Tag: Vanilla

  • ಈ ವಾರ ಥೇಟರುಗಳನ್ನು ಆವರಿಸಿಕೊಳ್ಳಲಿದೆ ‘ವೆನಿಲ್ಲಾ’ ಫ್ಲೇವರ್!

    ಈ ವಾರ ಥೇಟರುಗಳನ್ನು ಆವರಿಸಿಕೊಳ್ಳಲಿದೆ ‘ವೆನಿಲ್ಲಾ’ ಫ್ಲೇವರ್!

    ಬೆಂಗಳೂರು: ವೆನಿಲ್ಲಾ ಅಂದಾಕ್ಷಣ ಬಹುತೇಕರಿಗೆ ನೆನಪಾಗೋದು ಐಸ್‍ಕ್ರೀಮು. ಅಂಥಾ ನಯವಾದ ಹೆಸರಿನ ಸುತ್ತಾ ಅಪ್ಪಟ ಸಸ್ಪೆನ್ಸ್ ಥ್ರಿಲ್ಲರ್ ಮರ್ಡರ್ ಮಿಸ್ಟರಿಯ ಕಥೆ ಅನಾವರಣಗೊಳ್ಳುತ್ತದೆ ಎಂದಾದರೆ ಖಂಡಿತಾ ಆ ಬಗೆಗೊಂದು ಕುತೂಹಲ ಹುಟ್ಟಿಕೊಳ್ಳುತ್ತದೆ. ಈಗಾಗಲೇ ಹಲವು ಕಾರಣಗಳಿಂದ ಕ್ಯೂರಿಯಾಸಿಟಿಗೆ ಕಾರಣವಾಗಿರುವ ‘ವೆನಿಲ್ಲಾ’ ಈ ವಾರ ರಾಜ್ಯಾದ್ಯಂತ ತೆರೆ ಕಾಣಲಿದೆ.

    ಅವಿನಾಶ್ ಮೊದಲ ಬಾರಿಗೆ ವೆನಿಲ್ಲಾ ಚಿತ್ರದ ಮೂಲಕ ನಾಯಕನಾಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಅವಿನಾಶ್‍ಗೆ ನಾಯಕಿಯಾಗಿ ಸ್ವಾತಿ ಬಣ್ಣ ಹಚ್ಚಿದ್ದಾರೆ. ವೆನಿಲ್ಲಾ ಚಿತ್ರದ ಕಥೆ ಏನೆಂಬವುದು ಸಿನಿಮಾ ಸೆಟ್ಟೇರಿದಾಗಿನಿಂದಲೂ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆ. ನಯವಾದ, ನಾಲಗೆಗೆ ಹಿತವೆನಿಸುವ ವೆನಿಲ್ಲ ಚಿತ್ರದ ಕಥೆಗೆ ಮರ್ಡರ್ ಮಿಸ್ಟರಿಯ ಫ್ಲೇವರ್ ಅಂಟಿಕೊಂಡಿರುವುದೇ ಈ ಚಿತ್ರದ ಅಸಲೀ ವೈಶಿಷ್ಟ್ಯ.

    ಬ್ಯೂಟಿಫುಲ್ ಮನಸುಗಳು ಚಿತ್ರದ ಯಶಸ್ಸಿನಲ್ಲಿರುವ ನಿರ್ದೇಶಕ ಜಯತೀರ್ಥ ವೆನಿಲ್ಲಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಅನ್ನುವ ನಿರೀಕ್ಷೆಯಲ್ಲಿದ್ದಾರೆ. ಜಯತೀರ್ಥ ಹೊಸೆದಿರುವ ಈ ಥ್ರಿಲ್ಲರ್ ಕಥಾನಕವನ್ನು ಕಣ್ತುಂಬಿಕೊಳ್ಳಲು ಇನ್ನೊಂದು ದಿನವಷ್ಟೇ ಬಾಕಿ ಉಳಿದುಕೊಂಡಿದೆ.

    ಒಂದು ಮರ್ಡರ್, ಒಂದು ಭಯಾನಕ ರೋಗ ಮತ್ತು ಎಂಥಾ ಕಾಯಿಲೆಗಳನ್ನೂ ವಾಸಿ ಮಾಡಬಲ್ಲ ಪ್ರಾಂಜಲ ಪ್ರೀತಿಯ ಸುತ್ತಾ ಸುತ್ತುವ ಈ ಕಥೆಯಲ್ಲಿ ನಾಯಕ ಮತ್ತು ನಾಯಕಿ ಬಾಲ್ಯ ಸ್ನೇಹಿತರು. ಈ ನಡುವೆ ನಾಯಕಿಯ ಕಡೆಯಿಂದ ಅಚಾನಕ್ಕಾಗುವ ಒಂದು ಆಕ್ಸಿಡೆಂಟ್, ಅದಕ್ಕೆ ತಲೆ ಕೊಟ್ಟು ಸೆಣೆಸಾಡುವ ಹೀರೋ. ಇದ್ದಕ್ಕಿದ್ದಂತೆ ನಾಪತ್ತೆಯಾಗೋ ನಾಯಕಿಗೆ ಅಪರೂಪದಲ್ಲೇ ಅಪರೂಪವಾದ ಮಾರಣಾಂತಿಕ ಅಡೇನೋ ಕಾಪ್ನೋಫೋಬಿಯಾ ಕಾಯಿಲೆ… ಇಂಥಾ ಭಿನ್ನವಾದ ಕಥಾ ಹಂದರ ಪ್ರೇಕ್ಷಕರನ್ನು ಸೆಳೆದುಕೊಳ್ಳದಿರಲು ಸಾಧ್ಯವೇ?

    ಅವಿನಾಶ್ ಮತ್ತು ಸ್ವಾತಿ ಕೊಂಡೆ ನಾಯಕ ನಾಯಕಿಯರಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಪಯಣ ರವಿಶಂಕರ್ ಪೊಲೀಸ್ ಆಫಿಸರ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರತೀ ಪಾತ್ರಗಳೂ ಕಾಡುವಂತೆ ಮೂಡಿ ಬಂದಿದೆ ಎಂಬ ಭರವಸೆ ಹೊಂದಿರೋ ಚಿತ್ರ ತಂಡ ಡಿಫರೆಂಟಾದ ವೆನಿಲ್ಲಾ ಫ್ಲೇವರಿಗೆ ಪ್ರೇಕ್ಷಕರು ಫಿದಾ ಆಗುವ ಭರವಸೆ ಹೊಂದಿದೆ!

    ಈ ಹಿಂದೆ ಸಿನಿಮಾದ ಆಡಿಯೋ ರಿಲೀಸ್ ಮಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಿನಿಮಾ ಮತ್ತು ಕಲಾವಿದರಿಗೆ ಶುಭ ಕೋರಿದ್ದರು. ನನಗೆ ಮೊದಲು ಬಣ್ಣ ಹಚ್ಚಿದ ಗುರು ಮಂಡ್ಯ ರಮೇಶ್. ಈಗ ಅವರ ಗರಡಿಯಲ್ಲೇ ಬೆಳೆದ ಅವಿನಾಶ್ ಈ ಚಿತ್ರದ ನಾಯಕ. ಆತ ಕೂಡ ನಾಯಕ ನಟನಾಗಿ ಪರಿಚಯ ಆಗುತ್ತಿರೋದು ನನಗೆ ನಿಜಕ್ಕೂ ಸಂತಸ ತಂದಿದೆ.ಪ್ರತಿ ಸಿನಿಮಾದಲ್ಲೂ ನಾನು ಹೊಸಬ ಅಂತಾನೇ ಕೆಲಸದಲ್ಲಿ ಮಗ್ನರಾಗಬೇಕಿರೋದು ಬಹಳ ಮುಖ್ಯ ಎಂದು ಹೊಸ ನಟರಿಗೆ ದರ್ಶನ್ ಕಿವಿಮಾತು ಹೇಳಿದ್ದರು.

  • ‘ವೆನಿಲ್ಲಾ’ ಟ್ರೇಲರ್ ನೋಡಿ ಹೊಸ ನಟ-ನಟಿಯರಿಗೆ ಕಿವಿಮಾತು ಹೇಳಿದ ದರ್ಶನ್

    ‘ವೆನಿಲ್ಲಾ’ ಟ್ರೇಲರ್ ನೋಡಿ ಹೊಸ ನಟ-ನಟಿಯರಿಗೆ ಕಿವಿಮಾತು ಹೇಳಿದ ದರ್ಶನ್

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಂಗಳವಾರ ಸಂಜೆ ಚಾಲೆಂಜಿಂಗ್ ಸ್ಟಾರ್ ದರ್ಶನ್ `ವೆನಿಲ್ಲಾ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.

    ಟ್ರೇಲರ್ ವೀಕ್ಷಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ವೆನಿಲಾ ಚಿತ್ರ ತಂಡದ ಶ್ರಮವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ನನಗೆ ಮೊದಲು ಬಣ್ಣ ಹಚ್ಚಿದ ಗುರು ಮಂಡ್ಯ ರಮೇಶ್. ಈಗ ಅವರ ಗರಡಿಯಲ್ಲೇ ಬೆಳೆದ ಅವಿನಾಶ್ ಈ ಚಿತ್ರದ ನಾಯಕ. ಆತ ಕೂಡ ನಾಯಕ ನಟನಾಗಿ ಪರಿಚಯ ಆಗುತ್ತಿರೋದು ನನಗೆ ನಿಜಕ್ಕೂ ಸಂತಸ ತಂದಿದೆ ಎಂದು ದರ್ಶನ್ ಹೇಳಿದರು.

    ಪ್ರತಿ ಸಿನಿಮಾದಲ್ಲೂ ನಾನು ಹೊಸಬ ಅಂತಾನೇ ಕೆಲಸದಲ್ಲಿ ಮಗ್ನರಾಗಬೇಕಿರೋದು ಬಹಳ ಮುಖ್ಯ ಎಂದು ಹೊಸ ನಟರಿಗೆ ದರ್ಶನ್ ಕಿವಿಮಾತು ಹೇಳಿದರು. ವೆನಿಲ್ಲಾ ಸಿನಿಮಾವನ್ನು ಮೈಸೂರು ಮೂಲದ ಜೈರಾಜ್ ನಿರ್ಮಿಸುತ್ತಿದ್ದು, ನಿರ್ದೇಶಕ ಜಯತೀರ್ಥ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.

    ಈ ಚಿತ್ರದ ನಾಯಕ ನಟನಾಗಿ ನಿರ್ಮಾಪಕರ ಪುತ್ರ ಅವಿನಾಶ್ ಅಭಿನಯಿಸುತ್ತಿದ್ದು, ನಾಯಕಿಯಾಗಿ ಸ್ವಾತಿ ನಟಿಸುತ್ತಿದ್ದಾರೆ. ಈ ಇಬ್ಬರಿಗೂ ಇದು ಮೊದಲ ಸಿನಿಮಾ. ಟ್ರೇಲರ್ ರಿಲೀಸ್ ನಂತರ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ದರ್ಶನ್, ಕುರುಕ್ಷೇತ್ರ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿದೆ. ತಮ್ಮ 51ನೇ ಸಿನಿಮಾ ಬಗ್ಗೆ ಶೀಘ್ರದಲ್ಲೇ ಹೇಳುತ್ತೇವೆ ಎಂದು ತಿಳಿಸಿದರು. ಮೂರು ವರ್ಷಗಳಿಂದ ಸಂಕ್ರಾಂತಿ ಆಚರಿಸಿರಲಿಲ್ಲ. ಈ ಬಾರಿ ಅವಕಾಶ ಒದಗಿಬಂತು. ಆದ್ದರಿಂದ ಈ ಬಾರಿ ಆಚರಿಸಿದ್ದೇನೆ. ಸಂಕ್ರಾಂತಿಯನ್ನು ರೈತರು ಹೇಗೆ ಆಚರಿಸುತ್ತಾರೆ ಅದೇ ರೀತಿ ನಾನು ಆಚರಿಸಿದ್ದೇನೆ ಎಂದು ದರ್ಶನ್ ಹೇಳಿದರು. ನಂತರ ಕಾರ್ ಖರೀದಿಯ ಬಗೆಗಿನ ಪ್ರಶ್ನೆಗೆ ಉತ್ತರಿಸಲು ದರ್ಶನ್ ನಿರಾಕರಿಸಿದರು.

    ಸಂಕ್ರಾಂತಿ ಹಬ್ಬದ ದಿನದಂದು ದರ್ಶನ್ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದರು. ಮೈಸೂರಿಗೆ ಹೊಸ ಕಾರಿನಲ್ಲಿ ಆಗಮಿಸಿ ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಬೆಟ್ಟದ ಅರ್ಚಕರಿಂದ ಪೂಜೆ ಮಾಡಿಸಿ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದರು.

    ಬೆಂಗಳೂರಿನಲ್ಲಂತೂ ಕೆಲವೇ ಕೆಲವು ಗಣ್ಯರ ಬಳಿ ಈ ಕಾರ್ ಇದ್ದು, ಸ್ಯಾಂಡಲ್ ವುಡ್‍ನಲ್ಲಿ ಫಸ್ಟ್ ಟೈಂ ಲ್ಯಾಂಬೋರ್ಗಿನಿಗೆ ದರ್ಶನ್ ಒಡೆಯರಾಗಿದ್ದಾರೆ. ಈ ಹಿಂದೆ ದರ್ಶನ್ ತಮ್ಮ ಬಳಿಯಿದ್ದ ಹಮ್ಮರ್ ಕಾರನ್ನು ಮಾರಾಟ ಮಾಡಿದ್ದರು.

    ಸದ್ಯ ದರ್ಶನ್ ಈಗ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮುನಿರತ್ನ ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದೊಡ್ಡ ತಾರಾಗಣವಿರುವ ಈ ಸಿನಿಮಾ ಬಿಡುಗಡೆಗಾಗಿ ಕರ್ನಾಟಕ ಜನತೆ ಕಾಯುತ್ತಿದ್ದಾರೆ.