Tag: Vacation

  • ಸಿದ್ದಗಂಗಾ ಮಠದ ಶಾಲಾ-ಕಾಲೇಜುಗಳಿಗೆ ರಜೆ

    ಸಿದ್ದಗಂಗಾ ಮಠದ ಶಾಲಾ-ಕಾಲೇಜುಗಳಿಗೆ ರಜೆ

    ತುಮಕೂರು: ಶ್ರೀಗಳ ಆರೋಗ್ಯ ಏರುಪೇರು ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದ ಶಾಲಾ-ಕಾಲೇಜುಗಳಿಗೆ ರಜೆ ಫೋಷಣೆ ಮಾಡಲಾಗಿದೆ.

    ಈಗಾಗಲೇ ವೈದ್ಯರು ಶ್ರೀಗಳ ಆರೋಗ್ಯವನ್ನು ಪರಿಶೀಲನೆ ನಡೆಸಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಮಕ್ಕಳು ಮತ್ತು ಭಕ್ತರು ಮಠಕ್ಕೆ ಬಂದಿದ್ದಾರೆ. ಆದ್ದರಿಂದ ಮುಂಜಾಗೃತಾ ಕ್ರಮವಾಗಿ ಮಠದ ಶಾಲಾ-ಕಾಲೇಜುಗಳಿಗೆ ರಜೆ ಫೋಷಣೆ ಮಾಡಿದ್ದಾರೆ. ತಮ್ಮ ಮುಂದಿನ ಆದೇಶವರೆಗೂ ಈ ಫೋಷಣೆ ಮುಂದುವರಿಯುತ್ತದೆ ಎಂದು ಮಠದ ಅಧಿಕಾರಿ ಹೇಳಿದ್ದಾರೆ.

    ಇತ್ತ ಸ್ವಯಂ ಪ್ರೇರಿತರಾಗಿ ಅಂಗಡಿ ಬಾಗಿಲು ಹಾಕುತ್ತಿದ್ದಾರೆ. ಈಗಾಗಲೇ ಹೆದ್ದಾರಿಯಲ್ಲಿ ಬರುವ ಕೆಲವೊಂದು ಅಂಗಡಿಗಳನ್ನು ಮಾಲೀಕರು ಸ್ವಯಂ ಬಂದ್ ಮಾಡಿದ್ದಾರೆ. ಶ್ರೀಗಳ ಆರೋಗ್ಯದ ಬಗ್ಗೆ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಶ್ರೀಗಳ ಆರೋಗ್ಯದಲ್ಲಿ ಏರುಪೇರು ಎಂಬ ವಿಷಯ ತಿಳಿದ ತಕ್ಷಣ ಗಣ್ಯಾತೀಗಣ್ಯರು ಸಿದ್ದಗಂಗಾ ಮಠಕ್ಕೆ ಬಂದಿದ್ದರು. ಈಗ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಂದಿದ್ದು, ಎಲ್ಲರೂ ಸೇರಿ ತುರ್ತು ಸಭೆ ನಡೆಸುತ್ತಿದ್ದಾರೆ.

    ಇನ್ನೂ ಮಠದ ಸುತ್ತಮುತ್ತ ಸರ್ಪಗಾವಲಿನಲ್ಲಿ ಪೊಲೀಸರು ಭದ್ರತೆಯನ್ನು ಆಯೋಜನೆ ಮಾಡಿದ್ದಾರೆ. ಸದ್ಯಕ್ಕೆ ಕಿರಿಯ ಸ್ವಾಮೀಜಿ, ಮಠದ ಅಧಿಕಾರಿಗಳು, ವೈದ್ಯರು ಮತ್ತು ಗಣ್ಯರು ಸೇರಿದಂತೆ ಸಿಎಂ ಕುಮಾರಸ್ವಾಮಿ ಜೊತೆ ತುರ್ತು ಸಭೆ ನಡೆಸುತ್ತಿದ್ದಾರೆ. ಬಳಿಕ ಶ್ರೀಗಳ ಆರೋಗ್ಯದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ತಿಳಿಸುವ ಸಾಧ್ಯತೆ ಇದೆ. ವೈದ್ಯರು ಕೂಡ ಮಧ್ಯಾಹ್ನ 2 ಗಂಟೆ ಶ್ರೀಗಳ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೇಟ್‍ಗೆ ಬೀಗ ಹಾಕಿ ರಜೆಯ ಬೋರ್ಡ್ – ಒಳಗೆ ಶಿಕ್ಷಣ ಸಂಸ್ಥೆಯಿಂದ ಪರೀಕ್ಷೆ

    ಗೇಟ್‍ಗೆ ಬೀಗ ಹಾಕಿ ರಜೆಯ ಬೋರ್ಡ್ – ಒಳಗೆ ಶಿಕ್ಷಣ ಸಂಸ್ಥೆಯಿಂದ ಪರೀಕ್ಷೆ

    ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಜಿಲ್ಲಾಢಳಿತದಿಂದ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಆದರೂ ಖಾಸಗಿ ಶಿಕ್ಷಣ ಸಂಸ್ಥೆ ಪರೀಕ್ಷೆ ನಡೆಸುತ್ತಿದೆ.

    ಕುವೆಂಪುನಗರದ ಬಿಜಿಎಸ್ ವಿದ್ಯಾಪೀಠ ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿದೆ. ಭಾತರ್ ಬಂದ್ ಹಿನ್ನೆಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರೋಧದ ನಡುವೆಯೂ ಜಿಲ್ಲಾಡಳಿತ ಇಂದು ಶಾಲಾ-ಕಾಲೇಜಿಗೆ ರಜೆಯನ್ನು ಘೋಷಣೆ ಮಾಡಿತ್ತು. ಆದರೆ ಜಿಲ್ಲಾಡಳಿತದ ಆದೇಶವನ್ನೇ ಧಿಕ್ಕರಿಸಿ ಶಿಕ್ಷಣ ಸಂಸ್ಥೆ ಪರೀಕ್ಷೆ ನಡೆಸುತ್ತಿತ್ತು.

    ಅಷ್ಟೇ ಅಲ್ಲದೇ ಬಿಜಿಎಸ್ ಕಾಲೇಜಿನ ಗೇಟ್‍ಗೆ ಬೀಗ ಹಾಕಿ ಇಂದು ರಜೆ ಎಂದು ಬೋರ್ಡ್ ನೇತುಹಾಕಿದೆ. ಆದರೆ ಒಳಗೆ ಪಿಯುಸಿ ಪೂರಕ ಪರೀಕ್ಷೆಯನ್ನು ನಡೆಸುತ್ತದೆ. ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದು ಪರೀಕ್ಷೆ ನಡೆಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಇಬ್ಬರು ಪೊಲೀಸರು ಆಗಮಿಸಿದ್ದಾರೆ. ಪೊಲೀಸರು ಬಂದ ಮೇಲೆ ಪರೀಕ್ಷೆಯನ್ನು ನಿಲ್ಲುಸುತ್ತೇವೆ ಅಂತ ಕಾಲೇಜು ಮಂಡಳಿ ಹೇಳಿದೆ ಎಂದು ಮಾಹಿತಿ ಲಭ್ಯವಾಗಿದೆ.

    ಭಾರತ್ ಬಂದ್ ಕಾರಣಕ್ಕೆ ರಜೆ ಘೋಷಣೆ ಮಾಡಿದ್ದ ಜಿಲ್ಲಾಡಳಿತ ನಿರ್ಧಾರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮೀಪಿಸುತ್ತಿದೆ. ಪಾಠ ಮುಗಿಸಲು ಸಮಯದ ಅಭಾವವಿದೆ. ಹೀಗಾಗಿ ಶಾಲಾ-ಕಾಲೇಜುಗಳ ಸೂಕ್ತ ರಕ್ಷಣೆಗೆ ಪತ್ರ ಬರೆದಿದ್ದೆವು. ಸ್ವಂಪ್ರೇರಿತವಾಗಿ ಕಾಲೇಜು ನಡೆಸಲು ಮುಂದಾಗಿದ್ದ ನಮಗೆ ಜಿಲ್ಲಾಡಳಿತ ಒತ್ತಾಯ ಪೂರ್ವಕವಾಗಿ ಬಂದ್ ನಡೆಸುವಂತೆ ಮಾಡಿದೆ. ಬೇಸರದಿಂದ ಶಾಲಾ ಕಾಲೇಜುಗಳನ್ನ ಬಂದ್ ಮಾಡುತ್ತಿದ್ದೇವೆ ಎಂದು ಸಿಬಿಎಸ್‍ಸಿ ಮತ್ತು ಐಸಿಎಸ್‍ಸಿ ರಾಜ್ಯ ಉಪಾಧ್ಯಕ್ಷ ಆರ್.ರಘು ಸ್ಪಷ್ಟನೆ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸವರ್ಷ, ಕ್ರಿಸ್‍ಮಸ್ ವೇಳೆ ಖಾಸಗಿ ಬಸ್ಸುಗಳಿಂದ ಲೂಟಿ – ದರ ಕೇಳಿದ್ರೆ ಶಾಕ್ ಆಗ್ತೀರಿ

    ಹೊಸವರ್ಷ, ಕ್ರಿಸ್‍ಮಸ್ ವೇಳೆ ಖಾಸಗಿ ಬಸ್ಸುಗಳಿಂದ ಲೂಟಿ – ದರ ಕೇಳಿದ್ರೆ ಶಾಕ್ ಆಗ್ತೀರಿ

    ಬೆಂಗಳೂರು: ಶುಕ್ರವಾರದಿಂದ ಕ್ರಿಸ್‍ಮಸ್ ರಜೆ ಶುರುವಾಗುತ್ತೆ, ಮಕ್ಕಳಿಗೆ ಸಾಲು ಸಾಲು ರಜೆ ಮುಂದಿನ ವಾರದವರೆಗೆ ಆರಮಾಗಿ ಇರೋಣ ಅಂತ ಎಲ್ಲರೂ ಪ್ರವಾಸಕ್ಕೆ ಪ್ಲಾನ್ ಮಾಡೋದು ಸಹಜ. ಆದರೆ ಪ್ರವಾಸಕ್ಕಾಗಿ ಖಾಸಗಿ ಟ್ರಾವೆಲ್ಸ್ ಕಡೆ ಹೋದರೆ ಪ್ರಯಾಣ ದರ ಕೇಳಿ ದಂಗಾಗೋದು ಗ್ಯಾರಂಟಿಯಾಗಿದೆ.

    ಖಾಸಗಿ ಬಸ್ ಮಾಲೀಕರು ಸಾಲುಸಾಲು ರಜೆ ಇರುವ ಕಾರಣ ಬಸ್ ದರವನ್ನು ದುಪ್ಪಟ್ಟು ಮಾಡಿ ದರೋಡೆಗೆ ಇಳಿದಿದ್ದಾರೆ. ಬೆಂಗಳೂರಿನ ಎರಡು ಫೇಮಸ್ ತಾಣಗಳಲ್ಲಿ ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ಮಾಡಿದ್ದು, ಈ ವೇಳೆ ಟ್ರಾವೆಲ್ ಏಜೆಂಟ್ ದರ ಏರಿಕೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

    ಬೆಂಗಳೂರು ಟು ಅಲೆಪ್ಪಿ
    ಪ್ರತಿನಿಧಿ: ಅಲೆಪ್ಪಿ (ಕೇರಳ) ಎಷ್ಟಿದೆ ಅಂತ ನೋಡಿ ಸರ್?
    ಟ್ರಾವೆಲ್ಸ್ ಏಜೆಂಟ್: ಎಷ್ಟಿದೆ ನೋಡಿ. ಸಿಕ್ಕಾಪಟ್ಟೆ ಇದೆ.
    ಪ್ರತಿನಿಧಿ: ಏನ್ ಸರ್? ಕೊಚ್ಚಿನ್ ಟಿಕೆಟ್ 2 ಸಾವಿರಕ್ಕೆ ಸಿಗುತ್ತಲ್ಲ?
    ಟ್ರಾವೆಲ್ಸ್ ಏಜೆಂಟ್: ಕೊಚ್ಚಿನ್ ಈಗ 2 ಸಾವಿರಕ್ಕೆ ಸಿಗೋದಿಲ್ಲ ಬಿಡಿ.
    ಟ್ರಾವೆಲ್ಸ್ ಏಜೆಂಟ್: 3,200, 3,500., 3,000 ಅಲೆಪ್ಪಿಗೆ!
    ಪ್ರತಿನಿಧಿ: ಹಳೆದಾ?
    ಟ್ರಾವೆಲ್ಸ್ ಏಜೆಂಟ್: ಹಳೆಯದಲ್ಲ. 22ನೇ ತಾರೀಖಿಗೆ.
    ಪ್ರತಿನಿಧಿ: ಏನ್ ಸರ್ ಸ್ಪೆಷಲ್?
    ಟ್ರಾವೆಲ್ಸ್ ಏಜೆಂಟ್: ಸ್ಪೆಷಲ್ ಅಂದರೆ ಕ್ರಿಸ್‍ಮಸ್ ಮತ್ತು ನ್ಯೂ ಹಿಯರ್ ಸೀಸನ್ ಇದೆ. ಎಲ್ಲರೂ ಕ್ರಿಶ್ಚಿಯನ್ ಹಬ್ಬ ಮಾಡುತ್ತಾರೆ. ಮುಸ್ಲಿಮರು ಮತ್ತು ಹಿಂದುಗಳು ಪ್ಯಾಕೇಜ್‍ಗಳಿಗೆ ಹೋಗುತ್ತಾರೆ. ಆ ಉದ್ದೇಶದಿಂದ ಇಷ್ಟೊಂದು ದರ ಹೆಚ್ಚಾಗಿದೆ. ಈ ರೇಟ್ ಇರುತ್ತೆ. ಬೇರೆ ದಿನಗಳಲ್ಲಿ 900 ರೂ. ಯಿಂದ 1000 ರೂಪಾಯಿ ಇರುತ್ತದೆ.

    ಬೆಂಗಳೂರು ಟು ಗೋವಾ
    ಪ್ರತಿನಿಧಿ: ಗೋವಾಗೆ 4 ಟಿಕೆಟ್ ಬೇಕಾಗಿತ್ತು ಸರ್..
    ಟ್ರಾವೆಲ್ಸ್ ಏಜೆಂಟ್– ಯಾವಾಗ ಸರ್?
    ಪ್ರತಿನಿಧಿ: 22ಕ್ಕೆ ಸರ್
    ಟ್ರಾವಲ್ಸ್ ಏಜೆಂಟ್– ಶನಿವಾರ ಅಲ್ವಾ?
    ಪ್ರತಿನಿಧಿ: ಹೌದು ಸರ್.
    ಟ್ರಾವೆಲ್ಸ್ ಏಜೆಂಟ್– ಎಸಿ. ನಾನ್ ಎಸಿ?
    ಪ್ರತಿನಿಧಿ: ಸ್ಲೀಪರ್
    ಟ್ರಾವಲ್ಸ್ ಏಜೆಂಟ್– 2550
    ಪ್ರತಿನಿಧಿ: ಅಷ್ಟೊಂದಾ ಸರ್?
    ಟ್ರಾವಲ್ಸ್ ಏಜೆಂಟ್– ನೀವೇ ನೋಡಿ.
    ಪ್ರತಿನಿಧಿ: ಹೋದ ವಾರ 900 ಸಾವಿರ ಇತ್ತು.
    ಟ್ರಾವಲ್ಸ್– ಅದು ರೆಗ್ಯೂಲರ್ ಆವತ್ತು ರೇಟ್ ಕಡಿಮೆ. ಈಗ ರಜೆ ಇದೆ 22, 23, 24, 25 ರಜೆ ಕ್ರಿಸ್‍ಮಸ್ ಹಾಲಿಡೆ.
    ರಿಪೋರ್ಟ್‍ರ್– 1500 ಒಳಗಡೆ ಯಾವುದಾದರೂ ಇದ್ದರೆ ನೊಡಿ ಸರ್
    ಟ್ರಾವಲ್ಸ್– 18 ಅಲ್ವ ಇವತ್ತು ನೋಡಿ ನಾನ್ ಎಸಿ ಸ್ಲೀಪರ್ 500
    ರಿಪೋರ್ಟ್‍ರ್– 4 ಜನಕ್ಕೆ 1500 ಒಳಗಡೆ ನಮಗೆ ಬೇಕು ಸರ್.
    ಟ್ರಾವಲ್ಸ್– 22 ಬೆಂಗಳೂರು ಟು ಗೋವ ನೀವೆ ನೋಡಿ ಸರ್ ಯಾವುದು ಕಡಿಮೆ ಇದೆ. ನೋಡಿ ಸರ್ ಇದೊಂದು ಯಾವುದು ಶ್ಯಾಮಲಾ ಟ್ರಾವಲ್ಸ್ ಸಿಟ್ಟಿಂಗ್ ಎಸಿ  ಎಷ್ಟಿದೆ?
    ರಿಪೋರ್ಟ್‍ರ್– 2149
    ಟ್ರಾವಲ್ಸ್– ನಾನ್ ಎಷ್ಟು ಹೇಳಿದೆ ಸುಗಮ ವಿಆರ್‍ಎಲ್ ಎಷ್ಟಿದೆ ನೋಡಿ ಇದೊಂದೆ ಕಡಿಮೆ ಇರೋದು ಇಲ್ಲಿ. ಇನ್ನು ಉಳಿದವೆಲ್ಲ ಪುಲ್ ಜಾಸ್ತಿ.
    ರಿಪೋರ್ಟ್‍ರ್– ಎಲ್ಲಿವರೆಗೂ ಈ ರೇಟ್ ಇರುತ್ತೆ ಸರ್
    ಟ್ರಾವಲ್ಸ್– 24 ರವರೆಗೆ ಈ ರೇಟ್ ಇರುತ್ತೆ

    ಪ್ರಸ್ತುತ ಖಾಸಗಿ ಬಸ್ ದರಗಳು:
    ಬೆಂಗಳೂರಿನಿಂದ ಅಲೆಪ್ಟಿ ಹೋಗಲು ಇಂದಿನ ಬೆಲೆ 1000 ರೂ. ಇದೆ. ಆದರೆ ದಿನಾಂಕ 22ಕ್ಕೆ 2500 ರೂ. ಆಗಿದೆ. ಇನ್ನೂ ಗೋವಾಗೆ ಹೋಗಲು 800 ರೂ. ಪ್ರಯಾಣ ದರ ಇದ್ದುದ್ದು, ಕ್ರಿಸ್‍ಮಸ್ ಗೆ 2999 ರೂ. ಅಧಿಕವಾಗಿದೆ. ಬೆಂಗಳೂರಿನಿಂದ ಮುನ್ನಾರ್ ಗೆ ಇಂದಿನ ಪ್ರಯಾಣದ 900 ರೂ. ಆದರೆ ಇದೇ ಸ್ಥಳಕ್ಕೆ  22ರಂದು ಹೋಗಲು 1800 ರೂ. ಹೆಚ್ಚಾಗಿದೆ. ಊಟಿಗೆ ಹೋಗಲು 500 ಇದ್ದ ದರ. ಕ್ರಿಸ್‍ಮಸ್ ರಜೆಯ ಕಾರಣ 1800 ಆಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗಲು 1500 ರೂ. ಅಧಿಕವಾಗಿದೆ. ಇಂದು ಹೋಗುವುದಾದರೆ ಕೇವಲ 500 ರೂ.ಗೆ ಹೋಗಬಹುದು. ಇಂದು ಬೆಂಗಳೂರಿಂದ ಮರುಡೇಶ್ವರಕ್ಕೆ  ಹೋಗಲು 600 ರೂ. ಬಸ್ ದರವಾಗುತ್ತದೆ. ಆದರೆ 22 ಕ್ಕೆ 1200 ರೂ. ಹೆಚ್ಚಳವಾಗಿದೆ.

    ಸರ್ಕಾರ ಪ್ರತಿ ಬಾರಿ ಕಡಿವಾಣ ಹಾಕುತ್ತೀವಿ ಅಂದರ ಖಾಸಗಿ ಬಸ್‍ ಗಳ ಲಾಭಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳೇ ಮಣಿದಿದ್ದಾರೆ. ಎಷ್ಟೇ ಕಡಿವಾಣ ಹಾಕಿದರೂ ಕೇವಲ ಸುತ್ತೋಲೆಯಲ್ಲಿ ಇರುತ್ತೆ ವಿನಃ ಜಾರಿಗೆ ಬಂದ ಉದಾಹರಣೆನೆ ಇಲ್ಲ. ಇನ್ನಾದರೂ ಸರ್ಕಾರ ಈ ಹಗಲು ದರೋಡೆಯನ್ನ ತಡೆಯುತ್ತಾ ಅಥವಾ ಖಾಸಗಿ ಲಾಭಿಗೆ ಮಣಿಯುತ್ತಾ ಅನ್ನೋದನ್ನ ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನಂತಕುಮಾರ್ ನಿಧನ – ಶಾಲಾ-ಕಾಲೇಜಿಗೆ ಸರ್ಕಾರಿ ರಜೆ

    ಅನಂತಕುಮಾರ್ ನಿಧನ – ಶಾಲಾ-ಕಾಲೇಜಿಗೆ ಸರ್ಕಾರಿ ರಜೆ

    ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ನಿಧನದ ಹಿನ್ನಲೆಯಲ್ಲಿ ಇಂದು ಶಾಲಾ-ಕಾಲೇಜಿಗೆ ಸರ್ಕಾರಿ ರಜೆಯನ್ನು ಘೋಷಣೆ ಮಾಡಲಾಗಿದೆ.

    ರಾಜ್ಯಾದ್ಯಂತ ಶಾಲಾ-ಕಾಲೇಜಿಗೆ ಮತ್ತು ಕಚೇರಿಗೆ ಸರ್ಕಾರಿ ರಜೆಯನ್ನು ಘೋಷಣೆ ಮಾಡಲಾಗಿದೆ. ಸಕಲ ಗೌರವದೊಂದಿಗೆ ಅನಂತ ಕುಮಾರ್ ಅವರ ಅಂತ್ಯಕ್ರಿಯೆ ಮಾಡಲಾಗುತ್ತಿದೆ.

    ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ, ಕರ್ನಾಟಕ ಬಿಜೆಪಿಯ ಹಿರಯ ಮುಖಂಡ ಎಚ್.ಎನ್. ಅನಂತಕುಮಾರ್ (59) ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಆದರೆ ಇಂದು ನಸುಕಿನ ಜಾವ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಇತ್ತೀಚೆಗೆ ತೀವ್ರ ಅನಾರೋಗ್ಯಪೀಡಿತರಾಗಿದ್ದ ಅನಂತಕುಮಾರ್ ಅವರನ್ನು ಕಳೆದ ಎರಡು ದಿನಗಳಿಂದ ವೆಂಟಿಲೇಟರ್‍ನಲ್ಲಿ ಇಡಲಾಗಿತ್ತು. ಅನಂತಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

    ಇಂದು ಬೆಳಗ್ಗೆ ಪ್ರಧಾನಿ ಮೋದಿ ಬೆಂಗಳೂರಿಗೆ ಬರಲಿದ್ದಾರೆ. ಬೆಳಗ್ಗೆ 9 ಗಂಟೆಯ ನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

     

  • ಒಂದು ದಿನವೂ ರಜೆ ಪಡೆಯದೆ 31 ವರ್ಷ ಚಾಲಕ ಸೇವೆ – ನಿವೃತ್ತಿಯ ದಿನ ಮದುವಣಗಿತ್ತಿಯಂತೆ ಬಸ್ ಅಲಂಕಾರ

    ಒಂದು ದಿನವೂ ರಜೆ ಪಡೆಯದೆ 31 ವರ್ಷ ಚಾಲಕ ಸೇವೆ – ನಿವೃತ್ತಿಯ ದಿನ ಮದುವಣಗಿತ್ತಿಯಂತೆ ಬಸ್ ಅಲಂಕಾರ

    ಮಂಡ್ಯ: ಕಳೆದ 31 ವರ್ಷಗಳಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಒಂದೂ ರಜೆ ಪಡೆಯದೆ ಸೇವೆ ಸಲ್ಲಿಸಿದ್ದಾರೆ. ಸೇವೆಯಿಂದ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಬಸ್ಸನ್ನು ವಿಶೇಷವಾಗಿ ಅಲಂಕರಿಸಿ ಪ್ರಯಾಣಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದ್ದಾರೆ.

    ಕೆ.ಬಿ.ಬೋರೇಗೌಡ ಅವರು ಒಂದು ದಿನ ರಜೆ ಪಡೆಯದೆ ಸೇವೆ ಸಲ್ಲಿಸಿದ್ದಾರೆ. ಇವರು 31 ವರ್ಷಗಳ ಕಾಲ ಅಪಘಾತ ರಹಿತ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಕೆ.ಆರ್.ಪೇಟೆ ಬೇರ್ಯ ಮಾರ್ಗದಲ್ಲಿ ಸಂಚರಿಸುತ್ತಿರುವ ಬಸ್ಸಿನ ಚಾಲಕರಾಗಿ ಕೆಲಸ ಮಾಡುತ್ತಿರುವ ಬೋರೇಗೌಡರನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಜನ ಕೂಡ ಪ್ರೀತಿಯಿಂದ ಅವರು ಓಡಿಸುತ್ತಿದ್ದ ಬಸ್ಸನ್ನು ಬೋರೇಗೌಡರ ಬಸ್ ಅಂತಾನೆ ಕರೆಯುತ್ತಿದ್ದರು. ಬೋರೇಗೌಡರು ಮುಖ್ಯಮಂತ್ರಿಗಳ ಚಿನ್ನದ ಪದಕ ಸೇರಿದಂತೆ ತಾಲೂಕು ಆಡಳಿತದ ಗೌರವಕ್ಕೆ ಪಾತ್ರರಾಗಿದ್ದಾರೆ.

    ಗೌಡರ ಮಾದರಿಯನ್ನು ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿಗಳು ಅನುಸರಿಸಿದರೆ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಜೊತೆಗೆ ಸಂಸ್ಥೆಯನ್ನು ನಷ್ಟದಿಂದ ತಪ್ಪಿಸಿ ಲಾಭದಾಯಕವಾಗಿ ಮುನ್ನಡೆಸಬಹುದು ಎಂದು ಡಿಪೋ ಮ್ಯಾನೇಜರ್ ಶಿವಕುಮಾರ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಕರ್ತವ್ಯದಿಂದ ನಿವೃತ್ತರಾದ ಚಾಲಕ ಬೋರೇಗೌಡರಿಗೆ ಮಂಡ್ಯ ಜಿಲ್ಲೆಯ ಜನ ಪ್ರೀತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಸರಾ ಎಫೆಕ್ಟ್- ಟ್ರಾಫಿಕ್ ಜಾಮ್‍ನಿಂದ ಹೈರಾಣಾದ್ರು ಸವಾರರು, ಪ್ರಯಾಣಿಕರು

    ದಸರಾ ಎಫೆಕ್ಟ್- ಟ್ರಾಫಿಕ್ ಜಾಮ್‍ನಿಂದ ಹೈರಾಣಾದ್ರು ಸವಾರರು, ಪ್ರಯಾಣಿಕರು

    ಬೆಂಗಳೂರು: ನಾಡಹಬ್ಬ ದಸರಾ ಕಳೆದ 11 ದಿನಗಳಿಂದ ನಾಡಿನೆಲ್ಲೆಡೆ ಸಂತಸದ ವಾತಾವರಣ ಮೂಡಿಸಿದ್ದು, ಮನೆ ಮನೆಯಲ್ಲೂ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಆದರೆ ದಸರೆಯ ಎಫೆಕ್ಟ್ ಭಾನುವಾರ ಟ್ರಾಫಿಕ್ ಮೇಲೆ ಪರಿಣಾಮ ಬೀರಿದೆ.

    ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಾಡ ಹಬ್ಬ ದಸರೆಯ ಸಾಲು ಸಾಲು ರಜೆಯ ಬಿಸಿ, ಟ್ರಾಫಿಕ್ ಜಾಮಿಗೆ ತಟ್ಟಿದೆ. ನೆಲಮಂಗಲ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 4 ಮತ್ತು 48 ರಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ. ಶಾಲಾ ಮಕ್ಕಳಿಗೆ ಹತ್ತು ದಿನಗಳ ದಸರಾ ರಜೆ, ಸರ್ಕಾರಿ ಹಾಗೂ ಖಾಸಗಿ ಕಾಲೆಜುಗಳು, ಸರ್ಕಾರಿ ನೌಕರರು ಸೇರಿದಂತೆ ಖಾಸಗಿ ಕಂಪನಿಗಳಿಗೆ 4 ದಿನಗಳ ರಜೆ ನೀಡಲಾಗಿತ್ತು. ಹೀಗಾಗಿ ಹಬ್ಬ ಆಚರಿಸಲು ಸ್ವಗ್ರಾಮಕ್ಕೆ ತೆರಳಿದ್ದವರು, ಈಗ ಮತ್ತೆ ಒಮ್ಮೆಲೆ ಬೆಂಗಳೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಹೆದ್ದಾರಿಗಳು ಸಂಪೂರ್ಣ ಜಾಮ್ ಆಗಿತ್ತು.

    ಇನ್ನೂ ಮೈಸೂರು ದಸರಾಗೆ ಹೋಗಿದ್ದವರು ಸಹ ಮೈಸೂರು ಬೆಂಗಳೂರು ರಸ್ತೆ ಜಾಂ ಇರುವುದು ಎಂದು ತಿಳಿದು ಮದ್ದೂರು ಕುಣಿಗಲ್ ಮಾರ್ಗವಾಗಿ ರಾಷ್ಟ್ರಿಯ ಹೆದ್ದಾರಿ 4 ತಲುಪುತ್ತಿರುವುದರಿಂದ ಹೆದ್ದಾರಿಯಲ್ಲಿ ಸಂಪೂರ್ಣ ಜಾಮ್ ಆಗಿದೆ. ಟ್ರಾಫಿಕ್ ನಲ್ಲಿ ಸಿಲುಕಿ ಒಂದೆಡೆ ಅಂಬುಲೆನ್ಸ್ ಗಳು ಪರದಾಡಿದರೆ, ಮತ್ತೊಂದೆಡೆ ಬಸ್‍ಗಳಲ್ಲಿ ಸೀಟ್ ಸಿಗದೆ ಪ್ರಯಾಣಿಕರು, ಖಾಸಗಿ ಬಸ್‍ಗಳ ಟಾಪ್‍ಏರಿ ಪ್ರಯಾಣಿಸುವ ಪರಿಸ್ಥಿತಿ ಉಂಟಾಗಿತ್ತು.

    ಸಾಮಾನ್ಯವಾಗಿ ಒಂದು ದಿನಕ್ಕೆ 1 ಲಕ್ಷ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಲಿದ್ದು, ಭಾನುವಾರ 10 ಲಕ್ಷಕ್ಕೂ ಅಧಿಕ ವಾಹನಗಳು ಇಲ್ಲಿ ಸಂಚರಿಸಿವೆ. ದಸರಾ ರಜೆಯ ಎಫೆಕ್ಟ್ ಟ್ರಾಫಿಕ್ ಮೇಲೆ ಬಿದ್ದಿದ್ದು, ಸಂಚಾರ ದಟ್ಟಣೆ ಬೆಳಗ್ಗೆ 9 ಗಂಟೆಯವರೆಗೂ ಮುಂದುವರಿಯುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಪ್ಪಳದ ಅಪರ ಜಿಲ್ಲಾಧಿಕಾರಿ ನಾಪತ್ತೆ!

    ಕೊಪ್ಪಳದ ಅಪರ ಜಿಲ್ಲಾಧಿಕಾರಿ ನಾಪತ್ತೆ!

    ಕೊಪ್ಪಳ: ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಮೇಲೆ ಹಲ್ಲೆ ಪ್ರಕರಣದಿಂದಾಗಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು ನಾಪತ್ತೆಯಾಗಿದ್ದಾರೆ.

    ಅಪರ ಜಿಲ್ಲಾಧಿಕಾರಿ ರುದ್ರೇಶ್ ಘಾಳಿ ಕುಟುಂಬದವರು ಇದೇ ತಿಂಗಳು 3 ರಂದು ಗಣಿ ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆ ನಡೆದ ದಿನದಿಂದ ಅಪರ ಜಿಲ್ಲಾಧಿಕಾರಿಗಳು ಕಚೇರಿಯತ್ತ ಸುಳಿಯದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಕಳೆದ 20 ದಿನಗಳಿಂದ ರುದ್ರೇಶ್ ಘಾಳಿಯು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕಚೇರಿಗೆ ಬಾರದೇ ಇರುವುದರಿಂದ ಅವರ ಕೊಠಡಿಗೆ ಬೀಗ ಹಾಕಲಾಗಿದೆ. ಇನ್ನು ರುದ್ರೇಶ್ ಘಾಳಿಯವರು ದೀರ್ಘರಜೆಯ ಮೇಲೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಕೆಲವು ಮೂಲಗಳ ಪ್ರಕಾರ ರುದ್ರೇಶ್ ಘಾಳಿಯವರು ಕೊಪ್ಪಳದಿಂದ ಬೇರೆ ಕಡೆಗೆ ವರ್ಗಾವಣೆಯಾಗಲು ಬೆಂಗಳೂರಿನಲ್ಲೇ ಬೀಡುಬಿಟ್ಟಿದಾರೆಂಬ ಮಾತುಗಳು ಕೇಳಿಬಂದಿವೆ.

  • ಉಡುಪಿ ರಥಬೀದಿ ಸ್ತಬ್ಧ: ಶಾಲಾ-ಕಾಲೇಜು, ಅಂಗಡಿ ಮುಂಗಟ್ಟು ಬಂದ್

    ಉಡುಪಿ ರಥಬೀದಿ ಸ್ತಬ್ಧ: ಶಾಲಾ-ಕಾಲೇಜು, ಅಂಗಡಿ ಮುಂಗಟ್ಟು ಬಂದ್

    ಉಡುಪಿ: ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿಧಿವಶರಾದ ಹಿನ್ನೆಲೆಯಲ್ಲಿ ಇಂದು ಉಡುಪಿಯ ರಥಬೀದಿ ಸ್ತಬ್ಧವಾಗಿದೆ.

    ನಗರದ ಎಲ್ಲ ಶಾಲಾ- ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದ್ದು, ಶಾಲಾ-ಕಾಲೇಜು ಸೇರಿದಂತೆ ಅಂಗಡಿ ಮುಂಗಟ್ಟು ಬಂದ್ ಮಾಡಿ ಶಿರೂರು ಸ್ವಾಮೀಜಿಗಾಗಿ ಶೋಕಾಚರಣೆ ಮಾಡುತ್ತಿದ್ದಾರೆ.

    ಗೌರವಾರ್ಥವಾಗಿ ವ್ಯಾಪಾರ ವಹಿವಾಟು ಬಂದ್ ಮಾಡಿದ್ದಾರೆ. ಈ ಮೂಲಕ ಶಿರೂರು ಸ್ವಾಮೀಜಿಗಳ ಅಸಹಜ ಸಾವಿಗೆ ಉಡುಪಿ ಜನತೆ ಕಂಬನಿ ಮಿಡಿಯುತ್ತಿದ್ದಾರೆ. ಈಗಾಗಲೇ ಮಠದ ಮುಂದೆ ಅಪಾರ ಭಕ್ತರು ನೆರೆದಿದ್ದಾರೆ.

    ಶ್ರೀಗಳ ಅಂತ್ಯ ಸಂಸ್ಕಾರಕ್ಕೆ ಹತ್ತಿಯ ಬುಟ್ಟಿ ಸಿದ್ಧತೆ ಮಾಡಲಾಗುತ್ತಿದೆ. ಇದಕ್ಕಾಗಿ ಸಾಂಪ್ರದಾಯಿಕ ಬುಟ್ಟಿ ತಂದಿದ್ದು, ಭಕ್ತರು ಹತ್ತಿಯನ್ನು ಬುಟ್ಟಿಯಲ್ಲಿ ಹಾಕುತ್ತಿದ್ದಾರೆ. ಬಳಿಕ ಮಠದ ಭಕ್ತರು ಬುಟ್ಟಿಯಲ್ಲಿ ಮೃತ ಶರೀರ ಹೊರಲಿದ್ದಾರೆ. ಇಂದು ಸಂಜೆ ಸ್ವಾಮೀಜಿಗಳ ಅಂತ್ಯಕ್ರಿಯೆ ನೇರವೇರಲಿದೆ.

    ಉಡುಪಿ ಮಠದ ಸಂಪ್ರದಾಯದಂತೆ ಸಂಸ್ಕಾರ ಮಾಡಲಾಗುತ್ತಿದೆ. ಆದ್ದರಿಂದ ಶ್ರೀಗಳ ಶರೀರವನ್ನು ಮೊದಲು ಕೃಷ್ಣಮಠಕ್ಕೆ ಕೊಂಡೊಯ್ಯಲಾಗುತ್ತದೆ. ಬಳಿಕ ಮಠದ ಮಧ್ವ ಸರೋವರದಲ್ಲಿ ಸ್ನಾನ ಮಾಡಿಸಿ ಶ್ರೀ ಕೃಷ್ಣ ದೇವರ ದರ್ಶನವನ್ನು ಮಾಡಿಸಲಾಗುತ್ತದೆ.

    ನಂತರ ಶಿರೂರು ಸ್ವಾಮೀಜಿಯ ಮೂಲಮಠವಾದ ಕಾಪುವಿನ ಹಿರಿಯಡ್ಕದಕ್ಕೆ ಮೃತದೇವನ್ನು ಕೊಂಡೊಯ್ದು ಮಣ್ಣಿನಡಿ ಹೂಳುವ ಮೂಲಕ ಸಂಸ್ಕಾರ ಮಾಡಲಾಗುತ್ತದೆ. ಅಂತ್ಯ ಸಂಸ್ಕಾರ ಮಾಡುವಾಗ ಪೂಜಾ ಸಾಮಾಗ್ರಿಗಳನ್ನು ಅವರ ಶರೀರದ ಜೊತೆ ಇರಿಸಿ ಬೃಂದಾವನ ನಿರ್ಮಿಸಲಾಗುತ್ತದೆ. ಜೊತೆಗೆ ಉಪ್ಪು, ಹತ್ತಿ, ಕಾಳುಮೆಣಸು ಮತ್ತು ಕರ್ಪೂರಗಳನ್ನು ತುಂಬಿಸಿ ಸಮಾಧಿ ಮಾಡಲಾಗುತ್ತದೆ.

    55 ವರ್ಷದ ಶಿರೂರು ಸ್ವಾಮೀಜಿಗಳಿಗೆ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಬುಧವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಬೆಳಗ್ಗೆ 8.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

  • ವರುಣನ ರೌದ್ರಾವತಾರಕ್ಕೆ ತುಂಬಿದ ಕೆರೆ-ಕುಂಟೆ – ದಕ್ಷಿಣ ಕನ್ನಡ, ಉಡುಪಿ ಶಾಲಾ-ಕಾಲೇಜುಗಳಿಗೆ ರಜೆ

    ವರುಣನ ರೌದ್ರಾವತಾರಕ್ಕೆ ತುಂಬಿದ ಕೆರೆ-ಕುಂಟೆ – ದಕ್ಷಿಣ ಕನ್ನಡ, ಉಡುಪಿ ಶಾಲಾ-ಕಾಲೇಜುಗಳಿಗೆ ರಜೆ

    ಬೆಂಗಳೂರು: ದಿನೇ ದಿನೇ ವರುಣನ ಆರ್ಭಟ ಹೆಚ್ಚಾಗುತ್ತಿದ್ದು, ಕೆರೆ, ಕುಂಟೆ ಮತ್ತು ನದಿಗಳು ತುಂಬಿ ಹರಿಯುತ್ತಿದೆ. ಇದರಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ.

    ಕರಾವಳಿಯಲ್ಲಿ ಸ್ವಲ್ಪ ಬಿಡುವು ಕೊಟ್ಟ ವರುಣ ಈಗ ಉಡುಪಿ, ಮಡಿಕೇರಿ, ಚಿಕ್ಕಮಗಳೂರು ಭಾಗಗಳಲ್ಲಿ ಅಬ್ಬರಿಸುತ್ತಿದ್ದಾನೆ. ಎಲ್ಲಿ ನೋಡಿದರು ನೀರು ನಿಂತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ನಾಲ್ಕು ದಿನ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಕೊಡಗು, ಉಡುಪಿ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ಇಂದು ಕೂಡ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ರಾತ್ರಿಯಿಂದ ಸುರಿದ ಧಾರಾಕಾರ ಮಳೆ- ಜನ ಜೀವನ ಅಸ್ತವ್ಯಸ್ತ, ಶಾಲಾ ಕಾಲೇಜುಗಳಿಗೆ ರಜೆ!

    ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಎನ್‍ಡಿಆರ್ ತಂಡ ಆಯಕಟ್ಟಿನ ಜಾಗಗಳಲ್ಲಿ ನಿಯೋಜನೆಗೊಂಡಿದೆ. ಮೂಲ್ಕಿ ಭಾಗದಲ್ಲಿ ನೆರೆಗೆ ಕಾರಣವಾಗಿದ್ದ ಶಾಂಭವಿ ನದಿಯಲ್ಲಿ ನೀರು ಇಳಿಕೆಯಾಗಿದೆ. ಆದರು ಇಲ್ಲಿನ ಕೃಷಿ ಜಮೀನು, ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ್ದ ನೀರು ಕಡಿಮೆಯಾಗಿಲ್ಲ. ಹೀಗಾಗಿ ಶಿಬರೂರು, ಕಿಲೆಂಜೂರು ಭಾಗದ ಸಂತ್ರಸ್ತರಿಗಾಗಿ ಪ್ರಾಥಮಿಕ ಶಾಲೆಗಳಲ್ಲಿ ತಾತ್ಕಾಲಿಕ ಗಂಜಿ ಕೇಂದ್ರ ಆರಂಭಿಸಲಾಗಿದೆ.

    ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಕೊಳ್ಳಗಳು, ಕೆರೆಗಳು ತುಂಬಿ ಹರಿಯುತ್ತಿದ್ದು, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕೆಆರ್‍ಎಸ್ ಭರ್ತಿಗೆ ಇನ್ನು 15.45 ಅಡಿ ಬಾಕಿ ಇದ್ದು, ಒಳಹರಿವು 10,124 ಕ್ಯೂಸೆಕ್ ಇದ್ದರೆ, ಹೊರ ಹರಿವು 3,494 ಕ್ಯೂಸೆಕ್ ಇದೆ. ಬರೋಬ್ಬರಿ 15 ವರ್ಷಗಳ ಬಳಿಕ ಒಂದೇ ತಿಂಗಳಲ್ಲಿ ತುಂಗಭದ್ರಾ ಡ್ಯಾಂನಲ್ಲಿ 42 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನು ಹಾರಂಗಿ ಜಲಾಶಯ ಭರ್ತಿಯಾಗಿದ್ದು ಒಳ ಹರಿವು ಹೆಚ್ಚಳವಾಗಿದೆ.

    ನಿರಂತರ ಮಳೆಯಿಂದಾಗಿ ಪಶ್ಚಿಮ ಘಟ್ಟದಿಂದ ಹರಿದು ಬರುವ ಬಹುತೇಕ ನದಿಗಳು ತುಂಬಿಕೊಂಡಿದೆ. ಗಡಿನಾಡು ಕಾಸರಗೋಡು ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಧೂರು ಸಿದ್ಧಿವಿನಾಯಕ ಕ್ಷೇತ್ರಕ್ಕೆ ನದಿಯ ನೆರೆ ನೀರು ನುಗ್ಗಿದೆ. ದೇವಸ್ಥಾನದ ಅಂಗಣದ ಒಳಭಾಗದಲ್ಲಿ ಭಾನುವಾರ ರಾತ್ರಿಯಿಂದ ಎರಡು ಅಡಿಯಷ್ಟು ನೀರು ನಿಂತಿತ್ತು. ಬೆಳಗ್ಗೆ ಮತ್ತು ಮಧ್ಯಾಹ್ನದ ಪೂಜೆಗಳು ನೀರಿನ ಮಧ್ಯೆಯೇ ನಡೆದಿದೆ. ಭಕ್ತರು ನೀರಿನಲ್ಲಿ ನಿಂತೇ ದೇವರ ಸೇವೆ ಪೂರೈಸಿದ್ದಾರೆ. ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ಮಧುವಾಹಿನಿ ಹೊಳೆಯಲ್ಲಿ ನೀರಿನ ಪ್ರಮಾಣ ಏರಿಕೆಯಾದಾಗ ಪ್ರತಿವರ್ಷವೂ ನೆರೆ ನೀರು ದೇಗುಲಕ್ಕೆ ನುಗ್ಗುತ್ತದೆ.

    ಉಡುಪಿ ಜಿಲ್ಲೆಯಲ್ಲಿ ಮೂರು ದಿನ ನಿರಂತರ ಮುಂಗಾರು ಮಳೆ ಆರ್ಭಟಿಸಿದ್ದು ಸ್ವರ್ಣಾ ನದಿ ಉಕ್ಕಿ ಹರಿದಿದೆ. ನದಿಯ ರಭಸಕ್ಕೆ ಬಜೆ ಅಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದೆ. ಕಾರ್ಕಳ, ಉಡುಪಿಯಲ್ಲಿ ಸುರಿದ ಧಾಕಾರಾರ ಮಳೆ ಪರಿಣಾಮ ಅಣೆಕಟ್ಟು ಮೇಲಿಂದ ನದಿ ತುಂಬಿ ಹರಿಯುತ್ತಿದೆ. ಸುತ್ತ ಮುತ್ತಲಿನ ತೋಟಗಳಿಗೆ ನದಿ ನೀರು ನುಗ್ಗಿದೆ. ಪುನರ್ವಸು ಮಳೆಗೆ ಉಡುಪಿ ಜಿಲ್ಲೆ ತತ್ತರಗೊಂಡಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

    ಉಡುಪಿನಗರ, ಮಲ್ಪೆ, ಬ್ರಹ್ಮಾವರ ಮತ್ತು ಕೋಟ ಭಾಗಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿವೆ. ಕುಂದಾಪುರದ ಖಾರ್ವಿಕೆರೆಯಲ್ಲಿ ಮೂರು ಮನೆಗಳು ಕುಸಿದಿವೆ. ಕೊಲ್ಲೂರಿನಲ್ಲಿ ಮಳೆಯಿಂದಾಗಿ ಜನಜೀವನ ಅಕ್ಷರಶಃ ಅಸ್ತವ್ಯಸ್ತಗೊಂಡಿತು. ಇನ್ನು ಕಾರ್ಕಳ ತಾಲೂಕಿನಲ್ಲೂ ಅತಿ ಹೆಚ್ಚು ಮಳೆಯಾಗಿದೆ. ಕಟಪಾಡಿಯ ಕಲ್ಲಾಪುವಿನಲ್ಲಿ ರಾಷ್ಡ್ರೀಯ ಹೆದ್ದಾರಿಯಲ್ಲಿ ನೆರೆ ನೀರು ಆವರಿಸಿದೆ. ನೆರೆಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದು, ತುರ್ತು ಕಾಮಗಾರಿಗೆ ಆದೇಶ ನೀಡಿದ್ದಾರೆ.

  • ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಶಾಲಾ, ಕಾಲೇಜುಗಳಿಗೆ ರಜೆ

    ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಶಾಲಾ, ಕಾಲೇಜುಗಳಿಗೆ ರಜೆ

    – ಪುತ್ತೂರಲ್ಲಿ ಗೋಡೆ ಕುಸಿದು ಇಬ್ಬರು ಬಲಿ,

    ದಕ್ಷಿಣ ಕನ್ನಡ/ಚಿಕ್ಕಮಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಆಗುತ್ತಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ.

    ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮೂಡಬಿದಿರೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ರಸ್ತೆ ಮತ್ತು ಕೃಷಿ ಭೂಮಿ ಜಲಾವೃತವಾಗಿದೆ. ನದಿಗಳು ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿವೆ. ಮಳೆ ಹಿನ್ನೆಲೆಯಲ್ಲಿ ಮೂಡಬಿದಿರೆ ಸೇರಿದಂತೆ ಸುಳ್ಯ, ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

    ಇನ್ನು ಭಾರೀ ಮಳೆಗೆ ತಡರಾತ್ರಿ ಪುತ್ತೂರಿನ ಹೆಬ್ಬಾರಬೈಲಿನಲ್ಲಿ ತಡೆಗೋಡೆ ಕುಸಿದು ಅಜ್ಜಿ, ಮೊಮ್ಮಗ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಮಲಗಿದ್ದ ಪಾರ್ವತಿ(65) ಮತ್ತ 6 ವರ್ಷದ ಮೊಮ್ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪುತ್ತೂರು ಸಹಾಯಕ ಕಮಿಷನರ್ ಹೆಚ್. ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಜಿಲ್ಲಾಡಳಿತಕ್ಕೆ ತರಾಟೆ:
    ಶುಕ್ರವಾರ ಬೆಳಗ್ಗೆಯಿಂದ ಬಿಟ್ಟು ಬಿಡದೇ ಜೋರಾಗಿ ಮಳೆ ಸುರಿಯುತ್ತಿದೆ. ರಾತ್ರಿಯೂ ಜೋರಾಗಿ ಸುರಿದಿದೆ. ಹೀಗಿರುವಾಗ ಶಾಲೆಗಳಿಗ ಮೊದಲೇ ರಜೆಯನ್ನು ಘೋಷಿಸಬೇಕು. ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕರೆತಂದು ಬಿಟ್ಟ ಮೇಲೆ ಘೋಷಣೆ ಮಾಡುವುದು ಎಷ್ಟು ಸರಿ? 5-6 ಕಿ.ಮೀ ದೂರದಿಂದ ನಾವು ಮಕ್ಕಳನ್ನು ಕಳುಹಿಸುತ್ತೇವೆ. ಬೆಳಗ್ಗೆ ಕಡಿಮೆಯಾಗದಿದ್ದರೆ ಆಗ ರಜೆ ನೀಡುವ ನಿರ್ಧಾರವನ್ನು ಶಿಕ್ಷಣ ಇಲಾಖೆ ಪ್ರಕಟಿಸುವುದು ಸರಿಯಲ್ಲ ಎಂದು ಕಡಬ ವಿದ್ಯಾರ್ಥಿಯ ಪೋಷಕ ಶಿವಕುಮಾರ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುಕ್ರವಾರದಿಂದಲೂ ಧಾರಾಕಾರ ಮಳೆ ಸುರಿಯುತ್ತಿದೆ. ಮೂಡಿಗೆರೆ, ಚಾರ್ಮಾಡಿ, ಕಳಸ, ಕುದುರೆಮುಖ, ಶೃಂಗೇರಿ ಭಾಗದಲ್ಲಿ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಪಾಯದ ಮಟ್ಟ ಮೀರಿ ತುಂಗಾ, ಭದ್ರಾ ನದಿಗಳು ಹರಿಯುತ್ತಿವೆ. ಅಕ್ಕಪಕ್ಕದ ರಸ್ತೆ, ಜಮೀನುಗಳಿಗೆ ನುಗ್ಗಿದ ನದಿ ನೀರು ನುಗ್ಗಿದ್ದು, ಹಲವೆಡೆ ರಸ್ತೆ ಸಂಪರ್ಕ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

    ಹೊರನಾಡು ಸಮೀಪದ ಹೆಬ್ಬಾಳೆ ಸೇತುವೆ ಭದ್ರಾ ನದಿಯ ನೀರು ಅಪ್ಪಳಿಸುತ್ತಿದ್ದು, ಮುಳುಗಡೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಭದ್ರಾ ನದಿಯ ರಭಸ ನೋಡಿ ಪ್ರವಾಸಿಗರು ವಾಹನ ನಿಲ್ಲಿಸಿದ್ದಾರೆ. ಸದ್ಯಕ್ಕೆ ಕಳಸ – ಹೊರನಾಡು ರಸ್ತೆ ಸಂಪರ್ಕ ಬಂದ್ ಆಗಿದೆ. ಶುಕ್ರವಾರ ರಾತ್ರಿಯಿಂದ ಕುದುರೆಮುಖ, ಕಳಸ, ಹೊರನಾಡು ಸುತ್ತಮುತ್ತ ಮಳೆ ಹಿನ್ನೆಲೆಯಲ್ಲಿ ಭದ್ರಾ ನದಿಯ ನೀರಿನ ಒಳಹರಿವು ಹೆಚ್ಚಳಗೊಂಡಿದೆ.