Tag: villagers

  • ಜೀವ ಕೈಯಲ್ಲಿ ಹಿಡಿದು ಶಾಲೆಗೆ ಪಯಣ – ಊರಿಗೆ ಹೋಗಲು ಗ್ರಾಮಸ್ಥರ ಹಗ್ಗಜಗ್ಗಾಟ!

    ಜೀವ ಕೈಯಲ್ಲಿ ಹಿಡಿದು ಶಾಲೆಗೆ ಪಯಣ – ಊರಿಗೆ ಹೋಗಲು ಗ್ರಾಮಸ್ಥರ ಹಗ್ಗಜಗ್ಗಾಟ!

    ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಳಗಿ ಗ್ರಾಮಸ್ಥರು ಗ್ರಾಮದಿಂದ ಬೇರೆಡೆಗೆ ಹೋಗಲು ಜೀವ ಕೈಯಲ್ಲಿ ಹಿಡ್ಕೊಂಡು ಓಡಾಡ್ತಿದ್ದಾರೆ. ಯಾಕಂದ್ರೆ ಗ್ರಾಮದಿಂದ ರಟ್ಟೀಹಳ್ಳಿಗೆ ಸಂಪರ್ಕ ಕಲ್ಪಿಸಲು ರಸ್ತೆ ಸಮಸ್ಯೆ ಎದುರಾಗಿದೆ. ಸೂಕ್ತ ರಸ್ತೆ ಇಲ್ಲದ್ದಕ್ಕೆ ಗ್ರಾಮಸ್ಥರು ತುಂಬಿ ಹರಿಯೋ ಕುಮುದ್ವತಿ ನದಿಯಲ್ಲಿ ತೆಪ್ಪದ ಮೂಲಕ ನದಿ ದಾಟಿ ಹೋಗುತ್ತಿದ್ದಾರೆ.

    ನದಿಯ ಎರಡೂ ಕಡೆಗಳಲ್ಲಿ ಹಗ್ಗವನ್ನ ಕಟ್ಟಿ ಹಗ್ಗದ ಸಹಾಯದಿಂದ ತೆಪ್ಪದಲ್ಲಿ ಪಯಣಿಸಬೇಕಾದ ದುಃಸ್ಥಿತಿ ಬಂದಿದೆ. ಶಾಲಾ ಕಾಲೇಜು ಸೇರಿದಂತೆ ಗ್ರಾಮಸ್ಥರು ಎಲ್ಲದಕ್ಕೂ ರಟ್ಟೀಹಳ್ಳಿ ಗ್ರಾಮವನ್ನೇ ಅವಲಂಬಿಸಿರೋದ್ರಿಂದ ಅರ್ಧ ಕಿ.ಮೀ.ನಷ್ಟು ತೆಪ್ಪದಲ್ಲಿ ನದಿ ದಾಟಿಕೊಂಡು ಹೋಗ್ತಿದ್ದಾರೆ. ಇದನ್ನೂ ಓದಿ: ಶಿಥಿಲಗೊಂಡ ಸೇತುವೆ- ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳು

    ನದಿಗೆ ಬ್ರಿಡ್ಜ್ ನಿರ್ಮಾಣ ಆಗಿದ್ರೂ ಸೇತುವೆಗೆ ಹೋಗಲು ರಸ್ತೆ ಇಲ್ಲದ್ದರಿಂದ ಗ್ರಾಮಸ್ಥರು ತೆಪ್ಪದಲ್ಲಿ ಪಯಣಿಸ್ತಿದ್ದಾರೆ. ಸ್ವಲ್ಪವೇ ಯಾಮಾರಿದ್ರೂ ಯಮಲೋಕ ಸೇರೋದು ಗ್ಯಾರಂಟಿ ಅನ್ನೋ ಹಾಗೆ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ತೆಪ್ಪದ ಮೂಲಕ ಪ್ರಯಾಣ ಮಾಡ್ತಿದ್ದಾರೆ.

    ತೆಪ್ಪ ಬಿಟ್ಟು ಬೇರೆ ಮಾರ್ಗದ ಮೂಲಕ ಗ್ರಾಮಸ್ಥರು ರಟ್ಟೀಹಳ್ಳಿ ತಲುಪಬೇಕಾದ್ರೆ ಹನ್ನೆರಡು ಕಿ.ಮೀ ದೂರ ಪ್ರಯಾಣ ಮಾಡಬೇಕಾಗಿದೆ. ಹೀಗಾಗಿ ಅನಿವಾರ್ಯ ಎಂಬಂತೆ ಗ್ರಾಮಸ್ಥರು ತೆಪ್ಪವನ್ನೆ ನದಿ ದಾಟಲು ಅವಲಂಭಿಸಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ಆದಷ್ಟು ಬೇಗ ರಸ್ತೆ ನಿರ್ಮಿಸಿಕೊಟ್ಟು ತೆಪ್ಪದ ಪ್ರಯಾಣ ತಪ್ಪಿಸಬೇಕು ಅಂತಾ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೋಟ್ ನಲ್ಲಿಯೇ ಸಾಗುತ್ತಿದೆ 6 ಗ್ರಾಮಗಳ ಗ್ರಾಮಸ್ಥರ ಜೀವ

  • ಚಿಕ್ಕೋಡಿ, ರಾಯಬಾಗ, ಅಥಣಿಯಲ್ಲಿ ಪ್ರವಾಹದ ಭೀತಿ-8 ಸೇತುವೆಗಳು ಮುಳುಗಡೆ

    ಚಿಕ್ಕೋಡಿ, ರಾಯಬಾಗ, ಅಥಣಿಯಲ್ಲಿ ಪ್ರವಾಹದ ಭೀತಿ-8 ಸೇತುವೆಗಳು ಮುಳುಗಡೆ

    ಬೆಳಗಾವಿ: ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನ ನದಿ ತೀರದ ಗ್ರಾಮಸ್ಥರು ಪ್ರವಾಹ ಭೀತಿಯಲ್ಲಿದ್ದು, ಕೃಷ್ಣಾ ತೀರದ ತೋಟದ ವಸತಿಗಳು ನಡುಗಡ್ಡೆಯಾಗಿವೆ. ಕೃಷ್ಣಾ ಹಿನ್ನೀರಿನಿಂದ ಬ್ಲಾಕ್ ಆದ ರಸ್ತೆಯ ಮೇಲೆಯೇ ವಾಹನಗಳು ಸಂಚಾರ ನಡೆಸುತ್ತಿವೆ. ಇಂಗಳಿ ಗ್ರಾಮದ ನೂರಕ್ಕೂ ಹೆಚ್ಚು ಕುಟುಂಬಗಳು ನಡುಗಡ್ಡೆಯಲ್ಲಿಯೇ ವಾಸವಗಿದ್ದಾರೆ.

    ತೋಟದ ವಸತಿ ಜಲಾವೃತವಾಗಿದ್ದರಿಂದ 2 ಅಡಿ ನೀರಿನಲ್ಲೇ ಪ್ರಯಾಣ ಮಾಡಬೇಕಾಗಿದೆ. ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಬೋಟ್ ವ್ಯವಸ್ಥೆ ಕಲ್ಪಿಸಲು ಸ್ಥಳೀಯರ ಆಗ್ರಹಿಸುತ್ತಿದ್ದಾರೆ. ಕಳೆದ 3-4 ದಿನದಿಂದ ರಸ್ತೆ ಜಲಾವೃತವಾಗಿದ್ದು, ಪರ್ಯಾಯ ಮಾರ್ಗವಿಲ್ಲದೆ ಜನರು ಜೀವದ ಭಯದಲ್ಲಿಯೇ ಪ್ರಯಾಣಿಸುತ್ತಿದ್ದಾರೆ.

    ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕೃಷ್ಣಾ ನದಿ ನೀರಿನ ಒಳ ಹರಿವು 2 ಲಕ್ಷ ಕ್ಯೂಸೆಕ್ ದಾಟಿದ್ದು, ನೀರು ಒಳ ಹರಿವು 2,03,000 ಕ್ಯೂಸೆಕ್ ಹೆಚ್ಚಾಗಿದೆ. ಅಲ್ಲದೇ ಹಿಪ್ಪರಗಿ ಜಲಾಶಯದಿಂದ 2,02,000 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ.

    ಕೃಷ್ಣಾ ಒಳಹರಿವು 2 ಲಕ್ಷ ಕ್ಯೂಸೆಕ್ ದಾಟಿದ ಹಿನ್ನೆಲೆಯಲ್ಲಿ ಪ್ರವಾಹ ಸ್ಥಿತಿ ಇರುವ ಗ್ರಾಮಗಳಿಗೆ ಬೆಳಗಾವಿ ಡಿಸಿ ಜಿಯಾವುಲ್ಲಾ ಭೇಟಿ ನೀಡಿದ್ದಾರೆ. ಈಗಾಗಲೇ ಚಿಕ್ಕೋಡಿ ಹಾಗೂ ರಾಯಭಾಗ ತಾಲೂಕಿನ 8 ಸೇತುವೆಗಳು ಮುಳುಗಡೆ ಆಗಿದೆ.

    ಚಿಕ್ಕೋಡಿ ತಾಲೂಕಿನ ಯಡೂರು, ಕಲ್ಲೋಳ, ಇಂಗಳಿ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದ್ದು, ನದಿ ತೀರದ ಗ್ರಾಮಗಳಿಗೆ ಡಿಸಿ ಭೇಟಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಪಂಚಾಯತಿ ಸಿಇಒ ಸಿ.ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀಂದ್ರ ಕುಮಾರ್ ರೆಡ್ಡಿ ನೀಡಿದ್ದಾರೆ.

  • ಕಟಾವು ಮಾಡಿದ್ದ ಬಾಳೆಯ ಬುಡದಲ್ಲಿ ಬಾಳೆಗೊನೆ – ಗ್ರಾಮಸ್ಥರಲ್ಲಿ ಅಚ್ಚರಿ

    ಕಟಾವು ಮಾಡಿದ್ದ ಬಾಳೆಯ ಬುಡದಲ್ಲಿ ಬಾಳೆಗೊನೆ – ಗ್ರಾಮಸ್ಥರಲ್ಲಿ ಅಚ್ಚರಿ

    ಚಿಕ್ಕಬಳ್ಳಾಪುರ: ಬಾಳೆಗೆ ಒಂದೇ ಗೊನೆ. ರಾಗಿಗೆ ಒಂದೇ ತೆನೆ ಫಸಲು. ಆದರೆ ಬುಡದವರೆಗೂ ಕಟಾವು ಮಾಡಲಾಗಿದ್ದ ಬಾಳೆಯ ಬುಡದಲ್ಲಿ ಬಾಳೆಯ ಗೊನೆ ಬೆಳೆದಿದ್ದು, ಗ್ರಾಮಸ್ಥರಲ್ಲಿ ಅಚ್ಚರಿಯನ್ನು ಮೂಡಿಸಿದೆ.

    ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಗ್ರಾಮದ ಅಯ್ಯಪ್ಪನ ಸನ್ನಿಧಾನದ ಆವರಣದಲ್ಲಿ ಬಾಳೆಯ ಬುಡದಲ್ಲಿ ಬಾಳೆಗೊನೆ ಬೆಳೆದಿದೆ. ಹಿಂದೂ-ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳವಾದ ಮುರಗಮಲ್ಲ ಗ್ರಾಮದಲ್ಲಿ ಒಂದೆಡೆ ದರ್ಗಾ ಮತ್ತೊಂದೆಡೆ ಮುಕ್ತೀಶ್ವರನ ದೇವಾಲಯ ಇವೆ. ಇವರೆಡೆರ ನಡುವೆ ಅಯ್ಯಪ್ಪನ ಆಲಯ ಇದೆ. ಅಯ್ಯಪ್ಪನ ಆಲಯದ ಆವರಣದಲ್ಲಿರುವ ಬಾಳೆಯ ಬುಡದಲ್ಲಿ ಈ ವಿಸ್ಮಯ ಜರುಗಿದೆ.

    ಎರಡು ವರ್ಷಗಳ ಹಿಂದೆ ನಿರ್ಮಾಣವಾದ ಆಯ್ಯಪ್ಪ ಆಲಯದಲ್ಲಿ ಇತ್ತೀಚೆಗೆ ಬಲಮುರಿ ಗಣಪತಿ ಹಾಗೂ ಸುಬ್ರಮಣ್ಯೇಶ್ವರನ ನೂತನ ಗುಡಿ ನಿರ್ಮಿಸಲಾಗಿದೆ. ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಈ ಬಾಳೆ ಗಿಡವನ್ನ ಕಟಾವು ಮಾಡಿ ದೇವರ ಅಲಂಕಾರಕ್ಕೆ ಬಳಸಲಾಗಿತ್ತಂತೆ. ಆದರೆ ಈಗ ಕಟಾವು ಮಾಡಲಾಗಿದ್ದ ಒಣಗಿದ ಬಾಳೆಯ ಬುಡದಲ್ಲೇ ಬಾಳೆಗೊನೆ ಬೆಳೆಯುತ್ತಿದ್ದು, ಅಚ್ಚರಿ ಮೂಡಿಸಿದೆ.

    ದೇವಾಲಯದ ಆವರಣದಲ್ಲಿ ಬಾಳೆಯ ಗಿಡಗಳಿದ್ದು, ಅದರಲ್ಲಿ ಇತ್ತೀಚೆಗೆ ದೇವರ ಕಾರ್ಯಕ್ಕೆ ಅಂತ ಬಾಳೆಗಿಡವನ್ನ ಕಟಾವು ಮಾಡಲಾಗಿತ್ತು. ಆದರೆ ಈಗ ಕಟಾವು ಮಾಡಲಾಗಿದ್ದ ಬಾಳೆಯ ಬುಡದಲ್ಲಿ ಹೂವಾಗಿ ಕಾಯಾಗಿ ಬಾಳೆಯ ಗೊನೆ ಬೆಳೆತಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇದೆಲ್ಲಾ ಅಯ್ಯಪ್ಪ ನ ಮಹಿಮೆ ಅಂತ ಇಲ್ಲಿಯ ಜನ ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಸ್ಥಳೀಯರಾದ ನಾಗರಾಜು ಹೇಳಿದ್ದಾರೆ.

  • ಅನ್ನಭಾಗ್ಯ ಯೋಜನೆಯಲ್ಲಿ ನೀಡಿದ ತೊಗರಿಬೇಳೆಯಲ್ಲಿ ಹುಳು ಪತ್ತೆ!

    ಅನ್ನಭಾಗ್ಯ ಯೋಜನೆಯಲ್ಲಿ ನೀಡಿದ ತೊಗರಿಬೇಳೆಯಲ್ಲಿ ಹುಳು ಪತ್ತೆ!

    ಬಳ್ಳಾರಿ: ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ನೀಡುವ ತೊಗರಿಬೇಳೆ ಪಾಕೆಟ್ ನಲ್ಲಿ ಹುಳು ಪತ್ತೆಯಾಗಿದ್ದು ಸಾರ್ವಜನಿಕರು ಗೊಂದಲಕ್ಕೀಡಾಗಿದ್ದಾರೆ.

    ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಖಾನಾ ಹೊಸಹಳ್ಳಿ ಗ್ರಾಮದಲ್ಲಿ ಪಡಿತರ ವಿತರಣೆ ಮಾಡಲಾಗಿದೆ. ಆದರೆ ಇಲ್ಲಿ ನೀಡಲಾದ ತೊಗರಿ ಬೇಳೆ ಪಾಕೆಟ್ ನಲ್ಲಿ ಹುಳು ಪತ್ತೆಯಾಗಿದೆ. ಹೊಸಹಳ್ಳಿ ನಿವಾಸಿ ಬಸವರಾಜ್ ಎನ್ನುವವರು ಪಡಿತರ ಖರೀದಿ ವೇಳೆ ತೊಗರಿಬೇಳೆ ಪಾಕೆಟ್ ನಲ್ಲಿ ಹುಳು ಕಾಣಿಸಿಕೊಂಡಿದೆ.

    ಖಾನಾ ಹೊಸಹಳ್ಳಿ ಮುಖ್ಯರಸ್ತೆಯಲ್ಲಿರುವ 8ನೇ ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ ತೊಗರಿಬೇಳೆ ಪಾಕೆಟ್ ನಲ್ಲಿ ಈ ರೀತಿಯ ಹುಳಗಳು ಹುಳಗಳು ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿವೆ. ಹೀಗೆ ಹುಳು ಪತ್ತೆಯಾಗಿರುವುದನ್ನು ವಿಡಿಯೋ ಮಾಡಿದ ಗ್ರಾಮಸ್ಥರು ಅನ್ನಭಾಗ್ಯದ ಅವಾಂತರವನ್ನು ಬಯಲಿಗೆ ಎಳೆದಿದ್ದಾರೆ. ಹೀಗೆ ತಿನ್ನುವ ಆಹಾರದಲ್ಲಿ ಹುಳುಗಳು ಪತ್ತೆಯಾದರೆ ತಿನ್ನುವುದಾದರೂ ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯರ ಅನ್ನಭಾಗ್ಯ ಯೋಜನೆ ಅಕ್ಕಿ ಸಾಕಷ್ಟು ಬಡವರಿಗೆ ಅನೂಕೂಲವಾಗಿದೆ. ಆದ್ರೆ ಅನ್ನಭಾಗ್ಯ ಯೋಜನೆ ಇದೀಗ ಹುಳುಗಳ ಭಾಗ್ಯ ಎನ್ನುವಂತಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ನೀಡುವ ಈ ಆಹಾರ ಧಾನ್ಯಗಳಲ್ಲಿ ಈಗ ಹುಳುಗಳದ್ದೇ ಸಾಮ್ರಾಜ್ಯ ಎನ್ನುವಂತಾಗಿದೆ. ಇನ್ನಾದರೂ ಆಹಾರ ಇಲಾಖೆ ಎಚ್ಚತ್ತುಕೊಂಡು ಈ ಕಡೆಗೆ ಗಮನ ನೀಡಬೇಕಿದೆ.

  • ರಾತ್ರಿಯಿಡಿ ಜೋಡಿಯನ್ನು ಥಳಿಸಿ, ಬಟ್ಟೆ ಹರಿದು ಮಹಿಳೆಯ ತಲೆ ಬೋಳಿಸಿದ ಗ್ರಾಮಸ್ಥರು!

    ರಾತ್ರಿಯಿಡಿ ಜೋಡಿಯನ್ನು ಥಳಿಸಿ, ಬಟ್ಟೆ ಹರಿದು ಮಹಿಳೆಯ ತಲೆ ಬೋಳಿಸಿದ ಗ್ರಾಮಸ್ಥರು!

    ಗುಹಾವಟಿ: ಅಕ್ರಮ ಸಂಬಂಧ ಹೊಂದಿದ್ದಾರೆಂದು ಗ್ರಾಮಸ್ಥರು ಜೋಡಿಯನ್ನು ಇಡೀ ರಾತ್ರಿ ಥಳಿಸಿ ಮಹಿಳೆಯ ತಲೆ ಬೋಳಿಸಿದ ಘಟನೆ ಭಾನುವಾರ ಅಸ್ಸಾಂನ ನಾಗಂನ್‍ನಲ್ಲಿ ನಡೆದಿದೆ.

    ಶನಿವಾರ ರಾತ್ರಿ ಜುಮುರ್ಮೂರ್ ನಲ್ಲಿ ಗ್ರಾಮಸ್ಥರು ಆ ಜೋಡಿಯನ್ನು ಥಳಿಸಲು ಶುರು ಮಾಡಿದ್ದರು. ಭಾನುವಾರ ಬೆಳಗ್ಗೆ ಗಂಭೀರವಾಗಿ ಗಾಯಗೊಂಡಿದ್ದ ಜೋಡಿಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಹಲ್ಲೆಗೊಳಗಾದ ಜೋಡಿಯನ್ನು ಕತಿಯಾಟೋಲಿಯಲ್ಲಿರುವ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ನಾಗಂನ್‍ನ ಭೋಗೇಶ್ವರಿ ಪುಕನಾನಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಭಾನುವಾರ ಬೆಳಗ್ಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಪಡೆದ ಬಳಿಕ ನಮ್ಮ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಜೋಡಿಯನ್ನು ನಮಗೆ ಒಪ್ಪಿಸಿದ್ದರು. ಆ ಜೋಡಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಎಸ್‍ಪಿ ರಿಪುಲ್ ದಾಸ್ ಹೇಳಿದ್ದಾರೆ.

    ಪಕ್ಕದ ತುಬುಕಿ ಗ್ರಾಮದ ವ್ಯಕ್ತಿಯೊಬ್ಬ ಶನಿವಾರ ರಾತ್ರಿ ಮಹಿಳೆ ಮನೆಗೆ ಹೋಗಿದ್ದಾನೆ. ಆಗ ಗ್ರಾಮಸ್ಥರು ಇಬ್ಬರ ನಡುವೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಈ ವೇಳೆ ವ್ಯಕ್ತಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾಗ ಗ್ರಾಮಸ್ಥರು ಆತ ಮತ್ತು ಮಹಿಳೆಯನ್ನು ಹಿಡಿದು ಥಳಿಸಿದ್ದಾರೆ. ಕೊನೆಗೆ ಗ್ರಾಮದ ಮಹಿಳೆಯೊಬ್ಬರು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ತಲೆ ಬೊಳಿಸಿದ್ದಾರೆ. ಅಲ್ಲದೇ ಅವರ ಬಟ್ಟೆ ಹರಿದು ರಾತ್ರಿಯಿಡಿ ಕಿರುಕುಳ ನೀಡಿದ್ದಾರೆ.

    ಇಬ್ಬರಿಗೂ ಮದುವೆಯಾಗಿದೆ. ಇಬ್ಬರು ಅಕ್ರಮ ಸಂಬಂಧ ಹೊಂದುವ ಮೂಲಕ ತಮ್ಮ ಜೀವನ ಸಂಗಾತಿಗೆ ಮೋಸ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಗ್ರಾಮಸ್ಥರು ಅವರನ್ನು ಥಳಿಸಿದ್ದಾರೆ. ಸದ್ಯ ಪ್ರಾಥಮಿಕ ತನಿಖೆ ನಡೆಸಿ ನಂತರ ಕೇಸ್ ದಾಖಲಿಸಿಕೊಳ್ಳಲಿದ್ದೇವೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

  • ಬಾಕಿ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಖಾಕಿ ಕರೆತಂದ ಸೆಸ್ಕಾಂ – ಗ್ರಾಮಸ್ಥರ ಅಕ್ರೋಶ

    ಬಾಕಿ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಖಾಕಿ ಕರೆತಂದ ಸೆಸ್ಕಾಂ – ಗ್ರಾಮಸ್ಥರ ಅಕ್ರೋಶ

    ಮೈಸೂರು: ಗ್ರಾಮದ ಮನೆಗಳ ವಿದ್ಯುತ್ ಬಾಕಿ ಹಿನ್ನೆಲೆಯಲ್ಲಿ ರೈತರಿಂದ ಬಾಕಿ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕಾಂ) ಅಧಿಕಾರಿಗಳು ಹೊಸ ರೀತಿಯ ವರಸೆ ಆರಂಭಿಸಿದ್ದು, ಪೊಲೀಸರ ಸಮ್ಮುಖದಲ್ಲಿ ಹಣ ಕಟ್ಟಿಸಿಕೊಳ್ಳಲು ಮುಂದಾಗಿದ್ದಾರೆ.

    ಜಿಲ್ಲೆಯ ಟಿ ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಪೊಲೀಸರ ಜೊತೆ ಆಗಮಿಸಿದ ಸೆಸ್ಕಾಂ ಅಧಿಕಾರಿಗಳು ರೈತರಿಂದ ಬಾಕಿ ವಸೂಲಿ ಮಾಡಲು ಮುಂದಾಗಿದ್ದಾರೆ. ಸದ್ಯ ಸೆಸ್ಕಾಂ ಸಿಬ್ಬಂದಿಗಳ ಈ ವರ್ತನೆಗೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆಸಿದ್ದಾರೆ.

    ಒಂದು ಗಂಟೆಗೂ ಹೆಚ್ಚು ಕಾಲ ಸೆಸ್ಕಾಂ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಈ ಕುರಿತು ಮಾತಿನ ಚಕಮಕಿ ನಡೆಯಿತು. ಸೆಸ್ಕಾಂ ಸಿಬ್ಬಂದಿ ಹಾಗೂ ಪೊಲೀಸರಿಗೆ ಗ್ರಾಮದ ಒಳಗೆ ಕಾಲಿಡದಂತೆ ಗ್ರಾಮಸ್ಥರು ರೈತರು ತಡೆಯೊಡ್ಡಿದರು.

    ಈ ಕುರಿತು ಗ್ರಾಮಸ್ಥರೊಂದಿಗೆ ತಮ್ಮ ಕಾರ್ಯದ ಕುರಿತು ವಾದ ಮಂಡಿಸಿದ ಅಧಿಕಾರಿಗಳು, ಹಲವು ವರ್ಷಗಳಿಂದ ವಿದ್ಯುತ್ ಬಿಲ್ ಬಾಕಿ ಇದೆ. ಬಿಲ್ ಕೇಳಲು ಬಂದರೆ ನೀವು ನಮ್ಮ ಮೇಲೆ ದರ್ಪ ಮಾಡಿತ್ತೀರಾ. ಈ ಹಿನ್ನಲೆಯಲ್ಲಿ ಪೊಲೀಸರನ್ನು ಜೊತೆಗೆ ಕರೆದುಕೊಂಡು ಬಂದಿದ್ದೇವೆ. ವಿದ್ಯುತ್ ಹಣವನ್ನು ಸ್ಥಳದಲ್ಲೇ ಪಾವತಿ ಮಾಡುವಂತೆ ಪಟ್ಟು ಹಿಡಿದರು. ಇದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿ ಮಳೆ ಬೆಳೆ ಇಲ್ಲದೇ ನಷ್ಟ ಅನುಭವಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಎಲ್ಲಾ ಹಣ ನೀಡಲು ಸಾಧ್ಯವಿಲ್ಲ ಮೊದಲಿನಂತೆ ಹಂತ ಹಂತವಾಗಿ ಹಣ ಪಾವತಿ ಮಾಡುವುದಾಗಿ ಹೇಳಿದ್ದಾರೆ.

  • ಬೀದರ್ ನಲ್ಲಿ ಭಾರೀ ಮಳೆ: ಸಂಪರ್ಕ ಕಳೆದುಕೊಂಡು ಒದ್ದಾಡುತ್ತಿದ್ದಾರೆ ಗ್ರಾಮಸ್ಥರು

    ಬೀದರ್ ನಲ್ಲಿ ಭಾರೀ ಮಳೆ: ಸಂಪರ್ಕ ಕಳೆದುಕೊಂಡು ಒದ್ದಾಡುತ್ತಿದ್ದಾರೆ ಗ್ರಾಮಸ್ಥರು

    ಬೀದರ್: ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಔರಾದ್ ತಾಲೂಕಿನ ಗ್ರಾಮದಲ್ಲಿ ನಿರ್ಮಾಣ ಹಂತದ ಸೇತುವೆಯ ಪಕ್ಕ ಹಾಕಲಾಗಿದ್ದ ತಾತ್ಕಾಲಿಕ ಸೇತುವೆಯೊಂದು ಕೊಚ್ಚಿ ಹೋಗಿದೆ.

    ನಿಡೋದಾ ಗ್ರಾಮದಲ್ಲಿ ತಾತ್ಕಾಲಿಕವಾಗಿ ನಿರ್ಮಾಣಗೊಂಡಿದ್ದ ಸೇತುವೆ ಕೊಚ್ಚಿ ಹೋದ ಪರಿಣಾಮ 2 ಸಾವಿರಕ್ಕೂ ಹೆಚ್ಚು ಜನ ವಸತಿ ಇರುವ ಗ್ರಾಮ ಈಗ ಸಂಪರ್ಕ ಕಳೆದುಕೊಂಡಿದೆ.

    ನಿಡೋದಾ ಗ್ರಾಮದ ಬಳಿ ಮಂಜ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸೇತುವೆಯೊಂದನ್ನು ನಿರ್ಮಿಸಲಾಗಿತ್ತು. ಆದರೆ ಜಿಲ್ಲೆಯಾದ್ಯಂತ ಮಳೆ ಹೆಚ್ಚಾಗಿದ್ದರಿಂದ ಮಂಜ್ರಾ ನದಿ ನೀರಿನ ಪ್ರಮಾಣ ಹೆಚ್ಚಾಗಿ ತಡರಾತ್ರಿ ತಾತ್ಕಾಲಿಕ ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

    ಸುಮಾರು 2000 ಜನವಸತಿ ಹೊಂದಿರುವ ನಿಡೋದಾ ಗ್ರಾಮವು ತಡರಾತ್ರಿಯಿಂದ ಸಂಪರ್ಕ ಕಳೆದುಕೊಂಡಿದೆ. ಈ ಗ್ರಾಮಕ್ಕೆ ಈ ದಾರಿ ಹೊರತು ಪಡಿಸಿ ಯಾವುದೇ ಅನ್ಯ ದಾರಿಗಳಿಲ್ಲದ್ದರಿಂದ ಸಂಚಾರ ಇಲ್ಲದೆ ಗ್ರಾಮಸ್ಥರು ಪರದಾಡುವ ಸ್ಥಿತಿ ಎದುರಾಗಿದೆ.

    ಗ್ರಾಮಸ್ಥರು ಊರಿಂದ ಹೊರಗೆ ಮತ್ತು ಒಳಗೆ ಬಾರದಂತಹ ಅಸಹಾಯಕ ಸ್ಥಿತಿ ಎದುರಾಗಿದೆ. ಗ್ರಾಮಸ್ಥರು ಮಳೆ ಅವಾಂತರದಿಂದ ಒದ್ದಾಡುತ್ತಿದ್ದರೂ, ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ. ಇವರೆಲ್ಲರೂ  ಪರಿಷತ್ ಚುನಾವಣೆಯಲ್ಲಿ ಬ್ಯುಸಿ ಆಗಿರುವುದುದರಿಂದ ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ತಿಳಿದು ಬಂದಿದೆ.

  • ರಾತ್ರಿಯಿಡೀ ಖಾರದಪುಡಿ, ದೊಣ್ಣೆ ಹಿಡಿದುಕೊಂಡು ಓಡಾಡಿದ ಮಹಿಳೆಯರು!

    ರಾತ್ರಿಯಿಡೀ ಖಾರದಪುಡಿ, ದೊಣ್ಣೆ ಹಿಡಿದುಕೊಂಡು ಓಡಾಡಿದ ಮಹಿಳೆಯರು!

    ಹುಬ್ಬಳ್ಳಿ: ರಾಜ್ಯದೆಲ್ಲೆಡೆ ಮಕ್ಕಳ ಕಳ್ಳರ ವದಂತಿಯ ಹಾವಳಿಯಿಂದ ಹುಬ್ಬಳ್ಳಿಗರು ಆತಂಕಗೊಂಡಿದ್ದು, ರಾತ್ರಿಯಿಡೀ ನಿದ್ದೆ ಮಾಡದೆ ಕಳ್ಳರಿಗಾಗಿ ಶೋಧ ಕಾರ್ಯ ಮಾಡಿದ್ದಾರೆ.

    ಹುಬ್ಬಳ್ಳಿಯ ಮಂಟೂರು ರಸ್ತೆಯ ಸುಣ್ಣದ ಭಟ್ಟಿ ನಿವಾಸಿಗಳು ಆತಂಕಗೊಂಡಿದ್ದು, ಮಕ್ಕಳ ಕಳ್ಳರು ಬಂದಿದ್ದಾರೆಂಬ ವದಂತಿ ಹಿನ್ನೆಲೆಯಲ್ಲಿ ಮಹಿಳೆಯರು ರಾತ್ರಿ ಇಡೀ ಖಾರದಪುಡಿ ಹಾಗೂ ದೊಣ್ಣೆ ಹಿಡಿದುಕೊಂಡು ಓಡಾಡಿದ್ದಾರೆ.

    ಇದೇ ಪ್ರದೇಶದಲ್ಲಿ ರೈಲ್ವೆ ಬೋಗಿಗಳನ್ನ ನಿಲ್ಲಿಸಲಾಗಿರುತ್ತದೆ. ಅದರಲ್ಲೇ ಮಕ್ಕಳ ಕಳ್ಳರು ಅಡಗಿದ್ದಾರೆ ಎಂಬ ಶಂಕೆ ಹಿನ್ನೆಲೆಯಲ್ಲಿ ಸಾರ್ವಜನಿಕರು ರಾತ್ರಿ ಇಡೀ ಮಕ್ಕಳ ಕಳ್ಳರಿಗಾಗಿ ಶೋಧ ನಡೆಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿದ್ರೂ ಪೊಲೀಸರು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ತಾವೇ ಕಳ್ಳರಿಗಾಗಿ ರಾತ್ರಿಯಿಡೀ ಶೋಧ ನಡೆಸಿದ್ದಾರೆ.

  • ಮಕ್ಕಳ ಕಳ್ಳ ಎಂದು ಭಾವಿಸಿ ಥಳಿತ- ನಡು ರಸ್ತೆಯಲ್ಲೇ ಯುವಕ ದುರ್ಮರಣ!

    ಮಕ್ಕಳ ಕಳ್ಳ ಎಂದು ಭಾವಿಸಿ ಥಳಿತ- ನಡು ರಸ್ತೆಯಲ್ಲೇ ಯುವಕ ದುರ್ಮರಣ!

    ಬೆಂಗಳೂರು: ಮಕ್ಕಳ ಕಳ್ಳ ಅಂತ ಭಾವಿಸಿ ವ್ಯಕ್ತಿಯೋರ್ವನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿ, ದೊಣ್ಣೆಯಿಂದ ಹೊಡೆದು ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಗಂಭೀರವಾಗಿ ಗಾಯಗೊಂಡ ವ್ಯಕ್ತಿ ನಡುರಸ್ತೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಮೃತ ಕಾಲುರಾಮ್ ಅಲಿಯಾಸ್ ಬಚ್ಚನ್‍ರಾಮ್ ರಾಜಸ್ಥಾನ ಮೂಲದವನು ಅಂತ ತಿಳಿದುಬಂದಿದೆ.

    ಕಾಟನ್ ಪೇಟೆ ಬಳಿಯ ಬಕ್ಷಿಗಾರ್ಡನ್‍ಗೆ ಈತ ಹೋಗಿದ್ದಾನೆ. ಈ ವೇಳೆ ಮಕ್ಕಳ ಕಳ್ಳ ಎಂದು ಶಂಕಿಸಿ ಈತನನ್ನು ಹಿಡಿದ ಸಾರ್ವಜನಿಕರು ಹೊಡೆದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪೆಟ್ಟು ತಿಂದ ಕಾಲುರಾಮ್‍ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ರು. ಆದ್ರೆ ಅದಾಗಲೇ ಆತ ಮೃತಪಟ್ಟಿದ್ದಾನೆ.

    ಇದಕ್ಕೆಲ್ಲಾ ಕಾರಣ ವಾಟ್ಸಾಪ್‍ಗಳಲ್ಲಿ ಹರಿದಾಡ್ತಿರುವ ಒಂದು ಆಡಿಯೋ ಕ್ಲಿಪ್ ಎನ್ನಲಾಗಿದೆ. ಮಕ್ಕಳ ಕಳ್ಳರ ಬಗ್ಗೆ ಎಚ್ಚರಿಕೆ ನೀಡುವ ಈ ಆಡಿಯೋ ಕ್ಲಿಪ್ ಸುಳ್ಳು ವದಂತಿಯಷ್ಟೇ ಅಂತ ಚಿಕ್ಕಬಳ್ಳಬಳ್ಳಾಪುರ ಎಸ್‍ಪಿ ಸ್ಪಷ್ಟನೆ ಕೂಡಾ ಕೊಟ್ಟಿದ್ರು.

  • ಮಕ್ಕಳ ಕಳ್ಳತನ ವದಂತಿ- ಮೂವರಿಗೆ ಬಿತ್ತು ಸಖತ್ ಗೂಸಾ

    ಮಕ್ಕಳ ಕಳ್ಳತನ ವದಂತಿ- ಮೂವರಿಗೆ ಬಿತ್ತು ಸಖತ್ ಗೂಸಾ

    ಯಾದಗಿರಿ: ರಾಜ್ಯದಲ್ಲಿ ಮಕ್ಕಳ ಕಳ್ಳತನ ವದಂತಿ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಮೂರು ಜನರಿಗೆ ಮಕ್ಕಳ ಕಳ್ಳರೆಂಬ ಸಂಶಯದಿಂದ ಗ್ರಾಮಸ್ಥರು ಅಮಾನವೀಯ ರೀತಿಯಲ್ಲಿ ಥಳಿಸಿದ್ದಾರೆ.

    ಈ ಘಟನೆ ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ಗುಂಜನೂರ ಗ್ರಾಮದಲ್ಲಿ ನಡೆದಿದೆ. ವಿಕಾರಬಾದ ಮೂಲದ ಬಾಲಕೃಷ್ಣ ಸೇರಿದಂತೆ ಇನ್ನೂ ಇಬ್ಬರಿಗೆ ಗ್ರಾಮಸ್ಥರು ಧಳಿಸಿದ್ದಾರೆ.

    ಗಂಧದ ಮರ ಕಳ್ಳತನಕ್ಕೆ ಗುಂಜನೂರ ಗ್ರಾಮಕ್ಕೆ ಕೋಡ್ಲಿ ಜೊತೆ ಮಕ್ಕಳು ಬಂದಿದ್ದಾರೆ ಅಂತ ಬಾಲಕೃಷ್ಣ ಹೇಳಿದ್ದಾನೆ. ಇನ್ನೂ ಆ ಗ್ರಾಮದಲ್ಲಿ ಯಾವುದೇ ಗಂಧದ ಮರಗಳು ಇಲ್ಲ. ಹಾಗಾಗಿ ಮಕ್ಕಳ ಕಳ್ಳರೆಂಬ ಸಂಶಯದಿಂದ ಗ್ರಾಮಸ್ಥರು ಸೇರಿ ಮನಬಂದಂತೆ ಧಳಿಸಿದ್ದಾರೆ.

    ಸ್ಥಳಕ್ಕೆ ಗುಂಪು ಚದರಿಸಲು ಗುರಮಠಕಲ್ ಪೊಲೀಸರು ಬಂದಿರುವ ವಾಹನ ಜಖಂ ಆಗಿದೆ. ಸದ್ಯ ಥಳಿತಕ್ಕೊಳಗಾದ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.