Tag: Venkatareddy Mudnala

  • ಗ್ರಾಮಸ್ಥರಿಗೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ ಕ್ರಿಕೆಟ್ ಕಿಟ್ ಪಡೆಯಿರಿ: ವೆಂಕಟರೆಡ್ಡಿ ಮುದ್ನಾಳ

    ಗ್ರಾಮಸ್ಥರಿಗೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ ಕ್ರಿಕೆಟ್ ಕಿಟ್ ಪಡೆಯಿರಿ: ವೆಂಕಟರೆಡ್ಡಿ ಮುದ್ನಾಳ

    ಯಾದಗಿರಿ: ನೀವೆಲ್ಲರೂ ಕೋವಿಡ್ ಲಸಿಕೆ ಪಡೆದು ಬಳಿಕ ಅದರ ಬಗ್ಗೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಬೇಕು. ಈ ಕೆಲಸ ಮಾಡಿದರೆ ನಾನು ನಿಮಗೆ ಕ್ರಿಕೆಟ್ ಕಿಟ್ ನೀಡುತ್ತೆನೆಂದು ಯುವಕರಿಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದ್ದಾರೆ.

    ಜಿಲ್ಲೆಯಲ್ಲಿ ಲಸಿಕೆ ಪಡೆಯಲು ಜನ ಹಿಂದೇಟು ಹಾಕುತ್ತಿದ್ದು, ಜನರ ಮನವೊಲಿಸಲು ಶಾಸಕರು ವಿಶೇಷ ರೌಂಡ್ಸ್ ನಡೆಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಜಾಗೃತಿಗಾಗಿ ತೆರಳಿದ್ದರು.

    ಈ ವೇಳೆ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರನ್ನು ಕಂಡು ಅವರ ಬಳಿಗೆ ತೆರಳಿದ ಶಾಸಕರು, ಈ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಇರಬೇಕು ಮೊದಲು ಆರೋಗ್ಯ ಮುಖ್ಯ ಅಂತ ಬುದ್ಧಿಮಾತು ಹೇಳಿದ್ದಾರೆ. ಇದನ್ನೂ ಓದಿ: ಮುಂಗಾರುಮಳೆ-2 ಚಿತ್ರದ ನಟಿಯ ತಂದೆ ಅರೆಸ್ಟ್..!

    ಅದೇ ರೀತಿ ಮಾಸ್ಕ್ ಹಾಕದೇ ಕ್ರಿಕೆಟ್ ಆಡುತ್ತಿದ್ದವರಿಗೆ ಯುವಕರಿಗೆ ಮಾಸ್ಕ್ ನೀಡಿ, ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದರು. ನೀವು ನಿಮ್ಮ ಗ್ರಾಮಸ್ಥರಿಗೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದ್ರೆ ನಾನೇ ನಿಮಗೆ ಕ್ರಿಕೆಟ್ ಕಿಟ್ ನೀಡುತ್ತೆನೆಂದು ಯುವಕರಿಗೆ ಉತ್ಸಾಹ ತುಂಬಿದರು.

  • ಅಧಿಕಾರಿಗಳಿಗೆ ಶಾಸಕರಿಂದ ಕೃಷಿ ಪಾಠ

    ಅಧಿಕಾರಿಗಳಿಗೆ ಶಾಸಕರಿಂದ ಕೃಷಿ ಪಾಠ

    ಯಾದಗಿರಿ: ಬೀಜ ಉತ್ಪಾದನೆಯಲ್ಲಿ ನಿರ್ಲಕ್ಷ್ಯ ತೋರಿದ ಕೃಷಿ ಅಧಿಕಾರಿಗಳನ್ನು ಜಮೀನಿಗೆ ಕರೆದುಕೊಂಡು ಹೋಗಿ, ಯಾದಗಿರಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ವ್ಯವಸಾಯದ ಬಗ್ಗೆ ಭರ್ಜರಿ ಪಾಠ ಮಾಡಿದ್ದಾರೆ.

    ಯಾದಗಿರಿ ನಗರದ ಹೊರ ವಲಯದಲ್ಲಿ ಸುಮಾರು 35 ಎಕರೆ ಸರ್ಕಾರಿ ಭೂಮಿದ್ದು, ಇದರಲ್ಲಿ ಬೀಜ ಉತ್ಪಾದನಾ ಕೇಂದ್ರವಿದೆ. ಬೀಜ ಉತ್ಪಾದನೆಗಾಗಿ ಜಿಲ್ಲಾಡಳಿತದಿಂದ ವರ್ಷ ಲಕ್ಷ-ಲಕ್ಷ ಅನುದಾನ ಸಹ ನೀಡಲಾಗುತ್ತದೆ. ಹೀಗಿದ್ದರೂ ಬೀಜ ಉತ್ಪಾದನೆ ಮಾಡಲು ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ.

    ಅಲ್ಲದೆ ಸಾಕಷ್ಟು ಜಮೀನು ಇದ್ದರು ಕೇವಲ ಕಾಟಾಚಾರಕ್ಕೆ ಬೆಳೆ ಬೆಳೆಯುತ್ತಿದ್ದಾರೆ. ಅಧಿಕಾರಗಳ ಬೇಜಾವಾಬ್ದಾರಿಗೆ ಬೇಸತ್ತ ಶಾಸಕ ಮುದ್ನಾಳ, ಜಿಲ್ಲಾ ಕೃಷಿ ಮುಖ್ಯಾಧಿಕಾರಿ ದೇವಿಕಾ ಮತ್ತು ಇಲಾಖೆ ಪ್ರಮುಖ ಅಧಿಕಾರಿಗಳನ್ನು ಜಮೀನಿಗೆ ಕರೆದುಕೊಂಡು ಹೋಗಿ, ಬೆಳೆಯನ್ನು ಹೇಗೆ ಬೆಳೆಯಬೇಕು, ಹೊಲವನ್ನು ಹೇಗೆ ಉಳುಮೆ ಮಾಡಬೇಕು ಎಂದು ಹೇಳಿಕೊಟ್ಟು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.