Tag: vijayavada

  • ಖಾರ ಪ್ರಿಯರಿಗೆ ಶಾಕ್- ಗುಂಟೂರು ಮೆಣಸಿನಕಾಯಿ ಬಳಸಿದ್ರೆ ಬರುತ್ತೆ ಕ್ಯಾನ್ಸರ್!

    ಖಾರ ಪ್ರಿಯರಿಗೆ ಶಾಕ್- ಗುಂಟೂರು ಮೆಣಸಿನಕಾಯಿ ಬಳಸಿದ್ರೆ ಬರುತ್ತೆ ಕ್ಯಾನ್ಸರ್!

    ವಿಜಯವಾಡ: ನಾಲಿಗೆ ಚಪ್ಪರಿಸಿ ಗುಂಟೂರು ಮೆಣಸಿನಕಾಯಿ ಉಪ್ಪಿನಕಾಯಿ ತಿನ್ನುವ ಮಂದಿಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

    ಆಂಧ್ರಪ್ರದೇಶದ ಗುಂಟೂರು ಪ್ರದೇಶದಲ್ಲಿ ಬೆಳೆಯಲಾಗುತ್ತಿರುವ ಮೆಣಸಿನಕಾಯಿ ಮಾದರಿಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ವಿಷಕಾರಿ ಎಫ್ಲಾಟಾಕ್ಸಿನ್‍ಗಳು ಹೆಚ್ಚು ಪ್ರಮಾಣದಲ್ಲಿ ಪತ್ತೆಯಾಗಿವೆ ಎನ್ನುವ ಆತಂಕಕಾರಿ ವರದಿ ಪ್ರಕಟವಾಗಿದೆ.

    ಕ್ಯಾನ್ಸರ್ ತರುವಂತಹ ಸಾಮಥ್ರ್ಯ ಹೊಂದಿರುವ ಫಂಗಸ್ ಅಥವಾ ಶಿಲೀಂಧ್ರ ದಲ್ಲಿರುವ ವಿಷಕಾರಿ ವಸ್ತುವೇ ಎಫ್ಲಾಟಾಕ್ಸಿನ್ ಆಗಿದ್ದು, ಈ ವಸ್ತು ಗುಂಟೂರು ಮೆಣಸಿನಕಾಯಿಯಲ್ಲಿದೆ ಎಂದು ಏಷ್ಯನ್ ಜರ್ನಲ್ ಆಫ್ ಫಾರ್ಮಾಸಿಟಿಕ್ಸ್ ಜರ್ನಲ್ ಹೇಳಿದೆ.

    ಗುಂಟೂರು ಮೆಣಸಿನಕಾಯಿ ಸಾಕಷ್ಟು ರುಚಿ ಹಾಗೂ ತೀಕ್ಷ್ಣತೆಯಿದ್ದು, ಖಾರವಾಗಿರುತ್ತದೆ. ಹಾಗಾಗಿ ಈ ಮೆಣಸಿನಕಾಯಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಪ್ರಸಿದ್ಧಿ ಪಡೆದಿದೆ.

    ಗುಂಟೂರು ಜಿಲ್ಲೆಯೊಂದರಲ್ಲಿ ವಾರ್ಷಿಕವಾಗಿ ಸುಮಾರು 2.80 ಲಕ್ಷ ಟನ್ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತದೆ. ಅಲ್ಲದೇ ಈ ಮೆಣಸಿಕಾಯಿಯನ್ನು ಇಂಗ್ಲೆಂಡ್, ಅಮೆರಿಕ ಇನ್ನಿತರ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಮೆಣಸಿನಕಾಯಿಯನ್ನು ಮಣ್ಣಿನಲ್ಲಿ ಹರಡುವುದು, ಅವೈಜ್ಞಾನಿಕ ನಿರ್ವಹಣೆ ಹಾಗೂ ತೇವಾಂಶ ಒಟ್ಟುವಿಕೆಯಿಂದ ಎಫ್ಲಾಟಾಕ್ಸಿನ್ ಕಾಣಿಸಿಕೊಳ್ಳುತ್ತದೆ ಎಂದು ವರದಿ ತಿಳಿಸಿದೆ.

    ಸಂಶೋಧಕರು ಎಫ್ಲಾಟಾಕ್ಸಿನ್ ಪತ್ತೆ ಹಚ್ಚಿ ವೈಜ್ಞಾನಿಕ ನಿರ್ವಹಣೆಯ ವಿಧಾನಗಳನ್ನು ಹೇಳಿದ್ದಾರೆ. ಈ ಮೆಣಸಿನಕಾಯಿಯನ್ನು ದಕ್ಷಿಣ ಭಾರತದ ಜನರು ಅಡುಗೆಗೆ ಬಳಸುತ್ತಾರೆ. ಹೆಚ್ಚಾಗಿ ತೆಲುಗು ಭಾಷೆಯವರು ಈ ಮೆಣಸಿನಕಾಯಿಯನ್ನು ಬಳಸುತ್ತಾರೆ. ಗುಂಟೂರು ಮೆಣಸಿನಕಾಯಿಯನ್ನು ಉಪ್ಪಿನಕಾಯಿ ತಯಾರಿಕೆಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

    ಮಚಿಲಿಪಟ್ಟಣದ ಕೃಷ್ಣಾ ವಿಶ್ವಾವಿದ್ಯಾನಿಲಯದ ಸಂಶೋಧಕರು, ವಿಜಯವಾಡದ ಕೆಬಿಎನ್‍ಬಿಜಿ ಕಾಲೇಜು ಹಾಗೂ ಪಿ.ಬಿ ಸಿದ್ಧಾರ್ಥ್ ಕಾಲೇಜು ಜೊತೆ ಸೇರಿ ಗುಂಟೂರು ನಗರದೆಲ್ಲೆಡೆ ಮೆಣಸಿನಕಾಯಿಯನ್ನು ಸ್ಯಾಂಪಲ್ ಪಡೆದು ಅಧ್ಯಯನ ನಡೆಸಿದ್ದಾರೆ. ಮೆಣಸಿನಕಾಯಿ ಮಣ್ಣಿನಲ್ಲಿ ಹೆಚ್ಚು ಇದ್ದರೆ ಅದು ಫಂಗಸ್ ಅಥವಾ ಶಿಲೀಂಧ್ರ ವಿಷಕಾರಿ ಅಂಶಗಳನ್ನು ಸೇರಿಸಿಕೊಳ್ಳಬಹುದು ಎಂದು ವರದಿಯಾಗಿದೆ. 7 ಸ್ಯಾಂಪಲ್‍ಗಳಲ್ಲಿ 5ರಲ್ಲಿ ಜಿ1, ಜಿ2 ಹಾಗೂ ಬಿ2 ಎಫ್ಲಾಟಾಕ್ಸಿನ್ ಪತ್ತೆಯಾಗಿದ್ದು, ಎಫ್ಲಾಟಾಕ್ಸಿನ್ ಮೆಣಸಿನಕಾಯಿಯಲ್ಲಿ ಸ್ವಲ್ಪವಿದ್ದರೂ ಇದು ಕ್ಯಾನ್ಸರ್ ತರುತ್ತದೆ. ಈ ಮೆಣಸಿನಕಾಯಿ ಹಿರಿಯರಿಗಿಂತ ಚಿಕ್ಕ ಮಕ್ಕಳಿಗೆ ಹೆಚ್ಚು ತೊಂದರೆಯಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

    ಎರಡು ವರ್ಷಗಳ ಹಿಂದೆ ಈ ಬಗ್ಗೆ ಕೇರಳ ಕೃಷಿ ಕಾಲೇಜಿನಲ್ಲಿ 51 ಗುಂಟೂರು ಮೆಣಸಿನಕಾಯಿ ಸ್ಯಾಂಪಲ್ ಅನ್ನು ಅಧ್ಯಯನ ನಡೆಸಲಾಗಿತ್ತು. ಈ ವೇಳೆ 21 ಮಾದರಿಗಳಲ್ಲಿ ಬೈಫೆಂಟ್ರಿನ್, ಈಥಿಯೋನ್, ಕ್ಲೋರಿಪಿರಿಫೊಸ್, ಸೈಪರ್ಮೆಥರಿನ್ ಹಾಗೂ ಮ್ಯಾಲಥಿಯಾನ್ ಎನ್ನುವ ವಿಷಕಾರಿ ಅಂಶಗಳು ಪತ್ತೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೃಷ್ಣಾ ನದಿ ದುರಂತ: ಮಗಳ ಶವ ನೋಡಿದ ತಾಯಿ ದಾರುಣ ಸಾವು!

    ಕೃಷ್ಣಾ ನದಿ ದುರಂತ: ಮಗಳ ಶವ ನೋಡಿದ ತಾಯಿ ದಾರುಣ ಸಾವು!

    ವಿಜಯವಾಡ: ಆಂಧ್ರದ ವಿಜಯವಾಡ ಜಿಲ್ಲೆಯಲ್ಲಿ ನಡೆದ ಕೃಷ್ಣಾ ನದಿ ದುರಂತದಲ್ಲಿ ಮೃತಪಟ್ಟ ತನ್ನ ಮಗಳ ಶವವನ್ನು ನೋಡಿ ತಾಯಿ ಆಘಾತಗೊಂಡು ಮೃತಪಟ್ಟ ದಾರುಣ ಘಟನೆ ನಡೆದಿದೆ.

    ಮೃತ ದುರ್ದೈವಿಯನ್ನು ಲಕ್ಷ್ಮೀಕಾಂತಂ ಎಂದು ಗುರುತಿಸಲಾಗಿದೆ. ವಿಧವೆಯಾಗಿರೋ ಲಕ್ಷ್ಮೀಕಾತಂ ತನ್ನ ಮಗಳು ಲೀಲಾವತಿ ಹಾಗೂ ಆಕೆಯ ಮಗಳೊಂದಿಗೆ ವಾಸವಿದ್ದರು. ಆದ್ರೆ ನಿನ್ನೆ ಇಲ್ಲಿನ ಕೃಷ್ಣಾ ನದಿಯಲ್ಲಿ ನಡೆದ ಘೋರ ದುರಂತದಿಂದಾಗಿ ಮಗಳು ಲೀಲಾವತಿ ಮೃತಪಟ್ಟಿದ್ದರು. ಮಗಳ ಸಾವಿನ ಸುದ್ದಿ ಕೇಳುತ್ತಿದ್ದಮತೆಯೇ ಮಾನಸಿಕವಾಗಿ ನೊಂದಿದ್ದ ತಾಯಿ, ಮಗಳ ಶವ ಮನೆಗೆ ಬಂದ ಬಳಿಕ ನೋಡಿದ ಕೂಡಲೇ ಆಘಾತಗೊಂಡು ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಾಯಿಸಿತಾದರೂ ಅದಾಗಲೇ ಹೃಯಯಾಘಾತವಾಗಿ ಮೃತಪಟ್ಟಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.

    ನದಿ ದುರಂತಕ್ಕೆ ಬಲಿಯಾದ ಲೀಲಾವತಿ ಮಗಳು ವಿಜಯವಾಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇದೀಗ ತಾಯಿ ಹಾಗೂ ಅಜ್ಜಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

    ಇದನ್ನೂ ಓದಿ: ಮಹಾ ಆರತಿ ನೋಡಲು ತೆರಳುತ್ತಿದ್ದ 38 ಜನರಿದ್ದ ದೋಣಿ ಮುಗುಚಿ ಬಿತ್ತು

    ಜಿಲ್ಲೆಯ ಪವಿತ್ರ ಸಂಗಮ್ ಘಾಟ್ ಬಳಿಯ ಕೃಷ್ಣಾ ನದಿಯಲ್ಲಿ ಭಾನುವಾರ 38 ಜನ ಪ್ರಯಾಣಿಸುತ್ತಿದ್ದ ದೋಣಿಯೊಂದು ಮಗುಚಿ ಬಿದ್ದಿದ್ದು, 11 ಮಂದಿ ಕಣ್ಮರೆಯಾಗಿದ್ದರು. ಇಲ್ಲಿಯವರೆಗೆ 16 ಮೃತದೇಹಗಳು ಪತ್ತೆಯಾಗಿದ್ದು, ಶವವನನ್ನು ಮರಣೋತ್ತರ ಪರೀಕ್ಷೆಗಾಗಿ ಒಂಗೋಲ್ ಪಟ್ಟಣಕ್ಕೆ ಕಳುಹಿಸಲಾಗಿದೆ.

    ಮೃತಪಟ್ಟವರೆಲ್ಲರೂ ಒಂಗೋಲ್ ವಾಲ್ಕರ್ಸ್ ಕ್ಲಬ್ ನವರಾಗಿದ್ದು, ಭಾನುವಾರ ರಜಾದಿನವಾಗಿದ್ದರಿಂದ ಎಲ್ಲರೂ ಭವಾನಿ ಐಲ್ಯಾಂಡ್ ಹಾಗೂ ಪವಿತ್ರ ಸಂಗಮ್ ಗೆ ಪಿಕ್ ನಿಕ್ ಗೆಂದು ತೆರಳಿದ್ದರು. ಈ ವೇಳೆ ದೋಣಿ ಮಗುಚಿ 17 ಮಂದಿ ಸಾವನ್ನಪ್ಪಿ, 21 ಮಂದಿಯನ್ನು ರಕ್ಷಿಸಲಾಗಿತ್ತು.

  • ನಾನ್ ವೆಜ್ ತಿಂತೀರಾ? ಎಚ್ಚರ.. ಮಟನ್, ಜಿಂಕೆ, ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಕೊಡ್ತಾರೆ!

    ನಾನ್ ವೆಜ್ ತಿಂತೀರಾ? ಎಚ್ಚರ.. ಮಟನ್, ಜಿಂಕೆ, ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಕೊಡ್ತಾರೆ!

    ವಿಜಯವಾಡ: ನಿಮಗೆ ಮಟನ್ ಅಂದ್ರೆ ತುಂಬಾ ಇಷ್ಟಾನಾ..? ವೀಕೆಂಡಲ್ಲಿ ಯಾಕೆ ಮಟನ್ ಹೆಸರೇಳಿ ಬಾಯಲ್ಲಿ ನೀರೂರಿಸ್ತಿದೀರಿ ಅಂದ್ಕೋತಿದೀರಾ.. ಕಾರಣವಿದೆ, ಇನ್ಮುಂದೆ ಹೋಟೆಲ್ ಗೆ ಹೋಗಿ ನಾನ್ ವೆಜ್ ತಿನ್ನಬೇಕಾದರೆ ಸ್ವಲ್ಪ ಜಾಗರೂಕರಾಗಿರಿ. ಯಾಕೆಂದರೆ ನಿಮಗೆ ಮಟನ್ ಅಂತಾ ನಾಯಿ ಮಾಂಸವನ್ನು ಕೊಟ್ಟರೂ ಕೊಡಬಹುದು. ಅದರಲ್ಲೂ ಆಂಧ್ರದ ಮೈಲಾವರಂಗೆ ಹೋದರೆ ಮಾತ್ರ ಯಾವ ಕಾರಣಕ್ಕೂ ನಾನ್ ವೆಜ್ ತಿನ್ನಲೇಬೇಡಿ.

    ಬೀದಿ ನಾಯಿಗಳನ್ನು ಹಿಡಿದು ಹಣಕ್ಕಾಗಿ ನಾಯಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೃಷ್ಣಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಜಿ.ಕೊಂಡೂರಿನ ಕೋಡೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

    ಏನಿದು ಘಟನೆ?: ಕೋಡೂರು ಗ್ರಾಮದ ಕಟ್ಟಾ ಆದಿನಾರಾಯಣ ಹಾಘೂ ದೇಗು ಲಕ್ಷ್ಮಣ ರಾವ್ ಎಂಬಿಬ್ಬರು ಕೆಲ ತಿಂಗಳಿಂದ ಬೀದಿ ನಾಯಿಗಳನ್ನು ಹಿಡಿಯೋದನ್ನೇ ಕಾಯಕ ಮಾಡಿದ್ದರು. ಆದರೆ ಕಳೆದ ಶುಕ್ರವಾರ ಇವರ ನಸೀಬು ಕೆಟ್ಟಿತ್ತು. ಅಂದು ಇವರು ನಾಯಿ ಹಿಡಿದು ಮಾಂಸವನ್ನು ಮಾರಾಟ ಮಾಡಿ ನಾಯಿಯ ಚರ್ಮವನ್ನು ಎಸೆಯಲು ಹೋಗುತ್ತಿದ್ದಾಗ ಗ್ರಾಮಸ್ಥರು ರೆಡ್ ಹ್ಯಾಂಡಾಗಿ ಇವರನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಈ ವೇಳೆ ಇಬ್ಬರು ಖತರ್ನಾಕ್ ಗಳು ತಾವು ಇದುವರೆಗೆ 20ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹಿಡಿದು ಅದರ ಮಾಂಸ ಮಾರಾಟ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

    ನಾಯಿ ಮಾಂಸವನ್ನೇ ಇವರು ಜಿಂಕೆ ಹಾಗೂ ಕುರಿ ಮಾಂಸ ಎಂದು ನಂಬಿಸಿ ಕೆಲವು ವ್ಯಕ್ತಿಗಳಿಗೆ ಹಾಗೂ ಹೋಟೆಲ್ ಗಳಿಗೆ ಮಾರಾಟ ಮಾಡುತ್ತಿದ್ದರು. ನಾಯಿ ಮಾಂಸದ ರುಚಿ ಹಿಡಿದ ಕೆಲವರು ಜಿಂಕೆ ಮಾಂಸವೆಂದು ಇವರ ಬಳಿ ಪದೇ ಪದೇ ಮಾಂಸಕ್ಕಾಗಿ ಬೇಡಿಕೆ ಇಡುತ್ತಿದ್ದರು. ಪ್ರತಿ ಕೆಜಿ ನಾಯಿ ಮಾಂಸಕ್ಕೆ ಇವರು 300 ರಿಂದ 400 ರೂ. ಪಡೆಯುತ್ತಿದ್ದರು. ಈ ಮೂಲಕ ಪ್ರತಿ ನಾಯಿಯನ್ನು ಕೊಂದು ಸರಾಸರಿ 3000 ರೂ. ಆದಾಯ ಗಳಿಸುತ್ತಿದ್ದರು. ಪ್ರಾಣಿ ಕಾಯ್ದೆ ಪ್ರಕಾರ ಇವರ ವಿರುದ್ಧ ದೂರು ದಾಖಲಿಸಿ ಪೊಲಿಸರು ತನಿಖೆ ಮುಂದುವರಿಸಿದ್ದಾರೆ. ಜೊತೆಗೆ ಇವರಿಂದ ಮಾಂಸ ಖರೀದಿ ಮಾಡುತ್ತಿದ್ದವರ ವಿವರವನ್ನೂ ಪಡೆದುಕೊಂಡಿದ್ದು ಅವರ ವಿಚಾರಣೆಯೂ ನಡೆಯಲಿದೆ ಎನ್ನಲಾಗಿದೆ. ಇವರಿಬ್ಬರೂ ಮೈಲಾವರಂ ಮತ್ತು ಅಕ್ಕಪಕ್ಕದ ಹಳ್ಳಿಗಳಿಗೆ ಮಾಂಸ ಪೂರೈಸುತ್ತಿದ್ದರು.

    ಪ್ರಕರಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿ.ಕೊಂಡೂರು ಎಸ್‍ಐ ಜಿ.ರಾಜೇಶ್ ನಾಯಿಗಳನ್ನು ಕೊಂದಿದ್ದಕ್ಕೆ ಹಾಗೂ ಪ್ರಾಣಿ ಹಿಂಸೆಗೆ ಕನಿಷ್ಠ 7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಸದ್ಯ ಪಶುವೈದ್ಯರು ಮಾಂಸದ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿ ಬಂದ ನಂತರ ಕ್ರಮಕೈಗೊಳ್ಳೋದಾಗಿ ಹೇಳಿದ್ದಾರೆ.

    https://www.youtube.com/watch?v=i-BbqCr-Org