Tag: Vinay Guruji

  • ವಿನಯ್ ಗುರೂಜಿಯನ್ನು ಭೇಟಿಯಾಗಲು ಹಂಬಲಿಸುತ್ತಿದ್ದಾರೆ ದೇಶದ ಪ್ರಭಾವಿ ಗಣ್ಯರು!

    ವಿನಯ್ ಗುರೂಜಿಯನ್ನು ಭೇಟಿಯಾಗಲು ಹಂಬಲಿಸುತ್ತಿದ್ದಾರೆ ದೇಶದ ಪ್ರಭಾವಿ ಗಣ್ಯರು!

    ಬೆಂಗಳೂರು: ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ಹೇಳಿದ್ದ ಅವಧೂತ ವಿನಯ್ ಗುರೂಜಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ.

    ಸ್ಪೀಕರ್ ರಮೇಶ್ ಕುಮಾರ್ ಕೈಯಿಂದ ಪಾದಪೂಜೆ ಮಾಡಿಸಿಕೊಂಡ ವಿನಯ್ ಗುರೂಜಿ ಭವಿಷ್ಯವಾಣಿ ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದ್ಯಾಂತ ಸ್ವಾಮೀಜಿಯ ಭವಿಷ್ಯವಾಣಿ ಸಂಚಲನ ಮೂಡಿಸಿದೆ.

    ಗುರೂಜಿ ಭೇಟಿಗಾಗಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕೂಡ ಹಂಬಲಿಸುತ್ತಿದ್ದಾರೆ. ಮುಂದಿನ ಲೋಕಸಭಾ ಎಲೆಕ್ಷನ್ ಕುರಿತಾಗಿ ಗುರೂಜಿಯ ಭೇಟಿಗಾಗಿ ಚಂದ್ರಬಾಬು ನಾಯ್ಡು ಎಷ್ಟೇ ಪ್ರಯತ್ನ ಪಟ್ಟರೂ ಸ್ವಾಮೀಜಿ ಸಿಗುತ್ತಿಲ್ಲ.

    ಇನ್ನು ಕೇಂದ್ರದ ಕೆಲ ನಾಯಕರು ಕೂಡ ಸ್ವಾಮೀಜಿ ಭೇಟಿಗಾಗಿ ಕರೆಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ದೇವೇಗೌಡರ ಮುಖಾಂತರ ಸ್ವಾಮೀಜಿ ಭೇಟಿಗೆ ಎಡೆತಾಕಿದ್ದಾರಂತೆ. ಆದರೆ ಈ ಮುಖಂಡರ ಕರೆಯಿಂದ ಕಿರಿಕಿರಿಯಾಗಿ ವಿನಯ್ ಗುರೂಜಿ ಆರು ತಿಂಗಳು ಮೌನ ವೃತಕ್ಕೆ ನಿರ್ಧಾರ ಮಾಡಿದ್ದಾರೆ ಅಂತಾ ಅವರ ಆಪ್ತವಲಯದ ಮಾತುಗಳು ಕೇಳಿ ಬರುತ್ತಿದೆ.

    ಆರು ತಿಂಗಳು ಯಾರ ಕೈಗೂ ಸಿಗದೆ ಮಠದ ಗುಹೆಯೊಳಗೆ ವೃತದಲ್ಲಿ ತೊಡಗಿಕೊಂಡು ಅಜ್ಞಾತವಾಸಿಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಕೊಪ್ಪ ತಾಲೂಕಿನ ಗೌರಿಗದ್ದೆಯ ಸ್ವರ್ಣ ಪೀಠಿಕಾಪುರ ದತ್ತಾಶ್ರಮದ ಅವಧೂತ 27 ವಯಸ್ಸಿನ ವಿನಯ್ ಗುರೂಜಿ ಕಳೆದ ಎಂಟು ವರ್ಷದಿಂದ ಪ್ರತಿ ಗುರುವಾರ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಗುರೂಜಿ ಇದೀಗ ಮೌನ ವ್ರತಕ್ಕೆ ಮುಂದಾಗಿದ್ದಾರೆ.

  • ಎಚ್‍ಡಿಡಿ ಪಾದಪೂಜೆ ಮಾಡಿದ್ದ ವಿನಯ್ ಗುರೂಜಿ 6 ತಿಂಗ್ಳು ಭಕ್ತರಿಗೆ ದರ್ಶನ ನೀಡಲ್ಲ!

    ಎಚ್‍ಡಿಡಿ ಪಾದಪೂಜೆ ಮಾಡಿದ್ದ ವಿನಯ್ ಗುರೂಜಿ 6 ತಿಂಗ್ಳು ಭಕ್ತರಿಗೆ ದರ್ಶನ ನೀಡಲ್ಲ!

    ಚಿಕ್ಕಮಗಳೂರು: ನಡೆದಾಡುವ ದೇವರೆಂದೇ ಎಂದೇ ಖ್ಯಾತಿಯಾಗಿರೋ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆಯ ಸ್ವರ್ಣ ಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಇನ್ನು ಆರು ತಿಂಗಳು ಭಕ್ತರಿಗೆ ದರ್ಶನ ನೀಡುವುದಿಲ್ಲ.

    ಕಳೆದ ಎಂಟು ವರ್ಷದಿಂದ ಪ್ರತಿ ಗುರುವಾರ ಭಕ್ತರಿಗೆ ದರ್ಶನ ನೀಡ್ತಿದ್ದ ಗುರೂಜಿ ಇದೀಗ, ಮೌನ ವ್ರತಕ್ಕೆ ಮುಂದಾಗಿದ್ದಾರೆ. ಆರು ತಿಂಗಳು ಗೌಪ್ಯ ಸ್ಥಳದಲ್ಲಿ ಮೌನ ವ್ರತ ನಡೆಸಲಿದ್ದು, ಎಲ್ಲಿರುತ್ತಾರೆಂಬ ಮಾಹಿತಿ ಆಶ್ರಮದ ಸಿಬ್ಬಂದಿಗೂ ತಿಳಿದಿಲ್ಲ. ಇದನ್ನೂ ಓದಿ: ಎಚ್‍ಡಿಕೆ ಸಿಎಂ ಆಗ್ತಾರೆ ಅಂತ 2 ವರ್ಷದ ಹಿಂದೆಯೇ ಭವಿಷ್ಯ – ಗುರೂಜಿಗೆ ದೇವೇಗೌಡ್ರು, ಸ್ಪೀಕರ್ ಪಾದಪೂಜೆ

    ಇತ್ತೀಚೆಗೆ ರಾಜಕಾರಣಿಗಳ ಭೇಟಿಯಿಂದ ಗುರೂಜಿ ಸಾಕಷ್ಟು ಸುದ್ದಿಯಾಗಿದ್ದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಗುರೂಜಿಯ ಪಾದಪೂಜೆ ನಡೆಸಿದ್ರೆ, ಸ್ಪೀಕರ್ ರಮೇಶ್ ಕುಮಾರ್ ಗುರೂಜಿಗೆ ಆರತಿ ಬೆಳಗಿದ್ರು. ಇದೆಲ್ಲಾ ಮಾಧ್ಯಮದಲ್ಲಿ ಸುದ್ದಿಯಾದ ಮೇಲೆ ಬರುವ ಭಕ್ತರ ಸಂಖ್ಯೆ ಕೂಡ ಡಬಲ್ ಆಗಿತ್ತು.

    ಪ್ರಚಾರ ಬೇಡವೆಂದರೂ ಸಾಕಷ್ಟು ಪ್ರಚಾರ ಸಿಕ್ಕಿದ್ರಿಂದ ಮೌನ ವ್ರತಕ್ಕೆ ಮುಂದಾಗಿದ್ದಾರೆ. ಹೀಗಾಗಿ ಸದ್ಯ ಗುರೂಜಿಯನ್ನ ಕಾಣಲು ಬರುತ್ತಿರುವ ಭಕ್ತರು ಬೇಸರದಿಂದ ವಾಪಸ್ ಹೋಗ್ತಿದ್ದಾರೆ.

  • ಎಚ್‍ಡಿಕೆ ಸಿಎಂ ಆಗ್ತಾರೆ ಅಂತ 2 ವರ್ಷದ ಹಿಂದೆಯೇ ಭವಿಷ್ಯ – ಗುರೂಜಿಗೆ ದೇವೇಗೌಡ್ರು, ಸ್ಪೀಕರ್ ಪಾದಪೂಜೆ

    ಎಚ್‍ಡಿಕೆ ಸಿಎಂ ಆಗ್ತಾರೆ ಅಂತ 2 ವರ್ಷದ ಹಿಂದೆಯೇ ಭವಿಷ್ಯ – ಗುರೂಜಿಗೆ ದೇವೇಗೌಡ್ರು, ಸ್ಪೀಕರ್ ಪಾದಪೂಜೆ

    ಬೆಂಗಳೂರು: ಎಚ್‍.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಎರಡು ವರ್ಷಗಳು ಹಿಂದೆಯೇ ಬಾಲ ಗುರುಜಿ ವಿನಯ್ ಸ್ವಾಮೀಜಿ ಹೇಳಿದ್ದರಂತೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಅಧಿಕಾರಿ ಎಚ್.ಡಿ. ದೇವೇಗೌಡ ಪೂಜೆ ಮಾಡಿದ್ದಾರೆ.

    ವಿನಯ್ ಗುರೂಜಿ ದತ್ತಾತ್ರೆಯ ಅವಧೂತ ಸ್ವರೂಪ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಎಚ್‍ಡಿಕೆ ಸಿಎಂ ಆದ ಬಳಿಕ ದೇವೇಗೌಡ ದಂಪತಿ ತಮ್ಮ ನಿವಾಸಕ್ಕೆ ಗುರೂಜಿಯನ್ನು ಕರೆಸಿದ್ದರು. ನಂತರ ದೇವೇಗೌಡ ದಂಪತಿ ಮನೆಯಲ್ಲಿ ಬಾಲ ಗುರೂಜಿಗೆ ಪಾದಪೂಜೆ ಮಾಡಿದ್ದಾರೆ. ಈ ಗುರೂಜಿ ಹಲವು ರಾಜಕೀಯ ನಾಯಕರಿಗೆ ರಾಜಕೀಯ ಭವಿಷ್ಯ ಹೇಳಿದ್ದರು. 2 ವರ್ಷದ ಹಿಂದೆಯೇ ಎಚ್‍ಡಿಕೆಗೆ ನೀವು ಸಿಎಂ ಆಗುತ್ತೀರಿ ಎಂದು ಹೇಳಿ ಹಸಿರು ಶಲ್ಯೆ ನೀಡಿ ಮನೆಯಲ್ಲಿ ಪೂಜೆ ಮಾಡುವುದಕ್ಕೆ ಹೇಳಿದ್ದರಂತೆ. ಆದ್ದರಿಂದ ಅವರು ಹೇಳಿದ ಹಾಗೇ ಕುಮಾರಸ್ವಾಮಿ ಸಿಎಂ ಆಗಿದ್ದು, ಈಗ ಅವರಿಗೆ ದೇವೇಗೌಡರು ಪಾದಪೂಜೆ ನೆರವೇರಿಸಿದ್ದಾರೆ.

    ಸ್ಪೀಕರ್ ರಮೇಶ್ ಕುಮಾರ್ ಗೂ ನೀವು ಸತತ 2ನೇ ಬಾರಿಗೆ ಎಂಎಲ್‍ಎ ಆಗುತ್ತೀರಿ ಎಂದು ಬಾಲ ಗುರೂಜಿ ಹೇಳಿದ್ದರಂತೆ. ಈಗ ಅವರು ಕೂಡ ಪಾದಪೂಜೆ ಮಾಡಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್, ವಿನಯ್ ಗುರೂಜಿಗೆ ಪೂಜೆ ಮಾಡಿರುವ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ.

    ಇತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಯಲ್ಲಿ ಚಂಡಿಕಾ ಪಾರಾಯಣ ನಡೆದಿದೆ. ಶುಕ್ರವಾರವಾಗಿರುವ ಇಂದು ಬೆಂಗಳೂರಿನ ಜೆಪಿ ನಗರದಲ್ಲಿರುವ ಮನೆಯಲ್ಲಿ ಪೂಜೆ ಪುನಸ್ಕಾರ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಆದ ಬಳಿಕ ವಾರಕ್ಕೊಂದು ಸಲ ಪೂಜೆ ನಡೆಯುತ್ತಿರುವುದು ವಿಶೇಷವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮಗಳಲ್ಲಿ ಕುಮಾರಸ್ವಾಮಿ ಪಾಲ್ಗೊಳ್ಳುತ್ತಿಲ್ಲ. ಆದರೆ ಜೆಪಿ ನಗರದ ನಿವಾಸದಲ್ಲಿ ಜನತಾ ದರ್ಶನ ಕೈಗೊಂಡು ಅಹವಾಲು ಸ್ವೀಕರಿಸಿದ್ದಾರೆ.