Tag: Vidhanasabha election

  • 2018ರ ಚುನಾವಣೆ ಗೆಲ್ಲಲು ‘ಕೈ’ ಕಸರತ್ತು- ಪ್ರೊ. ಕೃಷ್ಣೇಗೌಡರಿಗೆ ಸಿಎಂ ಗಾಳ

    2018ರ ಚುನಾವಣೆ ಗೆಲ್ಲಲು ‘ಕೈ’ ಕಸರತ್ತು- ಪ್ರೊ. ಕೃಷ್ಣೇಗೌಡರಿಗೆ ಸಿಎಂ ಗಾಳ

    ಮಂಡ್ಯ: 2018 ರ ವಿಧಾನಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಕಸರತ್ತು ಆರಂಭಿಸಿದ್ದು, ಮಂಡ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲು ಸಿಎಂ ಸಿದ್ದರಾಮಯ್ಯ ಪ್ರೊ. ಕೃಷ್ಣೇಗೌಡರಿಗೆ ಗಾಳ ಹಾಕಿದ್ದಾರೆ.

    ಈಗಾಗಲೇ ಪಾಂಡವಪುರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಲ್ಲುವಂತೆ ಮನವೊಲಿಸಲು ಕೃಷ್ಣೆಗೌಡರ ಜೊತೆ ಎರಡು ಸುತ್ತಿನ ಮಾತುಕತೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಿದ್ದಾರೆ ಎನ್ನಲಾಗುತ್ತಿದೆ.

    ಕ್ಷೇತ್ರದಲ್ಲಿ ಜನರನ್ನು ಆಕರ್ಷಿಸಲು ಸಿಎಂ ಸಿದ್ದರಾಮಯ್ಯ ಫೇಸ್ ವ್ಯಾಲ್ಯು ಇರುವವರಿಗೆ ಮಣೆ ಹಾಕಲು ಮುಂದಾಗಿದ್ದಾರಾ ಎಂಬ ಅನುಮನಕ್ಕೆ ಕಾರಣವಾಗಿದೆ. ಕಳೆದ ಬಾರಿ ಕಾಂಗ್ರೆಸ್ ನಿಂದ ಅಂಬರೀಶ್ ಆಪ್ತ ಎಲ್.ಡಿ.ರವಿ ಅವರಿಗೆ ಟಿಕೆಟ್ ನೀಡಿಲಾಗಿತ್ತು. ಆದರೆ ಅವರು ಚುನಾವಣೆಯಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದರು.

    ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಶತಯ ಗಾತಯ ಗೆಲ್ಲುವ ವ್ಯಕ್ತಿಗಳಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದು, ಪಾಂಡವಪುರ ಕ್ಷೇತ್ರದಿಂದ ಕೃಷ್ಣೇಗೌಡರನ್ನು ಕಣಕ್ಕಿಳಿಸಲು ಮಾಸ್ಟರ್‍ಪ್ಲಾನ್ ಸಿದ್ಧವಾಗಿದೆ. ತಮ್ಮ ಮಾತಿನ ಮೂಲಕ ಇಡೀ ಕರ್ನಾಟಕದ ಉದ್ದಗಾಲಕ್ಕೂ ಹೆಸರು ಮಾಡಿರುವ ಪ್ರೊ. ಕೃಷ್ಣೇಗೌಡರು ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಕನಮರಡಿ ಗ್ರಾಮದವರು. ಹಾಸ್ಯ ಕಲಾವಿದರಾಗಿ ರಾಜ್ಯಾದ್ಯಂತ ಮನೆಮಾತಾಗಿರುವ ಪ್ರೊ.ಕೃಷ್ಣೆಗೌಡರ ಜನಪ್ರಿಯತೆಯನ್ನು ಬಳಸಿಕೊಂಡು ಪಾಂಡವಪುರದಲ್ಲಿ ಗೆಲುವಿನ ದಡ ಸೇರಲು ಸಿಎಂ ತಯಾರಿ ನಡೆಸಿದ್ದಾರೆ.

    ಸಿಎಂ ಆಫರ್‍ಗೆ ಯಾವುದೇ ಖಚಿತ ನಿರ್ಣಯವನ್ನು ಕೃಷ್ಣೇಗೌಡರು ತೆಗೆದುಕೊಂಡಿಲ್ಲ ಎಂಬ ಮಾಹಿತಿ ಲಭಿಸಿದ್ದು, ನೋಡೋಣ ಎಂಬ ಉತ್ತರವಷ್ಟೇ ಸಿಎಂ ಅವರಿಗೆ ತಲುಪಿದೆ. ಇನ್ನುಳಿದಂತೆ ಪಾಂಡವಪುರ ಕೇತ್ರದಿಂದ ಪುಟ್ಟಣ್ಣಯ್ಯ ಹಾಗೂ ಪುಟ್ಟರಾಜು ಪ್ರಬಲ ಅಭ್ಯರ್ಥಿಗಳಾಗಿ ಸ್ಪರ್ಧೆಗೆ ಸಿದ್ಧರಾಗಿದ್ದು, ಕಾಂಗ್ರೆಸ್‍ನ ಲೆಕ್ಕಾಚಾರಗಳು ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

    ಇದನ್ನೂ ಓದಿ: ಸಿಎಂ ಪುತ್ರ ಯತೀಂದ್ರ ವಿರುದ್ಧ ಶಂಕರ್ ಬಿದರಿ ಸ್ಪರ್ಧೆ?

    https://www.youtube.com/watch?v=OmqBEZOWzLw

    https://www.youtube.com/watch?v=FSUs8LUBMP8

    https://www.youtube.com/watch?v=J-zH0UQ_pmk

  • ಮಣಿಪುರದಲ್ಲಿ ಇರೋಮ್ ಶರ್ಮಿಳಾಗೆ ಸೋಲು

    ಮಣಿಪುರದಲ್ಲಿ ಇರೋಮ್ ಶರ್ಮಿಳಾಗೆ ಸೋಲು

    ಇಂಫಾಲ: ಮಣಿಪುರದಲ್ಲಿ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯ ವಿರುದ್ಧ ಹೋರಾಡಿದ್ದ ಇರೋಮ್ ಶರ್ಮಿಳಾ ತೌಬಾಲ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದಾರೆ.

    ಮುಖ್ಯಮಂತ್ರಿ ಅಭ್ಯರ್ಥಿ ಓಕ್ರಮ್ ಇಬೋಬಿ ಸಿಂಗ್ ವಿರುದ್ಧ ಸ್ಪರ್ಧಿಸಿದ್ದ ಶರ್ಮಿಳಾ ಅವರಿಗೆ ಕೇವಲ 100 ಮತಗಳು ಬಿದ್ದಿವೆ ಎಂದು ವರದಿಯಾಗಿದೆ. ತೌಬಲ್ ಕ್ಷೇತ್ರದಿಂದ ಗೆದ್ದಿರುವ ಕಾಂಗ್ರೆಸ್‍ನ ಓಕ್ರಮ್ ಅವರಿಗೆ 15 ಸಾವಿರ ಮತಗಳು ಸಿಕ್ಕಿದ್ದು, ಕೊನೆಯ ಹಂತದ ಮತ ಎಣಿಕೆಯ ಅಂಕಿ ಅಂಶ ಹೊರಬೀಳುವುದು ಬಾಕಿ ಇದೆ.

    ಸೇನಾ ಪಡೆಯ ವಿಶೇಷ ಅಧಿಕಾರ ಕಾಯ್ದೆಯ ವಿರುದ್ಧ 16 ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹ ನಡೆಸಿದ್ದ ಇರೋಮ್ ಶರ್ಮಿಳಾ ಕಳೆದ ವರ್ಷ ಆಗಸ್ಟ್‍ನಲ್ಲಿ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದರು. ನಂತರ ಪೀಪಲ್ಸ್ ರಿಸರ್ಜೆನ್ಸ್ ಅಂಡ್ ಜಸ್ಟಿಸ್ ಅಲಯನ್ಸ್ ಎಂಬ ಹೊಸ ರಾಜಕೀಯ ಪಕ್ಷವನ್ನು ಇರೋಮ್ ಶರ್ಮಿಳಾ ಸ್ಥಾಪಿಸಿದ್ದರು.

    ಶರ್ಮಿಳಾ ಅವರು ಖೌರೀ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದು ಇನ್ನೇನು ಕೆಲವೇ ಹೊತ್ತಿನಲ್ಲಿ ಫಲಿತಾಂಶ ಹೊರಬೀಳಲಿದೆ.

    ಮಣಿಪುರದಲ್ಲಿ ಇತರೆ ಪಕ್ಷದವರು ಜನರ ಮತಗಳನ್ನ ಸೆಳೆಯಲು ಹಣ ಮತ್ತು ತೋಳ್ಬಲವನ್ನು ಬಳಸಿದ್ದಾರೆ. ಆದ್ದರಿಂದ ಫಲಿತಾಂಶದ ಬಗ್ಗೆ ನಿರಾಸೆಯಿರುವುದಿಲ್ಲ. ಈ ಬಾರಿ ಚುನಾವಣೆಯಲ್ಲಿ ಸೋತರೂ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಅಂತ ಇಂದು ಬೆಳಿಗ್ಗೆ ಇರೋಮ್ ಶರ್ಮಿಳಾ ಹೇಳಿದ್ದರು.