Tag: viral audio

  • JDS ಶಾಸಕ ಶಿವಲಿಂಗೇಗೌಡರ ಕಾಂಗ್ರೆಸ್‌ ಸೇರ್ಪಡೆ ಮಾತಿನ ಆಡಿಯೋ ವೈರಲ್!

    JDS ಶಾಸಕ ಶಿವಲಿಂಗೇಗೌಡರ ಕಾಂಗ್ರೆಸ್‌ ಸೇರ್ಪಡೆ ಮಾತಿನ ಆಡಿಯೋ ವೈರಲ್!

    JDS ಶಾಸಕ ಶಿವಲಿಂಗೇಗೌಡರ ಕಾಂಗ್ರೆಸ್‌ ಸೇರ್ಪಡೆ ಮಾತಿನ ಆಡಿಯೋ ವೈರಲ್ ಆಗಿದ್ದು, ಶಿವಲಿಂಗೇಗೌಡರು ತೆನೆ ಇಳಿಸಿ ಕೈ ಹಿಡಿಯೋಕೆ ಸಿದ್ಧರಾದಂತಿದೆ. ಅಲ್ಲದೆ 50 ಸಾವಿರ ಮತಗಳ ಲೀಡ್‌ನಲ್ಲಿ ಗೆಲ್ಲುತ್ತೇನೆ ಎಂದು ಶಿವಲಿಂಗೇಗೌಡರು ಮಾತನಾಡಿದ್ದಾರೆ.

    Live TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೈಷ್ಣವಿ ಜೊತೆಗಿನ ವಿದ್ಯಾಭರಣ್ ಫೋಟೋ ವೈರಲ್ ಬೆನ್ನಲ್ಲೇ ‘ರಹಸ್ಯ’ ನಟಿ ಗಂಭೀರ ಆರೋಪ!

    ವೈಷ್ಣವಿ ಜೊತೆಗಿನ ವಿದ್ಯಾಭರಣ್ ಫೋಟೋ ವೈರಲ್ ಬೆನ್ನಲ್ಲೇ ‘ರಹಸ್ಯ’ ನಟಿ ಗಂಭೀರ ಆರೋಪ!

    ನಟಿ ವೈಷ್ಣವಿ ಗೌಡ (Vaishnavi Gowda)  ಜೊತೆ ನಿಶ್ಚಿತಾರ್ಥ ಆಗಿರೋ ಫೋಟೋ ವೈರಲ್ ಆದ ಬೆನ್ನಲ್ಲೇ ನಟಿಯೊಬ್ಬರ ಆಡಿಯೋ ಸದ್ದು ಮಾಡುತ್ತಿದ್ದು, ವಿದ್ಯಾಭರಣ್ (Vidya Bharan )ಮೇಲೆ ಅನೇಕ ಆರೋಪಗಳನ್ನ ಮಾಡಿದ್ದಾರೆ.

    ಇನ್ ಸ್ಟಾಗ್ರಾಂ ಖಾತೆಯಿಂದ ಅನೇಕ ಹುಡುಗಿಯರೊಂದಿಗೆ ಮೆಸೇಜ್ ಮಾಡಿ ಅನುಚಿತ ವರ್ತನೆ ತೋರಿದ್ದಾನೆ. ಏನೇ ಆಗಲಿ ವೈಷ್ಣವಿಗೆ ಮೋಸ ಆಗಬಾರದು ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಆಡಿಯೋ ಇದೀಗ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ

    ಆಡಿಯೋನಲ್ಲಿ ಏನಿದೆ?: ವ್ಯಕ್ತಿಯೊಬ್ಬರಿಗೆ ಕರೆ ಮಾಡಿರುವ ನಟಿ, ಅವನು ಒಂದೇ ಒಂದು ಡಬ್ಬಾ ಸಿನಿಮಾದಲ್ಲಿ ನಟಿಸಿದ್ದಾನೆ. ಅದು ಒಂದು ವಾರ ಸಹ ಹೆಸರು ಮಾಡಲಿಲ್ಲ. ಅವನ ನಿಜವಾದ ಹೆಸರು ವಿದ್ಯಾಭರಣ್ ಅಂತಾ ಹಳ್ಳಿಯಿಂದ ಬಂದು ಇಲ್ಲೇ ಮನೆ ಕಟ್ಟಿಕೊಂಡಿದ್ದಾನೆ, ಒಂದು ಸಾಯಿಬಾಬಾ ಟೆಂಪಲ್ ಇದೆ. ತನ್ನ ಇನ್ಸ್‌ ಸ್ಟಾಗ್ರಾಮ್ ಖಾತೆಯಿಂದ ಅನೇಕ ಹುಡುಗಿಯರಿಗೆ ಮೆಸೇಜ್ ಮಾಡಿದ್ದಾನೆ. ಈಗ 3-4 ಸಾವಿರ ಫಾಲೋವರ್ಸ್ ಇದ್ದ ಆ ಖಾತೆಯೇ ಇಲ್ಲ. ಹುಡ್ಗಿಯರಿಗೆ ಮೆಸೇಜ್ ಮಾಡ್ತಾ ನಾನು ನಿಮ್ಮನ್ನ ಮದುವೆ ಆಗ್ತಿನಿ, ಡೇಟ್ ಮಾಡೋಣ? ಅಂತಾ ಕರೆದಿದ್ದಾನೆ.

    ಫ್ಯಾಶನ್ ಡಿಸೈನರ್ ಒಬ್ಬರನ್ನ ಮನೆಗೆ ಕರೆದುಕೊಂಡು ಹೋಗಿ ನನ್ನ ಹೆಂಡತಿ ಆಗೋಳು ಅಂತಾ ಪರಿಚಯ ಮಾಡಿಸಿದ್ದಾನೆ. ನಂತರ ಬ್ರೇಕಪ್ ಮಾಡಿಕೊಂಡಿದ್ದಾನೆ. ಹಾಗೆಯೇ ನನಗೂ ಮೆಸೇಜ್ ಮಾಡಿ, ತುಂಬ ಇಷ್ಟ ಆಗಿದ್ದೀರಾ, 150 ಕೋಟಿ ಆಸ್ತಿಯಿದೆ, ಆಡಿ ಕಾರ್‌ ಇದೆ. ಟೆಂಪಲ್ ಇದೆ ಎಂದು ಹೇಳಿಕೊಂಡಿದ್ದ. ಡೇಟ್ ಮಾಡಲು ಕರೆದಿದ್ದ. ನಾನು ಆಗಲ್ಲ ಎಂದು ಹೇಳಿದೆ. ಇದಲ್ಲದೇ ರಾಜಕಾರಣಿಗಳ ಹೆಸರು ಬಳಸಿಕೊಂಡು ಹೆದರಿಸುವ ಕೆಲಸವನ್ನು ಆತ ಮಾಡಿದ್ದಾನೆ ಅನ್ನೋ ಅನೇಕ ಆರೋಪಗಳನ್ನ ಮಾಡಿದ್ದಾರೆ. ಇದನ್ನೂ ಓದಿ:‘ಡವ್ ಮಾಸ್ಟರ್’ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

    ಬಿಗ್ ಬಾಸ್ ನಂತರ ಕಿರುತೆರೆಯಿಂದ ದೂರ ಉಳಿದಿದ್ದ ನಟಿ ಮತ್ತೆ ಹೊಸ ಧಾರಾವಾಹಿ ಮೂಲಕ ವೈಷ್ಣವಿ ಕಂಬ್ಯಾಕ್ ಆಗಿದ್ದಾರೆ. ಈ ಮಧ್ಯೆ ನಟಿಯ ಎಂಗೇಜ್‌ಮೆಂಟ್ ವಿಚಾರ ಎಲ್ಲೆಡೆ ಸದ್ದು ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ವೈಷ್ಣವಿ ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಹುಡುಗನ ಕಡೆಯವರು ಬಂದು ನೋಡಿ, ಮಾತುಕತೆ ಮಾಡಿರೋದು ನಿಜಾ ಆದರೆ ಇದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಿಎಂ ಆಗೋವರೆಗೂ ನಂಗೆ ನಿದ್ದೆ ಬರಲ್ಲ, ಸಿದ್ದರಾಮಯ್ಯ ಒಳ್ಳೆಯರು ಯಡಿಯೂರಪ್ಪ ಭ್ರಷ್ಟ – ರಮೇಶ್‌ ಜಾರಕಿಹೊಳಿ

    ಸಿಎಂ ಆಗೋವರೆಗೂ ನಂಗೆ ನಿದ್ದೆ ಬರಲ್ಲ, ಸಿದ್ದರಾಮಯ್ಯ ಒಳ್ಳೆಯರು ಯಡಿಯೂರಪ್ಪ ಭ್ರಷ್ಟ – ರಮೇಶ್‌ ಜಾರಕಿಹೊಳಿ

    ಬೆಂಗಳೂರು: ರಾಜ್ಯದ ಮಾನ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಹರಾಜಾಗಿದೆ. ಸರ್ಕಾರದ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ದೃಶ್ಯ ಸಮೇತ ಬಹಿರಂಗವಾಗಿದೆ. ರಾಸಲೀಲೆ ಸಂಬಂಧ ಈಗಾಗಲೇ ದೂರು ಕೂಡ ಸಲ್ಲಿಕೆಯಾಗಿದೆ. ಕೆಪಿಟಿಸಿಎಲ್‍ನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ ಸಂತ್ರಸ್ತ ಯುವತಿಯನ್ನು ಕಾಮಕ್ರಿಯೆಗೆ ಬಳಸಿಕೊಂಡಿರುವುದಾಗಿ ದೂರು ದಾಖಲಾಗಿದೆ.

    ರಾಸಲೀಲೆಗೆ ಒಳಗಾದ ಯುವತಿ ಜೊತೆ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿರುವ ಆಡಿಯೋ ಫುಲ್ ವೈರಲ್ ಆಗಿದೆ. ಆಡಿಯೋದಲ್ಲಿ ಯುವತಿ ನೆರವು ಕೇಳುವುದು, ಸಚಿವರು ಭರವಸೆ ನೀಡಿರುವುದು ಬಹಿರಂಗವಾಗಿದೆ.

    ಸಂತ್ರಸ್ತೆ ಜೊತೆ ಸರಸದ ವೇಳೆ ರಮೇಶ್ ಜಾರಕಿಹೊಳಿ ಆಡಿರುವ ಮಾತುಗಳು ರಾಜ್ಯದಲ್ಲಿ ರಾಜಕೀಯದಲ್ಲಿ ಇನ್ನೊಂದು ಮಟ್ಟದ ಸಂಚಲನಕ್ಕೆ ಕಾರಣವಾಗಿವೆ. ಯಡಿಯೂರಪ್ಪ ಸರ್ಕಾರ ರಚನೆಗೆ ಕಾರಣರಾದ ರಮೇಶ್ ಜಾರಕಿಹೊಳಿ ಖುದ್ದು ಯಡಿಯೂರಪ್ಪ ವಿರುದ್ಧವೇ ಮಾತನಾಡಿದ್ದಾರೆ. ಸಿದ್ದರಾಮಯ್ಯ ಒಳ್ಳೆಯವರು, ಯಡಿಯೂರಪ್ಪ ಬಹಳ ಭ್ರಷ್ಟ ಎಂದು ರಮೇಶ್ ಜಾರಕಿಹೊಳಿ ಟೀಕಿಸಿದ್ದಾರೆ.

    ಮುಖ್ಯಮಂತ್ರಿ ಆಗೋವರೆಗೂ ನಂಗೆ ನಿದ್ದೆ ಬರಲ್ಲ ಎಂದು ಕೂಡ ರಮೇಶ್ ಜಾರಕಿಹೊಳಿ ಹೇಳಿಕೊಂಡಿದ್ದಾರೆ. ಆ ವಿಡಿಯೋ ಕೂಡ ಈಗ ವೈರಲ್ ಆಗಿದೆ.

    ಎಫ್‌ಐಆರ್‌ ದಾಖಲಾಗಿಲ್ಲ: ಪ್ರಕರಣ ಸಂಬಂಧ ಸಂತ್ರಸ್ತೆ ಪರವಾಗಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮೊದಲು ಪೊಲೀಸ್ ಆಯುಕ್ತ ಕಮಲ್ ಪಂತ್‍ರನ್ನು ಭೇಟಿಯಾಗಿ ದೂರು ನೀಡಲು ಮುಂದಾದರು. ಕೊನೆಗೆ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ದಿನೇಶ್ ಕಲ್ಲಹಳ್ಳು ಮನವಿ ಮಾಡಿದ್ದಾರೆ.

    ಪೊಲೀಸರು ಇನ್ನೂ ಎಫ್‍ಐಆರ್ ದಾಖಲಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ಅನುಚೇತ್, ಸಂತ್ರಸ್ತೆಯ ಹೇಳಿಕೆ ಪಡೆದ ಮೇಲಷ್ಟೇ ಎಫ್‍ಐಆರ್ ದಾಖಲಿಸುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ, ಸಂತ್ರಸ್ತೆ ಸಂಬಂಧಿಕರ ಜೊತೆ ಪೊಲೀಸರು ದೂರವಾಣಿ ಮೂಲಕ ಮಾತನಾಡಿದ್ದು, ಇದೆಲ್ಲಾ ಸತ್ಯ. ತನಿಖೆಗೆ ಸಹಕರಿಸ್ತೀವಿ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

    ದೂರಿನಲ್ಲಿ ಏನಿದೆ?
    ಬೆಂಗಳೂರಿನ ಆರ್.ಟಿ. ನಗರದ ಪಿಜಿಯಲ್ಲಿ ಯುವತಿ ವಾಸವಾಗಿದ್ದು, ಡ್ರೋಣ್ ಮೂಲಕ ಡ್ಯಾಂ ಚಿತ್ರೀಕರಿಸುವ ಯೋಜನೆಯನ್ನು ಯುವತಿ ಹೊಂದಿದ್ದಳು. ಈ ಸಂಬಂಧ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿಯನ್ನು ಆಕೆ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಕೆಪಿಟಿಸಿಎಲ್‍ನಲ್ಲಿ ಉದ್ಯೋಗ ನೀಡುವ ಆಮಿಷವೊಡ್ಡಿ ಜಾರಕಿಹೊಳಿ ರಾಸಲೀಲೆ ನಡೆಸಿದ್ದಾರೆ. ಕೃತ್ಯದ ಬಳಿಕ ಕೆಲಸ ಕೊಡಿಸದೇ ಸಚಿವ ರಮೇಶ್ ಜಾರಕಿಹೊಳಿ ವಂಚನೆ ಮಾಡಿದ್ದಾರೆ. ಇದೀಗ ಸಂತ್ರಸ್ತ ಯುವತಿಗೆ, ಯುವತಿ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು ಸಂತ್ರಸ್ತೆಗೆ ರಕ್ಷಣೆ ಕಲ್ಪಿಸಿಕೊಡುವಂತೆ ದಿನೇಶ್ ಕಲ್ಲಳ್ಳಿ ದೂರು ನೀಡಿದ್ದಾರೆ.

  • ಮಂಜೇಗೌಡರ ಜೊತೆ ನಾನೇ ಮಾತನಾಡಿದ್ದು ಏನಿವಾಗ? ಹೆಚ್‍ಡಿಕೆ ಏನ್ ನನಗೆ ಮುತ್ತು ಕೊಟ್ಟಿದ್ರಾ – ಸಿಎಂ

    ಮಂಜೇಗೌಡರ ಜೊತೆ ನಾನೇ ಮಾತನಾಡಿದ್ದು ಏನಿವಾಗ? ಹೆಚ್‍ಡಿಕೆ ಏನ್ ನನಗೆ ಮುತ್ತು ಕೊಟ್ಟಿದ್ರಾ – ಸಿಎಂ

    ಮೈಸೂರು: ದೇವೇಗೌಡರ ಮಕ್ಕಳನ್ನು ಗೆಲ್ಲಿಸಿದ್ದು ಸಾಕು, ಈ ಬಾರಿ ನಮ್ಮವರನ್ನು ಗೆಲ್ಲಿಸಿ ಅಂತಾ ಮಂಜೇಗೌಡರ ಜೊತೆ ಮಾತಾಡಿದ್ದು ನಾನೇ. ಅದಕ್ಕೆ ಏನಿವಾಗ? ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ರಶ್ನಿಸಿದ್ದಾರೆ.

    ತಮ್ಮ ಹಾಗೂ ಹಾಸನದ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ ಮಂಜೇಗೌಡ ಜೊತೆ ನಡೆದ ಸಂಭಾಷಣೆ ವೈರಲ್ ಆಗಿರುವ ಕುರಿತ ಪ್ರಶ್ನೆಗೆ ಸಿಎಂ ಹೀಗೆ ಪ್ರತಿಕ್ರಿಯಿಸಿದರು. ಮಂಜೇಗೌಡರ ಜೊತೆ ನಾನೇ ಮಾತನಾಡಿದ್ದು, ಏನಿವಾಗ? ಬಹಿರಂಗವಾಗಿಯೇ ನನ್ನ ಫೋನ್ ರೆರ್ಕಾಡ್ ಆಗಿರಬಹುದು ಏನು ಮಾಡುವುದಕ್ಕೆ ಆಗುತ್ತೆ? ಕುಮಾರಸ್ವಾಮಿ ಏನು ಚಾಮುಂಡೇಶ್ವರಿ ಉಪ ಚುನಾವಣೆ ಸಂದರ್ಭದಲ್ಲಿ ಮೈಸೂರಿಗೆ ಬಂದು ನನಗೆ ಮುತ್ತಿಟ್ಟು ಹೋಗಿದ್ರಾ? ಎಂದು ಸಿಎಂ ಗರಂ ಆಗಿ ಪ್ರಶ್ನಿಸಿದರು.

    ನಾನೊಬ್ಬ ಕಾಂಗ್ರೆಸ್ ಮುಖಂಡ, ನನ್ನ ಪಕ್ಷವನ್ನು ಗೆಲ್ಲಿಸಿ ಅಂತ ತಾನೇ ಹೇಳಬೇಕು. ಅದನ್ನು ಬಿಟ್ಟು ಜೆಡಿಎಸ್ ಗೆಲ್ಲಿಸಿ ಅನ್ನೋಕಾಗುತ್ತಾ? ನಾನು ಜೆಡಿಎಸ್ ಪಕ್ಷವನ್ನ ಸೋಲಿಸಿ ಎಂದದ್ದು ನಿಜ. ನನ್ನ ಯಾವುದೇ ಮಾತುಗಳು ಕದ್ದು ಮುಚ್ಚಿ ಇರುವುದಿಲ್ಲ. ನನ್ನದು ಎಲ್ಲವು ಬಹಿರಂಗ ಹೇಳಿಕೆಗಳು. ನನ್ನ ಫೋನ್ ಕದ್ದಾಲಿಕೆ ಆಗಿಲ್ಲ. ಯಾರು ಬೇಕಾದ್ರು ನನ್ನ ಫೋನ್ ಕದ್ದಾಲಿಕೆ ಮಾಡಲಿ. ನಾನು ಎಲ್ಲರ ಜೊತೆಯಲ್ಲೂ ಬಹಿರಂಗವಾಗಿಯೇ ಮಾತನಾಡುತ್ತೇನೆ. ಬೇಕಿದ್ರೆ ನೀವು ನನ್ನ ಫೋನ್ ಕದ್ದಾಲಿಕೆ ಮಾಡಿಕೊಳ್ಳಿ ಎಂದು ಮಾಧ್ಯಮದವರಿಗೂ ಬಹಿರಂಗವಾಗಿಯೇ ಕದ್ದಾಲಿಸಿಕೊಳ್ಳಿ ಎಂದರು.

    ರಾಹುಲ್ ಗಾಂಧಿ ರಾಜ್ಯ ಪ್ರವಾಸದ ಬಗ್ಗೆ ಮಾತನಾಡಿದ ಸಿಎಂ, ನಾವು ಉಡುಪಿಗೆ ಹೋಗಿಲ್ಲ. ಅದರಲ್ಲಿ ಕೃಷ್ಣ ಮಠಕ್ಕೆ ಹೋಗುವ ಪ್ರಶ್ನೆ ಎಲ್ಲಿಂದ ಬಂತು? ಇದೆಲ್ಲ ಸಾರ್ವಜನಿಕವಾಗಿ ಚರ್ಚೆಯಾಗುವ ವಿಚಾರವೇ? ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿ ಅವರು ಎಲ್ಲಿಗೆ ಹೋಗಬೇಕು, ಏನು ಮಾಡಬೇಕೆಂಬುದನ್ನು ಅವರೇ ನಿರ್ಧರಿಸುತ್ತಾರೆ. ನಮ್ಮನ್ನು ಕೇಳಿ ಪ್ರವಾಸ ಪಟ್ಟಿ ಸಿದ್ಧಪಡಿಸಲ್ಲ. ರಾಹುಲ್ ಗಾಂಧಿ ಅವರು ಒಮ್ಮೆಯೂ ಶೃಂಗೇರಿ ಮಠಕ್ಕೆ ಹೋಗಿರಲಿಲ್ಲ. ಅಜ್ಜಿ, ತಂದೆ, ತಾಯಿ ಎಲ್ಲರೂ ಮಠಕ್ಕೆ ಹೋಗಿದ್ದರು. ಹೀಗಾಗಿ ನಿನ್ನೆ ಮಠಕ್ಕೆ ಹೋಗಿದ್ದೆವು. ಇದರಲ್ಲಿ ಚರ್ಚೆ ಮಾಡುವ ವಿಷಯ ಏನಿದೆ. ರಾಹುಲ್ ಗಾಂಧಿ ಮೈಸೂರಿಗೆ ಬಂದಾಗ ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ. ಅದನ್ನು ಬಿಟ್ಟು ಇನ್ನುಳಿದ ವಿಚಾರ ನನಗೆ ಗೊತ್ತಿಲ್ಲ ಎಂದರು.

    ಸಚಿವ ಮಹದೇವಪ್ಪ ಕ್ಷೇತ್ರ ಬದಲಾವಣೆ ವಿಚಾರದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಮಹದೇವಪ್ಪ ಹಿರಿಯ ರಾಜಕಾರಣಿ. ಅವರಿಗೆ ಏನು ಮಾಡಬೇಕು, ಏನು ಮಾಡಬಾರದು ಅಂತ ಗೊತ್ತಿದೆ. ಅವರು ಎಲ್ಲಿ ಸ್ಪರ್ಧೆ ಮಾಡಬೇಕು ಅಂತ ಹೈಕಮಾಂಡ್ ತಿರ್ಮಾನ ಮಾಡುತ್ತದೆ. ನಾನು ಅವರಿಗಿಂತ ಎರಡು ವರ್ಷ ಸಿನಿಯರ್ ಅಷ್ಟೇ. ನನಗೆ ಎಲ್ಲರು ಆಪ್ತರೇ. ಸ್ಪರ್ಧೆ ವಿಚಾರದಲ್ಲಿ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದರು.

    ಹೆಚ್‍ಡಿಕೆ ಎಷ್ಟು ಕಡೆ ಬೇಕಾದ್ರೂ ಸ್ಪರ್ಧಿಸಲಿ: ಎಚ್.ಡಿ ಕುಮಾರಸ್ವಾಮಿ ಎರಡು ಕಡೆ ಸ್ಪರ್ಧೆ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಸಿಎಂ, ಕುಮಾರಸ್ವಾಮಿ ಎಷ್ಟು ಕಡೆ ಬೇಕಾದರೂ ನಿಲ್ಲಲಿ. ಅದು ಕುಮಾರಸ್ವಾಮಿಗೆ ಬಿಟ್ಟ ವಿಚಾರ. ಆದ್ರೆ ನಾವಂತು ಜೆಡಿಎಸ್, ಬಿಜೆಪಿಯನ್ನು ಸೋಲಿಸಿ ಮತ್ತೆ ಜನರ ಆರ್ಶಿವಾದ ಪಡೆಯಬೇಕಿದೆ. ಕರ್ನಾಟಕದ ಜನರು ಅತ್ಯಂತ ತಿಳುವಳಿಕೆ ಇರುವವರು. ಹೀಗಾಗಿ ಕಾಂಗ್ರೆಸ್ ಗೆ ಮತ್ತೆ ಆರ್ಶಿವಾದ ಮಾಡ್ತಾರೆ ಅಂತ ವಿಶ್ವಾಸ ಇದೆ ಎಂದು ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.

    ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಹಿನ್ನೆಲೆಯಲ್ಲಿ ಧರ್ಮಗಳ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಹಕ್ಕು ಸರ್ಕಾರಕ್ಕಿಲ್ಲ ಎಂಬ ಸಂತೋಷ್ ಹೆಗ್ಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಅಲ್ಪಸಂಖ್ಯಾತ ಕಾಯ್ದೆಯಲ್ಲಿ ಧರ್ಮಗಳ ರಚನೆ ಸಂಬಂಧ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಇದರ ಅಡಿ ನಾವು ಕೆಲಸ ಮಾಡಿದ್ದೇವೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಎಜಿ ಅವರಿಂದ ಸಲಹೆ ಪಡೆದುಕೊಂಡಿದ್ದೇವೆ. ಅವುಗಳ ಆಧಾರದ ಮೇಲೆಯೇ ನಾವು ಶಿಫಾರಸ್ಸು ಮಾಡಿದ್ದೇವೆ. ಸಂವಿಧಾನದಲ್ಲೇ ಅದಕ್ಕೆ ಅಧಿಕಾರ ಇದೆ ಎಂದರು.

    ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರ ಪುಸ್ತಕ ವಿಚಾರದ ಬಗ್ಗೆ ಮಾತನಾಡಿ, ಸೋತ ಮೇಲೆ ಏನು ಬೇಕಾದರೂ ಹೇಳಬಹುದು. ನಾವು ಅಕ್ರಮ ಮಾಡಿದ್ದ ದಾಖಲೆ ಅವರ ಬಳಿ ಇದ್ದರೆ ಕೋರ್ಟ್ ಗೆ ಹೋಗಲಿ. ಪುಸ್ತಕ ಬರೆದು ಸಾರ್ವಜನಿಕರಿಗೆ ಸುಳ್ಳು ಹೇಳುವುದರಿಂದ ಯಾವುದೇ ಪ್ರಯೋಜನ ಇಲ್ಲ. ಉಪಚುನಾವಣೆ ಸಂದರ್ಭದಲ್ಲೇ ನಮ್ಮ ವಿರುದ್ಧ ದಿನವೂ ಕೇಸ್ ಕೊಡುತ್ತಿದ್ದರು. ಜನ ಓಟು ಹಾಕಿದ್ದೂ ಆಯ್ತು. ನಾವು ಗೆದ್ದಿದ್ದೂ ಆಯ್ತು. ಅವರು ಏನು ಬೇಕಾದರೂ ಬರೆದುಕೊಳ್ಳಲಿ. ಈಗ ನಾನು ಏನೂ ಮಾತನಾಡುವುದಿಲ್ಲ ಎಂದರು.