Tag: Vignesh

  • ಬೆಂಗಳೂರಲ್ಲಿ ವಿದ್ಯಾರ್ಥಿನಿ ಕತ್ತು ಕೊಯ್ದು ಹತ್ಯೆ ಕೇಸ್‌ – ಪಾಗಲ್‌ ಪ್ರೇಮಿ ಬಂಧನ

    ಬೆಂಗಳೂರಲ್ಲಿ ವಿದ್ಯಾರ್ಥಿನಿ ಕತ್ತು ಕೊಯ್ದು ಹತ್ಯೆ ಕೇಸ್‌ – ಪಾಗಲ್‌ ಪ್ರೇಮಿ ಬಂಧನ

    ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ವಿದ್ಯಾರ್ಥಿನಿಯ ಕತ್ತು ಕೊಯ್ದು ಹತ್ಯೆ ಮಾಡಿದ್ದ ಪಾಗಲ್‌ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ.

    ವಿದ್ಯಾರ್ಥಿನಿ ಯಾಮಿನಿ ಪ್ರಿಯಾಳನ್ನು ಹತ್ಯೆ ಮಾಡಿದ್ದ ವಿಘ್ನೇಶ್‌ ಮತ್ತು ಆತನಿಗೆ ನೆರವಾಗಿದ್ದ ಹರೀಶ್‌ ಎಂಬಾತನನ್ನು ಶ್ರೀರಾಂಪುರ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

    ಶ್ರೀರಾಂಪುರ ಸಮೀಪದ ಸ್ವತಂತ್ರಪಾಳ್ಯ ನಿವಾಸಿ ಯಾಮಿನಿಯನ್ನು ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಇವರ ಬಂಧನಕ್ಕೆ ಶ್ರೀರಾಂಪುರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ 2 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಪರಿಚಯವಿದ್ದ ಯಾಮಿನಿಯನ್ನು ಪ್ರೀತಿಸುವಂತೆ ವಿಘ್ನೇಶ್‌ ಒತ್ತಾಯಿಸುತ್ತಿದ್ದ. ಆದರೆ, ಅದಕ್ಕೆ ವಿದ್ಯಾರ್ಥಿನಿ ನಿರಾಕರಿಸಿದ್ದಳು. ಗುರುವಾರ ಸಂಜೆ ಕಾಲೇಜು ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ಅಡ್ಡಗಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದ.

  • ನಯನತಾರಾ ಕೊರಳಲ್ಲಿ ಇನ್ನೂ ಹಳದಿ ದಾರ : ಚಿನ್ನದ ಮಾಂಗಲ್ಯ ಎಲ್ಲಿ ಅಂತ ಕೇಳಿದ ಅಭಿಮಾನಿಗಳು

    ನಯನತಾರಾ ಕೊರಳಲ್ಲಿ ಇನ್ನೂ ಹಳದಿ ದಾರ : ಚಿನ್ನದ ಮಾಂಗಲ್ಯ ಎಲ್ಲಿ ಅಂತ ಕೇಳಿದ ಅಭಿಮಾನಿಗಳು

    ಳೆದ ತಿಂಗಳಷ್ಟೇ ಮದುವೆಯಾಗಿರುವ ತಮಿಳಿನ ಖ್ಯಾತ ನಟಿ ನಯನತಾರಾ ಎಷ್ಟು ಸಿಂಪಲ್ ಅನ್ನುವುದಕ್ಕೆ ಅವರ ಕೊರಳಲ್ಲಿರುವ ಹಳದಿ ದಾರವೇ ಸಾಕ್ಷಿಯಾಗಿದೆ. ಮದುವೆಯ ದಿನ ಪತಿ ವಿಘ್ನೇಶ್ ಕಟ್ಟಿರುವ ಹಳದಿ ದಾರದ ಮಾಂಗಲ್ಯವನ್ನು ಹಾಗೆಯೇ ಕೊರಳಲ್ಲಿ ಉಳಿಸಿಕೊಂಡಿದ್ದಾರೆ ನಯನತಾರಾ. ಹಾಗಾಗಿ ಅಭಿಮಾನಿಗಳು ಚಿನ್ನದ ಮಾಂಗಲ್ಯ ಎಲ್ಲಿ ಎಂದು ಕೇಳುತ್ತಿದ್ದಾರೆ.

    ನಿನ್ನೆ ನಯನತಾರಾ ಏರ್ ಪೋರ್ಟ್ ನಿಂದ ಆಚೆ ಬರುವಾಗಿ ಅವರ ಕೊರಳಲ್ಲಿರುವ ಹಳದಿ ದಾರವನ್ನು ಗಮನಿಸಿರುವ ಅಭಿಮಾನಿಗಳು ಅದನ್ನು ಫೋಟೋ ತಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ನಮ್ ನಟಿ ಎಷ್ಟು ಸಿಂಪಲ್ ನೋಡಿ ಎಂದು ಟ್ಯಾಗ್ ಲೈನ್ ಬೇರೆ ಕೊಟ್ಟಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    ನಯನತಾರಾ ಮತ್ತು ವಿಘ್ನೇಶ್ ಅಷ್ಟೇ ಸಿಂಪಲ್ ಆಗಿಯೇ ಮದುವೆಯಾದರೆ, ಆಡಂಬರಕ್ಕೆ ಆಸ್ಪದ ಕೊಡದೇ ಕೆಲವೇ ಕೆಲವು ಸಿಲಿಬ್ರಿಟಿಗಳಿಗೆ ಆಹ್ವಾನ ನೀಡಿದ್ದರು. ದೇವಸ್ಥಾನದಲ್ಲಿ ಮದುವೆ ಆಗಬೇಕು ಎಂದಿದ್ದ ಜೋಡಿ ಕೊನೆಗೆ ಸಪ್ತಪದಿ ತುಳಿದದ್ದು ರೆಸಾರ್ಟ್ ನಲ್ಲಿ. ಹಾಗಾಗಿ ನಯನತಾರಾ ಯಾವಾಗಲೂ ಸಿಂಪಲ್ ಎನ್ನುವ ಮಾತು ಕೇಳಿ ಬಂದಿದೆ. ಮದುವೆಯ ನಂತರ ಸದ್ಯ ಈಗವರು ಶಾರುಖ್ ಖಾನ್ ನಟನೆಯ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಯನತಾರಾ ಮದುವೆಗೆ ಬಾಲಿವುಡ್ ನಟ  ಸಲ್ಮಾನ್ ಖಾನ್ ಹಾಜರ್?

    ನಯನತಾರಾ ಮದುವೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಜರ್?

    ಇಂದು ಚೆನ್ನೈನಲ್ಲಿ ಮದುವೆ ಆಗುತ್ತಿರುವ ಖ್ಯಾತ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಮದುವೆಗೆ ಅನೇಕ ತಾರೆಯರನ್ನು ಆಹ್ವಾನಿಸಲಾಗಿದೆ. ಈ ಸ್ಟಾರ್ ಜೋಡಿಯು ಹೊಸ ಜೀವನಕ್ಕೆ ಕಾಲಿಡುತ್ತಿರುವ ಸಂದರ್ಭಕ್ಕೆ ಸಾಕ್ಷಿಯಾಗಿ ಸಲ್ಮಾನ್ ಖಾನ್ ಇರಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಸಲ್ಮಾನ್ ಖಾನ್ ಗೆ ಈ ಜೋಡಿಯು ಆಹ್ವಾನ ನೀಡಿದ್ದರಿಂದ, ಅವರು ಹಾಜರಾಗಬಹುದು ಎನ್ನವ ಸುದ್ದಿ ಇದೆ.

    ತಮಿಳು ನಾಡಿನ ಮುಖ್ಯಮಂತ್ರಿ ಸ್ಟಾಲಿನ್, ತಮಿಳಿನ ಸೂಪರ್ ಸ್ಟಾರ್ ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್, ಕನ್ನಡದಿಂದ ಉಪೇಂದ್ರ, ತೆಲುಗಿನಿಂದ ಚಿರಂಜೀವಿ ಸೇರಿದಂತೆ ಅನೇಕ ಸ್ಟಾರ್ ಸಿಲಿಬ್ರಿಟಿಗಳು ಈ ಮದುವೆಯ ಸಮಾರಂಭದಲ್ಲಿ ಹಾಜರಿರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನಷ್ಟೇ ಯಾರೆಲ್ಲ ಭಾಗಿ ಆಗಿದ್ದಾರೆ ಎಂದು ತಿಳಿಯಲಿದೆ. ಇದನ್ನೂ ಓದಿ: ಸನ್ನಿ ಲಿಯೋನ್ ಫುಲ್ ಗರಂ: ಓರ್ವ ವ್ಯಕ್ತಿಗೆ ಸನ್ನಿ ಕೊಟ್ರು ಚಪ್ಪಲಿ ಏಟು

    ಕೆಲವೇ ನಿಮಿಷಗಳಲ್ಲಿ ತಮಿಳಿನ ಖ್ಯಾತ ಜೋಡಿ ವಿಘ್ನೇಶ್ ಶಿವನ್ ಮತ್ತು ಲೇಡಿ ಸೂಪರ್ ಸ್ಟಾರ್ ನಯನತಾರಾ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಪ್ರಣಯ ಪಕ್ಷಿಗಳ ಮದುವೆಗೆ ಮದುವಣಗಿತ್ತಿಯಂತೆಯೇ ರೆಸಾರ್ಟ್ ಕೂಡ ಸಿಂಗಾರಗೊಂಡಿದೆ. ಅಂದಹಾಗೆ ಇಂದು ಈ ಜೋಡಿಯು  ಚೆನ್ನೈನ ಮಹಾಬಲಿಪುರಂನಲ್ಲಿ ಮದುವೆಯಾಗುತ್ತಿದ್ದಾರೆ.

  • ಹಸೆಮಣೆ ಏರುವ ಕೆಲವೇ ನಿಮಿಷಗಳ ಹಿಂದೆ ಭಾವಿಪತ್ನಿ ನಯನತಾರಾ ಜೊತೆಗಿನ ರಹಸ್ಯ ಹಂಚಿಕೊಂಡ ನಿರ್ದೇಶಕ ವಿಘ್ನೇಶ್ ಶಿವನ್

    ಹಸೆಮಣೆ ಏರುವ ಕೆಲವೇ ನಿಮಿಷಗಳ ಹಿಂದೆ ಭಾವಿಪತ್ನಿ ನಯನತಾರಾ ಜೊತೆಗಿನ ರಹಸ್ಯ ಹಂಚಿಕೊಂಡ ನಿರ್ದೇಶಕ ವಿಘ್ನೇಶ್ ಶಿವನ್

    ಕೆಲವೇ ನಿಮಿಷಗಳಲ್ಲಿ ತಮಿಳಿನ ಖ್ಯಾತ ಜೋಡಿ ವಿಘ್ನೇಶ್ ಶಿವನ್ ಮತ್ತು ಲೇಡಿ ಸೂಪರ್ ಸ್ಟಾರ್ ನಯನತಾರಾ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಪ್ರಣಯ ಪಕ್ಷಿಗಳ ಮದುವೆಗೆ ಮದುವಣಗಿತ್ತಿಯಂತೆಯೇ ರೆಸಾರ್ಟ್ ಕೂಡ ಸಿಂಗಾರಗೊಂಡಿದೆ. ಈ ಹೊತ್ತಿನಲ್ಲಿ ವಿಘ್ನೇಶ್ ಶಿವನ್, ಇನ್ಸ್ಟಾದಲ್ಲಿ ಭಾವಿ ಪತ್ನಿ ನಯನತಾರಾ ಜೊತೆಗಿನ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಅಲ್ಲದೇ, ಹಲವು ಸಂಗತಿಗಳನ್ನು ಅವರು ಬರೆದುಕೊಂಡಿದ್ದಾರೆ.

    ಫೋಟೋ ಜೊತೆ ತಮ್ಮ ಬದುಕಿಗೆ ನೆರವಾದವರಿಗೆ ಧನ್ಯವಾದಗಳನ್ನೂ ಅವರು ಹೇಳಿದ್ದಾರೆ. ಜೀವನದಲ್ಲಿ ಸಂತಸದ ತಂದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡು, ಬದುಕಿನ ಪ್ರೀತಿಯೇ ಆಗಿರುವ ನಯನತಾರಾಗೆ ಇದೆಲ್ಲವೂ ಅರ್ಪಣೆ ಎಂದು ಬರೆದುಕೊಂಡಿದ್ದಾರೆ. ಅಧಿಕೃತವಾಗಿ ತಾವು ಪ್ರೀತಿಸುತ್ತಿದ್ದ ರಹಸ್ಯವನ್ನೂ ಅವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: `ಕಾಂತಾರ’ ರಿಷಬ್ ಶೆಟ್ಟಿಗೆ ಸಪ್ತಮಿ ಗೌಡ ನಾಯಕಿ

    ಅಂದಹಾಗೆ ಇಂದು ಈ ಜೋಡಿಯು  ಚೆನ್ನೈನ ಮಹಾಬಲಿಪುರಂನಲ್ಲಿ ಮದುವೆಯಾಗಲಿದ್ದು, ತಮಿಳು ನಾಡಿನ ಮುಖ್ಯಮಂತ್ರಿ ಸ್ಟಾಲಿನ್, ರಜನಿಕಾಂತ್, ಕಮಲ್ ಹಾಸನ್, ಸಮಂತಾ ಸೇರಿದಂತೆ ಅನೇಕ ಸಿಲಿಬ್ರಿಟಿಗಳು ಈ ಮದುವೆಗೆ ಹಾಜರಿರಲಿದ್ದಾರೆ. ಈ ಮದುವೆಯ ವಿಡಿಯೋವನ್ನು ಖಾಸಗಿ ಓಟಿಟಿಗೆ ಮಾರಿಕೊಂಡಿದ್ದು, ಶೂಟಿಂಗ್ ಹೊಣೆಯನ್ನು ನಿರ್ದೇಶಕ ಗೌತಮ್ ಮೆನನ್ ಹೊತ್ತುಕೊಂಡಿದ್ದಾರೆ ಎನ್ನಲಾಗುತ್ತಿದೆ.

  • ಮದುವೆ ವಿಡಿಯೋ ಮಾರಿಕೊಂಡ ಸ್ಟಾರ್ ನಟಿ ನಯನತಾರಾ

    ಮದುವೆ ವಿಡಿಯೋ ಮಾರಿಕೊಂಡ ಸ್ಟಾರ್ ನಟಿ ನಯನತಾರಾ

    ಮಿಳು ಸಿನಿಮಾ ರಂಗದ ಖ್ಯಾತ ನಟಿ ನಯನತಾರಾ ಮತ್ತು ವಿಘ್ನೇಶ್ ವಿವಾಹ ಇದೇ ಜೂನ್ 09ರಂದು ಚೆನ್ನೈನಲ್ಲಿ ನಡೆಯಲಿದೆ. ಖಾಸಗಿ ರೆಸಾರ್ಟ್ ವೊಂದು ಈ ಜೋಡಿಯ ಮದುವೆಗೆ ಸಿದ್ಧವಾಗುತ್ತಿದೆ. ಈಗಾಗಲೇ ನಯನತಾರಾ ಮತ್ತು ವಿಘ್ನೇಶ್ ಜೋಡಿಯು ಅಲ್ಲಿನ ಮುಖ್ಯಮಂತ್ರಿ ಸೇರಿದಂತೆ ಸಿನಿಮಾ ರಂಗದ ಅನೇಕ ಗಣ್ಯರಿಗೆ ಮದುವೆಗೆ ಆಹ್ವಾನಿಸಿದ್ದಾರೆ. ಅದೊಂದು ಅದ್ಧೂರಿ ಮದುವೆ ಆಗಿರುವುದರಿಂದ ಅದರ ವಿಡಿಯೋ ಹಕ್ಕುಗಳನ್ನು ಓಟಿಟಿಗೆ ಸೇಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸ್ಟಾರ್ ಮದುವೆಗಳು ವಾಹಿನಿಗಳಿಗೆ ಮತ್ತು ಓಟಿಟಿಗಳಿಗೆ ಮಾರಿಕೊಳ್ಳುವುದು ಸಾಮಾನ್ಯವಾಗಿದೆ. ಈ ಹಿಂದೆ ರಣ್ವೀರ್ ಕಪೂರ್ ಕೂಡ ಕೋಟ್ಯಂತರ ರೂಪಾಯಿಗೆ ತಮ್ಮ ಮದುವೆ ವಿಡಿಯೋವನ್ನು ಮಾರಿಕೊಂಡಿದ್ದರು. ಕನ್ನಡದಲ್ಲಿ ದಿಗಂತ್ ಕೂಡ ಹಾಗೆಯೇ ಮಾಡಿದ್ದರು. ಇದೀಗ ನಯನತಾರಾ ಕೂಡ ಕೋಟ್ಯಂತರ ರೂಪಾಯಿಗೆ ತಮ್ಮ ಮದುವೆ ವಿಡಿಯೋ ಹಕ್ಕನ್ನು ಮಾರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪ್ರತಿಷ್ಠಿತ ಓಟಿಟಿ ವೇದಿಕೆ ಹಕ್ಕುಗಳನ್ನು ಪಡೆದಿದೆಯಂತೆ. ಇದನ್ನೂ ಓದಿ: ಮೂಸೆವಾಲಾ ರೀತಿಯಲ್ಲೇ ಹತ್ಯೆ ಮಾಡೋದಾಗಿ ಸಲ್ಮಾನ್‌ಖಾನ್‌ಗೆ ಬೆದರಿಕೆ – ಕೃಷ್ಣಮೃಗ ಬೇಟೆಯೇ ಮುಳುವಾಯ್ತ?

    ತಮಿಳು, ತೆಲುಗು, ಕನ್ನಡ, ಮಲೆಯಾಳಂ ಹಾಗೂ ಬಾಲಿವುಡ್ ಸಿನಿಮಾ ರಂಗದ ಅನೇಕ ಗಣ್ಯರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆಯಂತೆ. ಆದರೆ, ಮದುವೆಗೆ ಕೆಲವೇ ಕೆಲವು ಜನರಿಗೆ ಆಮಂತ್ರಿಸಲಾಗಿದ್ದು, ಆರತಕ್ಷತೆಗೆ ಬಹುತೇಕ ಸಿನಿಮೋದ್ಯಮಿಗಳು ಭಾಗಿಯಾಗಲಿದ್ದಾರಂತೆ. ಕನ್ನಡದಲ್ಲಿ ನಯನತಾರಾ ಉಪೇಂದ್ರ ಅವರ ಜೊತೆ ಕೆಲಸ ಮಾಡಿದ್ದಾರೆ. ಹಾಗಾಗಿ ಉಪೇಂದ್ರ ಕೂಡ ಈ ಮದುವೆಯಲ್ಲಿ ಹಾಜರಿರಲಿದ್ದಾರೆ ಎನ್ನುವ ಮಾಹಿತಿ ಇದೆ. ಉಳಿದಂತೆ, ಕಮಲ್ ಹಾಸನ್, ರಜನೀಕಾಂತ್ ಸಮಂತಾ, ವಿಜಯ್ ಸೇತುಪತಿ, ಅನುಷ್ಕಾ ಶೆಟ್ಟಿ, ದಳಪತಿ ವಿಜಯ್ ಸೇರಿದಂತೆ ಸಾಕಷ್ಟು ಗಣ್ಯರಿಗೆ ಆಮಂತ್ರಣ ನೀಡಿಲಾಗಿದೆ. ಇನ್ನು ಮದುವೆಗೆ ಆಪ್ತರಿಗಷ್ಟೇ ಆಹ್ವಾನವಿದೆ.

  • ನಯನತಾರಾ  ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

    ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

    ಳೆದ ಎರಡ್ಮೂರು ವರ್ಷಗಳಿಂದ ನಯನತಾರ ಮದುವೆಯ ವಿಚಾರ ಚರ್ಚೆ ಆಗುತ್ತಲೇ ಇದೆ. ಕೊನೆಗೂ ಈ ಎಲ್ಲ ಚರ್ಚೆಗೆ ಫುಲ್ ಸ್ಟಾಪ್ ಇಟ್ಟಿರುವ ಈ ತಾರೆ ಜೂನ್ 5 ರಂದು, ಖ್ಯಾತ ನಿರ್ದೇಶಕ ವಿಗ್ನೇಶ್ ಶಿವನ್ ಅವರ ಜೊತೆ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿ ತಿರುಪತಿಗೂ ಈ ಜೋಡಿ ಭೇಟಿ ನೀಡಿ, ಅಲ್ಲಿಯೇ ಸಪ್ತಪದಿ ತುಳಿಯಲಿದ್ದಾರೆ ಎಂದು ಸುದ್ದಿ ಆಗಿತ್ತು. ಇದೀಗ ಮದುವೆ ದಿನಾಂಕ ಮತ್ತು ಮದುವೆ ಆಗುವ ಸ್ಥಳ ಎರಡೂ ಬದಲಾಗಿದೆ. ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

    ತಿರುಪತಿಗೆ ನಯನತಾರಾ ಮತ್ತು ವಿಗ್ನೇಶ್ ಹೋಗಿ ಬಂದ ನಂತರ ತಿರುಪತಿಯಲ್ಲೇ ಮದುವೆ ಫಿಕ್ಸ್ ಎಂದು ಕುಟುಂಬಸ್ಥರು ಹೇಳಿದ್ದರು. ಆದರೆ, ಮದುವೆ ದಿನಾಂಕ ಬಗ್ಗೆ ಗೊಂದಲವಾಗಿತ್ತು. ಇದೀಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಜೂನ್ 5 ರ ಬದಲಾಗಿ ಜೂನ್ 09 ರಂದು ನಯನತಾರಾ ಮತ್ತು ವಿಗ್ನೇಶ್ ಶಿವನ್ ಹಸೆಮಣೆ ಏರಲಿದ್ದಾರೆ. ಇದನ್ನೂ ಓದಿ  : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್

    ತಿರುಪತಿ ಬದಲಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ತಮಿಳಿನ ನಾಡಿನ ಹೆಸರಾಂತ ರೆಸಾರ್ಟ್ ನಲ್ಲಿ ಈ ಜೋಡಿ ಮದುವೆಯಾಗಲಿದ್ದು, ಈ ಜೋಡಿಯ ಹೊಸ ಜೀವನಕ್ಕಾಗಿ ಮಹಾಬ್ಸ್ ರೆಸಾರ್ಟ್ ಶೀಘ್ರದಲ್ಲೇ ಸಿಂಗಾರಗೊಳ್ಳಲಿದೆ. ಈಗಾಗಲೇ ತಮ್ಮ ಮದುವೆಗೆ ಆಹ್ವಾನಿಸಲು ಅತಿಥಿಗಳ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿರುವ ಜೋಡಿ, ಅತ್ಯಾಪ್ತ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಇದನ್ನೂ ಓದಿ : ವಾರಕ್ಕೆ ಹತ್ತತ್ತು ಸಿನಿಮಾಗಳು ರಿಲೀಸ್ : ಥಿಯೇಟರ್ ಮಾತ್ರ ಖಾಲಿ ಖಾಲಿ

    ಮದುವೆಯ ನಂತರ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಅಲ್ಲಿ ಸಿನಿಮಾ ರಂಗದ ನಟ, ನಟಿ, ತಂತ್ರಜ್ಞರಿಗೆ ಮತ್ತು ಆಪ್ತರಿಗೆ ಆಹ್ವಾನ ನೀಡಲಾಗುತ್ತದೆಯಂತೆ. ಈ ಆರತಕ್ಷತೆ ಕಾರ್ಯಕ್ರಮವು ಚೆನ್ನೈನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

    ಆರು ವರ್ಷಗಳಿಂದ ಪ್ರೀತಿಸುತ್ತಿರುವ ನಯನತಾರಾ ಮತ್ತು ವಿಘ್ನೇಶ್ ಮದುವೆಯ ಮುನ್ನ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಒಟ್ಟಿಗೆ ಸಿನಿಮಾ ಕೂಡ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಬ್ಬರೂ ಜೊತೆಯಾಗಿ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ಆಶೀರ್ವಾದ ಕೂಡ ಪಡೆದಿದ್ದಾರೆ.

  • ಎಂಗೇಜ್ಮೆಂಟ್ ಮಾಡಿಕೊಂಡ ನಟಿ – ಅಭಿಮಾನಿಗಳಿಗೆ ನಯನತಾರಾ ಗುಡ್ ನ್ಯೂಸ್

    ಎಂಗೇಜ್ಮೆಂಟ್ ಮಾಡಿಕೊಂಡ ನಟಿ – ಅಭಿಮಾನಿಗಳಿಗೆ ನಯನತಾರಾ ಗುಡ್ ನ್ಯೂಸ್

    ಹೈದರಾಬಾದ್: ಲೇಡಿ ಸೂಪರ್ ಸ್ಟಾರ್ ಎಂದೇ ಸಖತ್ ಫೇಮಸ್ ಆಗಿರುವ ಬಹುಭಾಷಾ ನಟಿ ನಯನತಾರಾ ಕೊನೆಗೂ ತಾವು ಎಂಗೇಜ್ ಎಂದು ತಿಳಿಸಿದ್ದಾರೆ.

    ಖಾಸಗಿ ಚಾನೆಲ್‍ವೊಂದು ನಡೆಸಿದ ಸಂದರ್ಶನದಲ್ಲಿ ಭಾಗಿಯಾಗಿದ್ದ ನಯನ ತಾರಾ ತಮ್ಮ ಬಹುಕಾದ ಗೆಳೆಯ ವಿಘ್ನೇಶ್ ಶಿವನ್ ಒಟ್ಟಿಗೆ ತಾವು ಎಂಗೇಜ್‍ಮೆಂಟ್ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ತಮ್ಮ ಎಂಗೇಜ್‍ಮೆಂಟ್ ರೀಂಗ್‍ಅನ್ನು ಬಹಿರಂಗವಾಗಿ ತೋರಿಸಿದ್ದು, ಆದಷ್ಟು ಬೇಗ ಹಸೆಮಣೆ ಏರುತ್ತಿರೋದಾಗಿ ಹೇಳಿದ್ದಾರೆ. ಈ ಮೂಲಕವಾಗಿ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ನಾನು ರೌಡಿದಾನ್ ಸಿನಿಮಾ ಸೆಟ್‍ನಲ್ಲಿ ವಿಘ್ನೇಶ್ ಅವರನ್ನು ಮೊದಲಿದೆ ಭೇಟಿಯಾಗಿದ್ದೆ, ಎಂದು ಹೇಳುತ್ತ ತಮ್ಮ ಕೈಯಲ್ಲಿ ಇರುವ ಎಂಗೇಜ್‍ಮೆಂಟ್ ರೀಂಗ್ ಎಂದು ತಿಳಿಸಿದ್ದಾರೆ.

     

    View this post on Instagram

     

    A post shared by nayanthara???? (@nayantharaaa)

    ಈ ಹಿಂದೆ ಹಲವು ಬಾರಿ ನಯನತಾರಾ ವಿಘ್ನೇಷ್ ಅವರ ಜೊತೆಗೆ ಇರುವ ಮುದ್ದಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳು ಮದುವೆಯಾಗಿದ್ದೀರ ಎಂದು ಕೇಳುತ್ತಿದ್ದರು. ಆದರೆ ನಯನತಾರಾ ಅವರು ಎಂಗೇಜ್‍ಮೆಂಟ್ ಆಗಿದ್ದೇವೆ ಎಂದು ಹೇಳಿದ್ದಾರೆ.

     

    View this post on Instagram

     

    A post shared by nayanthara???? (@nayantharaaa)

  • ನಯನತಾರಾ, ವಿಘ್ನೇಶ್‍ಗೆ ಬೆಸ್ಟ್ ಜೋಡಿ ಎಂದ ಅಭಿಮಾನಿಗಳು

    ನಯನತಾರಾ, ವಿಘ್ನೇಶ್‍ಗೆ ಬೆಸ್ಟ್ ಜೋಡಿ ಎಂದ ಅಭಿಮಾನಿಗಳು

    ಚೆನ್ನೈ: ದಕ್ಷಿಣ ಭಾರತದ ಜೋಡಿ ಹಕ್ಕಿಗಳಲ್ಲಿ ಕಾಲಿವುಡ್ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೋಡಿ ಕೂಡ ಒಂದು. ಭಾನುವಾರ ವಿಘ್ನೇಶ್ ಶಿವನ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ನಟಿ ನಯನತಾರಾ ಒಟ್ಟಿಗೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಇನ್ನೂ ಈ ಫೋಟೋಗೆ ಲಕ್ಷಕ್ಕೂ ಅಧಿಕ ಲೈಕ್ ಬಂದಿದೆ. ಅಲ್ಲದೆ ಅಭಿಮಾನಿಗಳು ಕಮೆಂಟ್ ಸೆಕ್ಷನ್‍ನಲ್ಲಿ ಕಮೆಂಟ್ ಮಾಡುವ ಮೂಲಕ ಈ ಜೋಡಿಗೆ ಪ್ರೀತಿ ವ್ಯಕ್ತಪಡಿಸಿದ್ದಾರೆ.

    ಕಾಲಿವುಡ್ ಬ್ಯೂಟಿ ಕ್ವೀನ್ ನಟಿ ನಯನತಾರಾ ಜೊತೆ ಕ್ಲಿಕ್ಕಿಸಿದ ಸುಂದರವಾದ ಫೋಟೋವನ್ನು ನಿರ್ದೇಶಕ ವಿಘ್ನೇಶ್ ಶಿವನ್ ಜ.24 ರಂದು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಎಷ್ಟೊಂದು ಹಾರ್ಟ್ ಸಿಂಬಲ್ ಕೂಡ ಹಾಕಿ ಶೇರ್ ಮಾಡಿದ್ದಾರೆ.

    ಅಷ್ಟಕ್ಕೂ ವಿಘ್ನೇಶ್ ಈ ಫೋಟೋವನ್ನು ನಯನ ಜೊತೆ ಕ್ಲಿಕ್ಕಿಸಿಕೊಳ್ಳಲು ಕಾರಣ ಏನು ಅಂತ ಯೋಚಿಸ್ತಿದ್ದೀರಾ? ಹೌದು ಫ್ಲೈಟ್ ನಲ್ಲಿ ನ ಒಳಗೆ ಸೆರೆ ಹಿಡಿಯಲಾದ ಈ ಲೇಟೆಸ್ಟ್ ಫೋಟೋನಲ್ಲಿ ಇಬ್ಬರು ವಿಶೇಷವಾಗಿ ಒಂದೇ ರೀತಿಯ ಕಪ್ಪು ಬಣ್ಣದ ಟಿ ಶರ್ಟ್ ಧರಿಸಿದ್ದಾರೆ.ಈ ಫೋಟೋವನ್ನು ವಿಘ್ನೇಶ್ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುತ್ತಿದಂತೆಯೇ ಅವರ ಫ್ಯಾನ್ಸ್ ಬೆಸ್ಟ್ ಕಪಲ್ಸ್, ಕ್ಯೂಟಿಸ್.. ಅಲ್ಲದೆ ಹಾರ್ಟ್ ಸಿಂಬಲ್ಸ್ ಕಳುಹಿಸುವ ಮೂಲಕ ಪ್ರೀತಿ ಅಭಿವ್ಯಕ್ತಪಡಿಸುತ್ತಿದ್ದಾರೆ.

    <

     

    View this post on Instagram

     

    A post shared by Vignesh Shivan (@wikkiofficial)

    p style=”text-align: justify;”>ವಿಘ್ನೇಶ್ ಶಿವನ್ ಹಾಗೂ ನಯನತಾರ 6 ವರ್ಷಗಳ ಹಿಂದೆ ಇಮಕೈ ನೋಡಿಗಲ್ ಸಿನಿಮಾದ ಮೂಲಕ ಒಬ್ಬರಿಗೊಬ್ಬರು ಪರಿಚಯವಾದರು. ಈಗ ವಿಘ್ನೇಶ್ ಶಿವನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಎರಡನೇ ಚಿತ್ರ ಕಾತುವಾಕುಲ ರೆಂಡು ಕಡಲ್ ಸಿನಿಮಾಕ್ಕೆ ನಯನಾ ಬಣ್ಣ ಹಚ್ಚಿದ್ದಾರೆ.

    ಪ್ರಸ್ತುತ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈ ಸಿನಿಮಾದಲ್ಲಿ ವಿಜಯ್ ಸೇತುಪತಿ, ನಯನ ತಾರಾ ಮತ್ತು ಸಮಂತಾ ಅಕ್ಕಿನೇನಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾದ ಫಸ್ಟ್ ಶೆಡ್ಯೂಲ್ ವಿಜಯ್ ಸೇತುಪತಿ ಮತ್ತು ಸಮಂತಾ ನಡುವಿನ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆದಿದೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೆದೇವ್ರು ಬೆಡಗಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೆದೇವ್ರು ಬೆಡಗಿ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿರ್ಮಾಣದಲ್ಲಿ ಮೂಡಿ ಬಂದಿದ್ದ `ಮನೆದೇವ್ರು’ ಧಾರಾವಾಹಿಯಲ್ಲಿ ನಟಿಸಿದ ನಾಯಕಿ ಅರ್ಚನಾ ಲಕ್ಷ್ಮಿನಾರಾಯಣ ಸ್ವಾಮಿ ಅವರು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಅರ್ಚನಾ ಲಕ್ಷ್ಮೀನಾರಾಯಣ ಸ್ವಾಮಿ ಕೆಲವು ದಿನಗಳ ಹಿಂದೆ ವಿಘ್ನೇಶ್ ಎಂಬವರು ಜೊತೆ ಮದುವೆಯಾಗಿದ್ದಾರೆ. ಕುಟುಂಬದವರು, ಸ್ನೇಹಿತರ ಸಮ್ಮುಖದಲ್ಲಿ ಗುರುಹಿರಿಯರು ನಿಶ್ಚಯಿಸಿದ್ದ ದಿನದಂದು ಸಾಂಪ್ರದಾಯಕವಾಗಿ ವಿವಾಹವಾಗಿದ್ದಾರೆ. ತಮ್ಮ ಮೆಹಂದಿ, ಅರಿಶಿಣ ಶಾಸ್ತ್ರದ ಮತ್ತು ಮದುವೆ, ಆರತಕ್ಷತೆಯ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

    ಇದೇ ವರ್ಷ ಜುಲೈ ತಿಂಗಳಿನಲ್ಲಿ ನಟಿ ಅರ್ಚನಾ, ವಿಘ್ನೇಶ್ ಶರ್ಮಾ ಅವರ ಜೊತೆ ಮನೆಯವರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ವಿಘ್ನೇಶ್ ಮೂಲತಃ ಬೆಂಗಳೂರಿನವರೇ ಆಗಿದ್ದು, ನ್ಯೂಯಾರ್ಕ್ ನಲ್ಲಿ ವಾಸವಿದ್ದಾರೆ.

    ನಟಿ ಅರ್ಚನಾ ಮೂಲತಃ ಮೈಸೂರಿನವರಾಗಿದ್ದು, 2013ರಲ್ಲಿ ಮಿಸ್ ಕರ್ನಾಟಕ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ನಂತರ ಅಲ್ಲಿಂದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಅಭಿನಯಿಸಲು ಶುರು ಮಾಡಿದ್ದರು. ಅರ್ಚನಾ `ಮಧುಬಾಲ’, `ಮನೆದೇವ್ರು’ ಧಾರಾವಹಿಯಲ್ಲಿ ನಟಿಸಿದ್ದರು. ಬಳಿಕ `ನೂರೊಂದು ನೆನಪು’ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv