Tag: villagers

  • ಲೋಕ ಕಲ್ಯಾಣರ್ಥವಾಗಿ ದೇವಿಯ ಮೆರವಣಿಗೆ – ತ್ಯಾಮಗೊಂಡ್ಲು ಗ್ರಾಮಸ್ಥರ ಸಂಭ್ರಮ

    ಲೋಕ ಕಲ್ಯಾಣರ್ಥವಾಗಿ ದೇವಿಯ ಮೆರವಣಿಗೆ – ತ್ಯಾಮಗೊಂಡ್ಲು ಗ್ರಾಮಸ್ಥರ ಸಂಭ್ರಮ

    ನೆಲಮಂಗಲ: ಬೆಂಗಳೂರು ನಗರದಲ್ಲಿ ಪ್ರಾರಂಭವಾದ ವಾಸವಿ ಪ್ರಚಾರ ರಥ ಹಾಗೂ ಅಮ್ಮನವರ ರಜತ ವಿಗ್ರಹದ ಪೂಜೆ, ಭಜನೆ, ಉತ್ಸವವನ್ನು ತ್ಯಾಮಗೊಂಡ್ಲು ಆರ್ಯವೈಶ್ಯ ಮಂಡಳಿಯವರು ವಾಸವಾಂಬ ತಾಯಿ ಹಾಗೂ ಮನೆ ಮನೆಗೆ ವಾಸವಿ ಟ್ಯಾಬ್ಲೋವನ್ನು ಆತ್ಮೀಯವಾಗಿ ಬರಮಾಡಿಕೊಂಡರು.

    ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಪ್ರಮುಖ ಬೀದಿಗಳಲ್ಲಿ ಬೆಂಗಳೂರಿನಿಂದ ಆಗಮಿಸಿದ ಕನ್ನೀಕಾ ಪರಮೇಶ್ವರಿ ತಾಯಿಯನ್ನು ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳಾದ ಕಂಸಾಳೆ, ವೀರಗಾಸೆ, ವೀಣಾ ಮಕ್ಕಳ ಮಂದಿರ ಶಾಲೆಯ ಮಕ್ಕಳಿಂದ ಚಂಡೆವಾದನ ಹಾಗೂ ವಾಸವಿ ಮಹಿಳಾ ಮಣಿಗಳಿಂದ ಕೋಲಾಟ ಕಾರ್ಯಕ್ರಮದ ಮುಖಾಂತರ ಮನೆ ಮನೆಗೆ ವಾಸವಿ ಮಾತೆಯನ್ನು ಆತ್ಮೀಯವಾಗಿ ಬರಮಾಡಿಕೊಂಡರು.

    ಈ ಸಂದರ್ಭದಲ್ಲಿ ಮನೆ ಮನೆಗೆ ಹೋಗಿ ವಾಸವಿ ಟ್ರಸ್ಟ್ ನ ಅಧ್ಯಕ್ಷ ಕುಮಾರ ಗುಪ್ತಾ ಮಾತನಾಡಿ, ರಾಜಧಾನಿ ಬೆಂಗಳೂರನ್ನು ಬಿಟ್ಟು ಮೊದಲ ಬಾರಿಗೆ ವಾಸವಿ ತಾಯಿ ಗ್ರಾಮಾಂತರ ಪ್ರದೇಶವಾದ ತ್ಯಾಮಗೊಂಡ್ಲುವಿಗೆ ಆಗಮಿಸಿದೆ. ಬೆಂಗಳೂರಿನಲ್ಲಿ 96 ಮನೆಗಳಿಗೆ ದೇವಿಯನ್ನು ಕರೆತಂದಿದ್ದೇವೆ. ನಮ್ಮ ಸಮುದಾಯದವರಲ್ಲಿ ತಾಯಿಯ ಮಹಿಮೆ ತಿಳಿಸುವ ಅರಿವಿನ ಕಾರ್ಯ ಇದ್ದಾಗಿದ್ದು, ನಮ್ಮ ಸಮುದಾಯದವರಲ್ಲಿ ವಿವಾಹದಲ್ಲಿ ಯಾವುದೇ ವರ-ವಧು ಮಧ್ಯೆ ವಿಚ್ಛೇದನ ಬಾರದಂತೆ ತಾಯಿಯ ಸಮ್ಮಖದಲ್ಲೇ ವಿವಾಹ ಎಂಬ ಕಾರ್ಯವನ್ನು ಏರ್ಪಡಿಸಿ ವಿಚ್ಛೇದನವನ್ನು ಕಡಿಮೆಮಾಡಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿದ್ದೇವೆ. ಈ ಮನೆ ಮನೆಗೆ ವಾಸವಿಯಿಂದ ಸಮುದಾಯದವರಲ್ಲಿ ಒಗ್ಗಟ್ಟು ಸಾಧಿಸಿದ್ದೇವೆ ಎಂದರು.

    ಈ ಸಂದರ್ಭದಲ್ಲಿ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಆರ್.ಎಸ್. ಅನಿಲ್ ಕುಮಾರ್, ವಾಸವಿ ಜನಸಂಘದ ಕಾರ್ತೀಕ್, ಗಣಪತಿ ಕಾಫಿ ವಕ್ರ್ಸ್ ನ ಆರ್.ಎಸ್. ಮೋಹನ್ ಕುಮಾರ್, ಎಸ್.ಪಿ. ಮೆಡಿಕಲ್ಸ್ ನ ಹರೀಶ್ ಬಾಬು, ಮಂಡಳಿಯ ಶ್ರೀನಿವಾಸ್ ಬಾಬು, ನಟೇಶ್, ಟಿ.ವಿ. ನರೇಂದ್ರ, ನಾಗರ್ಜುನ್, ಈಶ್ವರ್, ಬದ್ರಿನಾಥ್, ವಾಸವಿ ಮಹಿಳಾ ಸಂಘದ ಸುಮ, ರಮ್ಯಾ, ರಶ್ಮಿ, ಸರಸ್ವತೀ, ಜ್ಯೋತಿ, ಇನ್ನೀತರರು ಹಾಜರಿದ್ದರು.

  • ಪಾತ್ರೆಯೊಳಗೆ ಸಿಲುಕಿದ 3 ವರ್ಷದ ಮಗುವಿನ ತಲೆ

    ಪಾತ್ರೆಯೊಳಗೆ ಸಿಲುಕಿದ 3 ವರ್ಷದ ಮಗುವಿನ ತಲೆ

    ಜೈಪುರ: ಮೂರು ವರ್ಷದ ಮಗುವಿನ ತಲೆ ಸ್ಟೀಲ್ ಪಾತ್ರೆಯೊಳಗೆ ಸಿಲುಕಿಕೊಂಡ ಘಟನೆ ರಾಜಸ್ಥಾನದ ಜಾಲೋರ್ ಎಂಬ ಗ್ರಾಮದಲ್ಲಿ ನಡೆದಿದೆ.

    ಮೂರು ವರ್ಷದ ಮಗು ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಸ್ಟೀಲ್ ಪಾತ್ರೆಯೊಳಗೆ ತಲೆ ಹಾಕಿದೆ. ಆದರೆ ವಾಪಸ್ ತೆಗೆಯಲು ಆಗಿಲ್ಲ. ಸ್ಟೀಲ್ ಪಾತ್ರೆಯೊಳಗೆ ತಲೆ ಸಿಲುಕಿಕೊಂಡು ಅಳುತ್ತಿದ್ದ ಮಗುವನ್ನು ಊರಿನ ಗ್ರಾಮಸ್ಥರು ರಕ್ಷಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಊರಿನ ಗ್ರಾಮಸ್ಥರೊಬ್ಬರು, ಆಟವಾಡುತ್ತಿದ್ದ ಮಗುವಿನ ತಲೆ ಸ್ಟೀಲ್ ಪಾತ್ರೆಯಲ್ಲಿ ಸಿಲುಕಿಕೊಂಡಿದೆ. ನಂತರ ಮಗು ಅಳಲು ಆರಂಭಿಸಿದೆ ಆಗ ತಾಯಿ ಬಂದು ನೋಡಿದಾಗ ವಿಷಯ ತಿಳಿದೆ. ಆಗ ನಾವು ಮಗುವಿನ ನೆರವಿಗೆ ಬಂದು ಸ್ಟೀಲ್ ಪಾತ್ರೆಯನ್ನು ಅರ್ಧಗಂಟೆಗೆ ಹೆಚ್ಚು ಕಾಲ ನಿಧಾನವಾಗಿ ಕತ್ತರಿಸಿ ಮಗುವನ್ನು ರಕ್ಷಿಸಿದ್ದೇವೆ. ಸ್ಟೀಲ್ ಪಾತ್ರೆಯನ್ನು ಕತ್ತರಿಸುವುದು ತುಂಬ ಕಠಿಣವಾಗಿತ್ತು ಎಂದು ಹೇಳಿದ್ದಾರೆ.

  • ಷಷ್ಠಿ ಹಬ್ಬದಂದು ಹುತ್ತಕ್ಕೆ ಕೋಳಿ ಮೊಟ್ಟೆ, ರಕ್ತಾಭಿಷೇಕ

    ಷಷ್ಠಿ ಹಬ್ಬದಂದು ಹುತ್ತಕ್ಕೆ ಕೋಳಿ ಮೊಟ್ಟೆ, ರಕ್ತಾಭಿಷೇಕ

    ಚಾಮರಾಜನಗರ: ಷಷ್ಠಿ ಹಬ್ಬದ ದಿನದಂದು ಹುತ್ತಕ್ಕೆ ಹಾಲೆರೆದು ನಾಗಪೂಜೆ ಮಾಡುವುದು ಸಾಮಾನ್ಯ. ಆದರೆ ಚಾಮರಾಜನಗರ ಜಿಲ್ಲೆಯ ಹಲವೆಡೆ ಹುತ್ತಕ್ಕೆ ಕೋಳಿ ರಕ್ತ ಎರೆದು ಕೋಳಿ ಮೊಟ್ಟೆ ಹಾಕಿ ನಾಗಾರಾಧನೆ ಮಾಡುತ್ತಾರೆ.

    ಷಷ್ಠಿ ಹಬ್ಬದ ದಿನ ಎಲ್ಲಾ ಕಡೆ ಹುತ್ತಕ್ಕೆ ಹಾಲೆರೆದು ನಾಗ ಪೂಜೆ ಮಾಡಿದರೆ ಚಾಮರಾಜನಗರ ಜಿಲ್ಲೆಯಲ್ಲಿ ಹುತ್ತದ ಮುಂದೆ ಕೋಳಿ ಕುಯ್ದು ಅದರ ರಕ್ತವನ್ನು ಹುತ್ತಕ್ಕೆ ಎರೆಯುತ್ತಾರೆ. ಕೋಳಿ ತಲೆ ಹಾಗೂ ಕೋಳಿ ಮೊಟ್ಟೆಯನ್ನು ಹುತ್ತಕ್ಕೆ ಹಾಕಿ ನಾಗಾರಾಧನೆ ಮಾಡುತ್ತಾರೆ.

    ಹೀಗೆ ಪೂಜೆ ಮಾಡಿದರೆ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವಾಗ ಹಾವುಗಳು ತಮಗೆ ಕಾಣಿಸುವುದಿಲ್ಲ. ಅಲ್ಲದೆ ಅವುಗಳಿಂದ ತಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂಬ ಮೂಢನಂಬಿಕೆ ಗ್ರಾಮೀಣ ಜನರಲ್ಲಿದೆ.

    ಮೇಲ್ನೋಟಕ್ಕೆ ಇದು ಮೂಢನಂಬಿಕೆ ಎನಿಸಿದರೂ ಇದರ ಹಿಂದೆ ಒಂದು ಸದುದ್ದೇಶ ಅಡಗಿದೆ. ಬಹುಶಃ ಹುತ್ತದ ಒಳಗಿರುವ ಹಾವುಗಳಿಗೆ ಹಾಲೆರೆದರೆ ಅವುಗಳಿಗೆ ತೊಂದರೆ ಉಂಟಾಗಬಹುದು, ಹುತ್ತಕ್ಕೆ ಹಾಲಿನ ಬದಲಾಗಿ ಕೋಳಿ ಮೊಟ್ಟೆ ಹಾಗೂ ಕೋಳಿಯ ತಲೆ ಭಾಗವನ್ನು ಹಾಕಿದರೆ ಹಾವುಗಳಿಗೆ ಆಹಾರವಾದರು ಆಗಲಿ ಎಂಬ ದೃಷ್ಟಿಯಿಂದ ಹಿರಿಯರು ಈ ಸಂಪ್ರದಾಯ ಹುಟ್ಟು ಹಾಕಿರಬಹುದು ಎಂಬುದು ನಾಸ್ತಿಕರ ವಾದವಾಗಿದೆ.

  • ಶಿಕ್ಷಕನ ದಿಢೀರ್ ವರ್ಗಾವಣೆ- ಮನಕಲಕುವಂತಿದೆ ಮಕ್ಕಳ ರೋಧನ

    ಶಿಕ್ಷಕನ ದಿಢೀರ್ ವರ್ಗಾವಣೆ- ಮನಕಲಕುವಂತಿದೆ ಮಕ್ಕಳ ರೋಧನ

    ಚಾಮರಾಜನಗರ: ನೆಚ್ಚಿನ ಶಿಕ್ಷಕ ದಿಢೀರ್ ವರ್ಗಾವಣೆ ಆಗಿರುವುದನ್ನು ತಿಳಿದ ಶಾಲಾ ಮಕ್ಕಳು ರೋಧಿಸಿ ಪ್ರತಿಭಟನೆ ನಡೆಸಿರುವ ಘಟನೆ ಹನೂರು ತಾಲೂಕಿನ ಮೀಣ್ಯಂನಲ್ಲಿ ನಡೆದಿದೆ.

    ಶಿಕ್ಷಕ ಪಿ. ಮಹಾದೇವಸ್ವಾಮಿ ಎಂಬವರನ್ನು ಮೀಣ್ಯಂ ಶಾಲೆಯಿಂದ ಲೊಕ್ಕನಹಳ್ಳಿ ಶಾಲೆಗೆ ದಿಢೀರ್ ನಿಯೋಜಿಸಲಾಗಿತ್ತು. ಈ ವಿಚಾರ ತಿಳಿದ ವಿದ್ಯಾರ್ಥಿಗಳು ನೆಚ್ಚಿನ ಶಿಕ್ಷಕರು ಬೇಕೆ ಬೇಕೆಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದಾರೆ. ವಿದ್ಯಾರ್ಥಿಗಳ ಜೊತೆಗೆ ಗ್ರಾಮಸ್ಥರು ಇದಕ್ಕೆ ದನಿಗೂಡಿಸಿದ್ದಾರೆ. ತಮ್ಮ ಶಾಲೆಗೆ ಮತ್ತೆ ಮಹಾದೇವಸ್ವಾಮಿ ನಿಯೋಜನೆ ಆಗದಿದ್ದರೇ ಶನಿವಾರದಿಂದ ಯಾರೂ ಶಾಲೆಗೆ ಬರುವುದಿಲ್ಲ ಎಂದು ಮಕ್ಕಳು ಎಚ್ಚರಿಸಿದ್ದು ಗ್ರಾಮಸ್ಥರು ಶಿಕ್ಷಣ ಇಲಾಖೆಯ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಶಿಕ್ಷಕಿಯರ ವರ್ಗಾವಣೆ- ಬಿಕ್ಕಿಬಿಕ್ಕಿ ಅತ್ತ ವಿದ್ಯಾರ್ಥಿಗಳು

    ವರ್ಗಾವಣೆಯಾದ ಪಿ. ಮಹಾದೇವಸ್ವಾಮಿ ಕಳೆದ 4 ವರ್ಷದಿಂದ ಮೀಣ್ಯಂ ಶಾಲೆಯಲ್ಲಿದ್ದು ಕನ್ನಡ, ಇಂಗ್ಲಿಷ್ ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದಿದ್ದರಿಂದ ಅದರ ಜವಾಬ್ದಾರಿಯನ್ನು ಹೊತ್ತಿದ್ದರು. ಇದರೊಟ್ಟಿಗೆ ಬಿಸಿಯೂಟದ ಮೇಲ್ವಿಚಾರಣೆಯನ್ನು ವಹಿಸಿಕೊಂಡು ಮಕ್ಕಳಿಗೆ ಶುಚಿ-ರುಚಿಯಾದ ಬಿಸಿಯೂಟ ಸಿಗುವಂತೆ ಮಾಡಿದ್ದರು ಎಂದು ಗ್ರಾಮಸ್ಥರಾದ ಮಾದೇಶ್ ತಿಳಿಸಿದ್ದಾರೆ.

    ಶನಿವಾರ ಇಲ್ಲವೇ ಸೋಮವಾರ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ಪಿ. ಮಹಾದೇವಸ್ವಾಮಿ ಅವರ ಎತ್ತಂಗಡಿಯಲ್ಲಿ ಮುಖ್ಯ ಶಿಕ್ಷಕ ಬಾಲು ನಾಯ್ಕ್ ಎಂಬವರು ಪ್ರಭಾವ ಬೀರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಶನಿವಾರ ಇಲ್ಲವೇ ಭಾನುವಾರ ಪ್ರತಿಭಟನೆ ನಡೆಸಿ ಶಿಕ್ಷಕರನ್ನು ಪುನರ್ ನಿಯೋಜಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿದು ಬಂದಿದೆ. ಶಿಕ್ಷಣ ಸಚಿವರ ಭೇಟಿ ವೇಳೆ ಶಾಲಾ ಮುಖ್ಯ ಶಿಕ್ಷಕ ಬಾಲು ನಾಯ್ಕ ವರ್ಗಾವಣೆ ಆಗ್ರಹಿಸಿ ಸಚಿವರಿಗೆ ಮನವಿ ಪತ್ರ ನೀಡುವ ಜೊತೆಗೆ ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ್ದರು.

  • ‘ದೆವ್ವ’ವನ್ನು ಕಂಬಕ್ಕೆ ಕಟ್ಟಿ ಹೊಡೆದ ಮಲೆನಾಡಿಗರು

    ‘ದೆವ್ವ’ವನ್ನು ಕಂಬಕ್ಕೆ ಕಟ್ಟಿ ಹೊಡೆದ ಮಲೆನಾಡಿಗರು

    ಚಿಕ್ಕಮಗಳೂರು: ಶ್ರೀಗಂಧದ ಮರಗಳ ಕಳ್ಳತನಕ್ಕೆ ಬಂದಿದ್ದ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೇಹಳ್ಳಿಯ ‘ದೆವ್ವ’ವನ್ನು ಮಲೆನಾಡಿಗರು ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ.

    ಕೇಳೋಕೆ ಆಶ್ಚರ್ಯ ಅನ್ನಿಸಿದರು ಸತ್ಯ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿ ಗ್ರಾಮದಂಚಿನಲ್ಲಿದ್ದ ಐದು ಶ್ರೀಗಂಧದ ಮರಗಳನ್ನ ಕದಿಯಲೆಂದು ಅರೇಹಳ್ಳಿಯ ಐವರು ಕಳ್ಳರು ಬಂದಿದ್ದರು. ಊರ ಹೊರಗೆ ಮರ ಕಡಿಯುವ ಶಬ್ಧವನ್ನು ಆಲಿಸಿದ ಗ್ರಾಮಸ್ಥರು ಸ್ಥಳಕ್ಕೆ ಬಂದಾಗ ಗಂಧದ ಕಳ್ಳರು ಮುಖಕ್ಕೆ ವಿಚಿತ್ರ ಮಾಸ್ಕ್ ಹಾಕಿ ಗ್ರಾಮಸ್ಥರನ್ನ ಹೆದರಿಸಲು ಪ್ರಯತ್ನಿಸಿದ್ದಾರೆ.

    ದೆವ್ವಕ್ಕೆ ಹೆದರದ ಗ್ರಾಮಸ್ಥರು ಒಟ್ಟಾಗಿ ಮುನ್ನುಗ್ಗಿದಾಗ, ಮುಖದಿಂದ ಮಾಸ್ಕ್ ತೆಗೆದು ಎಲ್ಲರೂ ಓಡಲು ಆರಂಭಿಸಿದ್ದಾರೆ. ಆದರೆ ಊರಿನ ಜನ ಓರ್ವನನ್ನ ಹಿಡಿದು ಕಂಬಕ್ಕೆ ಕಟ್ಟಿ ಚೆನ್ನಾಗಿ ಹೊಡೆದು ಅರಣ್ಯ ಇಲಾಖೆಯ ವಶಕ್ಕೆ ನೀಡಿದ್ದಾರೆ. ಐವರಲ್ಲಿ ಓರ್ವ ಸಿಕ್ಕಿಬಿದ್ದಿದ್ದು, ನಾಲ್ವರು ತಪ್ಪಿಸಿಕೊಂಡಿದ್ದಾರೆ. ಬಂಧಿತರಿಂದ ಐದು ಗಂಧದ ತುಂಡು, ಆಟೋ, ಒಂದು ಬೈಕ್ ಹಾಗೂ ಮುಖವಾಡಗಳನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

  • ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ ಯೋಧರಿಗೆ ಹೂವು ಚೆಲ್ಲಿ ಗ್ರಾಮಸ್ಥರಿಂದ ಸ್ವಾಗತ

    ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ ಯೋಧರಿಗೆ ಹೂವು ಚೆಲ್ಲಿ ಗ್ರಾಮಸ್ಥರಿಂದ ಸ್ವಾಗತ

    ಬೆಂಗಳೂರು: ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ ಯೋಧರ ಮೇಲೆ ಹೂ ಚೆಲ್ಲಿ ಹೊಸಕೋಟೆ ತಾಲೂಕಿನ ನಂದಗುಡಿಯ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ.

    ಹೊಸಕೋಟೆ ಕ್ಷೇತ್ರದಲ್ಲಿ ಉಪಚುನಾವಣೆ ಕಾವು ಹೆಚ್ಚಾಗಿದ್ದು, ಒಟ್ಟು ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಲ್ಲಿ ಹೈವೋಲ್ಟೆಜ್ ಕಣವಾಗಿದೆ. ಆದ್ದರಿಂದ ಶಾಂತಿಯುತ ಚುನಾವಣೆ ಭದ್ರತೆಯನ್ನು ಕಾಪಾಡಲು ಬಂದ ಭಾರತೀಯ ಪ್ಯಾರಾ ಮಿಲಿಟರಿ ಪಡೆ ಸೈನಿಕರನ್ನು ನಂದಗುಡಿ ಗ್ರಾಮಸ್ಥರು ಹೂ ಚೆಲ್ಲಿ ಸ್ವಾಗತ ಮಾಡಿಕೊಂಡಿದ್ದಾರೆ.

    ಹೊಸಕೋಟೆ ಕ್ಷೇತ್ರದಲ್ಲಿ ಉಪಚುನಾವಣೆ ಕಣ ರಂಗೇರಿದ್ದು, ಅಭ್ಯರ್ಥಿಗಳು ತಮ್ಮದೇ ರೀತಿಯಲ್ಲಿ ಪ್ರಚಾರ ಕೆಲಸ ಆರಂಭಿಸಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದೇ ಇರಲಿ ಎಂದು ಚುನಾವಣಾ ಭದ್ರತೆಗಾಗಿ ಬಂದ ಸೈನಿಕರನ್ನು ಅಲ್ಲಿ ಗ್ರಾಮಸ್ಥರು ಸೈನಿಕರ ಮೇಲೆ ಹೂವು ಚೆಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೈನಿಕರು ಮತ್ತು ಪೊಲೀಸರಿಗೆ ಮೆರವಣಿಗೆ ಮಾಡಿ ಭರ್ಜರಿಯಾಗಿ ಸ್ವಾಗತ ಮಾಡಿದ್ದಾರೆ.

    ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಹೋಗಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ ಕಾಂಗ್ರೆಸ್ ನಿಂದ ಶಾಸಕ ಭೈರತಿ ಸುರೇಶ್ ಅವರ ಪತ್ನಿ ಪದ್ಮಾವತಿ ಸುರೇಶ್ ಅವರು ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಸ್ಪರ್ಧಿಸುತ್ತಿದ್ದಾರೆ.

  • ಗ್ರಾಮದಲ್ಲಿ ಸಾಮೂಹಿಕ ಜ್ವರ -ಯುವತಿ ಸಾವು

    ಗ್ರಾಮದಲ್ಲಿ ಸಾಮೂಹಿಕ ಜ್ವರ -ಯುವತಿ ಸಾವು

    ಚಾಮರಾಜನಗರ: ಗ್ರಾಮದಲ್ಲಿ ಸಾಮೂಹಿಕ ಜ್ವರದಿಂದ ಗ್ರಾಮಸ್ಥರು ಬಳುತ್ತಿದ್ದು, ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಉಯಿಲನತ್ತ ಗ್ರಾಮದಲ್ಲಿ ನಡೆದಿದೆ.

    ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ ಯುವತಿಯನ್ನು 20 ವರ್ಷದ ಗೀತಾ ಎಂದು ಗುರುತಿಸಲಾಗಿದೆ. ಹನೂರು ತಾಲೂಕು ಉಯಿಲನತ್ತ ಗ್ರಾಮದಲ್ಲಿ 80ಕ್ಕೂ ಹೆಚ್ಚು ಕುಟುಂಬಗಳಿದ್ದು ಪ್ರತಿ ಕುಟುಂಬದಲ್ಲೂ ಒಬ್ಬರಲ್ಲ ಒಬ್ಬರು ಜ್ವರ, ಮೈ-ಕೈನೋವು, ಮೂಳೆ ನೋವು, ಸಂಧಿನೋವಿನಿಂದ ಬಳಲುತ್ತಿದ್ದಾರೆ. ಇವರಿಗೆ ಕೇವಲ ಮಾತ್ರೆ ನೀಡಿ ಮತ್ತೆ ಯಾವುದೇ ಚಿಕಿತ್ಸೆ ನೀಡದೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ.

    ತೀವ್ರ ಜ್ವರ ಹಾಗು ಸಂಧಿನೋವಿನಿಂದ ಬಳಲುತ್ತಿರುವುದರಿಂದ ಪಕ್ಕದ ಊರುಗಳಿಗೆ ತೆರಳಿ ಚಿಕಿತ್ಸೆ ಪಡೆಯುಲು ಸಾಧ್ಯವಾಗದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಆದರೆ ನಾಮಕಾವಾಸ್ತೆಗೆ ಮಾತ್ರೆ ಕೊಟ್ಟು ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಇಲಾಖೆಯಿಂದ ಗ್ರಾಮದಲ್ಲೇ ಒಂದು ಕ್ಯಾಂಪ್ ಮಾಡಿ ಸಮರ್ಪಕ ಚಿಕಿತ್ಸೆ ನೀಡಬೇಕು ಇಲ್ಲವೇ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ರಾಜೀನಾಮೆ ಏಕೆ ಕೊಟ್ರಿ- ಗ್ರಾಮಸ್ಥರಿಂದ ವಿಶ್ವನಾಥ್‍ಗೆ ತರಾಟೆ

    ರಾಜೀನಾಮೆ ಏಕೆ ಕೊಟ್ರಿ- ಗ್ರಾಮಸ್ಥರಿಂದ ವಿಶ್ವನಾಥ್‍ಗೆ ತರಾಟೆ

    ಮೈಸೂರು: ವೋಟ್ ಹಾಕಿ ಗೆಲ್ಲಿಸಿದ್ದೀವಿ. ನಮ್ಮ ಕಷ್ಟ-ಸುಖ ಕೇಳಲು ನೀವು ಬಂದ್ರಾ ಎಂದು ಮತ ಕೇಳಲು ಹೋದ ಅನರ್ಹ ಶಾಸಕ ಎಚ್ ವಿಶ್ವನಾಥ್ ಅವರನ್ನು ಎರಡು ಗ್ರಾಮಗಳಲ್ಲಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

    ಹುಣಸೂರು ಉಪಚುನಾವಣೆ ಹಿನ್ನೆಲೆಯಲ್ಲಿ ವಿಶ್ವನಾಥ್ ಅವರು ಮತ ಕೇಳಲು ಹೋಗಿದ್ದರು. ಈ ವೇಳೆ ಹುಣಸೂರು ಮೈಸೂರು ರಸ್ತೆಯ ಕೊಳಗಟ್ಟ ಗ್ರಾಮದ ಗ್ರಾಮಸ್ಥರು ಹಾಗೂ ಶ್ರವಣಹಳ್ಳಿ ಗ್ರಾಮದ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡರು.

    ಮತ ಕೇಳಲು ಬಂದ ವಿಶ್ವನಾಥ್ ಅವರಿಗೆ ಗ್ರಾಮಸ್ಥರು, ಇದುವರೆಗೂ ನೀವು ನಮ್ಮ ಕಷ್ಟ- ಸುಖ ಕೇಳಲು ಬಂದಿದ್ದೀರಾ? ನಾವು ನಿಮಗೆ ಮತ ಹಾಕಿದ್ದೆವು. ಆದರೆ ನೀವು ರಾಜೀನಾಮೆ ನೀಡಿದ್ದಿರಿ. ನೀವು ಯಾಕೆ ರಾಜೀನಾಮೆ ಕೊಟ್ರಿ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

    ಎಚ್. ವಿಶ್ವನಾಥ್ ಎಷ್ಟೇ ಹೇಳಿದರೂ ಗ್ರಾಮಸ್ಥರು ಅವರ ಮಾತು ಕೇಳದೆ ಜೋರಾಗಿ ಗಲಾಟೆ ಮಾಡುತ್ತಿದ್ದರು. ಬಳಿಕ ಗಲಾಟೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಹಾಗೂ ಕೆಲ ಗ್ರಾಮಸ್ಥರು ಜನರನ್ನು ಸಮಾಧಾನಪಡಿಸಿದರು.

  • ತನ್ನಿಂದ ತಾನೇ ಬೋರ್‌ವೆಲ್‌ನಿಂದ ಹೊರಬರ್ತಿದೆ ನೀರು- ಗ್ರಾಮಸ್ಥರಲ್ಲಿ ಅಚ್ಚರಿ

    ತನ್ನಿಂದ ತಾನೇ ಬೋರ್‌ವೆಲ್‌ನಿಂದ ಹೊರಬರ್ತಿದೆ ನೀರು- ಗ್ರಾಮಸ್ಥರಲ್ಲಿ ಅಚ್ಚರಿ

    ಯಾದಗಿರಿ: ರಾಜ್ಯದ ಕೆಲವು ಕಡೆ ಗಂಟೆಗಟ್ಟಲೇ ಬೋರ್‌ವೆಲ್‌ ಕೊರೆದರೂನೀರು ಬರೋದು ಡೌಟ್. ಆದರೆ ಈ ಗ್ರಾಮದ ಬೋರ್‌ವೆಲ್‌ ಒಂದರಲ್ಲಿ ಸತತ ನಾಲ್ಕು ವರ್ಷಗಳಿಂದ ದಿನದ 24 ಗಂಟೆಯೂ ತನ್ನಷ್ಟಕ್ಕೆ ತಾನೆ ನೀರು ಹೊರಬರುತ್ತಿದೆ.

    ಆಶ್ಚರ್ಯವಾದರೂ ಇದು ಸತ್ಯ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕಾಡಂಗೇರಾ ಬಿ ಗ್ರಾಮದಲ್ಲಿ ಈ ಕುತೂಹಲಕಾರಿ ಬೋರ್ ವೆಲ್ ಇದೆ. ಬೇಸಿಗೆ, ಮಳೆ ಮತ್ತು ಚಳಿಗಾಲದಲ್ಲಿ ಎಗ್ಗಿಲ್ಲದೆ ತನ್ನಷ್ಟಕ್ಕೆ ತಾನೇ ಈ ಹ್ಯಾಂಡ್ ಪಂಪ್‍ನಿಂದ ನೀರು ಚಿಮ್ಮುತ್ತದೆ ಇದು ಇಲ್ಲಿನ ಗ್ರಾಮಸ್ಥರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    ಈ ಗ್ರಾಮದಲ್ಲಿ 9 ಬೋರ್‌ವೆಲ್‌ ಗಳು ಇವೆ. ಆದರೆ ಅವುಗಳಲ್ಲಿ ಯಾವುದರಲ್ಲಿಯೂ ಈ ರೀತಿ ನೀರು ಬರುತ್ತಿಲ್ಲ. ಆದರೆ ಈ ಕೊಳವೆ ಬಾವಿಯಲ್ಲಿ ಮಾತ್ರ ಮೂರು ಕಾಲದಲ್ಲಿಯೂ ಸತತ 24 ಗಂಟೆಗಳ ಕಾಲ ನೀರು ತನ್ನಷ್ಟಕ್ಕೆ ತಾನೇ ಬರುತ್ತಿರುವುದು ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ.

  • ಪೌಡರ್ ಎರಚಿ ಪ್ರಜ್ಞೆ ತಪ್ಪಿಸುತ್ತಾರೆ ಎಂದು ಶಂಕಿಸಿ ವೃದ್ಧೆಯರನ್ನ ಥಳಿಸಿದ ಗ್ರಾಮಸ್ಥರು

    ಪೌಡರ್ ಎರಚಿ ಪ್ರಜ್ಞೆ ತಪ್ಪಿಸುತ್ತಾರೆ ಎಂದು ಶಂಕಿಸಿ ವೃದ್ಧೆಯರನ್ನ ಥಳಿಸಿದ ಗ್ರಾಮಸ್ಥರು

    – ಬಿಸಾಕಿದ್ದ ತರಕಾರಿ ಒಯ್ಯಲು ಬಂದಿದ್ದ ವೃದ್ಧೆಯರು

    ಬಾಲಗಕೋಟೆ: ಪೌಡರ್ ಎರಚಿ ಪ್ರಜ್ಞೆ ತಪ್ಪಿಸುತ್ತಾರೆ ಎಂಬ ಶಂಕೆ ಹಿನ್ನೆಲೆ ಮೂವರು ಅಪರಿಚಿತ ವೃದ್ಧೆಯರನ್ನು ಸ್ಥಳೀಯರು ಹಿಡಿದು ಥಳಿಸಿದ ಘಟನೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ.

    ತೇರದಾಳ ಪಟ್ಟಣದಲ್ಲಿ ಪ್ರತಿ ಗುರುವಾರ ವಾರದ ಸಂತೆ ನಡೆಯುತ್ತದೆ. ಈ ಸಂತೆಗೆ ಇಂದು ಕೈ ಚೀಲ ಹಿಡಿದು ಮೂವರು ವೃದ್ಧೆಯರು ಬಂದಿದ್ದರು. ಆದರೆ ಅವರು ಸಂತೆಯಲ್ಲಿ ಅತ್ತಿತ್ತ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಅವರನ್ನು ಹಿಡಿದು, ಚೀಲಗಳನ್ನು ಕಿತ್ತುಕೊಂಡು ನೋಡಿದಾಗ ಅದರಲ್ಲಿ ಏನೂ ಇರಲಿಲ್ಲ. ಆದರೂ ಕೆಲ ಯುವಕರು, ಮಹಿಳೆಯರು ವೃದ್ಧೆಯರನ್ನು ಎಳೆದಾಡಿ ಥಳಿಸಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ತೇರದಾಳ ಪೊಲೀಸರು ವೃದ್ಧೆಯರನ್ನು ರಕ್ಷಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದಾಗ, ನಾವು ಬಡವರು. ತರಕಾರಿ ಖರೀದಿಸುವಷ್ಟು ಹಣ ನಮ್ಮ ಬಳಿ ಇಲ್ಲ. ಹೀಗಾಗಿ ಸಂತೆಯಲ್ಲಿ ವ್ಯಾಪಾರಿಗಳು ಬಿಸಾಕಿದ ತರಕಾರಿ ತೆಗೆದುಕೊಂಡು ಹೋಗಲು ಬಂದಿದ್ದೆವು. ಆದರೆ ಸಂತೆಯಲ್ಲಿ ಕೆಲವರು ನಮ್ಮ ಮೇಲೆ ಶಂಕೆ ವ್ಯಕ್ತಪಡಿಸಿ ಹಲ್ಲೆ ಮಾಡಿದ್ದಾರೆ ಎಂದು ವೃದ್ಧೆಯರು ಅಳಲು ತೋಡಿಕೊಂಡಿದ್ದಾರೆ.

    ಯಾರೋ ದುಷ್ಕರ್ಮಿಗಳು ಪೌಡರ್ ಎರಚಿ ಪ್ರಜ್ಞೆ ತಪ್ಪಿಸಿ ಹಣ ದೋಚುತ್ತಾರೆ ಎಂಬ ವದಂತಿ ತೇರದಾಳ ಪಟ್ಟಣದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ವೃದ್ಧೆಯರ ಮೇಲೆ ಶಂಕೆ ವ್ಯಕ್ತಪಡಿಸಿ ಸ್ಥಳೀಯರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.