Tag: villagers

  • ಇತಿಹಾಸ ಪ್ರಸಿದ್ಧ ಬಸವೇಶ್ವರ ದೇವರ ಅಗ್ನಿಕೊಂಡೋತ್ಸವ ರದ್ದು!

    ಇತಿಹಾಸ ಪ್ರಸಿದ್ಧ ಬಸವೇಶ್ವರ ದೇವರ ಅಗ್ನಿಕೊಂಡೋತ್ಸವ ರದ್ದು!

    ರಾಮನಗರ: ಗ್ರಾಮಸ್ಥರು ಹಾಗೂ ಧಾರ್ಮಿಕ ದತ್ತಿ ಜಟಾಪಟಿಗೆ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಇತಿಹಾಸ ಪ್ರಸಿದ್ದ ಬಸವೇಶ್ವರ ದೇವರ ಅಗ್ನಿಕೊಂಡೋತ್ಸವ ರದ್ದಾಗಿದೆ.

    ರಾಮನಗರದ ಅವ್ವೇರಹಳ್ಳಿ ಗ್ರಾಮದಲ್ಲಿ ನಡೆಯುವ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಬಸವೇಶ್ವರ ದೇವರ ಅಗ್ನಿಕೊಂಡೋತ್ಸವ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ದೇವಾಲಯವು ಮುಜರಾಯಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಅಗ್ನಿಕೊಂಡ ಹಾಯುವ ವೇಳೆ ಅರ್ಚಕ ವಿಜಯ್ ಕುಮಾರ್ ಬಿದ್ದು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅರ್ಚಕರು ಧಾರ್ಮಿಕ ದತ್ತಿ ಇಲಾಖೆಗೆ ದೊಡ್ಡದಾಗಿದ್ದ ಅಗ್ನಿಕೊಂಡದ ಉದ್ದವನ್ನು ಚಿಕ್ಕದಾಗಿ ಮಾಡುವಂತೆ ಮನವಿ ಮಾಡಿದ್ದರು.

    ಆದ್ದರಿಂದ ಧಾರ್ಮಿಕ ದತ್ತಿ ಇಲಾಖೆ ಈ ಬಾರಿ ಜಾತ್ರೆ ವೇಳೆ 60 ಅಡಿ ಉದ್ದದ ಅಗ್ನಿಕೊಂಡವನ್ನ 15 ಅಡಿಗೆ ಇಳಿಸಿದೆ. ಅಗ್ನಿಕೊಂಡದ ಎರಡು ಬದಿಯಲ್ಲಿ ಇಟ್ಟಿಗೆ ಇಟ್ಟು ಅದರ ಉದ್ದವನ್ನು ಕಡಿಮೆ ಮಾಡಲಾಗಿದೆ. ಆದರೆ ಈ ಕ್ರಮಕ್ಕೆ ಧಾರ್ಮಿಕ ದತ್ತಿ ಇಲಾಖೆ ವಿರುದ್ಧ ಗ್ರಾಮಸ್ಥರು, ಭಕ್ತರ ಆಕ್ರೋಶ ವ್ಯಕ್ತಪಡಿಸಿದ್ದು, ಇಲಾಖೆ ಸಿಬ್ಬಂದಿ ಹಾಗೂ ಭಕ್ತರ ನಡುವೆ ಮಾತಿ ಚಕಮಕಿ ನಡೆದಿದೆ. ಈ ಜಗಳದಿಂದ ಸದ್ಯ ಬಸವೇಶ್ವರ ದೇವರ ಅಗ್ನಿಕೊಂಡೋತ್ಸವವನ್ನು ರದ್ದುಗೊಳಿಸಲಾಗಿದೆ.

  • ಹೊಸ ಬೋರ್‌ವೆಲ್‌ ಹಾಕಿ ಗ್ರಾಮದಿಂದ ಹೊರಡಿ- ನೀರಿಗಾಗಿ ರೊಚ್ಚಿಗೆದ್ದ ಗ್ರಾಮಸ್ಥರು

    ಹೊಸ ಬೋರ್‌ವೆಲ್‌ ಹಾಕಿ ಗ್ರಾಮದಿಂದ ಹೊರಡಿ- ನೀರಿಗಾಗಿ ರೊಚ್ಚಿಗೆದ್ದ ಗ್ರಾಮಸ್ಥರು

    ಬೀದರ್: ಹನಿ ನೀರಿಗಾಗಿ ಎಲ್ಲೆಡೆ ಹಾಹಾಕಾರ ಎದುರಾಗಿದೆ. ಈ ನಡುವೆ ಗ್ರಾಮಕ್ಕೆ ಬೋರ್‌ವೆಲ್‌ ರೀ-ಬೋಟಿಂಗ್ ಮಾಡಲು ಬಂದು ನೀರು ಸಿಗದೇ ವಿಫಲವಾದ ಬೋರ್‌ವೆಲ್‌ ಗಾಡಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಟ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಬೋರ್ ರೀ-ಬೋಟಿಂಗ್ ಗೆ ಚಟ್ನಹಳ್ಳಿ ಗ್ರಾಮಕ್ಕೆ ಬೋರ್ ವೇಲ್ ಗಾಡಿಯೊಂದು ಬಂದಿತ್ತು. ಆದರೆ ರೀ-ಬೋಟಿಂಗ್ ಮಾಡಿದರು ಬೋರ್ ನಲ್ಲಿ ಹನಿ ನೀರು ಕೂಡ ಸಿಗಲಿಲ್ಲ. ಆದ್ದರಿಂದ ಬಂದ ಕೆಲಸ ವಿಫಲವಾದರಿಂದ ಬೋರ್‌ವೆಲ್‌ ಗಾಡಿ ವಾಪಾಸ್ ಹೊರಟಿತ್ತು. ಆದರೆ ಈ ವೇಳೆ ಏಕಾಏಕಿ ಗ್ರಾಮಸ್ಥರು ಗಾಡಿಯನ್ನು ಮುತ್ತಿಗೆ ಹಾಕಿ ಹೊಸ ಬೋರ್‌ವೆಲ್‌ ಕೊರೆಸಿ, ಬಳಿಕ ಗ್ರಾಮದಿಂದ ಹೋಗಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

    ನೀರಿನ ಸಮಸ್ಯೆಯಿಂದ ಕೆಂಗೆಟ್ಟಿದ್ದ ಗ್ರಾಮಸ್ಥರು ಈ ರೀತಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಗ್ರಾಮದಲ್ಲಿ ಒಂದೇ ಬೋರ್‌ವೆಲ್‌ ಇದ್ದ ಕಾರಣ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಇತ್ತ ಜಿಲ್ಲಾಡಳಿತ ವತಿಯಿಂದ ಅಧಿಕಾರಿಗಳು ಬೋರ್‌ವೆಲ್‌ ರೀ ಬೋಟಿಂಗ್ ಕಳಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಹೊಸ ಬೋರ್‌ವೆಲ್‌ ಕೊರೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಮೃತಪಟ್ಟಿದ್ದ 115ರ ಸಾಧು 4 ಗಂಟೆ ನಂತ್ರ ಎದ್ದು ನಿಂತ್ರು – ಬಾಬಾನ ದರ್ಶನಕ್ಕೆ ಮುಗಿಬಿದ್ದ ಜನ

    ಮೃತಪಟ್ಟಿದ್ದ 115ರ ಸಾಧು 4 ಗಂಟೆ ನಂತ್ರ ಎದ್ದು ನಿಂತ್ರು – ಬಾಬಾನ ದರ್ಶನಕ್ಕೆ ಮುಗಿಬಿದ್ದ ಜನ

    ಲಕ್ನೋ: ಉತ್ತರ ಪ್ರದೇಶದ ಕಾನ್ಪುರದ ಹಳ್ಳಿಯೊಂದರಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದ ಸಾಧುವೊಬ್ಬರು 4 ಗಂಟೆಯ ನಂತರ ಎದ್ದು ನಿಂತ ಚಮತ್ಕಾರ ನಡೆದಿದೆ.

    ಕಾನ್ಪುರದ ರುಸೆಲ್ಲಾಬಾದ್ ತೆಹ್ಸಿಲ್ ಗ್ರಾಮದಲ್ಲಿ ಸೋಮವಾರ ಸಂಜೆ ಗ್ರಾಮದಲ್ಲಿದ್ದ 115 ವರ್ಷದ ಸಾಧು ನಾರಾಯಣ ಬಾಬಾ ಸಾವನ್ನಪ್ಪಿದ್ದರು. ಈ ವೇಳೆ ಊರವರೆಲ್ಲಾ ಸೇರಿ ಅವರ ಅಂತಿಮ ಸಂಸ್ಕಾರಕ್ಕೆ ತಯಾರಿ ನಡೆಸುತ್ತಿದ್ದರು. ಆದರೆ ಮೃತಪಟ್ಟ ನಾಲ್ಕು ಗಂಟೆಯ ನಂತರ ಚಮತ್ಕಾರ ಎಂಬಂತೆ ಸಾಧುವಿನ ಹೃದಯ ಬಡಿತ ಮತ್ತೆ ಶುರುವಾಗಿದೆ. ಇದನ್ನು ಕಂಡ ಗ್ರಾಮಸ್ಥರು ಮುಖವಿಸ್ಮಿತರಾಗಿದ್ದಾರೆ.

    ನಾರಾಯಣ ಬಾಬಾ ಕಳೆದ 15 ರಿಂದ 20 ವರ್ಷಗಳ ಹಿಂದೆ ಗ್ರಾಮದ ದೇವಸ್ಥಾನಕ್ಕೆ ಬಂದಿದ್ದರಂತೆ. ಆ ನಂತರ ಇಲ್ಲಿಯೇ ವಾಸಿಸಲು ಶುರು ಮಾಡಿದ್ದರು. ಅಲ್ಲದೆ ಅನೇಕ ವರ್ಷಗಳಿಂದ ಅನ್ನ ತ್ಯಜಿಸಿರುವ ಸಾಧು, ಹಣ್ಣನ್ನು ಮಾತ್ರ ಸೇವನೆ ಮಾಡುತ್ತಿದ್ದರು. ಹಾಗೆಯೇ ಅವರ ವಯಸ್ಸು ಅವರಿಗೆ ಸರಿಯಾಗಿ ತಿಳಿದಿಲ್ಲ. ಈ ಘಟನೆ ನಡೆದಿರುವುದು ಅಚ್ಚರಿ ಮೂಡಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಈಗ ಚಮತ್ಕಾರಿ ಸಾಧುವನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಬೇರೆ ಬೇರೆ ಊರುಗಳಿಂದಲೂ ಕೂಡ ಜನರು ಸಾಧುವಿನ ದರ್ಶನ ಪಡೆಯಲು ಬರುತ್ತಿದ್ದಾರೆ.

  • ಆರ್‌ಟಿಪಿಎಸ್‌ ಹಾರೋಬೂದಿಯಿಂದ ನರಕ ದರ್ಶನ: ಕಣ್ಮುಚ್ಚಿ ಕುಳಿತ ಕೆಪಿಸಿ

    ಆರ್‌ಟಿಪಿಎಸ್‌ ಹಾರೋಬೂದಿಯಿಂದ ನರಕ ದರ್ಶನ: ಕಣ್ಮುಚ್ಚಿ ಕುಳಿತ ಕೆಪಿಸಿ

    – ಮಧ್ಯರಾತ್ರಿ ಚಿಮಣಿ ಮೂಲಕ ಹಾರೋಬೂದಿ ಬಿಡುತ್ತಿರುವ ಸಿಬ್ಬಂದಿ

    – ಸುತ್ತಮುತ್ತಲ ಗ್ರಾಮಗಳ ಮನೆಯಲ್ಲೆಲ್ಲಾ ಬರೀ ಬೂದಿ

    – ಅಸ್ತಮಾ, ಚರ್ಮರೋಗ, ಕ್ಯಾನ್ಸರ್ ಗೂ ಕಾರಣವಾಗುತ್ತಿರುವ ವಿಷ ಬೂದಿ

    ರಾಯಚೂರು: ಜಿಲ್ಲೆಯ ಶಕ್ತಿನಗರದ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ ಟಿಪಿಎಸ್ ಜಿಲ್ಲೆಗೆ ನೇರವಾಗಿ ಬೆಳಕು ನೀಡದಿದ್ದರೂ. ಸುತ್ತಮುತ್ತಲ ಗ್ರಾಮಗಳ ಜನರಿಗೆ ಜೀವ ಕಂಟಕವಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ಕೇಂದ್ರದ ವಿಷಕಾರಿ ಹಾರೋಬೂದಿ ನೇರವಾಗಿ ಜನರ ಹೊಟ್ಟೆಯೊಳಗೆ ಹೋಗುತ್ತಿದೆ.

    ಇಡೀ ರಾಜ್ಯಕ್ಕೆ ಶೇಕಡಾ 40 ರಷ್ಟು ಭಾಗದ ವಿದ್ಯುತ್ ಅನ್ನು ನೀಡುವ ರಾಯಚೂರಿನ ಶಕ್ತಿನಗರದ ಆರ್ ಟಿಪಿಎಸ್ ಇಲ್ಲಿನ ಜನರಿಗೆ ಮಾತ್ರ ದಿನೇ ದಿನೇ ಮಾರಕವಾಗುತ್ತಿದೆ. ಆರ್ ಟಿಪಿಎಸ್ ಸುತ್ತಮುತ್ತಲ ವಡ್ಲೂರ್, ಯದ್ಲಾಪೂರ, ರಂಗಾಪುರ, ಚಿಕ್ಕಸೂಗುರು ಗ್ರಾಮಗಳು ತತ್ತರಿಸಿ ಹೋಗಿವೆ. ಸುರಕ್ಷಿತವಾಗಿ ವಿದ್ಯುತ್ ಕೇಂದ್ರದಿಂದ ಸರಬರಾಜಾಗಬೇಕಾದ ಹಾರೋಬೂದಿ ನಿರ್ವಹಣೆ ಹದಗೆಟ್ಟಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದಲಂತೂ ನೇರವಾಗಿ ಚಿಮಣಿಗಳ ಮೂಲಕ ಬೂದಿಯನ್ನ ಗಾಳಿಗೆ ಬಿಡಲಾಗುತ್ತಿದೆ. ರಾತ್ರಿಯಾಗುತ್ತಿದ್ದಂತೆ ಬೂದಿಯನ್ನ ಗಾಳಿಯಲ್ಲಿ ಬಿಟ್ಟು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

    ಪ್ರತಿದಿನ 1720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಆರ್ ಟಿಪಿಎಸ್ ನಲ್ಲಿ ಸಾವಿರಾರು ಟನ್ ಕಲ್ಲಿದ್ದಲು ಸುಟ್ಟ ಬಳಿಕ ಬರುವ ಬೂದಿಯಲ್ಲಾ ಈಗ ಗಾಳಿಗೆ ಸೇರುತ್ತಿದೆ. ಇದರಿಂದ ಅಸ್ತಮಾ, ಚರ್ಮ ರೋಗ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳಿಂದ ಜನ ಬಳಲುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಇದುವರೆಗೂ 8 ಜನ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದು, ಇತ್ತೀಚೆಗೆ ಸಾವನ್ನಪ್ಪಿದ ಚವಾರೆಪ್ಪ ಎಂಬವರ ಸಾವಿಗೂ ಆರ್ ಟಿಪಿಎಸ್ ಹಾರೋಬೂದಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇತ್ತ ರಸಾಯನಶಾಸ್ತ್ರ ತಜ್ಞರು ಸಹ ಹಾರೋಬೂದಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

    ಹಾರೋ ಬೂದಿ ಹೊಂಡಗಳು ತುಂಬಿದ್ದು ಅದನ್ನ ಸಾಗಣೆ ಮಾಡುವ ವಾಹನಗಳು ರಸ್ತೆಯಲ್ಲೆಲ್ಲಾ ಚೆಲ್ಲಿಕೊಂಡು ಹೋಗುವುದು ಒಂದೆಡೆಯಾದರೆ. ಈಗ ಮಧ್ಯರಾತ್ರಿ ವೇಳೆ ಚಿಮಣಿಗಳ ಮೂಲಕ ನೇರವಾಗಿ ಗಾಳಿಗೆ ಬಿಡುತ್ತಿರುವ ಹಾರೋಬೂದಿ ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿದೆ. ವಾಹನಗಳು, ಮನೆಯಲ್ಲಿನ ವಸ್ತುಗಳೆಲ್ಲಾ ಧೂಳು ಧೂಳಾಗುತ್ತಿವೆ. ಇದರಿಂದ ಆಕ್ರೋಶಗೊಂಡಿರುವ ಜನ ಆರ್ ಟಿಪಿಎಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಲ ಗ್ರಾಮಸ್ಥರು ಊರನ್ನೇ ಖಾಲಿ ಮಾಡಿ ಹೋಗುತ್ತಿದ್ದಾರೆ. ಗ್ರಾಮಸ್ಥರ ಸಮಸ್ಯೆಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

    https://www.youtube.com/watch?v=cEo_Q4reUAg

  • ನಿವೃತ್ತ ಯೋಧನಿಗೆ ಗ್ರಾಮಸ್ಥರಿಂದ ಭರ್ಜರಿ ಸ್ವಾಗತ

    ನಿವೃತ್ತ ಯೋಧನಿಗೆ ಗ್ರಾಮಸ್ಥರಿಂದ ಭರ್ಜರಿ ಸ್ವಾಗತ

    ಕೊಪ್ಪಳ: ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು ಬಹುವರ್ಷಗಳ ಬಳಿಕ ಗ್ರಾಮಕ್ಕೆ ಬಂದ ಯೋಧರೊಬ್ಬರಿಗೆ ಗ್ರಾಮಸ್ಥರು ಭರ್ಜರಿ ಮೆರೆವಣಿಗೆ ಮಾಡಿ ಸ್ವಾಗತಿಸಿದ್ದಾರೆ.

    ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿಮೋತಿಯಲ್ಲಿ ನಿವೃತ್ತ ಯೋಧ ಗವಿಸಿದಪ್ಪ ದೊಡ್ಡಮನಿಗೆ ಗ್ರಾಮಸ್ಥರು ಪ್ರೀತಿಯಿಂದ ಸ್ವಾಗತ ಕೋರಿದ್ದಾರೆ.

    ಭಾರತೀಯ ಸೇನೆಯಲ್ಲಿ ಸುಮಾರು 17 ವರ್ಷ ಸೇವೆ ಸಲ್ಲಿಸಿರುವ ಗವಿಸಿದಪ್ಪ ಅವರು ಸದ್ಯ ನಿವೃತ್ತಿ ಪಡೆದಿದ್ದಾರೆ. ಸಿಕಂದರಾಬಾದ್‍ನಲ್ಲಿ ಯೋಧನಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಬಹುವರ್ಷಗಳ ಬಳಿಕ ಗ್ರಾಮಕ್ಕೆ ಆಗಮಿಸಿರುವ ಹೆಮ್ಮೆಯ ವೀರ ಯೋಧ ಗವಿಸಿದಪ್ಪ ಅವರನ್ನು ಸನ್ಮಾನ ಹಾಗೂ ಮೆರವಣಿಗೆ ಮೂಲಕ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಮಾಡಿದರು.

    ಶುಕ್ರವಾರದಂದು ಗ್ರಾಮಕ್ಕೆ ಬಂದ ಯೋಧರಿಗೆ ಗ್ರಾಮಸ್ಥರು ತೆರೆದ ವಾಹನದಲ್ಲಿ ಒಂದು ಕಿಲೋಮೀಟರ್ ಮೆರವಣಿಗೆ ಮಾಡಿದ್ದಾರೆ. ಈ ವೇಳೆ ತ್ರಿವರ್ಣ ಧ್ವಜ ಹಿಡಿದು, ಜೈಹಿಂದ್ ಘೋಷಣೆಯನ್ನೂ ಕೂಗಿದ ಗ್ರಾಮಸ್ಥರ ಪ್ರೀತಿಗೆ ಯೋಧ ಧನ್ಯವಾದ ಹೇಳಿದರು.

  • ಮತ್ತೆ ತನ್ನ ಹಳೆ ಚಾಳಿಯನ್ನ ಮುಂದುವರಿಸಿದ ಕೇರಳ!

    ಮತ್ತೆ ತನ್ನ ಹಳೆ ಚಾಳಿಯನ್ನ ಮುಂದುವರಿಸಿದ ಕೇರಳ!

    ಮೈಸೂರು: ಕೇರಳದ ಕಸವನ್ನು ಮೈಸೂರಿನ ಗಡಿ ತಾಲೂಕುಗಳ ಗ್ರಾಮಗಳಲ್ಲಿ ಬಂದು ಸುರಿಯುವ ಕೆಲಸವನ್ನು ಕೇರಳಿಗರು ಮತ್ತೆ ಆರಂಭಿಸಿಕೊಂಡಿದ್ದಾರೆ.

    ಮೈಸೂರಿನ ಎಚ್.ಡಿ. ಕೋಟೆಯ ಗಡಿ ಗ್ರಾಮಗಳಲ್ಲಿ ಕೇರಳದಿಂದ ರಾತ್ರೋರಾತ್ರಿ ಲಾರಿಗಟ್ಟಲೆ ಕಸದ ರಾಶಿ ತಂದು ಸುರಿಯಲಾಗುತ್ತಿತ್ತು. ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ ನಂತರ ಈ ಭಾಗದಲ್ಲಿ ಕಸ ಸುರಿಯುವುದು ತಪ್ಪಿದೆ. ಈಗ ಇನ್ನೊಂದು ಗಡಿ ತಾಲೂಕಾದ ಟಿ. ನರಸೀಪುರದಲ್ಲಿ ಈ ಸಮಸ್ಯೆ ಶುರುವಾಗಿದೆ.

    ಟಿ. ನರಸೀಪುರದ ಕಗ್ಗಲಿಪುರ ಗ್ರಾಮದ ಹೊರವಲಯದಲ್ಲಿ ಕೇರಳದಿಂದ ಕಸ ತಂದು ಸುರಿಯಲಾಗುತ್ತಿದೆ. ರಾತ್ರೋರಾತ್ರಿ ಕೇರಳದಿಂದ ಕಸ ತಂದು ಸುರಿಯುತ್ತಿರುವುದನ್ನು ಗ್ರಾಮಸ್ಥರೇ ರೆಡ್ ಹ್ಯಾಂಡ್ ಆಗಿ ಹಿಡಿದು ವಿಡಿಯೋ ಮಾಡಿದ್ದಾರೆ. ಕಗ್ಗಲೀಪುರದ ಕೆರೆ ಪಕ್ಕದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಹಾಗೂ ಮೆಡಿಸನ್‍ನ ತ್ಯಾಜ್ಯ ಸುರಿಯಲಾಗಿದೆ.

  • ಸಿನಿಮಾ ಸ್ಟೈಲ್‍ನಲ್ಲಿ ಗಜರಾಜನಿಗೆ ಮುತ್ತು ಕೊಡಲು ಹೋಗಿ ಆಸ್ಪತ್ರೆ ಸೇರಿದ!

    ಸಿನಿಮಾ ಸ್ಟೈಲ್‍ನಲ್ಲಿ ಗಜರಾಜನಿಗೆ ಮುತ್ತು ಕೊಡಲು ಹೋಗಿ ಆಸ್ಪತ್ರೆ ಸೇರಿದ!

    ಕೋಲಾರ: ರಾಕಿಂಗ್ ಸ್ಟಾರ್ ಯಶ್ ಗಜಕೇಸರಿ ಸಿನಿಮಾದಲ್ಲಿ ಆನೆಗೆ ಮುತ್ತುಕೊಟ್ಟ ಹಾಗೆ ಕಾಡಾನೆಯೊಂದಕ್ಕೆ ಯುವಕನೊಬ್ಬ ಮುತ್ತಿಡಲು ಹೋಗಿ ಆಸ್ಪತ್ರೆ ಪಾಲಾದ ಘಟನೆ ಜಿಲ್ಲೆಯ ಮಾಲೂರಿನ ಅರಳೇರಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮಕ್ಕೆ ನುಗ್ಗಿದ್ದ ಕಾಡಾನೆ ಹಿಂಡನ್ನು ಹಿಂಬಾಲಿಸಿ ಸಿನಿಮಾ ಸ್ಟೈಲ್ ಆನೆಗೆ ಮುತ್ತು ಕೂಡಲು ಅರಳೇರಿ ಗ್ರಾಮದ ನಿವಾಸಿ ರಾಜು ಹೋಗಿದ್ದಾನೆ. ಹಾಗೆಯೇ ಆನೆಗೆ ಮುತ್ತು ಕೊಡುತ್ತೇನೆ ಎಂದು ಸಾರ್ವಜನಿಕರಿಗೆ ರಾಜು ಸವಾಲು ಕೂಡ ಹಾಕಿದ್ದ. ಆದ್ರೆ ಏನೋ ಮಾಡಲು ಹೋಗಿ ಅದೇನೋ ಆಯ್ತು ಎನ್ನುವ ರೀತಿ ಮುತ್ತು ಕೊಡಲು ಹೋಗಿದ್ದವನಿಗೆ ಆನೆ ದಂತದಿಂದ ತಿವಿದು ತೀವ್ರ ಗಾಯಗೊಳಿಸಿದೆ.

    ಇಂದು ಬೆಳಗ್ಗೆಯಿಂದ ಏಳು ಆನೆಗಳ ಹಿಂಡು ಗ್ರಾಮದ ಬಳಿ ಬೀಡು ಬಿಟ್ಟಿತ್ತು. ಗ್ರಾಮಸ್ಥರು ಈ ಆನೆಗಳ ಹಿಂಡು ಕಂಡು ಆತಂಕಕ್ಕಿಡಾಗಿದ್ದರು. ಆದ್ರೆ ಈ ವೇಳೆ ಆನೆಗೆ ಮುತ್ತು ಕೊಡುತ್ತೇನೆ ರಾಜು ಗ್ರಾಮಸ್ಥರಿಗೆ ಸವಾಲು ಹಾಕಿ ಹೋಗಿದ್ದಾನೆ. “ನೀವೆಲ್ಲ ನಿಂತುಕೊಂಡು ನೋಡ್ತಿದ್ದೀರಿ, ನೋಡಿ ನಾನು ಏನು ಮಾಡ್ತೀನಿ” ಅಂತ ಕಾಡಾನೆ ಹಿಂಡಿನ ಬಳಿ ರಾಜು ತೆರಳಿದ್ದಾನೆ. ಮುತ್ತು ಕೊಡಲು ಬಂದ ರಾಜುಗೆ ಆನೆ ತನ್ನ ವರಸೆಯನ್ನು ತೋರಿಸಿದ್ದು, ತನ್ನ ಬಳಿ ಬಂದಾಗ ದಂತದಿಂದ ಆತನ ತಲೆ ಭಾಗಕ್ಕೆ ತಿವಿದು ಹಲ್ಲೆ ನಡೆಸಿದೆ.

    ಆನೆ ತಿವಿದ ಹಿನ್ನಲೆ ರಾಜು ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದಾನೆ. ಬಳಿಕ ರಾಜುನನ್ನು ಕೋಲಾರ ಅಸ್ಪತ್ರೆಗೆ ಗ್ರಾಮಸ್ಥರು ದಾಖಲಿಸಿದ್ದಾರೆ. ಇನ್ನೂ ಕೂಡ ಗ್ರಾಮದ ನೀಲಗಿರಿ ತೋಪಿನಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

  • ಅಸಭ್ಯ ವರ್ತನೆ- ನಾಟಕ ಕಲಾವಿದೆಯಿಂದ ಯುವಕನಿಗೆ ಚಪ್ಪಲಿ ಏಟು!

    ಅಸಭ್ಯ ವರ್ತನೆ- ನಾಟಕ ಕಲಾವಿದೆಯಿಂದ ಯುವಕನಿಗೆ ಚಪ್ಪಲಿ ಏಟು!

    ಬಾಗಲಕೋಟೆ: ನಾಟಕ ಪ್ರದರ್ಶನ ನಡೆಯುತ್ತಿದ್ದ ವೇಳೆ ಕಲಾವಿದೆ ಜೊತೆ ಅನುಚಿತವಾಗಿ ವರ್ತಿಸಿದ ಯುವಕನೊಬ್ಬ ಚಪ್ಪಲಿ ಏಟು ತಿಂದ ಘಟನೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ.

    ಸೋಮವಾರ ರಾತ್ರಿ ಹಿಪ್ಪರಗಿ ಗ್ರಾಮದಲ್ಲಿ “ಸೇಡಿಗಾಗಿ ಸಿಡಿದೆದ್ದ ಬಡವ” ಎಂಬ ನಾಟಕ ಪ್ರದರ್ಶನ ನಡೆಯುತ್ತಿತ್ತು. ನಾಟಕಕ್ಕೂ ಮುನ್ನ ಹಿಪ್ಪರಗಿ ಗ್ರಾಮದ ನಿವಾಸಿ ಬಸವರಾಜ್ ನಾಟಕ ಕಲಾವಿದೆ ರೇಖಾ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ನನ್ನನ್ನು ಚುಂಬಿಸಲು ಬಂದಿದ್ದ ಎಂದು ಆರೋಪಿಸಿ ಕಲಾವಿದೆ ಬಸವರಾಜ್‍ಗೆ ಚಪ್ಪಲಿಯಿಂದ ಭರ್ಜರಿಯಾಗಿ ಥಳಿಸಿದ್ದಾರೆ. ಇದನ್ನೂ ಓದಿ:ನಾಟಕದ ವೇದಿಕೆಯ ಮೇಲೆಯೇ ಮೈ ಮರೆತು ಜೋಡಿಯಿಂದ ಲಿಪ್‍ಲಾಕ್

    ಬಳಿಕ ಈ ವಿಷಯ ತಿಳಿದ ಗ್ರಾಮಸ್ಥರು ಇಂದು ಬೆಳಿಗ್ಗೆ ಇದೇ ವಿಚಾರವಾಗಿ ಗುರುಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ ಕೂಡ ಯುವಕನಿಗೆ ಕಲಾವಿದೆ ಚಪ್ಪಲಿ ಏಟು ನೀಡಿದ್ದಾರೆ. ನಂತರ ಗ್ರಾಮಸ್ಥರು ಯುವಕನಿಗೆ ಬುದ್ಧಿವಾದ ಹೇಳಿ, ಕಲಾವಿದೆಯ ಕಾಲಿಗೆ ಬೀಳಿಸಿ, ಕ್ಷಮೆ ಕೇಳಿಸಿ, ಪರಿಸ್ಥಿತಿ ಶಾಂತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ನೀರಿಲ್ಲದೇ ಪೇಪರ್ ಪ್ಲೇಟ್‍ನಲ್ಲಿ ಊಟ ಮಾಡ್ತಾರೆ- ವಾರಕ್ಕೊಮ್ಮೆ ಸ್ನಾನ, ತಿಂಗಳಿಗೊಮ್ಮೆ ಬಟ್ಟೆ ಸ್ವಚ್ಛತೆ

    ನೀರಿಲ್ಲದೇ ಪೇಪರ್ ಪ್ಲೇಟ್‍ನಲ್ಲಿ ಊಟ ಮಾಡ್ತಾರೆ- ವಾರಕ್ಕೊಮ್ಮೆ ಸ್ನಾನ, ತಿಂಗಳಿಗೊಮ್ಮೆ ಬಟ್ಟೆ ಸ್ವಚ್ಛತೆ

    ಬಳ್ಳಾರಿ: ಬೇಸಿಗೆ ಕಾಲ ಎಂದರೆ ನೀರಿನ ಸಮಸ್ಯೆ ಬರೋದು ಸಹಜ. ಆದರೆ ಈ ಊರಲ್ಲಿ ಎಷ್ಟರ ಮಟ್ಟಿಗೆ ನೀರಿನ ಬರ ಇದೆ ಎಂದರೆ ಊಟಕ್ಕೆ ತಟ್ಟೆ ಬಳಸಿದ್ರೇ, ತೊಳೆಯ- ಬೇಕಾಗುತ್ತದೆ ಎಂದು ಪ್ಲಾಸ್ಟಿಕ್ ಪ್ಲೇಟ್‍ಗಳನ್ನು ಬಳಸುತ್ತಿದ್ದಾರೆ. ಕುಡಿಯೋಕು ಜಗಳವಾಡಿ ನೀರು ತರೋ ಇಲ್ಲಿಯ ಜನರು ಸ್ನಾನಕ್ಕೆ ವಾರಗಟ್ಟಲೇ ಕಾಯೋಸ್ಥಿತಿ ಬಂದಿದೆ.

    ಬಳ್ಳಾರಿ ನಗರದಿಂದ 10 ಕಿ.ಮಿ ದೂರದಲ್ಲಿರೋ ಹರಗಿನಡೋಣಿ ಗ್ರಾಮ ಈ ಊರಿನಲ್ಲಿ ಕೆರೆಯೊಂದನ್ನು ನಿರ್ಮಾಣ ಮಾಡಬೇಕೆಂದು ಅದೆಷ್ಟೋ ಬಾರಿ ಹೋರಾಟ ಮಾಡಿದ್ರು ಯಾವುದೇ ಪ್ರಯೋಜನವಾಗಿಲ್ಲ. ನೀರಿಗಾಗಿ ಕಳೆದ ಉಪಚುನಾವಣೆಯಲ್ಲಿ ಒಂದು ಮತವನ್ನು ಹಾಕದೇ ಬಹಿಷ್ಕಾರ ಹಾಕಿದ್ರು. ಇದರಿಂದ ಎಚ್ಚತ್ತ ಜಿಲ್ಲಾಡಳಿತ ಇಲ್ಲಿಗೆ ನಿತ್ಯ ಟ್ಯಾಂಕರ್ ನೀರು ಪೂರೈಸುತ್ತಿದೆ.

    5000ಕ್ಕೂ ಹೆಚ್ಚು ಜನರು ಇರೋ ಈ ಊರಲ್ಲಿ ಒಂದರೆಡು ಟ್ಯಾಂಕರ್ ನೀರು ಯಾವುದಕ್ಕೂ ಸಾಲಲ್ಲ. ಹೀಗಾಗಿ ಇದೀಗ ವಾರಕ್ಕೊಮ್ಮೆ ಸ್ನಾನ ಮಾಡೋ ಜನರು ಊಟ ಮಾಡಿದ್ರೇ, ತಟ್ಟೆ ತೊಳೆಯಲು ನೀರು ಬೇಕೆಂದು ಪೇಪರ್ ಪ್ಲೇಟ್ ಬಳಸುತ್ತಿದ್ದಾರೆ. ಅಲ್ಲದೇ ಕೈಯನ್ನು ಕೂಡ ಪೇಪರ್ ಗೆ ಒರೆಸಿಕೊಳ್ಳುತ್ತಿದ್ದಾರೆ.

    ಮಳೆಗಾಲದಲ್ಲಿ ಊರಲ್ಲಿರೋ ಬೋರ್ ವೆಲ್ ಕೆಲಸ ಮಾಡುತ್ತವೆ. ಆದರೆ ಬೇಸಿಗೆಯಲ್ಲಿ ಮಾತ್ರ ಇಲ್ಲಿ ನೀರಿಗಾಗಿ ಪ್ರತಿ ವರ್ಷ ಹಾಹಾಕಾರ ಪ್ರಾರಂಭವಾಗುತ್ತದೆ. ಅದರಲ್ಲೂ ಈ ಬಾರಿ ಮೀತಿ ಮೀರಿದ ಬಿಸಿಲು ಮತ್ತು ಗ್ರಾಮಕ್ಕೆ ಬೇಕಾದಷ್ಟು ಟ್ಯಾಂಕರ್ ನೀರು ಬಾರದೇ ಇರುವುದಕ್ಕೆ ಇಲ್ಲಿಯ ಜನರು ತತ್ತರಿಸಿ ಹೋಗಿದ್ದಾರೆ.

    ಟ್ಯಾಂಕರ್ ಬಂದಾಗ ಜಗಳವಾಡೋ ಇಲ್ಲಿಯ ಜನರು ಸಿಕ್ಕಷ್ಟು ನೀರನ್ನು ಬಳಸಿ ಕೊಂಡು ಜೀವನ ಮಾಡುತ್ತಿದ್ದಾರೆ. ಸ್ನಾನ, ಬಟ್ಟೆ ಒಗೆಯೋದ್ರಲ್ಲೂ ಇತಿಮಿತಿ ಮಾಡಿಕೊಂಡಿದ್ದು, ಇದೀಗ ಕುಡಿಯೋ ನೀರಿಗೂ ಕೂಡ ಕಡಿವಾಣ ಹಾಕೋ ಪರಿಸ್ಥಿತಿ ಬಂದಿದೆ.

  • ಮೊಬೈಲ್ ಕಸಿದು, ಅಕ್ಕಿಯೊಂದಿಗೆ ಪರಾರಿ – ಕೊಡಗಿಗೆ ಕೆಂಪು ಉಗ್ರರು ಎಂಟ್ರಿ?

    ಮೊಬೈಲ್ ಕಸಿದು, ಅಕ್ಕಿಯೊಂದಿಗೆ ಪರಾರಿ – ಕೊಡಗಿಗೆ ಕೆಂಪು ಉಗ್ರರು ಎಂಟ್ರಿ?

    ಮಡಿಕೇರಿ: ಮಧ್ಯ ಭಾರತದಲ್ಲಿ ರಕ್ಷಣಾ ಪಡೆಗಳ ಕಾರ್ಯಾಚರಣೆಗೆ ಹೆದರಿ ನಕ್ಸಲರು ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದ ಕಡೆ ವಲಸೆ ಹೋಗುತ್ತಿದ್ದಾರೆ ಎನ್ನುವ ವರದಿಯ ಬೆನ್ನಲ್ಲೇ ಕೊಡಗಿಗೆ ಮತ್ತೆ ಕೆಂಪು ಉಗ್ರರು ಪ್ರವೇಶಿಸಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಜಿಲ್ಲೆಯ ತಡಿಯಂಡಮೋಳ್ ಬೆಟ್ಟ ತಪ್ಪಲಿನಲ್ಲಿ ನಕ್ಸಲರು ಅಕ್ಕಿ ಹಾಗೂ ಮೊಬೈಲ್‍ನೊಂದಿಗೆ ಕಾಡಿನೊಳಗೆ ಪರಾರಿಯಾಗಿದ್ದಾರೆ. ಬೆಟ್ಟದ ತಪ್ಪಲಿನ ಯವಕಪಾಡಿ ಗ್ರಾಮದಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಇಂದು ಇಬ್ಬರು ಕೆಂಪು ಉಗ್ರರು ಗ್ರಾಮದ ಎರಡು ಮನೆಗಳಿಗೆ ಬಂದಿದ್ದರು. ನಕ್ಸಲರು ಸುಮಾರು 30 ವರ್ಷ ಪ್ರಾಯದ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಎಂದು ಶಂಕಿಸಲಾಗಿದೆ. ನಕ್ಸಲರ ತಂಡ ಮನೆಯಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಗ್ರಾಮದ ಕುಟ್ಟಪ್ಪ ಅವರ ಮನೆಗೆ ನುಗ್ಗಿ ಅಕ್ಕಿ ಹೊತ್ತುಕೊಂಡು ಹೋಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

    ಗ್ರಾಮದ ಅರುಣ ಎಂಬವರ ಮನೆಗೂ ನಕ್ಸಲರು ನುಗ್ಗಿದ್ದಾರೆ. ಮನೆಗೆ ನುಗ್ಗಿದ ನಕ್ಸಲರು ಅರುಣ ಅವರ ಪತ್ನಿಯ ಮೊಬೈಲ್ ಕಸಿದು, ಬೆದರಿಕೆ ಹಾಕಿ ಅಲ್ಲಿಂದ ಪರಾರಿ ಆಗಿದ್ದಾರೆ. ಸದ್ಯ ನಕ್ಸಲರಿಂದ ಬೆಟ್ಟ ತಪ್ಪಲಿನ ಗ್ರಾಮಗಳ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕೊಡಗು ಪೊಲೀಸ್ ಹಾಗೂ ಎಎನ್‍ಎಫ್ ಪಡೆ ಗ್ರಾಮಕ್ಕೆ ದೌಡಾಯಿಸಿದೆ.