Tag: uttar pradesh

  • ನನ್ನಿಂದ ಜಲಾಭಿಷೇಕ ಮಾಡಿಸಿಕೊಳ್ಳಲು ಶಿವ ಬಯಸಿದ್ದಾನೆ, 6 ದಿನ ರಜೆ ಕೊಡಿ: ಪೇದೆ ಪತ್ರ ವೈರಲ್

    ನನ್ನಿಂದ ಜಲಾಭಿಷೇಕ ಮಾಡಿಸಿಕೊಳ್ಳಲು ಶಿವ ಬಯಸಿದ್ದಾನೆ, 6 ದಿನ ರಜೆ ಕೊಡಿ: ಪೇದೆ ಪತ್ರ ವೈರಲ್

    ಲಕ್ನೋ: ಹರಿದ್ವಾರದ ಶಿವ ನನ್ನಿಂದ ಜಲಾಭಿಷೇಕ ಮಾಡಿಸಿಕೊಳ್ಳಲು ಬಯಸಿದ್ದಾನೆ, ಹೀಗಾಗಿ ನನಗೆ ರಜೆ ನೀಡಬೇಕು ಎಂದು ಉತ್ತರ ಪ್ರದೇಶ ಪೇದೆಯೊಬ್ಬ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬುಲಂದ್‍ಶಹರದ ಸಿಯಾನಾ ಪೊಲೀಸ್ ಠಾಣೆಯ ವಿನೋದ್ ಕುಮಾರ್ ಹೀಗೆ ಪತ್ರ ಬರೆದ ಪೇದೆ. ಆಗಸ್ಟ್ 5 ರಂದು ವಿನೋದ್ ಕುಮಾರ್ ಡೆಪ್ಯುಟಿ ಎಸ್‍ಪಿಗೆ 6 ದಿನಗಳ ರಜೆ ಕೋರಿ, ಪತ್ರ ಬರೆದಿದ್ದರು. ಇದು ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಕಮೆಂಟ್ ಹರಿದಾಡುತ್ತಿವೆ.

    ಪತ್ರದಲ್ಲಿ ಏನಿದೆ?
    ನನ್ನ ಕನಸಿನಲ್ಲಿ ಶಿವ ಕನಸಿನಲ್ಲಿ ಬಂದಿದ್ದನು. ಶ್ರಾವಣ ಮಾಸದಲ್ಲಿ ನಡೆಯುವ ಕನ್ವರ್ ತೀರ್ಥಯಾತ್ರೆ ಪಾಲ್ಗೊಂಡು, ಹರಿದ್ವಾರದಲ್ಲಿ ತನಗೆ ಜಲಾಭಿಷೇಕ ಮಾಡುವಂತೆ ಸೂಚಿಸಿದ್ದಾನೆ. ಹೀಗಾಗಿ ದಯವಿಟ್ಟು ನನಗೆ 6 ದಿನಗಳ ರಜೆಯನ್ನು ನೀಡಿ ಎಂದು ವಿನೋದ್ ಕುಮಾರ್ ಬರೆದು ಡೆಪ್ಯುಟಿ ಎಸ್‍ಪಿಗೆ ನೀಡಿದ್ದರು.

    ರಜೆ ಕೇಳಿ ಇದೇ ಮೊದಲ ಬಾರಿಗೆ ಇಂತಹ ಅರ್ಜಿಯೊಂದು ಬಂದಿದ್ದು, ಅರ್ಜಿ ಪರಿಗಣಿಸಿರುವ ಮೇಲಾಧಿಕಾರಿಗಳು ವಿನೋದ್‍ಗೆ 6 ದಿನಗಳ ರಜೆ ಮಂಜೂರು ಮಾಡಿದ್ದಾರೆ ಎಂದು ಸಿಯಾನಾ ಠಾಣೆಯ ಎಎಸ್‍ಪಿ ಪ್ರಮೋದ್ ಕುಮಾರ್ ಹೇಳಿದ್ದಾಗಿ ವರದಿಯಾಗಿದೆ.

  • ಗುಟ್ಕಾ ಹಂಚಿಕೊಳ್ಳದ್ದಕ್ಕೆ ದಲಿತ ವ್ಯಕ್ತಿಗೆ ಬೆಂಕಿ ಹಚ್ಚಿದ ಪುಂಡರು!

    ಗುಟ್ಕಾ ಹಂಚಿಕೊಳ್ಳದ್ದಕ್ಕೆ ದಲಿತ ವ್ಯಕ್ತಿಗೆ ಬೆಂಕಿ ಹಚ್ಚಿದ ಪುಂಡರು!

    ಲಕ್ನೋ: ಗುಟ್ಕಾವನ್ನು ತಮ್ಮೊಂದಿಗೆ ಹಂಚಿಕೊಳ್ಳಲಿಲ್ಲವೆಂದು ಸಿಟ್ಟಿಗೆದ್ದ ಮೇಲ್ವರ್ಗದ ಇಬ್ಬರು ದಲಿತ ವ್ಯಕ್ತಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಮಥುರಾದ ಸಪೋಹ ಗ್ರಾಮಲ್ಲಿ ನಡೆದಿದೆ.

    ಸಪೋಹ ಗ್ರಾಮದ ಪರ್ದೇಶಿ (35) ಗಾಯಗೊಂಡ ದಲಿತ ವ್ಯಕ್ತಿ. ಶುಕ್ರವಾರ ಗ್ರಾಮದ ಅಂಗಡಿ ಬಳಿ ಗುಟ್ಕಾವನ್ನು ಹಂಚಿಕೊಳ್ಳುವ ವಿಚಾರಕ್ಕೆ ಅದೇ ಗ್ರಾಮದ ರಾಹುಲ್ ಠಾಕೂರ್ ಹಾಗೂ ರಾಜು ಎಂಬವರ ನಡುವೆ ಗಲಾಟೆ ಏರ್ಪಟ್ಟಿದೆ. ಇದರಿಂದ ರೊಚ್ಚಿಗೆದ್ದ ಇಬ್ಬರು ಪರ್ದೇಶಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅಂಗಡಿಯಲ್ಲಿದ್ದ ಸಿಮೇಎಣ್ಣೆಯನ್ನು ಸುರಿದು ಬೆಂಕಿ ಹಂಚಿ ಪರಾರಿಯಾಗಿದ್ದಾರೆ.

    ಗಾಯಗೊಂಡಿದ್ದ ಪರ್ದೇಶಿಯನ್ನು ಅಂಗಡಿ ಮಾಲೀಕ ಹಾಗೂ ಗ್ರಾಮಸ್ಥರು ಕೂಡಲೇ ಮಥುರಾದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೇ 20 ರಷ್ಟು ಸುಟ್ಟಗಾಯಗಳಾಗಿದ್ದು, ಜೀವಕ್ಕೆ ಯಾವುದೇ ತೊಂದರೆ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಪರ್ದೇಶಿ ಸಹೋದರ ಮಥುರಾ ಪೊಲೀಸರಿಗೆ ದೂರು ನೀಡಿದ್ದಾರೆ.

    ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307, 325, 504, 506 ಮತ್ತು ಎಸ್ಸಿ-ಎಸ್ಟಿ ಪ್ರಕರಣದಡಿ ದೂರು ದಾಖಲಿಸಿಕೊಂಡ ಪೊಲೀಸರು, ರಾಹುಲ್ ಠಾಕೂರ್ ಹಾಗೂ ರಾಜು ಎಂಬ  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಘಟನೆ ಸಂಬಂಧ ಪ್ರತಿಕ್ರಿಯಿಸಿದ ಮಥುರಾ ಪೊಲೀಸ್ ಅಧಿಕಾರಿ ವಿನಯ್ ಚೌಹಾಣ್, ಶುಕ್ರವಾರ ಪರ್ದೇಶಿ ಎಂಬವರು ಗ್ರಾಮದ ಅಂಗಡಿಯಲ್ಲಿ ಗುಟ್ಕಾ ಹಾಗೂ ಇತರೆ ವಸ್ತುಗಳನ್ನು ಖರೀದಿಸಿದ್ದಾರೆ. ಈ ವೇಳೆ ಅಂಗಡಿ ಬಳಿಯಿದ್ದ ಆರೋಪಿಗಳು ಗುಟ್ಕಾವನ್ನು ಹಂಚಿಕೊಳ್ಳುವಂತೆ ಪರ್ದೇಶಿಗೆ ಕೇಳಿದ್ದಾರೆ. ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಜಗಳವಾಗಿದ್ದು, ಆರೋಪಿಗಳು ಹಲ್ಲೆ ನಡೆಸಿದ್ದಲ್ಲದೇ, ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅಳುತ್ತಿದ್ದ ಮಗುವಿಗೆ ಹಸೆಮಣೆಯಿಂದ ಎದ್ದು ಬಂದು ಎದೆ ಹಾಲುಣಿಸಿದ ವಧು!

    ಅಳುತ್ತಿದ್ದ ಮಗುವಿಗೆ ಹಸೆಮಣೆಯಿಂದ ಎದ್ದು ಬಂದು ಎದೆ ಹಾಲುಣಿಸಿದ ವಧು!

    ಲಕ್ನೋ: ಸಾಮೂಹಿಕ ವಿವಾಹವೊಂದರಲ್ಲಿ ಹಸೆಮಣೆ ಮೇಲೆ ಕುಳಿತ್ತಿದ್ದ ಮಧು ಮಗಳು ಅಳುತ್ತಿರುವ ಮಗುವಿಗೆ ಎದ್ದು ಬಂದು ಎದೆಹಾಲು ಉಣಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಬುಧವಾರದಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಸಾಮೂಹಿಕ ವಿವಾಹ ಯೋಜನೆಯನ್ನು ಕುಶೀನಗರದಲ್ಲಿ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಹಸೆಮಣೆ ಮೇಲೆ ಕುಳಿತ ವಧು ತನ್ನ ಅಳುತ್ತಿದ್ದ ಮಗುವಿಗೆ ಎದೆಹಾಲುಣಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

    ಈ ದಂಪತಿ ದೇವತಾಹಾದ ನಿವಾಸಿಯಾದ ಮಮ್ತಾ, ಖುನು ಚಪ್ರಾ ಪ್ರದೇಶದ ನಿವಾಸಿಯಾದ ಪ್ರದೀಪ್ ಎಂದು ಗುರುತಿಸಲಾಗಿದ್ದು, ಇವರಿಬ್ಬರಿಗೂ ಮದುವೆಯಾಗಿ 2 ವರ್ಷಗಳಾಗಿತ್ತು. ಮಂಟಪದಲ್ಲಿ ವಧುವರ ಹಸೆಮಣೆ ಮೇಲೆ ಕುಳಿತುಕೊಂಡಿದ್ದಾರೆ ಆ ವೇಳೆ ಮಂಟಪದ ಬಳಿ ವ್ಯಕ್ತಿ ಬಳಿ ಇದ್ದ ಮಗುವೊಂದು ಜೋರಾಗಿ ಅಳಲು ಪ್ರಾರಂಭಿಸುತ್ತದೆ. ಆಗ ವಧು ಕರುಳಿನ ಕುಡಿಯ ಅಳಲನ್ನು ನೋಡಲಾರದೇ ಎದ್ದು ಹೋಗಿ ಮಗುವಿಗೆ ಎದೆಹಾಲು ಉಣಿಸುತ್ತಾಳೆ ಅದನ್ನು ಕಂಡ ಜನರಿಗೆ ಈ ದಂಪತಿಗೆ ಮದುವೆಯಾಗಿ ಮಗುವಿದೆ ಎಂಬ ವಿಚಾರ ತಿಳಿಯುತ್ತದೆ.

    ಕುಶೀನಗರದ ಸಮಾಜಕಲ್ಯಾಣ ಅಧಿಕಾರಿ ಟಿ.ಕೆ.ಸಿಂಗ್ ಈ ವಿಚಾರ ಕುರಿತು ತನಿಖೆ ನಡೆಸಿದಾಗ ದಂಪತಿಗಳು ಹಣ ಪಡೆಯಲು ಹೀಗೆ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ನಂತರ ಅವರ ಮೇಲೆ ಎಫ್‍ಐಆರ್ ದಾಖಲು ಮಾಡಲಾಗುತ್ತದೆ.

    ಸಾಮೂಹಿಕ ವಿವಾಹದಲ್ಲಿ ಮದುವೆಯಾದರೆ 20 ಸಾವಿರ ರೂ. ಹಣವನ್ನು ವಧುವಿನ ಖಾತೆಗೆ ಜಮೆಮಾಡಲಾಗುತ್ತದೆ. ಮತ್ತು ದಂಪತಿಗೆ 10 ಸಾವಿರ ರೂ. ಮೌಲ್ಯದ ಉಡುಗೊರೆ ನೀಡಲಾಗುತ್ತದೆ. ವಿವಾಹ ಕಾರ್ಯಕ್ರಮವನ್ನು ಆಯೋಜಿಸಿದವರಿಗೆ 6 ಸಾವಿರ ರೂ. ಹಣವನ್ನು ನೀಡಲಾಗುತ್ತದೆ.

  • ಮಳೆಯ ನೀರಿನಲ್ಲಿ ಮುಳುಗಿದ 21 ಮಕ್ಕಳಿದ್ದ ಸ್ಕೂಲ್ ಬಸ್

    ಮಳೆಯ ನೀರಿನಲ್ಲಿ ಮುಳುಗಿದ 21 ಮಕ್ಕಳಿದ್ದ ಸ್ಕೂಲ್ ಬಸ್

    ಲಕ್ನೋ: ಮಳೆ ನೀರು ತುಂಬಿದ್ದ ರೈಲ್ವೇ ಸೇತುವೆಯ ಕೆಳ ರಸ್ತೆ (ಅಂಡರ್ ಪಾಸ್)ನಲ್ಲಿ ಶಾಲೆಯೊಂದರ ಬಸ್ ಸಿಲುಕಿ, 21 ವಿದ್ಯಾರ್ಥಿಗಳು ಅದೃಷ್ಟವಶಾತ್ ಬದುಕಿಳಿದ ಘಟನೆ ಉತ್ತರ ಪ್ರದೇಶದ ಖಾರ್ಕೊಡ್‍ನಲ್ಲಿ ನಡೆದಿದೆ.

    ಕಳೆದೆರಡು ದಿನಗಳಿಂದ ಭಾರೀ ಮಳೆಯಿಂದಾಗಿ ಕೇಳ ಸೇತುವೆ ಕೆಸರು ಮಿಶ್ರಿತ ನೀರಿನಿಂದ ತುಂಬಿತ್ತು. ಶುಕ್ರವಾರ ಸಂಜೆ ಮಕ್ಕಳನ್ನು ಮನೆಗೆ ಬಿಡಲು ಶಾಲಾ ಬಸ್ ಹೋಗಿತ್ತು. ಚಾಂದ್‍ಸರ ಸಮೀಪ ಸೇತುವೆಯ ಕೆಳಗೆ ಮಳೆ ನೀರು ತುಂಬಿರುವುದನ್ನು ಅರಿತ ಚಾಲಕ ಬಸ್ಸನ್ನು ಹಿಂದಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಆದರೆ ಅಷ್ಟೋತ್ತಿಗಾಗಲೇ ಸೈಲೆನ್ಸರ್ ಮತ್ತು ಎಂಜಿನ್‍ಗೆ ನೀರು ನುಗ್ಗಿತ್ತು.

    ನೀರಿನ ಮಟ್ಟ ಹೆಚ್ಚಾಗುತ್ತಿದಂತೆ ಬಸ್ಸಿನಲ್ಲಿದ್ದ ಮಕ್ಕಳು ಅಳಲು ಪ್ರಾರಂಭಿಸಿದರು. ತಕ್ಷಣವೇ ಜಾಗೃತರಾದ ಚಾಲಕ ಮತ್ತು ನಿರ್ವಾಹಕ ಮಕ್ಕಳನ್ನು ವಾಹನದಿಂದ ಹೊರಗಡೆ ತರಲು ಯತ್ನಿಸಿದರು. ಕೇವಲ ಇಬ್ಬರಿಂದ 21 ಮಕ್ಕಳನ್ನು ಸುರಕ್ಷಿತ ಜಾಗಕ್ಕೆ ಸಾಗಿಸುವುದು ಕಷ್ಟವಾಗಿತ್ತು.

    ಮಕ್ಕಳು ಅಳುತ್ತಿರುವ ಹಾಗೂ ಚೀರುತ್ತಿರುವುದನ್ನು ಕೇಳಿದ ಚಾಂದ್‍ಸರ ಗ್ರಾಮಸ್ಥರು ಸ್ಥಳಕ್ಕೆ ಬಂದು, ವಾಹನ ಮುಳುಗುತ್ತಿರುವುದನ್ನು ನೋಡಿದ್ದಾರೆ. ಚಾಲಕ ಹಾಗೂ ನಿರ್ವಾಹಕರ ಜೊತೆ ಸೇರಿ ಬಸ್ ಕಿಟಕಿ, ಗಾಜು ಒಡೆದು ಮಕ್ಕಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕೊನೆಗೆ ಬಸ್ ಸಂಪೂರ್ಣವಾಗಿ ಮುಳುಗಲು ಆರಂಭಿಸಿತ್ತು. ಆದರೆ ಬಸ್ಸಿನಲ್ಲಿ ಇನ್ನೂ ಒಂದು ಮಗು ಇದ್ದಿದ್ದನ್ನು ಅರಿತ ವ್ಯಕ್ತಿಯೊಬ್ಬರು ಧೈರ್ಯದಿಂದ ನೀರಿನಲ್ಲಿ ನುಗ್ಗಿ, ಕಿಟಕಿಯ ಮೂಲಕ ಮಗುವನ್ನು ಹೊರತರುವ ಮೂಲಕ ಎಲ್ಲ ಮಕ್ಕಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.

  • ಪಕ್ಕದ್ಮನೆ ಆಂಟಿ ಮೇಲೆ ಲವ್-ಮದ್ವೆಗಾಗಿ 4 ವರ್ಷದ ಕಂದಮ್ಮನನ್ನೇ ಅಪಹರಿಸಿದ!

    ಪಕ್ಕದ್ಮನೆ ಆಂಟಿ ಮೇಲೆ ಲವ್-ಮದ್ವೆಗಾಗಿ 4 ವರ್ಷದ ಕಂದಮ್ಮನನ್ನೇ ಅಪಹರಿಸಿದ!

    ಘಜಿಯಾಬಾದ್: 4 ವರ್ಷದ ಮಗುವಿನ ತಾಯಿಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ 28 ವರ್ಷದ ಯುವಕನೊಬ್ಬ ಆಕೆಯ ಕಂದನನ್ನು ಅಪಹರಣ ಮಾಡಿರುವ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್ ನಗರದಲ್ಲಿ ನಡೆದಿದೆ.

    28 ವರ್ಷದ ಮೌನು ತ್ಯಾಗಿ ಮಗುವನ್ನು ಅಪಹರಣ ಮಾಡಿದ್ದ ಆರೋಪಿ. ಸದ್ಯ ಆರೋಪಿ ಅಪಹರಣ ಮಾಡಿದ್ದ ಮಗುವನ್ನು ದೆಹಲಿಯಿಂದ ಸಹರಾನ್ಪುರ್ ಮಾರ್ಗವಾಗಿ ಬಸ್ಸಿನಲ್ಲಿ ತೆರಳುತ್ತಿದ್ದ ವೇಳೆ ಪೊಲೀಸರು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ.

    ಆರೋಪಿ ಮೌನು ತ್ಯಾಗಿ ಕೂಲಿ ಕಾರ್ಮಿಕನಾಗಿದ್ದು, ಮಹಿಳೆ ವಾಸಿಸುತ್ತಿದ್ದ ಮನೆಯ ಬಳಿಯೇ ವಾಸಿಸುತ್ತಿದ್ದ. ಅಲ್ಲದೇ ಕಳೆದ ಒಂದು ವರ್ಷದಿಂದ ಮಹಿಳೆಗೂ ಪರಿಚಯವಿದ್ದ. ಆದರೆ ಜುಲೈ 24 ರಂದು ಮಗು ಶಾಲೆಗೆ ತೆರಳಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ತ್ಯಾಗಿ ಅಪಹರಣ ಮಾಡಿದ್ದ. ಮಗು ಕಾಣೆಯಾದ ಬಗ್ಗೆ 25 ರಂದು ಮಹಿಳೆ ದೂರು ದಾಖಲಿಸಿದ್ದರು.

    ಅಂದಹಾಗೇ ಕುಡಿತದ ದಾಸನಾಗಿದ್ದ ಪತಿಯನ್ನು ತೊರೆದಿದ್ದ ಮಹಿಳೆ ಕಳೆದ ಕೆಲ ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದರು. ಇದನ್ನೇ ಅನುಕೂಲ ಮಾಡಿಕೊಂಡ ತ್ಯಾಗಿ ತನ್ನೊಂದಿಗೆ ಮದುವೆಯಾಗುವಂತೆ ಮಹಿಳೆಗೆ ಒತ್ತಾಯ ಮಾಡಿದ್ದ. ಆದರೆ ಈಗಾಗಲೇ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಮೌನು ತ್ಯಾಗಿಯನ್ನು ಮದುವೆಯಾಗಲು ಮಹಿಳೆ ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಆರೋಪಿ ಮಗುವನ್ನು ಅಪಹರಣ ಮಾಡಿದ್ದ.

    ಮೌನು ತ್ಯಾಗಿ ಹಲವು ದಿನಗಳಿಂದ ಕುಟುಂಬಕ್ಕೆ ಪರಿಚಯವಿದ್ದ ಕಾರಣ ಮಗು ಸಹ ಆತ ಕರೆದ ತಕ್ಷಣ ಜೊತೆ ತೆರಳಿದೆ. ಮಗುವನ್ನು ಕರೆದುಕೊಂಡ ಆರೋಪಿ ಮೊದಲು ಮೀರತ್ ಗೆ ತೆರಳಿದ್ದು, ಬಳಿಕ ಮಗುವಿನ ತಾಯಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಅಲ್ಲದೇ ತನ್ನನ್ನು ಮದುವೆಯಾಗದಿದ್ದರೆ ಮಗುವನ್ನು ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ. ಈ ವೇಳೆ ಆತಂಕಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಪ್ರಕರಣ ಕುರಿತು ದೂರು ಪಡೆದ ಪೊಲೀಸರು ಆರೋಪಿಯ ಫೋನ್ ಮಾಹಿತಿ ಪಡೆದು ಆತ ಇರುವ ಸ್ಥಳವನ್ನು ಪತ್ತೆಮಾಡಿ ಮಗುವನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ. ಅಲ್ಲದೇ ಆರೋಪಿ ಶಾಲೆಯ ಬಳಿಯಿಂದ ಮಗುವನ್ನು ಅಪಹರಣ ಮಾಡಲು ಬಳಕೆ ಮಾಡಿದ್ದ ಬೈಕನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆತನ ವಿರುದ್ಧ ಅಪಹರಣ ದೂರಿನ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

  • ಮನಸ್ಸು ಮಾಡಿದ್ರೆ ಒಂದೇ ನಿಮಿಷದಲ್ಲಿ ಸಿಎಂ ಆಗುತ್ತೇನೆ: ಹೇಮಾ ಮಾಲಿನಿ

    ಮನಸ್ಸು ಮಾಡಿದ್ರೆ ಒಂದೇ ನಿಮಿಷದಲ್ಲಿ ಸಿಎಂ ಆಗುತ್ತೇನೆ: ಹೇಮಾ ಮಾಲಿನಿ

    ನವದೆಹಲಿ: ನನಗೆ ಮುಖ್ಯಮಂತ್ರಿ ಆಗುವ ಆಸೆ ಇಲ್ಲ. ಆದರೆ ಮನಸ್ಸು ಮಾಡಿದರೆ ಒಂದೇ ಕ್ಷಣದಲ್ಲಿ ಸಿಎಂ ಆಗುತ್ತೇನೆ ಎಂದು ನಟಿ, ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.

    69 ವರ್ಷದ ಹೇಮಾ ಮಾಲಿನಿ ಅವರು ಉತ್ತರಪ್ರದೇಶದ ಮಥುರಾ ಸಂಸದೆಯಾಗಿದ್ದಾರೆ. ರಾಜಸ್ಥಾನದ ಬನ್ಸ್ವಾರ ಪ್ರದೇಶದ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸಿಎಂ ಆಗುವ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. `ಸಿಎಂ ಆಗುವುದು ನನಗೆ ಕಷ್ಟದ ಕೆಲಸವಲ್ಲ. ಆದರೆ ಇಂತಹ ಹುದ್ದೆಗಳಲ್ಲಿ ನಾನು ಸಿಕ್ಕಿಹಾಕಿಕೊಂಡು ಇರುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಬಯಸುವುದಿಲ್ಲ’ ಎಂದು ಹೇಳಿದ್ದಾರೆ.

    2003 ರಾಜ್ಯಸಭೆಗೆ ಬಿಜೆಪಿ ಪಕ್ಷ ಹೇಮಮಾಲಿನಿ ಅವರನ್ನು ನಾಮನಿರ್ದೇಶನ ಮಾಡಿತ್ತು. ಬಳಿಕ 2004ರಲ್ಲಿ ಅವರು ಬಿಜೆಪಿ ಸೇರ್ಪಡೆಯಾದರು. ಬಳಿಕ 2010ರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸುವ ಮೂಲಕ ಸಂಸದರಾಗಿ ಆಯ್ಕೆಯಾದರು. ಸದ್ಯ ಯೋಗಿ ಆದಿತ್ಯನಾಥ್ ಅವರು ಉತ್ತರಪ್ರದೇಶ ಸಿಎಂ ಆಗಿದ್ದು, ಹೇಮಾ ಮಾಲಿನಿ ಅವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

     ಹೇಮಾ ಮಾಲಿನಿ ರಾಜಕೀಯ ಪ್ರವೇಶ ಮಾಡಿದ್ದರೂ ಸಹ ಚಿತ್ರರಂಗದ ಮೂಲಕವೇ ಹೆಚ್ಚು ಹೆಸರು ಗಳಿಸಿದ್ದಾರೆ. 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು, 1ಸಾವಿರಕ್ಕೂ ಹೆಚ್ಚು ಶೋ ಗಳನ್ನು ಭಾರತದಾದ್ಯಂತ ನೀಡಿದ್ದಾರೆ.

  • ಗೋ ವ್ಯಾಪಾರ ಮತ್ತು ಹೈನುಗಾರಿಕೆಯಿಂದ ದೂರ ಉಳಿಯಿರಿ: ಮುಸ್ಲಿಮರಲ್ಲಿ ಅಜಂ ಖಾನ್ ಮನವಿ

    ಗೋ ವ್ಯಾಪಾರ ಮತ್ತು ಹೈನುಗಾರಿಕೆಯಿಂದ ದೂರ ಉಳಿಯಿರಿ: ಮುಸ್ಲಿಮರಲ್ಲಿ ಅಜಂ ಖಾನ್ ಮನವಿ

    ಲಕ್ನೋ: ಗೋ ವ್ಯಾಪಾರ ಮತ್ತು ಹೈನುಗಾರಿಕೆಯಿಂದ ದೂರ ಉಳಿಯಿರಿ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮುಸ್ಲಿಮರಲ್ಲಿ ಮನವಿ ಮಾಡಿಕೊಂಡಿದ್ದಾರೆ

    ರಾಜಸ್ತಾನದ ಅಲ್ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಹೈನುಗಾರಿಕೆ ಮತ್ತು ಹಾಲಿನ ವ್ಯಾಪಾರದಲ್ಲಿ ತೊಡಗಿರುವ ಮುಸ್ಲಿಮರು ತಮ್ಮ ಮುಂದಿನ ಪೀಳಿಗೆಗಾಗಿ ಇದರಿಂದ ದೂರ ಉಳಿಯಬೇಕೆಂದು ಬೇಡಿಕೊಳ್ಳುತ್ತೇನೆ. ಗೋವುಗಳನ್ನು ಸುಮ್ಮನೆ ಮುಟ್ಟಿದರೂ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗಾಗಿ ಮುಸ್ಲಿಮರು ಈ ವ್ಯಾಪಾರದಿಂದ ದೂರ ಉಳಿಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಜುಲೈ 20-21 ರ ಮಧ್ಯರಾತ್ರಿ ರಾಜಸ್ತಾನದ ಅಲ್ವಾರ್ ಎಂಬಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ರುಕ್ಬರ್ ಖಾನ್‍ನನ್ನು ಅಡ್ಡಗಟ್ಟಿದ ಸ್ಥಳೀಯರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆದರೆ ಪೊಲೀಸರು ಹಲ್ಲೆಗೊಳಗಾದ ಆತನನ್ನು ತಡವಾಗಿ ಆಸ್ಪತ್ರೆಗೆ ದಾಖಲಿಸಿದ್ದರು ಅಷ್ಟರಲ್ಲಿ ಆತ ಮೃತಪಟ್ಟಿದ್ದ. ಈ ಘಟನೆ ದೇಶದ್ಯಾಂತ ಸಂಚಲನ ಉಂಟುಮಾಡಿದೆ. ಮರಣೋತ್ತರ ಪರೀಕ್ಷೆಯಲ್ಲಿ ಆತನ ದೇಹದಲ್ಲಿ 13 ಗಂಭೀರವಾದ ಗಾಯಗಳಾಗಿದ್ದು, ದೈಹಿಕ ಗಾಯದ ಪರಿಣಾಮದಿಂದ ಸಾವನ್ನಪ್ಪಿದ್ದಾನೆ ಎಂದು ವರದಿ ಬಂದಿತ್ತು.

    ಕಳೆದ ವರ್ಷ ಇದೇ ರೀತಿಯ ಘಟನೆಯೊಂದು ಸಂಭವಿಸಿದ್ದು, ಪೆಹ್ಲು ಖಾನ್ ಎಂಬಾತನನ್ನು ಹಸುವಿನ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದನು ಎಂದು ಸ್ಥಳೀಯರು ಹಲ್ಲೆ ಮಾಡಿದ್ದರು.

  • ಶಾಲೆಗೆ ಹೋಗಲು ಹೆಲಿಕಾಪ್ಟರ್ ಕಳುಹಿಸಿಕೊಡಿ: ಯುಪಿ ಸಿಎಂಗೆ ವಿದ್ಯಾರ್ಥಿನಿ ಪತ್ರ

    ಶಾಲೆಗೆ ಹೋಗಲು ಹೆಲಿಕಾಪ್ಟರ್ ಕಳುಹಿಸಿಕೊಡಿ: ಯುಪಿ ಸಿಎಂಗೆ ವಿದ್ಯಾರ್ಥಿನಿ ಪತ್ರ

    ಲಕ್ನೋ: ಶಾಲೆಗೆ ತೆರಳಲು ಹೆಲಿಕಾಪ್ಟರ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಮಥುರಾ ಜಿಲ್ಲೆಯ ಮರ್ಹಾಲ ಗ್ರಾಮದ 8ನೇ ತರಗತಿ ವಿದ್ಯಾರ್ಥಿನಿ ಪತ್ರ ಬರೆದಿದ್ದಾಳೆ.

    8ನೇ ತರಗತಿಯ ವಿದ್ಯಾರ್ಥಿನಿ ಭಾವನಾ ಗ್ರಾಮದಲ್ಲಿ ಸುರಿಯುತ್ತಿರು ಮಳೆಯಿಂದಾಗಿ ರಸ್ತೆಗಳೆಲ್ಲಾ ನೀರು ತುಂಬಿಕೊಂಡಿದೆ. ಹೀಗಾಗಿ ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಸರಿಯಾದ ರಸ್ತೆಯಾಗುವವರೆಗೆ, ಶಾಲೆಗೆ ಹೋಗಲು ಅಗತ್ಯ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಿದ್ದು, ಸಾಧ್ಯವಾಗುವುದಾದರೆ, ಶಾಲೆಗೆ ತೆರಳಲು ಹೆಲಿಕಾಪ್ಟರ್ ನ ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾಳೆ.

    ಮುಖ್ಯಮಂತ್ರಿಗಳೇ ನೀವು `ಬೇಟಿ ಬಚಾವೋ ಬೇಟಿ ಪಡಾವೋ’ ಕಾರ್ಯಕ್ರಮವನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದೀರಿ. ಈ ಯೋಜನೆಗಾಗಿ ರಾಜ್ಯಾದ್ಯಂತ ಸಾಕಷ್ಟು ಪ್ರಚಾರವನ್ನೂ ಮಾಡಿದ್ದೀರಿ. ಆದರೆ ಮಥುರಾದ ಜಿಲ್ಲೆಯ ಹೆಚ್ಚಿನ ಬಾಲಕಿಯರು ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾಳೆ.

    ಅಲ್ಲದೇ ಗ್ರಾಮಸ್ಥರು ಸಹ ವಿದ್ಯಾರ್ಥಿನಿಯ ಬೇಡಿಕೆಗಳಿಗೆ ಕೈಜೋಡಿಸಿದ್ದು, ಖುದ್ದು ಮುಖ್ಯಮಂತ್ರಿಗಳ ಇತ್ತ ಗಮನ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಮರ್ಹಾಲ ಗ್ರಾಮದಲ್ಲಿ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಪಕ್ಕದ ಹಸ್ನಾಪುರ ಗ್ರಾಮಕ್ಕೆ ತೆರಳಬೇಕು, ಆದರೆ ರಸ್ತೆ ತುಂಬ ಹಾಳಾಗಿದ್ದು, ಮಳೆಗಾಲದಲ್ಲಿ ಮಕ್ಕಳು ನರಕಯಾತನೆ ಅನುಭವಿಸುತ್ತಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಸಂಬಂಧ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ.

  • ಧೈರ್ಯವಿದ್ದರೆ ರಾಹುಲ್ ನನ್ನನ್ನು ಅಪ್ಪಿಕೊಳ್ಳಿ-ಸಿಎಂ ಯೋಗಿ ಆದಿತ್ಯನಾಥ್ ಸವಾಲು

    ಧೈರ್ಯವಿದ್ದರೆ ರಾಹುಲ್ ನನ್ನನ್ನು ಅಪ್ಪಿಕೊಳ್ಳಿ-ಸಿಎಂ ಯೋಗಿ ಆದಿತ್ಯನಾಥ್ ಸವಾಲು

    ಲಕ್ನೋ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಧೈರ್ಯವಿದ್ದರೆ ನನ್ನನ್ನು ಅಪ್ಪಿಕೊಳ್ಳಲು ಯತ್ನಿಸಲಿ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸವಾಲು ಎಸೆದಿದ್ದಾರೆ.

    ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ರಾಹುಲ್ ಪ್ರಧಾನಿ ಮೋದಿ ಅವರಿಗೆ ನೀಡಿದ್ದ ಆಲಿಂಗನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಅವರು ನನ್ನನ್ನು ಅಪ್ಪಿಕೊಳ್ಳಲು 10 ಬಾರಿ ಯೋಚಿಸುತ್ತಾರೆ. ಧೈರ್ಯವಿದ್ದರೆ ಅವರು ನನ್ನನ್ನು ಅಪ್ಪಿಕೊಳ್ಳಲು ಯತ್ನಿಸಲಿ ಎಂದು ಸವಾಲು ಎಸೆದರು. ಬಳಿಕ ಇಂತಹ ರಾಜಕೀಯ ನಡೆಗಳನ್ನು ನಾನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ವಿವೇಚನಾಯುಕ್ತ ಯಾವುದೇ ಒಬ್ಬ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

    2019 ರ ಲೋಕಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್ ತನ್ನ ಕಾರ್ಯಕಾರಿ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಿದೆ. ಅಲ್ಲದೇ ಅಖಿಲೇಶ್ ಯಾದವ್, ಮಯಾವತಿ ಅವರು ರಾಹುಲ್ ರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಒಪ್ಪಿದ್ದಾರೆ. ಈ ನಡೆ ಕೇವಲ ಮೋದಿ ಎಂಬ ಶಕ್ತಿಯನ್ನು ಎದುರಿಸಲು ಮಾಡಿರುವ ಪ್ರಯತ್ನವಷ್ಟೇ ಎಂದು ಕಿಡಿಕಾರಿದರು.

    ಸಮಾಜವಾದಿ ಪಕ್ಷದ ಶರದ್ ಪವಾರ್ ರಾಹುಲ್ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಾರಾ ಎಂದು ಯೋಗಿ ಆದಿತ್ಯನಾಥ್ ಪ್ರಶ್ನೆ ಮಾಡಿದ್ದು, ಮೈತ್ರಿ ಸರ್ಕಾರ ಹಲವು ಪಕ್ಷಗಳು ತಮ್ಮದೇ ಗುರಿ ಹೊಂದಿದೆ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಕೊಲೆಗಳನ್ನು ಸಹಿಸಲು ಸಾಧ್ಯವಿಲ್ಲ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದರು.

     

  • ಪುತ್ರಿಯ ಪ್ರೇರಣೆಯಿಂದ 55ರ ಶಾಸಕ ಪದವಿ ಪರೀಕ್ಷೆ ಬರೆದ್ರು

    ಪುತ್ರಿಯ ಪ್ರೇರಣೆಯಿಂದ 55ರ ಶಾಸಕ ಪದವಿ ಪರೀಕ್ಷೆ ಬರೆದ್ರು

    ಲಖ್ನೋ: ಪುತ್ರಿಯರ ಪ್ರೇರಣೆಯಿಂದ ಉತ್ತರ ಪ್ರದೇಶದ ಶಾಸಕರೊಬ್ಬರು ತಮ್ಮ 55 ನೇ ವಯಸ್ಸಿನಲ್ಲಿ ಪದವಿ ಪ್ರಥಮ ವರ್ಷದ ಪರೀಕ್ಷೆ ಬರೆದಿದ್ದಾರೆ.

    ಉದಯಪುರ ಗ್ರಾಮೀಣ ಮತಕ್ಷೇತ್ರದ ಶಾಸಕ ಫೋಲ್ ಸಿಂಗ್ ಮೀನಾ ಪದವಿ ಶಿಕ್ಷಣದ ಪ್ರಥಮ ವರ್ಷದ ಪರೀಕ್ಷೆ ಬರೆದಿದ್ದು, ಪಿ.ಎಚ್‍ಡಿ ಮಾಡುವ ಅಭಿಲಾಸೆಯನ್ನು ವ್ಯಕ್ತಪಡಿಸಿದ್ದಾರೆ.

    ನೀವು ಏಕೆ ಶಿಕ್ಷಣವನ್ನು ಮುಂದುವರೆಸಬಾರದು ಅಂತಾ ನನ್ನ ಇಬ್ಬರು ಪುತ್ರಿಯರು ಕೇಳಿದರು. ಆದರೆ ವಯಸ್ಸು ಆಗಿದ್ದರಿಂದ ನಿರಾಕರಿಸಿದ್ದೇ. ಮಕ್ಕಳು ಬಿಡಲಿಲ್ಲ ಪರೀಕ್ಷೆ ಬರೆಯಲು ಪ್ರೇರಣೆ ನೀಡಿದರು ಎಂದು ಶಾಸಕ ಫೋಲ್ ಸಿಂಗ್ ತಿಳಿಸಿದ್ದಾರೆ.