Tag: Vasishta N. Simha

  • ಕೆಜಿಎಫ್‍ನಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡರೂ ಅದು ದೊಡ್ಡದೇ – ವಸಿಷ್ಠ ಸಿಂಹ

    ಕೆಜಿಎಫ್‍ನಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡರೂ ಅದು ದೊಡ್ಡದೇ – ವಸಿಷ್ಠ ಸಿಂಹ

    ಬೆಂಗಳೂರು: ಕೆಜಿಎಫ್ ಸಿನಿಮಾ ಟೀಂ 2022ರ ಏಪ್ರಿಲ್ 14 ರಂದು ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಸಿನಿಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಈ ವಿಚಾರವಾಗಿ ನಟ ವಶಿಷ್ಠ ಸಿಂಹ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದಾರೆ.

    ಕೆಜಿಎಫ್ ಸಿನಿಮಾ ಬಿಡುಗಡೆಯ ದಿನಾಂಕವನ್ನು ನಿಗದಿ ಮಾಡಿರುವ ವಿಚಾರವನ್ನು ಹಂಚಿಕೊಳ್ಳುವುದು ತುಂಬಾ ಸಂತೋಷವಾಗಿದೆ. ಎಲ್ಲರೂ ಈ ಸಿನಿಮಾವನ್ನು ತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ. ಕೊರೊನಾ ಕಾರಣದಿಂದಾಗಿ ಇವತ್ತು ನಾಳೆ ಎಂದು ಮುಂದೂಡುತ್ತಾ ಬಂದಿದ್ದೇವು. ಈ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದವರಿಗೆ ಮತ್ತು ಸಿನಿಮಾದಲ್ಲಿ ಕೆಲಸ ಮಾಡಿದವರಿಗೆ ಇದೇ ಜೀವನೋಪಾಯವಾಗಿರುವುದರಿಂದ ಇದು ಮುಖ್ಯವಾಗುತ್ತದೆ. ಹೀಗಾಗಿ ಸಿನಿಮಾ ಮಂದಿರಗಳಲ್ಲಿ ಸಿನಿಮಾ ತೆರೆ ಕಾಣುವುದು ಮುಖ್ಯವಾಗುತ್ತದೆ ಎಂದರು.

    ಸಿನಿಮಾವನ್ನು ನೋಡಲು ಜನ ಬರಬೇಕು. ಸಿನಿಮಾ ಮಂದಿರಗಳಲ್ಲಿ ಜನ ಸೇರಬೇಕು ಎಂದು ಇರುತ್ತದೆ. ಇದೀಗ ಕೊರೊನಾದಿಂದಾಗಿ ಸ್ವಲ್ಪ ಜನಜೀವನ ಅಸ್ತವ್ಯಸ್ತವಾಗಿರುವುದರಿಂದ ಹಾಗೂ ಕೊರೊನಾ ಲಾಕ್‍ಡೌನ್ ಆಗಬಹುದಾ? ಎನ್ನುವ ಆತಂಕದಿಂದ ಸಿನಿಮಾ ಬಿಡುಗಡೆಗೆ ದಿನಾಂಕವನ್ನು ನಿಗದಿ ಮಾಡಲಾಗಿದೆ. ಮುಂದಿನ ವರ್ಷ ಸಮ್ಮರ್‌ನಲ್ಲಿ  ಸಿನಿಮಾವನ್ನು ತೆರೆಗೆ ತರುವ ನಿರ್ಧಾರವನ್ನು ಮಾಡಲಾಗಿದೆ ಎಂದರು.

    ನಾವು ಮೊದಲು ಆರೋಗ್ಯವಾಗಿರೋಣ. ಜನ ಸಿನಿಮಾಮಂದಿರಕ್ಕೆ ಬಂದು ಈ ಸಿನಿಮಾವನ್ನು ನೋಡಬೇಕು. ನಮ್ಮ ಸಿನಿಮಾವನ್ನು ಜನ ನೋಡುವುದು ಒಪ್ಪಿ, ಅಪ್ಪಿಕೊಳ್ಳುವುದನ್ನು ನೋಡಲು ನಾವು ಕಾಯುತ್ತಿದ್ದೇವೆ. ನಿರ್ದೆಶಕರು, ಯಶ್ ಅವರು ಕುಳಿತು ಸಿನಿಮಾ ಬಿಡುಗಡೆಯ ದಿನಾಂಕವನ್ನು ನಿಗದಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಬಿಡುಗಡೆಗೆ ದಿನಾಂಕ ನಿಗದಿ – ಏಪ್ರಿಲ್‍ನಲ್ಲಿ ರಾಖಿಬಾಯ್ ಆರ್ಭಟ

    ನಮ್ಮ ಕನ್ನಡ ಈ ಸಿನಿಮಾದಲ್ಲಿ ನಾವು ಒಂದು ಪಾರ್ಟ್ ಆಗಿರುವುದು ತುಂಬಾ ಹೆಮ್ಮೆ ಮತ್ತು ಖುಷಿ ಇದೆ. ಎಲ್ಲರೂ ಈ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ ಎಂದಾದರೆ ಈ ಸಿನಿಮಾ ಮಾಡಿರುವ ಖ್ಯಾತಿಯಾಗಿದೆ. ಯಶ್ ಅವರ ಟೀಸರ್ ಬಂದಿರುವಾಗ ಒಂದು ದಾಖಲೆಯನ್ನು ಮಾಡಿದೆ. ಸಿನಿಮಾಕ್ಕಾಗಿ ಜನ ಎಷ್ಟು ಕಾಯುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.ಈ ಸಿನಿಮಾದ ಒಂದೊಂದು ಪೋಸ್ಟರ್ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

    ಕೆಜಿಎಫ್ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಬಹುಮುಖ್ಯವಾಗಿದೆ. ಈ ಸಿನಿಮಾ ವಿಚಾರವಾಗಿ ಚಿತ್ರತಂಡದಿಂದ ಬರುವ ಮಾಹಿತಿ, ಇನ್ನಷ್ಟ ಅನೌನ್ಸಮೆಂಟ್ಸ್‍ಗಳು ಬಹುಮುಖ್ಯವಾಗಿರುತ್ತವೆ ಎಂದು ಹೇಳುವ ಮೂಲಕವಾಗಿ ಸಿನಿಮಾ ಕುರಿತಾಗಿ ಇನ್ನಷ್ಟು ಆಸಕ್ತಿ ಹುಟ್ಟಿಸಿದ್ದಾರೆ.

  • ಕೊರೊನಾ ವಾರಿಯರ್ಸ್ ಸಹಾಯಕ್ಕೆ ನಿಂತ ವಶಿಷ್ಠ ಸಿಂಹ

    ಕೊರೊನಾ ವಾರಿಯರ್ಸ್ ಸಹಾಯಕ್ಕೆ ನಿಂತ ವಶಿಷ್ಠ ಸಿಂಹ

    ಬೆಂಗಳೂರು: ಲಾಕ್‍ಡೌನ್ ಟೈಮಲ್ಲಿ ಸ್ಯಾಂಡಲ್‍ವುಡ್ ನಟ ವಶಿಷ್ಠ ಸಿಂಹ ಏನು ಮಾಡುತ್ತಿದ್ದಾರೆ ಎಂದು ಅವರ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಇದೀಗ ಇದಕ್ಕೆ ಉತ್ತರ ಸಿಕ್ಕಿದ್ದು, ವಶಿಷ್ಠ ಸಿಂಹ ಸದ್ದಿಲ್ಲದೆ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದು, ಕೊರೊನಾ ವಾರಿಯರ್ಸ್‍ಗಾಗಿ ಹಗಲಿರುಳು ದುಡಿಯುವ ಮೂಲಕ ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ.

    ಸಹಾಯ ಮಾಡಿದ್ದರ ಕುರಿತು ಬಹುತೇಕ ನಟ, ನಟಿಯರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ವಶಿಷ್ಠ ಸಿಂಹ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದು, ಕೊರೊನಾ ವಾರಿಯರ್ಸ್‍ಗಾಗಿ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. ಹೌದು ಲಾಕ್‍ಡೌನ್ ಸಮಯದಲ್ಲಿ ಬಹುತೇಕ ನಟ, ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಆದರೆ ವಶಿಷ್ಠ ಸಿಂಹ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿಲ್ಲ. ಈ ಹಿಂದೆ ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ಸ್ಪಂದಿಸಿ ಚಪ್ಪಾಳೆ ತಟ್ಟಿದ್ದರು. ಅಲ್ಲದೆ ದೀಪ ಬೆಳಗಿದ್ದರು. ಇದನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ತಾವು ಸಹಾಯ ಮಾಡುತ್ತಿರುವುದರ ಕುರಿತು ಅಪ್‍ಡೇಟ್ ನೀಡಿಲ್ಲ.

    ವಶಿಷ್ಠ ತಮ್ಮದೇಯಾದ ಸ್ನೇಹಿತರ ತಂಡ ಕಟ್ಟಿಕೊಂಡು, ಮಾಸ್ಕ್ ಹಾಗೂ ನೈಸರ್ಗಿಕವಾಗಿ ತಯಾರಿಸಿದ ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ವಿತರಿಸುತ್ತಿದ್ದಾರೆ. ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು ಹಾಗೂ ವೈದ್ಯರಿಗೆ ಏನಾದರೂ ಸಹಾಯ ಮಾಡಬೇಕೆಂಬ ಉದ್ದೇಶದಿಂದ ವಶಿಷ್ಠ ಸಿಂಹ ಈ ಕೆಲಸಕ್ಕೆ ಕೈ ಹಾಕಿದ್ದು, ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರಿಗೆ ಹ್ಯಾಂಡ್ ಸ್ಯಾನಿಟೈಸರ್ ನೀಡುತ್ತಿದ್ದಾರೆ.

    ಹಲವು ದಿನಗಳಿಂದ ವಶಿಷ್ಠ ಸಿಂಹ ತಮ್ಮ ತಂಡದೊಂದಿಗೆ ಈ ಕಾರ್ಯದಲ್ಲಿ ತೊಡಗಿದ್ದು, ಬೆಂಗಳೂರು ದಕ್ಷಿಣ ಭಾಗದಲ್ಲಿ ತಮ್ಮ ಸಹಾಯ ಕಾರ್ಯವನ್ನು ಮಾಡುತ್ತಿದ್ದಾರಂತೆ. ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಸ್ವಚ್ಛತಾ ಕಾರ್ಯ ಮಾಡುವವರಿಗೆ ಹಾಗೂ ಅಗತ್ಯವಿರುವ ಎಲ್ಲರಿಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸುತ್ತಿದ್ದೇವೆ. ನೈಸರ್ಗಿಕವಾಗಿ ತಯಾರಿಸಿದ ಸ್ಯಾನಿಟೈಸರ್ ಗಳನ್ನು ವಿತರಿಸುತ್ತಿದ್ದು, ಇದರಲ್ಲಿ ಯಾವುದೇ ರೀತಿಯ ರಾಸಾಯನಿಕ ಇಲ್ಲ ಎಂದು ವಶಿಷ್ಠ ಮಾಹಿತಿ ನೀಡಿದ್ದಾರೆ.

    ಕಳೆದ ಹಲವು ದಿನಗಳಿಂದ ಈ ಕಾರ್ಯದಲ್ಲಿ ತೊಡಗಿದ್ದು, 2 ಸಾವಿರಕ್ಕೂ ಅಧಿಕ ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನು ಈಗಾಗಲೇ ವಿತರಿಸಿದ್ದೇವೆ. 20ಕ್ಕೂ ಹೆಚ್ಚು ಕೇಂದ್ರಗಳನ್ನು ಈಗಾಗಲೇ ನಾವು ತಲುಪಿದ್ದು, ನಮ್ಮ ಈ ಸಹಾಯ ಮುಂದುವರಿಯಲಿದೆ. ಇಷ್ಟು ಮಾತ್ರವಲ್ಲದೆ ಇನ್ನೊಂದು ವಿಚಾರದ ಕುರಿತು ಸಹ ನಾವು ಪ್ಲಾನ್ ಮಾಡಿದ್ದು, ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರಿಗೆ ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್‍ಮೆಂಟ್ ಕಿಟ್‍ಗಳನ್ನು ನೀಡಲು ಮುಂದಾಗಿದ್ದೇವೆ. ಈಗಾಗಲೇ 400 ಪಿಪಿಇ ಕಿಟ್‍ಗಳನ್ನು ಆರ್ಡರ್ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ವಿತರಿಸುತ್ತೇವೆ ಎಂದು ವಶಿಷ್ಠ ಮಾಹಿತಿ ನೀಡಿದ್ದಾರೆ. ಈ ಮೂಲಕ ವೈದ್ಯರು ಹಾಗೂ ಪೊಲೀಸರ ರಕ್ಷಣೆಗೆ ನಿಂತಿದ್ದಾರೆ.

    ವಶಿಷ್ಠ ಸಿಂಹ ಅಭಿನಯದ ಮಾಯಾಬಜಾರ್ ಸಿನಿಮಾ ತೆರೆ ಕಂಡಿದ್ದು, ಉತ್ತಮ ಪ್ರದರ್ಶನ ಕಂಡಿದೆ. ಇಂಡಿಯಾ ಇಂಗ್ಲೆಂಡ್ ಸಿನಿಮಾ ನಂತರ ವಶಿಷ್ಠ ಮಯಾಬಜಾರ್‍ನಲ್ಲಿ ಅಭಿನಯಿಸಿದ್ದರು. ಇದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಂಡವಾಳ ಹೂಡಿದ್ದರು. ಇದಾದ ಬಳಿಕ ಲಾಕ್‍ಡೌನ್ ಘೋಷಣೆಯಾಗಿದ್ದು, ಹೀಗಾಗಿ ವಶಿಷ್ಠ ಅವರ ಮುಂದಿನ ಯೋಜನೆ ಬಗ್ಗೆ ಇನ್ನಷ್ಟೆ ತಿಳಿಯಬೇಕಿದೆ.

  • ವಸಿಷ್ಠ ಸಿಂಹ ಹೆಸ್ರಲ್ಲಿ ನಕಲಿ ಫೇಸ್‍ಬುಕ್ ಖಾತೆ- ಮಹಿಳೆಗೆ 25 ಸಾವಿರ ವಂಚನೆ

    ವಸಿಷ್ಠ ಸಿಂಹ ಹೆಸ್ರಲ್ಲಿ ನಕಲಿ ಫೇಸ್‍ಬುಕ್ ಖಾತೆ- ಮಹಿಳೆಗೆ 25 ಸಾವಿರ ವಂಚನೆ

    ಬೆಂಗಳೂರು: 22 ವರ್ಷದ ವ್ಯಕ್ತಿಯೊಬ್ಬ ನಟ, ಗಾಯಕ ವಸಿಷ್ಠ ಎನ್. ಸಿಂಹ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಮಹಿಳೆಯೊಬ್ಬರಿಗೆ 25 ಸಾವಿರ ರೂ. ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

    ಪ್ರಕರಣ ಸಂಬಂಧ ನಟ ದೂರು ದಾಖಲಿಸಿದ ಬಳಿಕ ಸುಂಕದಕಟ್ಟೆಯ ಹೊಯ್ಸಳ ನಗರ ನಿವಾಸಿ ವೆಂಕಟೇಶ್ ಬವಸರ್ ನನ್ನು ಸೈಬರ್ ಕ್ರೈಂ ಪೊಲೀಸರು ಶನಿವಾರ ಬಂಧಿಸಿದ್ದಾರೆ.

    ಏನಿದು ಘಟನೆ?:
    ಆರೋಪಿ ವೆಂಕಟೇಶ್ ವಸಿಷ್ಠ ಸಿಂಹ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆಯನ್ನು ತೆರೆದಿದ್ದಾನೆ. ಬಳಿಕ ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಚಾಟ್ ಮಾಡಲು ಆರಂಭಿಸಿದ್ದಾನೆ. ಅಲ್ಲದೆ ಹೀಗೆ ಮಾತಾಡುತ್ತಾ ಅವರಿಗೆ ತನ್ನ ವಾಟ್ಸಾಪ್ ನಂಬರ್ ಕೂಡ ಕಳುಹಿಸಿದ್ದಾನೆ. ಆರೋಪಿ ಕೊಟ್ಟ ನಂಬರನ್ನು ಟ್ರೂ ಕಾಲರ್ ನಲ್ಲಿ ನೋಡಿದಾಗ ಅಲ್ಲಿಯೂ ವಸಿಷ್ಠ ಸಿಂಹ ಅಂತಾನೇ ಬಂದಿರುವುದರಿಂದ ಎಲ್ಲರೂ ನಟ ಅಂತಾನೇ ನಂಬಿದ್ದಾರೆ.

    ಹೀಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ಮಹಿಳೆಯೊಬ್ಬರಿಗೆ ಆರೋಪಿ ನಿಮಗೆ ಸಿನಿಮಾ ಅಥವಾ ಟಿವಿ ಸೀರಿಯಲ್ ನಲ್ಲಿ ನಟನೆ ಮಾಡಲು ಅವಕಾಶ ಮಾಡಿಕೊಡುವುದಾಗಿ ನಂಬಿಸಿದ್ದಾನೆ. ಈ ಮೂಲಕ ಆಕೆಯ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದನು. ಅಲ್ಲದೆ ಡಿಸೆಂಬರ್ ಕೊನೆಯವರೆಗೆ ನಾನು ಯಾವುದೇ ಕರೆಗಳನ್ನು ಸ್ವೀಕರಿಸಲ್ಲ. ಹೀಗಾಗಿ ನಾನು ಮೆಸೇಜ್ ಮಾತ್ರ ಮಾಡುವುದಾಗಿ ಮಹಿಳೆ ಜೊತೆ ಸುಳ್ಳು ಹೇಳಿದ್ದಾನೆ.

    ಈ ಮಧ್ಯೆ ಆರೋಪಿ ವೆಂಕಟೇಶ್ ಮಹಿಳೆಗೆ ತನ್ನದೇ ಇನ್ನೊಂದು ನಂಬರ್ ನೀಡಿ, ನನ್ನ ಅಸಿಸ್ಟೆಂಟ್ ವೆಂಕಿ ರಾವ್ ನಂಬರ್ ಎಂದು ಮಹಿಳೆಗೆ ನೀಡಿದ್ದಾನೆ.

    ಇತ್ತ ಫಿಲಂ ಇಂಡಸ್ಟ್ರಿ ಅವರ ಪರಿಚಯ ಇದೆ ಎಂದು ನಂಬಿಸಲು ವೆಂಕಿ ರಾವ್ ಮಹಿಳೆಯನ್ನು ಶೂಟಿಂಗ್ ಸ್ಥಳಕ್ಕೂ ಕರೆದುಕೊಂಡು ಹೋಗಿದ್ದಾನೆ. ಹೀಗೆ ಶೂಟಿಂಗ್ ಸ್ಥಳಕ್ಕೆ ಬರುತ್ತಿದ್ದ ಮಹಿಳೆ ಒಂದು ದಿನ ತನ್ನ ಮಗಳನ್ನೂ ಜೊತೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ವೆಂಕಿ, ನಿಮ್ಮ ಜೊತೆ ನಿಮ್ಮ ಮಗಳಿಗೂ ನಟಿಸಲು ಅವಕಾಶ ಕೊಡುವುದಾಗಿ ಹೇಳಿ ಆಕೆಯ ಕೈಯಿಂದ 25,000 ರೂ. ಪೀಕಿಸಿದ್ದಾನೆ.

    ವಸಿಷ್ಠ ಸಿಂಹನ ಅಭಿಮಾನಿಯಾಗಿರೋ ಮಹಿಳೆಯಲ್ಲಿ, ವಸಿಷ್ಠ ನಿಮ್ಮ ಮಗಳನ್ನು ಇಷ್ಟ ಪಡುತ್ತಿದ್ದಾರೆ. ಅಲ್ಲದೆ ಆಕೆಯನ್ನು ಮದುವೆ ಕೂಡ ಆಗಲು ನಿರ್ಧರಿಸಿದ್ದಾರೆ ಎಂದು ಮತ್ತೆ ಸುಳ್ಳು ಹೇಳಿದ್ದಾನೆ. ಇಷ್ಟೆಲ್ಲ ಸುಳ್ಳುಗಳನ್ನು ನಂಬಿದ್ದ ಮಹಿಳೆ ಒಂದು ದಿನ ಅಚಾನಕ್ ಆಗಿ ವಿಡಿಯೋ ಕಾಲ್ ಮಾಡಿದ್ದಾರೆ. ಈ ವೇಳೆ ಆತ, ವಸಿಷ್ಠ ಅವರು ರೈಡ್‍ಗೆ ಹೋಗಿದ್ದಾರೆ ಎಂದು ಮಹಿಳೆಯನ್ನು ಮತ್ತೆ ನಂಬಿಸಿದ್ದಾನೆ.

    ಇದರಿಂದ ಅನುಮಾನಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ವೆಂಕಟೇಶ್ ಗೆ ಕನ್ನಡ ಫಿಲಂ ಹಾಗೂ ಸೀರಿಯಲ್ ಗಳ ಮೇಕಪ್ ಆರ್ಟಿಸ್ಟ್ ಗಳು ಮಾತ್ರ ಪರಿಚಯವಿರುವುದಾಗಿ ಬೆಳಕಿಗೆ ಬಂದಿದೆ.