Tag: vidhan parishad

  • ಎಂಎಲ್‍ಸಿ ಉಪ ಚುನಾವಣೆ: ಎಂಬಿಪಿ ಸಹೋದರ ಕಣಕ್ಕೆ

    ಎಂಎಲ್‍ಸಿ ಉಪ ಚುನಾವಣೆ: ಎಂಬಿಪಿ ಸಹೋದರ ಕಣಕ್ಕೆ

    ವಿಜಯಪುರ: ಬಸನಗೌಡ ಪಾಟೀಲ್ ಯತ್ನಾಳ್‍ರಿಂದ ತೆರವಾದ ವಿಜಯಪುರ-ಬಾಗಲಕೋಟೆ ಪರಿಷತ್ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಸಹೋದರ ಸುನೀಲಗೌಡ ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ.

    ಸುನೀಲಗೌಡ ಪಾಟೀಲ್ ಅವರು ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಎಂಬಿ ಪಾಟೀಲ್, ನನ್ನ ಸಹೋದರ ಸುನೀಲಗೌಡ ಪಾಟೀಲ್ ನನ್ನು ಪರಿಷತ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲು ಜೆಡಿಎಸ್ ನಿರ್ಧಾರ ತೆಗೆದುಕೊಂಡಿದೆ ತಿಳಿಸಿದರು.

    ಎಂಎಲ್ ಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದಾಖಲೆ ಮತಗಳಿಂದ ಗೆಲುತ್ತಾರೆ ಎಂದು ಯತ್ನಾಳ್ ಹೇಳಿದ್ದಾರೆ. ಈ ಬಗ್ಗೆ ಎಂಎಲ್‍ಸಿ ಚುನಾವಣಾ ಫಲಿತಾಂಶ ಬಂದ ಮೇಲೆ ಯಾರ ಸೋಲು, ಯಾರು ಗೆಲುವು ಗೊತ್ತಾಗುತ್ತದೆ ಎಂದು ಹೇಳಿ ತಿರುಗೇಟು ನೀಡಿದರು.

    ನಾವು ಮತದಾರರ ಮೇಲೆ ವಿಶ್ವಾಸ ಹೊಂದಿದ್ದೇವೆ. ಆದರೆ ಯತ್ನಾಳ್ ಹಾಗೆ ಸ್ವಯಂ ಘೋಷಿತ ಮಾಡಿಕೊಳ್ಳಲು ತಯಾರಿಲ್ಲ. ಮತದಾರರ ಆರ್ಶೀವಾದದಿಂದ ನಮ್ಮ ಗೆಲುವು ಆಗಲಿದೆ ಎಂದು ಎಂಪಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

    ನಾಮಪತ್ರ ಸಲ್ಲಿಕೆಗೆ ಕಾಂಗ್ರೆಸ್ ನ ಮುಖಂಡರಾದ ಎಸ್ ಆರ್ ಪಾಟೀಲ್, ಉಮಾಶ್ರೀ, ಎಚ್ ವೈ ಮೇಟಿ, ಸಿಎಸ್ ನಾಡಗೌಡ ಮತ್ತು ಜೆಡಿಎಸ್ ಸಚಿವ ಎಂ ಸಿ ಮನಗೂಳಿ, ಶಾಸಕ ದೇವಾನಂದ ಚವ್ಹಾಣ ಕೂಡ ಸಾಥ್ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪರಿಷತ್ ಚುನಾವಣೆ: ಕೊನೆಯ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆ

    ಪರಿಷತ್ ಚುನಾವಣೆ: ಕೊನೆಯ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆ

    ಬೆಂಗಳೂರು: ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಕೊನೆಯ ಕ್ಷಣದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಬದಲಾವಣೆ ಮಾಡಿದೆ.

    ಈ ಮೊದಲು ಹಾಲನೂರು ಲೇಪಾಕ್ಷಿ ಅವರಿಗೆ ಬಿಜೆಪಿ ಟೆಕೆಟ್ ಘೋಷಿಸಿತ್ತು. ಆದರೆ ಈಗ ಮಾಜಿ ಶಾಸಕ ವೈ.ಎ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾರಾಯಣಸ್ವಾಮಿ ಸೋತಿದ್ದರು. ಇಂದು ನಾರಾಯಣಸ್ವಾಮಿ ನಾಮಪತ್ರವನ್ನು ಸಲ್ಲಿಕೆ ಮಾಡಲಿದ್ದಾರೆ.

    ಹೆಬ್ಬಾಳ ಕ್ಷೇತ್ರದಲ್ಲಿ 21,140 ಮತಗಳ ಅಂತರದಿಂದ ನಾರಾಯಣಸ್ವಾಮಿ ವಿರುದ್ಧ ಕಾಂಗ್ರೆಸ್ ಸುರೇಶ್ ಬಿಎಸ್ ಜಯಗಳಿಸಿದ್ದರು. ನಾರಾಯಣಸ್ವಾಮಿಯವರಿಗೆ 53,313 ಮತಗಳು ಬಿದ್ದಿದ್ದರೆ, ಬಿಎಸ್ ಸುರೇಶ್ ಅವರಿಗೆ 53,313  ಮತಗಳು ಬಿದ್ದಿತ್ತು.

    ಜೂನ್ 21ಕ್ಕೆ ತೆರವಾಗಲಿರುವ ಮೂರು ಶಿಕ್ಷಕರ ಕ್ಷೇತ್ರ ಮತ್ತು ಮೂರು ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ, ನೈಋತ್ಯ ಪದವೀಧರ ಕ್ಷೇತ್ರ, ಬೆಂಗಳೂರು ಪದವೀಧರ ಕ್ಷೇತ್ರ ಮತ್ತು ಈಶಾನ್ಯ ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

    ಮೇ 22 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಜೂನ್ 8 ಮತದಾನ ನಡೆಯಲಿದ್ದು, ಜೂನ್ 12ರಂದು ಮತ ಎಣಿಕೆ ನಡೆಯಲಿದೆ.

  • ಧಮ್ ಇದ್ರೆ ಬಾರಲೇ ಶ್ರೀನಾಥ್- ಪರಿಷತ್ ಮಾಜಿ ಸದಸ್ಯರ ವಿರುದ್ಧ ಶಾಸಕ ಇಕ್ಬಾಲ್ ಅನ್ಸಾರಿ ವಾಗ್ದಾಳಿ

    ಧಮ್ ಇದ್ರೆ ಬಾರಲೇ ಶ್ರೀನಾಥ್- ಪರಿಷತ್ ಮಾಜಿ ಸದಸ್ಯರ ವಿರುದ್ಧ ಶಾಸಕ ಇಕ್ಬಾಲ್ ಅನ್ಸಾರಿ ವಾಗ್ದಾಳಿ

    ಕೊಪ್ಪಳ: ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ ಆರ್ ಶ್ರೀನಾಥ್ ವಿರುದ್ಧ ಶಾಸಕ ಇಕ್ಬಾಲ್ ಅನ್ಸಾರಿ ಅವಾಚ್ಯ ಶಬ್ದದಿಂದ ವಾಗ್ದಾಳಿ ನಡೆಸಿದ್ದಾರೆ. ಧಮ್ ಇದ್ರೆ ಬಾರಲೇ ಶ್ರೀನಾಥ್ ಅಂತ ಬಹಿರಂಗವಾಗಿ ಅವಾಜ್ ಹಾಕಿದ್ದಾರೆ.

    ಕೊಪ್ಪಳದ ಗಂಗಾವತಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಶಾಸಕ ಇಕ್ಬಾಲ್ ಅನ್ಸಾರಿ, ರಾಜಕೀಯದಲ್ಲಿ ಶ್ರೀನಾಥ್ ಬಚ್ಚಾ ಅಂತ ಪುನರುಚ್ಛರಿಸಿದ್ದಾರೆ. ನಿನಗೆ ಧಮ್ ಇದ್ರೆ ಬಾರಲೇ ಶ್ರೀನಾಥ್. ಕಾಂಗ್ರೆಸ್ ಪಕ್ಷದಲ್ಲಿ ಎಚ್.ಆರ್ ಶ್ರೀನಾಥ್ ಮತ್ತು ಎಚ್. ಜಿ.ರಾಮುಲು ನಾಲಾಯಕ್‍ಗಳು. ಲೇ ಬೇಕೂಫ್ ನೀನು ತೋಳೆರಿಸಿದ್ರೆ ನಾನೂ ತೋಳೆರೆಸ್ತೀನಿ. ನೀನು ಲಕ್ಷ ಪ್ರೆಸ್ ಮೀಟ್ ಮಾಡಿ, ನನ್ನ ವಿರುದ್ಧ ಮಾತನಾಡಿದ್ರೆ, ನಾನು ಲಕ್ಷದ ಮೇಲೆ ಒಂದು ಪ್ರೆಸ್ ಮೀಟ್ ಮಾಡಿ ನಿನ್ನ ಬಂಡವಾಳ ಬಯಲು ಮಾಡ್ತೀನಿ. ಧಮ್ ಇದ್ರೆ ನನ್ನ ಮನೆ ಮುಂದೆ ಬಂದು ಪ್ರೆಸ್ ಮೀಟ್ ಮಾಡು ಎಂದು ಶ್ರೀನಾಥ್‍ಗೆ ಪಂಥಾಹ್ವಾನ ನೀಡಿದ್ದಾರೆ.

    ಅಷ್ಟೇ ಅಲ್ಲ ನೀನು ಎಲ್ಲಿಗೆ ಹೇಳುತ್ತಿಯೋ ಅಲ್ಲಿಗೆ ಬರ್ತಿನಿ ಅಂತಾ ಎಚ್. ಆರ್. ಶ್ರೀನಾಥ್ ವಿರುದ್ಧ ಅವಾಚ್ಯ ಶಬ್ಧ ಬಳಕೆ ಮಾಡಿದ್ರು. ಸುಮಾರು 1 ಗಂಟೆ ಸುದ್ದಿಗೋಷ್ಠಿ ನಡೆಸಿದ ಶಾಸಕ ಅನ್ಸಾರಿ, ಸುದ್ದಿಗೋಷ್ಠಿಯುದ್ದಕ್ಕೂ ಲೇ ಮಗನೇ ಶ್ರೀನಾಥ ಎಂದೇ ಸಂಬೋಧಿಸಿ ವಾಗ್ದಾಳಿ ನಡೆಸಿದರು.

  • ‘ರಾಜ್ಯ, ರಾಷ್ಟ್ರೀಯ ಹೆದ್ದಾರಿಯ ಟೋಲ್‍ಗಳಲ್ಲಿ ವಿಐಪಿಗಳಿಗೆ ಪ್ರತ್ಯೇಕ ದ್ವಾರ ನಿರ್ಮಿಸಿ’

    – ಪರಿಷತ್‍ನಲ್ಲಿ ಸರ್ಕಾರದ ವಿರುದ್ಧ ಜೆಡಿಎಸ್, ಬಿಜೆಪಿ ಶಾಸಕರ ಪ್ರತಿಭಟನೆ

    ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಯ ಟೋಲ್‍ಗಳಲ್ಲಿ ಅಂಬುಲೆನ್ಸ್ ಮತ್ತು ವಿಐಪಿ ವಾಹನಗಳಿಗೆ ಪ್ರತ್ಯೇಕ ದ್ವಾರ ನಿರ್ಮಿಸಬೇಕು ಎಂದು ವಿಧಾನ ಪರಿಷತ್‍ನಲ್ಲಿ ಜೆಡಿಎಸ್ ಸದಸ್ಯರು ಆಗ್ರಹಿಸಿದರು.

    ಈ ವೇಳೆ ಫೆಬ್ರವರಿ 13ರಂದು ಸಂಜೆ 5 ಗಂಟೆಗೆ ಈ ಬಗ್ಗೆ ಸಭೆ ಕರೆದು ಚರ್ಚಿಸೋಣ ಎಂದ ಲೋಕೋಪಯೋಗಿ ಸಚಿವ ಮಹದೇವಪ್ಪ ಉತ್ತರಕ್ಕೆ ಜೆಡಿಎಸ್- ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ರು. ಲೋಕೋಪಯೋಗಿ ಸಚಿವರು ಪ್ರತಿ ಬಾರಿ ಹೀಗೆ ಹೇಳುತ್ತಾರೆ, ಕೆಲವು ಟೋಲ್ ಅಲ್ಲ. ಎಲ್ಲ ಟೋಲ್ ಗಳಲ್ಲೂ ಈ ರೀತಿಯ ಸಮಸ್ಯೆಗಳಿವೆ ಅಂತಾ ಜೆಡಿಎಸ್ ಸದಸ್ಯ ಶರವಣ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸದನದ ಬಾವಿಗಿಳಿದು ಜೆಡಿಎಸ್, ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ರು.

    ಮಾಜಿ ಪ್ರಧಾನಿ ದೇವೇಗೌಡರಿಗೂ ಬಿಟ್ಟಿಲ್ಲ ಅಂದ್ರೆ ನಾಚಿಕೆ ಆಗಬೇಕು. ಸಚಿವರಾಗಿ ನೀವು ವಿಫಲರಾಗಿದ್ದೀರಾ ಎಂದ ಈಶ್ವರಪ್ಪ, ಎಲ್ಲರಿಗೂ ಟೋಲ್ ತೆಗೆದು ಬಿಡಿ ಅಂದ್ರು. ಇದಕ್ಕೆ ತಿರುಗೇಟು ನೀಡಿದ ಮಹದೇವಪ್ಪ ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಯಲ್ಲಿದೆ. ಕೇಂದ್ರ ಸರ್ಕಾರವನ್ನ ಒತ್ತಾಯಿಸಿ ಅಂದ್ರು. ಮತ್ಯಾಕೆ ಸಭೆ ಮಾಡ್ತೀರಾ ಅಂತ ಈಶ್ವರಪ್ಪ ಟಾಂಗ್ ಕೊಟ್ಟರು. ಈ ವೇಳೆ ಈಶ್ವರಪ್ಪ ಮಹದೇವಪ್ಪ ನಡುವೆ ವಾಕ್ಸಮರ ನಡೀತು.

    ಮಧ್ಯಪ್ರವೇಶಿಸಿದ ಸಚಿವ ಡಿಕೆಶಿವಕುಮಾರ್ ನಮ್ಮ ಹೆಸ್ರಲ್ಲಿ ಪಾಸ್‍ಗಳು ದುರುಪಯೋಗ ಆಗ್ತಿದೆ. ನನ್ನ ಶಿಷ್ಯರು ಕಲರ್ ಜೆರಾಕ್ಸ್ ಮಾಡಿ, ಬಾರು, ವೈನ್ ಶಾಪ್ ಮುಂದೆ ವಾಹನ ನಿಲ್ಲಿಸುತ್ತಿದ್ದಾರೆ. ಈ ದುರುಪಯೋಗ ತಡೆಯಲು ಮ್ಯಾಗ್ನೆಟಿಕ್ ಐಡಿ ಕಾರ್ಡ್ ತರಲು ಚಿಂತಿಸಲಾಗಿದೆ. ಫೆಬ್ರವರಿ 13ರ ಸಭೆಯಲ್ಲಿ ಎಲ್ಲವನ್ನ ಚರ್ಚಿಸೋಣ ಅಂತ ವಾಕ್ಸಮರಕ್ಕೆ ತೆರೆ ಎಳೆದ್ರು.

    ಸಭಾಪತಿ ಪೀಠದ ಮುಂದೆ ಬಿಜೆಪಿ ಜೆಡಿಎಸ್ ಪ್ರತಿಭಟಿಸಿ ಟೋಲ್ ಗೇಟ್‍ನಲ್ಲಿ ಶಾಸಕರೊಂದಿಗೆ ಟೋಲ್ ಸಿಬ್ಬಂದಿ ಅನುಚಿತ ವರ್ತನೆ ತೋರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.