Tag: Vijay Surya

  • ಮತ್ತೆ ಧಾರಾವಾಹಿಗೆ ಮರಳಿದ ವಿಜಯ್ ಸೂರ್ಯ

    ಮತ್ತೆ ಧಾರಾವಾಹಿಗೆ ಮರಳಿದ ವಿಜಯ್ ಸೂರ್ಯ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ ಧಾರಾವಾಹಿಯಿಂದ ಹೊರಬಂದಿರುವ ವಿಜಯ್ ಸೂರ್ಯ ಈಗ ಮತ್ತೊಂದು ಸಿರಿಯಲ್ ಮೂಲಕ ಕಿರುತೆರೆಗೆ ಮರಳಿದ್ದಾರೆ.

    ಇತ್ತೀಚೆಗಷ್ಟೆ ವಿಜಯ್ ಸೂರ್ಯ ಅವರು ಜನಪ್ರಿಯ ಅಗ್ನಿಸಾಕ್ಷಿ ಧಾರಾವಾಹಿಯಿಂದ ಹೊರಬಂದಿದ್ದರು. ಆ ಧಾರಾವಾಯಿಯಿಂದ ಹೊರಬಂದ ಬೆನ್ನಲ್ಲೇ ವಿಜಯ್ ಮತ್ತೊಂದು ಸಿರಿಯಲ್ ನಲ್ಲಿ ಅಭಿನಯಿಸಲು ಸಹಿ ಹಾಕಿದ್ದಾರೆ. ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ‘ಕಸೌತಿ ಜಿಂದಗಿ ಕೀ’ ಧಾರಾವಾಹಿಯ ರಿಮೇಕ್‍ನಲ್ಲಿ ವಿಜಯ್ ನಟಿಸುತ್ತಿದ್ದಾರೆ. ಈ ಧಾರಾವಾಹಿ ಬೇರೆ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ‘ಪ್ರೇಮಾಲೋಕ’ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಈ ಬಗ್ಗೆ ನಟ ವಿಜಯ್ ಸೂರ್ಯ ಕೂಡ ಅಧಿಕೃತ ಮಾಹಿತಿ ನೀಡಿದ್ದಾರೆ.

    ನಾನು ಮುಂದಿನ ಧಾರಾವಾಹಿಯನ್ನು ಸೈನ್ ಮಾಡಿದ್ದೇನೆ. ನನಗೆ ಮೂರು ವಾಹಿನಿಯಿಂದ ಅವಕಾಶ ಬಂದಿತ್ತು. ಅದರಲ್ಲಿ ನಾನು ಒಂದನ್ನು ಆಯ್ಕೆ ಮಾಡಿಕೊಂಡೆ. ನನಗೆ ಈ ಧಾರಾವಾಹಿಯ ಕಾನ್ಸೆಪ್ಟ್ ಇಷ್ಟವಾಯಿತು. ಅಲ್ಲದೆ ಈ ಧಾರಾವಾಹಿ ಹಿಂದಿ ಹೆಚ್ಚು ಜನಪ್ರಿಯವಾಗಿದೆ. ನಾನು ಸೈನ್ ಮಾಡಿದ ನಂತರ ಕಸೌತಿ ಜಿಂದಗಿ ಕೀ ಧಾರಾವಾಹಿಯ 70 ಸಂಚಿಕೆಗಳನ್ನು ವೀಕ್ಷಿಸಿದ್ದೇನೆ. ಸದ್ಯ ಈ ಧಾರಾವಾಹಿಯಲ್ಲಿ ನನಗೆ ವಿಜಯ್ ಅಥವಾ ಸೂರ್ಯ ಹೆಸರಿಡಲು ಯೋಚಿಸುತ್ತಿದ್ದಾರೆ ಎಂದು ವಿಜಯ್ ಸೂರ್ಯ ತಿಳಿಸಿದ್ದಾರೆ.

    ವಿಜಯ್ ಈಗಾಗಲೇ ನಟಿಸಿದ್ದ ಅಗ್ನಿಸಾಕ್ಷಿ ಧಾರಾವಾಹಿ ಶುರುವಾಗಿ ಐದು ವರ್ಷ ಆಗಿದ್ದು, ವಿಜಯ್ ಸೂರ್ಯ ನಟಿಸಿದ ಸಿದ್ಧಾರ್ಥ್ ಪಾತ್ರ ಕೂಡ ಕೊನೆಯಾಗುತ್ತಿದೆ. ಧಾರಾವಾಹಿಯಲ್ಲಿ ಈಗಾಗಲೇ ಸಿದ್ಧಾರ್ಥ್ ಆಸ್ಟ್ರೇಲಿಯಾಗೆ ಹೊರಡಲು ಸಿದ್ಧರಾಗಿದ್ದು, ಅವರು ಅಲ್ಲಿಗೆ ಹೊರಟ ನಂತರ ಅವರ ಪಾತ್ರ ಕೊನೆಯಾಗಲಿದೆ. ಈ ಧಾರಾವಾಹಿಗಾಗಿ ವಿಜಯ್ ಸೂರ್ಯ 5 ವರ್ಷ ಒಪ್ಪಂದ ಕೂಡ ಮಾಡಿಕೊಂಡಿದ್ದರು. ಈಗ ಅಗ್ರಿಮೆಂಟ್ ಅವಧಿ ಮುಗಿದಿರುವ ಕಾರಣ ವಿಜಯ್ ಧಾರಾವಾಹಿಯಿಂದ ಹೊರಬಂದಿದ್ದಾರೆ.

  • ಧಾರವಾಹಿಯಿಂದ ಹೊರಬಂದ ಸಿದ್ಧಾರ್ಥ್ ನ ನೆನೆದ ಸನ್ನಿಧಿ

    ಧಾರವಾಹಿಯಿಂದ ಹೊರಬಂದ ಸಿದ್ಧಾರ್ಥ್ ನ ನೆನೆದ ಸನ್ನಿಧಿ

    ಬೆಂಗಳೂರು: ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ `ಅಗ್ನಿಸಾಕ್ಷಿ’ ಧಾರವಾಹಿಯ ನಟ ವಿಜಯ್ ಸೂರ್ಯ ಸೀರಿಯಲ್‍ನಿಂದ ಹೊರಬಂದಿದ್ದಾರೆ. ಹೀಗಾಗಿ ನಟಿ ವೈಷ್ಣವಿ ಸಹನಟನನ್ನು ನೆನೆದು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿ ಶುಭಕೋರಿದ್ದಾರೆ.

    ಹೌದು. ಧಾರವಾಹಿಯಿಂದ ಹೊರಬಂದಿರುವ ವಿಜಯ್‍ರನ್ನು ವೈಷ್ಣವಿ ಅವರು ನೆನದು `ನಿನ್ನನ್ನು ಮಿಸ್ ಮಾಡುತ್ತೇವೆ. ನಿನ್ನ ಭವಿಷ್ಯ ಚೆನ್ನಾಗಿರಲಿ’ ಎಂದು ಬರೆದು ಅವರಿಬ್ಬರ ಫೋಟೋ ಹಾಕಿ ಶುಭಕೋರಿದ್ದಾರೆ.

    ಅಗ್ನಿಸಾಕ್ಷಿ ಧಾರಾವಾಹಿ ಶುರುವಾಗಿ ಐದು ವರ್ಷ ಆಗಿದ್ದು, ವಿಜಯ್ ಸೂರ್ಯ ನಟಿಸಿದ ಸಿದ್ಧಾರ್ಥ್ ಪಾತ್ರ ಕೂಡ ಕೊನೆಯಾಗುತ್ತಿದೆ. ಧಾರಾವಾಹಿಯಲ್ಲಿ ಈಗಾಗಲೇ ಸಿದ್ಧಾರ್ಥ್ ಆಸ್ಟ್ರೇಲಿಯಾಗೆ ಹೊರಡಲು ಸಿದ್ಧರಾಗಿದ್ದು, ಅವರು ಅಲ್ಲಿಗೆ ಹೊರಟ ನಂತರ ಅವರ ಪಾತ್ರ ಕೊನೆಯಾಗಲಿದೆ.

    ಈ ಧಾರಾವಾಹಿಗಾಗಿ ವಿಜಯ್ ಸೂರ್ಯ 5 ವರ್ಷ ಒಪ್ಪಂದ ಕೂಡ ಮಾಡಿಕೊಂಡಿದ್ದರು. ಈಗ ಅಗ್ರಿಮೆಂಟ್ ಅವಧಿ ಮುಗಿದಿರುವ ಕಾರಣ ವಿಜಯ್ ಧಾರಾವಾಹಿಯಿಂದ ಹೊರಬಂದಿದ್ದಾರೆ. ವಿಜಯ್ ಈಗ ಬ್ರೇಕ್ ಬೇಕಾಗಿರುವ ಕಾರಣ ಅವರು ಧಾರಾವಾಹಿಯಿಂದ ಹೊರ ನಡೆಯಲು ಇದೇ ಸಮಯ ಉತ್ತಮ ಎಂದು ಹೊರ ನಡೆದಿದ್ದಾರೆ.

    ಫೆಬ್ರವರಿ ತಿಂಗಳಿನಲ್ಲಿ ವಿಜಯ್ ಸೂರ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಅವರು ತಮ್ಮ ಕುಟುಂಬದ ಜೊತೆ ಸ್ವಲ್ಪ ಕಾಲ ಕಳೆಯಬೇಕು ಎಂದು ಧಾರಾವಾಹಿಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ವಿಜಯ್ ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಈಗ ಅವರು ಲಕ್ನೋ ಟು ಮುಂಬೈ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ.

    https://www.instagram.com/p/BypA2ahhxgm/

  • ಅಗ್ನಿಸಾಕ್ಷಿ ಧಾರಾವಾಹಿಯಿಂದ ಹೊರಬಂದ ನಟ ವಿಜಯ್ ಸೂರ್ಯ

    ಅಗ್ನಿಸಾಕ್ಷಿ ಧಾರಾವಾಹಿಯಿಂದ ಹೊರಬಂದ ನಟ ವಿಜಯ್ ಸೂರ್ಯ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಅಗ್ನಿಸಾಕ್ಷಿ’ ಧಾರಾವಾಹಿಯಿಂದ ನಟ ವಿಜಯ್ ಸೂರ್ಯ ಹೊರ ಬಂದಿದ್ದಾರೆ.

    ಅಗ್ನಿಸಾಕ್ಷಿ ಧಾರಾವಾಹಿ ಶುರುವಾಗಿ ಐದು ವರ್ಷ ಆಗಿದ್ದು, ವಿಜಯ್ ಸೂರ್ಯ ನಟಿಸಿದ ಸಿದ್ಧಾರ್ಥ್ ಪಾತ್ರ ಕೂಡ ಕೊನೆಯಾಗುತ್ತಿದೆ. ಧಾರಾವಾಹಿಯಲ್ಲಿ ಈಗಾಗಲೇ ಸಿದ್ಧಾರ್ಥ್ ಆಸ್ಟ್ರೇಲಿಯಾಗೆ ಹೊರಡಲು ಸಿದ್ಧರಾಗಿದ್ದು, ಅವರು ಅಲ್ಲಿಗೆ ಹೊರಟ ನಂತರ ಅವರ ಪಾತ್ರ ಕೊನೆಯಾಗಲಿದೆ.

    ಈ ಧಾರಾವಾಹಿಗಾಗಿ ವಿಜಯ್ ಸೂರ್ಯ 5 ವರ್ಷ ಒಪ್ಪಂದ ಕೂಡ ಮಾಡಿಕೊಂಡಿದ್ದರು. ಈಗ ಅಗ್ರಿಮೆಂಟ್ ಅವಧಿ ಮುಗಿದಿರುವ ಕಾರಣ ವಿಜಯ್ ಧಾರಾವಾಹಿಯಿಂದ ಹೊರಬಂದಿದ್ದಾರೆ. ವಿಜಯ್ ಈಗ ಬ್ರೇಕ್ ಬೇಕಾಗಿರುವ ಕಾರಣ ಅವರು ಧಾರಾವಾಹಿಯಿಂದ ಹೊರ ನಡೆಯಲು ಇದೇ ಸಮಯ ಉತ್ತಮ ಎಂದು ಹೊರ ನಡೆದಿದ್ದಾರೆ.

    ಫೆಬ್ರವರಿ ತಿಂಗಳಿನಲ್ಲಿ ವಿಜಯ್ ಸೂರ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಅವರು ತಮ್ಮ ಕುಟುಂಬದ ಜೊತೆ ಸ್ವಲ್ಪ ಕಾಲ ಕಳೆಯಬೇಕು ಎಂದು ಧಾರಾವಾಹಿಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ವಿಜಯ್ ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಈಗ ಅವರು ಲಕ್ನೋ ಟು ಮುಂಬೈ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ.

    ಈ ಧಾರಾವಾಹಿಯಿಂದ ಸನ್ನಿಧಿ ಪಾತ್ರಧಾರಿಯ ವೈಷ್ಣವಿ ಕೂಡ ಹೊರಬರುತ್ತಾರಾ ಎಂದು ಪ್ರೇಕ್ಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮತ್ತೆ ಕೆಲವರು ನಟ ಹೊರಬಂದ ಮೇಲೆ ಧಾರಾವಾಹಿ ಮುಕ್ತಾರವಾಗಬಹುದು ಎಂದು ಹೇಳುತ್ತಿದ್ದಾರೆ. ಸದ್ಯ ಸನ್ನಿಧಿ ಪಾತ್ರ ಮುಂದುವರಿಯಲಿದ್ದು, ಪೇಕ್ಷಕರು ಧಾರಾವಾಹಿ ಮುಕ್ತಾಯ ಆಗುತ್ತಾ ಎಂಬ ಗೊಂದಲದಲ್ಲಿ ಇದ್ದಾರೆ.

  • ಪ್ರೇಮಿಗಳ ದಿನವೇ ಅಗ್ನಿಸಾಕ್ಷಿಯ ಸಿದ್ಧಾರ್ಥ್ ಮದುವೆ

    ಪ್ರೇಮಿಗಳ ದಿನವೇ ಅಗ್ನಿಸಾಕ್ಷಿಯ ಸಿದ್ಧಾರ್ಥ್ ಮದುವೆ

    ಬೆಂಗಳೂರು: ಇತ್ತೀಚೆಗೆ ಕಿರುತೆರೆ ಮತ್ತು ಬೆಳ್ಳೆತೆರೆ ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗ ನಟ ಹಾಗೂ ಕಿರುತೆರೆಯ ಹ್ಯಾಂಡ್‍ಸಮ್ ಹುಡುಗ ವಿಜಯ್ ಸೂರ್ಯ ಸದ್ಯದಲ್ಲೇ ಮದುವೆಯಾಗಲಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಅಗ್ನಿಸಾಕ್ಷಿ’ ಧಾರಾವಾಹಿಯ ಮೂಲಕವೇ ನಟ ವಿಜಯ್ ಸೂರ್ಯ ಅವರು ಜನಪ್ರಿಯತೆ ಗಳಿಸಿದ್ದಾರೆ. ಇದೇ ತಿಂಗಳು ಅಂದರೆ ಫೆಬ್ರವರಿ 14 ರಂದು ಅದು ಪ್ರೇಮಿಗಳ ದಿನದಂತೆ ವಿವಾಹವಾಗುತ್ತಿದ್ದಾರೆ. ಚೈತ್ರಾ ಎಂಬವರನ್ನು ವಿಜಯ್ ಸೂರ್ಯ ಮದುವೆಯಾಗುತ್ತಿದ್ದಾರೆ. ಚೈತ್ರಾ ಅವರ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದು, ವಿಜಯ್ ಸೂರ್ಯ ಅವರ ದೂರದ ಸಂಬಂಧಿಯಾಗಿದ್ದಾರೆ.

    ತಮ್ಮ ಮದುವೆ ಎಂದು ಸುದ್ದಿ ಹರಿದಾಡುತ್ತಿದ್ದಂತೆ ಈ ಬಗ್ಗೆ ವಿಜಯ್ ಸೂರ್ಯ ಸ್ಪಷ್ಟಪಡಿಸಿದ್ದಾರೆ. ಚೈತ್ರಾ ಮತ್ತು ನಮ್ಮ ಕುಟುಂಬದವರಿಗೆ 9 ವರ್ಷಗಳ ಹಿಂದೆ ಪರಿಚಯವಾಗಿದೆ. ಆದರೆ ನಾನು ಚೈತ್ರಾರನ್ನು ಎರಡು ಬಾರಿ ಮಾತ್ರ ಭೇಟಿ ಮಾಡಿದ್ದೇನೆ. ನಮ್ಮ ತಾಯಿ ಅವರನ್ನು ನೋಡಿ ಇಷ್ಟಪಟ್ಟು ಮದುವೆಯ ಬಗ್ಗೆ ಅವರ ಕುಟುಂಬದವರ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಬಳಿಕ ಅವರು ಒಪ್ಪಿಗೆ ಸೂಚಿಸಿದ್ದು, ಇಬ್ಬರ ಜಾತಕ ಹೊಂದಾಣಿಕೆಯಾಗಿದ್ದು, ಗುರು-ಹಿರಿಯರು ಈಗ ನಮ್ಮ ಮದುವೆಯನ್ನು ನಿಶ್ಚಯಿಸಿದ್ದಾರೆ ಎಂದು ವಿಜಯ್ ಹೇಳಿದ್ದಾರೆ.

    23 ವರ್ಷದ ಚೈತ್ರಾ ಅವರು ಪ್ರಬುಧ್ಧವಾಗಿ ಯೋಚಿಸುತ್ತಾರೆ. ನಾನು ನಮ್ಮ ಉದ್ಯೋಗ ಎಲ್ಲರ ಗಮನವನ್ನು ಸೆಳೆಯುತ್ತದೆ ಎಂದುಕೊಂಡಿದ್ದೆ. ಆದರೆ ಚೈತ್ರಾ ನಾನೊಬ್ಬ ನಟ ಎಂದು ಅಷ್ಟಾಗಿ ಚಿಂತಿಸಲಿಲ್ಲ. ‘ವ್ಯಕ್ತಿ ಯಾರು ಎನ್ನುವುದಕ್ಕಿಂತ ವ್ಯಕ್ತಿ ಹೇಗೆ’ ಎಂದು ಚೈತ್ರಾ ನೋಡುತ್ತಾರೆ. ನನ್ನ ನಟನಾ ಫೀಲ್ಡ್, ಅಲ್ಲಿನ ಸುದ್ದಿ, ಗಾಸಿಪ್ ಗಳ ಬಗ್ಗೆ ಮುಂಚಿತವಾಗಿ ನಾನು ಅವರೊಂದಿಗೆ ಮಾತನಾಡಿದ್ದೇನೆ. ಬೇರೆ ವೃತ್ತಿಯಂತೆ ನಟನೆಯು ಒಂದು ವೃತ್ತಿ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ. ಆದ್ದರಿಂದ ಅವರು ನನಗೆ ಇಷ್ಟವಾದರು ಎಂದು ವಿಜಯ್ ಸೂರ್ಯ ತಮ್ಮ ಭಾವಿ ಪತ್ನಿ ಚೈತ್ರಾ ಬಗ್ಗೆ ಮಾತನಾಡಿದ್ದಾರೆ.

    ನಮ್ಮ ಮದುವೆ ಕುಟುಂಬ, ಸ್ನೇಹಿತರ ಸಮ್ಮುಖದಲ್ಲಿ ನಡೆಯಲಿದೆ. ನಮ್ಮ ಮದುವೆ ದಿನಾಂಕವೂ ಒಂದು ವಿಶೇಷ ದಿನ ಎಂದು ಭಾವಿಸುವುದಿಲ್ಲ. ಆದರೆ ನನ್ನ ಮದುವೆ ದಿನವನ್ನು ನಾನು ಮರೆಯುದಿಲ್ಲ ಎಂದು ವಿಜಯ್ ಸೂರ್ಯ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಎ ಪ್ಲಸ್ – ಉಪ್ಪಿ ಶಿಷ್ಯನ ರುಚಿಯಾದ ಉಪ್ಪಿಟ್ಟು!

    ಎ ಪ್ಲಸ್ – ಉಪ್ಪಿ ಶಿಷ್ಯನ ರುಚಿಯಾದ ಉಪ್ಪಿಟ್ಟು!

    ಬೆಂಗಳೂರು: ಟ್ರೈಲರಿನ ಕಾರಣದಿಂದಲೇ ಸಾಕಷ್ಟು ಸುದ್ದಿ ಮಾಡಿದ್ದ ವಿಜಯ್ ಸೂರ್ಯ ನಿರ್ದೇಶನದ ಎ ಪ್ಲಸ್ ಚಿತ್ರ ತೆರೆ ಕಂಡಿದೆ. ಈ ಟ್ರೈಲರ್ ಕಂಡ ಅನೇಕರು ಇದು ಉಪೇಂದ್ರ ಅಭಿನಯದ ಎ ಚಿತ್ರದ ಮುಂದುವರೆದ ಭಾಗ ಅಂತಲೂ ಅಂದುಕೊಂಡಿದ್ದರು. ಅದನ್ನೂ ಕೂಡಾ ಪ್ಲಸ್ ಆಗಿಸಿಕೊಂಡಿದ್ದ ಈ ಚಿತ್ರ ಒಂದು ಭರಪೂರ ಕಂಟೆಂಟಿನ ಕಥಾನಕದೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಿದೆ.

    ಆರಂಭದಲ್ಲಿಯೇ ಇದು ಭಿನ್ನ ಪ್ರಯೋಗಗಳ ಚಿತ್ರ ಅಂತ ನಿರ್ದೇಶಕ ವಿಜಯ್ ಸೂರ್ಯ ಹೇಳಿಕೊಂಡಿದ್ದರು. ಆ ಮಾತಿಗೆ ತಪ್ಪದೆ ಹಲವಾರು ಹೊಸಾ ಪ್ರಯೋಗಗಳ ಮೂಲಕವೇ ಅವರು ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಪ್ರೀತಿ, ದ್ವೇಷ ಮತ್ತು ಕನಸಿನಂಥಾ ಹೂರಣ ಹೊಂದಿರೋ ಕಥೆಯನ್ನು ಅಡಿಗಡಿಗೆ ಟ್ವಿಸ್ಟು ಕೊಡುತ್ತಾ, ಪ್ರೇಕ್ಷಕರನ್ನು ಚೂರು ಗೊಂದಲಕ್ಕೆ ದೂಡಿದಂತೆ ಮಾಡಿ ಮರುಕ್ಷಣವೇ ಅದನ್ನು ಪರಿಹಾರ ಮಾಡುತ್ತಾ ಈ ಚಿತ್ರವನ್ನು ಕುತೂಹಲಕರವಾಗಿಯೇ ಕಟ್ಟಿ ಕೊಟ್ಟಿದ್ದಾರೆ.

    ಈ ಚಿತ್ರದ ನಾಯಕನದ್ದು ವಿಚಿತ್ರ ಕ್ಯಾರೆಕ್ಟರ್. ತನ್ನ ಗುರುವಿನ ಕುಟುಂಬವನ್ನು ನಿರ್ನಾಮ ಮಾಡಿದ ವ್ಯಕ್ತಿಯನ್ನು ಸದೆ ಬಡಿಯಲು ಮುಂದಾದ ಆತನಿಗೆ ನಿರ್ದೇಶಕನಾಗೋ ಹಂಬಲ. ತಾನು ಕಂಡ ಕಹೀ ಸತ್ಯಗಳನ್ನೇ ಒಂದೊಳ್ಳೆ ಚಿತ್ರವಾಗಿಸಬೇಕೆಂಬ ಕನಸು ಆತನದ್ದು. ಇಂಥವನನ್ನು ಪ್ರೀತ್ಸೋ ಅಂತ ಬೆಂಬೀಳುವ ನಾಯಕಿ, ಆಕೆಯೊಳಗೂ ಕೂಡಾ ಒಂದು ದ್ವೇಷ… ಅರೆ ಕ್ಷಣಕ್ಕೊಂದು ಟ್ವಿಸ್ಟುಗಳ ಮೂಲಕ ಕುತೂಹಲ ಉಳಿಸಿಕೊಂಡು ಸಾಗುವಲ್ಲಿ ಮೊದಲ ಪ್ರಯತ್ನದಲ್ಲಿಯೇ ವಿಜಯ್ ಸೂರ್ಯ ಗಮನ ಸೆಳೆದಿದ್ದಾರೆ.

    ನಾಯಕನಾಗಿ ಸಿದ್ದು ಆ ಪಾತ್ರವನ್ನು ಪರಿಣಾಮಕಾರಿಯಾಗಿಸಿದ್ದಾರೆ. ನಾಯಕಿಯಾಗಿ ಸಂಗೀತಾ ಪ್ರೀತಿ ಮತ್ತು ದ್ವೇಷ ತುಂಬಿದ ನಟನೆಯಿಂದ ಪ್ರೇಕ್ಷಕರನ್ನು ಕಾಡುತ್ತಾರೆ. ಭೂಪಿಂದರ್ ಸಿಂಗ್ ರೈನಾ ಛಾಯಾಗ್ರಹಣ ಈ ಚಿತ್ರದ ಒಟ್ಟಂದವನ್ನು ಹೆಚ್ಚಿಸಿದೆ. ಇದೊಂದು ರಗಡ್ ಸ್ಟೋರಿ ಹೊಂದಿದ ಕಥೆ ಎಂಬುದು ಟ್ರೈಲರಿನಿಂದಲೇ ಗೊತ್ತಾಗಿತ್ತು. ಆದರೆ ಹಾಡು ಫೈಟುಗಳಿಲ್ಲದೆಯೂ ಈ ಚಿತ್ರವನ್ನು ರೂಪಿಸಲು ಕಾರಣವಿದೆ. ಅದೇನೆಂದು ತಿಳಿಯಲು ಒಮ್ಮೆ ಥೇಟರಿನತ್ತ ಹೋದರೊಳಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv