Tag: vijay

  • ಚಿತ್ರತಂಡಕ್ಕೆ 400 ಚಿನ್ನದ ಉಂಗುರ ಗಿಫ್ಟ್ ನೀಡಿದ ವಿಜಯ್

    ಚಿತ್ರತಂಡಕ್ಕೆ 400 ಚಿನ್ನದ ಉಂಗುರ ಗಿಫ್ಟ್ ನೀಡಿದ ವಿಜಯ್

    ಚೆನ್ನೈ: ತಮಿಳುನಟ ವಿಜಯ್ ಅವರು ತಮ್ಮ ‘ಬಿಗಿಲ್’ ಚಿತ್ರತಂಡಕ್ಕೆ ಒಟ್ಟು 400 ಚಿನ್ನದ ಉಂಗುರವನ್ನು ಗಿಫ್ಟ್ ಆಗಿ ನೀಡಿದ್ದಾರೆ.

    ವಿಜಯ್ ತಮ್ಮ ಬಹುನಿರೀಕ್ಷಿತ ಬಿಗಿಲ್ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ನಡುವೆ ಅವರು ತಮ್ಮ ಚಿತ್ರತಂಡಕ್ಕೆ 400 ಚಿನ್ನದ ಉಂಗುರವನ್ನು ಗಿಫ್ಟ್ ಆಗಿ ನೀಡಿದ್ದಾರೆ. ವಿಶೇಷ ಅಂದರೆ ಚಿನ್ನದ ಉಂಗುರದ ಮೇಲೆ ಬಿಗಿಲ್ ಎಂದು ಬರೆಯಲಾಗಿದೆ.

    ಚಿತ್ರತಂಡಕ್ಕೆ ವಿಜಯ್ ಚಿನ್ನದ ಉಂಗುರವನ್ನು ಹಂಚುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ವಿಜಯ್ ಅವರ ಈ ಕೆಲಸ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಿಗಿಲ್ ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರಿಗೂ ಉಂಗುರವನ್ನು ನೀಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

    ಮಂಗಳವಾರ ಬಿಗಿಲ್ ಚಿತ್ರದ ಚಿತ್ರೀಕರಣ ಮುಗಿದಿದೆ. ಜನವರಿಯಲ್ಲಿ ಈ ಚಿತ್ರದ ಚಿತ್ರೀಕರಣ ಶುರುವಾಗಿತ್ತು. ಈಗ ಎರಡು ದಿನದಲ್ಲಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದ್ದು, ಇದೇ ವರ್ಷ ಅಕ್ಟೋಬರ್ 27ರಂದು ಚಿತ್ರ ಬಿಡುಗಡೆ ಆಗಲಿದೆ.

    ಈ ಚಿತ್ರದಲ್ಲಿ ವಿಜಯ್ ಸೇರಿದಂತೆ ನಟಿ ನಯನತಾರಾ, ಜಾಕಿ ಶ್ರಾಫ್, ವಿವೇಕ್ ಡೇನಿಯಲ್ ಬಾಲಾಜಿ, ಆನಂದ್‍ರಾಜ್, ಇಂದುಜಾ ರವಿಚಂದ್ರನ್, ವರ್ಷ ಬೋಲಮ್ಮ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    https://twitter.com/ActorAATHMA/status/1161279624904663043?ref_src=twsrc%5Etfw%7Ctwcamp%5Etweetembed%7Ctwterm%5E1161279624904663043&ref_url=https%3A%2F%2Fwww.timesnownews.com%2Fentertainment%2Fsouth-gossip%2Farticle%2Fviral-video-thalapathy-vijay-is-winning-the-internet-as-he-surprises-team-bigil-by-gifting-400-gold-rings%2F468727

  • ಕಾಲಿವುಡ್‍ನಲ್ಲಿ ಸ್ಟಾರ್ ವಾರ್:  ಟ್ವಿಟ್ಟರ್‌ನಲ್ಲಿ ವಿಲಕ್ಷಣ ಟ್ರೆಂಡ್

    ಕಾಲಿವುಡ್‍ನಲ್ಲಿ ಸ್ಟಾರ್ ವಾರ್: ಟ್ವಿಟ್ಟರ್‌ನಲ್ಲಿ ವಿಲಕ್ಷಣ ಟ್ರೆಂಡ್

    – #RIPactorVIJAY ಟ್ರೆಂಡ್ ಆರಂಭಿಸಿದ ಕಿಡಿಗೇಡಿಗಳು

    ಚೆನ್ನೈ: ಕಾಲಿವುಡ್‍ನಲ್ಲಿ ಸ್ಟಾರ್ ವಾರ್ ಆರಂಭವಾಗಿದ್ದು, ತಾವು ನಟ ಅಜಿತ್ ಕುಮಾರ್ ಫ್ಯಾನ್ಸ್ ಅಂತ ಹೇಳಿಕೊಳ್ಳುತ್ತಿರುವ ಕೆಲವರು ಟ್ವಿಟ್ಟರ್‌ ನಲ್ಲಿ ವಿಲಕ್ಷಣ ಟ್ರೆಂಡ್ ಆರಂಭಿಸಿದ್ದಾರೆ.

    #RipVIJAY,  #RIPactorVIJAY ಎಂದು ನಟ ದಳಪತಿ ವಿಜಯ್ ವಿರುದ್ಧ ಕಿಡಿಗೇಡಿಗಳು ಟ್ಟಿಟ್ಟರ್ ನಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ. ಸ್ಟಾರ್ ನಟ ಬದುಕಿರುವಾಗ ಆತನ ಸಾವಿಗೆ ವಿಷಾಧ ವ್ಯಕ್ತಪಡಿಸುವ ಮನಸ್ಥಿತಿಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

    ತಾಲಾ ಅಜಿತ್ ಹಾಗೂ ದಳಪತಿ ವಿಜಯ್ ಅಭಿಮಾನಿಗಳ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ವಾರ್ ಆಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಕೆಲವು ವರ್ಷಗಳಿಂದ ಆಗಾಗ ಈ ಇಬ್ಬರು ಸ್ಟಾರ್ ಅಭಿಮಾನಿಗಳ ಮಧ್ಯೆ ಶೀತಲ ಸಮರ ನಡೆಯುತ್ತಲೇ ಇದೆ. ಆದರೆ ಸೋಮವಾರ ಇದು ಅತಿರೇಕಕ್ಕೆ ಹೋಗಿದ್ದು, ಸಾವಿನ ಹಂತಕ್ಕೆ ತಲುಪಿದೆ. ಇಂದು ಬೆಳಗ್ಗೆ ಕೆಲ ಕಿಡಿಗೇಡಿಗಳು ಟ್ವಿಟ್ಟರ್ ವಿಜಯ್ ಇನ್ನಿಲ್ಲ ಎಂದು ಆರಂಭಿಸಿದ್ದರು. ಪರಿಣಾಮ ಅದನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಳಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಫ್ರೆಂಚ್ ಜುವೆಂಟಸ್ ಎಂಬವರು, ಅಜಿತ್ ಅಭಿಮಾನಿಯಾಗಿರುವ ನನ್ನ ಬಗ್ಗೆ ನನಗೆ ಅಸಹ್ಯವೆನಿಸುತ್ತಿದೆ. ಕೆಲ ಗಂಟೆಗಳ ಹಿಂದೆಯಷ್ಟೇ #RipVIJAY ಹ್ಯಾಶ್‍ಟ್ಯಾಗ್ ಬಳಸಿ ಟ್ಟೀಟ್ ಮಾಡಿದೆ. ಈಗ ಅದನ್ನು ಡಿಲಿಟ್ ಮಾಡಿದ್ದೇನೆ. ನಕಾರಾತ್ಮಕ ಮನಸ್ಥಿತಿಯ ಬಗ್ಗೆ ನನಗೆ ಈಗ ಅರ್ಥವಾಗಿದೆ. ನಾನು ನಕಾರಾತ್ಮಕ ಮಸ್ಥಿತಿಯಿಂದ ಕೈಬಿಟ್ಟು, ಪ್ರೀತಿ ಹಂಚುತ್ತೇನೆ. ಲಿವ್ ಲಾಂಗ್ ಆಕ್ಟರ್ ವಿಜಯ್ ಎಂದು ಹೇಳಿದ್ದಾರೆ.

    ಸೋಮವಾರ ಬೆಳಗ್ಗೆಯಿಂದಲೇ ಈ ಸ್ಟಾರ್ ವಾರ್ ಆರಂಭವಾಗಿದ್ದರೂ ಇಲ್ಲಿವರೆಗೆ ವಿಜಯ್ ಹಾಗೂ ಅಜಿತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾಲಿವುಡ್‍ನಲ್ಲಿ ಹೀಗೆ ನಟರಿಬ್ಬರ ಅಭಿಮಾನಿಗಳು ಸಾವಿನ ಬಗ್ಗೆ ವಿಲಕ್ಷಣ ಮೆರೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಗೌಂಡಮಣಿ ಹಾಗೂ ಸೆಂಥಿಲ್ ಸಾವನ್ನಪ್ಪಿದ್ದಾರೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದರಿಂದ ಆಘಾತಕ್ಕೆ ಒಳಗಾಗಿದ್ದ ನಟರ ಕುಟುಂಬಸ್ಥರು ಕರೆ ಮಾಡಿ ಖಚಿತಪಡಿಸಿಕೊಂಡಿದ್ದರು.

    https://twitter.com/AjithKu22162416/status/1155743738557132800

  • 2ನೇ ಮದ್ವೆಗೆ ತಯಾರಾದ ಅಮಲಾ ಪೌಲ್ ಮಾಜಿ ಪತಿ

    2ನೇ ಮದ್ವೆಗೆ ತಯಾರಾದ ಅಮಲಾ ಪೌಲ್ ಮಾಜಿ ಪತಿ

    ಹೈದರಾಬಾದ್: ನಟ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರದ ನಾಯಕಿ ಅಮಲಾ ಪೌಲ್ ಅವರ ಮಾಜಿ ಪತಿ ಎರಡನೇ ಮದುವೆಯಾಗುತ್ತಿದ್ದು, ಈಗಾಗಲೇ ಕುಟುಂಬದವರು ಮದುವೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

    ಇತ್ತೀಚೆಗಷ್ಟೆ ಅಮಲಾ ಪೌಲ್ ಮಾಜಿ ಪತಿ ತಮಿಳು ನಿರ್ದೇಶಕ ಎ.ಎಲ್. ವಿಜಯ್ ದಕ್ಷಿಣದ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಜೊತೆ ಡೇಟಿಂಗ್‍ನಲ್ಲಿ ಇದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಸುದ್ದಿಯನ್ನ ಸಾಯಿ ಪಲ್ಲವಿ ಮತ್ತು ವಿಜಯ್ ಅಲ್ಲಗೆಳೆದಿದ್ದರು. ಇದೀಗ ವಿಜಯ್ ಅವರು ಎರಡನೇ ಮದುವೆಯಾಗುತ್ತಿದ್ದಾರೆ.

    ನಿರ್ದೇಶಕ ವಿಜಯ್ ಅವರು ಚೆನ್ನೈ ಮೂಲದ ವೈದ್ಯೆ ಐಶ್ವರ್ಯ ಅವರ ಜೊತೆ ದಾಂಪತ್ಯ ಜೀವನ ಪ್ರಾರಂಭಿಸಲಿದ್ದಾರೆ. ಐಶ್ವರ್ಯ ಅವರು ಮನ್ನಿವಕ್ಕಂನಲ್ಲಿ ಡಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇವರಿಬ್ಬರ ಮದುವೆ ಜುಲೈ 11 ರಂದು ನಡೆಯಲಿದೆ. ಈಗಾಗಲೇ ಇವರ ಮದುವೆಗಾಗಿ ಎರಡೂ ಕುಟುಂಬದವರು ಎಲ್ಲ ತಯಾರಿ ನಡೆಸುತ್ತಿದ್ದು, ಕುಟುಂಬದ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.

    ವಿಚ್ಛೇದನ ನೀಡಿದ್ದು ಯಾಕೆ?:
    2011 ರಲ್ಲಿ `ದೈವಾ ತಿರುಮಗಲ್’ ಸಿನಿಮಾದಲ್ಲಿ ಅಮಲಾ ಪೌಲ್ ಮತ್ತು ನಿರ್ದೇಶಕ ಎ.ಎಲ್ ವಿಜಯ್ ಒಟ್ಟಿಗೆ ಕೆಲಸ ಮಾಡಿದ್ದರು. ಆಗ ಇಬ್ಬರಲ್ಲಿ ಪರಿಚಯವಾಗಿದ್ದು, ಕ್ರಮೇಣ ಪರಿಚಯ ಸ್ನೇಹಕ್ಕೆ ತಿರುಗಿತ್ತು. ನಂತರ ಇಬ್ಬರು ಡೇಟಿಂಗ್ ಮಾಡಲು ಆರಂಭಿಸಿದ್ದರು. ಕೊನೆಗೆ 2014ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಇಬ್ಬರು ಮದುವೆ ಕೂಡ ಆಗಿದ್ದರು. ಆದರೆ ಅಮಲಾ ಮತ್ತು ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರು 2016 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಪರಸ್ಪರ ಒಪ್ಪಿಗೆಯ ಮೇರೆಗೆ ಫೆಬ್ರವರಿ 2017ರಲ್ಲಿ ಅವರಿಗೆ ವಿಚ್ಛೇದನ ಪಡೆದಿದ್ದರು.

    ಸದ್ಯ ಮದುವೆ ತಯಾರಿಯಲ್ಲಿರುವ ನಿರ್ದೇಶಕ ವಿಜಯ್, ಬಾಲಿವುಡ್ ನಲ್ಲಿ ನಟಿ ಕಂಗನಾ ರಣಾವತ್ ಜೊತೆ ಸಿನಿಮಾ ಮಾಡಲಿದ್ದಾರೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮತ್ತೊಂದೆಡೆ ನಟಿ ಅಮಲಾ ಪೌಲ್ ‘ಅಡೈ’ ಸಿನಿಮಾದ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

  • ಡೇಟಿಂಗ್ ಸುದ್ದಿ ಬಳಿಕ ಮದುಮಗಳಾದ ನಟಿ ಸಾಯಿ ಪಲ್ಲವಿ

    ಡೇಟಿಂಗ್ ಸುದ್ದಿ ಬಳಿಕ ಮದುಮಗಳಾದ ನಟಿ ಸಾಯಿ ಪಲ್ಲವಿ

    ಹೈದರಾಬಾದ್: ಇತ್ತೀಚೆಗಷ್ಟೆ ನಟಿ ಸಾಯಿ ಪಲ್ಲವಿ ಅವರು ನಟಿ ಅಮಲಾ ಪೌಲ್ ಮಾಜಿ ಪತಿ ವಿಜಯ್ ಜೊತೆ ಡೇಟಿಂಗ್‍ನಲ್ಲಿ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೇ ಸಾಯಿ ಪಲ್ಲವಿ ಅವರು ಮದುಮಗಳಂತೆ ರೆಡಿಯಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

    ಸಾಯಿ ಪಲ್ಲವಿ ಅವರು ಕೇರಳ ಸಾಂಪ್ರದಾಯದ ರೀತಿ ರೇಷ್ಮೆ ಸೀರೆ ತೊಟ್ಟು ಮದುಮಗಳಂತೆ ಅಲಂಕಾರ ಮಾಡಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಇದೀ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಸಾಯಿ ಪಲ್ಲವಿ ಅವರು “ಈ ವರ್ಷ ವಿಷು ಅಂದರೆ ಯುಗಾದಿ ಹಬ್ಬ ತುಂಬಾ ಬೇಗ ಬಂದಿದೆ” ಎಂದು ಟ್ವೀಟ್ ಮಾಡಿದ್ದಾರೆ. ಸೀರೆ ಬಿಳಿ ಬಣ್ಣ ಹಾಗೂ ಗೋಲ್ಡನ್ ಬಣ್ಣದ ಬಾರ್ಡರ್ ಇದ್ದು, ಕೇರಳ ಸಂಪ್ರದಾಯದ ರೇಷ್ಮೆ ಸೀರೆಯಾಗಿದೆ. ಫೋಟೋಗೆ ವಿವಿಧ ರೀತಿ ಪೋಸ್ ಕೊಟ್ಟಿದ್ದು, ಈ ಸೀರೆಯಲ್ಲಿ ಸಾಯಿ ಪಲ್ಲವಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

    ಸಾಯಿ ಪಲ್ಲವಿ ಅವರು ಈ ಫೋಟೋಗಳನ್ನು ಟ್ವೀಟ್ ಮಾಡಿದ ತಕ್ಷಣ ಅಭಿಮಾನಿಗಳು ಲೈಕ್ಸ್ ಮಾಡಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ಸಾಯಿ ಪಲ್ಲವಿ ಅವರು ನಟಿ ಅಮಲಾ ಪೌಲ್ ಮಾಜಿ ಪತಿ ನಿರ್ದೇಶಕ ವಿಜಯ್ ಜೊತೆ ಡೇಟಿಂಗ್‍ನಲ್ಲಿದ್ದು, ಮದುವೆಯಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ವಿಜಯ್ ಅವರು, “ನನಗೆ ಸಾಯಿ ಪಲ್ಲವಿ ಅವರು ಕೇವಲ ಸ್ನೇಹಿತೆಯಷ್ಟೇ, ಜೊತೆಗೆ ಸದ್ಯಕ್ಕೆ ನಾನು ಯಾವ ಹುಡುಗಿಯನ್ನು ವಿವಾಹವಾಗುವ ಆಲೋಚನೆ ಇಲ್ಲ” ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    https://www.instagram.com/p/BvrQPbnHEBp/

  • ಅಮಲಾ ಪೌಲ್ ಮಾಜಿ ಪತಿ ಜೊತೆ ಸಾಯಿ ಪಲ್ಲವಿ ಡೇಟಿಂಗ್!

    ಅಮಲಾ ಪೌಲ್ ಮಾಜಿ ಪತಿ ಜೊತೆ ಸಾಯಿ ಪಲ್ಲವಿ ಡೇಟಿಂಗ್!

    ಹೈದರಾಬಾದ್: ದಕ್ಷಿಣದ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಈಗ ನಟಿ ಅಮಲಾ ಪೌಲ್ ಮಾಜಿ ಪತಿ ತಮಿಳು ನಿರ್ದೇಶಕ ಎ.ಎಲ್. ವಿಜಯ್ ಜೊತೆ ಡೇಟಿಂಗ್ ನಲ್ಲಿ ಇದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಸಾಯಿ ಪಲ್ಲವಿ ಅವರು ಅಮಲಾ ಪೌಲ್ ಮಾಜಿ ಪತಿ ವಿಜಯ್ ತುಂಬಾ ದಿನಗಳಿಂದ ಒಟ್ಟಿಗೆ ಸುತ್ತಾಡುತ್ತಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಸದ್ಯದಲ್ಲಿ ಮದುವೆ ಕೂಡ ಆಗಲಿದ್ದಾರೆ. ಆದರೆ ಯಾರೊಬ್ಬರು ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ವಿಜಯ್-ಅಮಲಾ ಪೌಲ್
    2011 ರಲ್ಲಿ ‘ದೈವಾ ತಿರುಮಗಲ್’ ಸಿನಿಮಾದಲ್ಲಿ ಅಮಲಾ ಪೌಲ್ ಮತ್ತು ನಿರ್ದೇಶಕ ಎ.ಎಲ್ ವಿಜಯ್ ಒಟ್ಟಿಗೆ ಕೆಲಸ ಮಾಡಿದ್ದರು. ಆಗ ಅವರಿಬ್ಬರಿಗೂ ಪರಿಚಯವಾಗಿ ಸ್ನೇಹವಾಗಿತ್ತು. ನಂತರ ಇಬ್ಬರು ಡೇಟಿಂಗ್ ಮಾಡುತ್ತಿದ್ದರು. ಕೊನೆಗೆ 2014ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಇಬ್ಬರು ಮದುವೆಯಾಗಿದ್ದರು. ಆದರೆ ಅಮಲಾ ಮತ್ತು ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರು 2016 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಪರಸ್ಪರ ಒಪ್ಪಿಗೆಯ ಮೇರೆಗೆ ಫೆಬ್ರವರಿ 2017ರಲ್ಲಿ ಅವರಿಗೆ ವಿಚ್ಛೇದನ ಪಡೆದಿದ್ದರು.

    ವಿಜಯ್-ಸಾಯಿ ಪಲ್ಲವಿ:
    ನಟಿ ಸಾಯಿ ಪಲ್ಲವಿ ಅಭಿನಯದ ‘ದಿಯಾ’ ಎಂಬ ತಮಿಳು ಸಿನಿಮಾವನ್ನು ವಿಜಯ್ ನಿರ್ದೇಶನ ಮಾಡಿದ್ದಾರೆ. ಇದೇ ಸಿನಿಮಾ ತೆಲುಗಿನಲ್ಲಿ ‘ಕಣಂ’ ಹೆಸರಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಇಬ್ಬರಿಗೂ ಪರಿಚಯವಾಗಿ ಪ್ರೀತಿ ಆರಂಭವಾಗಿದೆ ಎಂದು ವರದಿಯಾಗಿದೆ. ಇದೀಗ ಇವರಿಬ್ಬರು ಮದುವೆಯಾಗಲಿದ್ದು, ಶೀಘ್ರದಲ್ಲಿಯೇ ಅಧಿಕೃತವಾಗಿ ತಿಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಹಿಂದೆ ನಟಿ ಸಾಯಿ ಪಲ್ಲವಿ ಅವರು, “ನನಗೆ ಈಗಲೇ ಮದುವೆಯಾಗಲು ಇಷ್ಟವಿಲ್ಲ. ನಮ್ಮ ತಂದೆತಾಯಿಯನ್ನು ನೋಡಿಕೊಳ್ಳಬೇಕು” ಎಂದು ಹೇಳಿದ್ದರು. ಸದ್ಯಕ್ಕೆ ನಟ ಸೂರ್ಯ ಜೊತೆ ‘ಎನ್‍ಜಿಕೆ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಅಭಿನಯಿಸುತ್ತಿದ್ದಾರೆ.

  • ನಿವೃತ್ತ ಯೋಧರಿಗೆ ಅವಾಜ್, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಕರಿಚಿರತೆ!

    ನಿವೃತ್ತ ಯೋಧರಿಗೆ ಅವಾಜ್, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಕರಿಚಿರತೆ!

    ಬೆಂಗಳೂರು: ಅಪಹರಣ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರನ್ನು ಹೈಗ್ರೌಂಡ್ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ಇದರ ಬೆನ್ನಲ್ಲೆ ಮತ್ತೊಂದು ದುನಿಯಾ ವಿಜಯ್ ನ ದರ್ಪ ಬೆಳಕಿಗೆ ಬಂದಿದೆ.

    ದುನಿಯಾ ವಿಜಯ್ ಅವರು ನಿವೃತ್ತ ಯೋಧ ವೆಂಕಟೇಶ್ ಅವರಿಗೆ ಅವಾಜ್ ಹಾಕಿ, ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ದುನಿಯಾ ವಿಜಯ್ ಬಾಮೈದ ಕಿರಣ್ ಅನ್ನೋರು ನಿವೃತ್ತ ಯೋಧ ವೆಂಕಟೇಶ್ ಬಳಿ ನಾಲ್ಕು ಲಕ್ಷ ಹಣ ತಗೊಂಡಿದ್ದರು. ಹಣ ಕೊಡದೇ ಕಿರಣ್ ಸತಾಯಿಸುತ್ತಿದ್ದನು. ಈ ವಿಚಾರವನ್ನು ಯೋಧ ವೆಂಕಟೇಶ್ ಅವರು ದುನಿಯಾ ವಿಜಿಯ್ ಗೆ ತಿಳಿಸಲು ಹೋಗಿದ್ದರು. ಈ ವೇಳೆ ಏಕಾಏಕಿ ಯೋಧ ವೆಂಕಟೇಶ್ ಗೆ ಕಾಲಿನಿಂದ ಒದಿಯಲು ಯತ್ನಿಸಿದ್ದರು. ಇನ್ನೊಂದು ಸಾರಿ ನನ್ನ ಮನೆ ಬಾಗಿಲಿಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಕೂಡ ಒಡ್ಡಿದ್ದರು ಎಂದು ತಿಳಿದು ಬಂದಿದೆ.

    ಈ ಬಗ್ಗೆ ಪ್ರತಿಕ್ರಿಸಿಯಿಸಿದ ಯೋಧ ವೆಂಕಟೇಶ್, ದುನಿಯಾ ವಿಜಿ ಅವರ ಬಾಮೈದ ನನ್ನ ಬಳಿಯಿಂದ ಸುಮಾರು 4.3 ಲಕ್ಷ ರೂ ಹಣ ಪಡೆದುಕೊಂಡಿದ್ದು, ಆರು ತಿಂಗಳಾದರು ಅದನ್ನು ವಾಪಸ್ ಕೊಡಲಿಲ್ಲ. ನಂತರ ಅವರ ಮನೆಗ ಹೋಗಿ ಮಾತನಾಡಿದಾಗ ನಮ್ಮ ಸಂಬಂಧ ವಿಜಿಯ ಬಳಿ ಮಾತನಾಡಿದ್ದೇನೆ. ನಿಮ್ಮ ಹಣವನ್ನು ಕೊಡುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ರಾತ್ರೋರಾತ್ರಿ ನಟ ದುನಿಯಾ ವಿಜಯ್ ಬಂಧನ!

    ನಾನು ಒಂದು ತಿಂಗಳು ಕಾದೆ, ಆದರೆ ಹಣವನ್ನು ಕೊಡಲಿಲ್ಲ. ಒಂದು ದಿನ ಜಿಮ್ ಬಳಿ ಹೋಗಿ ವಿಜಯ್ ಅವರನ್ನು ಮಾತನಾಡಿಸಿದೆ. ಆಗ ಅವರು ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದರು. ಅಷ್ಟೇ ಅಲ್ಲದೇ ನನ್ನ ಮಗನ ಮೇಲೆ ಹಲ್ಲೆ ಮಾಡುತ್ತೇನೆ. ಮತ್ತೆ ಅವರ ಮನೆಯ ಬಳಿ ಹೋಗಬಾದರು ಎಂದು ಬೆದರಿಕೆ ಹಾಕಿದರು. ಆದ್ದರಿಂದ ನಾನು ಜೀವಭಯದಿಂದ ಹಣವನ್ನೂ ವಾಪಸ್ ಕೇಳದೆ, ಪೊಲೀಸರಿಗೂ ದೂರು ನೀಡದೇ ಸುಮ್ಮನಾಗಿದ್ದೆ ಎಂದು ವೆಂಕಟೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಇಂದು ದುನಿಯ ವಿಜಯ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ದುನಿಯ ವಿಜಯ್ ನನಗೂ ಸಂಬಂಧವಿಲ್ಲ. ಅವರು ನನ್ನ ಬಳಿ ಹಣ ಪಡೆದುಕೊಂಡಿಲ್ಲ. ಅವರ ಸಂಬಂಧಿ ಪಡೆದುಕೊಂಡಿದ್ದ ಹಣವನ್ನು ವಾಪಸ್ ಕೇಳಲು ಹೋಗಿದ್ದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಆದ್ದರಿಂದ ನನಗೂ ನ್ಯಾಯ ಸಿಗುತ್ತದೆ ಎಂದು ದುನಿಯಾ ವಿಜಯ್ ದರ್ಪ ನೋಡಿ ಮತ್ತೆ ದೂರು ನೀಡಲು ನಿರ್ಧಾರ ಮಾಡಿದ್ದೇನೆ ಎಂದು ಯೋಧ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ವಿವಾದಿತ ಮೆರ್ಸೆಲ್ ಪರ ನಿಂತ ಖಳನಟ ಸಂಪತ್ ರಾಜ್

    ವಿವಾದಿತ ಮೆರ್ಸೆಲ್ ಪರ ನಿಂತ ಖಳನಟ ಸಂಪತ್ ರಾಜ್

    ಉಡುಪಿ: ತಮಿಳು ನಟ ಇಳಯ ದಳಪತಿ ವಿಜಯ್ ಅಭಿನಯದ ಮೆರ್ಸೆಲ್ ಚಿತ್ರ ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ. ನಟನ ವಿಚಾರದಲ್ಲಿ ಜಾತಿ ಧರ್ಮ ಕೂಡಾ ಸಾಕಷ್ಟು ಚರ್ಚೆಯಾಗುತ್ತಿದೆ. ರಾಜಕೀಯ ನುಸುಳಿ ದೊಡ್ಡ ಸುದ್ದಿಯಾಗಿದೆ. ಈ ನಡುವೆ ಬಹುಭಾಷಾ ಖಳನಟ ಸಂಪತ್ ರಾಜ್ ನಟ ವಿಜಯ್ ಪರ ಬ್ಯಾಟ್ ಬೀಸಿದ್ದಾರೆ.

    ಕ್ರಿಯೇಟಿವ್ ಫೀಲ್ಡ್ ಸಿನೆಮಾವನ್ನು ಸಿನಿಮಾವಾಗಿ ಸ್ವೀಕರಿಸಬೇಕು. ಚಿತ್ರಕಥೆಯನ್ನು ನಿಜ ಜೀವನಕ್ಕೆ ಅಳವಡಿಸಿದರೆ ತೊಂದರೆ ಹೆಚ್ಚು ಎಂದರು. ಬಣ್ಣ ಹಚ್ಚುವ ಕಲಾವಿದನಿಗೆ ಜಾತಿ ಇಲ್ಲ, ನಾನು ಉತ್ತರ ಪ್ರದೇಶದಲ್ಲಿ ಹುಟ್ಟಿದವನು. ದೆಹಲಿಯಲ್ಲಿ ಬೆಳೆದು ಬೆಂಗಳೂರಲ್ಲಿ ನೆಲೆಸಿದ್ದೇನೆ. ಮದ್ರಾಸಿನಲ್ಲಿ ನಾನು ಹೆಚ್ಚು ಕೆಲಸ ಮಾಡುತ್ತೇನೆ ಎಂದು ಹೇಳಿದರು.

    ಈವರೆಗೆ ಯಾರೂ ನನ್ನ ಜಾತಿ ಕೇಳಿಲ್ಲ. ಟೀಕೆಯನ್ನು ಹೇಗೆ ಸ್ವೀಕಾರ ಮಾಡುತ್ತೀರಿ ಅನ್ನೋದು ಮುಖ್ಯ. ಅದನ್ನು ಚಾಲೆಂಜಾಗಿ ಯಾಕೆ ತೆಗೆದುಕೊಳ್ಳಬಾರದು ಎಂದು ಪ್ರಶ್ನೆ ಮಾಡಿ ಮೋದಿ ಪರ ಬ್ಯಾಟ್ ಬೀಸಿ ತಮಿಳುನಾಡಿನ ಹೋರಾಟಗಾರರಿಗೆ ಟಾಂಗ್ ಕೊಟ್ಟರು.

    ಅನುಕ್ತ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರಕಥೆ ಹಿಡಿಸಿದ್ದರಿಂದ ನಾನು ಒಪ್ಪಿಕೊಂಡೆ. ಉಡುಪಿಯಲ್ಲೇ ಬಂದು ಸೆಟಲ್ ಆಗುವ ಮನಸ್ಸಿದೆ. ಇಲ್ಲಿ ಟ್ರಾಫಿಕ್ಕೂ ಇಲ್ಲ, ಡರ್ಟಿ ವೆದರೂ ಇಲ್ಲ, ಕರಾವಳಿಯ ವಾತಾವರಣ- ಫುಡ್ ನಂಗೆ ಇಷ್ಟ. ನನ್ನ ಅಪ್ಪ ಅಮ್ಮನ ಪುಣ್ಯದ ಫಲ, ಹೀಗಾಗಿ ಶ್ರೀಕೃಷ್ಣನ ದರ್ಶನ ಆಗಿದೆ.  ಎಲ್ಲರಿಗೂ ಒಳಿತು ಮಾಡು ಭಗವಂತನಲ್ಲಿ ಪ್ರಾರ್ಥಿಸಿದೆ ಎಂದು ಹೇಳಿದರು.

  • ಮಾಸ್ತಿಗುಡಿ ದುರಂತ: ಪೊಲೀಸರಿಂದ 6 ಜನರ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

    ಮಾಸ್ತಿಗುಡಿ ದುರಂತ: ಪೊಲೀಸರಿಂದ 6 ಜನರ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

    ರಾಮನಗರ: ಮಾಸ್ತಿಗುಡಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಡಿಸಿಐಬಿ  ಪೊಲೀಸರು ಮಾಗಡಿಯ 1 ನೇ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

    ಪ್ರಕರಣದ ಆರು ಜನರ ಮೇಲೆ 450 ಪುಟಗಳ ಜಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ, ನಿರ್ದೇಶಕ ನಾಗಶೇಖರ್, ಸಹ ನಿರ್ದೇಶಕ ಸಿದ್ಧಾರ್ಥ್, ಸಾಹಸ ನಿರ್ದೇಶಕ ರವಿವರ್ಮ, ಯೂನಿಟ್ ಮ್ಯಾನೇಜರ್ ಭರತ್, ಹಾಗೂ ಹೆಲಿಕಾಪ್ಟರ್ ಚಾಲಕ ಪ್ರಕಾಶ್ ಬಿರಾದಾರ್ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

    ಆರು ಜನ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒಟ್ಟು 81 ಜನ ಸಾಕ್ಷಿದಾರರ ಹೇಳಿಕೆಯನ್ನು ಚಾರ್ಜ್ ಶೀಟ್ ನಲ್ಲಿ ದಾಖಲು ಮಾಡಲಾಗಿದೆ.

    ಅಪಾಯ ಸಂಭವಿಸಬಹುದು ಎಂದು ಗೊತ್ತಿದ್ದು ಅಪಾಯಕ್ಕೆ ತಳ್ಳಿದ ಹಿನ್ನೆಲೆಯಲ್ಲಿ ಐಪಿಸಿ 304(ಉದ್ದೇಶಪೂರ್ವಕವಲ್ಲದ ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ವಿಚಾರಣೆ ಮೇ17 ಕ್ಕೆ ಮುಂದೂಡಿದ್ದು ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗೆ ಆರು ಜನ ಆರೋಪಿಗಳು ಸಹ ಹಾಜರಾಗಬೇಕಿದೆ.

    ಏನಿದು ಪ್ರಕರಣ:
    ಮಾಸ್ತಿಗುಡಿ ಚಿತ್ರದಲ್ಲಿ ಅನಿಲ್ ಮತ್ತು ಉದಯ್ ಖಳನಟರಾಗಿ ಅಭಿನಯಿಸುತ್ತಿದ್ದರು. ನವೆಂಬರ್ 7, 2016ರಂದು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನಡೆದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಹೆಲಿಕಾಪ್ಟರ್ ನಿಂದ ಅನಿಲ್, ಉದಯ್, ದುನಿಯ ವಿಜಿ ಜಿಗಿದಿದ್ದರು. ದುನಿಯ ವಿಜಿ ಅವರನ್ನು ತೆಪ್ಪದ ಮೂಲಕ ರಕ್ಷಣೆ ಮಾಡಿದ್ದರೆ, ಅನಿಲ್ ಮತ್ತು ಉದಯ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಜಲಸಮಾಧಿಯಾಗಿದ್ದ ಇಬ್ಬರ ಮೃತದೇಹ 48 ಗಂಟೆಯ ಬಳಿಕ ಪತ್ತೆಯಾಗಿತ್ತು.

    https://www.youtube.com/watch?v=7sSL-_09xO0

    https://www.youtube.com/watch?v=33UF4AToAd0

  • ನಟಿ ಅಮಲಾ ಪೌಲ್ – ವಿಜಯ್ ವಿಚ್ಛೇದನಕ್ಕೆ ಕೋರ್ಟ್ ಅಸ್ತು

    ನಟಿ ಅಮಲಾ ಪೌಲ್ – ವಿಜಯ್ ವಿಚ್ಛೇದನಕ್ಕೆ ಕೋರ್ಟ್ ಅಸ್ತು

    ಚೆನ್ನೈ: ನಟಿ ಅಮಲಾ ಪೌಲ್ ಹಾಗೂ ನಿರ್ದೇಶಕ ಎ.ಎಲ್.ವಿಜಯ್ ಡೈವೋರ್ಸ್ ಗೆ ಅಧಿಕೃತ ಮುದ್ರೆ ಬಿದ್ದಿದೆ. ಮಂಗಳವಾರ ಚೆನ್ನೈನ ಕೌಟುಂಬಿಕ ನ್ಯಾಯಾಲಯ ನಟಿ ಅಮಲಾ ಪೌಲ್ – ವಿಜಯ್ ವಿಚ್ಛೇದನಕ್ಕೆ ಅಸ್ತು ಎಂದಿದೆ. ಈ ಮೂಲಕ ಅಮಲಾ ಪೌಲ್ ಹಾಗೂ ವಿಜಯ್ ಅವರ ಎರಡೂವರೆ ವರ್ಷದ ದಾಂಪತ್ಯ ಕೊನೆಯಾಗಿದೆ.

    4 ವರ್ಷಗಳ ಕಾಲ ಪ್ರೀತಿಸಿದ್ದ ಅಮಲಾ-ವಿಜಯ್ ಜೋಡಿ 2014ರ ಜೂನ್ 12ರಂದು ಮದುವೆಯಾಗಿದ್ದರು. ಆದರೆ ಮದುವೆಯಾದ ಬಳಿಕ ವಿಜಯ್ ಕುಟುಂಬದವರು ಸಿನೆಮಾ ನಟನೆಯನ್ನು ತಡೆಯಲು ಮುಂದಾದರು ಎಂಬ ಕಾರಣಕ್ಕೆ ಅಮಲಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿತ್ತು. ಆದರೆ ಈ ಅರೋಪವನ್ನು ವಿಜಯ್ ತಳ್ಳಿ ಹಾಕಿದ್ದರು.

    ಕನ್ನಡದ ಹೆಬ್ಬುಲಿ ಸಿನೆಮಾದಲ್ಲೂ ಅಮಲಾ ಪೌಲ್ ನಟಿಸಿದ್ದಾರೆ. ಇದಲ್ಲದೆ ಅಚ್ಚಾಯನ್, ಸಿಂಡ್ರೆಲ್ಲಾ, ವಾಡಾ ಚೆನ್ನೈ ಮುಂತಾದ ಸಿನೆಮಾಗಳಲ್ಲಿ ಅಮಲಾ ಈಗ ಬ್ಯುಸಿಯಾಗಿದ್ದಾರೆ.