Tag: Vidhanasoudha

  • ಬಡ್ತಿ ಮೀಸಲಾತಿಗೆ ಸಂಪುಟ ಸಮ್ಮತಿ – ಮಹತ್ವದ ನಿರ್ಣಯಗಳಿಗೆ ಸಂಪುಟ ಒಪ್ಪಿಗೆ

    ಬಡ್ತಿ ಮೀಸಲಾತಿಗೆ ಸಂಪುಟ ಸಮ್ಮತಿ – ಮಹತ್ವದ ನಿರ್ಣಯಗಳಿಗೆ ಸಂಪುಟ ಒಪ್ಪಿಗೆ

    ಬೆಂಗಳೂರು: ಬಡ್ತಿ ಮೀಸಲಾತಿ ತಿದ್ದುಪಡಿ ವಿಧೇಯಕ ಜಾರಿಗೆ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿದ್ದಾರೆ. ಸೋಮವಾರ ಸಂಜೆ ವಿಧಾನಸೌಧದಲ್ಲಿ ಆರಂಭವಾದ ಕ್ಯಾಬಿನೆಟ್ ಸಭೆ 3 ಗಂಟೆಗೂ ಹೆಚ್ಚು ಕಾಲ ನಡೆಯಿತು. 60 ವಿಷಯಗಳಿಗೆ ಮತ್ತೆ 40 ಹೊಸ ವಿಷಯ ಅಜೆಂಡಕ್ಕೆ ಸೇರ್ಪಡೆಯಾಯ್ತು.

    ಸದನದಲ್ಲಿ ಅಂಗೀಕಾರಗೊಂಡ ಬಡ್ತಿ ಮೀಸಲಾತಿ ತಿದ್ದುಪಡಿ ವಿಧೇಯಕಕ್ಕೆ ತಕ್ಕಂತೆ ಮಾರ್ಗಸೂಚಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಕೆಲ ತಿದ್ದುಪಡಿಗಳೊಂದಿಗೆ ಬಡ್ತಿ ಮೀಸಲಾತಿ ವಿಧೇಯಕ ಅಂಗೀಕಾರವಾಗಿತ್ತು. ವಿಧೇಯಕ ಅಂಗೀಕಾರವಾಗಿದ್ದರೂ, ಜಾರಿಗೆ ಸಿಎಂ ಮುಂದಾಗಿರಲಿಲ್ಲ. ಸಂಪುಟ ಸಭೆಯಲ್ಲಿ ವಿಧೇಯಕ ಕುರಿತು ಸುದೀರ್ಘ ಚರ್ಚೆ ನಡೆಯಿತು.

    ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ವಿಧೇಯಕ ಜಾರಿಗೆ ದಲಿತ ಸಚಿವರ ಒತ್ತಾಯ ಮಾಡಿದರು. ಸಚಿವರ ಆಗ್ರಹಕ್ಕೆ ಮಣಿದ ಸಿಎಂ ಕುಮಾರಸ್ವಾಮಿ, ವಿಧಾನಸಭೆ ಅಂಗೀಕಾರ ಮಾಡಿದ ವಿಧೇಯಕಕ್ಕೆ ತಕ್ಕಂತೆ ಪರಿಶಿಷ್ಟ ಜಾತಿಯ ನೌಕರರಿಗೆ ಆದ ಹಿನ್ನಡೆ ಸರಿಪಡಿಸಲು ತೀರ್ಮಾನ ಮಾಡಲಾಯ್ತು. ಇದಲ್ಲದೆ ಕೆಲವು ಮಹತ್ವದ ನಿರ್ಣಯಗಳಿಗೆ ಸಂಪುಟ ಒಪ್ಪಿಗೆ ನೀಡಿದೆ.

    ಕ್ಯಾಬಿನೆಟ್ ಹೈಲೈಟ್ಸ್:
    * 1 ರಿಂದ 10 ನೇ ತರಗತಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ
    * 126 ಕೋಟಿ ವೆಚ್ಚದಲ್ಲಿ 44.57 ಲಕ್ಷ ವಿದ್ಯಾರ್ಥಿಗಳಿಗೆ ವಿತರಣೆ
    * ನೆಲಮಂಗಲ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಲು ಒಪ್ಪಿಗೆ
    * ಭದ್ರಾವತಿಯಲ್ಲಿ ಹೊಸ ಸಿಆರ್ ಪಿಎಫ್ ಬೆಟಾಲಿಯನ್ ಸ್ಥಾಪನೆಗೆ 50 ಎಕರೆ ಜಮೀನು
    * ಅರಸೀಕೆರೆ ಕೋರ್ಟ್ ಕಟ್ಟಡಕ್ಕೆ 13 ಕೋಟಿ ಅನುದಾನ
    * ಬಳ್ಳಾರಿಯಲ್ಲಿ 15 ಕೋಟಿ ವೆಚ್ಚದಲ್ಲಿ ಸರ್ಕಾರಿ ನೌಕರರಿಗೆ ವಸತಿ ಕಟ್ಟಡ
    * ಕರ್ನಾಟಕ ಆಯುಷ್ ನೇಮಕಾತಿ ತಿದ್ದುಪಡಿಗೆ ಒಪ್ಪಿಗೆ
    * ನೂತನ ಪ್ರವಾಸೋದ್ಯಮ ನೀತಿಗೆ ಸಂಪುಟ ನಿರ್ಧಾರ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಡಿಯೂರಪ್ಪ ಕೈಗೆ ಬಂತೊಂದು ಚೀಟಿ – ನೋಡಿ ಚೀಟಿಯನ್ನ ಹರಿದು ಹಾಕಿದ್ರು

    ಯಡಿಯೂರಪ್ಪ ಕೈಗೆ ಬಂತೊಂದು ಚೀಟಿ – ನೋಡಿ ಚೀಟಿಯನ್ನ ಹರಿದು ಹಾಕಿದ್ರು

    ಬೆಂಗಳೂರು: ಬಜೆಟ್ ಅಧಿವೇಶನದ ಮೊದಲದಿನ ವಿಧಾನಸಸಭೆಯಲ್ಲಿ ಕುಳಿತಿರುವಾಗ ಬಿ.ಎಸ್.ಯಡಿಯೂರಪ್ಪ ಅವರ ಕೈಗೊಂದು ರಹಸ್ಯ ಚೀಟಿ ಬಂದಿದ್ದು, ಅದನ್ನು ಓದಿದ ಮಾಜಿ ಸಿಎಂ ಯಾರಿಗೂ ಸಿಗಬಾರದೆಂದು ಹರಿದು ಹಾಕಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಏನಿತ್ತು ಚೀಟಿಯಲ್ಲಿ?
    ಯಡಿಯೂರಪ್ಪನವರು ಕುಳಿತಿದ್ದ ಜಾಗಕ್ಕೆ ಬಂದ ಕಾರ್ಕಳ ಶಾಸಕ ಸುನಿಲ್ ಚೀಟಿಯೊಂದನ್ನು ನೀಡಿದರು. ಚೀಟಿಯಲ್ಲಿ ಸದನಕ್ಕೆ ಗೈರಾದ ಕರುಣಾಕರ ರೆಡ್ಡಿ, ದೊಡ್ಡನಗೌಡ, ಚಂದ್ರಪ್ಪ ಹೆಸರು ಇತ್ತು ಎಂದು ಹೇಳಲಾಗಿದೆ.

    ಗೈರಾದ ಕೈ ಶಾಸಕರು ಯಾರು?:
    ಕಾಂಗ್ರೆಸ್‍ನ ಒಟ್ಟು 9 ಜನ ಶಾಸಕರು ಸದನಕ್ಕೆ ಗೈರಾಗಿದ್ದಾರೆ. ರಮೇಶ್ ಜಾರಕಿಹೊಳಿ (ಗೋಕಾಕ್), ಉಮೇಶ್ ಜಾಧವ್ (ಚಿಂಚೋಳಿ), ನಾಗೇಂದ್ರ (ಬಳ್ಳಾರಿ ಗ್ರಾಮಾಂತರ), ಬಿ.ಸಿ.ಪಾಟೀಲ್ (ಹಿರೇಕೆರೂರು), ಗಣೇಶ್ (ಕಂಪ್ಲಿ), ಮಹೇಶ್ ಕುಮಟಳ್ಳಿ (ಅಥಣಿ), ಸುಧಾಕರ್ (ಚಿಕ್ಕಬಳ್ಳಾಪುರ), ಎಸ್.ರಾಮಪ್ಪ (ಹರಿಹರ) ಹಾಗೂ ಸೌಮ್ಯಾ ರೆಡ್ಡಿ (ಜಯನಗರ) ಅವರು ಸದನಕ್ಕೆ ಗೈರಾಗಿದ್ದಾರೆ.

    ಜೆಡಿಎಸ್‍ನ ನಾರಾಯಣಗೌಡ (ಕೆ.ಆರ್.ಪೇಟೆ) ಪಕ್ಷೇತರ ಶಾಸಕರಾದ ಶಂಕರ್ (ರಾಣೇಬೆನ್ನೂರು) ಹಾಗೂ ನಾಗೇಶ್ (ಮುಳಬಾಗಿಲು) ಮೊದಲ ದಿನದ ಸದನಕ್ಕೆ ಹಾಜರಾಗಿಲ್ಲ. ಇತ್ತ ಬಿಜೆಪಿ 104 ಶಾಸಕರಲ್ಲಿ ನಾಲ್ವರು ಗೈರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಶಾಸಕ ಲಿಂಗಣ್ಣ (ಮಾಯಕೊಂಡ), ಅತೃಪ್ತ ಕಾಂಗ್ರೆಸ್ ಶಾಸಕರ ಕಾವಲಿಗೆ ನಿಂತಿರುವ ಅಶ್ವತ್ಥ್ ನಾರಾಯಣ (ಮಲ್ಲೇಶ್ವರಂ), ಅರವಿಂದ ಲಿಂಬಾವಳಿ (ಮಹಾದೇವಪುರ), ಬಾಲಚಂದ್ರ ಜಾರಕಿಹೊಳಿ (ಅರಭಾವಿ) ಕೂಡ ಸದನಕ್ಕೆ ಹಾಜರಾಗಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ಯ ನಿಷೇಧ ಆಗ್ರಹಿಸಿ ವಿಧಾನಸೌಧದತ್ತ ಲಗ್ಗೆಯಿಡಲಿದ್ದಾರೆ ಸಾವಿರಾರು ಮಹಿಳೆಯರು..!

    ಮದ್ಯ ನಿಷೇಧ ಆಗ್ರಹಿಸಿ ವಿಧಾನಸೌಧದತ್ತ ಲಗ್ಗೆಯಿಡಲಿದ್ದಾರೆ ಸಾವಿರಾರು ಮಹಿಳೆಯರು..!

    ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹುತಾತ್ಮದ ದಿನವೇ ಮದ್ಯ ನಿಷೇಧ ಹೋರಾಟ ಶುರುವಾಗಿದ್ದು, ಚಿತ್ರದುರ್ಗದಿಂದ ಜನವರಿ 19ರಂದು ಕಾಲ್ನಡಿಗೆ ಮೂಲಕ ಬೆಂಗಳೂರಿಗೆ ಹೊರಟಿದ್ದ ಸಾವಿರಾರು ಮಹಿಳೆಯರು ಮಂಗಳವಾರ ಮಧ್ಯಾಹ್ನ ರಾಜ್ಯ ರಾಜಧಾನಿಗೆ ಲಗ್ಗೆಯಿಟ್ಟಿದ್ದಾರೆ.

    ಮದ್ಯಪಾನ ನಿಷೇಧಿಸಬೇಕು ಎಂದು ಆಗ್ರಹಿಸಿ ಸಾವಿರಾರು ಮಹಿಳೆಯರು ಚಿತ್ರದುರ್ಗದಿಂದ ಕಾಲ್ನಡಿಯಲ್ಲೇ ಬೆಂಗಳೂರಿಗೆ ಬಂದಿದ್ದಾರೆ. ಸತತ 10 ದಿನಗಳ ಕಾಲ ನಡೆದುಕೊಂದು ಬಂದು ನಿನ್ನೆ ರಾಜಧಾನಿಯನ್ನು ತಲುಪಿದ್ದಾರೆ. ಸದ್ಯ ಮಲ್ಲೇಶ್ವರಂನ ಗ್ರೌಂಡ್‍ನಲ್ಲಿ ವಾಸ್ತವ್ಯ ಹೂಡಿರುವ ಮಹಿಳೆಯರು ಚಳಿಯಲ್ಲೇ ರಾತ್ರಿ ಕಳೆದಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದು, ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟುವ ಸಾಧ್ಯತೆ ಇದೆ. ಆದ್ರೆ ಪ್ರತಿಭಟನಾನಿರತ ಮಹಿಳೆಯರನ್ನು ಫ್ರೀಡಂ ಪಾರ್ಕ್ ಬಳಿಯೇ ತಡೆಯಲು ಪೊಲೀಸರು ಪ್ಲಾನ್ ಮಾಡಿಕೊಂಡಿದ್ದಾರೆ.

    ಮದ್ಯಪಾನ ನಿಷೇಧ ಮಾಡಿ ಅಂತ ಒಂದೆಡೆ ಮಹಿಳೆಯರು ಹೋರಾಟ ಮಾಡಲು ಮುಂದಾಗಿದ್ದರೆ, ಇನ್ನೊಂದೆಡೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ಈಗಾಗಲೆ 40 ಕಡೆ ಶೌಚಾಲಯ ವ್ಯವಸ್ಥೆ ಮಾಡಿದ್ದಾರೆ. ಆದ್ರೆ ಅದು ಸರಿ ಹೊಂದುತ್ತಿಲ್ಲ. ಉಚಿತ ವ್ಯವಸ್ಥೆ ಎಂದು ಹೇಳಿ ಹಣ ಪಡೆಯುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸುತ್ತಿದ್ದಾರೆ. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಉಪ ಚುನಾವಣೆ ಎಫೆಕ್ಟ್, ಖಾಲಿ ಹೊಡೆಯುತ್ತಿರುವ ಶಕ್ತಿ ಸೌಧ

    ಉಪ ಚುನಾವಣೆ ಎಫೆಕ್ಟ್, ಖಾಲಿ ಹೊಡೆಯುತ್ತಿರುವ ಶಕ್ತಿ ಸೌಧ

    ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆಯಾದ ನಂತರ ಶಕ್ತಿಸೌಧವಾದ ವಿಧಾನಸೌಧದಲ್ಲಿ ಸಚಿವರು ನಾಪತ್ತೆಯಾಗಿದ್ದು, ಅಹವಾಲುಗಳನ್ನು ಸಲ್ಲಿಸಲು ಬರುತ್ತಿರುವ ಸಾರ್ವಜನಿಕರು ಸಚಿವರ ಖಾಲಿ ಕೊಠಡಿಗಳನ್ನು ನೋಡಿ ಪರದಾಟ ನಡೆಸುತ್ತಿದ್ದಾರೆ.

    ಹೌದು, ರಾಜ್ಯದಲ್ಲಿ ವಿಧಾನಸಭಾ ಹಾಗೂ ಲೋಕಸಭಾ ಉಪ ಚುನಾವಣೆಗಳು ಘೋಷಣೆಯಾಗಿದ್ದು, ಪರಿಣಾಮವಾಗಿ ರಾಜ್ಯದ ಶಕ್ತಿಸೌಧದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಯಾವೊಬ್ಬ ಸಚಿವರು ಸಹ ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ.

     

    ಸಮ್ಮಿಶ್ರ ಸರ್ಕಾರ ಸಚಿವರ ಉಪ ಚುನಾವಣೆಯ ನೆಪದಲ್ಲಿ ರಾಜ್ಯದ ಜನರನ್ನೇ ಮರೆತಿದ್ದಾರೆ. ರಾಜ್ಯದ ಶಕ್ತಿಸೌಧ ಸಂಪೂರ್ಣ ಖಾಲಿಯಾಗಿದ್ದು, ಸಚಿವರಿಲ್ಲದೇ ಕೊಠಡಿಗಳು ಬಣಗುಟ್ಟುತ್ತಿವೆ. ವಿಧಾನಸೌಧ ಹಾಗೂ ವಿಕಾಸಸೌಧಗಳಲ್ಲೂ ಸಹ ಯಾವೊಬ್ಬ ಸಚಿವರ ಜನರ ಸಮಸ್ಯೆಗಳನ್ನು ಆಲಿಸಲು ಸಿಗುತ್ತಿಲ್ಲ. ಚುನಾವಣಾ ನೆಪದಲ್ಲಿ ಶಕ್ತಿಸೌಧದಲ್ಲಿ ಯಾವುದೇ ಕೆಲಸಗಳು ಸಹ ಆಗುತ್ತಿಲ್ಲ. ಆದರೆ ಚುನಾವಣಾ ನೆಪ ಹೇಳುತ್ತಿರುವ ಸಚಿವರು ಯಾವುದೇ ಪ್ರಚಾರಕ್ಕೂ ಹೋಗುತ್ತಿಲ್ಲ.

    ಸಚಿವರು ಈಗ ಬರ್ತಾರೆ, ಆಗ ಬರ್ತಾರೆ ಅಂತ ಸಾರ್ವಜನಿಕರು ಕಾದು ಕಾದು, ಸಪ್ಪೆ ಮೋರೆಹಾಕಿಕೊಂಡು ಮರಳುತ್ತಿದ್ದಾರೆ. ಗುರುವಾರ ವಿಧಾನಸೌಧಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಅವರನ್ನು ಬಿಟ್ಟರೇ, ಯಾವೊಬ್ಬ ಸಚಿವರು ವಿಧಾನಸೌಧದಲ್ಲಿ ಜನರಿಗೆ ಸಿಗುತ್ತಿಲ್ಲ. ಉಪ ಚುನಾವಣೆಯ ನೆಪದಿಂದಾಗಿ ಶಕ್ತಿ ಸೌಧದ ಆಡಳಿತ ಯಂತ್ರ ಕುಸಿಯುತ್ತಿದೆ. ಸಚಿವರ ಕೊಠಡಿಗಳು ಕ್ಲೋಸ್ ಆಗಿದ್ದು, ಅವರ ಸಿಬ್ಬಂದಿ ಸಹ ಯಾವೊಬ್ಬ ಸಾರ್ವಜನಿಕರ ಕಣ್ಣಿಗೂ ಸಿಗುತ್ತಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಗಸ್ಟ್ 2ರಂದು ವಿಧಾನಸೌಧಕ್ಕೆ ಮುತ್ತಿಗೆ: ವಾಟಾಳ್

    ಆಗಸ್ಟ್ 2ರಂದು ವಿಧಾನಸೌಧಕ್ಕೆ ಮುತ್ತಿಗೆ: ವಾಟಾಳ್

    ಬೆಂಗಳೂರು: ಉತ್ತರ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಸಭೆ ನಡೆಸುವಂತೆ ಆಗ್ರಹಿಸಿ ಆಗಸ್ಟ್ 2ರಂದು ವಿಧಾನಸಭೆಗೆ ಮುತ್ತಿಗೆ ಹಾಕುವುದಾಗಿ ಕನ್ನಡ ಒಕ್ಕೂಟ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

    ಪ್ರತ್ಯೇಕ ರಾಜ್ಯ ಕುರಿತು ಪ್ರತಿಕ್ರಿಯಿಸಿದ ಅವರು, ಇದೇ ಆಗಸ್ಟ್ 2ರಂದು ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ವಿಶೇಷ ಸಭೆ ನಡೆಸುವಂತೆ ಆಗ್ರಹಿಸಿ ಕನ್ನಡ ಒಕ್ಕೂಟದಿಂದ ವಿಧಾನಸಭೆಗೆ ಮುತ್ತಿಗೆ ಹಾಕಲಾಗುವುದು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡುತ್ತಿರುವವನ್ನು ಖುದ್ದು ಭೇಟಿ ಮಾಡಿ ಹೋರಾಟ ಕೈಬಿಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

    ಸರ್ಕಾರ ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕುಮಾರಸ್ವಾಮಿಯವರು ಹುಬ್ಬಳ್ಳಿ ಭಾಗಕ್ಕೆ ಹೋಗಿ ಹಾದಿ ಬೀದಿಯಲ್ಲಿ ಚರ್ಚೆ ಮಾಡೋದಲ್ಲ. ಉತ್ತರ ಕರ್ನಾಟಕಕ್ಕೆ ವಿಶೇಷ ಅಧಿವೇಶನ ನಡೆಸಿ, ಸಮಸ್ಯೆಯ ಬಗ್ಗೆ ವಿಸ್ತೃತ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

  • ಬಿಎಸ್‍ವೈ ಮೇಲೆ ನನಗೆ ಅನುಕಂಪ ಇದೆ, ಅವರಿಂದ ಸರಕಾರ ರಚಿಸಲು ಸಾಧ್ಯವಾಗಲಿಲ್ಲ: ರೇವಣ್ಣ

    ಬಿಎಸ್‍ವೈ ಮೇಲೆ ನನಗೆ ಅನುಕಂಪ ಇದೆ, ಅವರಿಂದ ಸರಕಾರ ರಚಿಸಲು ಸಾಧ್ಯವಾಗಲಿಲ್ಲ: ರೇವಣ್ಣ

    ಬೆಂಗಳೂರು: ಉತ್ತರ ಕರ್ನಾಟಕ ಕಡೆಗಣಿಸಲಾಗಿದೆ ಎನ್ನುವ ಯಡಿಯೂರಪ್ಪನವರ ಮೇಲೆ ನನಗೆ ಅನುಕಂಪವಿದೆ, ಅವರಿಂದ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ ಎಂದು ಸೂಪರ್ ಸಿಎಂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.

    ವಿಧಾನಸೌಧದಲ್ಲಿ ಉತ್ತರ ಕರ್ನಾಟಕ ಕಡೆಗಣಿಸಲಾಗಿ ಅನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಕುರಿತು ನಾನು ಮಾತಾಡಲ್ಲ. ಯಡಿಯೂರಪ್ಪ ಬಗ್ಗೆ ಮಾತಾಡಿದರೆ ನಾನು ಪೊಳ್ಳಾಗುತ್ತೇನೆ. ಯಡಿಯೂರಪ್ಪನವರು ಹಿರಿಯರು ಅವರ ಮೇಲೆ ನನಗೆ ಅನುಕಂಪ ಇದೆ. ಅವರಿಂದ ಸರಕಾರ ರಚಿಸಲು ಸಾಧ್ಯವಾಗಲಿಲ್ಲ. ಇಂಥ ಸಂದರ್ಭದಲ್ಲಿ ಅವರ ಬಗ್ಗೆ ನಾನು ಮಾತಾಡಲ್ಲ ಎಂದು ಹೇಳಿ ಟಾಂಗ್ ನೀಡಿದರು.

    ಶಾಸಕ ಶ್ರೀರಾಮುಲು ಹೇಳಿಕೆ ಬಗ್ಗೆ ನಾನೇನು ಮಾತಾಡೊಲ್ಲ. ಶ್ರೀರಾಮುಲು ಬಗ್ಗೆ ಮಾತಾಡಿದರೆ ನನ್ನನ್ನು ನಾನೇ ಅಗೌರವ ಮಾಡಿಕೊಂಡಂತೆ. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅವಧಿಗಳಲ್ಲಿ ಏನೇನಾಗಿದೆ ಅಂತ ಬಹಿರಂಗ ಚರ್ಚೆ ಆಗಲಿ. ಬಹಿರಂಗ ಚರ್ಚೆಗೆ ನಾವು ಸಿದ್ದ. ಮಠಾಧೀಶರು ಚರ್ಚೆಗೆ ಬರಲಿ ಎಂದು ಬಿಜೆಪಿ ನಾಯಕರು ಹಾಗೂ ಮಠಾಧೀಶರಿಗೆ ಸವಾಲು ಹಾಕಿ ಪ್ರತ್ಯೇಕ ರಾಜ್ಯ ರಚನೆಗಾಗಿ ಬಂದ್ ಮಾಡುತ್ತಿರೋರಿಗೆ ಸಚಿವ ರೇವಣ್ಣ ತಿರುಗೇಟು ನೀಡಿದರು.

    ಯಾರ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಅಂತ ಚರ್ಚೆ ನಡೆಯಲಿ. ಮಠಾಧೀಶರ ಪ್ರತಿಭಟನೆ ಕುರಿತು ನಾನು ಮಾತಾಡಲ್ಲ. ಉತ್ತರ ಕರ್ನಾಟಕದವರಿಗೆ ಸಚಿವ ಸಂಪುಟದಲ್ಲಿ ಅನ್ಯಾಯವಾಗಿದೆ ಅನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಸಿಎಂ ಕುಮಾರಸ್ವಾಮಿ ಜೊತೆ ಚರ್ಚೆ ನಡೆಸುತ್ತೇನೆ ಅಂತ ತಿಳಿಸಿದರು.

  • ಮತ್ತೆ ಮಾಧ್ಯಮಗಳ ಮೇಲೆ ಸಿಎಂ ಎಚ್‍ಡಿಕೆ ಉಗ್ರ ಪ್ರತಾಪ

    ಮತ್ತೆ ಮಾಧ್ಯಮಗಳ ಮೇಲೆ ಸಿಎಂ ಎಚ್‍ಡಿಕೆ ಉಗ್ರ ಪ್ರತಾಪ

    ಬೆಂಗಳೂರು: ಉತ್ತರ ಕರ್ನಾಟಕ ಇಬ್ಭಾಗದ ವಿಚಾರಕ್ಕೆ ಮಾಧ್ಯಮಗಳೇ ಕಾರಣ ಎಂದು ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ.

    ಇಂದು ವಿಧಾನಸಭೆಯ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಗೂ ಮುಂಚೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕದ ಇಬ್ಭಾಗವಾಗೋದಕ್ಕೆ ಮಾಧ್ಯಮಗಳೇ ಕಾರಣ. ರಾಜ್ಯದಲ್ಲಿ ಬೆಂಕಿ ಹಚ್ಚುತ್ತಿರುವುದು ಮಾಧ್ಯಮಗಳು. ಒಂದು ವಾರದಿಂದ ಪ್ರತ್ಯೇಕ ಕರ್ನಾಟಕ ಚರ್ಚೆ ಮಾಡುತ್ತಿದ್ದೀರಿ, ರಾಜ್ಯ ಹಾಳೋಗೋಕೆ ಮಾಧ್ಯಮಗಳೇ ಕಾರಣ ಎಂದು ದೂರಿದರು.

    ನಿಮಗೆ ಚರ್ಚೆ ಮಾಡೋಕೆ ಬೇರೆ ವಿಷಯ ಇಲ್ಲ. ಇದಕ್ಕಾಗಿ ಇಂತಹ ಸುದ್ದಿ ಮಾಡ್ತಿದ್ದೀರಾ. ನಿಮ್ಮ ಆತ್ಮಸಾಕ್ಷಿಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ ನೀವು ಮಾಡ್ತಿರೋದು ಸರಿನಾ ಅಂತ. ನನ್ನನ್ನು ಕೇವಲ 4 ಜಿಲ್ಲೆ ಸಿಎಂ ಅಂತೀರಾ. ಬಜೆಟ್ ತೆಗೆದು ನೋಡಿ 2.18 ಲಕ್ಷ ರೂಪಾಯಿ ಬಜೆಟಿನಲ್ಲಿ 500 ಕೋಟಿ ನಾಲ್ಕು ಜಿಲ್ಲೆಗೆ ಕೊಟ್ಟಿದ್ದಕ್ಕೆ ಅಪರಾಧ ಅಂತಿದ್ದೀರಾ ಎಂದು ಆರೋಪಿಸಿದರು.

    ಪ್ರತಿಯೊಂದು ತಪ್ಪು ಕಂಡು ಹಿಡಿಯುತ್ತಿದ್ದರೆ, ರಾಜ್ಯ ಹಾಳಾಗಬೇಕಾ? ಉದ್ದಾರ ಆಗಬೇಕಾ ನೀವೇ ನಿರ್ಧಾರ ಮಾಡಿ ಎಂದು ಪ್ರಶ್ನಿಸಿದರು. ನಾನು ನೂರು ಬಾರಿ ಹೇಳಿದ್ದೇನೆ. ಅಖಂಡ ಕರ್ನಾಟಕ ಒಂದೇ ಅಂತ, ನಾನೇನು ಮಾತಾಡಿಲ್ಲ. ಆದರೆ ದಿನ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದೀರಿ. ಮುಂದಿನ ದಿನಗಳಲ್ಲಿ ರಾಜ್ಯಗಳಲ್ಲಿ ಪ್ರತ್ಯೇಕ ರಾಜ್ಯ ವಿರುದ್ಧ ಏನಾದರೂ ಅನಾಹುತ ಸಂಭವಿಸಿದರೆ ಮಾಧ್ಯಮಗಳೇ ನೇರ ಹೊಣೆ. ಜನ ಏನು ಕೇಳೂತ್ತಿಲ್ಲ, ಜನ ಸರ್ಕಾರದ ಪರ ಇದ್ದಾರೆ. ಮಾಧ್ಯಮಗಳೇ ಎಲ್ಲ ಸೃಷ್ಟಿ ಮಾಡಿ ಬೆಂಕಿ ಹಚ್ಚುತ್ತಿದ್ದೀರಿ ಎಂದು ಕಿಡಿಕಾರಿದರು.

    https://www.youtube.com/watch?v=GFlhwAVluO8

  • ಇಂದಿನಿಂದಲೇ ವಿಧಾನಸೌಧದೊಳಗೆ ಮಾಧ್ಯಮಗಳ ವಾಹನಗಳಿಗೆ ನಿರ್ಬಂಧ

    ಇಂದಿನಿಂದಲೇ ವಿಧಾನಸೌಧದೊಳಗೆ ಮಾಧ್ಯಮಗಳ ವಾಹನಗಳಿಗೆ ನಿರ್ಬಂಧ

    ಬೆಂಗಳೂರು: ವಿಧಾನಸೌಧಕ್ಕೆ ಖಾಸಗಿ ಮತ್ತು ಮಾಧ್ಯಮಗಳ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.

    ವಿಧಾನಸೌಧದಲ್ಲಿ ಪೊಲೀಸರು ಇಂದಿನಿಂದಲೇ ಖಾಸಗಿ ವಾಹನಗಳ ಪ್ರವೇಶವನ್ನು ತಡೆಹಿಡಿದಿದ್ದು, ಪಾಸ್ ಇದ್ದ ಮಾಧ್ಯಮಗಳಿಗೂ ವಿಧಾನಸೌಧದ ಗೇಟ್ ವರೆಗೆ ಮಾತ್ರ ಪ್ರವೇಶ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೇ ಗೇಟ್ ಬಳಿ ಕಾರ್ ನಿಲ್ಲಿಸಿ, ವಿಧಾನಸೌಧದ ಒಳಗೆ ಮಾಧ್ಯಮಗಳು ಬರಬೇಕು ಎಂದು  ಪೊಲೀಸರು ತಿಳಿಸುತ್ತಿದ್ದಾರೆ.

    ಖುದ್ದು ಡಿಸಿಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ವಿಧಾನಸೌಧಗಳಲ್ಲಿರುವ ಖಾಸಗಿ ವಾಹನಗಳನ್ನ ಖಾಲಿ ಮಾಡಿಸುತ್ತಿದ್ದಾರೆ. ಕೇವಲ ವಕೀಲರು ಹಾಗೂ ಸರ್ಕಾರಿ ವಾಹನಗಳಿಗೆ ಮಾತ್ರ ವಿಧಾನಸೌಧದ ಒಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಮೂಲಕ ಮಾಧ್ಯಮಗಳ ಮೇಲಿನ ನಿಯಂತ್ರಣದ ಮೊದಲ ಹೆಜ್ಜೆಯನ್ನು ಸಿಎಂ ಕುಮಾರಸ್ವಾಮಿ ಇಟ್ಟಿದ್ದಾರೆ.

    ವಿಧಾನಸೌಧದ ಗೇಟ್‍ವರೆಗೆ ಮಾತ್ರ ಮಾಧ್ಯಮ ವಾಹನಗಳಿಗೆ ಅವಕಾಶ ನೀಡಿದ್ದು, ವರದಿಗಾರರು ಹಾಗೂ ಕ್ಯಾಮೆರಾಮನ್‍ಗಳು ಗೇಟ್ ಬಳಿ ತಮ್ಮ ವಾಹನ ನಿಲ್ಲಿಸಿ ವಿಧಾನಸೌಧದ ಒಳಗೆ ಪ್ರವೇಶ ಮಾಡಬಹುದಾಗಿದೆ. ಅಲ್ಲದೇ ಪಾಸ್ ಹೊಂದಿರುವ ಮಾಧ್ಯಮಗಳ ವಾಹನಗಳನ್ನು ಪಾರ್ಕಿಂಗ್ ವರೆಗೆ ಬಿಡಲು ಅವಕಾಶ ಕಲ್ಪಿಸಿದ್ದು, ವಾಹನಗಳನ್ನು ಪಾರ್ಕಿಂಗ್ ನಲ್ಲಿ ನಿಲ್ಲಿಸಿ ವಿಧಾನಸೌಧಕ್ಕೆ ನಡೆದುಕೊಂಡು ಬರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾಧ್ಯಮಗಳಿಗೆ ವಿಧಾನಸೌಧಕ್ಕೆ ನಿರ್ಬಂಧ ಹಾಕಿರುವ ವಿಚಾರವನ್ನು ಮಾಧ್ಯಮಗಳು ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದಾಗ, ಅವರು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಅಲ್ಲದೇ ಈ ಬಗ್ಗೆ ನನಗೆ ಗೊತ್ತಿಲ್ಲ, ನೋ ಕಾಮೆಂಟ್ ಎಂದು ಹೇಳಿದ್ದಾರೆ.

  • ವಿಧಾನಸೌಧದ ಪಡಸಾಲೆಯಲ್ಲಿರಬೇಕಾದ ಪೀಠೋಪಕರಣಗಳು ಮಾಜಿ ಸ್ಪೀಕರ್ ಮನೆಯಲ್ಲಿ!

    ವಿಧಾನಸೌಧದ ಪಡಸಾಲೆಯಲ್ಲಿರಬೇಕಾದ ಪೀಠೋಪಕರಣಗಳು ಮಾಜಿ ಸ್ಪೀಕರ್ ಮನೆಯಲ್ಲಿ!

    ಬೆಂಗಳೂರು: ವಿಧಾನಸೌಧ ಪಡಸಾಲೆ ವಸ್ತುಗಳು ಮಾಜಿ ಸ್ಪೀಕರ್ ಕೋಳಿವಾಡ ನಿವಾಸದಲ್ಲಿರುವುದು ಕಂಡು ಬಂದಿದೆ.

    ಜಾಲಹಳ್ಳಿಯಲ್ಲಿರೋ ಖಾಸಗಿ ನಿವಾಸದಲ್ಲಿ ಲಕ್ಷ ಲಕ್ಷ ವೆಚ್ಚದಲ್ಲಿ ಖರೀದಿಸಿದ್ದ ಸೋಫಾ ಸೆಟ್‍ಗಳು ಇದ್ದು, ಸೋಫಾ ಸೆಟ್ ಮೇಲೆ ಕೆಎಲ್‍ಎಎಸ್/ಎಲ್‍ಎಚ್/5ಕೆ ಅಂತ ನಮೂದು ಮಾಡಲಾಗಿದೆ. ಈ ಮೂಲಕ ಕೋಳಿವಾಡ ಅವರು ಅಧಿಕಾರದಲ್ಲಿದ್ದಾಗ ಖರೀದಿಸಿದ್ದ ವಸ್ತುಗಳನ್ನು ಹೊತ್ತೊದ್ರಾ ಎಂಬ ಪ್ರಶ್ನೆಯೊಂದು ಎದ್ದಿದೆ.

    ವಿಧಾನಸೌಧದಲ್ಲಿರಬೇಕಾದ ವಸ್ತುಗಳು ಕೋಳಿವಾಡ ನಿವಾಸಕ್ಕೆ ಬಂದಿದ್ದೇಗೆ? ಅಧಿಕಾರ ಮುಗಿಯುತ್ತಿದ್ದಂತೆ ಸರ್ಕಾರಿ ವಸ್ತುಗಳನ್ನು ನೀಡಬೇಕೆಂಬ ಪರಿಜ್ಞಾನವೂ ಇಲ್ಲವೇ? ಅಧಿಕಾರ ಇಲ್ಲದಿದ್ದರೂ ಸರ್ಕಾರಿ ಸವಲತ್ತು ಅನುಭವಿಸುತ್ತಿರೋದು ಸರೀನಾ ಅನ್ನೋ ಸಾಕಷ್ಟು ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.

    ಕೋಳಿವಾಡ ಅವರು ಸ್ಪೀಕರ್ ಆಗಿದ್ದಂತಹ ಸಂದರ್ಭದಲ್ಲಿ ಅನೇಕ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದರು. ಅದರ ಮುಂದುವರಿದ ಭಾಗವೂ ಇದಾಗಿದೆ ಎನ್ನುವ ಮಾತುಗಳು ಈಗ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

  • ವಿಧಾನಸೌಧದಲ್ಲಿ ಇನ್ನೂ ಬದಲಾಗಿಲ್ಲ ಸಿಎಂ ಬೋರ್ಡ್!

    ವಿಧಾನಸೌಧದಲ್ಲಿ ಇನ್ನೂ ಬದಲಾಗಿಲ್ಲ ಸಿಎಂ ಬೋರ್ಡ್!

    ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಯಾರು..? ಎಚ್‍ಡಿಕೆನಾ…? ಸಿದ್ದರಾಮಯ್ಯನಾ..? ಎಂಬ ಗೊಂದಲ ಮೂಡುತ್ತದೆ. ಯಾಕಂದ್ರೆ ವಿಧಾನಸೌಧದಲ್ಲಿ ಇನ್ನೂ ಬೋರ್ಡ್ ಬದಲಾಗಿಲ್ಲ.

    ಯಾಕಂದ್ರೆ ವಿಧಾನಸೌಧದಲ್ಲಿನ ಮೊದಲ ಮಹಡಿಯಲ್ಲಿ ಕೊಠಡಿ ನಂಬರ್ 112ರ ಎದುರುಗಡೆ ಇರುವ ಬೋರ್ಡ್ ನಲ್ಲಿ ಇನ್ನೂ ಏನೂ ಅಪ್‍ಡೇಟ್ ಆಗಿಲ್ಲ. ಈ ಬೋರ್ಡ್ ನೋಡೋರಿಗೆ ಫುಲ್ ಕನ್‍ಫ್ಯೂಶನ್ನು ಆಗುತ್ತೆ.

    ರಾಜ್ಯದ ಮುಖ್ಯಮಂತ್ರಿಗಳ ಹೆಸರು ಹಾಗೂ ಅಧಿಕಾರವಧಿ ಮಾಹಿತಿಯುಳ್ಳ ಬೋರ್ಡ್ ನಲ್ಲಿ ಈಗಲೂ ಸಿದ್ದರಾಮಯ್ಯನೇ ಮುಖ್ಯಮಂತ್ರಿ. ಮೂರು ದಿನ ಸಿಎಂ ಆಗಿದ್ದ ಯಡಿಯೂರಪ್ಪನವರ ಹೆಸರೂ ಇಲ್ಲ. ಹಾಲಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಹೆಸರೂ ಕೂಡ ಇಲ್ಲ. ಅದೂ ಅಲ್ಲದೇ ಆಡಳಿತ ಭಾಷೆ ಕನ್ನಡದಲ್ಲೇ ಮುಖ್ಯಮಂತ್ರಿಗಳ ಹೆಸರಿಲ್ಲ. ಈ ಬಗ್ಗೆ ಸಿಎಸ್, ಕನ್ನಡ ಪ್ರಾಧಿಕಾರಕ್ಕೆ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ದೂರು ನೀಡಿದ್ದಾರೆ.