Tag: village

  • ರಸ್ತೆ ಇಲ್ಲದ ಕಾರಣ ಮದ್ವೆಗೆ ಒಪ್ಪದ ವಧು ಪೋಷಕರು- ಗ್ರಾಮಸ್ಥರು ಮಾಡಿದ್ದೇನು..?

    ರಸ್ತೆ ಇಲ್ಲದ ಕಾರಣ ಮದ್ವೆಗೆ ಒಪ್ಪದ ವಧು ಪೋಷಕರು- ಗ್ರಾಮಸ್ಥರು ಮಾಡಿದ್ದೇನು..?

    ಹೈದರಾಬಾದ್: ಯುವಕನೋರ್ವನ ಮದುವೆಗಾಗಿ ಇಡೀ ಗ್ರಾಮದ ಜನರು ಸೇರಿ ರಸ್ತೆ ನಿರ್ಮಾಣವನ್ನು ಮಾಡಿದ ಘಟನೆ ಹೈದರಬಾದ್‍ನ ಅದಿಲಾಬಾದ್ ಹಳ್ಳಿಯಲ್ಲಿ ನಡೆದಿದೆ.

    ಹನುಮಂತು ಎನ್ನುವ ಯುವಕನಿಗೆ ಅದೇ ಜಿಲ್ಲೇಯ ಲಕ್ಷ್ಮೀಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಹನುಮಂತು ಗ್ರಾಮಕ್ಕೆ ರಸ್ತೆ ಇಲ್ಲದ ಕಾರಣ ನಾವು ನಮ್ಮ ಮಗಳನ್ನು ಕೊಡಲ್ಲ ಎಂದು ಯುವತಿಯ ಪೋಷಕರು ಹೇಳಿದ್ದರು.

    ನಮ್ಮ ಊರಿನ ಯುವಕನಿಗೆ ಊರಿಗೆ ರಸ್ತೆ ಇಲ್ಲ ಎನ್ನುವ ಒಂದು ಕಾರಣದಿಂದಾಗಿ ಹೆಣ್ಣು ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಬೇಸರಗೊಂಡ ಗ್ರಾಮಸ್ಥರು, ಒಟ್ಟಾಗಿ ಸೇರಿ ಒಂದು ನಿರ್ಧಾರಕ್ಕೆ ಬಂದರು. ಊರಿನ ಗ್ರಾಮಸ್ಥರೆಲ್ಲ ಸೇರಿ ಊರಿಗೆ ಒಂದು ರಸ್ತೆ ನಿರ್ಮಿಸಬೇಕು ಎಂದು ಮಾತನಾಡಿಕೊಂಡು ರಸ್ತೆ ನಿರ್ಮಾಣ ಮಾಡಿದರು. ಬಳಿಕ ಊರಿನ ಜನರೆಲ್ಲರೂ ಸೇರಿ ಹನುಮಂತು, ಲಕ್ಷ್ಮೀ ಮದುವೆ ಮಾಡಿದರು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – 7 ದಶಕದ ಹಳ್ಳದ ಬದುಕಿಗೆ ಮುಕ್ತಿ, ಸೇತುವೆ ನಿರ್ಮಾಣದ ಸರ್ವೇ ಕಾರ್ಯ ಶುರು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – 7 ದಶಕದ ಹಳ್ಳದ ಬದುಕಿಗೆ ಮುಕ್ತಿ, ಸೇತುವೆ ನಿರ್ಮಾಣದ ಸರ್ವೇ ಕಾರ್ಯ ಶುರು

    ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕಣತಿ ಸಮೀಪದ ಐದಳ್ಳಿ ಗ್ರಾಮದ ಜನ ಕಳೆದ ಏಳೆಂಟು ದಶಕಗಳಿಂದ ಐದಳ್ಳಿ ಗ್ರಾಮದಲ್ಲಿ ಹರಿಯೋ ಆನೆ ಬಿದ್ದ ಹಳ್ಳದ ಮಾರ್ಗವೇ ಗತಿಯಾಗಿತ್ತು. ಇಲ್ಲಿನ ಜನರು ನಿತ್ಯ ಸಂಚಾರ ಮಾಡಲು ಪಡುತ್ತಿದ್ದ ಕಷ್ಟವನ್ನು ಹಲವು ಬಾರಿ ಸರ್ಕಾರದ ಮುಂದಿಟ್ಟರೂ ಪರಿಹಾರ ಸಿಕ್ಕಿರಲಿಲ್ಲ. ಹಳ್ಳಿಗರ ಪರಿಸ್ಥಿತಿ ಅರಿತು ಪಬ್ಲಿಕ್ ಟಿವಿ ಸುದ್ದಿ ಬಿತ್ತರಿಸಿತ್ತು. ಇದೀಗ ಪಬ್ಲಿಕ್ ಟಿವಿ ವರದಿಯ ಫಲಶೃತಿಯ ಫಲವಾಗಿ ಕಳೆದ 70 ವರ್ಷದಿಂದ ನದಿ ಮಾರ್ಗವಾಗಿ ಓಡಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಗ್ರಾಮದ ಜನರಿಗೆ ಸೇತುವೆಯ ಭಾಗ್ಯ ಲಭಿಸಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

    ಈ ಊರಿನ ಜನರಿಗೆ ಹುಟ್ಟು-ಸಾವಿಗೂ ಇದೊಂದೆ ದಾರಿಯಾಗಿತ್ತು. ಮಕ್ಕಳು ಶಾಲೆಗೆ ಹೋಗಲು ಇದ್ದದ್ದು ಇದೊಂದೆ ಮಾರ್ಗವಾಗಿವಾಗಿತ್ತು. ಮಳೆಗಾಲದಲ್ಲಿ ಮಕ್ಕಳು ಎರಡ್ಮೂರು ತಿಂಗಳು ಶಾಲೆಗೆ ಹೋಗುತ್ತಿರಲಿಲ್ಲ. ಅನಿವಾರ್ಯವಾಗಿ ಐದಳ್ಳಿಯಿಂದ ಅರ್ಧ ಕಿ.ಮೀ. ದೂರದ ಕಣತಿ ಗ್ರಾಮಕ್ಕೆ ಬರಬೇಕೆಂದರೆ ಸುಮಾರು ಐದಾರು ಕಿ.ಮೀ. ಸುತ್ತಿ ಬರಬೇಕಿತ್ತು.

    ಸ್ಥಳೀಯರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದರು. ಆದರೆ, ಮಳೆಗಾಲ ಮುಗಿಯಲಿ, ಬೇಸಿಗೆಯಲ್ಲಿ ಸೇತುವೆ ನಿರ್ಮಿಸಿ ಕೊಡುತ್ತೇವೆ ಎಂದು ಹೇಳುತ್ತಾ ಸರ್ಕಾರ ದಶಕಗಳನ್ನೇ ದೂಡಿತ್ತು. ಹಳ್ಳಿಗರ ಪರಿಸ್ಥಿತಿ ಅರಿತು ಪಬ್ಲಿಕ್ ಟಿವಿ ಸುದ್ದಿ ಬಿತ್ತರಿಸಿತ್ತು. ಇದೀಗ ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಸರ್ವೇ ಮಾಡಿದ್ದಾರೆ. ಶಾಸಕರು ಕೂಡ 50 ಲಕ್ಷದಲ್ಲಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಇದರಿಂದ ಹರ್ಷಗೊಂಡ ಹಳ್ಳಿಗರು ಪಬ್ಲಿಕ್ ಟಿವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಗ್ರಾಮದಿಂದ ಅರೆನೂರು, ಬೆಟ್ಟದಹಳ್ಳಿ ಹಾಗೂ ದುರ್ಗ ಗ್ರಾಮಕ್ಕೂ ಸಂಪರ್ಕವಿದೆ. ಐದಳ್ಳಿ ಗ್ರಾಮದಲ್ಲಿ ಸುಮಾರು 30-35 ಮನೆಗಳಿವೆ. ಇಲ್ಲಿಂದ ಚಿಕ್ಕಮಗಳೂರು-ಶೃಂಗೇರಿ ಮಾರ್ಗದ ರಾಜ್ಯ ಹೆದ್ದಾರಿಯ ಕಣತಿ ಗ್ರಾಮಕ್ಕೆ ಕೇವಲ ಒಂದು ಕಿ.ಮೀ. ಆದರೆ, ಐದಳ್ಳಿ ಜನ ಕಣತಿಗೆ ಬರಬೇಕೆಂದರೆ ಸುಮಾರು ಐದಾರು ಕಿ.ಮೀ. ಸುತ್ತಿ ಬರಬೇಕು.

    ಈ ಆನೆ ಬಿದ್ದ ಹಳ್ಳಕ್ಕೆ ಸೇತುವೆ ನಿರ್ಮಾಣವಾದರೆ ಮುಕ್ಕಾಲು ಅಥವಾ ಒಂದು ಕಿ.ಮೀ ನಲ್ಲಿ ಕಣತಿ ಗ್ರಾಮಕ್ಕೆ ಬರುತ್ತಾರೆ. ಆದರೆ, ಏಳು ದಶಕಗಳಿಂದ ಇವರಿಗೆ ಒಂದು ಸೇತುವೆ ಭಾಗ್ಯ ಒದಗಿಬಂದಿರಲಿಲ್ಲ. ಯಾರಿಗಾದರೂ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ಜೋಳಿಗೆ ಕಟ್ಟಿಕೊಂಡು ಹೊತ್ತುಕೊಂಡೇ ಹೋಗಬೇಕಾಗಿತ್ತು. ಈ ಹಳ್ಳದಲ್ಲಿ ಹೋಗುವಾಗ ಕೆಲ ಹುಡುಗರ ಕೊಚ್ಚಿ ಹೋಗಿರುವ ಪ್ರಸಂಗವು ನಡೆದಿತ್ತು. ಆದರೆ ಇದೀಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೇತುವೆ ನಿರ್ಮಾಣಕ್ಕೆ ಸರ್ವೇ ಮಾಡಿರುವುದು, ಕಳೆದ ಏಳೆಂಟು ದಶಕಗಳಿಂದ ಕಾಡು ಮನುಷ್ಯರಂತೆ ಜೀವಿಸಿದ್ದ ಈ ಗ್ರಾಮದ ಜನರಲ್ಲಿ ಸಂತಸ ಮೂಡಿಸಿದೆ.

  • ನವಜಾತ ಶಿಶುವನ್ನು ಕೊಂದು ಪೊದೆ ಪಕ್ಕ ಬಿಸಾಡಿದ ಪಾಪಿಗಳು

    ನವಜಾತ ಶಿಶುವನ್ನು ಕೊಂದು ಪೊದೆ ಪಕ್ಕ ಬಿಸಾಡಿದ ಪಾಪಿಗಳು

    ಗದಗ: ನವಜಾತ ಶಿಶುವೊಂದನ್ನ ಕೊಂದು ಪೋದೆ ಪಕ್ಕದಲ್ಲಿ ಬಿಸಾಕಿ ಹೋಗಿರುವ ಮನಕುಲಕುವ ಘಟನೆ ಜಿಲ್ಲೆ ಗಜೇಂದ್ರಗಡ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

    ಪಟ್ಟಣದ ಉಣಚಗೇರಿ ರಸ್ತೆಯಲ್ಲಿ ಈ ಅಮಾನುಷ ಘಟನೆ ನಡೆದಿದೆ. ಮೃತ ಮಗುವಿನ ಮುಖದ ಸುತ್ತ ಕೆಂಪು ಗಾಯಗಳಾಗಿವೆ. ಅಲ್ಲದೇ ಸ್ಥಳದಲ್ಲಿ ಕುಡುಗೋಲು, ಬ್ಲೇಡ್ ಹಾಗೂ ಬಾಸ್ಕೆಟ್ ಬ್ಯಾಗ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ.

    ಹೆಣ್ಣು ಹಸುಗೂಸಿನ ಶವ ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ. ಮಗು ಯಾರದ್ದು ಎಂದು ತಿಳಿದು ಬಂದಿಲ್ಲ. ಕೃತ್ಯ ಎಸಗಿದ ಪಾಪಿ ಕಿರಾತಕರ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ. ಕರಳು ಬಳ್ಳಿಯನ್ನು ಕತ್ತರಿಸಿ ಕೊಂದು ಬಿಸಾಕಿದ್ದು, ನೋಡುಗರ ಕರಳು ಹಿಂಡುವಂತಿತ್ತು. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗ್ರಾಮದಲ್ಲೇ ಸವದತ್ತಿ ಯಲ್ಲಮ್ಮ ಜಾತ್ರೆಯನ್ನು ಆಚರಿಸಿದ ಗ್ರಾಮಸ್ಥರು

    ಗ್ರಾಮದಲ್ಲೇ ಸವದತ್ತಿ ಯಲ್ಲಮ್ಮ ಜಾತ್ರೆಯನ್ನು ಆಚರಿಸಿದ ಗ್ರಾಮಸ್ಥರು

    ಧಾರವಾಡ: ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಕೊರೊನಾ ಹಾವಳಿ ಹೆಚ್ಚಾದ ಹಿನ್ನೆಯಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಜಾತ್ರೆ ರದ್ದು ಪಡಿಸಲಾಗಿದೆ. ಹಾಗಾಗಿ ಜಿಲ್ಲೆಯ ಗ್ರಾಮಸ್ಥರು ಗ್ರಾಮದಲ್ಲೇ ಜಾತ್ರೆ ಮಾಡಿ ಭಕ್ತಿ ಮೆರೆದಿದ್ದಾರೆ.

    ಹುಣ್ಣಿಮೆಯಂದು ನಡೆಯುವ ಇಲ್ಲಿನ ಜಾತ್ರೆಗೆ ಪ್ರತಿ ವರ್ಷ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಕರ್ನಾಟಕದಲ್ಲಿ ಮುನ್ನೆಚ್ಚರಿಕೆಯಿಂದ ಜಾತ್ರೆಗೆ ಅವಕಾಶ ನೀಡಿಲ್ಲ. ಹಾಗಾಗಿ ದೇವಿಯ ಭಕ್ತರು ತಾವಿದ್ದ ಸ್ಥಳದಲ್ಲೇ ದೇವರಿಗೆ ಪೂಜೆ ಮಾಡಿ ಭಕ್ತಿಯಿಂದ ಕೈ ಮುಗಿದಿದ್ದಾರೆ. ಮನಸೂರ ಗ್ರಾಮದ ಕರೆಮ್ಮ ದೇವಿ ದೇವಸ್ಥಾನದಲ್ಲಿ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಗ್ರಾಮದ ಜನರು ಎರಡು ದಿನ ಅಲ್ಲೇ ಇದ್ದು, ಅಲ್ಲಿಯೇ ಅಡುಗೆ ಮಾಡಿ ಹಡ್ಡಲಗಿ ತುಂಬಿಸಿ ಯಲ್ಲಮ್ಮ ದೇವಿಗೆ ಭಕ್ತಿ ಸಮರ್ಪಣೆ ಮಾಡಿದ್ದಾರೆ.

    ಪ್ರತಿ ವರ್ಷ ಜಿಲ್ಲೆಯ ಗ್ರಾಮಸ್ಥರು ಮತ್ತು ಅಕ್ಕಪಕ್ಕದ ಗ್ರಾಮದ ಜನರು ಟ್ರ್ಯಾಕ್ಟರ್ ಹಾಗೂ ಚಕ್ಕಡಿ ಮೂಲಕ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿ ಜಾತ್ರೆ ಮಾಡುತ್ತಿದ್ದರು. ಈ ವರ್ಷ ಮಾತ್ರ ಭಕ್ತರಿಗೆ ಯಲ್ಲಮ್ಮ ಗುಡ್ಡಕ್ಕೆ ಹೋಗಲು ಅವಕಾಶ ಸಿಗದ ಹಿನ್ನೆಲೆ ಗ್ರಾಮದ ಜನರು ಕೋವಿಡ್ ನಿಯಮ ಪಾಲಿಸಿ ಶ್ರೀಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಹೇಗೆ ಜಾತ್ರೆ ಮಾಡಲಾಗುತ್ತಿತ್ತೋ ಅದೇ ರೀತಿ ಈ ಬಾರಿ ಗ್ರಾಮದಲ್ಲೇ ಪೂಜೆ ಪುನಸ್ಕಾರ ಮಾಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.

  • ಮನೆಮಂದಿಗೆ ಚಾಕು ತೋರಿಸಿ ಚಿನ್ನ ದೋಚಿದ ಖದೀಮರು

    ಮನೆಮಂದಿಗೆ ಚಾಕು ತೋರಿಸಿ ಚಿನ್ನ ದೋಚಿದ ಖದೀಮರು

    ಹಾಸನ: ಮನೆಮಂದಿಯೆಲ್ಲ ಮನೆಯಲ್ಲಿರುವಾಗಲೇ ಕಳ್ಳರ ಗುಂಪೊಂದು ಮನೆಗೆ ನುಗ್ಗಿ ಚಾಕು ತೋರಿಸಿ ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ದೋಚಿರುವಂತಹ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಅರಕೆರೆ ಗ್ರಾಮದ ರಾಜಶೇಖರ್ ಎಂಬವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಮನೆ ಮಂದಿಯೆಲ್ಲ ಎಂದಿನಂತೆ ಮನೆಯಲ್ಲಿದ್ದ ವೇಳೆ ಏಕಾಏಕಿ ನಾಲ್ಕೈದು ಮಂದಿಯ ತಂಡ ಮನೆಯ ಹಿಂಬಾಗಿಲಿನಿಂದ ಒಳಬಂದಿದ್ದಾರೆ. ಅಲ್ಲದೆ ಮಾಲೀಕರಿಗೆ ಚಾಕು ತೋರಿಸಿ ಮನೆಯಲ್ಲಿದ್ದ 70 ಗ್ರಾಂ. ಚಿನ್ನ 50 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

    ಪ್ರಕರಣ ನಡೆದ ವಿಷಯ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಶ್ವಾನ ದಳ ಮತ್ತು ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಕೆಲ ಮಾಹಿತಿಗಳನ್ನು ಸಂಗ್ರಹಣೆ ಮಾಡಿದ್ದು ಆರೋಪಿಗಳಿಗಾಗಿ ಬಲೆಬೀಸಿದ್ದಾರೆ. ಈ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

  • ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿ ಬೋನಿಗೆ ಬಿತ್ತು ಚಿರತೆ ಮರಿ

    ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿ ಬೋನಿಗೆ ಬಿತ್ತು ಚಿರತೆ ಮರಿ

    – ತಾಯಿ ಚಿರತೆಗಾಗಿ ಅರಣ್ಯಾಧಿಕಾರಿಗಳ ಶೋಧ

    ನೆಲಮಂಗಲ: ದಕ್ಷಿಣಕಾಶಿ ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿ ಚಿರತೆ ಮರಿ ಬೋನಿಗೆ ಬಿದ್ದಿದ್ದು ನೆಲಮಂಗಲ ತಾಲೂಕಿನ ನಾರಾಯಣಪುರ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

    ಸುಮಾರು 2 ವರ್ಷದ ಹೆಣ್ಣು ಚಿರತೆ ಮರಿ ಬೋನಿಗೆ ಬಿದ್ದಿದೆ. ಸ್ಥಳಕ್ಕೆ ನೆಲಮಂಗಲ ಅರಣ್ಯ ಅಧಿಕಾರಿಗಳ ದೌಡಾಯಿಸಿದ್ದು, ಚಿರತೆ ಮರಿಯನ್ನು ಬನ್ನೇರುಘಟ್ಟ ಅರಣ್ಯಕ್ಕೆ ಸಾಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

    ಬೆಳ್ಳಂಬೆಳಗ್ಗೆ ಚಿರತೆ ಮರಿಯನ್ನು ಕಂಡ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಾವೆಲ್ಲ ಸೇರಿ ಚಿರತೆ ಮರಿ ಬಿದ್ದಿರುವ ಬೋನನ್ನು ತಂದಿದ್ದೇವೆ. ಎರಡು ಮೂರು ಚಿರತೆ ಬೀಡು ಬಿಟ್ಟಿರುವ ಪಕ್ಕದ ಗೆರುಗುಟ್ಟುಕ್ಕೆ ತೆರಳಲು ನಮಗೆ ಭಯವಾಗುತ್ತದೆ ಎಂದು ಹೇಳಿ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.

    15 ಮೇಕೆ, 10 ಕೋಳಿ, 3 ಹಸು, ಸಾಕಷ್ಟು ನಾಯಿ ತಿಂದು ಭಕ್ಷಿಸಿರುವ ಚಿರತೆಗಳು ಗ್ರಾಮದಲ್ಲಿದೆ. ಅದಷ್ಟೂ ಬೇಗ ಎಲ್ಲಾ ಚಿರತೆಗಳನ್ನು ಹಿಡಿಯಿರಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹಲವಾರು ತಿಂಗಳಿನಿಂದ ಚಿರತೆಗಳು ಬೀಡುಬಿಟ್ಟಿದ್ದು, ಸುಮಾರು 2 ತಿಂಗಳಿನಿಂದ ಬೋನು ಇರಿಸಿದ್ದಾರೆ.

    ಚಿರತೆಗಳನ್ನು ಮತ್ತೆ ಹತ್ತಿರದ ಕಾಡಿನಲ್ಲಿ ಬಿಡಬೇಡಿ, ಬನ್ನೇರುಘಟ್ಟ ಕಾಡಿಗೆ ಬಿಟ್ಟಿದ್ದೇವೆ ಎಂಬ ಪತ್ರವನ್ನು ಪಂಚಾಯತಿಗೆ ನೀಡಿಲ್ಲ. ಹೀಗಾಗಿ ಅರಣ್ಯ ಅಧಿಕಾರಿಗಳು ನಮಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ಅಗ್ರಹಿಸಿದರು.

  • ಮೂಡಿಗೆರೆಯ ಗ್ರಾಮದಲ್ಲಿ ಒಂಟಿ ಸಲಗ ಓಡಾಟ – ಆತಂಕದಲ್ಲಿ ಸ್ಥಳೀಯರು

    ಮೂಡಿಗೆರೆಯ ಗ್ರಾಮದಲ್ಲಿ ಒಂಟಿ ಸಲಗ ಓಡಾಟ – ಆತಂಕದಲ್ಲಿ ಸ್ಥಳೀಯರು

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿ-ಹೆಸಗೋಡು ಗ್ರಾಮಗಳ ಅಂಚಿನಲ್ಲಿ ಒಂಟಿ ಸಲಗ ಘೀಳಿಡುತ್ತಾ ನಡೆಯುತ್ತಿರುವುದನ್ನು ಕಂಡು ಹಳ್ಳಿಗರು ಆತಂಕದಲ್ಲಿ ಬದುಕುತ್ತಿದ್ದಾರೆ.

    ಗುತ್ತಿ, ಬೈರಾಪುರ, ಗೌಡಹಳ್ಳಿ, ಸಾರಗೋಡು, ಹೆಸಗೋಡು ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಆನೆ ಕಾಟ ಹೆಚ್ಚಾಗಿದೆ. ಎರಡ್ಮೂರು ಜನ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ನೂರಾರು ಜನ ಮನೆ-ತೋಟ-ಗದ್ದೆಗಳನ್ನ ಕಳೆದುಕೊಂಡಿದ್ದಾರೆ. ತೋಟ, ಗದ್ದೆಗಳಲ್ಲಿ ದಾಂಧಲೆ ಮಾಡುತ್ತಿದ್ದ ಒಂಟಿ ಸಲಗ ಇದೀಗ ಗ್ರಾಮದ ಅಂಚಿಗೂ ಕಾಲಿಟ್ಟಿರೋದು ಹಳ್ಳಿಗರಲ್ಲಿ ಆತಂಕವನ್ನುಂಟು ಮಾಡಿದೆ.

    ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಇಂದಿಗೂ ನಿಂತಿಲ್ಲ. ಮೂರ್ನಾಲ್ಕು ಕಾಡಾನೆಗಳ ಹಿಂಡು ತಾಲೂಕಿನ ಗ್ರಾಮೀಣ ಭಾಗದಲ್ಲಿ ದಾಳಿ ಮಾಡಿ ಕಾಫಿ, ಅಡಿಕೆ, ಮೆಣಸು, ಬಾಳೆ ಸೇರಿದಂತೆ ಅನೇಕ ಬೆಳೆಗಳನ್ನ ಹಾಳು ಮಾಡುತ್ತಿವೆ. ಜೀವ ಉಳಿಸಿಕೊಳ್ಳುತ್ತಿದ್ದ ಜನರಿಗೆ ಇದೀಗ ಆನೆಗಳು ಗ್ರಾಮದಂಚಿಗೆ ಬರುತ್ತಿರೋದು ಆತಂಕ ಸೃಷ್ಟಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನ ಓಡಿಸಲು ಅಥವ ಹಿಡಿದು ಸ್ಥಳಾಂತರಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂಬ ಸ್ಥಳಿಯರ ಆರೋಪಕ್ಕೂ ದಶಕಗಳ ಇತಿಹಾಸವಿದೆ. ಸ್ಥಳಿಯರು ಆನೆಗಳು ಬಂದಿವೆ ಎಂದು ಫೋನ್ ಮಾಡಿದ ಬಹಳ ಹೊತ್ತಿನ ನಂತರ ಬರುವ ಅಧಿಕಾರಿಗಳು ಎರಡು ಪಟಾಕಿ ಸಿಡಿಸಿ ನಮ್ಮ ಕೈಗೆ ಪಟಾಕಿ ಕೊಟ್ಟು ಹೋಗುತ್ತಾರೆ.

    ಆನೆಗಳನ್ನ ಹಿಡಿದು ಸ್ಥಳಾಂತರಿಸುವುದಿಲ್ಲ. ಒಂದು ವಾರ-ಹದಿನೈದು ದಿನ ಬಳಿಕ ಮತ್ತೆ ಬರುತ್ತವೆ ಎಂದು ಸ್ಥಳಿಯರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಒಂಟಿ ಸಲಗ ಗ್ರಾಮದ ಅಂಚಿಗೆ ಬಂದಿರುವುದರಿಂದ ಹಳ್ಳಿಗರ ಆತಂಕ ಹೆಚ್ಚಾಗಿದ್ದು ಹೊಲ-ಗದ್ದೆ ತೋಟಗಳಿಗೆ ಕೆಲಸಕ್ಕೆ ಹೋಗಲು ಭಯಪಡುವ ಸ್ಥಿತಿ ನಿಮಾರ್ಣವಾಗಿದೆ. ಅರಣ್ಯ ಇಲಾಖೆ ಇತ್ತ ಗಮನ ಹರಿಸಿ ಆನೆ ಓಡಿಸುವ ಬದಲು ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

  • ಶಾರ್ಟ್ ಸರ್ಕ್ಯೂಟ್‌ನಿಂದ  ಮನೆಗೆ ಬೆಂಕಿ – ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿ

    ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿ

    ಹಾವೇರಿ: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಮನೆಗೆ ಬೆಂಕಿ ಬಿದ್ದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ.

     

     

     

    ಗ್ರಾಮದ ಚಂದ್ರಪ್ಪ ಬೂದಿಹಳ್ಳಿ ಮತ್ತು ನಿಂಗಪ್ಪ ಬೂದಿಹಳ್ಳಿ ಅವರ ಮನೆ ಹಾನಿಗೊಳಗಾಗಿದೆ. ಮನೆಯಲ್ಲಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳು ಹಾಗೂ ಮನೆಯ ಮೇಲ್ಛಾವಣಿ ಸಂಪೂರ್ಣ ಸುಟ್ಟು ಹಾನಿಯಾಗಿದೆ. ಬೆಂಕಿ ಕಾಣಿಸಿಕೊಳ್ತಿದ್ದಂತೆ ಮನೆಯಿಂದ ಹೊರಗೆ ಬಂದಿದ್ದರಿಂದ ಮನೆಯವರು ಅದೃಷ್ಟವಶಾತ್ ಪಾರಾಗಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ಮಾಡಿದ್ದಾರೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ವಾವ್ಹ್… ಅದ್ಭುತ – ಹಳ್ಳಿ ಹುಡುಗಿ ಡಾನ್ಸ್ ಮೆಚ್ಚಿದ ಮಾಧುರಿ ದೀಕ್ಷಿತ್

    ವಾವ್ಹ್… ಅದ್ಭುತ – ಹಳ್ಳಿ ಹುಡುಗಿ ಡಾನ್ಸ್ ಮೆಚ್ಚಿದ ಮಾಧುರಿ ದೀಕ್ಷಿತ್

    ಮುಂಬೈ: ಹಳ್ಳಿ ಹುಡುಗಿ ಪ್ರತಿಭೆಯನ್ನು ಕಂಡು ಬಾಲಿವುಡ್ ಬೆಡಗಿ ಮಾಧುರಿ ದೀಕ್ಷಿತ್ ಮೆಚ್ಚಿ ಟ್ವೀಟ್ ಮಾಡಿದ್ದಾರೆ.

    ಯುವತಿಯೊಬ್ಬಳು ಕೃಷಿ ಜಮೀನಿನಲ್ಲಿ ಕುಣಿದು ಕುಪ್ಪಳಿಸಿದ್ದಾಳೆ. ಅದ್ಭುತವಾದ ಸ್ಟೆಪ್ ಹಾಕಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೀಡಿಯೋವನ್ನು ನೋಡಿದ ಮಾಧುರಿ ದೀಕ್ಷಿತ್ ಪ್ರತಿಕ್ರಿಯಿಸಿದ್ದಾರೆ.

    1975ರಲ್ಲಿ ಮಾಧುರಿ ನಟಿಸಿರುವ ಘೂಂಗಟ್ ನಹೀ ಖೋಲು ಸೈಯ್ಯಾ ತೆರೆ ಆಗೆ ಎನ್ನುವ ಹಾಡಿಗೆ ಯುವತಿ ಹಚ್ಚಹಸಿರಿನಿಂದ ಕೂಡಿರುವ ಕೃಷಿ ಭೂಮಿಯಲ್ಲಿ ನಿಂತು ನೃತ್ಯ ಮಾಡಿದ್ದಾಳೆ. ನರ್ತಕರಿಗೆ ಹಾರಲು ರೆಕ್ಕೆಗಳ ಅಗತ್ಯವಿಲ್ಲ. ನೀವು ಹಳ್ಳಿ ಹುಡುಗಿಯ ನೃತ್ಯದಲ್ಲಿ ಕಾಣಬಹುದು ಎಂದು ಬರೆದು ವೀಡಿಯೋವನ್ನು ಟ್ವೀಟ್ ಮಾಡಲಾಗಿತ್ತು. ಈ ವಿಡಿಯೋ ಎಲ್ಲೆಡೆ ಸುದ್ದಿಯಲ್ಲಿತ್ತು. ಈ ವಿಡಿಯೋವನ್ನು ಮಾಧುರಿ ಮೆಚ್ಚುಕೊಂಡಾಡಿದ್ದಾರೆ.

    ಟ್ವೀಟ್ ನಲ್ಲಿ ಏನಿದೆ?
    ವಾವ್ಹ್… ಅದ್ಭುತ! ಈಕೆ ತುಂಬಾ ಸುಂದರವಾಗಿ ನೃತ್ಯ ಮಾಡಿದ್ದಾಳೆ. ಇಂಥಹ ಮತ್ತಷ್ಟು ಪ್ರತಿಭೆಗಳು ಬೆಳಕಿಗೆ ಬರಲಿ, ನಾವು ಕಾಯುತ್ತಿದ್ದೇವೆ ಎಂದು ಬರೆದುಕೊಂಡು ವಿಡಿಯೋವನ್ನು ಮಾಧುರಿ ದೀಕ್ಷಿತ್ ಶೇರ್ ಮಾಡಿದ್ದಾರೆ.

  • ಕಿಡಿಗೇಡಿಗಳಿಂದ ಗ್ರಾಮದಲ್ಲಿ ವಾಮಾಚಾರ

    ಕಿಡಿಗೇಡಿಗಳಿಂದ ಗ್ರಾಮದಲ್ಲಿ ವಾಮಾಚಾರ

    ಮಡಿಕೇರಿ: ಕುಡಿಕೆಯೊಂದರಲ್ಲಿ ವಾಮಾಚಾರ ಮಾಡಿ ಗ್ರಾಮದಲ್ಲಿ ತಂದಿಟ್ಟಿರುವುದನ್ನು ಗಮನಿಸಿದ ಗ್ರಾಮಸ್ಥರು ಅತಂಕ ಒಳಗಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಹ್ಯಗ್ರಾಮದಲ್ಲಿ ನಡೆದಿದೆ.

    ಗುಹ್ಯ ಗ್ರಾಮದಲ್ಲಿ ರಾತ್ರಿ ಗ್ರಾಮದ ಮೂರು ರಸ್ತೆಗಳು ಸೇರುವ ಜಾಗದಲ್ಲಿ ವಾಮಾಚಾರ ಮಾಡಿದ್ದಾರೆ. ರಸ್ತೆಯಲ್ಲಿ ಕುಡಿಕೆಗೆ ಕೆಂಪುಬಟ್ಟೆ ಕಟ್ಟಿ ಇಟ್ಟ ಕಿಡಿಗೇಡಿಗಳು ಅಲ್ಲಿಂದ ಹೋಗಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು ಇದೀಗ ಅತಂಕ ಒಳಗಾಗಿದ್ದಾರೆ.

    ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ವಾಮಾಚಾರ ಅಗಿದೆ. ಇದರಿಂದ ಗ್ರಾಮದ ಜನತೆ ಅತಂಕಗೊಂಡಿದ್ದಾರೆ. ಯಾರೋ ಈ ರೀತಿಯಲ್ಲಿ ಗ್ರಾಮದಲ್ಲಿ ರಸ್ತೆಯಲ್ಲಿ ಮಡಿಕೆ ಇಟ್ಟಿದ್ದಾರೆ. ಆದರೆ ಇದು ವಾಮಾಚಾರ ಮಾಡಿರುವುದಾ ಎಂಬುದು ಇನ್ನು ನಿಖರವಾಗಿಲ್ಲ. ಆದರೆ ಇದರಿಂದ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದಾರೆ.