Tag: Varanasi

  • 24 ಗಂಟೆ ವಿಮಾನ ಹಾರಾಟವನ್ನ ತಡೆದ ಇಲಿ

    24 ಗಂಟೆ ವಿಮಾನ ಹಾರಾಟವನ್ನ ತಡೆದ ಇಲಿ

    -ಪ್ರಯಾಣಿಕರ ಆಕ್ರೋಶ

    ವಾರಾಣಸಿ: ಇಲಿಯೊಂದು ವಿಮಾನ ಹಾರಾಟವನ್ನು 24 ಗಂಟೆ ತಡೆದಿದೆ. ಇಲಿಯಿಂದಾಗಿ ವಾರಾಣಸಿಯ ಲಾಲ್‍ಬಹದ್ದೂರ್ ಶಾಸ್ತ್ರಿ (ಎಲ್‍ಬಿಎಸ್) ಏರ್ ಪೋರ್ಟಿನಿಂದ ಶನಿವಾರ ರಾತ್ರಿ ಟೇಕಾಫ್ ಆಗಬೇಕಿದ್ದ ಸೋಮವಾರ ಬೆಳಗ್ಗೆ ಪ್ರಯಾಣ ಬೆಳೆಸಿದೆ.

    ಶನಿವಾರ ರಾತ್ರಿ ವಿಮಾನದಲ್ಲಿ ಇಲಿಯೊಂದು ಕಾಣಿಸಿಕೊಂಡಿತ್ತು. ಇಲಿ ಕಾಣಿಸಿಕೊಂಡಿದ್ದರಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಭಯಭೀತಗೊಂಡಿದ್ದರು. ಸಿಬ್ಬಂದಿ ಎಷ್ಟೇ ಹುಡುಕಿದರೂ ಇಲಿ ಸಿಗದ ಕಾರಣ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ, ಹೋಟೆಲ್ ವೊಂದಕ್ಕೆ ಸ್ಥಳಾಂತರಿಸಲಾಯ್ತು.

    ಏವಿಯೇಷನ್ ನಿಯಮಗಳ ಪ್ರಕಾರ, ವಿಮಾನದಲ್ಲಿ ಇಲಿ ಕಂಡು ಬಂದ್ರೆ ಟೇಕಾಫ್ ಮಾಡುವಂತಿಲ್ಲ. ಪ್ರಯಾಣ ಮಧ್ಯೆ ಇಲಿ ಯಾವುದಾದರೂ ವೈರ್ ಗಳನ್ನು ಕತ್ತರಿಸುವ ಸಾಧ್ಯತೆಗಳಿರುತ್ತವೆ. ಇದು ಪ್ರಯಾಣಿಕರು ಮತ್ತು ಸಿಬ್ಬಂದಿಯ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಏರ್ ಲೈನ್ ಅಧಿಕಾರಿಗಳು ವಿಮಾನದ ಹಾರಾಟವನ್ನು ತಡೆದು ಶನಿವಾರ ರಾತ್ರಿ ಭಾನುವಾರ ಇಲಿ ಶೋಧನೆ ಕಾರ್ಯಕ್ಕೆ ತಂಡವನ್ನು ರಚಿಸಿತ್ತು. ವಿಮಾನ ಮತ್ತೆ ಟೇಕಾಫ್ ಆಗಲು ಅಧಿಕಾರಿಗಳಿಂದ ಇಲಿ ಮುಕ್ತ (ರೋಡೆಂಟ್ ಫ್ರೀ) ಪ್ರಮಾಣ ಪತ್ರ ಪಡೆಯೋದು ಕಡ್ಡಾಯವಾಗಿತ್ತು. ಇದನ್ನೂ ಓದಿ: ಬೆಂಗ್ಳೂರು ಏರ್‌ಪೋರ್ಟ್‌ ರನ್ ವೇಗೆ ನುಗ್ಗಿ ವಿಮಾನಗಳ ಹಾರಾಟಕ್ಕೆ ಅಡ್ಡಿ ಪಡಿಸಿದ ಪ್ರಯಾಣಿಕರು

    ಇಲಿ ಬಂದಿದ್ದು ಹೇಗೆ? ವಿಮಾನದೊಳಗೆ ಇಲಿ ಹೇಗೆ ಬಂತು ಪ್ರಶ್ನೆಗೆ ಸಿಬ್ಬಂದಿ ಬಳಿ ಉತ್ತರವಿಲ್ಲ. ವಾರಾಣಸಿಯಿಂದ ಟೇಕಾಫ್ ಆಗುವ ವೇಳೆ ವಿಮಾನದಲ್ಲಿ ಇಲಿ ಕಾಣಿಸಿಕೊಂಡಿತ್ತು. ಇದಕ್ಕೂ ಮೊದಲು ವಿಮಾನ ಕೋಲ್ಕತ್ತಾ ನಿಲ್ದಾಣದಿಂದ ಟೇಕಾಫ್ ಆಗಿ 80 ನಿಮಿಷ ಪ್ರಯಾಣ ಬೆಳೆಸಿ ವಾರಾಣಸಿ ತಲುಪಿತ್ತು. ಇಲಿ ಸಿಕ್ತಾ ಇಲ್ಲ ಎಂಬುದರ ಬಗ್ಗೆಯೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಟೇಕಾಫ್ ಆದ ಕೆಲವೇ ಕ್ಷಣದಲ್ಲಿ 100 ಪ್ರಯಾಣಿಕರಿದ್ದ ವಿಮಾನ ಪತನ

    ಈ ಕುರಿತು ಪ್ರತಿಕ್ರಿಯಿಸಿರುವ ವಾರಾಣಸಿ ಏರ್ ಪೋರ್ಟ್ ನಿರ್ದೇಶಕ ಆಕಾಶದೀಪ್ ಮಾಥುರ್, ರೋ ಡೆಂಟ್ ಫ್ರೀ ಸರ್ಟಿಫಿಕೇಟ್ ಪಡೆಯುವದಕ್ಕಾಗಿ ವಿಮಾನವನ್ನು ಪೂರ್ಣ ಪರಿಶೀಲನೆಗೆ ಒಳಪಡಿಸಲಾಯ್ತು. ಶೋಧ ಕಾರ್ಯದ ಬಳಿಕ ಸೋಮವಾರ ಬೆಳಗ್ಗೆ ವಿಮಾನ ಡೆಹರಾಡೂನ್ ಗೆ ತನ್ನ ಪ್ರಯಾಣ ಬೆಳೆಸಿತು. ಶನಿವಾರ ಮಧ್ಯಾಹ್ನ 3 ಗಂಟೆ 55 ನಿಮಿಷಕ್ಕೆ ಕೋಲ್ಕತ್ತಾದಿಂದ ಟೇಕಾಫ್ ಆಗಿದ್ದ ವಿಮಾನ 80 ನಿಮಿಷದ ಬಳಿಕ ವಾರಾಣಸಿ ತಲುಪಿತ್ತು. ಶನಿವಾರ ಸಂಜೆ 6 ಗಂಟೆ 40 ನಿಮಿಷಕ್ಕೆ ವಾರಾಣಸಿಯಿಂದ ಡೆಹರಾಡೂನ್ ಗೆ ವಿಮಾನ ಟೇಕಾಫ್ ಆಗಬೇಕಿತ್ತು. ಟೇಕಾಫ್ ಕೆಲ ನಿಮಿಷಗಳ ಮುನ್ನ ಕೆಲ ಪ್ರಯಾಣಿಕರಿಗೆ ಇಲಿ ಕಾಣಿಸಿಕೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಣಿಕರನ್ನು ಕೆಳಗಿಳಿಸಿ ಹೋಟೆಲ್ ನಲ್ಲಿರಿಸಿ ತಪಾಸಣೆ ನಡೆಸಲಾಯ್ತು. ರೋಡೆಂಟ್ ಸರ್ಟಿಫಿಕೇಟ್ ಪಡೆದ ಬಳಿಕ ಸೋಮವಾರ ಬೆಳಗ್ಗೆ ವಿಮಾನ ಟೇಕಾಫ್ ಆಯ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂಡೋನೇಷ್ಯಾ ವಿಮಾನ ದುರಂತ: ಒಟ್ಟು 190 ಪ್ರಯಾಣಿಕರಲ್ಲಿ ಒಬ್ಬ ಬದುಕುಳಿದ!

    ಪ್ರಯಾಣಿಕರ ಆಕ್ರೋಶ: ಪ್ರಯಾಣ 24 ಗಂಟೆ ವಿಳಂಬವಾಗಿದ್ದಕ್ಕೆ ಪ್ರಯಾಣಿಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿ, ಜನವರಿ 25ರಂದು ಫ್ಲೈಟ್ ನಂಬರ್ ಎಐ691 ಕೋಲ್ಕತ್ತಾದಿಂದ 1 ಗಂಟೆ 15 ನಿಮಿಷ ತಡವಾಗಿ ಟೇಕಾಫ್ ಆಯ್ತು. ಅದೇ ವಿಮಾನದಲ್ಲಿ ಇಲಿ ಕಾಣಿಸಿಕೊಂಡಿದ್ದರಿಂದ ವಾರಾಣಸಿ ಪ್ರಯಾಣಿಕರನ್ನು ಕೆಳಗಿಳಿಸಲಾಯ್ತು. 24 ಗಂಟೆ ಕಳೆದರೂ ನಮಗೆ ಯಾವ ವಿಷಯವೂ ತಿಳಿಯುತ್ತಿಲ್ಲ ಎಂದು ಕಿಡಿಕಾರಿದ್ದರು. ಇದನ್ನೂ ಓದಿ: ಇಂಡೋನೇಷ್ಯಾ ವಿಮಾನ ಪತನ: 189 ಮಂದಿ ದಾರುಣ ಸಾವು- ವಿಡಿಯೋ ನೋಡಿ

  • ಗಂಗಾರತಿ ಸ್ಥಳಕ್ಕೆ ವೀಲ್ ಚೇರ್ ಸೌಲಭ್ಯ – ಕಾಶಿಯಾತ್ರಿಗಳಿಗೆ ಇಲ್ಲಿದೆ ನೋಡಿ ಗುಡ್ ನ್ಯೂಸ್

    ಗಂಗಾರತಿ ಸ್ಥಳಕ್ಕೆ ವೀಲ್ ಚೇರ್ ಸೌಲಭ್ಯ – ಕಾಶಿಯಾತ್ರಿಗಳಿಗೆ ಇಲ್ಲಿದೆ ನೋಡಿ ಗುಡ್ ನ್ಯೂಸ್

    ಲಕ್ನೋ: ಜೀವನದಲ್ಲಿ ಒಮ್ಮೆ ಕಾಶಿ ಯಾತ್ರೆ ಮಾಡಬೇಕು ಗಂಗಾರತಿ ನೋಡಬೇಕು ಅನ್ನೋದು ಬಹುತೇಕ ಹಿಂದೂಗಳ ಆಶಯ. ಆದರೆ ಅಂಗವಿಕಲರು ಮತ್ತು ವಿಶೇಷ ಚೇತನರಿಗೆ ಇದು ಕಷ್ಟವಾಗುತ್ತಿತ್ತು. ಆದರೆ ಇನ್ನು ಆ ತೊಂದರೆ ಇಲ್ಲ, ವಾರಾಣಸಿಯ ಪ್ರಮುಖ ಮೂರು ಗಂಗಾನದಿಯ ಘಾಟ್ ಗಳಿಗೆ ವೀಲ್ ಚೇರ್ ರ‍್ಯಾಂಪ್ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ದೇಶದಲ್ಲಿನ ಪುಣ್ಯಕ್ಷೇತ್ರಗಳ ಪೈಕಿ ಮೊದಲ ಬಾರಿ ಇಲ್ಲಿ ವೀಲ್ ಚೇರ್ ರ‍್ಯಾಂಪ್  ನಿರ್ಮಿಸಲಾಗುತ್ತಿದೆ ಎನ್ನಲಾಗಿದೆ.

    ಹೊಸ ವರ್ಷದ ಗಿಫ್ಟ್ ಎನ್ನುವಂತೆ ಗಂಗಾ ನದಿ ತಟದಲ್ಲಿರುವ ಮಣಿಕರ್ಣಿಕ, ಅಸ್ಸಿ ಮತ್ತು ದಶಾಶ್ವಮೇಧ ಘಾಟ್ ನಲ್ಲಿ ವೀಲ್ ಚೇರ್ ರ‍್ಯಾಂಪ್ ನಿರ್ಮಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಮೂರು ಕೋಟಿ ಬಜೆಟ್ ನಲ್ಲಿ ಅರ್ಧವನ್ನು ಉತ್ತರ ಪ್ರದೇಶ ಸರ್ಕಾರ ಬಿಡುಗಡೆ ಮಾಡಿದೆ. ವಾರಾಣಸಿಯ ಘಾಟ್ ಗಳ ಪೈಕಿ ಈ ಮೂರು ಘಾಟ್ ಗಳು ಹೆಚ್ಚು ಜನಸಂದಣಿಯಿಂದ ಕೂಡಿರುತ್ತೆ ಅಲ್ಲದೇ ಇಲ್ಲಿ ನಡೆಯುವ ಗಂಗಾರಾತಿ ನೋಡಲು ಜನರು ಬಯಸುತ್ತಾರೆ. ಆದರೆ ದೊಡ್ಡ ಪ್ರಮಾಣದಲ್ಲಿ ಹೆಚ್ಚು ಮೆಟ್ಟಿಲುಗಳು ಇರುವ ಕಾರಣ ಅಂಗವಿಕಲರಿಗೆ ವಿಶೇಷ ಚೇತನರಿಗೆ ಇದು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡಿರುವ ಸರ್ಕಾರ ಈ ಮೂರು ಘಾಟ್ ಗಳಲ್ಲಿ ಗಂಗಾರತಿ ನಡೆಯುವ ಸ್ಥಳಕ್ಕೆ ವೀಲ್ ಚೇರ್ ರ‍್ಯಾಂಪ್ ನಿರ್ಮಿಸಲು ಚಿಂತಿಸಿದೆ.

    ಸ್ಥಳೀಯ ಬಿಜೆಪಿ ನಾಯಕರ ಪ್ರಕಾರ ವಿಶೇಷ ಚೇತನರು ಗಂಗಾರತಿ ನೋಡಲು ಕಷ್ಟ ಪಡುವುದನ್ನು ಪ್ರಧಾನಿ ನರೇಂದ್ರ ಮೋದಿ ಗಮನಿಸಿದ್ದರಂತೆ. ಬಳಿಕ ವೀಲ್ ಚೇರ್ ರ‍್ಯಾಂಪ್ ನಿರ್ಮಿಸುವ ಈ ಕಾರ್ಯಕ್ಕೆ ಹೆಚ್ಚು ಆಸಕ್ತಿ ವಹಿಸಿದ್ದರು ಎನ್ನಲಾಗಿದ್ದು ಕೇಂದ್ರ ನೆರವಿನಲ್ಲಿ ಈ ಮೂರು ಘಾಟ್ ಗಳನ್ನು ಅಭಿವೃದ್ಧಿ ಪಡಿಸಲು ಸೂಚಿಸಲಾಗಿದೆಯಂತೆ. ಅಲ್ಲದೇ ಕುಡಿಯುವ ನೀರಿನ ಅರವಟಿಕೆ, ಶೌಚಾಲಯಗಳಲ್ಲಿ ಬ್ರೇನ್ ಲಿಪಿ ಅಳವಡಿಸಲು ಸೂಚಿಸಿಲಾಗಿದೆ.

    ವಾರಾಣಸಿಯಲ್ಲಿ ಈ ಮೂರು ಘಾಟ್‍ಗಳು ಅತಿಹೆಚ್ಚು ಜನ ಸಂದಣಿಯಿಂದ ಕೂಡಿದ್ದು, ಇಲ್ಲಿ ಅಂಗವಿಕಲರು ಮತ್ತು ವಿಶೇಷ ಚೇತನರು ಗಂಗಾರತಿ ನೋಡುವುದು ಕಠಿಣ, ಹೆಚ್ಚು ಮೆಟ್ಟಿಲುಗಳಿರುವುದರಿಂದ ವೀಕಲಚೇತನರಿಗೆ ಕಷ್ಟವಾಗುತ್ತಿದೆ ಎಂದು ವರದಿ ನೀಡಲಾಗಿತ್ತು. ಈ ವರದಿ ಆಧರಿಸಿ ಕೇಂದ್ರ ನೆರವಿನಲ್ಲಿ ರಾಜ್ಯ ಸರ್ಕಾರ ಕಾಮಗಾರಿ ಆರಂಭಿಸಲು ಮುಂದಾಗಿದೆ.

  • ಈರುಳ್ಳಿ ಹಾರ ಬದಲಿಸಿದ ವಧು, ವರರು

    ಈರುಳ್ಳಿ ಹಾರ ಬದಲಿಸಿದ ವಧು, ವರರು

    – ವಿಶೇಷ ಮದುವೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಯದ್ದೇ ಕಾರುಬಾರು

    ಲಕ್ನೋ: ದೇಶಾದ್ಯಂತ ಈರುಳ್ಳಿ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಲೇ ಇದೆ. ಸಾರ್ವಜನಿಕರು ಸಹ ಈರುಳ್ಳಿ ಬಂಗಾರಕ್ಕಿಂತಲೂ ಬೆಲೆ ಬಾಳುವಂತಹದ್ದು ಎಂದು ಭಾವಿಸಿ ಸಮಾರಂಭಗಳಲ್ಲಿ ಇದರದ್ದೇ ಹಾರ, ಆಭರಣಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

    ಈರುಳ್ಳಿ ಬಂಗಾರದಷ್ಟೇ ಅಮೂಲ್ಯವಾದದ್ದು ಎಂದು ಭಾವಿಸಿ, ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮದುವೆ ವೇಳೆ ದಂಪತಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾರಗಳನ್ನೇ ಬದಲಾಯಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ ಉಡುಗೊರೆ ನೀಡುವವರೂ ಸಹ ಹೂವಿನ ಬೊಕ್ಕೆಗಳನ್ನು ನೀಡುವ ಬದಲು ಈರುಳ್ಳಿ ಬುಟ್ಟಿಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಅಕ್ಷಯ್‍ರಿಂದ ಪತ್ನಿಗೆ ಈರುಳ್ಳಿ ಕಿವಿಯೋಲೆ ಗಿಫ್ಟ್

    ಈರುಳ್ಳಿ ಹಾಗೂ ತರಕಾರಿ ಬೆಲೆ ಹೆಚ್ಚಿರುವುದನ್ನು ಎತ್ತಿ ತೋರಿಸಲು ದಂಪತಿ ಈ ರೀತಿ ಮಾಡಿದ್ದು, ವಿಶೇಷವೆಂದರೆ ಮದುವೆಗೆ ಆಗಮಿಸಿದ ಸಂಬಂಧಿಕರು, ಕುಟುಂಬಸ್ಥರು ಸ್ನೇಹಿತರೂ ಈರುಳ್ಳಿ ಬುಟ್ಟಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಕಳೆದ 15 ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೆ ತಲುಪಿದ್ದು, ಹೀಗಾಗಿ ಜನತೆ ಈರುಳ್ಳಿಯನ್ನು ಚಿನ್ನದಷ್ಟೇ ಅಮೂಲ್ಯ ಎಂದು ಪರಿಗಣಿಸಿದ್ದಾರೆ. ಅದೇ ರೀತಿ ಮದುವೆ ಮನೆಗಳಲ್ಲಿ ಸಹ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಆಭರಣಗಳನ್ನೇ ಧರಿಸಿ ಗಮನ ಸೆಳೆಯುತ್ತಿದ್ದಾರೆ. ಈ ದಂಪತಿ ಸಹ ಇದೇ ರೀತಿ ಮಾಡಿದ್ದು, ಹಾರ, ಗಿಫ್ಟ್ ಎಲ್ಲವನ್ನೂ ಈರುಳ್ಳಿ ಮಯವಾಗಿಸಿದ್ದಾರೆ.

    ದೇಶದ ಬಹುತೇಕ ಭಾಗಗಳಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 100-150 ರೂ.ಗೆ ತಲುಪಿದೆ. ಬೆಲೆಯ ಕುರಿತು ತಿಳಿಸಲು ಜನತೆ ವಿವಿಧ ರೀತಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ತಮಿಳುನಾಡಿಲ್ಲಿ ಸಹ ಇದೇ ರೀತಿಯ ಘಟನೆ ನಡೆದಿತ್ತು. ಮದುವೆಗೆ ತೆರಳಿದ್ದ ಸ್ನೇಹಿತರು ಈರಳ್ಳಿ ಬಕೆಟ್ ಉಡುಗೊರೆ ನೀಡುವ ಮೂಲಕ ವಿಭಿನ್ನ ಉಡುಗೊರೆ ನೀಡಿದ್ದರು. 2.5 ಕೆ.ಜಿ.ಈರುಳ್ಳಿ ನೀಡುವ ಮೂಲಕ ಮದುವೆಯಲ್ಲಿ ನೆರೆದಿದ್ದ ಜನರ ಗಮನ ಸೆಳೆದಿದ್ದರು. ಅಲ್ಲದೆ ತಮಿಳು ನಾಡಿನಲ್ಲಿ ಇನ್ನೂ ಕೆಲವೆಡೆ ಹಲವು ವ್ಯಾಪಾರಿಗಳು ಸರಕು ಕೊಂಡರೆ 1 ಕೆ.ಜಿ. ಈರುಳ್ಳಿ ಉಚಿತ ಎಂದು ಆಫರ್ ನೀಡಿದ್ದರು.

  • ಯೋಧರಿಗಾಗಿ ‘ಐರನ್ ಮ್ಯಾನ್’ ಸೂಟ್ ತಯಾರಿಸಿದ ದೇಶಭಕ್ತ

    ಯೋಧರಿಗಾಗಿ ‘ಐರನ್ ಮ್ಯಾನ್’ ಸೂಟ್ ತಯಾರಿಸಿದ ದೇಶಭಕ್ತ

    ಲಕ್ನೋ: ಯೋಧರೆಂದರೆ ಎಲ್ಲರಿಗೂ ವಿಶೇಷ ಗೌರವಿರುತ್ತದೆ. ದೇಶವಾಸಿಗಳಿಗಾಗಿ, ದೇಶಕ್ಕಾಗಿ ಶತ್ರುಗಳೊಂದಿಗೆ ಹೋರಾಡಿ ಜೀವತ್ಯಾಗ ಮಾಡುವ ಯೋಧರಿಗಾಗಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಗುಂಡೇಟನ್ನು ತಡೆಯಬಲ್ಲ ವಿಶೇಷ ‘ಐರನ್ ಮ್ಯಾನ್’ ಸೂಟ್ ತಯಾರಿಸಿದ್ದಾರೆ.

    ವಾರಣಾಸಿಯ ಶಾಮ್ ಚೌರಾಸಿಯಾ ಅವರು ಈ ಐರನ್ ಮ್ಯಾನ್ ಸೂಟನ್ನು ಯೋಧರಿಗಾಗಿ ತಯಾರಿಸಿದ್ದಾರೆ. ಶಾಮ್ ಅವರು ಅಶೋಕ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ಆ್ಯಂಡ್ ಮ್ಯಾನೇಜ್ಮೆಂಟ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಭಾರತೀಯ ಸೇನೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಸೂಟ್ ತಯಾರು ಮಾಡಿದ್ದಾರೆ. ಯೋಧರು ದೇಶದ ಸೂಪರ್ ಹೀರೋಗಳು ಎಂದು ವಿಶೇಷ ರೀತಿಯಲ್ಲಿ ಪ್ರೀತಿ ಮೆರೆದಿದ್ದಾರೆ. ಇದನ್ನೂ ಓದಿ:ಸ್ವದೇಶಿ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿ- ವಿಶೇಷತೆ ಏನು? ಬೆಲೆ ಎಷ್ಟು?

    ಈ ಐರನ್ ಮ್ಯಾನ್ ಸೂಟ್ ಲೋಹದಿಂದ ತಯಾರಿಸಿದ ಕವಚವಾಗಿದ್ದು, ಇದು ಭಾರತೀಯ ಯೋಧರನ್ನು ಭಯೋತ್ಪಾದಕರು ಹಾಗೂ ಶತ್ರುಗಳಿಂದ ರಕ್ಷಿಸಲಿದೆ. ಸದ್ಯ ಶ್ಯಾಮ್ ಅವರು ಡೆಮೋ ಪೀಸ್ ತಯಾರಿಸಿದ್ದಾರೆ. ಇದು ಟಿನ್‍ನಿಂದ ಮಾಡಲಾಗಿದೆ. ಈ ಕವಚ ಯುದ್ಧದ ಸಂದರ್ಭದಲ್ಲಿ ಯೋಧರಿಗೆ ಬಹಳ ಸಹಾಯವಾಗಲಿದೆ. ಇದರಲ್ಲಿ ಗೇರ್ಸ್ ಹಾಗೂ ಮೋಟರ್ ಗಳನ್ನು ಅಳವಡಿಸಲಾಗಿದೆ. ಅಲ್ಲದೇ ಇದರಲ್ಲೊಂದು ಮೊಬೈಲ್ ಕನೆಕ್ಷನ್, ಸೆನ್ಸರ್ ಗಳನ್ನೂ ಅಳವಡಿಸಲಾಗಿದೆ. ಈ ಸೆನ್ಸರ್ ಶತ್ರುಗಳು ದಾಳಿ ನಡೆಸುವ ಮುನ್ನ ಯೋಧರನ್ನು ಎಚ್ಚರಿಸುತ್ತದೆ ಎಂದು ಶ್ಯಾಮ್ ತಿಳಿಸಿದ್ದಾರೆ.

    ಸದ್ಯ ನಾನು ಡೆಮೋ ಪೀಸ್ ತಯಾರಿಸಿದ್ದೇನೆ. ಹಣ ಅಭಾವ ಇರುವುದರಿಂದ ಇದನ್ನು ಅಭಿವೃದ್ಧಿಗೊಳಿಸಲು ಕೊಂಚ ಸಮಯವಾಗುತ್ತಿದೆ. ಆದರೆ ನಾನು ಯೋಧರಿಗಾಗಿ ಐರನ್ ಮ್ಯಾನ್ ಸೂಟನ್ನು ಇನ್ನಷ್ಟು ಅಭಿವೃದ್ಧಿಗೊಳಿಸುತ್ತೇನೆ. ಹಾಲಿವುಡ್ ಚಿತ್ರಗಳಲ್ಲಿ ಐರನ್ ಮ್ಯಾನ್ ನೋಡಿ ನನಗೆ ಈ ಐಡಿಯಾ ಬಂತು. ಇದು ನಮ್ಮ ದೇಶ ಕಾಯುವ ಹೆಮ್ಮೆಯ ಯೋಧರಿಗಾಗಿ ನನ್ನದೊಂದು ಪುಟ್ಟ ಪ್ರಯತ್ನ ಎಂದು ಶ್ಯಾಮ್ ಹೇಳಿದ್ದಾರೆ.

    ಶತ್ರುನಾಶಕ್ಕೆ ಇದು ಸಹಾಯಕಾರಿ, ಯೋಧರ ಶಕ್ತಿಯನ್ನು ಇದು ಮತ್ತಷ್ಟು ಹೆಚ್ಚಿಸುತ್ತದೆ. ಹೀಗಾಗಿ ಸರ್ಕಾರಿ ಏಜೆನ್ಸಿ ಈ ಬಗ್ಗೆ ಗಮನವಹಿಸಬೇಕು. ಯೋಧರಿಗಾಗಿ ಇವುಗಳನ್ನು ತಯಾರಿಸಲು ಯೋಜನೆ ಹಾಕಿಕೊಳ್ಳಬೇಕು ಎಂದು ಡಿಆರ್‌ಡಿಒ ಹಾಗೂ ಇತರೆ ಸರ್ಕಾರಿ ಏಜೆನ್ಸಿ ಬಳಿ ವಿನಂತಿಸಿದ್ದಾರೆ.

    https://twitter.com/MohitMohit114/status/1196650627968970752

  • ಹಬ್ಬದ ಸಂದರ್ಭದಲ್ಲಿ ನಮಗಾಗಿ ಸೇವೆ ಸಲ್ಲಿಸ್ತಿರೋರನ್ನು ನೆನೆಯಿರಿ- ಮೋದಿ

    ಹಬ್ಬದ ಸಂದರ್ಭದಲ್ಲಿ ನಮಗಾಗಿ ಸೇವೆ ಸಲ್ಲಿಸ್ತಿರೋರನ್ನು ನೆನೆಯಿರಿ- ಮೋದಿ

    ನವದೆಹಲಿ: ಎಲ್ಲರೂ ನಮ್ಮ ಕುಟುಂಬದವರೊಂದಿಗೆ ದೀಪಾವಳಿ ಆಚರಿಸುತ್ತಿದ್ದೇವೆ. ಈ ಸಂದರ್ಭಲ್ಲಿ ನಮಗಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಶುಭಾಶಯ ಕೋರುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

    ವಾರಣಾಸಿಯ ಬಿಜೆಪಿ ಕಾರ್ಯಕರ್ತರೊಂದಿಗಿನ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಮಾತನಾಡಿದ ಅವರು, ಗಡಿಯಲ್ಲಿ ಹಾಗೂ ದೇಶದೊಳಗಿರುವ ಸೈನಿಕರು, ಭದ್ರತಾ ಸಿಬ್ಬಂದಿ, ಪೊಲೀಸರು ಹಾಗೂ ಎನ್‍ಡಿಆರ್‍ಎಫ್ ಕಾರ್ಯನಿರ್ವಹಿಸುತ್ತಿರುವವರಿಗೆ ಹಬ್ಬದ ಶುಭಾಶಯವನ್ನು ತಿಳಿಸಿದರು.

    ಸದಾ ನಮ್ಮೊಂದಿಗಿರುವ ಕಾರ್ಯಕರ್ತರಿಗೆ ದೀಪಾವಳಿಯ ಸಂದರ್ಭದಲ್ಲಿ ಧನ್ಯವಾದ ಅರ್ಪಿಸುತ್ತೇನೆ. ಪರಿಶ್ರಮ, ತ್ಯಾಗ, ನಿಷ್ಟೆ, ಸೇವಾ ಭಾವಕ್ಕೆ ಆದರಪೂರ್ವಕವಾಗಿ ನಮನ ಸಲ್ಲಿಸುತ್ತೇನೆ ಎಂದು ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.

    ಈ ಬಾರಿ ಮಳೆಯಿಂದ ಜನ ಕಂಗೆಟ್ಟಿದ್ದಾರೆ. ದೀಪಾವಳಿಯ ಸಂದರ್ಭದಲ್ಲಿ ಈಗಲು ಕೂಡ ಮಳೆ ಬರುತ್ತಿದೆ. ಕಾಶಿಯಲ್ಲೂ ಇದೆ ಪರಿಸ್ಥಿತಿ ಇದೆ. ಎಲ್ಲರೂ ಸೇರಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ನಾಗರಿಕರು, ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಜನರೊಂದಿಗೆ ನಾವೂ ಇರಬೇಕಿದೆ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

    ಜನಸಂಘದಿಂದಲೂ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದೀರಿ. ಚುನಾವಣೆಯ ಸಂದರ್ಭದಲ್ಲಿ ಹಗಲು, ರಾತ್ರಿ ಎನ್ನದೆ ದುಡಿದು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೀರಿ. ಅಲ್ಲದೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ವಾರಣಾಸಿಯಲ್ಲಿ ತುಂಬಾ ಕೆಲಸ ಮಾಡಿದ್ದೀರಿ. ಇದು ನನಗೆ ಸಂತೃಪ್ತಿ ತಂದಿದೆ. ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.

  • ನಮೋ ಹುಟ್ಟುಹಬ್ಬಕ್ಕೆ ಹನುಮನಿಗೆ 1.25 ಕೆಜಿ ತೂಕದ ಚಿನ್ನದ ಕಿರೀಟ ನೀಡಿದ ಅಭಿಮಾನಿ

    ನಮೋ ಹುಟ್ಟುಹಬ್ಬಕ್ಕೆ ಹನುಮನಿಗೆ 1.25 ಕೆಜಿ ತೂಕದ ಚಿನ್ನದ ಕಿರೀಟ ನೀಡಿದ ಅಭಿಮಾನಿ

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ 69ನೇ ಹುಟ್ಟುಹಬ್ಬ ಆಚರಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬರು ವಾರಣಾಸಿಯ ಸಂಕಟ ಮೋಚನ ದೇಗುಲದ ಹನುಮನಿಗೆ ಬರೋಬ್ಬರಿ 1.25 ಕೆಜಿ ತೂಕದ ಚಿನ್ನದ ಕಿರೀಟ ಕೊಟ್ಟು ಮೋದಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದಾರೆ.

    ವಾರಣಾಸಿ ನಿವಾಸಿ ಅರವಿಂದ್ ಸಿಂಗ್ ಅವರು ಮೋದಿ ಅವರ ಕಟ್ಟಾ ಅಭಿಮಾನಿ. ಆದ್ದರಿಂದ ಮೋದಿ ಅವರು ವಾರಣಾಸಿಯಿಂದ ಲೋಕಸಭಾ ಚುನಾವಣೆಗೆ ನಿಂತಾಗ ಗೆಲ್ಲಲಿ ಎಂದು ದೇವರಲ್ಲಿ ಹರಕೆ ಹೊತ್ತಿದ್ದರು. ಅಲ್ಲದೆ ಮೋದಿ ಅವರ ಜೊತೆ ಬಿಜೆಪಿ ಕೂಡ ಗೆದ್ದು, ಎರಡನೇ ಬಾರಿ ಅವರು ಪ್ರಧಾನಿ ಆಗಬೇಕು ಎಂದು ದೇವರಲ್ಲಿ ಬೇಡಿಕೊಂಡಿದ್ದರು. ಅಲ್ಲದೆ ಮೋದಿ ಅವರು ಎರಡನೇ ಬಾರಿ ಗೆದ್ದು, ಪ್ರಧಾನಿ ಪಟ್ಟ ಏರಿದರೆ ಬರೋಬ್ಬರಿ 1.25 ಕೆಜಿ ತೂಕದ ಚಿನ್ನದ ಕಿರೀಟ ಮಾಡಿಸಿ ಹನುಮನಿಗೆ ಅರ್ಪಿಸುವುದಾಗಿ ಹರಕೆ ಹೊತ್ತಿದ್ದರು. ಇದನ್ನೂ ಓದಿ:ಸ್ಪಚ್ಛತಾ ಅಭಿಯಾನ ನಡೆಸಿ ‘ನಮೋ’ಗೆ ಶುಭಕೋರಿದ ಈಶ್ವರಪ್ಪ

    ಅಭಿಮಾನಿ ಆಸೆಯಂತೆ ಮೋದಿ ಅವರು ಚುನಾವಣೆಯಲ್ಲಿ ಜಯಭೇರಿ ಭಾರಿಸಿ, ಎರಡನೇ ಬಾರಿ ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸಿದರು. ಆದ್ದರಿಂದ ಮೋದಿ ಅವರ ಹುಟ್ಟುಹಬ್ಬದ ಹಿಂದಿನ ದಿನ ತಮ್ಮ ಹರಕೆ ತೀರಿಸಲು ಅರವಿಂದ್ ನಿರ್ಧರಿಸಿದ್ದರು. ಅದರಂತೆ ಸೋಮವಾರ ಸಂಕಟ ಮೋಚನ ದೇಗುಲಕ್ಕೆ ಬಂದು ಹನುಮನಿಗೆ ಚಿನ್ನದ ಕಿರೀಟ ಸಮರ್ಪಿಸಿದ್ದಾರೆ. ಈ ಮೂಲಕ ಮೋದಿ ಅವರಿಗೆ ಶುಭವಾಗಲಿ, ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಅಭಿಮಾನ ಮೆರೆದಿದ್ದಾರೆ. ಇದನ್ನೂ ಓದಿ:ಚಾಮುಂಡಿ ಬೆಟ್ಟದಲ್ಲಿ ಮೋದಿ, ಯಡಿಯೂರಪ್ಪ, ಬಿಜೆಪಿ ಹೆಸರಿನಲ್ಲಿ ಜಿಟಿಡಿ ಅರ್ಚನೆ

    ಈ ಬಗ್ಗೆ ಮಾತನಾಡಿ ಖುಷಿಯನ್ನು ಹಂಚಿಕೊಂಡ ಅರವಿಂದ್ ಅವರು, ಮೋದಿ ಅವರಿಗಾಗಿ ಹರಕೆ ಕಟ್ಟಿಕೊಂಡಿದ್ದೆ. ಅದನ್ನು ದೇವರು ನೆರವೇರಿಸಿದ್ದಾನೆ. ಆದ್ದರಿಂದ ದೇವರಿಗೆ ಚಿನ್ನದ ಕಿರೀಟ ಕೊಟ್ಟಿದ್ದೇನೆ ಎಂದರು. ಕಳೆದ 75 ವರ್ಷದಲ್ಲಿ ಭಾರತ ಕಾಣದ ಅಭಿವೃದ್ಧಿಯನ್ನು ಮೋದಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ್ದಾರೆ, ಮಾಡುತ್ತಿದ್ದಾರೆ. ಆದ್ದರಿಂದ ಮೋದಿ ಅವರ ಹುಟ್ಟುಹಬ್ಬದ ಹಿಂದಿನ ದಿನ ದೇವರಿಗೆ ಚಿನ್ನದ ಕಿರೀಟ ನೀಡಲು ನಿರ್ಧರಿಸಿದೆ. ಚಿನ್ನದಂತೆ ಮೋದಿ ಹಾಗೂ ಭಾರತದ ಭವಿಷ್ಯ ಹೊಳೆಯಲಿ. ಇದು ಕಾಶಿ ಜನತೆಯ ಪರವಾಗಿ ನಾನು ಮೋದಿ ಅವರಿಗೆ ನೀಡುತ್ತಿರುವ ಉಡುಗೊರೆ ಎಂದು ಹೇಳಿದ್ದಾರೆ.

    ಸೋಮವಾರ ತಡರಾತ್ರಿಯೇ ಮೋದಿ ಅವರು ಅಹಮದಾಬಾದ್‍ಗೆ ಆಗಮಿಸಿದ್ದರು. ಗುಜರಾತ್ ರಾಜ್ಯಪಾಲ ಆಚಾರ್ಯ ದೇವರಾತ್ ಹಾಗೂ ಅಲ್ಲಿನ ಸಿಎಂ ವಿಜಯ್ ರೂಪಾನಿ ಅವರು ಪ್ರಧಾನಿ ಅವರನ್ನು ವಿಮಾನ ನಿಲ್ದಾಣದಲ್ಲಿ ಭರಮಾಡಿಕೊಂಡರು. ಮೋದಿ ಅವರು ಇಂದು ಹುಟ್ಟುಹಬ್ಬದ ಪ್ರಯುಕ್ತ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಜೊತೆಗೆ ನರ್ಮದಾ ನದಿಯ ಯೋಜನೆ ಕಾರ್ಯಕ್ರಮಗಳನ್ನು ಪರಿಶೀಲಿಸಲಿದ್ದಾರೆ.

    ನಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಬಿಜೆಪಿ ನಾಯಕರು ಹಾಗೂ ಅಭಿಮಾನಿಗಳು ಸಡಗರ ಸಂಭ್ರಮದಿಂದ ದೇಶದೆಲ್ಲೆಡೆ ಆಚರಿಸುತ್ತಿದ್ದಾರೆ. ನಮೋ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ‘ಸೇವಾ ಸಂಪ್ತಾಹ’ ಕಾರ್ಯಕ್ರಮವನ್ನು ಸೆ. 14 ರಿಂದ 20ರವರೆಗೆ ಆಯೋಜಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಹಲವು ಸಾಮಾಜಮುಖಿ ಕೆಲಸವನ್ನು ಮಾಡುತ್ತಿದ್ದಾರೆ.

  • ಮೋದಿ ನಮಗೆ ಹಿರಿಯಣ್ಣ- ಪ್ರಧಾನಿಗೆ ವಿಶೇಷ ರಾಖಿ ಕಳಿಸಿದ ಮುಸ್ಲಿಂ ಮಹಿಳೆಯರು

    ಮೋದಿ ನಮಗೆ ಹಿರಿಯಣ್ಣ- ಪ್ರಧಾನಿಗೆ ವಿಶೇಷ ರಾಖಿ ಕಳಿಸಿದ ಮುಸ್ಲಿಂ ಮಹಿಳೆಯರು

    ವಾರಣಾಸಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಸ್ಲಿಂ ಮಹಿಳೆಯರು ತಮ್ಮ ಕೈಯಿಂದಲೇ ತಯಾರಿಸಿದ ವಿಶೇಷ ರಾಖಿಯೊಂದನ್ನು ರಕ್ಷಾಬಂಧನ್‍ಗೆ ಕಳುಹಿಸಿಕೊಟ್ಟಿದ್ದಾರೆ.

    ವಾರಣಾಸಿ ಕ್ಷೇತ್ರದ ಸಂಸದರು ಆಗಿರುವ ಮೋದಿ ಅವರಿಗೆ ಇದೇ ನಗರದ ರಾಂಪುರದ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ನಿಷೇಧ ಮಾಡಿದ್ದಕ್ಕೆ ಸಂತೋಷ ಪಟ್ಟು, ಮೋದಿ ನಮ್ಮೆಲ್ಲರ ಹಿರಿಯ ಸಹೋದರ ಎಂದು ರಾಖಿಯನ್ನು ಕಳುಹಿಸಿಕೊಟ್ಟಿದ್ದಾರೆ.

    ಈ ವಿಚಾರದ ಬಗ್ಗೆ ಖುಷಿಯಿಂದ ಮಾತನಾಡಿರುವ ಹುಮಾ ಬಾನೊ ಎಂಬ ಮುಸ್ಲಿಂ ಮಹಿಳೆ, ತ್ರಿವಳಿ ತಲಾಖ್ ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ತ್ರಿವಳಿ ತಲಾಖ್ ಎಂಬ ದುಷ್ಟ ನೀತಿಯನ್ನು ಅಂತ್ಯ ಮಾಡಿದ ಮೋದಿ ಅವರು ನಮಗೆ ಹಿರಿಯ ಅಣ್ಣನಂತೆ. ಆದ್ದರಿಂದ ಅವರಿಗೆ ನಮ್ಮ ಕೈಯಿಂದ ಮಾಡಿದ ರಾಖಿಯನ್ನು ಕಳುಹಿಸುತ್ತಿದ್ದೇವೆ. ದೇಶದ ಎಲ್ಲಾ ಮುಸ್ಲಿಂ ಮಹಿಳೆಯರಿಗೆ ಮೋದಿ ಹಿರಿಯ ಸಹೋದರನಂತೆ ಎಂದು ಹೇಳಿದ್ದಾರೆ.

    ಇದನ್ನು “ಪ್ರಚಾರ”ಕ್ಕಾಗಿ ಮಾಡಿರುವುದು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಲೇವಡಿ ಮಾಡಿದೆ. ಇದರ ಬಗ್ಗೆ ಮಾತನಾಡಿರುವ ಐಯುಎಂಎಲ್‍ನ ರಾಜ್ಯ ಅಧ್ಯಕ್ಷ ಮತಿನ್ ಖಾನ್, “ಆರ್‍ಎಸ್‍ಎಸ್‍ನ ಮುಸ್ಲಿಂ ಅಂಗಸಂಸ್ಥೆ ಈ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿದೆ. ಇದನ್ನು ಮಾಡಲು ಅವರು ಮುಸ್ಲಿಮರನ್ನು ನೇಮಿಸಿಕೊಂಡಿದ್ದಾರೆ. ಅಧಿಕಾರದಲ್ಲಿವವರು ಜನರ ಮೇಲೆ ಒತ್ತಡ ಹಾಕಿ ಮಾಡಿಸಲಾಗುತ್ತದೆ. ಸರ್ಕಾರದ ಪ್ರಚಾರಕ್ಕಾಗಿ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

  • ರಂಜಾನ್ ಹಬ್ಬಕ್ಕೆ ಮುಸ್ಲಿಂ ಬಾಂಧವರಿಗೆ ಶ್ಯಾವಿಗೆ ಸಿದ್ಧಪಡಿಸಿದ ಹಿಂದೂ ಕುಟುಂಬ

    ರಂಜಾನ್ ಹಬ್ಬಕ್ಕೆ ಮುಸ್ಲಿಂ ಬಾಂಧವರಿಗೆ ಶ್ಯಾವಿಗೆ ಸಿದ್ಧಪಡಿಸಿದ ಹಿಂದೂ ಕುಟುಂಬ

    ನವದೆಹಲಿ: ಕೋಮು ಸೌಹಾರ್ದತೆಗೆ ನಿದರ್ಶನ ಎನ್ನುವಂತೆ ಈಗ ವಾರಣಾಸಿಯಲ್ಲಿ ಹಿಂದೂ ಕುಟುಂಬವೊಂದು ಮುಸ್ಲಿಂ ಬಾಂಧವರಿಗಾಗಿ ರಂಜಾನ್ ಹಬ್ಬಕ್ಕೆ ಶ್ಯಾವಿಗೆ ಸಿದ್ಧಪಡಿಸುವ ಕಾಯಕದಲ್ಲಿ ತೊಡಗಿದ್ದು ಎಲ್ಲರ ಮನ ಗೆದ್ದಿದೆ.

    ರಂಜಾನ್ ಹಬ್ಬದ ಪ್ರಯುಕ್ತ ಕೊನೆಯ ದಿನ ಮುಸ್ಲಿಮರು ಶೀರ ಕುರ್ಮಾವನ್ನು ಸೇವಿಸುವ ಮೂಲಕ ತಮ್ಮ ಉಪವಾಸವನ್ನು ಕೊನೆ ಮಾಡುತ್ತಾರೆ. ಹೀಗಾಗಿ ವಾರಣಾಸಿಯ ಉರಿಯುವ ಬಿಸಿಲಿನಲ್ಲಿಯೂ ಕೂಡ ಹಿಂದೂ ಕುಟುಂಬವೊಂದು ಶ್ಯಾವಿಗೆಯನ್ನು ಒಣಗಿಸುವಲ್ಲಿ ಬ್ಯುಸಿಯಾಗಿದೆ. ಈ ಶ್ಯಾವಿಗೆಯನ್ನು ಮುಖ್ಯವಾಗಿ ಮುಸ್ಲಿಂ ಬಾಂಧವರಿಗಾಗಿಯೇ ತಯಾರಿಸಲಾಗುತ್ತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಪ್ರತಿ ರಂಜಾನ್ ಹಬ್ಬದ ಸಮಯದಲ್ಲಿ ರುಮಾನಿ ಶ್ಯಾವಿಗೆಯನ್ನು ಮುಸ್ಲಿಂ ಗ್ರಾಹಕರು ಬಹಳ ಇಷ್ಟ ಪಟ್ಟು ಖರೀದಿಸುತ್ತಾರೆ. ನಾವು ಈಗ ಮೂರು ಪ್ರಕಾರದ ಶ್ಯಾವಿಗೆಯನ್ನು ತಯಾರಿಸುತ್ತೇವೆ. ಅವುಗಳು ಗಾತ್ರದಲ್ಲಿ ವಿಭಿನ್ನವಾಗಿವೆ. ರಂಜಾನ್ ಹಬ್ಬದ ಮೂರು ತಿಂಗಳ ಮೊದಲೇ ನಾವು ಶ್ಯಾವಿಗೆಯನ್ನು ತಯಾರಿಸುತ್ತಿದ್ದೇವೆ. ಮುಸ್ಲಿಂ ಸಹೋದರು ನಮ್ಮಲ್ಲಿ ಬಂದು ಇವುಗಳನ್ನು ಖರೀದಿಸುತ್ತಾರೆ. ನಾವು ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವುದಿಲ್ಲ. ಮುಸ್ಲಿಂ ಗ್ರಾಹಕರ ಜೊತೆ ನಮಗೆ ಒಳ್ಳೆಯ ಸಂಬಂಧವಿದೆ. ನಮ್ಮ ಉತ್ಪನ್ನಗಳನ್ನು ಇತರ ದೇಶಗಳಿಗೆ ಕೂಡ ರಫ್ತು ಮಾಡುತ್ತೇವೆ ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ.

    ಕಳೆದ ವಾರ ಬಿಹಾರ್ ದರ್ಭಾಂಗ್ ನಲ್ಲಿ ಮುಸ್ಲಿಂ ಯುವಕ ಮೊಹಮ್ಮದ್ ಅಶ್ಫಾಕ್ 2 ವರ್ಷದ ಮಗುವಿನ ಜೀವವನ್ನು ಉಳಿಸುವುದಕ್ಕಾಗಿ ತನ್ನ ರಂಜಾನ್ ಉಪವಾಸವನ್ನು ಮುರಿದು ರಕ್ತದಾನವನ್ನು ಮಾಡಿ ಮಾನವೀಯತೆ ಮೆರೆದಿದ್ದರು.

  • ಮೋದಿ ಆಧುನಿಕ ಔರಂಗಜೇಬ್: ಸಂಜಯ್ ನಿರುಪಮ್

    ಮೋದಿ ಆಧುನಿಕ ಔರಂಗಜೇಬ್: ಸಂಜಯ್ ನಿರುಪಮ್

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಆಧುನಿಕ ಔರಂಗಜೇಬ್ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸಂಜಯ್ ನಿರುಪಮ್ ಹೇಳಿದ್ದಾರೆ.

    ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಕಾರಿಡಾರ್ ಯೋಜನೆಗಾಗಿ ನಗರದಲ್ಲಿದ್ದ ನೂರಾರು ದೇವಸ್ಥಾನಗಳನ್ನು ನಾಶ ಮಾಡಿದ್ದಾರೆ. ಮೊಘಲ್ ಚಕ್ರವರ್ತಿ ಔರಂಗಜೇಬ್ ಕೂಡ ಅನೇಕ ಹಿಂದೂ ದೇವಸ್ಥಾನಗಳನ್ನು ನಾಶ ಮಾಡಿದ್ದ. ಈ ಹಿಂದೆ ಔರಂಗಜೇಬ್ ಮಾಡಿದ್ದನ್ನು ಮೋದಿ ಈಗ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಬಾಬಾ ವಿಶ್ವನಾಥ ದೇವಸ್ಥಾನ ಪ್ರವೇಶಕ್ಕೆ ಹಾಗೂ ದೇವರ ದರ್ಶನ ಪಡೆಯಲು 500 ರೂ. ಶುಲ್ಕ ನಿಗದಿ ಮಾಡಿದ್ದಾರೆ. ಔರಂಗಜೇಬ್ ಮಾಡದೇ ಇರುವುದನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ. ಹಿಂದೂಗಳ ಮೇಲೆ ಔರಂಗಜೇಬ್ ದರ್ಪ ಮೆರೆದ, ಶೋಷಣೆ ಮಾಡಿದ. ಈಗ ಅದನ್ನು ಮೋದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಪ್ರಧಾನಿ ಮೋದಿ ದುರ್ಯೋಧನ ಇದ್ದಂತೆ ಎಂದು ಉತ್ತರ ಪ್ರದೇಶ ಪೂರ್ವದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ನಿನ್ನೆಯಷ್ಟೇ ಹೇಳಿದ್ದರು. ಹರ್ಯಾಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ್ದ ಅವರು, ಭಾರತದ ನೆಲದಲ್ಲಿ ಅಹಂಕಾರದಿಂದ ನಡೆದುಕೊಳ್ಳುವ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯಾಗಿದೆ. ಮಹಾಭಾರತದಲ್ಲಿ ದುರ್ಯೋಧನ ಅಹಂಕಾರದಿಂದ ನಡೆದುಕೊಂಡ. ಕೃಷ್ಣ ಸಂಧಾನಕ್ಕೆ ಬಂದರೂ ಒಪ್ಪಲಿಲ್ಲ. ಕೊನೆಗೆ ದುರ್ಯೋಧನ ನಾಶವಾಗಿ ಹೋದ. ದುರ್ಯೋಧನ ರೀತಿಯಲ್ಲಿಯೇ ಮೋದಿಯವರು ಕೂಡ ಅಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.