Tag: village

  • ಗಣೇಶ ಚತುರ್ಥಿಯಿಂದ 15 ದಿನಗಳ ಕಾಲ ಚಕ್ಕುಲಿ ತಯಾರಿಸಿ ಕಂಬಳ ಮೂಲಕ ಊರಿಗೆ ಹಂಚಿಕೆ

    ಗಣೇಶ ಚತುರ್ಥಿಯಿಂದ 15 ದಿನಗಳ ಕಾಲ ಚಕ್ಕುಲಿ ತಯಾರಿಸಿ ಕಂಬಳ ಮೂಲಕ ಊರಿಗೆ ಹಂಚಿಕೆ

    ಕಾರವಾರ: ಗಣೇಶ ಚತುರ್ಥಿ ಬಂದರೆ ಹಬ್ಬದ ಊಟದ ಸವಿ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ವಿಶೇಷವಾಗಿರುತ್ತದೆ. ವರ್ಷಕ್ಕೆ ಒಂದು ಬಾರಿ ಮನೆಗೆ ಬರುವ ಗಣೇಶನಿಗಾಗಿ ಪಂಚಗಜ್ಜಾಯ, ಮೋದಕ, ಹೋಳಿಗೆ, ಚಕ್ಕುಲಿ ಮಾಡುವುದು ಸಾಮಾನ್ಯ. ಆದರೆ ಈ ಊರಿನಲ್ಲಿ ಗಣೇಶ ಚತುರ್ಥಿಯಿಂದ 15 ದಿನಗಳ ಕಾಲ ಚಕ್ಕುಲಿಗಳನ್ನು ತಯಾರು ಮಾಡಿ ಕಂಬಳ ಮಾಡುವ ಮೂಲಕ ಇಡೀ ಊರಿಗೆ ಚಕ್ಕುಲಿ ಹಂಚಿ ವಿಶೇಷವಾಗಿ ಆಚರಿಸುತ್ತಾರೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟ ಕಲ್ಮನೆ ಗ್ರಾಮಗಳಲ್ಲಿ ಗಣೇಶ ಚುತುರ್ಥಿಯ ಅಂಗವಾಗಿ ಚಕ್ಕುಲಿ ಕಂಬಳ ಹಬ್ಬವನ್ನು ಆಚರಿಸುತ್ತಾರೆ. ಹಬ್ಬಕ್ಕೆ 15 ದಿನ ಇರುವಾಗ ಊರಿನ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲಿ 50 ಕೆ.ಜಿಯಷ್ಟು ಅಕ್ಕಿಯನ್ನು ಹದಗೊಳಿಸಿ ಹಿಟ್ಟನ್ನು ತಯಾರಿಸಿಕೊಂಡು ಹಬ್ಬದ ದಿನದಿಂದ 20 ದಿನಗಳವರೆಗೆ ಪ್ರತಿ ಮನೆಗೆ ತೆರಳಿ ಚಕ್ಕುಲಿ ತಯಾರಿಸುತ್ತಾರೆ. ಇದಕ್ಕಾಗಿ 15 ಜನರ ತಂಡವೊಂದು ಊರಿನ ಪ್ರತಿಯೊಬ್ಬರ ಮನೆಗೂ ತೆರಳಿ ಅವರ ಮನೆಯಲ್ಲಿ ಚಕ್ಕುಲಿ ತಯಾರಿಸುತ್ತಾರೆ.

    ವಿಶೇಷವಾಗಿ ಗ್ರಾಮದ ಜನರು ಸಾಮೂಹಿಕವಾಗಿ ಕೈಯಿಂದ ಹಿಟ್ಟನ್ನು ಹೊಸೆದು ಚಕ್ಕುಲಿ ತಯಾರಿಸಿ ಸಂಜೆ ವೇಳೆಯಲ್ಲಿ ಇಡೀ ಊರಿನ ಜನರು ಸೇರಿ ಚಕ್ಕುಲಿಯನ್ನು ಸವಿಯುತ್ತಾರೆ. ಇದಲ್ಲದೇ ಪ್ರತಿ ಮನೆಯಲ್ಲಿ 20 ರಿಂದ 50 ಕೆಜಿಗೂ ಹೆಚ್ಚು ಚಕ್ಕುಲಿಯನ್ನು ತಯಾರಿಸಿ ಊರಿನ ಜನರಿಗೆ ಹಾಗೂ ಬಂದ ಅತಿಥಿಗಳಿಗೆ ಹಂಚಿ ಸಂಭ್ರಮಪಡುತ್ತಾರೆ. ಕಾಲ ಬದಲಾದಂತೆ ಮನುಷ್ಯನು ವೈಜ್ಞಾನಿಕತೆಗೆಯ ಉಪಕರಣಗಳಿಗೆ ಅಂಟಿಕೊಂಡರೂ, ಈ ಭಾಗದ ಜನರು ಮಾತ್ರ ಸಂಪ್ರದಾಯಿಕವಾಗಿ ಕೈಯಿಂದಲೆ ಹಿಟ್ಟನ್ನು ಹೊಸೆದು ಚಕ್ಕುಲಿ ತಯಾರಿಸುತ್ತಾರೆ.

    50ಕ್ಕೂ ಹೆಚ್ಚು ಮನೆಯಿರುವ ಈ ಊರಿನಲ್ಲಿ ಗಣೇಶ ಚತುರ್ಥಿ ದಿನದಿಂದ 20 ದಿನಗಳವರೆಗೆ ಪ್ರತಿ ಮನೆಯಲ್ಲಿ ಚಕ್ಕುಲಿ ಕಂಬಳ ನಡಸಲಾಗುತ್ತದೆ. ಎಷ್ಟೇ ವೈರತ್ವವಿದ್ದರೂ ಈ ಊರಿನಲ್ಲಿ ಪ್ರತಿ ಮನೆಗೆ ತೆರಳಿ ಚಕ್ಕುಲಿ ತಯಾರಿಸಿ ತಿಂದು ರುಚಿ ಸವಿಯಲೇ ಬೇಕು. ಇದರಿಂದಾಗಿ ತಮ್ಮ ತಮ್ಮ ನಡುವಿನ ವೈರತ್ವ ಕಮ್ಮಿಯಾಗಿ ಒಗ್ಗಟ್ಟು ಮೂಡುತ್ತದೆ ಎಂಬ ಭಾವನೆ ಈ ಊರಿನವರದ್ದು. ಹೀಗಾಗಿ 50 ವರ್ಷಗಳಿಂದ ಈ ಚಕ್ಕುಲಿ ಕಂಬಳ ಆಚರಿಸಿಕೊಂಡು ಬರುತಿದ್ದು ತಮ್ಮ ಊರಿನವರಲ್ಲದೇ ಹೊರೂರಿನವರನ್ನೂ ಈ ಕಂಬಳಕ್ಕೆ ಆಹ್ವಾನಿಸುತ್ತಾರೆ.

    ಹೊರ ಊರಿನವರಿಗೆ ಹೊಟ್ಟೆ ತುಂಬ ಚಕ್ಕುಲಿ ನೀಡುವ ಜೊತೆಗೆ ಚೀಲದ ತುಂಬಾ ಚಕ್ಕುಲಿ ನೀಡಿ ಅಥಿತ್ಯ ಮಾಡುತ್ತಾರೆ. ನಾವು ನಮ್ಮ ಊರಿನಲ್ಲಿ ಚತುರ್ಥಿಯನ್ನು ಚಕ್ಕುಲಿ ಕಂಬಳ ಮಾಡುವ ಮೂಲಕ ವಿಶೇಷವಾಗಿ ಆಚರಿಸುತ್ತೇವೆ. ಹಿಂದಿನಿಂದಲೂ ಬಂದ ಸಂಪ್ರದಾಯವನ್ನು ಈವರೆಗೂ ರೂಡಿಸಿಕೊಂಡು ಬಂದಿದ್ದೇವೆ ಕೈಯಿಂದ ಹೊಸೆದು ಮಾಡುವುದರಿಂದ ಚಕ್ಕುಲಿ ನಾಲ್ಕು ತಿಂಗಳಿಗೂ ಹೆಚ್ಚುಕಾಲ ಬಾಳಿಕೆ ಬರುತ್ತದೆ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ರಾಮದ 15ಕ್ಕೂ ಹೆಚ್ಚು ನಾಯಿಗಳನ್ನು ಕೊಂದು ಕ್ರೂರತೆ ಮೆರೆದ ವ್ಯಕ್ತಿ

    ಗ್ರಾಮದ 15ಕ್ಕೂ ಹೆಚ್ಚು ನಾಯಿಗಳನ್ನು ಕೊಂದು ಕ್ರೂರತೆ ಮೆರೆದ ವ್ಯಕ್ತಿ

    ಕೊಪ್ಪಳ: ಗ್ರಾಮದ 15ಕ್ಕೂ ಹೆಚ್ಚು ನಾಯಿಗಳನ್ನು ಕೊಂದು ಕ್ರೂರತೆ ಮೆರೆದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದಲ್ಲಿ ನಡೆದಿದ್ದು, ಯಲಬುರ್ಗಾ ನಿವಾಸಿ ಸಂಜೀವಪ್ಪ ಈ ಕೃತ್ಯವೆಸಗಿ ಪರಾರಿಯಾಗಿದ್ದಾನೆ. ಸಂಜೀವಪ್ಪ ಹಂದಿ ಸಾಕಾಣಿಕೆ ಮಾಡುತ್ತಿದ್ದು, ಗ್ರಾಮದಲ್ಲಿ ಹಂದಿ ಮರಿಗಳನ್ನು ಬಿಟ್ಟಿದ್ದಾನೆ.

    ನಾಯಿಗಳು ಕೆಲ ಹಂದಿ ಮರಿಗಳನ್ನು ಸಾಯಿಸಿದ್ದವು ಇದರಿಂದ ರೊಚ್ಚಿಗೆದ್ದ ಸಂಜೀವಪ್ಪ ಕಳೆದ ರಾತ್ರಿ ಸಿಕ್ಕ ಸಿಕ್ಕ ನಾಯಿಗಳನ್ನು ದೊಣ್ಣೆಯಿಂದ ಹೊಡೆದು ಸಾಯಿಸಿ ಗ್ರಾಮದಿಂದ ಕಾಲ್ಕಿತ್ತಿದ್ದಾನೆ. ಬೆಳಿಗ್ಗೆ ಸತ್ತಿರುವ ನಾಯಿಗಳನ್ನು ಗಮನಿಸಿದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು.

    ಕೆಲ ಸಮಯ ಗ್ರಾಮದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಬೇವೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸುವ ಕೆಲಸ ಮಾಡಿದ್ದರು. ನಾಯಿಗಳನ್ನು ಕೊಂದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಾತ್ಮಾ ಗಾಂಧೀಜಿಯವರ ಕನಸನ್ನ ನನಸು ಮಾಡಿದ ಕೋಟೆನಾಡಿನ ಗ್ರಾಮ

    ಮಹಾತ್ಮಾ ಗಾಂಧೀಜಿಯವರ ಕನಸನ್ನ ನನಸು ಮಾಡಿದ ಕೋಟೆನಾಡಿನ ಗ್ರಾಮ

    ಚಿತ್ರದುರ್ಗ: ಗ್ರಾಮೀಣಾಭಿವೃದ್ಧಿಯೇ ದೇಶ ಅಭಿವೃದ್ಧಿ ಅಂತ ಮಾಹತ್ಮಾ ಗಾಂಧೀಜಿ ಹೇಳಿದ್ದಾರೆ. ಆದರೆ ಇಂದಿಗೂ ಗ್ರಾಮೀಣ ಭಾಗದ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿದರೆ ಎಲ್ಲಿಯೂ ಅಭಿವೃದ್ಧಿಯಾಗಲಿಲ್ಲ. ಆದರೆ ಕೋಟೆನಾಡಿನ ಗ್ರಾಮವೊಂದು ನಗರ ಮಾದರಿಯಲ್ಲಿ ಅಭಿವೃದ್ಧಿ ಕಂಡಿದೆ.

    ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡ ಚೆಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ದೊಡ್ಡ ಬೀರನಹಳ್ಳಿ ನಗರದಂತೆ ಅಭಿವೃದ್ಧಿಯಾಗಿದೆ. ಇಲ್ಲಿ ಗ್ರಾಮದ ಜನರ ಸಹಕಾರದೊಂದಿಗೆ ಗ್ರಾಮ ಪಂಚಾಯತಿ ಸದಸ್ಯರು ಈ ಗ್ರಾಮೀಣಾಭಿವೃದ್ಧಿಗೆ ಶ್ರಮಿಸಿದ್ದಾರೆ. ಪರಿಣಾಮ ಮಾಹತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಇಲ್ಲಿ ಮಾಡಿಸಲಾಗಿದೆ.

    ಗಲ್ಲಿ ಗಲ್ಲಿಯಲ್ಲೂ ಗುಣಮಟ್ಟದ ಸಿಮೆಂಟ್ ರಸ್ತೆಗಳು, ರಸ್ತೆಗಳ ತಿರುವಿನಲ್ಲಿ ಮಾರ್ಗ ಸೂಚಿಸುವ ನಾಮಪಲಕಗಳು ಹಾಗು ಚರಂಡಿ, ನೀರು ಸೇರಿದಂತೆ ಸಕಲ ಮೂಲಭೂತ ಸೌಲಭ್ಯಗಳೂ ಇಲ್ಲಿ ಲಭ್ಯವಿದೆ. ಹೀಗಾಗಿ ನಗರಗಳಲ್ಲೇ ಆಗದ ಅಭಿವೃದ್ಧಿ ಈ ಊರಲ್ಲಿ ಆಗಿದ್ದಕ್ಕೆ ಗ್ರಾಮೀಣಾಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳು ಕಾಳಜಿ ಹೊಂದಿದ್ದೇ ಇದಕ್ಕೆ ಕಾರಣ ಅಂತ ಸ್ಥಳೀಯ ಓಂಕಾರಮೂರ್ತಿ ಹೇಳಿದ್ದಾರೆ.

    ಗ್ರಾಮದ ರಸ್ತೆಗಳಲ್ಲಿ ಅಳವಡಿಸಿದ್ದ ನಾಮಫಲಕಗಳು ಎಲ್ಲರ ಗಮನ ಸೆಳೆಯುತ್ತಿವೆ. ಗ್ರಾಮದಲ್ಲಿ ಕ್ರಾಸ್ ಹಾಗೂ ದೇಗುಲ ಸೇರಿದಂತೆ ಇತರೆ ಮಾಹಿತಿಯನ್ನು ನಾಮಫಲಕದ ಮೂಲಕ ತಿಳಿಯಬಹುದಾಗಿದೆ. ಅಂತೆಯೇ ನಾಮಫಲಕಗಳಲ್ಲಿ ಕಾನೂನು, ಪರಿಸರ ಸೇರಿದಂತೆ ಇತರೆ ಉತ್ತಮ ನುಡಿಗಳನ್ನು ಬರೆಸಲಾಗಿದೆ. ನಗರ ಪ್ರದೇಶಗಲ್ಲಿ ಕೆಲವೆಡೆ ಅಳವಡಿಸಿದ್ದನ್ನು ಕಂಡಾಗ ನಮ್ಮೂರಲ್ಲೇಕೆ ಈ ಮಾದರಿಯ ನಾಮಫಲಕಗಳನ್ನು ಅಳವಡಿಸಬಾರದು ಎಂದು ಈ ನಿರ್ಧಾರ ಕೈಗೊಂಡೆವು ಎಂದು ಗ್ರಾ.ಪಂ. ಸದಸ್ಯ ಧನಂಜಯ ತಿಳಿಸಿದ್ದಾರೆ.

    ಕೋಟೆನಾಡು ಚಿತ್ರದುರ್ಗದ ದೊಡ್ಡ ಬೀರನಹಳ್ಳಿ ಈಗ ಅಭಿವೃದ್ಧಿಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ ಇತರೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮತ್ತು ಸದಸ್ಯರು ನಮ್ಮೂರಲ್ಲೇಕೆ ಈ ರೀತಿ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದರ ಬಗ್ಗೆ ಚಿಂತಿಸಬೇಕಿದೆ. ಆ ಮೂಲಕ ಗಾಂಧೀಜಿಯವರ ಗ್ರಾಮ ಭಾರತದ ಕನಸು ನನಸಾಗಿಸಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ ಅಧಿಕಾರಿಗಳು!

    ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ ಅಧಿಕಾರಿಗಳು!

    ಗದಗ: ಗ್ರಾಮ ವಾಸ್ತವ್ಯದ ನೆಪದಲ್ಲಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ್ದಾರೆ.

    ಜಿಲ್ಲಾಧಿಕಾರಿ ಎಂಜಿ ಹಿರೇಮಠ್ ನೇತೃತ್ವದಲ್ಲಿ ಗದಗ ಜಿಲ್ಲೆಯ ಡಂಬಳ ಗ್ರಾಮದಲ್ಲಿ ಜನಸ್ಪಂದನಾ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇಡೀ ಜಿಲ್ಲಾಡಳಿತದ ಅಧಿಕಾರಿಗಳು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಡೀ ಜಿಲ್ಲಾಡಳಿತವೇ ತಮ್ಮ ಗ್ರಾಮಕ್ಕೆ ಬರುವುದರಿಂದ ನಮ್ಮ ಸಮಸ್ಯೆಗಳು ಇಲ್ಲಿಗೆ ಮುಗಿಯಲಿವೆ ಅಂತ ಅಲ್ಲಿನ ಜನರು ನಂಬಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ಗ್ರಾಮ ವಾಸ್ತವ್ಯದ ನೆಪದಲ್ಲಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ್ದಾರೆ.

    ಪ್ರವಾಸಿ ಮಂದಿರದ ಎ.ಸಿ ರೂಂನಲ್ಲೇ ವಾಸ್ತವ್ಯ ಹೂಡಿ, ಮೃಷ್ಟಾನ್ನ ಭೋಜನ ಸವಿದರು. ಡಿಸಿ ಎಂ.ಜಿ ಹಿರೇಮಠ್ ನೇತೃತ್ವದ ಅಧಿಕಾರಿಗಳು ಉತ್ತರ ಕರ್ನಾಟಕದ ಭಾರೀ ಭೋಜನ ಮಾಡಿ, ಬಾಳೆ ಹಣ್ಣು, ಸೇಬುಗಳನ್ನ ಜೇಬಿಗಿಳಿಸಿ ತಿಂದು ತೇಗಿ ಎಸಿ ರೂಮ್ ನಲ್ಲಿ ಹಾಯಾಗಿ ಮಲಗಿದ್ದಾರೆ. ಡಿಸಿ ಎಂ.ಜಿ ಹಿರೇಮಠ್, ಜಿಲ್ಲಾ ಪಂಚಾಯತ್ ಸಿಇಒ ಮಂಜುನಾಥ್ ಚವ್ಹಾಣ, ಅಪರ ಡಿಸಿ ಶಿವಾನಂದ, ಎಸಿ ಮಂಜುನಾಥ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ಗ್ರಾಮ ವಾಸ್ತವ್ಯದಲ್ಲಿ ಭಾಗಿಯಾಗಿದ್ದರು.

    ಎಲ್ಲ ಅಧಿಕಾರಿಗಳಿಗೆ ಹೈಫ್ ಕಾಟ್, ಬೆಡ್‍ಶಿಟ್, ತಲೆದಿಂಬು, ಬ್ಲಾಂಕೆಟ್ ವ್ಯವಸ್ಥೆ ಮಾಡಲಾಗಿತ್ತು. ಇದು ಗದಗ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯದ ಅಸಲಿ ಕಥೆ ಆಗಿದೆ. ಇನ್ನು ಈ ಕುರಿತು ಡಿಸಿ ಅವರನ್ನು ಕೇಳಿದರೆ 52 ಅರ್ಜಿಗಳು ಬಂದಿದ್ದು, ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಗಿದೆ. ಕೆಲ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗರಿ ಬಿಚ್ಚಿ ಕುಣಿದ ನವಿಲು: ವಿಡಿಯೋ

    ಗರಿ ಬಿಚ್ಚಿ ಕುಣಿದ ನವಿಲು: ವಿಡಿಯೋ

    ಚಿಕ್ಕಮಗಳೂರು: ರಾಷ್ಟ್ರಪಕ್ಷಿ ನವಿಲು ತನ್ನ ಗರಿ ಬಿಚ್ಚಿ ನೃತ್ಯ ಮಾಡಿರುವ ದೃಶ್ಯವೊಂದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಿಳುವಾಲ ಗ್ರಾಮದಲ್ಲಿ ಕಂಡುಬಂದಿದೆ.

    ನವಿಲು ಆಗಾಗ ತನ್ನ ಗರಿ ಬಿಚ್ಚಿ ನೃತ್ಯ ಮಾಡಿಕೊಂಡು ಇಡೀ ಗ್ರಾಮವನ್ನೇ ರಂಜಿಸುತ್ತಿದ್ದು ಗ್ರಾಮದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕಳೆದ ಎರಡು ವರ್ಷದ ಹಿಂದೆ ಗ್ರಾಮದ ಸೋಮಶೇಖರ್ ಕಾಡಿನಲ್ಲಿ ಶ್ವಾನಗಳ ಬಾಯಿಗೆ ತುತ್ತಾಗುತ್ತಿದ್ದ ನವಿಲುಗಳ ಮೊಟ್ಟೆಯನ್ನು ತಂದು ತಮ್ಮ ಮನೆಯ ಕೋಳಿಯ ಮೊಟ್ಟೆಯ ಜೊತೆ ನವಿಲಿನ ಮೊಟ್ಟೆ ಇಟ್ಟಿದ್ದರು.

    ನಂತರ ಕೋಳಿ ನವಿಲು ಮರಿಗೆ ಜನ್ಮ ನೀಡಿತ್ತು. ನಂತರ ನಾಡಿನ ಜನರೊಂದಿಗೆ ಬೆಳೆದ ನವಿಲು ಗ್ರಾಮದಲ್ಲೇ ತನ್ನ ಜೀವನ ಮುಂದುವರೆಸಿದೆ. ರೆಕ್ಕೆ ಬಿಚ್ಚಿ ನಾಟ್ಯವಾಡುತ್ತ ಇಡೀ ಗ್ರಾಮವನ್ನೇ ರಂಜಿಸುತ್ತಿದ್ದು ಎಲ್ಲರ ಆಕರ್ಷಣೆಯಾಗಿದೆ.

    ನವಿಲು ನಾಟ್ಯವಾಡುತ್ತಿದ್ದರೆ ಇಡೀ ಗ್ರಾಮದ ಜನ ಸೆಲ್ಫಿ ತೆಗೆದುಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಹಲವು ಬಾರಿ ಸೋಮಶೇಖರ್ ನವಿಲನ್ನು ಕಾಡಿಗೆ ಬಿಟ್ಟು ಬಂದರು ಗ್ರಾಮವನ್ನು ತೊರೆಯದ ನವಿಲು ಮತ್ತೆ ವಾಪಾಸ್ ಗ್ರಾಮಕ್ಕೆ ಬರುತ್ತಿರುವುದು ಗ್ರಾಮಸ್ಥರಲ್ಲಿ ಆಶ್ಚರ್ಯ ತಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=HaNd7CEO0aM&feature=youtu.be

  • ಡಬಲ್ ಮೀನಿಂಗ್ ಡೈಲಾಗ್ ಇಷ್ಟವಿಲ್ಲ, ಅದು ನನ್ನ ಸಂಸ್ಕೃತಿಯಲ್ಲ- ನೀನಾಸಂ ಸತೀಶ್

    ಡಬಲ್ ಮೀನಿಂಗ್ ಡೈಲಾಗ್ ಇಷ್ಟವಿಲ್ಲ, ಅದು ನನ್ನ ಸಂಸ್ಕೃತಿಯಲ್ಲ- ನೀನಾಸಂ ಸತೀಶ್

    – ಉತ್ತರ ಕರ್ನಾಟಕದ ಹಳ್ಳಿ ದತ್ತು ಪಡೆಯಲು ಚಿಂತನೆ

    ಧಾರವಾಡ: ನನಗೆ ಡಬಲ್ ಮೀನಿಂಗ್ ಡೈಲಾಗ್ ಇಷ್ಟವಿಲ್ಲ, ನನ್ನ ಕುಟುಂಬ ನನಗೆ ಅದನ್ನ ಕಲಿಸಿಲ್ಲ ಎಂದು ಚಿತ್ರ ನಟ ನಿನಾಸಂ ಸತೀಶ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ ಗ್ರೆಡ್ ತರಹದ ಸಿನೆಮಾ ಮಾಡಿ ನನಗೆ ಗೆಲ್ಲೊದು ಬೇಕಾಗಿಲ್ಲ. ಪರಿಶುದ್ಧ ಸಿನೆಮಾ ಮಾಡಬೇಕು ಎಂದಿದ್ದ ನನಗೆ ಇದೇ ಪರಿಶುದ್ಧ ಗೆಲುವು ಎಂದು ಹೇಳಿದರು.

    ಡಬಲ್ ಮೀನಿಂಗ್ ಸಿನಿಮಾ ತರಲು ನನಗೆ ಇಷ್ಟ ಆಗಲ್ಲ. ಅದು ನನ್ನ ಸಂಸ್ಕೃತಿ ಅಲ್ಲ. ನನ್ನ ಕುಟುಂಬದವರು ನನಗೆ ಅದನ್ನು ಕಲಿಸಿಲ್ಲ. ಆ ತರದ ಡೈಲಾಗ್ ಗಳು ಬಂದಾಗ ನನಗೆ ಅಸಹ್ಯ ಆಗುತ್ತೆ. ಹೀಗಾಗಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ಅವುಗಳನ್ನು ನಿರಾಕರಿಸುತ್ತೀನಿ. ಆದ್ರೆ ಪ್ರಾಕೃತಿಕವಾಗಿ ಆ ಕಥೆಯೊಳಗಡೆ ಇದ್ದರೆ ಮಾತ್ರ ಅಂತಹ ಸೀನ್ ಗಳನ್ನು ಬಳಸಲು ಒಪ್ಪಿಗೆ ಕೊಡುತ್ತೇನೆ. ಅದು ಬಿಟ್ಟರೆ ಡಬಲ್ ಮೀನಿಂಗ್ ಡೈಲಾಗ್ ಮೂಲಕ ಜನರನ್ನು ರಂಜಿಸಲು ನಾನು ಹೋಗುವುದಿಲ್ಲ. ಒಂದು ಪರಿಶುದ್ಧವಾದ ಸಿನಿಮಾ ಮಾಡಿ ಗೆಲ್ಲಿಸಿಕೊಳ್ಳೋಣ. ಅದಕ್ಕೆ ಜನ ಸಪೋರ್ಟ್ ಮಾಡಬೇಕು ಅಂತ ಹೇಳಿದ್ರು.

    ಹಳ್ಳಿ ದತ್ತು:
    ಬರುವ ವರ್ಷ ಉತ್ತರ ಕರ್ನಾಟಕ ಭಾಗದಲ್ಲಿ ತೀರಾ ಕಡು ಪರಿಸ್ಥಿತಿಯಲ್ಲಿರುವ ಹಳ್ಳಿಯನ್ನು ದತ್ತು ತೆಗೆದುಕೊಳ್ಳುತ್ತೇನೆ. ಈ ಮೂಲಕ ಉಳ್ಳವರಿಗೆ, ಕೋಟ್ಯದೀಶ್ವರರು ಎಚ್ಚೆತ್ತುಕೊಳ್ಳಲಿ. ನಾವೆಲ್ಲರೂ ಸಮಾಜದ ಜೊತೆ ಇರೋಣ. ನಾವು ತಿನ್ನೋಣ, ಅವರೂ ತಿನ್ನಲಿ. ಹೀಗೆ ಎಲ್ಲರೂ ನೆಮ್ಮದಿಯಾಗಿ ಬದುಕಲು ನಾವೆಲ್ಲರೂ ಸೇರಿ ಅವಕಾಶ ಮಾಡಿಕೊಡಬೇಕು. ಯಾವ ಊರನ್ನು ದತ್ತು ತೆಗೆದುಕೊಳ್ಳಬಹುದೆಂಬ ಲಿಸ್ಟ್ ಮಾಡಿ ಚರ್ಚೆ ನಡೆಸಿ ನನಗೆ ತಿಳಿಸಿ. ಬಳಿಕ ನಾನೇ ಆ ಊರಿಗೆ ಬಂದು ತೆಗೆದುಕೊಳ್ಳುತ್ತೇನೆ ಅಂತ ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಸಾಕು ಪ್ರಾಣಿಗಳನ್ನು ಕೊಲ್ಲುತ್ತಿರುವ ಮಂಗ-ಕೋತಿಯಿಂದ ಭಯಬೀತರಾದ ಗ್ರಾಮಸ್ಥರು

    ಸಾಕು ಪ್ರಾಣಿಗಳನ್ನು ಕೊಲ್ಲುತ್ತಿರುವ ಮಂಗ-ಕೋತಿಯಿಂದ ಭಯಬೀತರಾದ ಗ್ರಾಮಸ್ಥರು

    ಬೆಂಗಳೂರು: ಗ್ರಾಮದಲ್ಲಿ ಎರಡು ವರ್ಷದ ಹಿಂದೆ ಒಂದು ಕೋತಿಯೊಂದು ಸಾಕ್ಷಾತ್ ಹನುಮನ ರೀತಿಯಲ್ಲಿ ಎಂಟ್ರಿ ಕೊಟ್ಟಿತ್ತು. ಊರಿನ ಮಗನಾಗಿ ಬೆಳದಿದ್ದ ಮಂಗ, ಕಳೆದ ಎರಡು ತಿಂಗಳಿಂದ ಗ್ರಾಮದಲ್ಲಿ ತನ್ನ ಉಪಟಳ ಆರಂಭಿಸಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಮಂಟನಕುರ್ಚಿ ಗ್ರಾಮದ ಗ್ರಾಮಸ್ಥರು ಕೋತಿಯ ಉಪಟಳದಿಂದ ಬೇಸತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಮಕ್ಕಳು ಮಂದಿಯನ್ನದೆ ಸಾಕು ಪ್ರಾಣಿಗಳ ಮೇಲೆರಗಿ ಹಿಂಸೆ ಕೊಡ ತೊಡಗಿದೆ. ಇದೀಗ ನಾಯಿ, ಕೋಳಿ ಕುರಿ, ಬೆಕ್ಕುಗಳ ಮೇಲೆ ದಾಳಿ ನಡೆಸುವಷ್ಟು ಉಗ್ರ ರೂಪಿಯಾಗಿದೆ.

    ಇತ್ತೀಚೆಗೆ ಹೂತಿಟ್ಟ ಮೇಕೆ ಮೃತದೇಹವನ್ನ ಊರಿಗೆ ತಂದು ಭಕ್ಷಿಸಿದೆ. ಒಟ್ಟಾರೆ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿರುವ ಈ ಗ್ರಾಮದ ಕೋತಿಯ ಕಾಟ ತಪ್ಪಿದರೆ ಸಾಕು ಎಂದು ಗ್ರಾಮಸ್ಥರು ಹೇಳ್ತಿದ್ದಾರೆ. ದಿನೇ ದಿನೇ ನಾಯಿ ಮರಿಗಳನ್ನ ತಿನ್ನಲು ಯತ್ನಿಸಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಕೋತಿಯನ್ನ ಹಿಡಿದು ಕಾಡಿಗೆ ಸಾಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ರಾಮದಲ್ಲಿ ತಿಂಗಳಿಗೊಂದು ಸಾವು – ಇರೋ ಕುಟುಂಬಗಳಲ್ಲಿ ಸಾವಿಲ್ಲದ ಮನೆಯೇ ಇಲ್ಲ

    ಗ್ರಾಮದಲ್ಲಿ ತಿಂಗಳಿಗೊಂದು ಸಾವು – ಇರೋ ಕುಟುಂಬಗಳಲ್ಲಿ ಸಾವಿಲ್ಲದ ಮನೆಯೇ ಇಲ್ಲ

    – ಇಡೀ ಊರಲ್ಲೀಗ ನರಪಿಳ್ಳೆಯೂ ಸಿಗಲ್ಲ

    ರಾಯಚೂರು: ಸಾವಿಲ್ಲದ ಮನೆಯಿಲ್ಲ ಅನ್ನೋದು ಸರ್ವ ಸತ್ಯವಾದ ಮಾತು ನಿಜ. ಆದರೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಬೊಗಡಿಗೋಟ ತಾಂಡದಲ್ಲಿ ತಿಂಗಳಿಗೆ ಒಬ್ಬರು ಸಾಯದ ಮನೆಯಿಲ್ಲ ಅನ್ನೋ ಮಾತು ಪ್ರತಿ ತಿಂಗಳು ಸತ್ಯವಾಗಿದೆ. ಅಚ್ಚರಿಯಾದ್ರೂ ನೀವೂ ನಂಬಲೇಬೇಕು ಇಲ್ಲಿನ ಪ್ರತಿ ಮನೆಯಲ್ಲಿ ತಿಂಗಳಿಗೊಬ್ಬರು ಸಾಯುತ್ತಾರೆ. ಅದರಲ್ಲೂ ಯುವಕರ ಸಾವೇ ಹೆಚ್ಚು. ಸಾವಿಗೆ ಹೆದರಿದ ಗ್ರಾಮಸ್ಥರು ಮನೆ ಖಾಲಿ ಮಾಡಿ ಗ್ರಾಮವನ್ನೇ ತೊರೆಯುತ್ತಿದ್ದಾರೆ.

    30 ಮನೆಗಳಿರುವ ಈ ಗ್ರಾಮದ ಪ್ರತಿ ಮನೆಯಲ್ಲಿ ಕಳೆದ ಎರಡು ವರ್ಷದಲ್ಲಿ ಕನಿಷ್ಠ ಐದಾರು ಜನ ಸಾವನ್ನಪ್ಪಿದ್ದಾರೆ. ಇಡೀ ಗ್ರಾಮದಲ್ಲಿ ಕಳೆದ ಒಂದೂವರೆ ಎರಡು ವರ್ಷದಲ್ಲಿ ವಿವಿಧ ಕಾರಣಗಳಿಂದ 70 ಕ್ಕೂ ಹೆಚ್ಚು ಜನ ಮರಣಹೊಂದಿದ್ದಾರೆ. ದೈವದ ಕಾಟವೂ, ದೆವ್ವದ ಕಾಟವೂ ತಿಳಿಯದೇ ಗುರುಗಳೊಬ್ಬರ ಮಾತಿನಂತೆ ಮೂರು ತಿಂಗಳ ಕೆಳಗೆ ಒಂದೇ ದಿನದಲ್ಲಿ ಇಡೀ ಗ್ರಾಮವನ್ನೇ ಖಾಲಿ ಮಾಡಿ ಬೆಟ್ಟದ ಮೇಲೆ ಟಿನ್ ಶಡ್‍ಗಳನ್ನ ಹಾಕಿಕೊಂಡು ಬದುಕುತ್ತಿದ್ದಾರೆ. ಮೂರು ತಿಂಗಳಿಂದ ಯಾವುದೇ ಸಾವು ಆಗಿಲ್ಲ. ಇದನ್ನು ನೋಡಿದ್ರೆ ನಮ್ಮೂರಿಗೆ ಶಾಪ ಇದೆ ಅನ್ನೋದು ಗೊತ್ತಾಗುತ್ತೆ ಎಂದು ಗ್ರಾಮಸ್ಥೆ ಮಂಕಮ್ಮ ಹೇಳುತ್ತಾರೆ.

    ನಿರಂತರ ಸಾವುಗಳ ಕಾರಣ ಗ್ರಾಮದ ಜನಸಂಖ್ಯೆ 300 ಇದ್ದದ್ದು ಈಗ 200 ಕ್ಕೆ ಬಂದಿದೆ. ಅನಕ್ಷರಸ್ಥರಾದ್ರೂ ವ್ಯವಸಾಯ ಹಾಗೂ ಕೂಲಿ ಕೆಲಸ ಮಾಡುವ ಗ್ರಾಮಸ್ಥರು ಮನೆಗಳನ್ನ ಚೆನ್ನಾಗಿಯೇ ಕಟ್ಟಿಕೊಂಡು ಬದುಕುತ್ತಿದ್ದರು. ಸರ್ಕಾರಿ ಸೌಲಭ್ಯಗಳು ಸಹ ಪುಟ್ಟ ಗ್ರಾಮಕ್ಕೆ ತಲುಪಿದ್ದು ರಸ್ತೆ, ನೀರು, ಶೌಚಾಲಯದ ವ್ಯವಸ್ಥೆಯೂ ಇತ್ತು. ಆದರೆ ನಿಗೂಢ ಸಾವುಗಳು ಮಾತ್ರ ಇದುವರೆಗೂ ಅರ್ಥವಾಗಿಲ್ಲ. ವಯಸ್ಸಿಗೆ ಬಂದ ಮಕ್ಕಳನ್ನ ಕಳೆದುಕೊಂಡು ವೃದ್ಧರೂ ಗೋಳಿಡುತ್ತಿದ್ದಾರೆ.

    ವಿಚಿತ್ರವೊ ,ವಿಸ್ಮಯವೊ, ಕಾಕತಾಳೀಯವೊ ಅಥವಾ ವೈಜ್ಞಾನಿಕ ಕಾರಣವೇನಾದರೂ ಇದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಬೊಗಡಿಗೋಟ ಗ್ರಾಮವನ್ನ ಬಿಟ್ಟು ಬೆಟ್ಟದ ಮೇಲೆ ಬಂದು ವಾಸಿಸುತ್ತಿರುವ ಜನ ಈಗ ಆರಾಮಾಗಿದ್ದಾರೆ. ಸುಮಾರು 70 ಜನರ ಸರಣಿ ಸಾವಾದರೂ ಇದೂವರೆಗೆ ತಾಲೂಕು ಆಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಗ್ರಾಮಕ್ಕೆ ಭೇಟಿ ನೀಡಿಲ್ಲ. ಇದು ನಿಜಕ್ಕೂ ದುರದೃಷ್ಠಕರ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೃಷ್ಣಾ ಎಡದಂಡೆ ಕಾಲುವೆ ಒಡೆದು ನುಗ್ಗಿದ ನೀರು: ಕೆರೆಯಂತಾದ ಹಾವಿನಾಳ ಗ್ರಾಮ!

    ಕೃಷ್ಣಾ ಎಡದಂಡೆ ಕಾಲುವೆ ಒಡೆದು ನುಗ್ಗಿದ ನೀರು: ಕೆರೆಯಂತಾದ ಹಾವಿನಾಳ ಗ್ರಾಮ!

    ಯಾದಗಿರಿ: ಕೃಷ್ಣಾ ಎಡದಂಡೆ ಕಾಲುವೆ ಒಡೆದ ಪರಿಣಾಮ ಜಿಲ್ಲೆಯ ಸುರಪುರ ತಾಲೂಕಿನ ಹಾವಿನಾಳ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ಇಡೀ ಹಳ್ಳಿ ಕೆರೆಯಂತೆ ನಿರ್ಮಾಣವಾಗಿದೆ.

    ಸುರಪುರ ತಾಲೂಕಿನ ನಾರಾಯಣಪೂರ ಗ್ರಾಮದ ಬಸವಸಾಗರ ಜಲಾಶಯದ ಕೃಷ್ಣಾ ಎಡದಂಡೆ ಮುಖ್ಯ ಕಾಲುವೆಯು ಕಳೆದ ಮೂರು ದಿನಗಳ ಹಿಂದೆ ಒಡೆದು ಹೋಗಿದೆ. ಇದರಿಂದಾಗಿ ಹಾವಿನಾಳ ಗ್ರಾಮಕ್ಕೆ ನೀರು ನುಗ್ಗಿದೆ. ನೀರು ನುಗ್ಗಿದ್ದರ ಪರಿಣಾಮ ಇಡೀ ಹಳ್ಳಿಯು ಕೆರೆಯಂತಾಗಿದ್ದು, ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ.

    ಬಸವಸಾಗರ ಎಡದಂಡೆಯ ಮುಖ್ಯ ಕಾಲುವೆಯು ಕಳಪೆ ಕಾಮಗಾರಿಯಿಂದ ನಿರ್ಮಿಸಿದ್ದರಿಂದ ಕಾಲುವೆ ಒಡೆದಿದ್ದು, ಅಪಾರ ಪ್ರಮಾಣ ನಷ್ಟವಾಗಿದೆ. ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಬೀದಿ ಬೀದಿಗಳಲ್ಲಿ ನೀರು ನಿಂತಿದೆ. ಇದರಿಂದಾಗಿ ಗ್ರಾಮಸ್ಥರು ಓಡಾಡಲು ಸಹ ಕಷ್ಟವಾಗಿದೆ. ಗ್ರಾಮದ ಪ್ರಮುಖ ರಸ್ತೆ, ಶಾಲೆ ಹಾಗೂ ದೇವಸ್ಥಾನದ ಆವರಣಗಳ ಸುತ್ತಲೂ ನೀರು ನಿಂತಿದೆ ಎಂದು ಹಾವಿನಾಳ ಗ್ರಾಮಸ್ಥರು ಹೇಳಿದ್ದಾರೆ.

    ಬಸವಸಾಗರ ಜಲಾಶಯದಿಂದ ಕಾಲುವೆಗೆ ಸ್ವಲ್ಪ ಪ್ರಮಾಣದ ನೀರು ಹರಿಸಿದಕ್ಕೆ ಇಷ್ಟು ಪ್ರಮಾಣದ ಹಾನಿಯಾಗಿದೆ. ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಕಾಲುವೆಗೆ ನೀರನ್ನು ಹರಿಸಿದರೆ ಭಾರೀ ಅನಾಹುತವಾಗುತಿತ್ತು. ಈಗಾಗಲೇ ಗ್ರಾಮದಲ್ಲಿ ನೀರು ನುಗ್ಗಿದ್ದರಿಂದ ಮನೆಗಳಲ್ಲಿದ್ದ ಎಲ್ಲಾ ವಸ್ತುಗಳು ಸಂಪೂರ್ಣವಾಗಿ ಹಾಳಾಗಿವೆ. ಈಗಲಾದರೂ ಕೆಬಿಜೆಎನ್‍ಎಲ್(ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ) ಅಧಿಕಾರಿಗಳು ಒಡೆದಿರುವ ಕಾಲುವೆ ದುರಸ್ಥಿ ಮಾಡಿ ಗ್ರಾಮಕ್ಕೆ ನೀರು ಬಾರದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಮಂಜುನಾಥ್ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅಮಾವಾಸ್ಯೆಯಂದೇ ಮನೆಯಲ್ಲಿ ನಾಗರ ಹಾವು ಪ್ರತ್ಯಕ್ಷ- ಗ್ರಾಮಸ್ಥರಲ್ಲಿ ಅಚ್ಚರಿ

    ಅಮಾವಾಸ್ಯೆಯಂದೇ ಮನೆಯಲ್ಲಿ ನಾಗರ ಹಾವು ಪ್ರತ್ಯಕ್ಷ- ಗ್ರಾಮಸ್ಥರಲ್ಲಿ ಅಚ್ಚರಿ

    ವಿಜಯಪುರ: ಅಮಾವಾಸ್ಯೆಯ ದಿನ ಮನೆಯಲ್ಲಿ ನಾಗರ ಹಾವು ಪ್ರತ್ಯಕ್ಷವಾದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕಾನ್ನಾಳ ಗ್ರಾಮದಲ್ಲಿ ನಡೆದಿದೆ.

    ಮಲ್ಲಪ್ಪ ಹೂಗಾರ ಎಂಬವರ ಮನೆಯಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿದ್ದು, ಮನೆಯ ದೇವರ ಜಗಲಿಯ ಮೇಲೆ ನಾಗರ ಹಾವು ಬಂದು ಕೂತಿದೆ. ಇದರಿಂದ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿದ್ದು, ನಾಗರ ಅಮಾವಾಸ್ಯೆಯಾದ ಕಾರಣ ನಾಗರಾಜನ ದರ್ಶನಕ್ಕೆ ಗ್ರಾಮದ ಜನ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.

    ಹಾಡು ದೇವರ ಕೋಣೆಯಲ್ಲಿ ಪ್ರತ್ಯೇಕ್ಷವಾಗಿರುವುದನ್ನು ಕಂಡ ಮನೆಯ ಮಾಲೀಕರು ಹಾವಿಗೆ ಪೂಜೆ ನಡೆಸಿದ್ದಾರೆ. ಎಷ್ಟೇ ಶಬ್ಧ ಮಾಡಿದರು ನಾಗರಹಾವು ಎಲ್ಲಿಗೂ ತೆರಳದ್ದನ್ನು ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾಗರ ಅಮಾವಾಸ್ಯೆ ದಿನದಂದೇ ಮನೆಯಲ್ಲಿ ಹಾವು ಕಾಣಿಸಿಕೊಂಡಿರುವುದು ಶುಭ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಜನ ಮರುಳೊ ಜಾತ್ರೆ ಮರುಳೊ ಎಂಬಾಂತ ಪರಿಸ್ಥಿತಿ ನಿರ್ಮಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews