Tag: uttar pradesh

  • ಕುಂಭಮೇಳಕ್ಕಾಗಿ ನೆಹರು ಮೂರ್ತಿ ಸ್ಥಳಾಂತರಿಸಿದ ಯುಪಿ ಸರ್ಕಾರ

    ಕುಂಭಮೇಳಕ್ಕಾಗಿ ನೆಹರು ಮೂರ್ತಿ ಸ್ಥಳಾಂತರಿಸಿದ ಯುಪಿ ಸರ್ಕಾರ

    -ದೀನ್ ದಯಾಳು ಉಪಾಧ್ಯಾಯ ಪ್ರತಿಮೆಯನ್ನ ಹಾಗೆ ಬಿಟ್ಟಿದ್ದಕ್ಕೆ ಕೈ ಆಕ್ರೋಶ

    ಲಕ್ನೋ: ಉತ್ತರ ಪ್ರದೇಶದಲ್ಲಿ 2019ರ ಜನವರಿಯಲ್ಲಿ ಕುಂಭಮೇಳ ನಡೆಯಲಿದೆ. ಇದರ ಸಿದ್ಧತೆಗಾಗಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರು ಪ್ರತಿಮೆಯನ್ನು ಸ್ಥಳಾಂತರ ಮಾಡಿದ್ದು, ಇದಕ್ಕೆ ಕಾಂಗ್ರೆಸ್ ಭಾರೀ ವಿರೋಧ ವ್ಯಕ್ತಪಡಿಸಿದೆ.

    ಅಲಹಾಬಾದ್‍ನ ಬಲ್ಸಾನ್ ಚೌರಾಹ ಪ್ರದೇಶದಲ್ಲಿ ರಸ್ತೆ ಮಧ್ಯದಲ್ಲಿ ನೆಹರು ಪ್ರತಿಮೆಯನ್ನು ನಿರ್ಮಿಸಲಾಗಿದೆ. ಮುಂದಿನ ವರ್ಷ ನಡೆಯುವ ಕುಂಭ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಹೀಗಾಗಿ ರಸ್ತೆಗಳ ಅಗಲೀಕರಣಕ್ಕೆ ಸರ್ಕಾರವು ಮುಂದಾಗಿದೆ. ಹೀಗಾಗಿ ರಸ್ತೆ ಮಧ್ಯದಲ್ಲಿರುವ ನೆಹರು ಅವರ ಪ್ರತಿಮೆಯನ್ನು ಪಕ್ಕದ ಉದ್ಯಾನಕ್ಕೆ ಸ್ಥಳಾಂತರಿಸಿದೆ.

    ಪ್ರತಿಮೆಯನ್ನು ಸ್ಥಳಾಂತರ ಮಾಡುವ ಮೂಲಕ ಭಾರತದ ಪ್ರಥಮ ಪ್ರಧಾನಿ ನೆಹರು ಅವರಿಗೆ ಯೋಗಿ ಆದಿತ್ಯನಾಥ್ ಸರ್ಕಾರವು ಅವಮಾನ ಮಾಡಿದೆ. ನೆಹರು ತತ್ವಾದರ್ಶಗಳಿಗೆ ಅವಮಾನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ.

    ಗುರುವಾರ ಸ್ವಜನ ಪಕ್ಷ ಹಾಗೂ ಕಾಂಗ್ರೆಸ್ಸಿಗರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದರು. ನೆಹರು ಪ್ರತಿಮೆಯನ್ನು ಸ್ಥಳಾಂತರ ಮಾಡುತ್ತಿದ್ದ ಕ್ರೇನ್ ತಡೆದು, ಕೆಲ ಹೊತ್ತು ಯೋಗಿ ಆದಿತ್ಯನಾಥ್ ವಿರುದ್ಧ ಘೋಷನೆ ಕೂಗಿದರು. ‘ಇದೇ ರಸ್ತೆಯಲ್ಲಿರುವ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆಯನ್ನು ಹಾಗೆ ಬಿಟ್ಟು, ಕೇವಲ ನೆಹರು ಪ್ರತಿಮೆಯನ್ನು ಏಕೆ ಸ್ಥಳಾಂತರ ಮಾಡುತ್ತಿರುವಿರಿ’ ಎಂದು ಪ್ರತಿಭಟನೆ ನಿರತರು ಪ್ರಶ್ನಿಸಿದ್ದಾರೆ.

    ರಸ್ತೆ ಅಗಲೀಕರಣಕ್ಕೆ ಹಾಗೂ ನಗರವನ್ನು ಸುಂದರವಾಗಿಸಲು ನೆಹರು ಪ್ರತಿಮೆಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಉತ್ತರ ಕೊಟ್ಟಿದ್ದಾರೆ. ಆದರೆ ದೀನ್ ದಯಾಳು ಉಪಾಧ್ಯಾಯ ಪ್ರತಿಮೆಯನ್ನು ಏಕೆ ಹಾಗೆ ಬಿಡಲಾಗಿದೆ ಎನ್ನುವುದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಜಾರಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ 6 ಬಲಿ- ತೀವ್ರತೆಗೆ ಹಲವು ದೂರ ಹಾರಿ ಬಿದ್ದವು ದೇಹಗಳು

    ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ 6 ಬಲಿ- ತೀವ್ರತೆಗೆ ಹಲವು ದೂರ ಹಾರಿ ಬಿದ್ದವು ದೇಹಗಳು

    ಲಕ್ನೋ: ಖಾಸಗಿ ಪೆಟ್ರೋಲ್ ಕೆಮಿಕಲ್ ಕಾರ್ಖಾನೆಯೊಂದರಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ 6 ಜನ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ.

    ಕಾರ್ಮಿಕರಾದ ಕಮಲ್‍ವೀರ್, ಲೋಕೇಂದ್ರ, ರವಿ, ಚೇತ್ರಂ, ವಿಕ್ರಾಂತ್ ಹಾಗೂ ಬಾಲ ಗೋವಿಂದ ಮೃತ ದುರ್ದೈವಿಗಳು. ಘಟನೆಯಲ್ಲಿ ಕಪಿಲ್, ಪರ್ವಿಜ್ ಮತ್ತು ರಾಮ್ ಎನ್ನುವರು ನಾಪತ್ತೆಯಾಗಿದ್ದಾರೆ.

    ಈ ಅವಘಡದಲ್ಲಿ 8 ಜನರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ 6 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಬಿಜ್ನೋರ್ ಎಸ್‍ಪಿ ಉಮೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

    ನಡೆದದ್ದು ಏನು?
    ಬುಧವಾರ ಕೊತ್ವಾಲಿ ನಗರದ ನಗಿನಾ ರಸ್ತೆಯ ಮೋಹಿತ್ ಖಾಸಗಿ ಪೆಟ್ರೋಲ್ ಕೆಮಿಕಲ್ ಕಾರ್ಖಾನೆಯಲ್ಲಿ ಕೆಲಸಗಾರರು ಮಿಥೇನ್ ಗ್ಯಾಸ್ ಟ್ಯಾಂಕರ್ ದುರಸ್ತಿ ಮಾಡುತ್ತಿದ್ದರು. ಈ ವೇಳೆ ಬೆಂಕಿ ಕಾಣಿಸಿಕೊಂಡು ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡಿದೆ.

    ಟ್ಯಾಂಕರ್ ಸ್ಫೋಟದ ತೀವ್ರತೆಗೆ ಕಾರ್ಮಿಕರ ದೇಹವು ಸುಮಾರು ಮೀಟರ್ ದೂರಕ್ಕೆ ಸಿಡಿದು ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಮೃತ ಕಾರ್ಮಿಕರ ಕುಟುಂಬದವರು ಹಾಗೂ ಸ್ಥಳೀಯರು ಸೇರಿದಂತೆ ಅನೇಕರು ಘಟನಾ ಸ್ಥಳದಲ್ಲಿ ಸೇರಿದ್ದಾರೆ.

    ಸುರಕ್ಷತೆ ಒದಗಿಸದೇ ಕಾರ್ಮಿಕರ ಸಾವಿಗೆ ಕಾರಣವಾದ ಕಂಪೆನಿ ಮಾಲೀಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಗಂಭೀರವಾಗಿ ಗಾಯಗೊಂಡ ಕಾರ್ಮಿಕರ ಚಿಕಿತ್ಸೆಗೆ ಅವಶ್ಯಕ ವ್ಯವಸ್ಥೆಯನ್ನು ಒದಗಿಸುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತಿ, ಮಾವ ಸೇರಿದಂತೆ 5 ಮಂದಿಯಿಂದ ಸಾಮೂಹಿಕ ಅತ್ಯಾಚಾರ!

    ಪತಿ, ಮಾವ ಸೇರಿದಂತೆ 5 ಮಂದಿಯಿಂದ ಸಾಮೂಹಿಕ ಅತ್ಯಾಚಾರ!

    – ನಿಕಾ ಹಲಾಲ್ ಗೆ ಒಪ್ಪದಿದ್ದಕ್ಕೆ ಈ ಕೃತ್ಯ

    ಲಕ್ನೋ: ಮಹಿಳೆಯೊಬ್ಬಳ ಮೇಲೆ ಪತಿ ಹಾಗೂ ಆತನ ತಂದೆ ಸೇರಿದಂತೆ ಐದು ಮಂದಿ ಸಾಮೂಹಿಕ ಅತ್ಯಾಚಾರವೆಸಗಿ ನಿಕಾ ಹಲಾಲ್ ಮಾಡಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ದೌರ್ಜನ್ಯ ನಡೆದಿದೆ ಎಂದು ಮಹಿಳೆ ತನ್ನ ಪತಿ ಹಾಗೂ ಎಂಟು ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

    ಘಟನೆ ವಿವರ:
    ಮೋರೇದಾಬಾದ್ ಜಿಲ್ಲೆಯ ನಿವಾಸಿಯಾದ ಮಹಿಳೆ 2014 ಡಿಸೆಂಬರ್ 7 ರಂದು ವಿವಾಹವಾಗಿದ್ದಳು. ಪತಿಯ ಕಡೆಯರು ಮಹಿಳೆಗೆ ಕಿರುಕುಳ ನೀಡಿ 2015 ಡಿಸೆಂಬರ್ 25 ರಂದು ಮನೆಯಿಂದ ಹೊರಹಾಕಿದ್ದರು. ಈ ಮಧ್ಯೆ ಮತ್ತೆ 2016 ಡಿಸೆಂಬರ್ 24 ರಂದು ಎರಡು ಕುಟುಂಬಗಳ ನಡುವೆ ರಾಜಿ ಸಂಧಾನ ನಡೆದು, ಆಕೆಯನ್ನು ಮತ್ತೆ ಪತಿಯ ಮನೆಗೆ ಕಳುಹಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಪ್ರೇಮ್ ಪ್ರಕಾಶ್ ತಿಳಿಸಿದ್ದಾರೆ.

    ಬಳಿಕ ಪತಿ ಮಹಿಳೆಗೆ ನಿಕಾ ಹಲಾಲ್‍ಗೆ ಒಪ್ಪಿಕೊಳ್ಳುವಂತೆ ಒತ್ತಾಯಿಸಿದಾಗ ಆಕೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಹೀಗಾಗಿ ಪತಿ ತಂದೆ ಕೊಠಡಿಯಲ್ಲಿ ಕೂಡಿ ಹಾಕಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಘಟನೆ ಬಳಿಕ ಮಹಿಳೆ ಕಳೆದ ವರ್ಷ ಅಕ್ಟೋಬರ್ 6 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಎಫ್‍ಐಆರ್‍ನಲ್ಲಿ ದಾಖಲಾಗಿದೆ. ಈ ಘಟನೆ ಕುರಿತು ಮಹಿಳೆ ಜಿಲ್ಲೆಯ ಮ್ಯಾಜಿಸ್ಟ್ರೇಟ್‍ರಿಗೆ ತನ್ನ ಕುಟುಂಬದವರಿಂದಲೇ ನನಗೆ ಜೀವ ಬೆದರಿಕೆಯಿದೆ ಎಂದು ಅರ್ಜಿ ಸಲ್ಲಿಸಿದ್ದು, ಸಾಮೂಹಿಕ ಅತ್ಯಾಚಾರ ಕುರಿತು ಈಗಾಗಲೇ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.

    ನಿಕಾ ಹಲಾಲ ಎಂದರೇನು?:
    ತಲಾಖ್ ಪಡೆದ ಬಳಿಕ ಇನ್ನೊಬ್ಬರೊಂದಿಗೆ ವಿವಾಹವಾಗಿ ದಾಂಪತ್ಯವನ್ನು ಅಂತ್ಯಗೊಳಿಸಬೇಕು. ಅಂದರೆ, ಆ ಎರಡನೇ ಮದುವೆಯನ್ನು ಮುರಿದುಕೊಂಡಾಗ ಅಥವಾ ಎರಡನೇ ಪತಿ ಮೃತಪಟ್ಟಾಗ ಮಾತ್ರ ಮೊದಲ ಪತ್ನಿಯನ್ನು ಮಹಿಳೆಯು ಪುನರ್ ವಿವಾಹವಾಗಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮತದಾರರ ಪಟ್ಟಿಯಲ್ಲಿ ಸನ್ನಿಯ ಹಾಟ್ ಫೋಟೋ!

    ಮತದಾರರ ಪಟ್ಟಿಯಲ್ಲಿ ಸನ್ನಿಯ ಹಾಟ್ ಫೋಟೋ!

    -ಸನ್ನಿ ಜೊತೆ ಗಿಳಿ, ಆನೆ ಫೋಟೋ

    ಲಕ್ನೋ: ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಬಾಲಿವುಡ್ ಮಾದಕ ಚೆಲುವೆಯ ಫೋಟೋ ಮುದ್ರಣಗೊಂಡಿದೆ. ಅಲ್ಲದೇ ಮತದಾರರ ಪಟ್ಟಿಯಲ್ಲಿ ಜನರ ಭಾವಚಿತ್ರದ ಬದಲಾಗಿ ಗಿಳಿ, ಆನೆ, ಜಿಂಕೆ ಇತರೆ ಪ್ರಾಣಿ ಪಕ್ಷಿಗಳ ಫೋಟೋಗಳು ಕೂಡ ಮುದ್ರಣಗೊಂಡಿವೆ.

    ಮತದಾರರ ಪಟ್ಟಿಯಲ್ಲಿ ಸನ್ನಿ ಲಿಯೋನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಡಾಟಾ ಎಂಟ್ರಿ ಆಪರೇಟರ್ ವಿಷ್ಣುದೇವ್ ವರ್ಮಾ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಆದೇಶಿಸಿದ್ದಾರೆ. ರಾಜ್ಯದಲ್ಲಿ ಸ್ಥಳೀಯ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಮತದಾರರ ಪಟ್ಟಿಯ ಪರಿಶೀಲನೆ ನಡೆಸುವ ವೇಳೆ ಈ ಎಡವಟ್ಟು ಬೆಳಕಿಗೆ ಬಂದಿದೆ.

    ಮತದಾರರ ಪಟ್ಟಿಯಲ್ಲಿ ಎಲ್ಲ ಮಾಹಿತಿ ಸರಿಯಾಗಿದ್ದು, ಫೋಟೋಗಳು ಮಾತ್ರ ಅದಲು ಬದಲುಗೊಂಡಿವೆ. ವಿವೇಕಾನಂದ ಕಾಲೋನಿ ನಿವಾಸಿ ದುರ್ಗಾವತಿ ಎಂಬ ಮಹಿಳೆಯ ಫೋಟೋದಲ್ಲಿ ಸನ್ನಿ ಲಿಯೋನ್ ಚಿತ್ರ ಪ್ರಿಂಟ್ ಆಗಿದೆ. ಕುನ್ವಾರ್ ಅಂಕುರ್ ಸಿಂಗ್ ಎಂಬ ಹೆಸರಿನ ಮುಂದೆ ಜಿಂಕೆ, ಮಾಜಿ ಸಚಿವ ನಾರದ್ ರೈ ಹೆಸರಿನ ಮುಂದೆ ಆನೆಯ ಫೋಟೋ ಹಾಕಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಚುನಾವಣಾಧಿಕಾರಿ ಮನೋಜ್ ಕುಮಾರ್ ಸಿಂಘಾಲ್, ಸಾರ್ವಜನಿಕರಿಗೆ ಮತದಾರರ ಚೀಟಿ ವಿತರಣೆ ಮೊದಲೇ ಎಡವಟ್ಟು ಬೆಳಕಿಗೆ ಬಂದಿದೆ. ಡೇಟಾ ಆಪರೇಟರ್ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಆತನ ವಿರುದ್ಧ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಕರ್ತವ್ಯಲೋಪವೆಸಗಿದ ಅಧಿಕಾರಿಗಳು ವರ್ಗಾವಣೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವೈದ್ಯಕೀಯ ಪರೀಕ್ಷೆಯ ವರದಿ ನೋಡಿ 14ರ ಗ್ಯಾಂಗ್‍ರೇಪ್ ಸಂತ್ರಸ್ತೆ ಆತ್ಮಹತ್ಯೆ

    ವೈದ್ಯಕೀಯ ಪರೀಕ್ಷೆಯ ವರದಿ ನೋಡಿ 14ರ ಗ್ಯಾಂಗ್‍ರೇಪ್ ಸಂತ್ರಸ್ತೆ ಆತ್ಮಹತ್ಯೆ

    ಲಕ್ನೋ: ತನ್ನ ಮೇಲೆ ಗ್ಯಾಂಗ್ ರೇಪ್ ಆಗಿಲ್ಲ ಎನ್ನುವ ವೈದ್ಯಕೀಯ ವರದಿಯನ್ನು ನೋಡಿ 14 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಬಾದಾನ್ ನಲ್ಲಿ ನಡೆದಿದೆ.

    ಸೋಮವಾರ ರಾತ್ರಿ ಗನ್ ತೋರಿಸಿ ಹತ್ತಿರದ ಸರ್ಕಾರಿ ಶಾಲೆಗೆ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಬಾಲಕಿ ದೂರು ನೀಡಿದ್ದಳು. ಈ ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ಮುಖ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.

    ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎನ್ನುವ ವರದಿ ಬಂದಿತ್ತು. ಈ ವರದಿಯನ್ನು ನೋಡಿ ಶಾಕ್ ಆಗಿ ಬುಧವಾರ ರಾತ್ರಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸ್ ತನಿಖೆಯ ವೇಳೆ ನೇಣಿಗೆ ಶರಣಾದ ಬಾಲಕಿ ಆರೋಪಿಯ ಜೊತೆ 122 ಬಾರಿ ಫೋನಿನಲ್ಲಿ ಮಾತನಾಡಿರುವ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ 2 ತಿಂಗಳ ಕಾಲ ಆಕೆ ನಿರಂತರ ಸಂಪರ್ಕಲ್ಲಿದ್ದ ವಿಚಾರ ತಿಳಿದುಬಂದಿದೆ.

    ಈಗ ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮುಂದಿನ ತನಿಖೆಗೆ ಪೊಲೀಸರು ಈ ವರದಿಯನ್ನು ಕಾಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಂದೆಯಿಂದಲೇ ಅಪ್ರಾಪ್ತೆಯ ಮೇಲೆ ರೇಪ್: 13 ವಾರಗಳ ಭ್ರೂಣ ತೆಗೆಯಲು ಅನುಮತಿ

    ತಂದೆಯಿಂದಲೇ ಅಪ್ರಾಪ್ತೆಯ ಮೇಲೆ ರೇಪ್: 13 ವಾರಗಳ ಭ್ರೂಣ ತೆಗೆಯಲು ಅನುಮತಿ

    ಲಕ್ನೋ: ತಂದೆಯಿಂದಲೇ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ 13 ವಾರಗಳ ಭ್ರೂಣವನ್ನು ತೆಗೆಸಲು ಪೋಕ್ಸೋ ಕೋರ್ಟ್ ಶನಿವಾರ ಅನುಮತಿ ನೀಡಿದೆ.

    ಆಕೆ ಹಲವು ಬಾರಿ ತಂದೆಯಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು. ಬಾಲಕಿಯ ತಾಯಿ ದೂರು ನೀಡಿದ ಆಧಾರದ ಮೇಲೆ ಆಗಸ್ಟ್ 8 ರಂದು ತಂದೆಯ ವಿರುದ್ಧ ಎಫ್‍ಐ ಆರ್ ದಾಖಲಿಸಿಕೊಂಡು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಮಧ್ಯಂತರ ತೀರ್ಪಿನಲ್ಲಿ ನ್ಯಾಯಾಧೀಶರಾದ ವಿವೇಕಾನಂದ್ ಸರನ್ ತ್ರಿಪಾಠಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದು ಹಾಗೂ ಡಿಎನ್‍ಎ ಮಾದರಿಯನ್ನು ಮತ್ತು ಭ್ರೂಣವನ್ನು ಸಂರಕ್ಷಿಸಬೇಕೆಂದು ಆದೇಶಿಸಿದ್ದಾರೆ.

    ಅಷ್ಟೇ ಅಲ್ಲದೇ ಮಥುರಾ ಜಿಲ್ಲಾ ನ್ಯಾಯಾಲಯ 1 ತಿಂಗಳೊಳಗೆ ನೊಂದ ಅಪ್ರಾಪ್ತ ಬಾಲಕಿಯ ಕುಟುಂಬಕ್ಕೆ 2 ಲಕ್ಷ ರೂ. ಹಣ ನೀಡಬೇಕೆಂದು ತನ್ನ ಮಧ್ಯಂತರ ಆದೇಶದಲ್ಲಿ ಕೋರ್ಟ್ ಸೂಚಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಕ್ಕಳಿಗೆ ರಾಷ್ಟ್ರಗೀತೆ ಹಾಡದಂತೆ ತಡೆದಿದ್ದ ಧರ್ಮಗುರು ಬಂಧನ

    ಮಕ್ಕಳಿಗೆ ರಾಷ್ಟ್ರಗೀತೆ ಹಾಡದಂತೆ ತಡೆದಿದ್ದ ಧರ್ಮಗುರು ಬಂಧನ

    ಲಕ್ನೋ: ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಕ್ಕಳಿಗೆ ರಾಷ್ಟ್ರಗೀತೆ ಹಾಡದಂತೆ ತಡೆದಿದ್ದ ಉತ್ತರಪ್ರದೇಶದ ಮಹಾರಾಜಗಂಜ್‍ನ ಮದರಸದ ಧರ್ಮಗುರುನನ್ನು ಕೊಲುಹಿ ಪೊಲೀಸರು ಬಂಧಿಸಿದ್ದಾರೆ.

    ಮೊಹಮ್ಮದ್ ಜುನೈದ್ ಅನ್ಸಾರಿ ಬಂಧಿತ ಧರ್ಮಗುರು. ಈತ ಆಗಸ್ಟ್ 15ರಂದು ಮಹಾರಾಜಗಂಜ್ ಪ್ರದೇಶದ ಮದರಸದಲ್ಲಿ ರಾಷ್ಟ್ರಗೀತೆಯನ್ನು ಹಾಡುತ್ತಿದ್ದ ಮಕ್ಕಳನ್ನು ತಡೆದು, ರಾಷ್ಟ್ರಗೀತೆ ಹಾಡದಂತೆ ಎಚ್ಚರಿಸಿದ್ದಾನೆ. ಆದರೆ ಮದರಸದ ಪ್ರಾಂಶುಪಾಲರು ಅನ್ಸಾರಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ಸಿಟ್ಟಿಗೆದ್ದ ಇತರೆ ಶಿಕ್ಷಕರು ಅನ್ಸಾರಿಯನ್ನು ತಡೆಯಲು ಮುಂದಾಗಿದ್ದಾರೆ.

    ಈ ವೇಳೆ ಅನ್ಸಾರಿಯು ಇಸ್ಲಾಂನಲ್ಲಿ ರಾಷ್ಟ್ರಗೀತೆಗೆ ಅವಕಾಶವಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ರಾಷ್ಟ್ರಗೀತೆಯನ್ನು ಹಾಡಬಾರೆಂದು ತಾಕೀತು ಮಾಡಿದ್ದಾನೆ. ಸ್ಥಳದಲ್ಲಿದ್ದ ವಿಜ್ಞಾನ ಶಿಕ್ಷಕ ಸುನಿಲ್ ಮಣಿ ತ್ರಿಪಾಟಿ ಎಂಬವರು ಅನ್ಸಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಧರ್ಮಗುರುವಿನ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ರಾಷ್ಟ್ರಗೀತೆ ಅಪಮಾನ ಮಾಡಿ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮೊಹಮ್ಮದ್ ಜುನೈದ್ ಅನ್ಸಾರಿಯನ್ನು ಬಂಧಿಸಿದ್ದಾರೆ. ಈ ವೇಳೆ ಆತನಿಗೆ ಸಹಾಯಮಾಡಿದ ಇಬ್ಬರು ವ್ಯಕ್ತಿಗಳ ಹುಡುಕಾಟಕ್ಕೆ ವ್ಯಾಪಕ ಶೋಧ ನಡೆಸಿದ್ದಾರೆ.

    ಕೊಲುಹಿ ಉಪ ಜಿಲ್ಲಾವರಿಷ್ಠಾಧಿಕಾರಿ ಅಶುತೋಷ್ ತ್ರಿಪಾಟಿ ಮಾತನಾಡಿ, ಉಮೇಶ್ ಯಾದವ್ ಎಂಬವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಅನ್ಸಾರಿಯನ್ನು ಬಂಧಿಸಿದ್ದು, ಅಲ್ಲದೇ ಇನ್ನಿಬ್ಬರ ಕುರಿತು ಮಾಹಿತಿ ಕಲೆಹಾಕುತ್ತಿದ್ದೇವೆ. ಅಲ್ಲದೇ ಅನ್ಸಾರಿಗೂ ಮದರಸಗೂ ಯಾವುದೇ ಸಂಬಂಧವಿಲ್ಲ. ಆತ ರಾಷ್ಟ್ರಗೀತೆ ಹಾಡುತ್ತಿರುವಾಗ ಏಕಾಏಕಿ ಬಂದು ತಡೆದಿದ್ದ ಎಂದು ಹೇಳಿದ್ದಾರೆ.

    ಘಟನೆ ಕುರಿತು ಮಾತನಾಡಿದ ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಯಾದ ಪ್ರಭಾತ್ ಕುಮಾರ್, ಅನ್ಸಾರಿಯವರಿಗೆ ಮದರಸದೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ. ಅವನು ರಾಷ್ಟ್ರಗೀತೆ ಹಾಡುವಾಗ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳಿಗೆ ಅಡ್ಡಿಪಡಿಸಿದ್ದಾನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಡ್ಡಾಯವಾಗಿ ಭಾರತ್ ಮಾತಾ ಕೀ ಜೈ ಎನ್ನಬೇಕು: ಶಿಯಾ ವಕ್ಫ್ ಮಂಡಳಿ ಆದೇಶ

    ಕಡ್ಡಾಯವಾಗಿ ಭಾರತ್ ಮಾತಾ ಕೀ ಜೈ ಎನ್ನಬೇಕು: ಶಿಯಾ ವಕ್ಫ್ ಮಂಡಳಿ ಆದೇಶ

    ಲಕ್ನೋ: ಅಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಕಡ್ಡಾಯವಾಗಿ ಭಾರತ್ ಮಾತಾ ಕೀ ಜೈ ಎನ್ನುವ ಘೋಷಣೆಯನ್ನು ಹೇಳಲೇಬೇಕು ಎಂದು ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿ ತನ್ನೆಲ್ಲಾ ಸಂಸ್ಥೆಗಳಿಗೆ ಆದೇಶ ನೀಡಿದೆ.

    ಶಿಯಾ ವಕ್ಫ್ ಮಂಡಳಿ ಶನಿವಾರ ಖುದ್ದು ಆದೇಶವನ್ನು ಹೊರಡಿಸಿದ್ದು, ಒಂದು ವೇಳೆ ತನ್ನ ಆದೇಶವನ್ನು ಯಾರಾದರೂ ಪಾಲಿಸದೇ ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷ ವಾಸೀಮ್ ರಿಜ್ವಿಯವರು, ಶಿಯಾ ವಕ್ಫ್ ಮಂಡಳಿಯ ವ್ಯಾಪ್ತಿಗೆ ಬರುವ ಎಲ್ಲಾ ಸಂಸ್ಥೆಗಳಲ್ಲಿ ಆಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆಯನ್ನು ಹಾಡಬೇಕು. ರಾಷ್ಟ್ರಗೀತೆ ಮುಗಿದ ನಂತರ ಕಡ್ಡಾಯವಾಗಿ ಭಾರತ್ ಮಾತಾ ಕೀ ಜೈ ಎನ್ನುವ ಘೋಷಣೆಯನ್ನು ಹೇಳಬೇಕು. ಒಂದು ವೇಳೆ ಆದೇಶವನ್ನು ಪಾಲಿಸದೇ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಎಸ್‍ಪಿ, ಬಿಎಸ್‍ಪಿ, ಕಾಂಗ್ರೆಸ್ ಒಂದಾದ್ರೂ ಯುಪಿಯಲ್ಲಿ ನಮ್ಮದೇ ಗೆಲುವು: ಅಮಿತ್ ಶಾ

    ಎಸ್‍ಪಿ, ಬಿಎಸ್‍ಪಿ, ಕಾಂಗ್ರೆಸ್ ಒಂದಾದ್ರೂ ಯುಪಿಯಲ್ಲಿ ನಮ್ಮದೇ ಗೆಲುವು: ಅಮಿತ್ ಶಾ

    ಲಕ್ನೋ: 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಎಸ್‍ಪಿ (ಸಮಾಜಾವಾದಿ ಪಕ್ಷ) ಮತ್ತು ಬಿಎಸ್‍ಪಿ (ಬಹುಜನ ಸಮಾಜಾವಾದಿ ಪಕ್ಷ) ಮೂವರು ಒಂದಾದರೂ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮೀರತ್‍ನ ಸುಭಾರತಿ ವಿಶ್ವವಿದ್ಯಾಲಯದಲ್ಲಿ ನಡೆದ ಸ್ಥಳೀಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಚುನಾವಣೆಯಲ್ಲಿನ ವಿರೋಧ ಪಕ್ಷಗಳು ಏನೇ ಕಸರತ್ತು ಮಾಡಿದ್ರೂ ಗೆಲುವು ನಮ್ಮದೇ ಆಗಲಿದೆ. ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅವರ ಜನಪರ ಯೋಜನೆಗಳು ಎಲ್ಲ ವರ್ಗದವರಿಗೂ ತಲುಪಿದ್ದು, ಹಾಗಾಗಿ ನಾವೇ ಬಹುಮತ ಪಡೆಯಲಿದ್ದೇವೆ. ವಿರೋಧ ಪಕ್ಷಗಳು ರಚಿಸಿರುವ ಮಹಾಘಟ ಬಂಧನ್ ಬಗ್ಗೆ ಯಾರು ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದರು.

    ಉತ್ತರ ಪ್ರದೇಶದಲ್ಲಿ ಎಸ್‍ಪಿ, ಬಿಎಸ್‍ಪಿ ಒಂದಾಗಿದೆ ಏನು ಮಾಡೋದು ಎಂದು ಕೆಲವು ಕಾರ್ಯಕರ್ತರು ನನ್ನನ್ನು ಪ್ರಶ್ನಿಸುತ್ತಾರೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರು ಯುವಕರು ಕೈ ಕೈ ಹಿಡಿದುಕೊಂಡು ಚುನಾವಣೆ ಎದುರಿಸಿದರು. ಪರಿಣಾಮ ಬಿಜೆಪಿ 300 ಅಧಿಕ ಕ್ಷೇತ್ರಗಳನ್ನು ಗೆಲುವನ್ನು ಸಾಧಿಸಿದ್ದೇವೆ. ಈ ಬಾರಿ ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ ಮೂವರು ಒಂದಾದ್ರೂ ಚುನಾವಣೆ 74ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ.

    ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಅಮಿತ್ ಶಾ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಸಂಬಂಧ ಸ್ಥಳೀಯ, ಜಿಲ್ಲಾ ಮಟ್ಟದ ಕಾರ್ಯಕರ್ತರೊಂದಿಗೆ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಭಾನುವಾರ ನಡೆದ ಸಭೆಯಲ್ಲಿಯೂ ಚುನಾವಣೆ ಪ್ರಚಾರ, ಮೋದಿ ಮತ್ತು ಯೋಗಿ ಸರ್ಕಾರದ ಯೋಜನಗೆಗಳ ಕೊನೆಯ ವರ್ಗದ ಜನರಿಗೆ ತಿಳಿ ಹೇಳುವುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಅಮಿತ್ ಶಾ ಚರ್ಚೆ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಆರೋಗ್ಯವಂತ ಮಗುವಿಗಾಗಿ ಸ್ವಂತ ಮಗಳನ್ನೇ ಕೊಂದು ಮನೆಯಲ್ಲೇ ಹೂತಿಟ್ರು!

    ಆರೋಗ್ಯವಂತ ಮಗುವಿಗಾಗಿ ಸ್ವಂತ ಮಗಳನ್ನೇ ಕೊಂದು ಮನೆಯಲ್ಲೇ ಹೂತಿಟ್ರು!

    ಲಕ್ನೋ: ಆರೋಗ್ಯವಂತ ಮಗುವನ್ನು ಪಡೆಯಲು ಮಂತ್ರವಾದಿಯ ಮಾತು ಕೇಳಿ ದಂಪತಿಯು ತಮ್ಮ 6 ವರ್ಷದ ಮಗಳನ್ನು ಕೊಂದು ಮನೆಯಲ್ಲಿ ಹೂತು ಹಾಕಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೊರದಬಾದ್ ನಲ್ಲಿ ನಡೆದಿದೆ.

    6 ವರ್ಷದ ಬಾಲಕಿ ತಾರಾ ತನ್ನ ಪೋಷಕರಿಂದಲೇ ಹತ್ಯೆಗೀಡಾದ ದುರ್ದೈವಿ. ತಾರಾ ಹುಟ್ಟಿನಿಂದಲೂ ಅಪೌಷ್ಟಿಕತೆ ಹಾಗೂ ರಿಕೆಟ್ಸ್ ಕಾಯಿಲೆಯಿಂದ ಬಳಲುತ್ತಿದ್ದಳು. ಹೀಗಾಗಿ ಬಾಲಕಿಗೆ ಹಲವು ವರ್ಷಗಳಿಂದಲೂ ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗಿರಲಿಲ್ಲ. ಇದರಿಂದ ರೋಸಿಹೋದ ಪೋಷಕರು ಕೊನೆಗೆ ಮಂತ್ರವಾದಿಯ ಮೊರೆ ಹೋಗಿದ್ದರು.

    ಮಂತ್ರವಾದಿಯು ದಂಪತಿಗೆ ನಿಮ್ಮ ಬದುಕಿರುವ ಮಗಳನ್ನು ಕೊಂದು ಮನೆಯಲ್ಲಿಯೇ ಹೂತು ಹಾಕಿದರೆ, ಮುಂದೆ ನಿಮಗೆ ಆರೋಗ್ಯವಂತ ಮಗು ಹುಟ್ಟುತ್ತದೆ ಎಂದು ಸಲಹೆ ನೀಡಿದ್ದಾನೆ. ಈತನ ಸಲಹೆಯಿಂದ ಪ್ರಭಾವಿತರಾದ ದಂಪತಿ ತಮ್ಮ 6 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ. ಅಲ್ಲದೇ ಬಾಲಕಿಯನ್ನು ಹೂತುಹಾಕುವ ವೇಳೆ ನೆರೆಮನೆಯ ಸದಸ್ಯರು ನೋಡಿ ಪೊಲೀಸರಿಗೆ ವಿಷಯ ಮುಟ್ಟಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿಯ ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬಾಲಕಿಯು ಮೃತಪಟ್ಟಾಗ ಆಕೆ ಯಾವುದೇ ಆಹಾರವನ್ನು ಸೇವಿಸಿರಲಿಲ್ಲ ಹಾಗೂ ತುಂಬಾ ಒದ್ದಾಡಿ ಮೃತಪಟ್ಟಿದ್ದಾಳೆಂದು ವರದಿ ಬಂದಿದೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ರವೀಂದ್ರ ಗೌರ್, ಬಾಲಕಿಯು ಅಪೌಷ್ಠಿಕ ಖಾಯಿಲೆಯಿಂದ ಬಳಲುತ್ತಿದ್ದರಿಂದ ಮಂತ್ರವಾದಿಯ ಮಾತನ್ನು ಕೇಳಿ, ಪೋಷಕರೆ ತಮ್ಮ ಮಗಳನ್ನು ಹತ್ಯೆ ಮಾಡಿದ್ದಾರೆ. ಘಟನೆ ಸಂಬಂಧ ಪೋಷಕರನ್ನು ಬಂಧಿಸಿದ್ದು, ಕೃತ್ಯಕ್ಕೆ ಸಹಕರಿಸಿದ ಆಕೆಯ ಅಜ್ಜಿಯನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews