ್ಪೂರ್ತಿಯ ಚಿಲುಮೆ ಎಂದು ಹಾಡಿ ಹೊಗಳಿದ್ದಾರೆ.

    ಇರುವೆಗಳ ಸಾಲೊಂದು ಕಾಂಪೌಂಡ್ ಗಳಿಗೆ ಅಳವಡಿಸಿರುವ ಬ್ಯಾರಿಕೇಡ್ ಮೇಲೆ ಹೊರಟಿದೆ. ಆದ್ರೆ ಕಾಂಪೌಂಡ್ ಗಳಿಗೆ ಅಳವಡಿಸಿಲಾಗಿರುವ ಬ್ಯಾರಿಕೇಡ್ ಗಳ ನಡುವೆ ಅಂತರವಿದೆ. ಈ ಅಂತರವನ್ನು ದಾಟಲು ಎಲ್ಲ ಇರುವೆಗಳು ಒಂದಕ್ಕೊಂದು ತಾಗಿಕೊಂಡು ಸೇತುವೆ ರೀತಿ ಮಾಡಿಕೊಂಡಿದೆ. ಈ ಪುಟ್ಟ ಸೇತುವೆ ಮೇಲೆ ಉಳಿದ ಇರುವೆಗಳು ಹೊರಟಿವೆ.

    14 ಸೆಕೆಂಡಿನ ವಿಡಿಯೋ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಸಂದೇಶವನ್ನು ನೋಡುಗರಿಗೆ ಹೇಳುತ್ತದೆ. ಐಪಿಎಸ್ ಅಧಿಕಾರಿ ಸ್ವಾತಿ ಎಂಬವರು ಈ ವಿಶೇಷ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡು ಟೀಂ ಎಫರ್ಟ್ ಎಂದು ಬರೆದುಕೊಂಡಿದ್ದಾರೆ.

     

  • ಟ್ರಾಫಿಕ್ ದಂಡಕ್ಕೆ ಹೊಸ ಮಂತ್ರದಂಡ ಸಿದ್ಧಪಡಿಸಿಕೊಂಡ ನೆಟ್ಟಿಗರು- ವೈರಲಾಯ್ತು ವಿಡಿಯೋ

    ಟ್ರಾಫಿಕ್ ದಂಡಕ್ಕೆ ಹೊಸ ಮಂತ್ರದಂಡ ಸಿದ್ಧಪಡಿಸಿಕೊಂಡ ನೆಟ್ಟಿಗರು- ವೈರಲಾಯ್ತು ವಿಡಿಯೋ

    ಬೆಂಗಳೂರು: ಹೊಸ ಮೋಟಾರು ವಾಹನ ಕಾಯ್ದೆ ವಾಹನ ಸವಾರರ ಜೇಬನ್ನು ಸುಡುತ್ತಿದೆ. ಸರ್ಕಾರ ದಂಡದ ಮೊತ್ತ ಹೆಚ್ಚಳ ಮಾಡುವದರಿಂದ ಸಾರ್ವಜನಿಕರು ಸಂಚಾರಿ ನಿಯಮ ಪಾಲನೆ ಮಾಡುತ್ತಾರೆ ಎಂಬ ಉದ್ದೇಶವನ್ನು ಹೊಂದಿತ್ತು. ಆದ್ರೆ ಸರ್ಕಾರದ ಮಂತ್ರಕ್ಕೆ ಜನರು ತಿರುಮಂತ್ರವನ್ನು ಸಿದ್ಧಪಡಿಸಿಕೊಂಡು ತಿರುಗೇಟು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಏನದು ವಿಡಿಯೋ ವೈರಲ್?
    ಹರ್ಯಾಣದ ಐಪಿಎಸ್ ಅಧಿಕಾರಿ ಪಂಕಜ್ ನಾಯನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಸವಾರರು ಪೊಲೀಸರನ್ನು ಕಂಡಕೂಡಲೇ ತಮ್ಮ ವಾಹನವನ್ನು ತಳ್ಳಿಕೊಂಡು ಹೋಗಿದ್ದಾರೆ. ಪೊಲೀಸರು ಮುಂದೆಯೇ ಬಹುತೇಕರು ತಮ್ಮ ದ್ವಿಚಕ್ರ ವಾಹನಗಳನ್ನು ತಳ್ಳಿಕೊಂಡು ಹೋಗುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದು.

    https://twitter.com/bijendra125/status/1169143385095114753

    ಈ ವಿಡಿಯೋವನ್ನು ಹಲವರು ರೀಟ್ವೀಟ್ ಮಾಡಿಕೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ದೊಡ್ಡ ಮೊತ್ತದ ದಂಡ ಪಾವತಿಸಬೇಕಾಗುತ್ತದೆ ಎಂದು ಎಲ್ಲರೂ ಬೈಕ್ ತಳ್ಳಿಕೊಂಡು ಹೋಗುತ್ತಿದ್ದಾರೆ. ಪ್ರತಿಯೊಂದಕ್ಕೂ ಒಂದೊಂದು ಕಳ್ಳ ಮಾರ್ಗಗಳನ್ನು ಭಾರತೀಯರು ಹುಡುಕಿಕೊಳ್ಳುತ್ತಾರೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಹಲವರು ಹಂಚಿಕೊಳ್ಳುತ್ತಿದ್ದು, ಟ್ರೋಲ್ ಮೂಲಕ ದೊಡ್ಡ ಮೊತ್ತದ ದಂಡಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

    ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಿಂದ ಸಾವಿರಾರು ರೂ. ದಂಡವನ್ನು ಹಲವರು ಕಟ್ಟಿದ್ದಾರೆ. ಸಾರ್ವಜನಿಕ ವಲಯದಲ್ಲಿ ಹೊಸ ನಿಯಮಕ್ಕೆ ವ್ಯಾಪಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲವರು ತಮ್ಮ ಹಳೆಯ ವಾಹನದ ಮೌಲ್ಯಕ್ಕಿಂತ ದಂಡವೇ ಹೆಚ್ಚಾಯ್ತು ಎಂದು ಕಿಡಿಕಾರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ರಾಫಿಕ್ ದಂಡಕ್ಕೆ ಸಂಬಂಧಿಸಿದ ಮೀಮ್ಸ್, ಜೋಕ್ ಗಳು ಮಿಂಚಿನಂತೆ ಹರಿದಾಡುತ್ತಿವೆ.

    ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನದವರೆಗೆ ಒಂದೇ ದಿನದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ 2,978 ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಗಳಿಂದ ಟ್ರಾಫಿಕ್ ಪೊಲೀಸರು ವಾಹನ ಸವಾರರಿಂದ ಭರ್ತಿ 30 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ನಿಯಮ ಉಲ್ಲಂಘಿಸಿದವರ ಬಳಿ ಭಾರೀ ದಂಡ ಕಟ್ಟಿಸಿಕೊಂಡು ಪೊಲೀಸರು ವಾಹನ ಸವಾರರ ಬೆವರಿಳಿಸಿದ್ದಾರೆ.

    https://twitter.com/piyushtajpuria/status/1169258231706746882

  • ಬರಿಗಾಲಿನಲ್ಲಿಯೇ 11 ಸೆಕೆಂಡ್‍ನಲ್ಲಿ 100 ಮೀಟರ್- ಗ್ರಾಮೀಣ ಪ್ರತಿಭೆಯ ಮಿಂಚಿನ ಓಟ

    ಬರಿಗಾಲಿನಲ್ಲಿಯೇ 11 ಸೆಕೆಂಡ್‍ನಲ್ಲಿ 100 ಮೀಟರ್- ಗ್ರಾಮೀಣ ಪ್ರತಿಭೆಯ ಮಿಂಚಿನ ಓಟ

    -ಕೇಂದ್ರದಿಂದ ಸಿಕ್ತು ಅವಕಾಶ

    ನವದೆಹಲಿ: ನಮ್ಮ ದೇಶದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಪ್ರತಿಭೆಗಳು ಬೇಕಾದ್ರೆ ಗ್ರಾಮಗಳಿಗೆ ಭೇಟಿ ನೀಡಬೇಕೆಂಬ ಮಾತಿದೆ. ಅದೆಷ್ಟೋ ಕ್ರೀಡಾ ಆಸಕ್ತರಿಗೆ ಸೂಕ್ತ ವೇದಿಕೆ ಸಿಗದ ಹಿನ್ನೆಲೆಯಲ್ಲಿ ತೆರೆಮರೆಯಲ್ಲಿಯೇ ಉಳಿಯುತ್ತಾರೆ. ಇದೀಗ ಅಂತಹವುದೇ ಗ್ರಾಮೀಣ ಪ್ರತಿಭೆ ಸಾಧನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಿಂದ ಗ್ರಾಮೀಣ ಪ್ರತಿಭೆಗೆ ಕೇಂದ್ರ ವೇದಿಕೆ ಕಲ್ಪಿಸಲು ಮುಂದಾಗಿದೆ.

    ಮಧ್ಯ ಪ್ರದೇಶದ ಶಿವಪುರಿ ನಿವಾಸಿಯಾದ 19 ವರ್ಷದ ರಾಮೇಶ್ವರ್ ಗುರ್ಜಾರ್ ಎಂಬ ಯುವಕನ ಓಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿತ್ತು. ರಾಮೇಶ್ವರ್ 100 ಮೀಟರ್ ಅಂತರವನ್ನು ಕೇವಲ 11 ಸೆಕೆಂಡ್ ನಲ್ಲಿ ಪೂರ್ಣಗೊಳಿಸಿದ್ದಾನೆ. ಬರಿಗಾಲಿನಲ್ಲಿಯೇ ರಾಮೇಶ್ವರ್ ಓಡಿದ್ದು, ಸ್ಥಳೀಯರು ಆತನನ್ನು ‘ಉಸೇನ್ ಬೋಲ್ಟ್’ ಜೊತೆ ಹೋಲಿಕೆ ಮಾಡಲಾರಂಭಿಸಿದ್ದಾರೆ.

    ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಯುವಕನಿಗೆ ಸೂಕ್ತ ವೇದಿಕೆ ನೀಡಬೇಕೆಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜೂ ಅವರಲ್ಲಿ ಮನವಿ ಮಾಡಿಕೊಂಡಿದ್ದರು.

    ಭಾರತ ಇಂತಹ ಕ್ರೀಡಾಸಕ್ತರನ್ನು ಹೊಂದಿರುವ ದೊಡ್ಡ ಆಗರವಾಗಿದೆ. ಇಂತಹ ಗ್ರಾಮೀಣ ಪ್ರತಿಭೆಗೆ ಸೂಕ್ತ ತರಬೇತಿ ಮತ್ತು ವೇದಿಕೆ ದೊರೆತಲ್ಲಿ ಆತ ಇತಿಹಾಸ ರಚಿಸುವ ಸಾಮಥ್ರ್ಯ ಹೊಂದಿದ್ದಾನೆ. ಹಾಗಾಗಿ ಕ್ರೀಡಾ ಸಚಿವರಾದ ಕಿರಣ್ ರಿಜಿಜು ಮತ್ತು ಭಾರತದ ಕ್ರೀಡಾ ಇಲಾಖೆ ಯುವ ಓಟಗಾರನನ್ನು ಪ್ರೋತ್ಸಾಹಿಸಬೇಕೆಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

    ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕಿರಣ್ ರಿಜಿಜು, ಅಥ್ಲೀಟ್ ರಾಮೇಶ್ವರನನ್ನು ನನ್ನ ಬಳಿ ಕರೆದುಕೊಂಡು ಬನ್ನಿ. ಆತನನ್ನು ಅಥ್ಲೀಟ್ ಅಕಾಡೆಮಿಯಲ್ಲಿ ತರಬೇತಿ ಮತ್ತು ಉಳಿದುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಕೊಡಲಾಗುತ್ತದೆ ಎಂದಿದ್ದಾರೆ.

  • ಒಂದೇ ಆಟೋದಲ್ಲಿ 24 ಜನ ಪ್ರಯಾಣಿಕರು: ವಿಡಿಯೋ ವೈರಲ್

    ಒಂದೇ ಆಟೋದಲ್ಲಿ 24 ಜನ ಪ್ರಯಾಣಿಕರು: ವಿಡಿಯೋ ವೈರಲ್

    – ಇದೊಂದು ವಿಶ್ವದಾಖಲೆ ಎಂದು ಟ್ರೋಲ್ ಮಾಡಿದ ನೆಟ್ಟಿನರು

    ಹೈದರಾಬಾದ್: ಆಟೋವೊಂದರಲ್ಲಿ ಸಾಮಾನ್ಯವಾಗಿ 4 ರಿಂದ 7 ಜನರು ಪ್ರಯಾಣಿಸಬಹುದು. ಆದರೆ ಬರೋಬ್ಬರಿ 24 ಜನರು ಒಂದೇ ಆಟೋದಲ್ಲಿ ಪ್ರಾಯಾಣಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ತೆಲಂಗಾಣದ ಭೋಂಗೀರ್ ಪಟ್ಟಣದಲ್ಲಿ ಇಂತಹ ವಿಚಿತ್ರ ಪ್ರಸಂಗ ನಡೆದಿದ್ದು, ಟ್ವಿಟ್ಟರ್ ನಲ್ಲಿ ವಿಡಿಯೋ ಹರಿದಾಡುತ್ತಿದೆ. ಇದನ್ನು ನೋಡಿದ ನೆಟ್ಟಿಗರು, ಇದೊಂದು ವಿಶ್ವದಾಖಲೆ ಎಂದು ವ್ಯಂಗ್ಯವಾಡಿದ್ದಾರೆ. ಕೆಲವರು ತಮ್ಮ  ರೀತಿಯಲ್ಲಿ ರಿಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

    ಈ ವಿಡಿಯೋವನ್ನು ಕರೀಮ್ ನಗರದ ಪೊಲೀಸ್ ಆಯುಕ್ತರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹರಿಬಿಟ್ಟಿದ್ದು, ಜನರು ತಮ್ಮ ಸುರಕ್ಷತೆ ಬಗ್ಗೆ ತಾವೇ ಎಚ್ಚರಿಕೆ ವಹಿಸಬೇಕು. ಪ್ರಯಾಣಿಕರ ಆಟೋಗಳಲ್ಲಿ ಅಗತ್ಯಕ್ಕಿತ ಹೆಚ್ಚಿನ ಮಂದಿ ಕೂರಬಾರದು. ಇದರಿಂದ ನಿಮ್ಮ ಪ್ರಾಣಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.

    https://twitter.com/cpkarimnagar/status/1160441693293801473

    ವಿಡಿಯೋದಲ್ಲಿ ಏನಿದೆ?:
    ಪೊಲೀಸರು ಆಟೋವೊಂದನ್ನು ತಡೆದು ಏನಪ್ಪ ನಿನ್ನ ಹೆಸರು ಎಂದು ಚಾಲಕನನ್ನು ಕೇಳುತ್ತಾರೆ. ಆಗ ಚಾಲಕ ಕರೀಂ ಸರ್ ಎಂದು ಉತ್ತರಿಸುತ್ತಾನೆ. ಆಗ ಪೊಲೀಸರು ಆಟೋದಲ್ಲಿ ಇರುವವರನ್ನು ಕೆಳಗೆ ಇಳಿಯುವಂತೆ ಸೂಚನೆ ನೀಡುತ್ತಾರೆ. ಆಟೋದಿಂದ ಕೆಳಗೆ ಇಳಿದವರನ್ನು ಏಣಿಕೆ ಮಾಡಿದ ಪೊಲೀಸರು ದಂಗಾಗುತ್ತಾರೆ. ಏಕೆಂದರೆ ಒಂದೇ ಆಟೋದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 24 ಜನರು ಇದ್ದರು.

    https://twitter.com/copyhead/status/1160813658353459200