Tag: Uttarakhand

  • ಉತ್ತರಾಖಂಡದಲ್ಲಿ ಗದ್ದುಗೆ ಏರಿದ ಬಿಜೆಪಿ!

    ಉತ್ತರಾಖಂಡದಲ್ಲಿ ಗದ್ದುಗೆ ಏರಿದ ಬಿಜೆಪಿ!

    ನವದೆಹಲಿ: ಭಾರತೀಯ ಜನತಾ ಪಾರ್ಟಿ ಉತ್ತರಾಖಂಡ್ ಗದ್ದುಗೆ ಹಿಡಿಯಲು ಸರ್ವಸನ್ನದ್ಧವಾಗಿದೆ. ಉತ್ತರಾಖಂಡ್ ರಾಜ್ಯದಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು, ಈಗಾಗಲೇ ಬಿಜೆಪಿ 47 ಕ್ಷೇತ್ರಗಳಲ್ಲಿ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದೆ.

    ಉತ್ತರಾಖಂಡ್ ರಾಜ್ಯ ಗದ್ದುಗೆಯನ್ನು ಏರಲು ಕನಿಷ್ಠ 36 ಕ್ಷೇತ್ರಗಳಲ್ಲಿ ಗೆಲವು ಪಡೆದುಕೊಳ್ಳಬೇಕು. ಆದರೆ ಬಿಜೆಪಿ ಪಕ್ಷದ ಅಭ್ಯರ್ಥಿಗಳು 47 ಕ್ಷೇತ್ರಗಳಲ್ಲಿ ಗೆಲವು ಕಂಡುಕೊಂಡಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷ 11 ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿಗಳು 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

    ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾದ ಹರೀಶ್ ರಾವತ್ ಸೇರಿದಂತೆ ಅನೇಕರು ಹಿನ್ನಡೆಯನ್ನು ಅನುಭವಿಸಿದ್ದಾರೆ. ಹರಿದ್ವಾರ್ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಯತೀಶ್ವರಾನಂದ್ ಅವರ ವಿರುದ್ಧ ಹರೀಶ್ ರಾವತ್ ತೀವ್ರ ಹಿನ್ನೆಡೆಯನ್ನು ಅನುಭವಿಸಿದ್ದಾರೆ.

    2012ರಲ್ಲಿ ಕಾಂಗ್ರೆಸ್ 32, ಬಿಜೆಪಿ 31, ಬಿಎಸ್‍ಪಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

     

  • ಫಲಿತಾಂಶಕ್ಕೂ ಮೊದಲೇ ಕುರ್ಚಿಗಾಗಿ ಸರ್ಕಸ್- ಯಾವ ರಾಜ್ಯದಿಂದ ಯಾರೆಲ್ಲಾ ಸಂಭವನೀಯ ಸಿಎಂ ಅಭ್ಯರ್ಥಿಗಳು?

    ಫಲಿತಾಂಶಕ್ಕೂ ಮೊದಲೇ ಕುರ್ಚಿಗಾಗಿ ಸರ್ಕಸ್- ಯಾವ ರಾಜ್ಯದಿಂದ ಯಾರೆಲ್ಲಾ ಸಂಭವನೀಯ ಸಿಎಂ ಅಭ್ಯರ್ಥಿಗಳು?

    ನವದೆಹಲಿ: ಫಲಿತಾಂಶಕ್ಕೂ ಮೊದಲೇ ಸಿಎಂ ಸ್ಥಾನಕ್ಕಾಗಿ ಉತ್ತರ ಪ್ರದೇಶದಲ್ಲಿ ಭಾರೀ ಪೈಪೋಟಿ ನಡೀತಿದೆ. ಜೊತೆಗೆ ಉಳಿದ ರಾಜ್ಯಗಳಲ್ಲಿ ಯಾರೆಲ್ಲಾ ಸಿಎಂ ಸಂಭವನೀಯ ಅಭ್ಯರ್ಥಿಗಳಿದ್ದಾರೆ ಅನ್ನೋದನ್ನ ನೋಡೋದಾದ್ರೆ;

    1. ಉತ್ತರಪ್ರದೇಶ
    * ಯೋಗಿ ಆದಿತ್ಯನಾಥ್: ಪೂರ್ವಾಂಚಲ ಭಾಗದ ಪ್ರಬಲ ಮುಖಂಡರಾಗಿರೋ ಇವರಿಗೆ ಆರ್‍ಎಸ್‍ಎಸ್ ಆರ್ಶೀವಾದವಿದೆ. ಸನ್ಯಾಸಿ ಹಾಗೂ ಹೈಕಮಾಂಡ್‍ಗೆ ತುಂಬಾ ಹತ್ತಿರ.

    * ಕೇಶವ ಮಯೂರ: ಹಿಂದುಳಿದ ವರ್ಗಗಳ ಮುಖಂಡ, ಕುರ್ಮಿ ಜನಾಂಗದ ನಾಯಕ. ವಿಹೆಚ್‍ಪಿ ಹಿನ್ನೆಲೆ ಇದ್ದು, ಕೇಂದ್ರ ಸಚಿವರಾಗಿದ್ದಾರೆ. ಪೂರ್ವಾಂಚಲ ಭಾಗದ ಮುಖಂಡರಾಗಿರೀ ಇವರು ಅನುಭವಿ ರಾಜಕಾರಣಿ.

    * ಡಾ.ಮಹೇಶ್ ಶರ್ಮಾ: ಆರ್‍ಎಸ್‍ಎಸ್‍ಗೆ ಹತ್ತಿರ. ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದಾರೆ. ಹಾಲಿ ಕೇಂದ್ರ ಸಚಿವರಾಗಿದ್ದಾರೆ.

    * ಕಲ್‍ರಾಜ್ ಮಿಶ್ರಾ: ಬ್ರಾಹ್ಮಣ ಮುಖಂಡ, ಉತ್ತಮ ರಾಜಕಾರಣಿ. ಇವರಿಗೆ ರಾಷ್ಟ್ರ ರಾಜಕಾರಣದ ಅನುಭವವಿದೆ.

    2. ಪಂಜಾಬ್
    ಕಾಂಗ್ರೆಸ್‍ನಿಂದ ಅಮರೀಂದರ್ ಸಿಂಗ್ ಸಿಎಂ ರೇಸ್‍ನಲ್ಲಿದ್ದರೆ, ನವಜೋತ್ ಸಿಂಗ್ ಸಿಧು ಸಂಭವನೀಯ ಡಿಸಿಎಂ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ, ಅಕಾಲಿದಳದಿಂದ ಪ್ರಕಾಶ್ ಸಿಂಗ್ ಬಾದಲ್ ಇದ್ದಾರೆ.

    3. ಗೋವಾ
    ಗೋವಾದಲ್ಲಿ ಸದ್ಯಕ್ಕೆ ಬಿಜೆಪಿ ಆಡಳಿತವಿದೆ. ಮತ್ತೊಂದು ಬಾರಿಗೆ ಅಧಿಕಾರಕ್ಕೆ ಬರುತ್ತೆ ಅಂತ ಚುನವಣೋತ್ತರ ಸಮೀಕ್ಷೆ ಹೇಳ್ತಿದೆ. ಹಾಗಾದ್ರೆ, ಗೋವಾಕ್ಕೆ ಯಾರು ಸಿಎಂ..? ನಾಯಕರ ಹಿನ್ನೆಲೆ ಏನು ಅಂತ ನೋಡೋದಾದ್ರೆ;
    * ಬಿಜೆಪಿಯಿಂದ ಮನೋಹರ್ ಪರಿಕ್ಕರ್ (ಅನುಭವಿ ರಾಜಕಾರಣಿ, ಕೇಂದ್ರ ಸಚಿವ)
    * ಬಿಜೆಪಿಯಿಂದ ಲಕ್ಷ್ಮಿಕಾಂತ್ ಪರ್ಸೇಕರ್ (ಹಾಲಿ ಸಿಎಂ, ಗೆಲುವಿನ ರೂವಾರಿ)
    * ಬಿಜೆಪಿಯಿಂದ ಫ್ರಾನ್ಸಿಸ್ ಡಿಸೋಜಾ (ಕ್ರಿಶ್ಚಿಯನ್ ಲೀಡರ್)
    * ಲೂಸಿನೋ ಫೆಲೈರೋ ( ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ )

    4. ಉತ್ತರಾಖಂಡ್
    ಉತ್ತರಾಖಂಡ್‍ನಲ್ಲಿ ಕಾಂಗ್ರೆಸ್‍ನ ಹರೀಶ್ ರಾವತ್ ವಿರೋಧಿ ಅಲೆ ಇದೆ. ಹೀಗಾಗಿ, ನಾವು ಪಟ್ಟಕ್ಕೇರ್ತೇವೆ ಅನ್ನೋದು ಬಿಜೆಪಿ ನಾಯಕರ ನಿರೀಕ್ಷೆ. ಹಾಗಾಗಿ, ಉತ್ತರಾಖಂಡ್‍ಗೆ ಯಾರು ಸಿಎಂ..? ನಾಯಕರ ಹಿನ್ನೆಲೆ ಏನು..?
    * ಬಿಜೆಪಿಗೆ ಸ್ಪಷ್ಟ ಬಹುಮತ ಸಾಧ್ಯತೆ
    * ಬಿಜೆಪಿಯಿಂದ ಬಿಸಿ ಖಂಡೂರಿ ರೇಸ್‍ನಲ್ಲಿದ್ದಾರೆ. 2007 ರಿಂದ 2009, 2011 ರಿಂದ 2012 ರವರೆಗೆ ಸಿಎಂ ಆಗಿದ್ದ ಅನುಭವ ಇವರಿಗಿದೆ.

    5. ಮಣಿಪುರ
    ಪುಟ್ಟರಾಜ್ಯ ಮಣಿಪುರದಲ್ಲಿ ಸತತವಾಗಿ ಹ್ಯಾಟ್ರಿಕ್ ಸಿಎಂ ಆಗಿದ್ದ ಕಾಂಗ್ರೆಸ್‍ನ ಒಕರಾಮ್ ಇಬೋಬಿ ಸಿಂಗ್‍ಗೆ ಬಿಜೆಪಿ ಪ್ರಬಲ ಪೈಪೋಟಿ ನೀಡಿದೆ. ಮಣಿಪುರದಲ್ಲಿ ಬಿಜೆಪಿ ಸಿಎಂ ಕ್ಯಾಂಡಿಡೇಟ್ ಯಾರು? ಅವರ ಹಿನ್ನೆಲೆ ಏನು ಅನ್ನೋದನ್ನ ನೋಡೋದಾದ್ರೆ;

    ಚವೋಬ ಸಿಂಗ್
    * ಚುನಾವಣಾ ನಿರ್ವಹಣಾ ಸಮಿತಿ ಮುಖ್ಯಸ್ಥ
    * ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ
    * ಪಕ್ಷ ಬೆಳವಣಿಗೆ ರೂವಾರಿ
    ಇವರ ಜೊತೆಗೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಾಬಾನಂದ ಸಿಂಗ್ ಹೆಸರು ಕೇಳಿ ಬಂದಿದೆ. ಇವರು ಪ್ರಧಾನಿ ಮೋದಿಯ ಕಟ್ಟಾ ಆರಾಧಕ.

  • ಪಂಚರಾಜ್ಯಗಳ ಮಹಾ ಫಲಿತಾಂಶಕ್ಕೆ ಕ್ಷಣಗಣನೆ

    ಪಂಚರಾಜ್ಯಗಳ ಮಹಾ ಫಲಿತಾಂಶಕ್ಕೆ ಕ್ಷಣಗಣನೆ

    ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಮಹಾ ಫಲಿತಾಂಶಕ್ಕೆ 2 ಗಂಟೆಯಷ್ಟೇ ಬಾಕಿ ಇದೆ. ಕೆಲವೇ ಕ್ಷಣಗಳಲ್ಲಿ ಮತದಾನ ಎಣಿಕೆ ಕಾರ್ಯ ಶುರುವಾಗಲಿದೆ.

    ಸಾವಿರಾರು ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಮೊದಲ ಬಾರಿಗೆ ಉತ್ತರ ಪ್ರದೇಶ, ಮಣಿಪುರದಲ್ಲಿ ಬಿಜೆಪಿ ಬಹುಮತ ಪಡೆಯುತ್ತಾ 4 ದಶಕದ ಬಳಿಕ ಮತ್ತೆ ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸುತ್ತಾ? ಎಂಬುದಕ್ಕೆ ಇಂದು ಉತ್ತರ ಸಿಗಲಿದೆ.

    ಹಾಗೆ ಪಂಜಾಬ್‍ನಲ್ಲಿ 14 ಬಾರಿ ಕಾಂಗ್ರೆಸ್, 8 ಬಾರಿ ಅಕಾಲಿದಳದ ಆಡಳಿತ ಅಂತ್ಯವಾಗುತ್ತಾ? 3ನೇ ಬಾರಿಗೆ ಗೋವಾ, ಉತ್ತರಾಖಂಡ್‍ನಲ್ಲಿ ಮತ್ತೆ ಕಮಲ ಅರಳುತ್ತಾ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

  • ಪಂಚ ರಾಜ್ಯಗಳ ಚುನಾವಣೆ: ಯಾವ ರಾಜ್ಯದಲ್ಲಿ ಎಷ್ಟು ಹಣ, ಮದ್ಯ, ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ?

    ಪಂಚ ರಾಜ್ಯಗಳ ಚುನಾವಣೆ: ಯಾವ ರಾಜ್ಯದಲ್ಲಿ ಎಷ್ಟು ಹಣ, ಮದ್ಯ, ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ?

    ದು ರಾಜ್ಯಗಳಲ್ಲಿ ಚುನಾವಣೆ ಮುಕ್ತಾಯವಾಗಿದ್ದು, ಮಾರ್ಚ್ 11ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಇಲ್ಲಿ ಚುನಾವಣೆಯ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ಹಣ, ಮದ್ಯ, ಡ್ರಗ್ಸ್ ಪ್ರಮಾಣದ ಮಾಹಿತಿಯನ್ನು ನೀಡಲಾಗಿದೆ.

    ಹಣ: 2017ರ ಚುನಾವಣೆ ಸಂದರ್ಭದಲ್ಲಿ ದಾಖಲೆ ಇಲ್ಲದ ಒಟ್ಟು 184.85 ಕೋಟಿ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. 2012 ರ ಚುನಾವಣೆ ಸಮಯದಲ್ಲಿ 50.78 ಕೋಟಿ ರೂ. ಹಣವನ್ನು ವಶಕ್ಕೆ ಪಡೆಯಲಾಗಿತ್ತು.

    ಮದ್ಯ: ಚುನಾವಣೆಯ ಹೊಸ್ತಿಲಲ್ಲಿ ಎಲ್ಲ ಐದು ರಾಜ್ಯಗಳಿಂದ 83.21 ಕೋಟಿ ರೂ. ಮೌಲ್ಯದ ಮದ್ಯವನ್ನು ವಶ ಪಡೆಯಲಾಗಿದೆ. ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ 2.82 ಕೋಟಿ ರೂ. ಮೌಲ್ಯದ ಮದ್ಯ ಅಧಿಕಾರಿಗಳು ವಶ ಪಡೆದಿದ್ದರು.

    ಡ್ರಗ್ಸ್: ಐದು ರಾಜ್ಯಗಳಲ್ಲಿ 31.78 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ. 2012 ರ ಚುನಾವಣೆಯ ವೇಳೆಯಲ್ಲಿ 54.0 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು.

    ರಾಜ್ಯಗಳಲ್ಲಿ ಸಿಕ್ಕಿರುವ, ಹಣ, ಮದ್ಯ, ಡ್ರಗ್ಸ್ ವಿವರ:

    ಉತ್ತರಪ್ರದೇಶ:
    ಹಣ: 2017 ರ ಚುನಾವಣೆಯಲ್ಲಿ 119.03 ಕೋಟಿ ರೂ. ವಶಕ್ಕೆ ಪಡೆದಿದ್ರೆ, 2012 ರಲ್ಲಿ 36.29 ಕೋಟಿ ರೂ. ವಶಕ್ಕೆ ಪಡೆಯಲಾಗಿತ್ತು.

    ಮದ್ಯ: 2017 ರ ಚುನಾವಣೆಯಲ್ಲಿ 64.66 ಕೋಟಿ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ರೆ. 2012 ರಲ್ಲಿ 0.07 ಕೋಟಿ ಮೌಲ್ಯದ ಮದ್ಯವನ್ನು ವಶಕ್ಕೆ ಪಡಯಲಾಗಿತ್ತು.

    ಡ್ರಗ್ಸ್: 2017 ಚುನಾವಣೆಯಲ್ಲಿ 9.60 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

    ಪಂಜಾಬ್ :

    ಹಣ: 2017 ರ ಚುನಾವಣೆಯಲ್ಲಿ 58.02 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ. ಕಳೆದ 2012ರ ಚುನಾವಣೆಯಲ್ಲಿ 11.51 ಕೋಟಿ ರೂ. ನಗದನ್ನು ವಶಕ್ಕೆ ಪಡೆಯಲಾಗಿತ್ತು.

    ಮದ್ಯ: 2017 ರ ಚುನಾವಣೆಯಲ್ಲಿ 13.36 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಕಲೇದ 2012 ರ ಚುನಾವಣೆಯಲ್ಲಿ 2.59 ಕೋಟಿ ರೂ. ಮೌಲ್ಯದ ಮದ್ಯವನ್ನು ವಶ ಪಡೆಯಲಾಗಿತ್ತು.

    ಡ್ರಗ್ಸ್: 2017 ರ ಚುನಾವಣೆಯಲ್ಲಿ 18.26 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. 2012 ಚುನಾವಣೆಯಲ್ಲಿ 54.0 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು.

    ಉತ್ತರಾಖಂಡ:
    ಹಣ: 2017 ರಚುನಾವಣೆಯಲ್ಲಿ 3.38 ಕೋಟಿ ರೂ. ವಶಕ್ಕೆ ಪಡೆದಿದ್ರೆ, 2012 ರ ಚುನಾವಣೆಯಲ್ಲಿ 1.30 ಕೋಟಿ ರೂ. ವಶಕ್ಕೆ ಪಡೆಯಲಾಗಿತ್ತು.

    ಮದ್ಯ: 2017 ರ ಚುನಾವಣೆಯಲ್ಲಿ 3.10 ಕೋಟಿ ರೂ. ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ರೆ, 2012ರ ಚುನಾವಣೆಯಲ್ಲಿ 0.15 ಕೋಟಿ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿತ್ತು.

    ಡ್ರಗ್ಸ್: 2017ರ ಚುನಾವಣೆಯಲ್ಲಿ 0.37 ಕೋಟಿ ರೂ. ಮೌಲ್ಯದ ಡ್ರಗ್ಸ್ ನ್ನು ವಶಕ್ಕ ಪಡೆಯಲಾಗಿದೆ.

    ಮಣಿಪುರ:
    ಹಣ: 2017 ರ ಚುನಾವಣೆಯಲ್ಲಿ 2.18 ಕೋಟಿ ರೂ. ನಗದು ಹಣವನ್ನು ವಶಕ್ಕೆ ಪಡೆದಿದ್ರೆ, 2012 ರ ಚುನಾವಣೆ ಸಮಯದಲ್ಲಿ 1.08 ಕೋಟಿ ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿತ್ತು.

    ಮದ್ಯ: 2017 ರ ಚುನಾವಣೆಯಲ್ಲಿ 1.02 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಅಧಿಕಾರಿಗಳು ವಶಕ್ಕೆ ಪಡೆದಿದ್ರು. ಇನ್ನೂ 2012 ರ ಚುನಾವಣೆಯಲ್ಲಿ 0.02 ಕೋಟಿ ಮೌಲ್ಯದ ಮದ್ಯವನ್ನ ವಶಕ್ಕೆ ಪಡೆಯಲಾಗಿತ್ತು.

    ಡ್ರಗ್ಸ್: 2017 ರ ಚುನಾವಣೆಯಲ್ಲಿ 3.32 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

    ಗೋವಾ:
    ಹಣ: ಈ ಬಾರಿಯ 2017 ರ ಚುನಾವಣೆಯಲ್ಲಿ 2.24 ಕೋಟಿ ರೂ. ನಗದು ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 2012ರ ಚುನಾವಣೆ ವೇಳೆಯಲ್ಲಿ 0.60 ಕೋಟಿ ರೂ. ನಗದು ಚವಶಕ್ಕೆ ಪಡೆಯಲಾಗಿತ್ತು.

    ಮದ್ಯ: 2017ರ ಚುನಾವಣೆಯಲ್ಲಿ 1.07 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

    ಡ್ರಗ್ಸ್: ಈ ಬಾರಿಯ ಚುನಾವಣೆಯಲ್ಲಿ 0.33 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

     

  • ಪ್ರವಾಹ ಪರಿಹಾರ ನಿಧಿಯಿಂದ ಕೋಹ್ಲಿಗೆ 47 ಲಕ್ಷ ರೂ. ನೀಡಿದ ಉತ್ತರಾಖಂಡ್ ಸರ್ಕಾರ?

    ಪ್ರವಾಹ ಪರಿಹಾರ ನಿಧಿಯಿಂದ ಕೋಹ್ಲಿಗೆ 47 ಲಕ್ಷ ರೂ. ನೀಡಿದ ಉತ್ತರಾಖಂಡ್ ಸರ್ಕಾರ?

    ಡೆಹ್ರಾಡೂನ್: ಚುನಾವಣಾ ಫಲಿತಾಂಶ ಹೊರಬೀಳಲು ಕೇಲವೇ ದಿನ ಬಾಕಿ ಇರುವ ಮುನ್ನವೇ ಉತ್ತರಾಖಂಡ್‍ನ ಹರೀಶ್ ರಾವತ್ ಸರ್ಕಾರ ವಿವಾದದ ಸುಳಿಯಲ್ಲಿ ಸಿಲುಕುವಂತಾಗಿದೆ. ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಯಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ 47.19 ಲಕ್ಷ ರೂ. ಹಣ ನೀಡಲಾಗಿದೆ ಅಂತಾ ಆರ್‍ಟಿಐ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

    2013ರ ಕೇದಾರನಾಥ ಪ್ರವಾಹ ಸಂತ್ರಸ್ತರ ನಿಧಿಯಿಂದ 47.19 ಲಕ್ಷ ರೂ. ಹಣವನ್ನು ಕೊಹ್ಲಿಗೆ 2015ರ ಜೂನ್ ನಲ್ಲಿ ಉತ್ತರಾಖಂಡ್ ಸರ್ಕಾರ ಪಾವತಿಸಿದೆ ಎಂದು ಆರ್‍ಟಿಐ ಕಾರ್ಯಕರ್ತ ಅಜಯ್ ಆರೋಪಿಸಿದ್ದಾರೆ.

    ಕೊಹ್ಲಿ ಉತ್ತರಾಖಂಡ್ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್ ಆದ ನಂತರ 60 ಸೆಕೆಂಡ್‍ಗಳ ಪ್ರವಾಸೋದ್ಯಮದ ವಿಡಿಯೊವೊಂದರಲ್ಲಿ ನಟಿಸಿದ್ದರು. ಕೊಹ್ಲಿಯ ಈ ನಟನೆಗಾಗಿ ರಾವತ್ ಸರ್ಕಾರ ಕೇದಾರನಾಥ್ ಪ್ರವಾಹ ಸಂತ್ರಸ್ತರಿಗೆ ಮೀಸಲಿಟ್ಟಿದ್ದ ನಿಧಿಯಿಂದ ಹಣವನ್ನು ಪಾವತಿ ಮಾಡಿದೆ ಅಂತಾ ಆರೋಪಿಸಿದ್ದಾರೆ. ಆದರೆ ಕೊಹ್ಲಿಯ ಏಜೆಂಟ್ ಬಂಟಿ ಷಾ ಮಾತ್ರ ಈ ಆರೋಪವನ್ನು ತಳ್ಳಿ ಹಾಕಿದ್ದು, ಇಂತಹ ಯಾವುದೇ ಹಣದ ವಹಿವಾಟು ನಡೆದಿಲ್ಲ ಅಂತಾ ಹೇಳಿದ್ದಾರೆ.

    ಈ ಬಗ್ಗೆ ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಮಾಧ್ಯಮ ಸಲಹೆಗಾರ ಸುರೇಂದ್ರ ಕುಮಾರ್ ಪ್ರತಿಕ್ರಿಯಿಸಿದ್ದು, ಈ ಆರೋಪಗಳೆಲ್ಲವೂ ಆಧಾರರಹಿತವಾಗಿದೆ. ಪ್ರವಾಸೋದ್ಯಮ ರಾಜ್ಯದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿದೆ. ಹೀಗಾಗಿ ಒಬ್ಬ ಪ್ರಮುಖ ವ್ಯಕ್ತಿಯನ್ನು ರಾಜ್ಯದ ಪ್ರವಾಸಿ ತಾಣಗಳ ಜಾಹಿರಾತಿಗಾಗಿ ಆಯ್ಕೆ ಮಾಡಿಕೊಂಡರೆ ತಪ್ಪೇನು? ಎಲ್ಲವನ್ನೂ ಕಾನೂನಾತ್ಮಕವಾಗಿಯೇ ಮಾಡಲಾಗಿದೆ. ಈ ಆರೋಪಗಳೆಲ್ಲವೂ ಆಧಾರರಹಿತ. ಕೇದರನಾಥದ ಅಭಿವೃದ್ಧೆಯೇ ಸರ್ಕಾರದ ಮೊದಲ ಆದ್ಯತೆ ಎಂಬುದು ಜನರಿಗೆ ಗೊತ್ತು. ಬಿಜೆಪಿಗೆ ಈ ಚುನಾವಣೆಯಲ್ಲಿ ಸೋಲು ಖಚಿತ. ಹೀಗಾಗಿ ನಿರಾಸೆಯಿಂದ ಈ ರೀತಿ ಆರೋಪಗಳನ್ನು ಮಾಡುತ್ತಿದೆ ಎಂದಿದ್ದಾರೆ.

  • ವೀಡಿಯೋ: 3 ದಿನದ ಹಸುಗೂಸಿನ ಕಾಲು ಮುರಿದ ವಾರ್ಡ್ ಬಾಯ್

    ಡೆಹ್ರಾಡೂನ್: 3 ದಿನದ ಮಗುವಿನ ಅಳು ಕೇಳಿ ಕೋಪಗೊಂಡು ಅಟೆಂಡರ್‍ವೊಬ್ಬ ಮಗುವಿನ ಕಾಲನ್ನ ಮುರಿದಿರೋ ಘಟನೆ ಉತ್ತರಾಖಂಡ್‍ನ ರೂರ್ಕಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

    ಜನವರಿ 25ರಂದು ಜನಿಸಿದ್ದ ಮಗುವಿಗೆ ಉಸಿರಾಟದ ಸಮಸ್ಯೆ ಇದ್ದಿದ್ದರಿಂದ ಜನವರಿ 28ರಂದು ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವನ್ನ ಐಸಿಯುನಲ್ಲಿ ಇರಿಸಲಾಗಿತ್ತು. ಅಲ್ಲೇ ನಿದ್ದೆಗೆ ಜಾರಿದ್ದ ಅಟೆಂಡರ್‍ಗೆ ಮಗುವಿನ ಅಳು ಕಿರಿಕಿರಿ ಮಾಡಿದೆ. ಅಷ್ಟಕ್ಕೆ ಸಿಟ್ಟಿಗೆದ್ದ ಆತ ಹಾಸಿಗೆ ಬಳಿ ಬಂದು ಮಗುವಿನ ಕಾಲನ್ನು ಜೋರಾಗಿ ಎಳೆದು ಡೈಪರ್ ಬದಲಿಸಿದ್ದಾನೆ. ನಂತರ ಮಗು ಅಳುತ್ತಿದ್ದರೂ ಈತ ಮಾತ್ರ ಎಂದಿನಂತೆ ತನ್ನ ಕೆಲಸ ಮುಂದುವರೆಸಿದ್ದಾನೆ. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಗುವನ್ನ ಡೆಹ್ರಾಡೂನ್ ಆಸ್ಪತ್ರೆಗೆ ದಾಖಲಿಸಿದಾಗ ಅದರ ಕಾಲಿನ ಮೂಳೆ ಮುರಿದಿದೆ ಎಂದು ವೈದ್ಯರು ಹೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯಕ್ಕೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.

    ಅಟೆಂಡರ್ ಇಡೀ ರತ್ರಿ ನನ್ನ ಮಗುವಿಗೆ ಕಿರುಕುಳ ನೀಡಿದ್ದಾನೆ, ಕಾಲನ್ನೂ ಮುರಿದಿದ್ದಾನೆ ಎಂದು ಮಗುವಿನ ತಂದೆ ಅಳಲು ತೋಡಿಕೊಂಡಿದ್ದಾರೆ. ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

  • ಉತ್ತರಾಖಂಡ್ ಬಿಜೆಪಿಯಲ್ಲಿ ಬಿಕ್ಕಟ್ಟು – 33 ಮುಖಂಡರ ಅಮಾನತು

    ಡೆಹ್ರಾಡೂನ್: ಪಂಚರಾಜ್ಯ ಚುನಾವಣೆಯಲ್ಲಿ ಉತ್ತರಾಖಂಡ್‍ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತ ಸಮೀಕ್ಷೆಗಳು ಹೇಳಿತ್ತು. ಆದರೆ ಮತದಾನಕ್ಕೆ ಇನ್ನು ಕೇವಲ 10 ದಿನಗಳು ಬಾಕಿಯಿರುವಾಗ ಉತ್ತರಾಖಂಡ್ ಕಮಲ ಪಾಳಯದಲ್ಲಿ ಕಂಪನ ಉಂಟಾಗಿದೆ.

    ಪಕ್ಷ ವಿರೋಧಿ ಚಟುವಟಿಕೆ ಮಾಡಿರೋ ಆರೋಪದಲ್ಲಿ ಉತ್ತರಾಖಂಡ್ ಬಿಜೆಪಿಯ 33 ಬಂಡಾಯ ನಾಯಕರನ್ನ 6 ವರ್ಷಗಳ ಕಾಲ ಅಮಾನತು ಮಾಡಿದೆ. ಕಾಂಗ್ರೆಸ್‍ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ 13 ಮಂದಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇದಕ್ಕೆ ಬಿಜೆಪಿಯಲ್ಲಿ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಈ 13 ಮಂದಿ ವಿರುದ್ಧ ಬಿಜೆಪಿಯ ಬಂಡಾಯ ನಾಯಕರು ನಾಮಪತ್ರ ಸಲ್ಲಿಸಿದ್ದಾರೆ.

    ಅಮಾನತುಗೊಂಡಿರೋ 33 ಬಂಡಾಯ ನಾಯಕರು ಸ್ವತಂತ್ರ ಅಭ್ಯರ್ಥಿಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಫೆಬ್ರವರಿ 15ರಂದು ಉತ್ತರಾಖಂಡ್‍ನಲ್ಲಿ ಚುನಾವಣೆ ನಡೆಯಲಿದೆ.

  • ಉತ್ತರಾಖಂಡ್ ಚುನಾವಣೆ: ಬಾಹುಬಲಿ ಅವತಾರದಲ್ಲಿ ಹರೀಶ್ ರಾವತ್- ವೀಡಿಯೋ ವೈರಲ್

    ಡೆಹ್ರಾಡೂನ್: 5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದೆ. ಇದರ ಮಧ್ಯೆ ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್‍ರನ್ನು ಬಾಹುಬಲಿಗೆ ಹೋಲಿಸಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಬಾಹುಬಲಿ ಸಿನಿಮಾದಲ್ಲಿ ನಾಯಕ ಪ್ರಭಾಸ್ ಶಿವಲಿಂಗವನ್ನು ಹೊತ್ತು ಸಾಗ್ತಾರೆ. ಆದ್ರೆ ಈ ವೀಡಿಯೋದಲ್ಲಿ ಹರೀಶ್ ರಾವತ್ ಉತ್ತರಾಖಂಡನ್ನು ಹೊತ್ತೊಯ್ಯವಂತೆ ಬಿಂಬಿಸಲಾಗಿದೆ. ಅಲ್ಲದೆ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಸೇರಿದಂತೆ ಮತ್ತಿತ್ತರ ನಾಯಕರು ಹರೀಶ್ ರಾವತ್‍ರನ್ನು ಆಶ್ಚರ್ಯದಿಂದ ನೋಡುತ್ತಿರುವಂತೆ ಬಿಂಬಿಸಲಾಗಿದೆ.

    ಈ ವೀಡಿಯೋವನ್ನ ಯುಪಿ/ಯುಕೆ ಲೈವ್ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಳ್ಳಲಾಗಿದ್ದು, ಹರೀಶ್ ರಾವತ್‍ರನ್ನು ಉತ್ತರಾಖಂಡ್‍ನ ರಕ್ಷಕ ಎಂದು ವೀಡಿಯೋದಲ್ಲಿ ತೋರಿಸಲಾಗಿದೆ. ಈ ಬಗ್ಗೆ ಸಿಎಂ ಹರೀಶ್ ರಾವತ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ವೀಡಿಯೋ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

    ಫೆಬ್ರವರಿ 15ರಂದು ಉತ್ತರಾಖಂಡ್‍ನಲ್ಲಿ ಚುನಾವಣೆ ನಡೆಯಲಿದೆ.

    https://www.youtube.com/watch?v=3SWPC1Vxgjk