Tag: uttar pradesh

  • ಪ್ರಿಯಕರನನ್ನು ಹತ್ಯೆ ಮಾಡಿ ಫ್ರಿಡ್ಜ್ ನಲ್ಲಿ ಬಚ್ಚಿಟ್ಟ ವಿವಾಹಿತ ಮಹಿಳೆ ಅರೆಸ್ಟ್

    ಪ್ರಿಯಕರನನ್ನು ಹತ್ಯೆ ಮಾಡಿ ಫ್ರಿಡ್ಜ್ ನಲ್ಲಿ ಬಚ್ಚಿಟ್ಟ ವಿವಾಹಿತ ಮಹಿಳೆ ಅರೆಸ್ಟ್

    ಲಕ್ನೋ: ಸಹೋದರನ ಜೊತೆಗೂಡಿ ಪ್ರಿಯಕರನನ್ನು ಹತ್ಯೆ ಮಾಡಿ ಮನೆಯ ಫ್ರಿಡ್ಜ್ ನಲ್ಲಿ ಬಚ್ಚಿಟ್ಟು ನಂತರ ಹತ್ತಿರದ ರೈಲ್ವೇ ಹಳಿಯಲ್ಲಿ ಎಸೆದ ವಿವಾಹಿತ ಮಹಿಳೆಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ಸಹರಾನ್ಪೂರದ ಇಂದಿರಾನಗರದ ನಿವಾಸಿ ಅತೀಶ್ ಕೊಲೆಯಾದ ವ್ಯಕ್ತಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇರಣಾ ಮತ್ತು ಆಕೆಯ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಸೆ.24ರಂದು ಈ ಹತ್ಯೆ ನಡೆದಿದ್ದು ಸೆ.26ರಂದು ಮೃತ ದೇಹ ದೊರೆತಿತ್ತು ಎಂದು ಸಹರಾನ್ಪೂರ್ ಜಿಲ್ಲಾ ಪೊಲೀಸ್ ಅಧಿಕಾರಿ ಪ್ರತಾಪ್ ಸಿಂಗ್ ಹೇಳಿದ್ದಾರೆ.

    ಏನಿದು ಪ್ರಕರಣ?
    ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಸಹರಾನ್ಪೂರ್‍ದ ಶಿವಪುರಿ ಶಂಶಾನ್‍ಘಾಟ್ ಬಳಿಯ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು. ಹಳಿಯಲ್ಲಿ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಆರಂಭದಲ್ಲಿ ಪೊಲೀಸರು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ಫಲಿತಾಂಶ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ ಎಂದು ವರದಿ ನೀಡಿತ್ತು. ಕೊಲೆಯಾದ ವ್ಯಕ್ತಿ ಅತೀಶ್ ಬೆಳಕಿಗೆ ಬಂದ ನಂತರ ಪ್ರೇರಣಾ ಎಸ್‍ಎಸ್‍ಪಿ ಕಚೇರಿಗೆ ನೇರವಾಗಿ ತೆರಳಿ ಈ ಕೊಲೆಯನ್ನು ನಾನೇ ಮಾಡಿದ್ದೇನೆ ಎಂದು ತಿಳಿಸಿದ್ದಳು.

    ಪ್ರೇರಣಾ ಹೇಳಿದ್ದು ಏನು?
    ನಾನು ವಿವಾಹಿತ ಮಹಿಳೆಯಾಗಿದ್ದು, 6 ತಿಂಗಳ ಹಿಂದೆ ಗಂಡನ ಮನೆಯನ್ನು ಬಿಟ್ಟು ತವರು ಮನೆ ಸೇರಿದ್ದೆ. ಮದುವೆಯಾಗುವ ಮೊದಲು ನನಗೆ ಮತ್ತು ಅತೀಶ್ ನಡುವೆ ಅಕ್ರಮ ಸಂಬಂಧ ಇತ್ತು. ಸಮೀಪದ ಮನೆಯಲ್ಲಿ ವಾಸವಾಗಿದ್ದ ಈತ ನಾನು ತವರು ಮನೆಗೆ ಬಂದ ಬಳಿಕವೂ ಸೆಕ್ಸ್ ಗೆ ಒತ್ತಾಯಿಸುತ್ತಿದ್ದ. ನಾವಿಬ್ಬರೂ ಕೆಲವೊಮ್ಮೆ ರೆಡ್‍ಹ್ಯಾಂಡ್ ಗೆ ಸಿಕ್ಕಿಬಿದ್ದಿದ್ವಿ. ಇಷ್ಟಾಗ್ಯೂ ಆತ ಪ್ರತಿ ದಿನ ನೀನು ನನಗೆ ಸುಖ ಕೊಡಬೇಕು ಎಂದು ಒತ್ತಾಯಿಸುತ್ತಿದ್ದ.

    ಈತನ ಈ ವಿಚಿತ್ರ ಬೇಡಿಕೆಯಿಂದ ನಾನು ರೋಸಿ ಹೋಗಿದ್ದೆ. ನಮ್ಮಿಬ್ಬರ ಸಂಬಂಧವನ್ನು ಮುಕ್ತಾಯಗೊಳಿಸುವ ಸಲುವಾಗಿ ಸೆ.24 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತನನ್ನು ಕರೆದು, ಇಲ್ಲಿಯವರೆಗೆ ನಡೆದಿದ್ದನ್ನು ಮರೆತು ಬಿಡು ಎಂದು ನಾನು ಮನವಿ ಮಾಡಿ ಬೇಡಿಕೊಂಡೆ. ಈ ವೇಳೆ ನನ್ನ ಸಹೋದರ ಬಂದ. ಈ ವೇಳೆ ಇವರಿಬ್ಬರ ಮಧ್ಯೆ ಜಗಳ ಪ್ರಾರಂಭವಾಯಿತು.

    ಗಲಾಟೆ ಜೋರಾಗಿ ನನ್ನ ಸಹೋದರ ದುಪ್ಪಟ್ಟದಿಂದ ಆತನನ್ನು ಕೊಲೆ ಮಾಡಿದ. ಬಳಿಕ ಆತನ ದೇಹವನ್ನು ಯಾರಿಗೆ ತಿಳಿಯದೇ ಇರಲಿ ಎಂದು ಫ್ರಿಡ್ಜ್ ಒಳಗಡೆ ಇಟ್ಟೆವು. ಮನೆಯಲ್ಲಿ ಶವ ಇದ್ದರೆ ನಾವೇ ಕೊಲೆ ಮಾಡಿದ್ದೇವೆ ಎಂದು ತಿಳಿಯುವ ಕಾರಣ ಫ್ರಿಡ್ಜ್ ಮಾರಾಟ ಮಾಡಲು ತೀರ್ಮಾನಿಸಿದೆವು. ಮಾರಾಟ ಮಾಡುವ ನೆಪದಲ್ಲಿ ಫ್ರಿಡ್ಜ್ ಮನೆಯಿಂದ ವಾಹನಕ್ಕೆ ತುಂಬಿಸಿದೆವು. ದಾರಿ ಮಧ್ಯೆ ಶವವನ್ನು ರೈಲ್ವೇ ಟ್ರಾಕ್ ನಲ್ಲಿ ಎಸೆದು ನಂತರ ಫ್ರಿಡ್ಜ್ ಮಾರಾಟ ಮಾಡಿದೆವು ಎಂದು ಪ್ರೇರಣಾ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

  • ಪೇದೆಯಿಂದಲೇ ಠಾಣೆಯಲ್ಲಿ ಅಪ್ರಾಪ್ತೆಯ ಮೇಲೆ ರೇಪ್ ಯತ್ನ

    ಪೇದೆಯಿಂದಲೇ ಠಾಣೆಯಲ್ಲಿ ಅಪ್ರಾಪ್ತೆಯ ಮೇಲೆ ರೇಪ್ ಯತ್ನ

    ರಾಮ್ಪುರ್: ನಮಗೆ ತೊಂದರೆ ಆದರೆ ನಾವು ಪೊಲೀಸ್ ಠಾಣೆಗೆ ಹೋಗಿ ದೂರು ನೀಡುತ್ತೇವೆ. ಆದರೆ ಉತ್ತರ ಪ್ರದೇಶದಲ್ಲೊಬ್ಬ ಪೇದೆ ಬೇಲಿಯೇ ಎದ್ದು ಹೊಲ ಮೇದಂತೆ ಎಂಬಂತೆ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಅಮಾನತುಗೊಂಡಿದ್ದಾನೆ.

    ರಾಮ್ಪುರ ಪ್ರದೇಶದಲ್ಲಿರುವ ಕೇಮ್ರಿ ಪೊಲೀಸ್ ಠಾಣೆಯ ಪೇದೆ ಈ ಕೃತ್ಯವನ್ನು ಎಸಗಿದ್ದು, ಆತನ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈತ ಈ ಕೃತ್ಯ ಎಸಗುವಾಗ ಮದ್ಯಪಾನವನ್ನು ಸೇವಿಸಿ ಅಸ್ವಸ್ಥನಾಗಿದ್ದ ಎಂದು ಶಂಕಿಸಲಾಗಿದ್ದು, ಆತನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದೆ.

    ಪೊಲೀಸ್ ಪೇದೆಯ ಈ ಕೃತ್ಯ ಎಸಗುವ ಮೂಲಕ ಮತ್ತೊಮ್ಮೆ ಉತ್ತರ ಪ್ರದೇಶ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆ ಎದ್ದಿದೆ.

  • ಯುವತಿ ಮೇಲೆ ನಿರಂತರ ಅತ್ಯಾಚಾರ- ಸ್ವಯಂ ಘೋಷಿತ ಬಾಬಾ ಸಿಯಾ ರಾಮ್ ದಾಸ್ ಬಂಧನ

    ಯುವತಿ ಮೇಲೆ ನಿರಂತರ ಅತ್ಯಾಚಾರ- ಸ್ವಯಂ ಘೋಷಿತ ಬಾಬಾ ಸಿಯಾ ರಾಮ್ ದಾಸ್ ಬಂಧನ

    – ರಾಜಕಾರಣಿಗಳಿಗೆ ಶಾಲಾ ಬಾಲಕಿಯರನ್ನ ಸಪ್ಲೈ ಮಾಡ್ತಿದ್ರು ಎಂದ ಸಂತ್ರಸ್ತೆ

    ಲಕ್ನೋ: ಯುವತಿಯ ಮೇಲೆ 8 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿರುವ ಆರೋಪದ ಮೇಲೆ ಸ್ವಯಂ ಘೋಷಿತ ದೇವ ಮಾನವ ಬಾಬಾ ಸಿಯಾ ರಾಮ್ ದಾಸ್‍ರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

    ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಬಾಬಾ ಸಿಯಾ ರಾಮ್ ದಾಸ್‍ರನ್ನ ಬಂಧಿಸಿದ್ದಾರೆ. ಸುಮಾರು 8 ತಿಂಗಳಿಂದ ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.

    ಯುವತಿಯನ್ನು ಆಕೆಯ ಸಂಬಂಧಿಕರು 50 ಸಾವಿರ ರೂ.ಗೆ ಬಾಬಾನ ಮಹಿಳಾ ಭಕ್ತೆಯೊಬ್ಬಳಿಗೆ ಮಾರಾಟ ಮಾಡಿದ್ದರು. ಮೊದಲಿಗೆ ಯುವತಿಯನ್ನ ಲಕ್ನೋಗೆ ಕರೆದುಕೊಂಡು ಹೋಗಿ ನಂತರ ಮಿಶ್ರಿಕ್‍ನಲ್ಲಿನ ಬಾಬಾ ಆಶ್ರಮಕ್ಕೆ ಕರೆದುಕೊಂಡು ಹೋಗಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

    ಬಾಬಾ ಅತ್ಯಾಚಾರದ ಎಂಎಂಎಸ್ ಕೂಡ ಚಿತ್ರೀಕರಣ ಮಾಡಿದ್ದು, ಯಾರಿಗಾದರೂ ಈ ವಿಷಯ ತಿಳಿಸಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದರು. ಅಲ್ಲದೇ ಮಿಶ್ರಿಖ್‍ನಿಂದ ಆಗ್ರದಲ್ಲಿನ ಆಶ್ರಮಕ್ಕೆ ಕರೆದೊಯ್ದು ಸುಮಾರು 8 ತಿಂಗಳ ಕಾಲ ಅಲ್ಲೇ ನನ್ನನ್ನು ಇರಿಸಲಾಗಿತ್ತು. ಅಲ್ಲಿ ಇತರೆ ಭಕ್ತರು ನನ್ನ ಮೇಲೆ ಪ್ರತಿ ರಾತ್ರಿ ಅತ್ಯಾಚಾರ ನಡೆಸುತ್ತಿದ್ದರು ಎಂದು ಸಂತ್ರಸ್ತೆ ಹೇಳಿದ್ದಾರೆ.

    ನಂತರ ಯುವತಿ ಮಿಶ್ರಿಕ್‍ಗೆ ಹಿಂದಿರುಗಿದಾಗ ಬಾಬಾ ಮತ್ತೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ಯುವತಿ ಹೇಗೋ ಮಾಡಿ ಬಾಬಾನ ಫೋನ್ ಪಡೆದು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

    ಬಾಬಾ ಸಿಯಾ ರಾಮ್ ದಾಸ್ ತನ್ನ ಮಾಲೀಕತ್ವದ ಬಾಲಕಿಯರ ಶಾಲೆಯ ಮೂಲಕ ಸೆಕ್ಸ್ ದಂಧೆ ಕೂಡ ನಡೆಸುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಶಾಲೆಯ ಬಾಲಕಿಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಲ್ಲದೆ ಬಾಲಕಿಯರನ್ನು ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಸಪ್ಲೈ ಮಾಡಲಾಗುತ್ತಿತ್ತು ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ.

    ಈ ಸಂಬಂಧ ಸಿತಾಪುರ್ ಪೊಲೀಸರು ಬಾಬಾ ವಿರುದ್ಧ ಅತ್ಯಾಚಾರ ಪ್ರಕರಣದ ದೂರು ದಾಖಲಿಸಿಕೊಂಡಿದ್ದು, ಇತರೆ ಆರೋಪಗಳ ಮೇಲೂ ತನಿಖೆ ಮುಂದುವರೆಸಿದ್ದಾರೆ.

    ಆದರೆ ಸ್ವಯಂಘೋಷಿತ ಬಾಬಾ ಈ ಎಲ್ಲಾ ಆರೋಪಗಳನ್ನ ತಳ್ಳಿಹಾಕಿದ್ದು, ಯುವತಿಯನ್ನ ಈ ಹಿಂದೆ ಭೇಟಿಯೇ ಮಾಡಿಲ್ಲ ಎಂದು ಹೇಳಿದ್ದಾರೆ.

  • ಸಹೋದರನ ಜೊತೆ ಅತ್ತಿಗೆಯನ್ನು ಕೊಂದ ಅಪ್ರಾಪ್ತ ನಾದಿನಿ ಅರೆಸ್ಟ್: ಈಗ ಪೊಲೀಸರ ವಿರುದ್ಧ ದೂರು

    ಸಹೋದರನ ಜೊತೆ ಅತ್ತಿಗೆಯನ್ನು ಕೊಂದ ಅಪ್ರಾಪ್ತ ನಾದಿನಿ ಅರೆಸ್ಟ್: ಈಗ ಪೊಲೀಸರ ವಿರುದ್ಧ ದೂರು

    ಲಕ್ನೋ: ಸಹೋದರನ ಜೊತೆ ಸೇರಿಕೊಂಡು ಅತ್ತಿಗೆಯನ್ನು ಕೊಲೆ ಮಾಡಿರುವ ಆರೋಪದಲ್ಲಿ ಸಹೋದರಿಯನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಆದರೆ ಈಗ ಈ ಪ್ರಕರಣದಲ್ಲಿ ಪೊಲೀಸರ ವಿರುದ್ಧವೇ ದೂರು ದಾಖಲಾಗಿದೆ.

    ಬಂಧನಕ್ಕೆ ಒಳಗಾದವಳು ಈಗ ಅಪ್ರಾಪ್ತೆ ಹೌದೋ ಅಲ್ಲವೋ ಎನ್ನುವ ಬಗ್ಗೆ ವಿವಾದ ಎದ್ದಿದ್ದು ಪೊಲೀಸರು ಆಕೆ ಅಪ್ರಾಪ್ತೆಯಲ್ಲ ಎಂದು ಹೇಳಿದರೆ, ಆರ್‍ಟಿಐ ಕಾರ್ಯಕರ್ತರೊಬ್ಬರು ಆಕೆ ಅಪ್ರಾಪ್ತೆ ಎಂದು ಹೇಳಿ ಪೊಲೀಸರ ವಿರುದ್ಧವೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

    ಏನಿದು ಪ್ರಕರಣ?
    ವರದಕ್ಷಿಣೆ ಕಿರುಕುಳ ನೀಡಿ ಮಗಳನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪೋಷಕರು ಪತಿ ಮತ್ತು ಆತನ ಸಹೋದರಿಯ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಬಂಧಿಸಿದ ಬಳಿಕ ಪತಿಯ ಸಹೋದರಿಯನ್ನು ಪೊಲೀಸರು 12 ದಿನಗಳ ಕಾಲ ತಮ್ಮ ವಶದಲ್ಲಿ ಇಟ್ಟುಕೊಂಡು ಸೋಮವಾರ ಕೋರ್ಟ್ ಗೆ ಹಾಜರು ಪಡಿಸಿ ಜೈಲಿಗೆ ಅಟ್ಟಿದ್ದಾರೆ.

    ವಿವಾದ ಆಗಿದ್ದು ಯಾಕೆ?
    ಅಪ್ರಾಪ್ತ ವಯಸ್ಸಿನವರು ಅಪರಾಧಗಳನ್ನು ಎಸಗಿದರೆ ಅವರನ್ನು ಪೊಲೀಸರು 24 ಗಂಟೆಗಿಂತ ಹೆಚ್ಚು ಹೊತ್ತು ಲಾಕಪ್ ನಲ್ಲಿ ಇರಿಸುವಂತಿಲ್ಲ. ಬಾಲನ್ಯಾಯ ಕಾಯ್ದೆಯ ಪ್ರಕಾರ ಅಪ್ರಾಪ್ತರನ್ನು ಬಂಧಿಸಿ ಅವರನ್ನು ಬಾಲಾಪರಾಧಿ ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಬೇಕು. ಅದರಲ್ಲೂ ಬಾಲಕಿ ಆಗಿದ್ದರೆ, ಆಕೆಯನ್ನು ನಾರಿ ನಿಕೇತನ್ ಕೇಂದ್ರಕ್ಕೆ ಕಳುಹಿಸಬೇಕು. ಆದರೆ ಪೊಲೀಸರು ಅಪ್ರಾಪ್ತೆಯನ್ನು ತಮ್ಮ ವಶದಲ್ಲಿ 12 ದಿನಗಳ ಕಾಲ ಇಟ್ಟುಕೊಂಡು ಈಗ ಜೈಲಿಗೆ ಕಳುಹಿಸಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

    ಬಂಧನಕ್ಕೆ ಒಳಗಾದ ಬಾಲಕಿಗೆ 15 ವರ್ಷವಾಗಿದ್ದು ಆಕೆಯನ್ನು ಪೊಲೀಸರು ತಮ್ಮ ವಶದಲ್ಲಿ ಇಟ್ಟುಕೊಂಡಿರುವುದು ಬಾಲನ್ಯಾಯ ಕಾಯ್ದೆಯ ಪ್ರಕಾರ ಅಪರಾಧ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಕೀಲ ಮತ್ತು ಆರ್‍ಟಿಐ ಕಾರ್ಯಕರ್ತ ಪ್ರತೀಕ್ ಚೌಧರಿ ಎಂಬವರು ಕೇಂದ್ರ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

    ಪೊಲೀಸರು ಹೇಳೋದು ಏನು?
    ಆಕೆಗೆ 15 ವರ್ಷವಲ್ಲ, ಪ್ರಾಪ್ತ ವಯಸ್ಸಾಗಿದ್ದು ನಾವು ಯಾವುದೇ ಲೋಪ ಎಸಗಿಲ್ಲ. ಪ್ರಾಪ್ತಳಾಗಿರುವ ಕಾರಣ ಆಕೆಯನ್ನು ನಾವು ಜೈಲಿಗೆ ಕಳುಹಿಸಿದ್ದೇವೆ. ಒಂದು ವೇಳೆ ಆಕೆ ಅಪ್ರಾಪ್ತಳು ಎಂದು ಕೋರ್ಟ್ ನಲ್ಲಿ ಸಾಬೀತಾದರೆ ಆಕೆ ಕಾನೂನಿನ ಲಾಭವನ್ನು ಪಡೆದುಕೊಳ್ಳುತ್ತಾಳೆ ಎಂದು ಗಂಗೇರಿ ಪೊಲೀಸ್ ಠಾಣೆಯ ಸ್ಟೇಷನ್ ಅಧಿಕಾರಿ ರಾಮ್ ವಲ್ಲಭ ಶರ್ಮಾ ಹೇಳಿದ್ದಾರೆ.

    ಬೆಳಕಿಗೆ ಬಂದಿದ್ದು ಹೇಗೆ?
    ಭಾನುವಾರ ಸಂಜೆ ಠಾಣೆಯಲ್ಲಿ ಆಕೆ ಅಳುತ್ತಾ ಕುಳಿತ್ತಿದ್ದನ್ನು ಕೆಲ ಮಾಧ್ಯಮ ಪ್ರತಿನಿಧಿಗಳು ಗಮನಕ್ಕೆ ಬಂದ ಬಳಿಕ ಆಕೆ ಅಪ್ರಾಪ್ತಳು ಎನ್ನುವ ವಿಚಾರ ಬಳಕಿಗೆ ಬಂದಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಸ್ಮಾರ್ಟ್ ವಿಲೇಜ್ ಫೌಂಡೇಶನ್ ಹೆಸರಿನ ಸಂಘಟನೆಯೊಂದು ಆಕೆಯ ಸಹಾಯಕ್ಕೆ ಬಂದಿದ್ದು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದೂರು ನೀಡಿದೆ.

  • ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ: ಹಳಿ ತಪ್ಪಿದ ಕೈಫಿಯತ್ ಎಕ್ಸ್ ಪ್ರೆಸ್, 70 ಮಂದಿಗೆ ಗಾಯ

    ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ: ಹಳಿ ತಪ್ಪಿದ ಕೈಫಿಯತ್ ಎಕ್ಸ್ ಪ್ರೆಸ್, 70 ಮಂದಿಗೆ ಗಾಯ

    ಲಕ್ನೋ: ಉತ್ಕಲ್ ರೈಲು ದುರಂತದ ನೆನಪು ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಕೈಫಿಯತ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 70 ಜನ ಗಾಯಗೊಂಡಿರುವ ಘಟನೆ ಮಂಗಳವಾರ ಅವೌರೇಯಾ ಜಿಲ್ಲೆಯಲ್ಲಿ ನಡೆದಿದೆ.

    ಮಾನವ ರಹಿತ ಸಿಗ್ನಲ್ ನಲ್ಲಿ ಪಲ್ಟಿಯಾಗಿದ್ದ ಮರಳಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ರೈಲು ಅಜಮ್‍ಘಡದಿಂದ ದೆಹಲಿಗೆ ಸಂಚರಿಸುತ್ತಿದ್ದಾಗ ಬುಧವಾರ ನಸುಕಿನ ಜಾವ 2.50ಕ್ಕೆ ಪಟ ಮತ್ತು ಅಚಲ್ಡ ರೈಲ್ವೇ ನಿಲ್ದಾಣದ ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಉತ್ತರ ಕೇಂದ್ರ ವಲಯದ ಅಧಿಕಾರಿ ತಿಳಿಸಿದ್ದಾರೆ.

    ಒಂದು ಬೋಗಿ ಸಂಪೂರ್ಣವಾಗಿ ತಿರುಗಿದ್ದರೆ, ಏಳು ಬೋಗಿಗಳು ಹಳಿ ತಪ್ಪಿದೆ. ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲ್ವೇ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿ ಘಟನೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿಲಾಗಿದೆ ಎಂದು ಹೇಳಿದ್ದಾರೆ.

    ಘಟನೆ ಬಗ್ಗೆ ವಿವರಣೆ ಪಡೆಯಲು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಅದಿತ್ಯನಾಥ್ ಹಿರಿಯ ಅಧಿಕಾರಿಗಳ ಹತ್ತಿರ ಮಾತನಾಡಿದ್ದಾರೆ. ಪೊಲೀಸ್ ಹೆಚ್ಚುವರಿ ನಿರ್ದೇಶಕ ಅಧಿಕಾರಿಯಾದ ಆನಂದ್ ಕುಮಾರ್ ಪ್ರತಿಕ್ರಿಯಿಸಿ, ಮರಳಿನ ಲಾರಿ ಹಳಿ ಪ್ರವೇಶಿಸಿ ಪಲ್ಟಿಯಾಗಿದ್ದು ಹೇಗೆ ಎನ್ನುವುದರ ಬಗ್ಗೆ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

    ಶನಿವಾರ ಪಶ್ಚಿಮ ಉತ್ತರ ಪ್ರದೇಶದ ಕತೌಲಿಯ ಹತ್ತಿರ ಕಾಳಿಂಗ ಎಕ್ಸ್‍ಪ್ರೆಸ್ ಹಳಿ ತಪ್ಪಿ 23 ಜನ ಸಾವನ್ನಪ್ಪಿ, 150 ಕ್ಕಿಂತಲೂ ಹೆಚ್ಚಿನ ಮಂದಿಗೆ ಗಾಯವಾಗಿತ್ತು. ವಿಶ್ವದ 4ನೇ ಅತಿ ದೊಡ್ಡ ರೈಲ್ವೇ ಜಾಲವನ್ನು ಭಾರತ ಹೊಂದಿದ್ದು, ಪ್ರತಿ ದಿನ 2.2 ಕೋಟಿ ಜನ ರೈಲಿನಲ್ಲಿ ಸಂಚರಿಸುತ್ತಾರೆ.

     

     

     

  • 16 ವರ್ಷದ ಮಗಳನ್ನು ಗುಂಡಿಟ್ಟು ಕೊಂದ ತಂದೆ

    16 ವರ್ಷದ ಮಗಳನ್ನು ಗುಂಡಿಟ್ಟು ಕೊಂದ ತಂದೆ

    ಲಕ್ನೋ: ತಂದೆಯೊಬ್ಬ ತನ್ನ 16 ವರ್ಷದ ಮಗಳನ್ನು ಗುಂಡಿಟ್ಟು ಕೊಲೆಗೈದು, ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ಉತ್ತರ ಪ್ರದೇಶ ರಾಜ್ಯದ ಉರಿ ಜಿಲ್ಲೆಯ ಕೋಟವಾಲಿ ಗ್ರಾಮದಲ್ಲಿ ನಡೆದಿದೆ.

    ದೀಪಾಲಿ(16) ತಂದೆಯಿಂದಲೇ ಕೊಲೆಯಾದ ದುರ್ದೈವಿ. ದೀಪಾಲಿಗೆ ತಂದೆ ದಯಾಶಂಕರ್ ಮಗಳಿಗೆ ಶುಕ್ರವಾರ ಮಾತನಾಡಲೆಂದು ಮನೆಯ ಟೆರೇಸ್ ಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಮಗಳನ್ನು ಗುಂಡಿಟ್ಟು ಕೊಂದಿದ್ದಾನೆ. ದಯಾಶಂಕರ್ ಮಗಳು ದೀಪಾಲಿಗೆ ಗುಂಡು ಹಾರಿಸುವಾಗ ಆಕೆಯ ಸಹೋದರಿ ಸಹ ಗಾಯಗೊಂಡಿದ್ದಾಳೆ.

    ಮಗಳನ್ನು ಗುಂಡಿಟು ಕೊಲೆಗೈದ ಬಳಿಕ ದಯಾಶಂಕರ್ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗುಂಡಿನ ಶಬ್ದ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ದಯಾಶಂಕರನನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ದೀಪಾಲಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಿರಿಯ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

    ಕೊಲೆಗೆ ಕಾರಣ ಏನು?
    ದೀಪಾಲಿ ಮಕ್ಕಳಿಗೆ ಟ್ಯೂಷನ್ ಹೇಳುವ ಮೂಲಕ ಒಂದಿಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದಳು. ಗ್ರಾಮದ ಜನರು ದಯಾಶಂಕರ್ ಮಗಳ ಸಂಪಾದನೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ ಎಂದು ಹೇಳುವುದರ ಜೊತೆಗೆ ಟ್ಯೂಷನ್ ಕ್ಲಾಸ್ ನೆಪದಲ್ಲಿ ದೀಪಾಲಿ ಗೆಳಯನೊಬ್ಬನನ್ನು ಭೇಟಿಯಾಗುತ್ತಾಳೆ ಎಂಬ ಚುಚ್ಚು ಮಾತಗಳನ್ನಾಡುತ್ತಿದ್ರು.

    ಗ್ರಾಮಸ್ಥರ ಮಾತುಗಳಿಂದ ಬೇಸತ್ತ ದಯಾನಾಯಕ್ ಶುಕ್ರವಾರ ಮಗಳನ್ನು ಟರೇಸ್ ಮೇಲೆ ಕರೆದು ಈ ಕುರಿತು ವಿಚಾರಿಸಿದ್ದಾನೆ. ಆದ್ರೆ ದೀಪಾಲಿ ತಂದೆಯ ಯಾವ ಪ್ರಶ್ನೆಗೆ ಉತ್ತರಿಸಿಲ್ಲ. ಇದ್ರಿಂದ ಕೋಪಗೊಂಡ ದಯಾನಾಯಕ್ ತನ್ನ ಬಳಿಯಿದ್ದ ಪಿಸ್ತೂಲ್‍ನಿಂದ ದೀಪಾಲಿಯ ಮೇಲೆ ಗುಂಡು ಹಾರಿಸಿದ್ದಾನೆ. ಕೊನೆಗೆ ತಾನು ಗುಂಡು ಹಾರಿಸಿಕೊಂಡಿದ್ದಾನೆ.

    ಸದ್ಯ ದಯಾಶಂಕರನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

    ಪೊಲೀಸರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಕೊಲೆ ನಡೆದ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ದಯಾನಾಯಕ್ ಕೊಲೆಗೆ ಬಳಸಿದ್ದ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ದೀಪಾಲಿ ತಾಯಿ ರಶ್ಮಿ ಗಂಡನ ವಿರುದ್ಧ ಕೊಲೆ ಕೇಸ್ ದಾಖಲಿಸಿದ್ದಾರೆ.

     

  • ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿದ್ರೆ ದಂಡ!

    ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿದ್ರೆ ದಂಡ!

    ಮೊರಾದಾಬಾದ್: ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತು ಈಗಿನ ಸೆಲ್ಫಿ ಕ್ರೇಜ್ ಯುವಕರಿಗೆ ಅನ್ವಯಿಸುತ್ತದೆ. ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಸೆಲ್ಫಿ ಕ್ರೇಜ್ ಯಾರನ್ನೂ ಬಿಟ್ಟಿಲ್ಲ. ಈ ಸೆಲ್ಫಿ ಕ್ರೇಜ್ ಕೆಲವರ ಜೀವಕ್ಕೆ ಅಪಾಯವಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅನಾಹುತ ತಡೆಯಲು ಉತ್ತರಪ್ರದೇಶ ಪೊಲೀಸರು ಮುಂದಾಗಿದ್ದಾರೆ.

    ರೈಲ್ವೆ ಹಳಿ, ಬಸ್ ನಿಲ್ದಾಣ, ಹೆದ್ದಾರಿ, ನದಿ ದಡ, ಎತ್ತರದ ಕಟ್ಟಡಗಳಂತಹ ಸ್ಥಳಗಲ್ಲಿ ಸೆಲ್ಫಿ ತೆಗೆದುಕೊಂಡವರ ಮೇಲೆ ದಂಡ ವಿಧಿಸಲಾಗುವುದು ಮತ್ತುಕಠಿಣ ಕ್ರಮ ಕೈಗೊಳ್ಳಲಾಗುವುದು ಮೊರಾದಾಬಾದ್ ಎಂದು ಪೊಲೀಸರು ಹೇಳಿದ್ದಾರೆ,

    ಯುವ ಜನತೆ ಸೆಲ್ಫಿ ತೆಗೆಯುವುದು ತಪ್ಪು ಎಂದು ನಾವು ಹೇಳುತ್ತಿಲ್ಲ. ಆದರೆ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ನಾವು ದಂಡ ವಿಧಿಸಲು ಮುಂದಾಗಿದ್ದೇವೆ ಎಂದು ಎಸ್‍ಪಿ ಆಶೀಶ್ ಶ್ರೀವಾಸ್ತವ್ ಹೇಳಿದ್ದಾರೆ.

    ಕಳೆದ ತಿಂಗಳು ತೆಲಂಗಾಣದ ಸಿಕಂದರಾಬಾದ್ ಸಮೀಪ ಅಲ್ವಾಲ್ ರೈಲ್ವೆ ನಿಲ್ದಾಣದಲ್ಲಿ ಸೆಲ್ಫಿ ತಗೆದುಕೊಳ್ಳಲು ಹೋಗಿ  ಓರ್ವ ವ್ಯಕ್ತಿ ಮೃತಪಟ್ಟಿದ್ದ. ಅಲ್ಲದೆ ಇನ್ನೊಬ್ಬ ವ್ಯಕ್ತಿ ತನ್ನ ಕೈ ಕಳೆದುಕೊಂಡಿದ್ದ.

    ಇದನ್ನೂ ಓದಿ: ಸಮುದ್ರ ದಂಡೆಯ ಮೇಲೆ ಸೆಲ್ಫೀ ತೆಗೆಯಲು ಹೋದ ಯುವಕ ನೀರುಪಾಲು

  • ನಿಗೂಢವಾಗಿ ಸಾವನಪ್ಪಿದ ಅಧಿಕಾರಿ ಅನುರಾಗ್ ತಿವಾರಿ ಕೊನೆ ಕ್ಷಣದ ವಿಡಿಯೋ ನೋಡಿ

    ನಿಗೂಢವಾಗಿ ಸಾವನಪ್ಪಿದ ಅಧಿಕಾರಿ ಅನುರಾಗ್ ತಿವಾರಿ ಕೊನೆ ಕ್ಷಣದ ವಿಡಿಯೋ ನೋಡಿ

    ಬೆಂಗಳೂರು: ಉತ್ತರಪ್ರದೇಶದಲ್ಲಿ ನಿಗೂಢವಾಗಿ ಮೃತಪಟ್ಟ ಕರ್ನಾಟಕದ ಐಎಎಸ್ ಅಧಿಕಾರು ಅನುರಾಗ್ ತಿವಾರಿ ಅವರ ಕೊನೆಯ ಕ್ಷಣದ ವಿಡಿಯೋವೊಂದು ಲಭ್ಯವಾಗಿದೆ.

    ಉತ್ತರಪ್ರದೇಶ ರಾಜಧಾನಿ ಲಕ್ನೋದ ಹಜರತ್‍ಗಂಜ್‍ನಲ್ಲಿರುವ ಆರ್ಯನ್ ಹೋಟೆಲ್‍ಗೆ ಎಂಟ್ರಿ ಕೊಡ್ತಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ದೃಶ್ಯದಲ್ಲಿ ಗ್ಲಾಸ್ ಡೋರ್‍ನ್ನು ತಳ್ಳಿಕೊಂಡು ತಿವಾರಿ ಎಂಟ್ರಿ ಕೊಡ್ತಿದ್ದಾರೆ. ಒಳಗೆ ಬಂದ ಬಳಿಕ ತಿವಾರಿ ಅಲ್ಲೇ ಇದ್ದ ಸ್ಟ್ಯಾಂಡ್‍ವೊಂದರಲ್ಲೇ ಏನನ್ನೋ ತೆಗೆದು ಓದುತ್ತಿದ್ದಾರೆ. ಹೋಟೆಲ್‍ಗೆ ತಿವಾರಿ ಎಂಟ್ರಿ ಕೊಡೋ ವೇಳೆ ಅವರ ಬ್ಯಾಚ್‍ಮೇಟ್ ಆಗಿದ್ದ ಪಿಎನ್ ಸಿಂಗ್ ಕೂಡಾ ಇದ್ದರು ಎನ್ನುವುದು ವಿಶೇಷ.

    ಇದನ್ನೂ ಓದಿ: Exclusive: ಅನುರಾಗ್ ತಿವಾರಿಗೆ ಇತ್ತು ಜೀವ‌ ಭಯ- 4-5 ತಿಂಗಳಿಂದ ಕೊಟ್ಟೇ ಇರಲಿಲ್ಲ ಸಂಬಳ 

    ಮೇ 17ರಂದು ತಿವಾರಿ ಮೃತದೇಹ ಹೋಟೆಲ್‍ನ ಬಳಿಯೇ ಸಿಕ್ಕಿತ್ತು. ಮೂರು ದಿನಗಳಿಂದ ಇದೇ ಹೋಟೆಲ್‍ನಲ್ಲಿ ತಿವಾರಿ ತಂಗಿದ್ದರೂ ರೂಂ ಬುಕ್ ಆಗಿದ್ದು ಮಾತ್ರ ಅವರ ಸ್ನೇಹಿತ ಪಿಎನ್ ಸಿಂಗ್ ಹೆಸರಲ್ಲಿ ಅನ್ನೋದು ವಿಚಿತ್ರ. ತಿವಾರಿ ಮರಣೋತ್ತರ ಪರೀಕ್ಷೆ ಕೂಡಾ ಅಪೂರ್ಣವಾಗಿದ್ದು ಸಾವಿಗೆ ಖಚಿತ ಕಾರಣ ಸಿಕ್ಕಿಲ್ಲ.

    ಇದನ್ನೂ ಓದಿ: ಅನುರಾಗ್ ತಿವಾರಿ ನಿಗೂಢ ಸಾವು: ಹರ್ಷ ಗುಪ್ತಾಗೆ ನೋಟಿಸ್ ಜಾರಿ? 

    ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಕರ್ನಾಟಕ ಐಎಎಸ್ ಅಧಿಕಾರಿ  ಜನ್ಮದಿನದಂದೇ ಶವವಾಗಿ ಪತ್ತೆ 

    https://www.youtube.com/watch?v=tzqcBK2kx8k

  • ಸಾಮಾನ್ಯ ಕೈದಿಗಳಿಗೆ ನೀಡೋ ಆಹಾರವನ್ನೇ ಡಾನ್‍ಗಳಿಗೂ ನೀಡಿ: ಯೋಗಿ ಆದಿತ್ಯನಾಥ್

    ಸಾಮಾನ್ಯ ಕೈದಿಗಳಿಗೆ ನೀಡೋ ಆಹಾರವನ್ನೇ ಡಾನ್‍ಗಳಿಗೂ ನೀಡಿ: ಯೋಗಿ ಆದಿತ್ಯನಾಥ್

    ಲಕ್ನೋ: ಉತ್ತರ ಪ್ರದೇಶದ ಜೈಲಿನಲ್ಲಿ ಸಾಮಾನ್ಯ ಕೈದಿಗಳಿಗೆ ನೀಡುವ ಆಹಾರವನ್ನೇ ರಾಜಕೀಯ ನಾಯಕರ ಜೊತೆ ನಂಟುಹೊಂದಿರುವ ಡಾನ್‍ಗಳಿಗೂ ನೀಡಬೇಕೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೃಹ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಗೃಹ ಇಲಾಖೆಯ ಅಧಿಕಾರಿಗಳ ಜೊತೆ ಬುಧವಾರ ರಾತ್ರಿ ಯೋಗಿ ಸಭೆ ನಡೆಸಿದರು. ಈ ವೇಳೆ, ಎಲ್ಲ ದೋಷಿಗಳನ್ನು ಈಗ ಹೇಗೆ ಜೈಲಿನಲ್ಲಿ ನೋಡಿಕೊಳ್ಳಲಾಗುತ್ತದೋ ಅದೇ ರೀತಿಯಾಗಿ ಡಾನ್‍ಗಳನ್ನು ನೋಡಿಕೊಳ್ಳಬೇಕು. ಡಾನ್‍ಗಳಿಗೆ ಪ್ರತ್ಯೇಕ ಆಹಾರ, ವಿಶೇಷ ಸೌಲಭ್ಯಗಳನ್ನು ನೀಡಕೂಡದು ಎಂದು ಆದೇಶಿಸಿದ್ದಾರೆ.

    ಕೈದಿಗಳ ಕೈಗೆ ಮೊಬೈಲ್ ಫೋನ್ ನೀಡಬಾರದು, ಎಲ್ಲ ಜೈಲುಗಳಲ್ಲಿ ಫೋನ್ ಜಾಮರ್ ಗಳನ್ನು ಅಳವಡಿಸಬೇಕು. ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ಕೈದಿಗಳು ನಿಯಮವನ್ನು ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಜೈಲಿನ ಅಧಿಕಾರಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಯೋಗಿ ಎಚ್ಚರಿಕೆ ನೀಡಿದ್ದಾರೆ.

    ಇದೇ ವೇಳೆ ಪೊಲೀಸ್ ಇಲಾಖೆಯಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳ ಜೊತೆ ನಂಟು ಹೊಂದಿರುವ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಿರುವ ಸಿಬ್ಬಂದಿಯನ್ನು ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಇದನ್ನೂ ಓದಿ: ಗ್ರಾಮಗಳಲ್ಲಿ 18 ಗಂಟೆ, ಜಿಲ್ಲಾ ಕೇಂದ್ರಗಳಲ್ಲಿ 24 ಗಂಟೆ ವಿದ್ಯುತ್: ಯೋಗಿ ಆದೇಶ

    ಇದನ್ನೂ ಓದಿ: ಇನ್ಮುಂದೆ ಶ್ರೇಷ್ಠ ವ್ಯಕ್ತಿಗಳ ಜಯಂತಿಯಂದು ಶಾಲೆಗಳಿಗೆ ರಜೆ ಇಲ್ಲ: ಯೋಗಿ ಆದಿತ್ಯನಾಥ್

  • ರೈತರಿಗೆ, ವಿದ್ಯಾರ್ಥಿಗಳಿಗೆ ವಿದ್ಯುತ್ ಸಮಸ್ಯೆ ಆಗಬಾರದು: ಯೋಗಿಯಿಂದ ಎರಡನೇ ಮಹತ್ವದ ಆದೇಶ

    ರೈತರಿಗೆ, ವಿದ್ಯಾರ್ಥಿಗಳಿಗೆ ವಿದ್ಯುತ್ ಸಮಸ್ಯೆ ಆಗಬಾರದು: ಯೋಗಿಯಿಂದ ಎರಡನೇ ಮಹತ್ವದ ಆದೇಶ

    ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ 24 ಗಂಟೆ ಮತ್ತು ಗ್ರಾಮೀಣ ಭಾಗದಲ್ಲಿ 18 ಗಂಟೆ ನಿರಂತರ ವಿದ್ಯುತ್ ನೀಡುವಂತೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

    ಮೊದಲ ಕ್ಯಾಬಿನೆಟ್‍ನಲ್ಲಿ ರೈತರ ಸಾಲಮನ್ನಾ ಮಾಡಿದ್ದ ಯೋಗಿ ಸರ್ಕಾರ ಎರಡನೇ ಕ್ಯಾಬಿನೆಟ್‍ನಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಕ್ರಮವನ್ನು ತೆಗೆದುಕೊಂಡಿದೆ.

    ಗ್ರಾಮಾಂತರ ಭಾಗದಲ್ಲಿ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಿದ್ಯುತ್ ಕಡಿತಗೊಳಿಸಬಾರದು ಎಂದು ಯೋಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ದೋಷಪೂರಿತ ಅಥವಾ ಸುಟ್ಟು ಹೋಗಿರುವ ಎಲ್ಲಾ ಟ್ರಾನ್ಸ್ ಫಾರ್ಮರ್ ಗಳನ್ನು ಕೂಡಲೇ ಬದಲಾಯಿಸಬೇಕು. ಕೃಷಿಕರಿಗೆ ಮುಂದೆ ಯಾವುದೇ ಕಾರಣಕ್ಕೆ ವಿದ್ಯುತ್ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕೆಂದು ಯೋಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

    ಉತ್ತರ ಪ್ರದೇಶದ ಗ್ರಾಮೀಣ ಭಾಗದಲ್ಲಿ 18 ಗಂಟೆಗಳ ಕಾಲ ವಿದ್ಯುತ್ ವಿತರಣೆಗೆ ಕ್ರಮ ಕೈಗೊಂಡಿರುವುದು ಇದೇ ಮೊದಲು ಎಂದು ಇಂಧನ ಸಚಿವ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ.

    ಪ್ರತಿಯೊಬ್ಬ ಬಡವನಿಗೆ ಮನೆ, ಪ್ರತಿಯೊಂದು ಗ್ರಾಮಕ್ಕೆ ವಿದ್ಯುತ್ ಕಲ್ಪಿಸುವುದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಸಿಎಂ ಯೋಗಿ ಅವರ ಕನಸು ಎಂದು ಅವರು ತಿಳಿಸಿದರು.

    ಎಲ್ಲರಿಗೂ ವಿದ್ಯುತ್ ಎಂಬ ಮಹತ್ವದ ಯೋಜನೆಗೆ ಏಪ್ರಿಲ್ 14ರಂದು ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಇಂಧನ ಸಚಿವ ಪಿಯುಶ್ ಗೋಯಲ್ ಸಹಿ ಹಾಕಲಿದ್ದು,  2019ರ ವೇಳೆಗೆ ಉತ್ತರ ಪ್ರದೇಶದ ಎಲ್ಲಾ ಗ್ರಾಮಗಳು ವಿದ್ಯುತ್ ಸಂಪರ್ಕ ಪಡೆಯಲಿವೆ ಎಂದು ಶ್ರೀಕಾಂತ್ ಶರ್ಮಾ ಹೇಳಿದರು.

    ಕ್ಯಾಬಿನೆಟ್ ಸಭೆ ನಡೆಯುದಕ್ಕೂ ಮೊದಲು ಹಿರಿಯ ಸಚಿವ ಸಿದ್ದಾರ್ಥ್ ನಾಥ್ ಸಿಂಗ್ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ “ಶ್ರೀ ಸಾಮಾನ್ಯ ಸೇವೆ” ಅಜೆಂಡಾವನ್ನು ಇಟ್ಟುಕೊಂಡಿದ್ದೇವೆ ಎಂದು ಟ್ವೀಟ್ ಮಾಡಿದ್ದರು.

    ಉತ್ತಪ್ರದೇಶದ ಚುನಾವಣೆಯ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿತ್ತು. ಅದರಂತೆ ಮೊದಲ ಸಂಪುಟ ಸಭೆಯಲ್ಲಿ ಯೋಗಿ ಆದಿತ್ಯನಾಥ್ ರಾಜ್ಯದ ರೈತರ 36,359 ಕೋಟಿ ರೂ. ಸಾಲ ಮನ್ನಾ ಮಾಡುವ ನಿರ್ಧಾರವನ್ನು ಕೈಗೊಂಡಿದ್ದರು.

    2.15 ಕೋಟಿ ರೈತರಲ್ಲಿ 1 ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡಲಾಗಿದೆ.  ಇದರ ಜೊತೆಗೆ ಪಾಳು ಬಿದ್ದಿರುವ ಜಮೀನು ಹೊಂದಿರುವ 7 ಲಕ್ಷ ರೈತರ 5,630 ಕೋಟಿ ರೂಪಾಯಿ ಮನ್ನಾ ಮಾಡಿದ್ದಾರೆ.2016ರ ಮಾರ್ಚ್ 31ರವರೆಗೆ ಸಾಲ ಪಡೆದ ರೈತರಿಗೆ ಇದು ಅನ್ವಯವಾಗಲಿದೆ. 2017ರ ಮಾರ್ಚ್‍ಗೆ 31ರವರೆಗೆ ಬಾಕಿ ಇರುವ ಸಾಲವನ್ನ ಸರ್ಕಾರ ಪಾವತಿಸುತ್ತದೆ.