Tag: Veg Food

  • ಉಳಿದ ಅನ್ನದಲ್ಲಿ ಮಾಡಿ ಬಿಸಿ ಬಿಸಿ ಪಕೋಡ

    ಉಳಿದ ಅನ್ನದಲ್ಲಿ ಮಾಡಿ ಬಿಸಿ ಬಿಸಿ ಪಕೋಡ

    ನ್ನ ಉಳಿದಿದೆ ಏನು ಮಾಡುವುದು ಅಂತ ಯೋಚನೆ ಮಾಡ್ತಿದ್ದೀರಾ? ಹಾಗಾದ್ರೆ ನಾವು ಇಂದು ಉಳಿದ ಅನ್ನದಲ್ಲಿ ಬಿಸಿ ಬಿಸಿ ಹಾಗೂ ರುಚಿಕರ ಪಕೋಡ ಮಾಡುವ ವಿಧಾನವನ್ನ ಹೇಳಿಕೊಡ್ತೇವೆ. ಕಡಲೆ ಹಿಟ್ಟಿನಿಂದ ಮಾಡುವ ಈರುಳ್ಳಿ ಪಕೋಡವನ್ನು ತಿಂದಿದ್ದೇವೆ. ಆದರೆ ಇಂದು ಮಾಡುತ್ತಿರುವ ಅನ್ನದ ಪಕೋಡ (Rice Pakoda) ಗರಂ ಗರಂ ಎಂದು ಸಖತ್ ರುಚಿಯಾಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಅನ್ನ – 3 ಕಪ್,
    * ಕಡಲೆಹಿಟ್ಟು – 4 ಚಮಚ
    * ಈರುಳ್ಳಿ – 2
    * ಹಸಿಮೆಣಸು – 2
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಚಾಟ್ ಮಸಾಲ- 1 ಚಮಚ,
    * ರುಚಿಗೆ ತಕ್ಕಷ್ಟು ಉಪ್ಪು
    * ಶುಂಠಿ 1 ಇಂಚು


    ಮಾಡುವ ವಿಧಾನ:

    * ಪಾತ್ರೆಯೊಂದಕ್ಕೆ ಬೇಯಿಸಿದ ಅನ್ನ, ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಜಜ್ಜಿದ ಶುಂಠಿ, ಚಾಟ್ ಮಸಾಲ, ಉಪ್ಪು ಹಾಗೂ ಕಡಲೆಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

    * ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಪಕೋಡ ಹದಕ್ಕೆ ಕಲೆಸಿಕೊಳ್ಳಿ. ಇದನ್ನೂ ಓದಿ:  ಅಲಸಂಡೆ ಕಾಳಿನ ಸಾರು ಅನ್ನದ ಜೊತೆಗೆ ಸೂಪರ್

    * ಕಾಯಿಸಿದ ಎಣ್ಣೆಗೆ ಹಿಟ್ಟನ್ನು ಉಂಡೆ ಮಾಡಿ ಒಂದೊಂದಾಗಿ ಬಿಡಿ. ಅದನ್ನು ಎರಡೂ ಕಡೆ ಚೆನ್ನಾಗಿ ಕರಿಯಿರಿ. ಸಂಜೆ ಹೊತ್ತಿಗೆ ತಿನ್ನಲು ಬಿಸಿಯಾದ ಅನ್ನದ ಪಕೋಡ ಸವಿಯಲು ಸಿದ್ಧವಾಗುತ್ತದೆ.

  • ಮಕ್ಕಳೂ ಇಷ್ಟಪಟ್ಟು ತಿಂತಾರೆ ಈ ಟೇಸ್ಟಿ ಆಲೂ ಚಂಗೇಜಿ..

    ಮಕ್ಕಳೂ ಇಷ್ಟಪಟ್ಟು ತಿಂತಾರೆ ಈ ಟೇಸ್ಟಿ ಆಲೂ ಚಂಗೇಜಿ..

    ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ತರಕಾರಿಗಳೆಂದರೆ ಅಲರ್ಜಿ. ಹೀಗಿರುವಾಗ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡುವುದೇ ತಲೆ ಬಿಸಿಯಾಗಿರುತ್ತದೆ. ಇಂಥ ಸಂದರ್ಭದಲ್ಲಿ ತರಕಾರಿಗಳನ್ನು ಉಪಯೋಗಿಸಿ ವಿಭಿನ್ನವಾಗಿ ಆಹಾರ ತಯಾರಿಸುವ ಕಲೆ ತಾಯಂದಿರಿಗೆ ಗೊತ್ತಿರಬೇಕು. ಅದಕ್ಕೆ ಸುಲಭವಾಗಿ ಮಕ್ಕಳು ಇಷ್ಟಪಡುವಂತಹ ಆಲೂಗಡ್ಡೆಯ ಚಂಗೇಜಿಯನ್ನು ಈ ರೀತಿಯಾಗಿ ಮಾಡಿ.

    ಬೇಕಾಗುವ ಸಾಮಗ್ರಿಗಳು:
    ಆಲೂಗಡ್ಡೆ
    ಅರಿಶಿಣ
    ಕೆಂಪು ಮೆಣಸಿನ ಪುಡಿ
    ಉಪ್ಪು
    ಈರುಳ್ಳಿ
    ಗೋಡಂಬಿ
    ಮೊಸರು
    ಕರಿಮೆಣಸು
    ಲವಂಗ
    ಜಾಕಾಯಿ
    ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್
    ಟೊಮ್ಯಾಟೋ
    ಧನಿಯಾ ಪುಡಿ
    ಸಕ್ಕರೆ
    ಗರಂ ಮಸಾಲ
    ಕಸೂರಿ ಮೇತಿ

    ಮಾಡುವ ವಿಧಾನ:
    ಮೊದಲಿಗೆ ಆಲೂಗಡ್ಡೆಯನ್ನು ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಿ.ಬಳಿಕ ಅದಕ್ಕೆ ಸ್ವಲ್ಪ ಅರಿಶಿಣ, ಕೆಂಪು ಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಅದಕ್ಕೆ ಕಲಸಿ ಇಟ್ಟುಕೊಂಡಿರುವ ಆಲೂಗಡ್ಡೆಯನ್ನು ಚೆನ್ನಾಗಿ ಕರೆದುಕೊಳ್ಳಿ. ಬಳಿಕ ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿಕೊಂಡು ಅದಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡಿರುವ ಈರುಳ್ಳಿಯನ್ನು ಹಾಕಿ ಕೆಂಪು ಬಣ್ಣ ಬರುವವರೆಗೂ ಕರಿದುಕೊಳ್ಳಿ. ಕರೆದ ಈರುಳ್ಳಿಗೆ ಗೋಡಂಬಿ, ಮೊಸರು ಹಾಕಿ ಮೂರನ್ನು ಸೇರಿಸಿ ರುಬ್ಬಿಕೊಳ್ಳಿ. ಇನ್ನೊಂದು ಪಾತ್ರೆಗೆ ಒಗ್ಗರಣೆಗೆ ಸ್ವಲ್ಪ ಎಣ್ಣೆ ಬಿರಿಯಾನಿ ಎಲೆ, ಲವಂಗ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಅದಕ್ಕೆ ರುಬ್ಬಿದ ಟೊಮ್ಯಾಟೋ ಮಿಶ್ರಣವನ್ನು ಹಾಕಿ. ಬಳಿಕ ರುಬ್ಬಿಟ್ಟ ಈರುಳ್ಳಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿಕೊಂಡು ಅದಕ್ಕೆ ಅರಿಶಿಣ, ಕೆಂಪು ಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲಿಸಿ. ಆನಂತರ ಅದಕ್ಕೆ ಕರಿದಿಟ್ಟುಕೊಂಡ ಆಲೂಗಡ್ಡೆಯನ್ನು ಹಾಕಿಕೊಳ್ಳಿ. ಸ್ವಲ್ಪ ಬೇಯಿಸಿದ ನಂತರ ಕಸೂರಿ ಮೇತಿ ಹಾಕಿ ಅಲಂಕರಿಸಿದರೆ ಆಲೂ ಚಂಗೇಜಿ ತಯಾರಾಗುತ್ತದೆ.

  • ಹೋಳಿಗೆ, ನಿಪ್ಪಟ್ಟು, ಆಲೂ ಕೂರ್ಮಾ; ತೆಲಂಗಾಣ ಸಾಂಪ್ರದಾಯಿಕ ಖಾದ್ಯ ಸವಿದ ಮೋದಿ – ಮೆನುವಿನಲ್ಲಿತ್ತು 50 ಐಟಂ

    ಹೋಳಿಗೆ, ನಿಪ್ಪಟ್ಟು, ಆಲೂ ಕೂರ್ಮಾ; ತೆಲಂಗಾಣ ಸಾಂಪ್ರದಾಯಿಕ ಖಾದ್ಯ ಸವಿದ ಮೋದಿ – ಮೆನುವಿನಲ್ಲಿತ್ತು 50 ಐಟಂ

    ಹೈದರಾಬಾದ್: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ಹೈದರಾಬಾದ್‌ಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಬಿಜೆಪಿ ನಾಯಕರಿಗೆ ತೆಲಂಗಾಣ ಸಾಂಪ್ರದಾಯಿಕ ಶೈಲಿಯ ಅಡುಗೆ ರುಚಿ ತೋರಿಸಲು ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.

    ಇಲ್ಲಿನ ಕರೀಂನಗರ ಜಿಲ್ಲೆಯ ಹುಸ್ನಾಬಾದ್ ಕ್ಷೇತ್ರದ ಗೌರವೆಲ್ಲಿ ಗುಡತಿಪಲ್ಲಿಯ ಯಾದಮ್ಮ, ಪ್ರಧಾನಿಗೆ ತೆಲಂಗಾಣದ ಅಡುಗೆಯ ರುಚಿ ತೋರಿಸಿದರು. ಸಂಪೂರ್ಣ ಸಸ್ಯಾಹಾರ ಖಾದ್ಯಗಳನ್ನೇ ಸವಿದು ಪ್ರಧಾನಿ ಮೋದಿ ಸಂತಸಪಟ್ಟರು. ಇದನ್ನೂ ಓದಿ: ದೇಶಕ್ಕೆ ಮಾತಾಡುವ ರಾಷ್ಟ್ರಪತಿ ಬೇಕು; ನಾನು ಗೆದ್ದರೆ ದೇಶದ್ರೋಹ ಕಾನೂನು ರದ್ದು ಮಾಡ್ತೀನಿ – ಯಶವಂತ್‌ ಸಿನ್ಹಾ

    50 ಬಗೆಯ ಖಾದ್ಯ: ಪ್ರಧಾನಿ ಮೋದಿ ಸೇರಿದಂತೆ ಇತರ ನಾಯಕರಿಗಾಗಿ 50 ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಸ್ವತಃ ಖಾದ್ಯಗಳ ರುಚಿ ಪರಿಶೀಲನೆ ಮಾಡಿದರು. ನಂತರ ಬಿಜೆಪಿ ಅತಿರಥರು ಯಾದಮ್ಮರ ಕೈರುಚಿ ಸವಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಗಣ್ಯರು ನನ್ನ ಅಡುಗೆಯ ರುಚಿ ಸವಿದಿರುವುದು ನನ್ನ ಪಾಲಿನ ಪುಣ್ಯ. ನನಗೆ ಈ ಅವಕಾಶ ಕಲ್ಪಿಸಿದ ಬಂಡಿ ಸಂಜಯ್ ಅವರಿಗೆ ಋಣಿಯಾಗಿದ್ದೇನೆ ಎಂದು ಯಾದಮ್ಮ ಕೃತಜ್ಞತೆ ಅರ್ಪಿಸಿದ್ದಾರೆ. ಇದನ್ನೂ ಓದಿ: ಬ್ಯಾಟರಾಯನಪುರದಲ್ಲಿ ಕೇಸರಿ ಫೌಂಡೇಶನ್‌ ವತಿಯಿಂದ ಆಷಾಢ ಅಷ್ಟಲಕ್ಷ್ಮಿ ಪೂಜೆ

    ಏನೆಲ್ಲಾ ಇತ್ತು ಊಟದ ಮೆನುವಿನಲ್ಲಿ?
    ಚಿಕ್ಕುಡುಕಾಯಿ ಟೊಮ್ಯಾಟೊ, ಆಲೂ ಕೂರ್ಮಾ, ಬದನೆಕಾಯಿ ಮಸಾಲಾ, ತೊಂಡೇಕಾಯಿ ಹಸಿಕೊಬ್ಬರಿ ಫ್ರೈ, ಬೆಂಡೇಕಾಯಿ ಕಾಜು ಫ್ರೈ, ತೋಟಕೂರ ಟೊಮ್ಯಾಟೊ ಫ್ರೈ, ಬೀರೆಕಾಯಿ ಮೀಲ್ ಮೇಕರ್ ಫ್ರೈ, ಮೆಂತ್ಯೆ ಹೆಸರುಕಾಳು ಫ್ರೈ, ಮಾವಿನಕಾಯಿ ಪಪ್ಪು, ಸಾಂಬಾರ್, ಮುದ್ದಪಪ್ಪು, ಪಚ್ಚಿಪುಲುಸು, ಬಗಾರಾ, ಪುಲಿಹೋರಾ, ಪುದೀನಾ ರೈಸ್, ವೈಟ್ ರೈಸ್, ಮೊಸರನ್ನ, ಗೋಂಗೂರ ಪಚ್ಚಡಿ, ಸೌತೆಕಾಯಿ ಚಟ್ನಿ, ಟೊಮ್ಯಾಟೊ ಚಟ್ನಿ, ಸೋರೆಕಾಯಿ ಚಟ್ನಿ, ಕಡಲೆ ಬೀಜದ ಚಟ್ನಿ, ಹಸಿ ತೆಂಗಿನಕಾಯಿ ಚಟ್ನಿ, ಹಸಿ ಮೆಣಸಿನ ಕಾಯಿ ಫ್ರೈ.

    ಸಿಹಿ ತಿನಿಸು: ಬೆಲ್ಲದ ಪರಮಾನ್ನ, ಶ್ಯಾವಿಗೆ ಪಾಯಸ, ಹೋಳಿಗೆ, ಬೂರೆಲು, ಕಜ್ಜಾಯ.

    ಕುರುಕುಲು ತಿಂಡಿ: ಉದ್ದಿನ ವಡೆ, ಮಿರ್ಚಿ ಬಜ್ಜಿ, ಚಕ್ಕುಲಿ, ಖಾರ ಬೂಂದಿ, ನಿಪ್ಪಟ್ಟು.

    Live Tv