Tag: vijay mallya

  • ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ!

    ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ!

    ಲಂಡನ್: ಬ್ಯಾಂಕ್‍ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ಮರುಪಾವತಿ ಮಾಡದೇ ಲಂಡನ್‍ನಲ್ಲಿ ತಲೆಮರೆಸಿಕೊಂಡಿದ್ದ ಮದ್ಯದ ದೊರೆ ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್ ಆಂತರಿಕ ಸಂಸತ್ತು ಒಪ್ಪಿಗೆ ನೀಡಿದೆ.

    ಉದ್ಯಮಿ ಮಲ್ಯರನ್ನು ಗಡಿಪಾರು ಮಾಡಲು ಭಾರತ ಸರ್ಕಾರ ಮಾಡಿದ್ದ ಮನವಿಗೆ ಬ್ರಿಟನ್ ಸಚಿವಾಲಯ ಸಮ್ಮತಿಸಿದೆ. ಭಾರತದ ಮನವಿಗೆ ಬ್ರಿಟನ್ ಗೃಹ ಕಾರ್ಯದರ್ಶಿ ಸಜೀದ್ ಜಾವಿದ್ ಫೆಬ್ರವರಿ 3 ರಂದು ಸಹಿ ಹಾಕಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಬ್ರಿಟನ್ ಸರ್ಕಾರದ ಈ ನಿರ್ಣಯದಿಂದ ಮಲ್ಯಗೆ ಭಾರೀ ಹಿನ್ನಡೆ ಆಗಿದೆ.

    ಕಳೆದ ವರ್ಷದ ಡಿಸೆಂಬರಿನಲ್ಲಿ ಈ ಕುರಿತು ವಿಚಾರಣೆ ನಡೆಸಿ ತೀರ್ಪು ನೀಡಿದ್ದ ಲಂಡನ್ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಮಲ್ಯ ಗಡಿಪಾರಿಗೆ ಅನುಮತಿ ನೀಡಿತ್ತು. ಅಲ್ಲದೇ ಗಡಿಪಾರು ಆದೇಶ ನೀಡುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ನ್ಯಾಯಾಲಯದ ತೀರ್ಪಿಗೆ ಸಂಸತ್ ಒಪ್ಪಿಗೆ ಮಾತ್ರ ಬಾಕಿ ಇತ್ತು. ಆದರೆ ಮಲ್ಯ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿ ಬ್ಯಾಂಕ್ ಸಾಲ ಮರು ಪಾವತಿ ಮಾಡಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದರು.

    ಮುಂದಿನ ನಡೆ ಏನು?
    ಮಲ್ಯ ಗಡಿಪಾರಿನ ಕುರಿತು ಲಂಡನ್ ಸಂಸತ್ ಕೈಗೊಂಡಿರುವ ನಿರ್ಣಯದಿಂದ ಭಾರತ ಸರ್ಕಾರಕ್ಕೆ ಮತ್ತೊಂದು ಗೆಲುವು ಸಿಕ್ಕಂತಾಗಿದೆ. ಸದ್ಯ ಲಂಡನ್ ಆಂತರಿಕ ಸಂಸತ್ತಿನ ನಿರ್ಣಯವನ್ನು ಪ್ರಶ್ನಿಸಿ 14 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಲು ವಿಜಯ್ ಮಲ್ಯಗೆ ಅವಕಾಶ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಜಯ್ ಮಲ್ಯ ಭಾರತದ ಮೊದಲ ‘ದೇಶಭ್ರಷ್ಟ ಆರ್ಥಿಕ ಅಪರಾಧಿ’

    ವಿಜಯ್ ಮಲ್ಯ ಭಾರತದ ಮೊದಲ ‘ದೇಶಭ್ರಷ್ಟ ಆರ್ಥಿಕ ಅಪರಾಧಿ’

    ಮುಂಬೈ: ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿ ವಿದೇಶದಲ್ಲಿರುವ ಮದ್ಯದ ದೊರೆ ವಿಜಯ್ ಮಲ್ಯ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಅಕ್ರಮ ಹಣ ವರ್ಗಾವಣೆ ತಡೆ ನ್ಯಾಯಾಲಯ (ಪಿಎಂಎಲ್‍ಎ) ಘೋಷಿಸಿದೆ. ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ ಜಾರಿಗೆ ಬಂದ ಬಳಿಕ ಘೋಷಣೆಯಾದ ಮೊದಲ ಉದ್ಯಮಿ ವಿಜಯ್ ಮಲ್ಯ ಆಗಿದ್ದಾರೆ.

    ಸಾಲ ತೆಗೆದುಕೊಂಡು ಮರು ಪಾವತಿಸದೇ ವಿದೇಶದಲ್ಲಿ ನೆಲೆಸಿರುವ ವಿಜಯ್ ಮಲ್ಯರನ್ನ ಆರ್ಥಿಕ ಅಪರಾಧಿ ಎಂದು ಘೋಷಿಸಬೇಕೆಂದು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ 2018, ನವೆಂಬರ್ ನಲ್ಲಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಇಡಿ ಮತ್ತು ಸಿಬಿಐ ಸುಳ್ಳು ಆರೋಪ ಮಾಡುತ್ತಿದ್ದು, ಸಾಲ ಮರುಪಾವತಿಸಲು ನ್ಯಾಯಾಲಯ ಅವಕಾಶ ನೀಡಬೇಕೆಂದು ಮಲ್ಯ ಪರ ವಕೀಲರು ವಾದ ಮಂಡಿಸಿದ್ದರು.

    ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಇಂದು ವಿಜಯ್ ಮಲ್ಯ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ತೀರ್ಪು ನೀಡಿದೆ. ತೀರ್ಪಿನ ಬಳಿಕ ದೇಶದಲ್ಲಿರುವ ವಿಜಯ್ ಮಲ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಹಾಯವಾಗಲಿದೆ.

    ಲಂಡನ್ ನಲ್ಲಿರುವ ವಿಜಯ್ ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡಲು ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಅನುಮತಿ ನೀಡಿದೆ. ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ್ದ ವಿಜಯ್ ಮಲ್ಯ, ನಾನು ಸಾಲಗಾರನಲ್ಲ. ಕಿಂಗ್ ಫಿಷರ್ ಏರ್ ಲೈನ್ಸ್ ತೆಗೆದುಕೊಂಡಿದ್ದ ಸಾಲಕ್ಕೆ ಜಾಮೀನು ನಿಂತಿದ್ದೆ. ಆದರೆ ಕಿಂಗ್ ಫಿಷರ್ ಏರ್ ಲೈನ್ಸ್ ಉದ್ಯಮದಿಂದ ನಷ್ಟವಾಯಿತು. ಹೀಗಾಗಿ ಸಂಸ್ಥೆ ನಷ್ಟದ ಪಾಲಾಗಿದ್ದು, ನಾನು ಆ ನಷ್ಟದ ಜವಾಬ್ದಾರನಾಗಿದ್ದೇನೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮದ್ಯದ ದೊರೆಗೆ ಬೆಂಗ್ಳೂರಿನಲ್ಲಿ ಭವ್ಯ ಬಂಗಲೆ- ಬರೋಬ್ಬರಿ 100 ಕೋಟಿಯಲ್ಲಿ ನಿರ್ಮಾಣ

    ಮದ್ಯದ ದೊರೆಗೆ ಬೆಂಗ್ಳೂರಿನಲ್ಲಿ ಭವ್ಯ ಬಂಗಲೆ- ಬರೋಬ್ಬರಿ 100 ಕೋಟಿಯಲ್ಲಿ ನಿರ್ಮಾಣ

    ಬೆಂಗಳೂರು: ಕಿಂಗ್ ಫಿಶರ್ ವಿಮಾನ ಏರಿ, ಬಿಯರ್ ಸವಿಯುತ್ತಾ, ತ್ರಿಲೋಕ ಸುಂದರಿಯರನ್ನು ಪಕ್ಕದಲ್ಲಿಟ್ಟುಕೊಂಡು ಬೀಚ್‍ಗಳಲ್ಲಿ ಮಜಾ ಮಾಡಿ ಬ್ಯಾಂಕ್‍ನಲ್ಲಿ ಸಾಲ ಪಡೆದುಕೊಂಡು ಓಡಿ ಹೋದ ಮಲ್ಯ ಅವರ ರಾಯಲ್ ಲೈಫ್‍ಗೇನು ಕೊಕ್ಕೆ ಬಿದ್ದಿಲ್ಲ. ಬೆಂಗಳೂರಿನ ದಿ ಮೋಸ್ಟ್ ಕಾಸ್ಟ್ಲಿಯೆಸ್ಟ್ ಏರಿಯಾದಲ್ಲಿ ಮಲ್ಯ ಕನಸಿನ ಅರಮನೆಗೆ ಅದ್ಧೂರಿ ಜೀವ ಬಂದಿದೆ.

    ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿ ಲಂಡನ್‍ಗೆ ಪರಾರಿಯಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯ ಭಾರತಕ್ಕೆ ಗಡಿಪಾರು ಮಾಡಲು ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಅನುಮತಿ ನೀಡಿತ್ತು. ಆದರೆ ಈಗ ಮಲ್ಯಗಾಗಿ ಬೆಂಗಳೂರಿನಲ್ಲಿ ಅರಮನೆಯಂತಹ ಮನೆಯೊಂದು ನಿರ್ಮಾಣವಾಗುತ್ತಿದೆ. ಭೂಮಿಯ ಅತಿ ಎತ್ತರದಲ್ಲಿರುವ ಬಂಗಲೆ ಇದಾಗಿದ್ದು, ಮಲ್ಯನ ಎರಡು ಫ್ಲೋರ್ ನ ಮನೆಯಿಂದ ಏಣಿ ಇಟ್ಟರೆ ಆಕಾಶ ಸಿಗುತ್ತೆ ಅನ್ನುವ ಫೀಲ್ ಹುಟ್ಟಿಸುವಷ್ಟು ಎತ್ತರದಲ್ಲಿದೆ. 400 ಅಡಿ ಕಿಂಗ್ ಫಿಶರ್ ಟವರ್ ನಲ್ಲಿ ರೂಫ್ ಟಾಪ್‍ನಲ್ಲಿ ಅಮೆರಿಕ ಹಾಗೂ ಲಂಡನ್ ಮೇಯರ್ ಮನೆಯನ್ನು ಹೋಲುವ ವೈಟ್ ಹೌಸ್ ಮಲ್ಯ ಸಾಹೇಬ್ರಿಗಾಗಿ ನಿರ್ಮಾಣವಾಗುತ್ತದೆ. ಇದನ್ನೂ ಓದಿ:  ಬ್ರಿಟನ್‍ನಿಂದ ವಿಜಯ್ ಮಲ್ಯ ಭಾರತಕ್ಕೆ ಗಡಿಪಾರು

    100 ಕೋಟಿ ವೆಚ್ಚದಲ್ಲಿ ಮನೆ:
    ಬೆಂಗಳೂರಿನ ಟಾಪ್ ಅಪಾರ್ಟ್ ಮೆಂಟ್ ಇದಾಗಿದ್ದು, ಅತ್ಯಂತ ದುಬಾರಿ ವೆಚ್ಚದ್ದಾಗಿದೆ. ಈ ಅಪಾರ್ಟ್ ಮೆಂಟ್ ಅನ್ನು ಮಲ್ಯ ಒಡೆತನದ ಯುಬಿ ಗ್ರೂಫ್ ಹಾಗೂ ಪ್ರೆಸ್ಟೀಜ್ ಪಾಲುದಾರರಾಗಿ ಕಟ್ಟಿದೆ. 82 ಪ್ಲ್ಯಾಟ್ ಇದೆ. ಪ್ಲೋರ್ ರೂಪ್ ಟಾಫ್‍ನಲ್ಲಿ ಪೆಂಟ್ ಹೌಸ್‍ನಲ್ಲಿ ಮಲ್ಯನ ರಾಜ ದರ್ಬಾರ್ ನಡೆಯಲಿದೆ. ಅಮೆರಿಕದ ವೈಟ್ ಹೌಸ್ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಈ ಭವ್ಯ ಪ್ಲ್ಯಾಟ್ ಮಲ್ಯಗೆ ಸೇರಿದ್ದಾಗಿದೆ.

    ಮಲ್ಯನ ಭವ್ಯ ಅರಮನೆ 400 ಅಡಿ ಎತ್ತರದಲ್ಲಿದ್ದು, 34 ಹಾಗೂ 35ನೇ ಲೆವಲ್‍ನಲ್ಲಿ ಮಲ್ಯ ಮನೆಯಿದೆ. ಮನೆಯ ಟಾಪ್‍ನಲ್ಲಿ ಹೆಲಿಪ್ಯಾಡ್, ಜೊತೆಗೆ ದೊಡ್ಡ ಸ್ವಿಮ್ಮಿಂಗ್ ಪೂಲ್ ಮತ್ತು ದೊಡ್ಡದಾದ ಬಾರ್ ಹೌಸ್ ಕೂಡ ಇದೆ. ಜಗತ್ತಿನ ದುಬಾರಿ ಎಣ್ಣೆಗಳು ಇಲ್ಲಿ ಸಿಗಲಿದೆ. ಬರೋಬ್ಬರಿ ನೂರು ಕೋಟಿಯಷ್ಟು ವೆಚ್ಚದಲ್ಲಿ ಈ ವೈಟ್ ಹೌಸ್ ನಿರ್ಮಾಣವಾಗುತ್ತಿದೆ. ಆದರೆ ಮಾರ್ಕೆಟ್ ನ ಮೌಲ್ಯ 500 ಕೋಟಿ ಎಂದು ಹೇಳಲಾಗುತ್ತಿದೆ.

    ಈ ಅಪಾರ್ಟ್ ಮೆಂಟ್ ಎರಡು ಸಾವಿರ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣಗಲಿದ್ದು, ಪ್ರತಿ ರೂಂಗೂ ಅದ್ಭುತ ಇಂಟಿರಿಯರ್ ವರ್ಕ್, ಜಗತ್ತಿನ ದುಬಾರಿ ಸೋಫಾಸೆಟ್, ಬಂಗಾರದ ಬಣ್ಣದಂತೆ ಹೊಳೆಯುವ ಬೆಡ್‍ಗಳು. ಇಟಲಿಯನ್ ಮಾರ್ಬಲ್ ಸ್ಟೋನ್, ಕೇನ್ಯನ್ ಹಾರ್ಡ್ ವುಡ್ ಮಾರ್ಬಲ್, ಗೋಲ್ಡನ್ ಬಾತ್ ರೂಂ ಟೈಲ್ಸ್, ಅಲ್ಲದೇ ಕಣ್ಣು ಕೋರೈಸುವ ಮಂದ ಬೆಳಕಲ್ಲಿ ಪಬ್ ಕೂಡ ಇದ್ದು, ಇದು ಮಲ್ಯ ಅರಮನೆಯ ಸ್ಪೆಷಾಲಿಟಿಯಾಗಿದೆ.

    ಈ ಮನೆಯಲ್ಲಿ ಎರಡು ಲಿಫ್ಟ್ ಇದ್ದು, ಒಂದು ವಿಜಯಮಲ್ಯಗಷ್ಟೇ ಮೀಸಲು. ಇನ್ನೊಂದು ಗೆಸ್ಟ್ ಗಳಿಗೆ ಮೀಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಇರುವ ಈ ಲಿಫ್ಟ್ ಮಲ್ಯ ಪಿಂಗರ್ ಫ್ರಿಂಟ್ ಇಲ್ಲದೇ ತೆರೆಯಲ್ಲ. ಅಷ್ಟೊಂದು ಭದ್ರತೆಯಿಂದ ಕೂಡಿದೆ. ಸದ್ಯಕ್ಕೆ ಮಲ್ಯ ಅರಮನೆಗೆ ಫೈನಲ್ ಟಚ್ ಸಿಕ್ಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮೈಕಲ್ ಬಂಧನದ ಬಿಸಿಗೆ ಎಚ್ಚೆತ್ತ ವಿಜಯ್ ಮಲ್ಯ!

    ಮೈಕಲ್ ಬಂಧನದ ಬಿಸಿಗೆ ಎಚ್ಚೆತ್ತ ವಿಜಯ್ ಮಲ್ಯ!

    ನವದೆಹಲಿ: ಯುಪಿಎ ಅವಧಿಯ ಹೆಲಿಕಾಪ್ಟರ್ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್‍ನನ್ನು ಸಿಬಿಐ ಭಾರತಕ್ಕೆ ಕರೆತರುತ್ತಿದ್ದಂತೆ, ಸಾರ್ವಜನಿಕ ಬ್ಯಾಂಕ್‍ಗಳಿಗೆ ವಂಚಿಸಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಈಗ ಎಚ್ಚೆತ್ತುಕೊಂಡಿದ್ದಾರೆ.

    ನಾನು ಪಡೆದಿರವುದು ಸಾರ್ವಜನಿಕ ಹಣ. ಹೀಗಾಗಿ ಶೇ.100ರಷ್ಟು ಸಾಲವನ್ನು ಮರು ಪಾವತಿ ಮಾಡುತ್ತೇನೆ ಎಂದು ವಿಜಯ್ ಮಲ್ಯ ಸರಣಿ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ಇದೇ ವೇಳೆ ರಾಜಕಾರಣಿಗಳು ಹಾಗೂ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?:
    ನಾನು ಸಾರ್ವಜನಿಕರ ಹಣವನ್ನು ದೋಚಿ ಪರಾರಿಯಾಗಿದ್ದೇನೆ ಎಂದು ರಾಜಕಾರಣಿಗಳು ಹಾಗೂ ಮಾಧ್ಯಮಗಳು ನನ್ನ ವಿರುದ್ಧ ಜೋರಾಗಿ ಮಾತನಾಡುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಕರಣವಿರುವಾಗಲೇ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ.

    ಕಿಂಗ್‍ಫಿಶರ್ ಅದ್ಭುತ ವಿಮಾನಯಾನ ಸಂಸ್ಥೆಯಾಗಿದೆ. ಆದರೆ ವಿಮಾನಕ್ಕೆ ಬಳಸುವ ಇಂಧನದ ಬೆಲೆಯು ಪ್ರತಿ ಬ್ಯಾರೆಲ್‍ಗೆ 140 ಅಮೆರಿಕನ್ ಡಾಲರ್ ಹೆಚ್ಚಾಯಿತು. ಇದನ್ನು ಸಂಸ್ಥೆ ಎದುರಿಸುವಲ್ಲಿ ವಿಫಲವಾಯಿತು. ಇದರಿಂದಾಗಿ ಬ್ಯಾಂಕ್ ಹಣವೆಲ್ಲವೂ ಅಲ್ಲಿ ಹೋಗಿದೆ. ನಾನು ಶೇಕಡಾ 100ರಷ್ಟು ಹಣ ಮರು ಪಾವತಿ ಮಾಡಲು ಸಿದ್ಧವಾಗಿದ್ದೇನೆ. ದಯವಿಟ್ಟು ಸ್ವೀಕರಿಸಿ.

    ಕಳೆದ ಮೂರು ದಶಕಗಳಿಂದ ಕಿಂಗ್‍ಫಿಶರ್ ಮದ್ಯದ ಕಂಪನಿ ಉತ್ತಮ ಪ್ರಗತಿಯಲ್ಲಿದೆ. ಆದರೆ ವಿಮಾನ ಯಾನದಿಂದ ನಷ್ಟಕ್ಕೆ ಒಳಗಾಗಬೇಕಾಯಿತು. ಅನೇಕ ರಾಜ್ಯಗಳ ಪ್ರಗತಿಗೆ ಹಣವನ್ನು ನೀಡಿರುವೆ. ಎಂದಿಗೂ ಬ್ಯಾಂಕ್‍ಗೆ ಮೋಸ ಮಾಡುವುದಿಲ್ಲ. ಎಲ್ಲ ಹಣವನ್ನು ಪಾವತಿ ಮಾಡುತ್ತೇನೆ.

    ದೇಶ ತೊರೆದು ಬಂದಿರುವುದಕ್ಕೆ ನಾನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತೇನೆ. ನಾನು ಜನರ ಹಣವನ್ನು ಮರುಪಾವತಿ ಮಾಡಲು ಯತ್ನಿಸುತ್ತಿರುವೆ. ದಯವಿಟ್ಟು ಅದನ್ನು ಸ್ವೀಕರಿಸಿ.

    ಡಿಸೆಂಬರ್ 10ಕ್ಕೆ ತೀರ್ಪು:
    ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿ ಲಂಡನ್‍ಗೆ ಪರಾರಿಯಾಗಿರುವ ಮದ್ಯದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಲಂಡನ್ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಡಿಸೆಂಬರ್ 10 ರಂದು ತೀರ್ಪು ಪ್ರಕಟವಾಗಲಿದೆ. ತೀರ್ಪು ಪ್ರಕಟವಾಗಲು 5 ದಿನ ಬಾಕಿ ಇರುವಾಗ ಮಲ್ಯ ತಾನು ಪಡೆದ ಎಲ್ಲ ಸಾಲವನ್ನು ಮರಳಿ ಪಾವತಿಸುತ್ತೇನೆ ಎಂದು ಅಚ್ಚರಿಯ ಎಂಬಂತೆ ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಲ ಮರುಪಾವತಿಸಲು ಮಲ್ಯ ದುಬಾರಿ ಕಾರು ಹರಾಜು ಹಾಕಿ – ಯುಕೆ ಕೋರ್ಟ್

    ಸಾಲ ಮರುಪಾವತಿಸಲು ಮಲ್ಯ ದುಬಾರಿ ಕಾರು ಹರಾಜು ಹಾಕಿ – ಯುಕೆ ಕೋರ್ಟ್

    ಲಂಡನ್: ಭಾರತೀಯ ಬ್ಯಾಂಕ್‍ಗಳಲ್ಲಿ ಸುಮಾರು 9 ಸಾವಿರ ಕೋಟಿ ರೂ. ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯರ ಕಾರುಗಳನ್ನು ಹರಾಜು ಮಾಡಲು ಇಂಗ್ಲೆಂಡ್ ಕೋರ್ಟ್ ಆದೇಶ ನೀಡಿದೆ.

    ಮಲ್ಯ ತಮ್ಮ ಕಾರುಗಳಿಗೆ ತಮ್ಮದೇ ಹೆಸರಿನಲ್ಲಿ ವಿಶೇಷವಾಗಿ ನೊಂದಣಿ ಮಾಡಿಸಿದ್ದ ವಿಜೆಎಂ (ವಿಜಯ್‍ಮಲ್ಯ) ಸರಣಿಯ ದುಬಾರಿ ಕಾರುಗಳು ಇದರಲ್ಲಿ ಸೇರಿದ್ದು, ಈ ಕಾರುಗಳನ್ನು 404,000 ಪೌಂಡ್ (ಸುಮಾರು 3 ಕೋಟಿ ರೂ.) ಕಡಿಮೆ ಮೊತ್ತಕ್ಕೆ ಮಾರಾಟ ಮಾಡದಂತೆ ತಿಳಿಸಿದೆ.

    ಲಂಡನ್ ಕೋರ್ಟ್ ನ ನ್ಯಾಯಮೂರ್ತಿ ಕಾಕೆರಿಯಲ್ ಅ.11 ರಂದು ಈ ಕುರಿತು ಆದೇಶ ನೀಡಿದ್ದು, ಮಲ್ಯರ 2016ರ ಮಿನಿ ಕಂಟ್ರಿಮ್ಯಾನ್, 2012ರ ಮೇಬ್ಯಾಚ್ 62, 2006 ರ ಫೆರಾರಿ ಎಫ್430 (ಬಿಒ55 ವಿಜೆಎಂ), 2014 ರ ರೇಂಜ್ ರೋವರ್ (ಎಫ್1 ವಿಜೆಎಂ), ಫೆರಾರಿ ಎಫ್512ಎಂ, ಪೋರ್ಷೆ ಕೆಯಾನ್ (ಒಒ07 ವಿಜೆಎಂ), ಜೇಮ್ಸ್ ಬಾಂಡ್ ಕಾರುಗಳನ್ನು ಹರಾಜು ಮಾಡಲು ಸೂಚಿಸಿದೆ.

    ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ(ಎಫ್‍ಇಆರ್ ಎ) ನಿಯಮ ಉಲ್ಲಂಘನೆ ಆರೋಪ ಕೂಡ ವಿಜಯ್ ಮಲ್ಯ ಮೇಲಿದ್ದು, ಬೆಂಗಳೂರಿನಲ್ಲಿ ದಾಖಲಾಗಿರುವ ಸಾಲ ವಸೂಲಿ ನ್ಯಾಯಾಧೀಕರಣ (ಡಿಆರ್ ಟಿ) ಪ್ರಕರಣದಲ್ಲಿ ಲಂಡನ್ ಕೋರ್ಟ್ ತೀರ್ಪು ನೀಡಿದ ಬಳಿಕ ಈ ಆದೇಶ ನೀಡಲಾಗಿದೆ. ಡಿಆರ್ ಟಿ ನಿಯಮಗಳ ಅನ್ವಯ ಮಲ್ಯ 6.203 ಕೋಟಿ ರೂ. ಬಡ್ಡಿ ನೀಡಬೇಕಿದೆ. ಅಲ್ಲದೇ ಲಂಡನ್ ನಲ್ಲಿರುವ ವಿಜಯ್ ಮಲ್ಯರ ಎರಡು ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಅಧಿಕಾರಿಗಳಿಗೆ ಅನುಮತಿಯನ್ನು ನೀಡಿದೆ.  ಇದನ್ನು ಓದಿ: ವಿಜಯ್ ಮಲ್ಯ ಅರಮನೆಯಲ್ಲಿದೆ ಚಿನ್ನದ ಟಾಯ್ಲೆಟ್! 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಲ್ಯ, ಅರುಣ್ ಜೇಟ್ಲಿ ಭೇಟಿ ಮಾಡಿದ್ದನ್ನ ಕಾಂಗ್ರೆಸ್ ಎಂಪಿ ನೋಡಿದ್ದಾರೆ: ರಾಹುಲ್ ಗಾಂಧಿ

    ಮಲ್ಯ, ಅರುಣ್ ಜೇಟ್ಲಿ ಭೇಟಿ ಮಾಡಿದ್ದನ್ನ ಕಾಂಗ್ರೆಸ್ ಎಂಪಿ ನೋಡಿದ್ದಾರೆ: ರಾಹುಲ್ ಗಾಂಧಿ

    ನವದೆಹಲಿ: ಬ್ಯಾಂಕ್‍ಗಳಿಗೆ ಬಹುಕೋಟಿ ವಂಚನೆ ಮಾಡಿ ಲಂಡನ್‍ಗೆ ಪರಾರಿಯಾಗಿರುವ ವಿಜಯ್ ಮಲ್ಯ ತಾನು ದೇಶ ಬಿಡುವ ಮುನ್ನ ಹಣಕಾಸು ಸಚಿವರೊಂದಿಗೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂಬ ಹೇಳಿಕೆ ಸಂಬಂಧ ಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ರಾಹುಲ್ ಗಾಂಧಿ, ವಿಜಯ್ ಮಲ್ಯ ಹಾಗೂ ಅರುಣ್ ಜೇಟ್ಲಿ ಒಟ್ಟಿಗೆ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಮಾತನಾಡುತ್ತಿದ್ದನ್ನು ನಮ್ಮ ಸಂಸದ ಕಣ್ಣಾರೆ ನೋಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ವಿಜಯ್ ಮಲ್ಯ ದೇಶ ಬಿಟ್ಟು ಹೋಗುವ ಕುರಿತು ಅರುಣ್ ಜೇಟ್ಲಿ ಅವರಿಗೆ ಮಾಹಿತಿ ಇದ್ದರೂ ಕೇಂದ್ರ ತನಿಖಾ ಸಂಸ್ಥೆಗಳಿಗೆ ಏಕೆ ಮೊದಲೇ ಮಾಹಿತಿ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಸುಮಾರು 5-7 ನಿಮಿಷ ಕಾಲ ಅರುಣ್ ಜೇಟ್ಲಿ ಹಾಗೂ ಮಲ್ಯ ಮಾತುಕತೆ ನಡೆಸಿದ್ದಾರೆ. ಆದರೆ ಕೇಂದ್ರ ಸಚಿವರು ಸುಳ್ಳು ಹೇಳುತ್ತಿದ್ದು, ದೇಶದ ಜನತೆಗೆ ಈ ಕುರಿತು ಮಾಹಿತಿ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲದೇ ಈ ಕುರಿತು ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ಕೇಂದ್ರ ಸಂಸದ ಪಿಎಲ್ ಪೂನಿಯಾ, ಪಾರ್ಲಿಮೆಂಟ್ ಹೌಸ್ ಸೆಂಟ್ರಲ್ ಹಾಲ್‍ನಲ್ಲಿ ಜೇಟ್ಲಿ ಹಾಗೂ ಮಲ್ಯ ಕುಳಿತು ಮಾತನಾಡಿದನ್ನು ನಾನು ನೋಡಿದ್ದೇನೆ. ಸುಮಾರು 5 ರಿಂದ 7 ನಿಮಿಷಗಳ ಕಾಲ ಇಬ್ಬರು ಮಾತುಕತೆ ನಡೆಸಿದರು. ಮಲ್ಯ ಅವರೇ ಜೇಟ್ಲಿರನ್ನು ಭೇಟಿ ಮಾಡಿ ಮಾತನಾಡಲು ಪಾರ್ಲಿಮೆಂಟ್ ಹೌಸ್‍ಗೆ ಮೊದಲ ಬಾರಿಗೆ ಬಂದಿದ್ದರು. ಮಾರ್ಚ್ 3ರ ಬಳಿಕ ಮಲ್ಯ ಲಂಡನ್‍ಗೆ ಪರಾರಿಯಾಗಿದ್ದು, ಇದಕ್ಕೂ 2 ದಿನ ಮುನ್ನ ಈ ಮಾತುಕತೆ ನಡೆದಿದೆ ಎಂದು ಹೇಳಿದರು.

    ಭಾರತಕ್ಕೆ ಮಲ್ಯರನ್ನು ಹಸ್ತಾಂತರ ಮಾಡುವ ಕುರಿತು ಲಂಡನ್ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಲ್ಯ, ನಾನು ದೇಶ ತೋರೆಯುವ ಮುನ್ನ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದ್ದರು. ಮಲ್ಯ ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಮಲ್ಯರ ಭೇಟಿಗೆ ನಾನು ಅವಕಾಶವನ್ನೇ ನೀಡಿಲ್ಲ. ಅಲ್ಲದೇ ರಾಜ್ಯಸಭಾ ಸದಸ್ಯರಾಗಿ ತಮ್ಮ ಅಧಿಕಾರ ದೂರುಪಯೋಗ ಮಾಡಿಕೊಂಡು ಅವರೇ ಭೇಟಿಗೆ ಪ್ರಯತ್ನಿಸಿದ್ದರು. ಆದರೆ ಇದಕ್ಕೆ ಅವಕಾಶ ನೀಡಿಲ್ಲ ಎಂದು ಜೇಟ್ಲಿ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಭಾರತಕ್ಕೆ ಯಾವಾಗ ಹೋಗ್ತೀರಿ? ಪ್ರಶ್ನೆಗೆ ಮಲ್ಯ ನೀಡಿದ ಉತ್ತರ ಹೀಗಿತ್ತು

    ಭಾರತಕ್ಕೆ ಯಾವಾಗ ಹೋಗ್ತೀರಿ? ಪ್ರಶ್ನೆಗೆ ಮಲ್ಯ ನೀಡಿದ ಉತ್ತರ ಹೀಗಿತ್ತು

    ಲಂಡನ್: ಮದ್ಯದ ದೊರೆ ವಿಜಯ್ ಮಲ್ಯ ದೇಶ ತೊರೆದು ವಿದೇಶದಲ್ಲಿ ವಾಸವಾಗಿದ್ದಾರೆ. ಶುಕ್ರವಾರ ಓವೆಲ್ ಕ್ರಿಕೆಟ್ ಮ್ಯಾಚ್ ನೋಡಲು ಬಂದಿದ್ದ ವಿಜಯ ಮಲ್ಯ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಇಂಗ್ಲೆಂಡ್ ಮತ್ತು ಭಾರತದ ನಡುವಿನ ಮೊದಲ ಪಂದ್ಯವನ್ನು ನೋಡಲು ಬಂದಿದ್ದ ಮಲ್ಯರಿಗೆ ಸ್ಥಳೀಯ ವ್ಯಕ್ತಿಯೊಬ್ಬ ನೀವು ಭಾರತಕ್ಕೆ ಹೋಗಿ ಅಂತಾ ಹೇಳಿದ್ದಾರೆ.

    ಈ ವೇಳೆ ವ್ಯಕ್ತಿಯ ಪ್ರಶ್ನೆಗೆ ಉತ್ತರಿಸಿದ ಮಲ್ಯ, ನಾನು ಭಾರತಕ್ಕೆ ಹೋಗುವುದನ್ನು ನ್ಯಾಯಾಧೀಶರು ನಿರ್ಧರಿಸುತ್ತಾರೆ ಎಂದು ಉತ್ತರ ನೀಡಿದ್ದಾರೆ. ಆದ್ರೆ ಪ್ರಶ್ನೆ ಕೇಳಿದ ವ್ಯಕ್ತಿ ಸುಮ್ಮನಾಗದೇ ನೀವು ಮರಳಿ ಭಾರತಕ್ಕೆ ಹೋಗಿ ಎಂದು ಆಗ್ರಹಿಸಿದ್ದಾನೆ. ವಿಜಯ್ ಮಲ್ಯ ಮುಗಳ್ನಕ್ಕು ಕಾರ್ ಹತ್ತಿ ಹೊರಟಿದ್ದಾರೆ.

    ಭಾರತದ ವಿವಿಧ ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡದೇ ಇಂಗ್ಲೆಂಡ್ ಗೆ ಪಲಾಯನ ಮಾಡಿದ್ದ ವಿಜಯ್ ಮಲ್ಯರನ್ನು ಭಾರತಕ್ಕೆ ವಾಪಸ್ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಅಲ್ಲದೇ ಇಂಗ್ಲೆಂಡಿನಿಂದ ಗಡಿಪಾರು ಮಾಡುವಂತೆ ಅಲ್ಲಿನ ಸರ್ಕಾರಕ್ಕೆ ತಿಳಿಸಿದೆ. ಇನ್ನು ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಮುಂಬೈ ಕೋರ್ಟ್ ಸೆಪ್ಟೆಂಬರ್ 3ರಂದು ಮಲ್ಯರಿಗೆ ನೋಟಿಸ್ ಜಾರಿ ಮಾಡಿ 1 ವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ.

    ಈ ಹಿಂದೆ ಭಾರತಕ್ಕೆ ಮಲ್ಯರನ್ನು ಗಡಿಪಾರು ಮಾಡುವ ಕುರಿತು ಲಂಡನ್ ನ್ಯಾಯಾಲಯ ಮುಂಬೈ ಜೈಲಿನ ಸ್ಥಿತಿ ಕುರಿತು ಮಾಹಿತಿ ಕೋರಿತ್ತು. ನ್ಯಾಯಾಲಯದ ಸೂಚನೆಯಂತೆ ಸಿಬಿಐ ಅಧಿಕಾರಿಗಳು ಮುಂಬೈ ಆರ್ಥರ್ ರೋಡ್ ಜೈಲಿನ ವೀಡಿಯೋವನ್ನು ಸಲ್ಲಿಸಿದ್ದರು. ಆದರೆ ಮಲ್ಯ ಭಾರತದ ಜೈಲುಗಳು ಅಮಾನವೀಯವಾಗಿದೆ, ಅಲ್ಲಿ ಬೆಳಕು ಇಲ್ಲ ಎಂದು ದೂರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಓವೆಲ್ ಟೆಸ್ಟ್ ವೀಕ್ಷಿಸಲು ಬಂದ ವಿಜಯ್ ಮಲ್ಯ

    ಓವೆಲ್ ಟೆಸ್ಟ್ ವೀಕ್ಷಿಸಲು ಬಂದ ವಿಜಯ್ ಮಲ್ಯ

    ಲಂಡನ್: ಓವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ವೀಕ್ಷಿಸಲು ವಿಜಯ್ ಮಲ್ಯ ಆಗಮಿಸಿದ್ದಾರೆ.

    ಪಂದ್ಯ ನೋಡಲು ಮಲ್ಯ ಕ್ರೀಡಾಂಗಣ ಪ್ರವೇಶ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಲಂಡನ್ ನಲ್ಲಿ ನೆಲೆಸಿರುವ ಮಲ್ಯ ಈ ಹಿಂದೆಯೂ ಕ್ರಿಕೆಟ್ ಪಂದ್ಯ ವೀಕ್ಷಿಸಲು ಆಗಮಿಸಿದ್ದರು.

    ಭಾರತದ ವಿವಿಧ ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡದೇ ಇಂಗ್ಲೆಂಡ್ ಗೆ ಪಲಾಯನ ಮಾಡಿದ್ದ ವಿಜಯ್ ಮಲ್ಯರನ್ನು ಭಾರತಕ್ಕೆ ವಾಪಸ್ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಅಲ್ಲದೇ ಇಂಗ್ಲೆಂಡಿನಿಂದ ಗಡಿಪಾರು ಮಾಡುವಂತೆ ಅಲ್ಲಿನ ಸರ್ಕಾರಕ್ಕೆ ತಿಳಿಸಿದೆ. ಇನ್ನು ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಮುಂಬೈ ಕೋರ್ಟ್ ಸೆಪ್ಟೆಂಬರ್ 3ರಂದು ಮಲ್ಯರಿಗೆ ನೋಟಿಸ್ ಜಾರಿ ಮಾಡಿ 1 ವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ.

    ಈ ಹಿಂದೆ ಭಾರತಕ್ಕೆ ಮಲ್ಯರನ್ನು ಗಡಿಪಾರು ಮಾಡುವ ಕುರಿತು ಲಂಡನ್ ನ್ಯಾಯಾಲಯ ಮುಂಬೈ ಜೈಲಿನ ಸ್ಥಿತಿ ಕುರಿತು ಮಾಹಿತಿ ಕೋರಿತ್ತು. ನ್ಯಾಯಾಲಯದ ಸೂಚನೆಯಂತೆ ಸಿಬಿಐ ಅಧಿಕಾರಿಗಳು ಮುಂಬೈ ಆರ್ಥರ್ ರೋಡ್ ಜೈಲಿನ ವೀಡಿಯೋವನ್ನು ಸಲ್ಲಿಸಿದ್ದರು. ಆದರೆ ಮಲ್ಯ ಭಾರತದ ಜೈಲುಗಳು ಅಮಾನವೀಯವಾಗಿದೆ, ಅಲ್ಲಿ ಬೆಳಕು ಇಲ್ಲ ಎಂದು ದೂರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಜಯ್ ಮಲ್ಯ ಅರಮನೆಯಲ್ಲಿದೆ ಚಿನ್ನದ ಟಾಯ್ಲೆಟ್!

    ವಿಜಯ್ ಮಲ್ಯ ಅರಮನೆಯಲ್ಲಿದೆ ಚಿನ್ನದ ಟಾಯ್ಲೆಟ್!

    ನವದೆಹಲಿ: ಭಾರತೀಯ ಬ್ಯಾಂಕ್‍ಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಉಳಿಸಿಕೊಂಡು ಲಂಡನ್‍ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅರಮನೆಯಲ್ಲಿ ಚಿನ್ನದ ಟಾಯ್ಲೆಟ್ ಇರುವುದಾಗಿ ಲೇಖಕರೊಬ್ಬರು ಹೇಳಿದ್ದಾರೆ.

    ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಲೇಖಕ ಜೇಮ್ಸ್ ಕ್ರ್ಯಾಬ್ ಟ್ರೀ ಎಂಬವರು ಕುತೂಹಲಕರ ಸಂಗತಿಯನ್ನು ಹಂಚಿಕೊಂಡಿದ್ದು, ಒಮ್ಮೆ ವಿಜಯ್ ಮಲ್ಯರ ಲಂಡನ್ ಅರಮನೆಗೆ ತೆರಳಿದ್ದ ವೇಳೆ ಟಾಯ್ಲೆಟ್ ನಲ್ಲಿ ಚಿನ್ನಡ ಕಾಮೋಡ್ ಬಳಕೆ ಮಾಡಿದ್ದರ ಅನುಭವವನ್ನು ಹೇಳಿದ್ದಾರೆ.

    ಲಂಡನ್ ನಲ್ಲಿರುವ ವಿಜಯ್ ಮಲ್ಯ ನಿವಾಸಕ್ಕೆ ಭೇಟಿ ನೀಡಿದ್ದ ವೇ¼ ನಾಲ್ಕು ಗಂಟೆ ಅವರ ಜೊತೆಗಿದ್ದೆ. ನಾನು ಅಂದು ಮೊನಾಕೋಗೆ ತೆರಳಬೇಕಿತ್ತು. ಆದರೆ ಅದು ಸಾಧ್ಯವಾದೆ ಅರಮನೆಗೆ ಹೋಗಿದ್ದೆ. ಅಲ್ಲಿ ಎಲ್ಲರಂತೆ ಟಿವಿಯಲ್ಲಿ ನೋಡಬೇಕು ಎಂದು ನನ್ನ ಬೇಸರವಾಗಿತ್ತು. ಈ ವೇಳೆ ನಾನು ಮಲ್ಯ ಬಳಿ ಅಲ್ಲಿನ ಟಾಯ್ಲೆಟ್ ಬಳಸಬಹುದೇ ಎಂದು ಕೇಳಿದ್ದೆ. ಅದರಂತೆ ನಾನು ಒಳಗೆ ತೆರಳಿದಾಗ ಚಿನ್ನದ ರಿಮ್ ಮತ್ತು ಟಾಪ್ ಹೊಂದಿರುವ ಕಮೋಡ್ ನೋಡಿದ್ದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಮಲ್ಯ ಅವರ ಟಾಯ್ಲೆಟ್ ನಲ್ಲಿ ಚಿನ್ನದ ಕಮೋಡ್ ಮಾತ್ರವಿತ್ತು, ಆದರೆ ಚಿನ್ನದ ಟಾಯ್ಲೆಟ್ ಪೇಪರ್ ಇರಲಿಲ್ಲ. ಆ ಜಾಗದಲ್ಲಿ ಬಿಳಿ ಟವೆಲ್ ಇತ್ತು. ಆ ಬಳಿಕ ಶೌಚಾಲಯವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುವುದು ನನಗೆ ತಿಳಿಯಿತು ಎಂದು ಹೇಳಿದ್ದಾರೆ.  ಇದನ್ನೂ ಓದಿ: ಮಲ್ಯ ಹಸ್ತಾಂತರಿಸಲು ಭಾರತದ ಜೈಲುಗಳ ಸ್ಥಿತಿ-ಗತಿಗಳ ಬಗ್ಗೆ ವಿಡಿಯೋ ಕಳಿಸಿ: ಲಂಡನ್ ಕೋರ್ಟ್ 

    ಅಂದಹಾಗೇ ಜೇಮ್ಸ್ ಕ್ರ್ಯಾಬ್ ಟ್ರೀ ಪ್ರಸಿದ್ಧ ಲೇಖಕರಾಗಿದ್ದು, ದಿ ಬಿಲಿಯನೇರ್ ರಾಜ್ ಪುಸ್ತಕವನ್ನು ಬರೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಮಲ್ಯ ಹಸ್ತಾಂತರಿಸಲು ಭಾರತದ ಜೈಲುಗಳ ಸ್ಥಿತಿ-ಗತಿಗಳ ಬಗ್ಗೆ ವಿಡಿಯೋ ಕಳಿಸಿ: ಲಂಡನ್ ಕೋರ್ಟ್

    ಮಲ್ಯ ಹಸ್ತಾಂತರಿಸಲು ಭಾರತದ ಜೈಲುಗಳ ಸ್ಥಿತಿ-ಗತಿಗಳ ಬಗ್ಗೆ ವಿಡಿಯೋ ಕಳಿಸಿ: ಲಂಡನ್ ಕೋರ್ಟ್

    ನವದೆಹಲಿ: ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿ ಲಂಡನ್‍ಗೆ ಪರಾರಿಯಾಗಿರುವ ಮದ್ಯದೊರೆ ವಿಜಯ್ ಮಲ್ಯನನ್ನು ಭಾರತಕ್ಕೆ ಹಸ್ತಾಂತರಿಸಲು ಲಂಡನ್ ಕೋರ್ಟ್ ದೇಶದಲ್ಲಿರುವ ಜೈಲುಗಳ ಸ್ಥಿತಿಗತಿಗಳ ಬಗ್ಗೆ ತಿಳಿಸುವಂತೆ ಸೂಚಿಸಿದೆ.

    ಕೋಟ್ಯಾಂತರ ರೂಪಾಯಿ ಸಾಲ ಮಾಡಿ ಭಾರತದಿಂದ ಲಂಡನ್ ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್‍ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯದಲ್ಲಿ ವಿಚಾರಣೆ ಕೈಗೆತ್ತಿಕೊಂಡಿದೆ.

    ಭಾರತಕ್ಕೆ ಹಸ್ತಾಂತರಿಸುವ ಕುರಿತು ವಿಜಯ್ ಮಲ್ಯ ಪರ ವಕೀಲರು, ಭಾರತದಲ್ಲಿನ ಜೈಲುಗಳಲ್ಲಿ ಸರಿಯಾದ ಗಾಳಿ-ಬೆಳಕು ಇಲ್ಲ. ಹೀಗಾಗಿ ಹಸ್ತಾಂತರ ಮಾಡಲು ಅನುಮತಿ ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.

    ಈ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು, ವ್ಯಕ್ತಿಯೊಬ್ಬ ಜೈಲಿನೊಳಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಚಿತ್ರಿಸಿ ಕಳುಹಿಸಿ. ಅದು ಮಧ್ಯಾಹ್ನದ ಹೊತ್ತಿನಲ್ಲಿ ಸೂರ್ಯನ ಬೆಳಕು ಜೈಲಿನಲ್ಲಿ ಅಗಾಧವಾಗಿ ಪ್ರವೇಶಿಸುವಂತಿರಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

    ಭಾರತ ಸರ್ಕಾರದ ಪರ ವಾದಿಸಿದ ವಕೀಲ ಮಾರ್ಕ್ ಸಮ್ಮರ್, ಮಾನವ ಹಕ್ಕು ಆಯೋಗ ನಿಗದಿಪಡಿಸಿದ ಮಾನದಂಡದ ಆಧಾರದಲ್ಲಿ ಜೈಲುಗಳನ್ನು ನಿರ್ಮಿಸಲಾಗಿದೆ. ವಿಜಯ್ ಮಲ್ಯ ಕೂಡಿ ಹಾಕುವ ಬ್ಯಾರಕ್ ನಲ್ಲಿ ಶುದ್ಧವಾದ ಗಾಳಿ ಬೆಳಕು ಇರಲಿದೆ. ಅಷ್ಟೇ ಅಲ್ಲದೇ ಪಾಶ್ಚಿಮಾತ್ಯ ಶೈಲಿಯ ಶೌಚಾಲಯ, ಶುಭ್ರವಾದ ಬೆಡ್ ನೀಡಲಾಗುವುದು ಎಂದು ತಿಳಿಸಿದರು.

    ಮುಂಬೈನ ಆರ್ಥರ್ ರೋಡ್ ಜೈಲಿನ ವಿಡಿಯೋಗಳನ್ನು ಸಲ್ಲಿಸುವಂತೆ ತಿಳಿಸಿದ್ದು, ಮುಂದಿನ ವಿಚಾರಣೆಯಲ್ಲಿ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಮದ್ಯದೊರೆ ಮಲ್ಯಗೆ 6 ವಾರಗಳ ಸಮಯ ಬಿಗ್ ರಿಲೀಫ್ ಸಿಕ್ಕಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ಪರ ವಾದಿಸುತ್ತಿರುವ ವಕೀಲರ ತಂಡ ಮುಂಬೈ ಅರ್ಥರ್ ರೋಡ್ ಜೈಲಿನ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಭಾರತ ಸರ್ಕಾರ ಪರ ಆದೇಶ ನೀಡಿದರೆ, ವಿಜಯ ಮಲ್ಯ ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ.