Tag: villegers

  • ಹಾಸನಕ್ಕೆ ಆಗಮಿಸಿದ ಪಬ್ಲಿಕ್ ರಥಕ್ಕೆ ಜಿಲ್ಲೆಯಾದ್ಯಂತ ಭರ್ಜರಿ ಸ್ವಾಗತ

    ಹಾಸನಕ್ಕೆ ಆಗಮಿಸಿದ ಪಬ್ಲಿಕ್ ರಥಕ್ಕೆ ಜಿಲ್ಲೆಯಾದ್ಯಂತ ಭರ್ಜರಿ ಸ್ವಾಗತ

    ಹಾಸನ: ದಶಕದ ಸಂಭ್ರಮದಲ್ಲಿರುವ ಪಬ್ಲಿಕ್ ಟಿವಿಯ ಸಾಧನೆಯ ಸಂದೇಶ ಸಾರುತ್ತಿರುವ ಪಬ್ಲಿಕ್ ರಥ ಇಂದು ಎರಡನೇ ದಿನ ಹಾಸನ ಜಿಲ್ಲೆಯ ಹಲವೆಡೆ ಸಂಚಾರ ನಡೆಸಿದೆ. ಹಾಸನಕ್ಕೆ ಆಗಮಿಸಿದ ಪಬ್ಲಿಕ್ ರಥಕ್ಕೆ ಜಿಲ್ಲೆಯ ಜನ ಪ್ರೀತಿಯಿಂದ ಸ್ವಾಗತ ಕೋರಿದ್ದಾರೆ.

    ಹನುಂಮತಪುರ ಗ್ರಾಮದ ಪಂಚಮುಖಿ ದೇವಾಲಯದ ಬಳಿ, ಪಬ್ಲಿಕ್ ರಥಕ್ಕೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರೇ ಸಿಹಿ ಹಂಚಿ ಪಬ್ಲಿಕ್ ಟಿವಿಯ ದಶಮಾನೋತ್ಸವನ್ನು ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಗ್ರಾಮಸ್ಥರು, ಪಬ್ಲಿಕ್ ಟಿವಿಯು ದಶಕಗಳಿಂದ ಕನ್ನಡ ನಾಡಿನ ಜನರ ಮನೆಮಾತಾಗಿದೆ ಎಂದರು. ಇದನ್ನೂ ಓದಿ: ಮುಸ್ಲಿಂ ಗೂಂಡಾಗಳಿಂದ ಕೊಲೆ – ಈಶ್ವರಪ್ಪ ಹೇಳಿಕೆಗೆ ಸತೀಶ್ ಜಾರಕಿಹೊಳಿ ಕಿಡಿ

    ಜನರ ಕಷ್ಟಕ್ಕೆ ಸ್ಪಂದಿಸಿ ನ್ಯಾಯಕೊಡಿಸುವ ಕೆಲಸ ಮಾಡುತ್ತಿದೆ ಅಂತ ಶುಭ ಹಾರೈಸಿದರು. ಹನುಂಮತಪುರದಿಂದ ಪಬ್ಲಿಕ್ ರಥ ನೇರವಾಗಿ ಬೇಲೂರಿಗೆ ಆಗಮಿಸಿತು. ಬೇಲೂರಿನಲ್ಲಿ ಪಬ್ಲಿಕ್ ರಥವನ್ನು ಸ್ವಾಗತಿಸಿದ ಕರವೇ ಕಾರ್ಯಕರ್ತರು, ಸಿಹಿ ಹಂಚಿ ಸಂಭ್ರಮಿಸಿದರು. ಪಬ್ಲಿಕ್ ಟಿವಿಗೆ ಜೈಕಾರ ಹಾಕಿ, ನೂರಾರು ವರ್ಷ ಪಬ್ಲಿಕ್ ಟಿವಿ ಜನತೆಯ ಧ್ವನಿಯಾಗಿ ನಿಲ್ಲಲಿ ಎಂದು ಶುಭ ಹಾರೈಸಿದರು.

  • ಅಪಘಾತಕ್ಕೀಡಾಗಿ ವ್ಯಕ್ತಿಗೆ ಗಾಯ- ಸಹಾಯ ಮಾಡಲು ಮುಂದಾದ ಸಚಿವರಿಗೆ ಗ್ರಾಮಸ್ಥರಿಂದ ತರಾಟೆ

    ಅಪಘಾತಕ್ಕೀಡಾಗಿ ವ್ಯಕ್ತಿಗೆ ಗಾಯ- ಸಹಾಯ ಮಾಡಲು ಮುಂದಾದ ಸಚಿವರಿಗೆ ಗ್ರಾಮಸ್ಥರಿಂದ ತರಾಟೆ

    ಮೈಸೂರು: ಅಪಘಾತಕ್ಕೆ ಒಳಗಾಗಿ ರಸ್ತೆಯಲ್ಲಿ ಬಿದ್ದು ಜೀವನ್ಮರಣ ನಡೆಸುತ್ತಿದ್ದ ವ್ಯಕ್ತಿಗೆ ಸಹಾಯ ಮಾಡಲು ಮುಂದಾದ ಸಚಿವರನ್ನು ಜನರು ತರಾಟೆ ತೆಗೆದುಕೊಂಡು ಗಾಯಾಳುವಿಗೆ ಸಹಾಯ ಮಾಡಬೇಡಿ ಎಂದು ಅವರಿಗೆ ಏಕವಚನದಲ್ಲಿ ನಿಂದಿಸಿರುವ ಘಟನೆ ಮೈಸೂರಿನಲ್ಲಿ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

    ಸಚಿವ ಕೃಷ್ಣೇಭೈರೆಗೌಡರು ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯ ಸಹಾಯಕ್ಕೆ ಮುಂದಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದವನನ್ನು ಆಸ್ಪತ್ರೆಗೆ ಸೇರಿಸಲು ಯತ್ನಿಸಿದರು. ಆದರೆ ಕೃಷ್ಣೇಭೈರೆಗೌಡರನ್ನು ತಡೆದ ಜನರು ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಬೇಡಿ ಎಂದು ಅವಾಜ್ ಹಾಕಿದ್ದಾರೆ.

    ಮೈಸೂರಿನ ಹೆಚ್.ಡಿ ಕೋಟೆಯ ಮಳಲಿ ಗ್ರಾಮದ ಬಳಿ ಎರಡು ಬೈಕ್‍ಗಳ ಅಪಘಾತವಾಗಿ ಮಳಲಿ ಗ್ರಾಮದ ಪುಟ್ಟಸ್ವಾಮಿ ಮೃತಪಟ್ಟಿದ್ದರು. ಮತ್ತೋರ್ವ ಬೈಕ್ ಸವಾರ ದಿವಾಕರ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಜಂಗಲ್ ಲಾಡ್ಜ್ ರೆಸಾರ್ಟ್‍ನಲ್ಲಿ ಕಾರ್ಯಗಾರ ಮುಗಿಸಿ ವಾಪಸ್ಸಾಗುತ್ತಿದ್ದ ಸಚಿವರು ಘಟನೆ ಮಾಹಿತಿ ಪಡೆದು ಕಾರಿನಿಂದ ಇಳಿದು ದಿವಾಕರ್ ನನ್ನು ಆಸ್ಪತ್ರೆಗೆ ಸೇರಿಸಲು ಮುಂದಾದಾಗ ಕೃಷ್ಣೇಭೈರೆಗೌಡರಿಗೆ ಗ್ರಾಮಸ್ಥರೆಲ್ಲ ಅಡ್ಡಿಪಡಿಸಿದರು.

    ಯಾಕ್ರಯ್ಯ ಅವನನ್ನ ಬದುಕಿಸೋಕೆ ಬಿಡಿ ಎಂದು ಸಚಿವರು ಹೇಳಿದ್ರೂ ಜನರು ಬಿಡಲಿಲ್ಲ. ದಿವಾಕರ್ ಈ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾನೆ. ಅವನಿಗೆ ಈಗ ಸಹಾಯ ಮಾಡಬೇಡಿ ಎಂದು ಸ್ಥಳೀಯರು ಸಚಿವರಿಗೆ ಹೇಳಿದರು. ಈ ವೇಳೆ ಸಚಿವರ ಆಪ್ತ ಕಾರ್ಯದರ್ಶಿ ಸಚಿವರಿಗೆ ಹೋಗೋಣ ಬನ್ನಿ ಇಲ್ಲಿಂದ ಎಂದ ಹೇಳಿದರು. ಆಗ ಆಪ್ತ ಕಾರ್ಯದರ್ಶಿಯನ್ನು ಸಚಿವರು ಬೈದು ಕಳುಹಿಸಿದರು.

    ಕೊನೆಗೆ ಪೊಲೀಸರ ಸಹಾಯದಿಂದ ದಿವಾಕರ್ ನನ್ನು ಸಚಿವರು ಆಸ್ಪತ್ರೆಗೆ ರವಾನಿಸಿ ಬೈಕ್ ಸವಾರನನ್ನು ಬದುಕಿಸಿ ಮಾನವೀಯತೆ ಮೆರೆದಿದ್ದಾರೆ.

    https://www.youtube.com/watch?v=_Xc9m3FKWE4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೀದಿ ನಾಯಿಗಳಿಗೆ ಹೆದರಿ ದಿನವಿಡೀ ದೊಣ್ಣೆ ಹಿಡಿದು ಓಡಾಡ್ತಿದ್ದಾರೆ ಕೊಟ್ನೇಕಲ್ ಗ್ರಾಮಸ್ಥರು..!

    ಬೀದಿ ನಾಯಿಗಳಿಗೆ ಹೆದರಿ ದಿನವಿಡೀ ದೊಣ್ಣೆ ಹಿಡಿದು ಓಡಾಡ್ತಿದ್ದಾರೆ ಕೊಟ್ನೇಕಲ್ ಗ್ರಾಮಸ್ಥರು..!

    ಕೊಪ್ಪಳ: ದಂಡಿಗೆ ಹೆದರಲಿಲ್ಲ ದಾಳಿಗೆ ಹೆದರಲಿಲ್ಲ ಆದ್ರೆ ಬೀದಿ ನಾಯಿ ಒಂದಕ್ಕೆ ಹೆದರಿ ದಿನವಿಡೀ ದೊಣ್ಣೆ ಹಿಡಿದು ಓಡಾಡುವಂತಾಗಿದೆ ಈ ಗ್ರಾಮಸ್ಥರ ಪರಿಸ್ಥಿತಿ.

    ಹೌದು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊಟ್ನೇಕಲ್ ಗ್ರಾಮದಲ್ಲಿ ಇಂತಹದೊಂದು ಘಟನೆ ನೆಡದಿದೆ. ಈ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳಿಗೆ ಹೆದರಿ ಜನರು ದೊಣ್ಣೆಯ ಆಸರೆಯನ್ನು ಪಡೆದಿದ್ದಾರೆ. ಕೇವಲ ಬೀದಿ ನಾಯಿಗಳಿಂದ ಕೊಟ್ನೇಕಲ್ ಗ್ರಾಮದ ಇಡೀ ಚಿತ್ರಣವೇ ಬದಲಾಗಿದೆ. ಇಲ್ಲಿನ ಜನರು ಮನೆಯಿಂದ ಹೊರಹೋಗಬೇಕೆಂದರೆ ಒಬ್ಬರೆ ಹೋಗಲ್ಲ ಜೊತೆಗೆ ದೊಣ್ಣೆ ಅಥವಾ ಕೋಲನ್ನು ತಮ್ಮೊಡನೆ ಕೊಂಡೊಯ್ಯುತ್ತಾರೆ. ಬೀದಿ ನಾಯಿಗಳ ಹಾವಳಿಗೆ ಬೇಸತ್ತಿರುವ ಇಲ್ಲಿನ ಗ್ರಾಮಸ್ಥರು ನಾಯಿಗಳಿಂದ ರಕ್ಷಣೆಗಾಗಿ ದೊಣ್ಣೆ ಹಿಡಿದು ಓಡಾಡುತ್ತಿದ್ದಾರೆ.

    ಕಳೆದ 2 ತಿಂಗಳಲ್ಲಿ ಬರೋಬ್ಬರಿ 60 ರಿಂದ 70 ಮಂದಿಗೆ ಬೀದಿ ನಾಯಿಗಳು ಕಚ್ಚಿವೆ. ನಾಯಿಗಳ ಹಾವಳಿಯಿಂದ ಇಡೀ ಗ್ರಾಮಕ್ಕೆ ಗ್ರಾಮವೇ ಸ್ತಬ್ಧವಾಗಿದೆ. ಜನರು ಮನೆಯ ಹೊರಗೆ ಬರೋದಕ್ಕೆ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಶೌಚಾಲಯಕ್ಕೆ ಹೋಗಬೇಕು ಅಂದರೂ ಕೈಯಲ್ಲಿ ಕೋಲು ಹಿಡ್ಕೊಂಡು ಹೊರಗಡೆ ಹೋಗುವಂತಾಗಿದೆ. ನಾಯಿ ಯಾವಾಗ ಬರುತ್ತೋ ಎಲ್ಲಿ ನಮ್ಮನ್ನು ಕಚ್ಚುತ್ತೋ ಅನ್ನುವ ಭಯದ ವಾತಾವರಣ ಎಲ್ಲೆಡೆ ಸೃಷ್ಟಿಯಾಗಿದೆ. ಹೆಚ್ಚಾಗಿರುವ ನಾಯಿ ಹಾವಳಿಯಿಂದ ಈ ಗ್ರಾಮದಲ್ಲಿ ಹೊಲ ಗದ್ದೆಗಳಿಗೆ ಕೆಲಸಕ್ಕೆ ಹೋಗುವವರ ಸಂಖ್ಯೆಯು ಕಡಿಮೆಯಾಗಿದ್ಯಂತೆ.

    ಇಷ್ಟೆಲ್ಲ ಆದರೂ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿರುವ ನಾಯಿಯ ಸಲುವಾಗಿ ಗ್ರಾಮಸ್ಥರು ಭಯಬೀತರಾಗಿದ್ದಾರೆ. ಗ್ರಾಮ ಪಂಚಾಯ್ತಿಗೆ ಬೀದಿ ನಾಯಿಗಳ ಕುರಿತು ಕ್ರಮ ತೆಗೆದುಕೊಳ್ಳಿ ಎಂದು ಅಲ್ಲಿನ ಜನರು ದೂರು ನೀಡಿದ್ದರು. ಇದೀಗ ಈ ವಿಚಾರವನ್ನು ಗ್ರಾಮ ಪಂಚಾಯ್ತಿ ಸದಸ್ಯರು ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದು, ಇನ್ನೆರೆಡು ದಿನದಲ್ಲಿ ನಾಯಿಯನ್ನು ಹಿಡಿಯುತ್ತೇವೆ ಎಂದು ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv