Tag: village

  • ಹೈವೇ ಪಕ್ಕದಲ್ಲಿರೋ ಕಾಂಗ್ರೆಸ್ ಶಾಸಕರ ಬಾರ್ & ರೆಸ್ಟೋರೆಂಟ್‍ನಲ್ಲಿ ಅಕ್ರಮ ಮದ್ಯ ಪೂರೈಕೆ

    ಹೈವೇ ಪಕ್ಕದಲ್ಲಿರೋ ಕಾಂಗ್ರೆಸ್ ಶಾಸಕರ ಬಾರ್ & ರೆಸ್ಟೋರೆಂಟ್‍ನಲ್ಲಿ ಅಕ್ರಮ ಮದ್ಯ ಪೂರೈಕೆ

    ಬೆಂಗಳೂರು: ಜನರಿಗೊಂದು ಕಾನೂನು, ಜನಪ್ರತಿನಿಧಿಗಳಿಗೊಂದು ಕಾನೂನು. ಹೌದು. ಈ ಪ್ರಕರಣದಲ್ಲಿ ಹಾಗೆ ಅನಿಸುತ್ತೆ. ಯಾಕಂದ್ರೆ ಬೆಂಗಳೂರಿನ ಏರ್‍ಪೋರ್ಟ್ ರಸ್ತೆಯಲ್ಲಿರುವ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮಾಲೀಕತ್ವದ ಎಲ್.ಕೆ ರಾಯಲ್ ಗಾರ್ಡೇನಿಯ ರೆಸ್ಟೋರೆಂಟ್‍ನಲ್ಲಿ ಅಕ್ರಮವಾಗಿ ಮದ್ಯ ಪೂರೈಕೆಯಾಗ್ತಿದೆ.

    ಹೆದ್ದಾರಿ ಪಕ್ಕದಲ್ಲಿ ಮದ್ಯ ಮಾರಾಟ ಮಾಡೋ ಹಾಗಿಲ್ಲ ಎಂಬ ನಿಯಮವಿದ್ದರೂ ಮದ್ಯ ಪೂರೈಕೆಯಾಗ್ತಿದೆ. ಈ ರೆಸ್ಟೋರೆಂಟ್ ಹುಣಸಮಾರನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತೆ. ರೆಸ್ಟೋರೆಂಟ್ ನಡೆಸುವುದಕ್ಕೆ ಗ್ರಾಮ ಪಂಚಾಯ್ತಿಯಿಂದ ಅನುಮತಿಯನ್ನೂ ಪಡೆದಿಲ್ಲ. ಈ ರೆಸ್ಟೋರೆಂಟ್ ಉದ್ಘಾಟನೆಯಾಗಿ ಇದೀಗ ಇಪ್ಪತ್ತೆರೆಡು ದಿನಗಳೇ ಕಳೆದಿದೆ. ಶಾಸಕರ ಮಾಲೀಕತ್ವದ್ದು ಯಾರೂ ಕೇಳೋರಿಲ್ಲ ಅಂತ ನಂಬಿದ್ದಾರೆ.

    ಈ ಕುರಿತು ಅಬಕಾರಿ ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಲು ನಿರ್ಧರಿಸಿದ್ದು, ಲೈಸೆನ್ಸ್ ಪಡೆಯದ ಬಗ್ಗೆ ಗ್ರಾಮ ಪಂಚಾಯ್ತಿಗೂ ದೂರು ನೀಡಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯ್ತಿ ಕ್ರಮ ಕೈಗೊಳ್ಳೋ ಭರವಸೆ ನೀಡಿದೆ.

  • ಇದೊಂದು ಊರಾದ್ರೂ, ಸರ್ಕಾರಿ ಕಡತಗಳಲ್ಲಿ ಈ ಗ್ರಾಮವೇ ಮಿಸ್ಸಿಂಗ್!

    ಇದೊಂದು ಊರಾದ್ರೂ, ಸರ್ಕಾರಿ ಕಡತಗಳಲ್ಲಿ ಈ ಗ್ರಾಮವೇ ಮಿಸ್ಸಿಂಗ್!

    -ನಮ್ಮ ಗ್ರಾಮವನ್ನು ಹುಡುಕಿಕೊಡಿ ಎಂದು ಗ್ರಾಮಸ್ಥರ ಮನವಿ

    ಕೋಲಾರ: ಇದೊಂದು ಊರಾದರೂ, ಈ ಗ್ರಾಮ ಇದೇ ಎಂದು ಹೇಳಲು ಯಾವುದೇ ದಾಖಲೆಗಳು ಅಧಿಕಾರಿಗಳ ಬಳಿ ಇಲ್ಲ. ಈ ಕುರಿತು ಪ್ರಶ್ನಿಸಿದರೆ ಬ್ರಿಟಿಷ್ ರೆವಿನ್ಯೂ ದಾಖಲೆಗಳಲ್ಲಿರುವ ಗ್ರಾಮವನ್ನು ಅಧಿಕಾರಿಗಳು ತೋರಿಸುತ್ತಿದ್ದಾರೆ. ಆದರೆ ನಮ್ಮ ಗ್ರಾಮ ಕಾಣೆಯಾಗಿದೆ ಹುಡುಕಿಕೊಡಿ ಎಂದು ಪಬ್ಲಿಕ್ ಟಿವಿ ಯ ಬೆಳಕಿನ ಆಸರೆ ಕೇಳಿದ್ದಾರೆ.

    ಈ ಗ್ರಾಮದಲ್ಲಿ ಅಚ್ಚು ಕಟ್ಟಾದ ದೇವಾಲಯ, ಹಾಲಿನ ಡೈರಿ, ಸರ್ಕಾರಿ ಶಾಲೆ ಸೇರಿದಂತೆ ಹಲವು ಮನೆಗಳು ಗ್ರಾಮದಲ್ಲಿವೆ. ಆದರೆ ಗ್ರಾಮದ ಮಾಹಿತಿ ಹಕ್ಕು ಹೋರಾಟಗಾರರು ಮಾತ್ರ ಗ್ರಾಮ ಕಾಣೆಯಾಗಿದೆ ಹುಡುಕಿಕೊಡಿ ಎನ್ನುತ್ತಿದ್ದಾರೆ.

    ಕೋಲಾರ ತಾಲೂಕಿನ ಹೋಳೂರು ಬಳಿ ಇರುವ ಮಾರೇನಹಳ್ಳಿ ಗ್ರಾಮದ ವಸ್ತು ಸ್ಥಿತಿ ಇದು. ಈ ಗ್ರಾಮ ಭೌಗೋಳಿಕವಾಗಿ ಇದೇ ಆದರೂ, ಜಿಲ್ಲಾ ಪಂಚಾಯತಿ, ತಾಲೂಕು ಕಚೇರಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಇಲ್ಲ. ಗ್ರಾಮಕ್ಕೆ ಸಂಬಂಧಿಸಿದ ಸೂಕ್ತ ನಿಗದಿತ ದಾಖಲೆಗಳು ಅಧಿಕಾರಿಗಳ ಬಳಿ ಇಲ್ಲ. ಈ ಕುರಿತು 75 ವರ್ಷಗಳ ಹಿಂದಿನ ನಕ್ಷೆ ಹಾಗೂ ದಾಖಲೆಗಳನ್ನು ನೀಡುತ್ತಾರೆ.

    ವಿಶೇಷತೆ ಎಂದರೆ ಗ್ರಾಮ 1948 ಕ್ಕೂ ಮೊದಲು ಪಾತೂರು ಎಂದು ಇತ್ತು, ಅದಾದ ನಂತರ ಅಲ್ಲಿ ವಾಸವಿದ್ದ ಸಾಕಷ್ಟು ಜನರು ಒಂದು ಕಿ.ಮೀ ದೂರವಿರುವ ಸರ್ವೇ ನಂ 24, 25, 26 ಹಾಗೂ 27 ರಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಠಾಣೆಗೆ ಸಂಬಂಧಿಸಿಲ್ಲ, ಹೀಗಾಗಿ ಗ್ರಾಮದಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರು ಮೂಲಭೂತ ಸೌಲಭ್ಯಗಳಿಗೆ ತೊಂದರೆಯಾಗಿದೆ.

    ಇನ್ನೂ ಮಾರೇನಹಳ್ಳಿ ಗ್ರಾಮ ಕಂದಾಯ ಇಲಾಖೆ ಸರ್ವೇ ನಂ ನಲ್ಲಿರುವುದರಿಂದ ಗ್ರಾಮ ತಮಗೇ ಸೇರಿದ್ದು ಎಂದು ಈ ಹಿಂದೆ ಖಾಸಗಿ ಜಮೀನಿನ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೇ ಗ್ರಾಮದಲ್ಲಿ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಕೂಡ ಖಾಸಗಿ ವ್ಯಕ್ತಿಗಳ ಕೈ ವಶದಲ್ಲಿದೆ. ನಮ್ಮ ಗ್ರಾಮವನ್ನು ಹುಡುಕಿಕೊಟ್ಟು ನಮಗೆ ನೆಮ್ಮದಿಯ ಜೀವನ ಮಾಡಲು ಅನುವು ಮಾಡಿಕೊಡಬೇಕಿದೆ. ಕಂದಾಯ ಇಲಾಖೆ ಕೇಳಿದರೆ ಅಧಿಕಾರಿಗಳು ಗ್ರಾಮ ಠಾಣೆ ಮೇಲೆ ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರಿಗಳ ಬಳಿ ಗ್ರಾಮಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲ, ಬ್ರಿಟಿಷ್ ರೆವಿನ್ಯೂ ದಾಖಲೆಗಳ ಪ್ರಕಾರ ಮೈಸೂರು ರಾಜ್ಯವಿದ್ದಾಗ ಇರುವ ನಕ್ಷೆ ಕೊಟ್ಟು ಗ್ರಾಮ ಬೇರೆಡೆ ತೋರಿಸುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

    ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ತಪ್ಪಿನಿಂದ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದು, ಮೂಲಭೂತ ಸೌಲಭ್ಯಗಳಿಲ್ಲದೇ ಪರಿತಪಿಸುವಂತಾಗಿದೆ. ಗ್ರಾಮದಲ್ಲಿರುವ ಅಭದ್ರತೆ ಹಾಗೂ ಗ್ರಾಮಸ್ಥರ ಆತಂಕವನ್ನು ಅಧಿಕಾರಿಗಳು ನಿವಾರಣೆ ಮಾಡಿ, ಗ್ರಾಮವನ್ನು ಗ್ರಾಮ ಠಾಣೆಗೆ ಸೇರಿಸಿ ಭದ್ರತೆ ಕಲ್ಪಿಸಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

  • ಸದ್ದಿಲ್ಲದೇ ಗ್ರಾಮ ವಾಸ್ತವ್ಯಕ್ಕೆ ಮುಂದಾದ ನಟ ಉಪೇಂದ್ರ- ಚಾಮರಾಜನಗರದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ

    ಸದ್ದಿಲ್ಲದೇ ಗ್ರಾಮ ವಾಸ್ತವ್ಯಕ್ಕೆ ಮುಂದಾದ ನಟ ಉಪೇಂದ್ರ- ಚಾಮರಾಜನಗರದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ

    ಚಾಮರಾಜನಗರ: ಪ್ರಜಾಕೀಯ ಪಕ್ಷಕ್ಕೆ ರೈತರನ್ನು ಹಾಗೂ ಗ್ರಾಮೀಣ ಭಾಗದ ಜನರನ್ನು ಸೆಳೆಯುವ ಉದ್ದೇಶದಿಂದ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಸದ್ದಿಲ್ಲದೇ ಗ್ರಾಮೀಣ ಭಾಗಗಳಲ್ಲಿ ವಾಸ್ತವ್ಯ ಹೂಡಿ ರೈತರ ಸಭೆಗಳನ್ನು ನಡೆಸಲು ಮುಂದಾಗಿದ್ದಾರೆ.

    ಶುಕ್ರವಾರ ರಾತ್ರಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಉಪ್ಪಿ, ಬೆಳಗ್ಗೆ ಗ್ರಾಮಸ್ಥರ ಜೊತೆ ಹಾಗೂ ರೈತರೊಂದಿಗೆ ಸಭೆ ನಡೆಸಿ, ರೈತರಿಗೆ ಎದುರಾಗಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸಿದ್ರು.

    ಇದೇ ವೇಳೆ ಮಾತನಾಡಿದ ಉಪೇಂದ್ರ, ಚಾಮರಾಜನಗರ ಭದ್ರಕೋಟೆ ಎಂದು ನಾನು ಇಲ್ಲಿಗೆ ಬಂದಿಲ್ಲ. ಇಲ್ಲಿನ ಜನರ ಸಮಸ್ಯೆ ತಿಳಿಯಲು, ಗ್ರೌಂಡ್ ರಿಯಾಲಿಟಿ ಚೆಕ್ ಮಾಡಲು ಬಂದಿದ್ದೇನೆ. ಇಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದಕ್ಕೆ ಪರಿಹಾರವನ್ನು ಪಟ್ಟಿ ಮಾಡಲು ಇಲ್ಲಿನ ಜನರಿಗೆ ಹೇಳಿದ್ದೇನೆ ಎಂದ್ರು.

    ಈ ಭಾಗದಲ್ಲಿ ಯಾವ ಪಕ್ಷ ಇದೆ, ಇಲ್ಲಿ ಯಾರು ಅಭ್ಯರ್ಥಿ ಎಂಬುದು ನನಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳೋದಕ್ಕೆ ನಾನು ಇಲ್ಲಿ ಬಂದಿಲ್ಲ. ನನ್ನ ನಾಲ್ಕೈದು ಟೀಂಗಳು ಗ್ರೌಂಡ್ ರಿಯಾಲಿಟಿ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಅಂದ್ರೆ ಕೃಷಿ, ಆರೋಗ್ಯ, ಕೆರೆ ಮುಂತಾದವುಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಹೀಗಾಗಿ ನಾನು ಬಂದು ಅದರ ರಿಯಾಲಿಟಿ ನೋಡ್ತಾ ಇದ್ದೀನಿ. ಇಲ್ಲಿನ ಕೆರೆಗಳು ಹೇಗಿವೆ, ಅವುಗಳನ್ನು ಹೇಗೆ ಸರಿಪಡಿಸಬಹುದು, ಜನರು ಅದಕ್ಕೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುವುದರ ಬಗ್ಗೆ ನೋಡಲು ಬಂದಿದ್ದೇನೆ. ಯಾವುದೇ ಬೇರೆ ಉದ್ದೇಶ ನನಗಿಲ್ಲ ಅಂತ ಹೇಳಿದ್ರು.

    ಇದನ್ನೂ ಓದಿ: ಕನ್ಫ್ಯೂಷನ್, ಥ್ರಿಲ್ಲರ್ ಸಿನಿಮಾ ಅಲ್ಲ, ನಮ್ದು ಟ್ರುಥ್‍ಫುಲ್ ಸಿನಿಮಾ: ಉಪೇಂದ್ರ

    ಸತ್ಯದ ದಾರಿಗೆ ನಾವು ಬರಲೇ ಬೇಕು. ಇದೇ ರೀತಿ ಸುಳ್ಳಿನ ಜೀವನದಲ್ಲಿ ಎಷ್ಟು ದಿನ ಅಂತ ಇರಕ್ಕಾಗುತ್ತೆ. ಗೊತ್ತಿದ್ದರೂ ಕೂಡ ಇದೇ ಸತ್ಯ ಅಂತ ಹೇಳಿಕೊಂಡು ತಿರುಗುತ್ತೇವೆ. ಇದನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಅಂತ ಪರಿಸ್ಥಿತಿ ಬರೋದು ತುಂಬಾ ದುರದೃಷ್ಟಕರವಾದುದು. ಮುಂದಿನ ಜನಾಂಗದ ದೃಷ್ಟಿಯಿಂದ ನಾವು ಇದನ್ನೆಲ್ಲಾ ಯೋಚನೆ ಮಾಡಬೇಕು ಅಂತ ಹೇಳಿದ್ರು.

    ಒಬ್ಬ ನಾಯಕನನ್ನು ಆಯ್ಕೆ ಮಾಡಿದ ಮೇಲೆ ಕೆಲವು ಕೆಲಸಗಳನ್ನು ಮಾಡೋದಕ್ಕಷ್ಟೆ ಹೊರತು ಬೇರೆ ವಿಷಯಗಳಲ್ಲಿ ಭಾಗಿಯಾಗೋದಕ್ಕಲ್ಲ, ಇಬ್ಭಾಗ ಮಾಡೋದಕ್ಕಲ್ಲ. ಬೇಸರದ ವಿಷಯಗಳನ್ನು ಮಾತನಾಡೋದಕ್ಕಲ್ಲ, ದೂಷಿಸೋದಕ್ಕಲ್ಲ. ಹೀಗಾಗಿ ಇಲ್ಲಿ ಪ್ರಜೆಗಳ ಬಗ್ಗೆ ಯೋಚನೆ ಮಾಡೋಣ. ಇದು ಎಲ್ಲರ ದೇಶ. ಹೀಗಾಗಿ ಎಲ್ಲರೂ ಪ್ರಯತ್ನ ಪಡಲೇಬೇಕು. ಅದಕ್ಕೆ ನಾನು ಯಾರನ್ನೂ ದೂಷಿಸುವುದಿಲ್ಲ. ಯಾರನ್ನೂ ವಿರೋಧಿಸುವುದಿಲ್ಲ ಎಂದು ತಿಳಿಸಿದ್ರು.

    ಇಲ್ಲಿ ದುಡ್ಡು ಮಾಡಿ ವಿದೇಶಕ್ಕೆ ಹೋಗಿ ದುಡ್ಡು ವೇಸ್ಟ್ ಮಾಡಿ ಒಂದು ತಿಂಗ್ಳು ಇದ್ದು, ಎಂಜಾಯ್ ಮಾಡಿ ಬರೋ ಬದಲು ವರ್ಷಾನುಗಟ್ಟಲೇ ಇರೋ ನಮ್ಮ ದೇಶವನ್ನೇ ಫಾರಿನ್ ಕಂಟ್ರಿಯನ್ನಾಗಿ ಮಾಡೋಣ ಅಂತ ಅಂದ್ರು.

    ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ನಾಯಕರಾಗಬೇಕು, ಬೆಂಬಲಿಗರಾಗಬೇಡಿ. ಯಾಕಂದ್ರೆ ದೇವರು ಎಲ್ಲರಿಗೂ ಒಂದಲ್ಲ ಒಂದು ರೀತಿಯ ಸಾಮಥ್ರ್ಯ ಕೊಟ್ಟಿರುತ್ತಾನೆ. ಇದು ಪ್ರಜಾಕಾರಣ, ರಾಜಕಾರಣ ಅಲ್ಲ. ನಿಮ್ಮ ಕೊಡುಗೆ ಅತ್ಯಮೂಲ್ಯವಾದುದು. ಹೀಗಾಗಿ ನಾನು ಯಾವತ್ತೂ ಹೇಳ್ತಾ ಇರೋದು ನನಗೆ ನಾಯಕರು ಬೇಕು ಅಂತ ಹೇಳಿದ್ರು.

  • ಸಂಸದ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ರೆಸಾರ್ಟ್ ಕೆಡವಲು ಗ್ರಾಮ ಪಂಚಾಯತ್ ಆದೇಶ

    ಸಂಸದ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ರೆಸಾರ್ಟ್ ಕೆಡವಲು ಗ್ರಾಮ ಪಂಚಾಯತ್ ಆದೇಶ

    ತಿರುವನಂತಪುರಂ: ರಾಜ್ಯಸಭಾ ಸದಸ್ಯ, ಕೇರಳ ಎನ್‍ಡಿಎ ಉಪಾಧ್ಯಕ್ಷ ರಾಜೀವ್ ಚಂದ್ರಶೇಖರ್ ಮೇಲೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡ ಆರೋಪ ಕೇಳಿ ಬಂದಿದೆ.

    ಕೊಟ್ಟಯಂ ಜಿಲ್ಲೆಯ ಕುಮರಕುಮ ಎಂಬಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ರೆಸಾರ್ಟ್ ನಿರ್ಮಾಣವಾಗಿದೆ ಎಂದು ಸರ್ಕಾರ ಕಂದಾಯ ಇಲಾಖೆ ತಿಳಿಸಿದೆ.

    ಕಂದಾಯ ಇಲಾಖೆ ದೃಢಪಡಿಸಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಈ ವಿಷ್ಣು ನಂಬೂದಿರಿ ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ನಿರ್ಮಾಣವಾಗಿರುವ ರೆಸಾರ್ಟ್ ಕೆಡವಲು ನೋಟಿಸ್ ಜಾರಿ ಮಾಡಿದ್ದಾರೆ.

    ಹಿನ್ನೀರಿನ ದಂಡೆಯಲ್ಲಿರುವ ರೆಸಾರ್ಟ್ ಕಟ್ಟಡಗಳು ಮತ್ತು ಗೋಡೆಗಳು ಒತ್ತುವರಿಯಾಗಿದ್ದು, ಈ ಒತ್ತುವರಿಯಾಗಿರುವ ಜಾಗವನ್ನು 15 ದಿನಗಳ ಒಳಗಡೆ ಕೆಡವಬೇಕು ಮತ್ತು ಒತ್ತುವರಿ ಮಾಡಿಕೊಂಡಿದ್ದು ಯಾಕೆ ಎನ್ನುವುದಕ್ಕೆ ಕಾರಣ ತಿಳಿಸಬೇಕು. ಒಂದು ವೇಳೆ ನೀಡಿರುವ ಡೆಡ್‍ಲೈನ್ ಒಳಗಡೆ ಕೆಡವದೇ ಇದ್ದಲ್ಲಿ ಪಂಚಾಯತ್ ರೆಸಾರ್ಟ್ ಕೆಡವಲು ಆದೇಶ ನೀಡುತ್ತದೆ ಎಂದು ನೋಟಿಸ್ ನಲ್ಲಿ ತಿಳಿಸಿದ್ದಾರೆ.

    ಫೋಟೋ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್

    ಈ ಆರೋಪಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿ, ರೆಸಾರ್ಟ್ ಒತ್ತುವರಿಯಾಗಿಲ್ಲ. ರಾಜಕೀಯ ಕಾರಣಕ್ಕಾಗಿ ಈ ವಿವಾದವನ್ನು ಸೃಷ್ಟಿಸಿದ್ದಾರೆ. ಅಡಳಿತರೂಢ ಸರ್ಕಾರದ ಬೆಂಬಲಿಗರು ನನ್ನ ರೆಸಾರ್ಟ್ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದ್ದಾರೆ. ಮುನ್ನಾರ್ ನಲ್ಲಿ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ ದೂರು ನೀಡಿದ್ದಕ್ಕೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

    ಕಳೆದ ತಿಂಗಳು ಎನ್‍ಸಿಪಿ ನಾಯಕ ಥಾಮಸ್ ಚಾಂಡಿ ಜಾಗ ಒತ್ತುವರಿ ಮಾಡಿಕೊಂಡಿದ್ದಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ರಾಜೀವ್ ಚಂದ್ರಶೇಖರ್ ರಾಜೀನಾಮೆ ನೀಡಬೇಕು ಆಡಳಿತರೂಢ ಎಡರಂಗ ಸರ್ಕಾರದ ನಾಯಕರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಗೆ ಸಂಸದ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವಾಗ ಇದೆಲ್ಲ ಸಾಮಾನ್ಯ. ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲ ಆಧಾರ ರಹಿತ. ಈ ವಿವಾದ ಈಗಾಗಲೇ ಕೋರ್ಟ್ ನಲ್ಲಿದೆ ನಮ್ಮ ಸಂಸ್ಥೆ ಈಬಗ್ಗೆ ತನ್ನ ವಾದ ಮಂಡಿಸಲಿದೆ. ಈ ಸುಳ್ಳು ಆರೋಪಕ್ಕೆ ನಾನು ಹೆದರುವುದಿಲ್ಲ ಎರಡು ಷರತ್ತುಗಳೊಂದಿಗೆ ನಾನು ರಾಜೀನಾಮೆ ನೀಡಲು ಸಿದ್ಧ. ಕೇರಳದಲ್ಲಿ ರಾಜಕೀಯ ಪ್ರೇರಿತ ದಾಳಿಗಳು ನಿಲ್ಲಬೇಕು. ಕೆಲವು ಕ್ರಿಮಿನಲ್ ಗಳನ್ಮು ಜೈಲಿಗೆ ಕಳುಹಿಸಬೇಕಿದೆ. ಈ ಎರಡು ಷರತ್ತಿಗೂ ಒಪ್ಪಿದ್ರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದರು.

     

     

  • ಸಿಎಂ ಸೆಕ್ಯೂರಿಟಿ ಹೆಸರಲ್ಲಿ ರೋಗಿಯನ್ನ ಆಂಬುಲೆನ್ಸ್ ನಿಂದ ಇಳಿಸಿ ನಡೆಸಿದ್ರು

    ಸಿಎಂ ಸೆಕ್ಯೂರಿಟಿ ಹೆಸರಲ್ಲಿ ರೋಗಿಯನ್ನ ಆಂಬುಲೆನ್ಸ್ ನಿಂದ ಇಳಿಸಿ ನಡೆಸಿದ್ರು

    ಮಂಡ್ಯ: ಸಿಎಂ ಕಾರ್ಯಕ್ರಮದ ಸೆಕ್ಯೂರಿಟಿ ಹೆಸರಲ್ಲಿ ಆಂಬುಲೆನ್ಸ್ ನಿಂದ ರೋಗಿಯನ್ನು ಕೆಳಗಿಳಿಸಿ ನಡೆಸಿ ಕಳುಹಿಸಿದ ಅಮಾನವೀಯ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ನಾಗಮಂಗಲಕ್ಕೆ ಅಭಿವೃದ್ದಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲು ಸೋಮವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸಿದ್ದರು. ಈ ವೇಳೆ ನಾಗಮಂಗಲದಲ್ಲಿ ಸ್ಟೇಡಿಯಂನಲ್ಲಿ ಹೆಲಿಕಾಪ್ಟರ್ ನಲ್ಲಿ ಇಳಿದು ಎದುರಿನ ಸ್ಟೇಜ್ ಗೆ ಹೋಗುವಾಗ ಆಂಬುಲೆನ್ಸ್ ನಲ್ಲಿ ಮಹಿಳಾ ರೋಗಿಯೊಬ್ಬರನ್ನು ಕರೆತರಲಾಗುತ್ತಿತ್ತು.

    ಆದರೆ ಸಿಎಂ ಭದ್ರತೆ ಹೆಸರಲ್ಲಿ ಪೊಲೀಸರು ಹಳ್ಳಿಯಿಂದ ಮಹಿಳಾ ರೋಗಿಯನ್ನು ಕರೆತರುತ್ತಿದ್ದ ಆಂಬುಲೆನ್ಸ್ ಅರ್ಧಕ್ಕೆ ತಡೆದಿದ್ದಾರೆ. ಭದ್ರತೆ ಹೆಸರಲ್ಲಿ ರೋಗಿಯನ್ನು ತಡೆದಿದ್ದರಿಂದ ಮಹಿಳೆಯನ್ನು ನಡೆಸಿಕೊಂಡೇ ಕರೆದುಕೊಂಡು ಹೋಗಿದ್ದಾರೆ. ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಮಹಿಳೆಯನ್ನ ನೋಡಿ ಮರುಗಿದ ಜನ ಇಂತಹ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳೇ ಪೊಲೀಸರಿಗೆ ತಿಳಿಹೇಳಬೇಕು. ವೇದಿಕೆ ಮೇಲೆ ಅಭಿವೃದ್ಧಿ ಬಗ್ಗೆ ಮಾತನಾಡುವಾಗ ಇಂತಹ ಮಾನವೀಯತೆ ವಿಷಯಗಳ ಬಗ್ಗೆ ಸಿಎಂ ಪಾಠ ಮಾಡಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಈ ಊರಲ್ಲಿ ಎಲ್ಲಾ ಇದೆ ಆದ್ರೆ ಅದಕ್ಕಿಲ್ಲ ದಾಖಲೆ- ಗ್ರಾಮ ಹುಡುಕಿಕೊಡುವಂತೆ ಸ್ಥಳೀಯರ ಮನವಿ

    ಈ ಊರಲ್ಲಿ ಎಲ್ಲಾ ಇದೆ ಆದ್ರೆ ಅದಕ್ಕಿಲ್ಲ ದಾಖಲೆ- ಗ್ರಾಮ ಹುಡುಕಿಕೊಡುವಂತೆ ಸ್ಥಳೀಯರ ಮನವಿ

    ಕೋಲಾರ: ಅದೊಂದು ಊರಾದರೂ ಗ್ರಾಮ ಇದೆ ಎನ್ನುವುದಕ್ಕೆ ಯಾವುದೇ ದಾಖಲೆಗಳು ಅಧಿಕಾರಿಗಳ ಬಳಿ ಇಲ್ಲ. ಬ್ರಿಟೀಷ್ ರೆವಿನ್ಯೂ ದಾಖಲೆಗಳಲ್ಲಿರುವ ಊರನ್ನು ತೋರಿಸುತ್ತಿದ್ದಾರೆ ಅಧಿಕಾರಿಗಳು. ಹೀಗಾಗಿ ನಮ್ಮ ಗ್ರಾಮ ಕಾಣೆಯಾಗಿದೆ ಹುಡುಕಿಕೊಡಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ದೇವಾಲಯ, ಹಾಲಿನ ಡೈರಿ, ಸರ್ಕಾರಿ ಶಾಲೆ, ಮನೆಗಳು ಇವೆಲ್ಲಾ ಇದೆ ಅಂದಮೇಲೆ ಅದೊಂದು ಊರು ಅಲ್ವಾ. ಆದರೆ ಮಾಹಿತಿ ಹಕ್ಕು ಹೋರಾಟಗಾರ ರವಿ ನಮ್ಮ ಗ್ರಾಮ ಕಾಣೆಯಾಗಿದೆ ಹುಡುಕಿಕೊಡಿ ಎಂದು ಧ್ವನಿ ಎತ್ತಿದ್ದಾರೆ. ಇದಕ್ಕೆ ಕಾರಣ ದಾಖಲಾತಿ.

    ಕೋಲಾರ ತಾಲೂಕಿನ ಹೋಳೂರು ಬಳಿ ಇರುವ ಮಾರೇನಹಳ್ಳ ಗ್ರಾಮ ಭೌಗೋಳಿಕವಾಗಿದ್ದರೂ ಜಿಲ್ಲಾ ಪಂಚಾಯಿತಿ, ತಾಲೂಕು ಕಚೇರಿ, ಗ್ರಾಮ ಪಂಚಾಯಿತಿ ಹೀಗೆ ಯಾವ ವ್ಯಾಪ್ತಿಯಲ್ಲೂ ದಾಖಲೆಗಳನ್ನೇ ಹೊಂದಿಲ್ಲ. ಹೀಗಾಗಿ ಈ ಊರಿಗೆ ಚರಂಡಿ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲ.

    ಮಾರೇನಹಳ್ಳಿ ಕಂದಾಯ ಇಲಾಖೆ ಸರ್ವೆ ನಂಬರ್ ನಲ್ಲಿರುವುದರಿಂದ ಗ್ರಾಮ ನಂದು ಎಂದು ಈ ಹಿಂದೆ ಖಾಸಗಿ ಜಮೀನಿನ ವ್ಯಕ್ತಿ ಒಬ್ಬರು ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ಗ್ರಾಮದಲ್ಲಿನ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಕೂಡ ಖಾಸಗಿ ವ್ಯಕ್ತಿಗಳ ದರ್ಬಾರ್ ನಲ್ಲಿದೆ. ಈ ಬಗ್ಗೆ ಕಂದಾಯ ಇಲಾಖೆಯವರನ್ನು ಕೇಳಿದರೆ ಬ್ರಿಟೀಷ್ ರೆವಿನ್ಯೂ ದಾಖಲೆ ತೋರಿಸಿ ಮೈಸೂರು ರಾಜ್ಯದ ನಕ್ಷೆ ತೋರಿಸುತ್ತಿದ್ದಾರೆ. ಇದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.

    ಒಟ್ಟಿನಲ್ಲಿ ಪಂಚಾಯತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದ ಗ್ರಾಮಸ್ಥರು ಪರಿತಪಿಸುವಂತಾಗಿದೆ.

     

  • ಸ್ವಕ್ಷೇತ್ರದಲ್ಲಿ ಕಾರ್ಯಕರ್ತರ ಬೈಕಿನಲ್ಲೇ ಸುತ್ತಾಡಿದ ಪರಮೇಶ್ವರ್

    ಸ್ವಕ್ಷೇತ್ರದಲ್ಲಿ ಕಾರ್ಯಕರ್ತರ ಬೈಕಿನಲ್ಲೇ ಸುತ್ತಾಡಿದ ಪರಮೇಶ್ವರ್

    ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಚುನಾವಣೆಗೆ 6 ತಿಂಗಳು ಇರುವಾಗಲೇ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಕಳೆದ ಬಾರಿ ಸೋಲಿನ ರುಚಿ ಕಂಡ ಕೊರಟಗೆರೆ ಕ್ಷೇತ್ರದಲ್ಲಿ ಕಾರ್ಯಕರ್ತರ ಬೈಕಲ್ಲಿ ಸುತ್ತಾಡುವ ಮೂಲಕ ತಮ್ಮನ್ನು ಬೆಂಬಲಿಸುಂತೆ ಕೇಳಿಕೊಂಡಿದ್ದಾರೆ.

    ತಮ್ಮ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಜನರೊಟ್ಟಿಗೆ ಬೆರೆಯುತಿಲ್ಲ ಎನ್ನುವ ದೂರು ಜೋರಾಗಿಯೇ ಕೇಳಿಬಂದಿತ್ತು. ಆದರೆ ಪರಮೇಶ್ವರ್ ಸಾಹೇಬರು ಮಾತ್ರ ಇದೆಲ್ಲಾ ಸುಳ್ಳು ಎನ್ನುವ ಹಾಗೆ ಕಾರ್ಯಕರ್ತರ ಬೈಕ್ ನಲ್ಲೇ ಕುಳಿತು ಸವಾರಿ ನಡೆಸಿ ಭಾನುವಾರ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ತಾಲೂಕಿನ ದೊಡ್ಡಪಾಲನಹಳ್ಳಿ ಸೇರಿ ಐದಾರು ಹಳ್ಳಿಗಳಿಗೆ ಭೇಟಿ ನೀಡಿದ್ದ ಪರಂ, ಕಾರ್ಯಕರ್ತರ ಬೈಕ್ ಗಳಲ್ಲೇ ಸಂಚರಿಸಿ ಜನರೊಂದಿಗೆ ಕಾಲ ಕಳೆದಿದ್ದಾರೆ. ನಮ್ ಬೈಕ್ ನಲ್ಲಿ ಹತ್ತಿ ನಮ್ ಬೈಕ್ ನಲ್ಲಿ ಹತ್ತಿ ಎಂದು ಹತ್ತಾರು ಮಂದಿ ಪರಮೇಶ್ವರ್ ಗೆ ದುಂಬಾಲು ಬಿದ್ದಿದ್ದರು.

    ಯಾರಿಗೂ ನಿರಾಸೆ ಆಗಬಾರದು ಎಂದು ಪರಮೇಶ್ವರ್ ಅವರು ಎಲ್ಲರ ಬೈಕ್ ಏರಿ ಹಳ್ಳಿ ಹಳ್ಳಿಯಲ್ಲಿ ಜಾಲಿಯಾಗಿ ಸುತ್ತಾಡಿದ್ದಾರೆ. ಯಾವಾಗಲೂ ಸೆಕ್ಯೂರಿಟಿ, ಎಸ್ಕಾರ್ಟ್ ಎಂದು ಪರಮೇಶ್ವರ್ ಅವರ ಸುತ್ತಲೂ ಪೊಲೀಸರೇ ಇರುತ್ತಿದ್ದರು. ಆದರೆ ನಿನ್ನೆ ಮಾತ್ರ ಎಲ್ಲರನ್ನು ದೂರ ಕಳಿಸಿ ಜನರೊಂದಿಗೆನೇ ಪರಮೇಶ್ವರ್ ಅವರು ಸುಮಾರು ಹತ್ತು ಬೈಕ್‍ ನಲ್ಲೇ ಸುತ್ತಾಡಿ ಕ್ಷೇತ್ರದ ಜನರಿಗೆ ಹತ್ತಿರವಾಗಿದ್ದಾರೆ.

  • ಹಳ್ಳಕ್ಕೆ ಮೇಲ್ಸೇತುವೆಯಿಲ್ಲದೇ ವೃದ್ಧರನ್ನು ಹೊತ್ತು ಹಳ್ಳ ದಾಟಿಸ್ತಾರೆ..!

    ಹಳ್ಳಕ್ಕೆ ಮೇಲ್ಸೇತುವೆಯಿಲ್ಲದೇ ವೃದ್ಧರನ್ನು ಹೊತ್ತು ಹಳ್ಳ ದಾಟಿಸ್ತಾರೆ..!

    – ಹಳ್ಳ ದಾಟಲು ಶಾಲಾ ಮಕ್ಕಳು ಹರಸಾಹಸ

    ಹಾವೇರಿ: ಹಳ್ಳದಲ್ಲಿ ನೀರು ಹರಿಯುತ್ತಿರೋ ಕಾರಣ ಆಸ್ಪತ್ರೆಗೆ ಹೋಗುವ ವಯೋವೃದ್ಧೆಯನ್ನು ಹೊತ್ತುಕೊಂಡು ಹಳ್ಳವನ್ನು ದಾಟಿಸುವ ಹೃದಯ ವಿದ್ರಾವಕ ಘಟನೆ ಹಾವೇರಿ ತಾಲೂಕಿನ ಕೋಡಬಾಳ ಗ್ರಾಮದ ಬಳಿ ನಡೆದಿದೆ.

    ಹಳ್ಳಕ್ಕೆ ಮೇಲ್ಸೇತುವೆ ಇಲ್ಲದ ಕಾರಣ ಹಳ್ಳ ದಾಟಲು ಜನರು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಹೊರವಲಯದಲ್ಲಿ ತುಂಗಾ ಮೇಲ್ದಂಡೆ ಕಾಲುವೆ ನೀರು ತುಂಬಿ ಹರಿಯೋದ್ರಿಂದ ಹಳ್ಳದಲ್ಲಿ ನೀರು ತುಂಬಿ ಹರಿಯುತ್ತದೆ.

    ಆಗ ಗ್ರಾಮದಿಂದ ಬೇರೆ ಕಡೆ ತೆರಳಲು ಆಸ್ಪತ್ರೆಗೆ ಹೋಗುವ ವೃದ್ಧರು ಮತ್ತು ಶಾಲಾ ಮಕ್ಕಳು ಹರಸಾಹಸ ಪಡುತ್ತಾರೆ. ವೃದ್ಧರನ್ನು ಯುವಕರು ಹೊತ್ತುಕೊಂಡು ಹಳ್ಳ ದಾಟಿಸಬೇಕಾದ ದುಃಸ್ಥಿತಿ ಎದುರಾಗಿದೆ. ಸಾಕಷ್ಟು ಬಾರಿ ಗ್ರಾಮಸ್ಥರು ಹಳ್ಳಕ್ಕೆ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿದ್ದರು ಪ್ರಯೋಜನವಾಗಿಲ್ಲ.

    ಈ ಗ್ರಾಮ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಪ್ರತಿನಿಧಿಸುವ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದೆ. ಇನ್ನಾದರೂ ಆದಷ್ಟು ಬೇಗ ಜಿಲ್ಲಾ ಉಸ್ತುವಾರಿ ಸಚಿವರು ಹಳ್ಳಕ್ಕೆ ಮೇಲ್ಸೇತುವೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  • ವಿದ್ಯುತ್ ಕ್ಷಾಮದಲ್ಲಿ ಕರುನಾಡು- ಆರ್‍ಟಿಪಿಎಸ್, ವೈಟಿಪಿಎಸ್‍ನಲ್ಲಿ ಇಲ್ಲ ಕಲ್ಲಿದ್ದಲು

    ವಿದ್ಯುತ್ ಕ್ಷಾಮದಲ್ಲಿ ಕರುನಾಡು- ಆರ್‍ಟಿಪಿಎಸ್, ವೈಟಿಪಿಎಸ್‍ನಲ್ಲಿ ಇಲ್ಲ ಕಲ್ಲಿದ್ದಲು

    – ಚಳಿಗಾಲದಲ್ಲೇ ಪವರ್ ಕಟ್

    ರಾಯಚೂರು: ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಎದುರಾಗಿದ್ದು, ಬೆಂಗಳೂರಿನಲ್ಲೇ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಹಳ್ಳಿಗಳ ಪಾಡಂತು ಕೇಳುವಂತಿಲ್ಲ. ಇದಕ್ಕೆಲ್ಲಾ ಕಾರಣ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ.

    ರಾಯಚೂರು ಶಕ್ತಿನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಾದ ಆರ್‍ಟಿಪಿಎಸ್ ಹಾಗೂ ವೈಟಿಪಿಎಸ್‍ ನಲ್ಲಿ ವಿದ್ಯುತ್ ಉತ್ಪಾದನೆ ಕುಸಿತವಾಗಿದೆ. ಉಳಿದ ವಿದ್ಯುತ್ ಸ್ಥಾವರಗಳಲ್ಲೂ ಉತ್ಪಾದನೆ ಇಳಿಮುಖವಾಗಿದ್ದು, 7,758 ಮೆಗಾ ವ್ಯಾಟ್ ವಿದ್ಯುತ್ ಗೆ ಬೇಡಿಕೆ ಇದೆ. ಆದರೆ ಉತ್ಪಾದನೆಯಾಗುತ್ತಿರೋದು ಮಾತ್ರ 4,408 ಮೆಗಾ ವ್ಯಾಟ್ ವಿದ್ಯುತ್ ಮಾತ್ರ. 1,720 ಮೆಗಾ ವ್ಯಾಟ್ ಉತ್ಪಾದನಾ ಸಾಮಥ್ರ್ಯದ ಆರ್‍ಟಿಪಿಎಸ್ ನಲ್ಲಿ ಕೇವಲ 1,307 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

    ರಾಯಚೂರು ನಗರಕ್ಕೆ 120 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆಯಿದ್ದು, ಕೇವಲ 60 ಮೆಗಾ ವ್ಯಾಟ್ ವಿದ್ಯುತ್ ಪೂರೈಕೆಯಾಗುತ್ತಿದೆ. ಹೀಗಾಗಿ ಸಣ್ಣ ಕೈಗಾರಿಕೆಗಳು, ಕಚೇರಿಗಳು ಹಾಗೂ ಸಾರ್ವಜನಿಕರು ಲೋಡ್ ಶೆಡ್ಡಿಂಗ್ ನಿಂದ ಬೇಸತ್ತು ಹೋಗಿದ್ದಾರೆ. ಮಿಲ್ ಗಳಿಗೆ ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡಿರುವ ರೈತರು ಮಿಲ್ ಗಳು ಬಂದಾಗಿರುವುದರಿಂದ ಹಣ ಸಿಗದೇ ಪರದಾಡುತ್ತಿದ್ದಾರೆ. ಆದರೆ ಜೆಸ್ಕಾಂ ಅಧಿಕಾರಿಗಳು ಮಾತ್ರ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಹೇಳುತ್ತಿದ್ದಾರೆ.

    ಕಲ್ಲಿದ್ದಲು ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಎದುರಾಗಿದೆ. ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡುವುದರಿಂದ ಕೇಂದ್ರ ಸರ್ಕಾರದ ಸಚಿವರ ಜೊತೆ ಸಮನ್ವಯತೆ ಸಾಧಿಸಿ ಕಲ್ಲಿದ್ದಲು ಸರಬರಾಜಿಗೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದರೆ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕವೇ ಕತ್ತಲ ಭಾಗ್ಯಕ್ಕೆ ಒಳಗಾಗೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

  • ಭಾರೀ ಮಳೆಗೆ ಕೊಚ್ಚಿಹೋದ ರಸ್ತೆ-14 ಹಳ್ಳಿಗಳ ಸಂಪರ್ಕ ಕಡಿತ

    ಭಾರೀ ಮಳೆಗೆ ಕೊಚ್ಚಿಹೋದ ರಸ್ತೆ-14 ಹಳ್ಳಿಗಳ ಸಂಪರ್ಕ ಕಡಿತ

    ರಾಯಚೂರು: ಸಿಂಧನೂರು ತಾಲೂಕಿನ ಕೋಳಬಾಳ ಗ್ರಾಮದ ರಸ್ತೆ ಭಾರೀ ಮಳೆಗೆ ಕೊಚ್ವಿ ಹೋಗಿದೆ. ಕಳೆದ ಮೂರು ದಿನಗಳಲ್ಲಿ ಸುರಿದ ಮಳೆಯಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದೆ.

    14 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಮಾರ್ಗ ಈಗ ಸಂಪೂರ್ಣ ಬಂದ್ ಆಗಿದೆ. ಕೆಸರು ಗದ್ದೆಯಾಗಿರುವ ರಸ್ತೆಯಲ್ಲಿ ವಾಹನಗಳು ಸಿಲುಕಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ. ಶಾಲಾ ಮಕ್ಕಳು ಕೆಸರಿನಲ್ಲೆ ಮನೆಯಿಂದ ಶಾಲೆಗೆ ಹೋಗುವಂತ ಪರಸ್ಥಿತಿಯಿದೆ.

    ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೋಳಬಾಳ ಗ್ರಾಮದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ. ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರು ರಸ್ತೆ ಸುಧಾರಿಸುವ ಭರವಸೆ ನೀಡಿ ನಿರ್ಲಕ್ಷ್ಯವಹಿಸಿದ್ದಾರೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.

    ಎಷ್ಟು ಬಾರಿ ಮನವಿ ಸಲ್ಲಿಸಿದರು ಶಾಸಕರು ಹಾಗೂ ಅಧಿಕಾರಿಗಳು ರಸ್ತೆ ಕಡೆ ಗಮನ ಹರಿಸದಿರುವುದರಿಂದ ಈ ಅವ್ಯವಸ್ಥೆಗೆ ಕಾರಣ ಎಂದು ಗ್ರಾಮಸ್ಥರು ಹೇಳುತ್ತಾರೆ.