Tag: uttar pradesh

  • ದೆಹಲಿಯಲ್ಲಿ ಗುಂಡು ಹಾರಿಸಿ, ಗಲಭೆಗಳನ್ನು ಪ್ರಚೋದಿಸಿದ್ದ ಶಾರುಖ್ ಅರೆಸ್ಟ್

    ದೆಹಲಿಯಲ್ಲಿ ಗುಂಡು ಹಾರಿಸಿ, ಗಲಭೆಗಳನ್ನು ಪ್ರಚೋದಿಸಿದ್ದ ಶಾರುಖ್ ಅರೆಸ್ಟ್

    – ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಆರೋಪಿಯ ಬಂಧನ

    ನವದೆಹಲಿ: 47ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಈಶಾನ್ಯ ದೆಹಲಿ ದಂಗೆಯಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದ ಆರೋಪಿ ಮೊಹಮ್ಮದ್ ಶಾರೂಖ್‍ನನ್ನು ಶಾಮ್ಲಿ ಜಿಲ್ಲೆಯ ಬರೇಲಿಯಲ್ಲಿ ಇಂದು ಬಂಧಿಸಲಾಗಿದೆ.

    ಆರೋಪಿ ಮೊಹಮ್ಮದ್ ಶಾರುಖ್ ಫೆಬ್ರವರಿ 24ರಂದು ಜಫರಾಬಾದ್‍ನ ಪೊಲೀಸರ ಮೇಲೆ ಪಿಸ್ತೂಲ್‍ನಿಂದ 8 ಸುತ್ತು ಗುಂಡು ಹಾರಿಸಿದ್ದ. ಶಾರೂಖ್ ಗನ್ ತೋರಿಸಿದಾಗ ಬೆದರದ ಪೊಲೀಸ್ ಅಧಿಕಾರಿ ಎರಡು ಕೈ ಮೇಲೆತ್ತಿ ಮುಂದೆ ಸಾಗಿದ್ದರು. ಆಗ ಶಾರೂಖ್ 2 ಗುಂಡುಹಾರಿಸಿದ್ದ. ಇದನ್ನು ಸ್ಥಳೀಯರು ಮೊಬೈನ್‍ಲ್ಲಿ ಸೆರೆ ಹಿಡಿದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶಾರುಖ್ ಬಂಧನಕ್ಕಾಗಿ ಬಲೆ ಬೀಸಿದ್ದರು. ಕಳೆದ 8 ದಿನಗಳಿಂದ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಇಂದು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.

    ಈ ಹಿಂದೆ ಅಪರಾಧ ವಿಭಾಗವು ಶಾರುಖ್‍ನನ್ನು ಬರೇಲಿಯಲ್ಲಿ ಹುಡುಕಾಡಿತ್ತು. ಬಳಿಕ ದೆಹಲಿ ಪೊಲೀಸ್ ಹಾಗೂ ಅಪರಾಧ ವಿಭಾಗದ 10 ತಂಡಗಳು ಆರೋಪಿಗೆ ಶೋಧ ಕಾರ್ಯ ನಡೆಸಿದ್ದವು. ಗುಂಡು ಹಾರಿಸಿದ ಬಳಿಕ ಶಾರುಖ್ ಪಾಣಿಪತ್, ಕೈರಾನಾ, ಅಮ್ರೋಹ ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ತಲೆಮರೆಸಿಕೊಂಡಿದ್ದ. ಕೊನೆಯದಾಗಿ ಪೊಲೀಸರು ಶಾಮ್ಲಿಯಲ್ಲಿ ಆತನನ್ನು ಸೆರೆ ಹಿಡಿದಿದ್ದಾರೆ ಎಂದು ವರದಿಯಾಗಿದೆ. ದೆಹಲಿ ಹಿಂಸಾಚಾರದಲ್ಲಿ ಈವರೆಗೆ 47 ಜನರು ಸಾವನ್ನಪ್ಪಿದ್ದಾರೆ.

    ದೆಹಲಿ ಹಿಂಸಾಚಾರದ ನಂತರ ಶಾರುಖ್ ತಂದೆ ಸಬೀರ್ ರಾಣಾರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದರು. ಆದರೆ ಶಾರುಖ್ ತನ್ನ ತಂದೆಯನ್ನು ಇಬ್ಬರು ಸಹಚರರ ಮೂಲಕ ಬರೇಲಿಗೆ ಕಳುಹಿಸಿದ್ದ. ಹೀಗಾಗಿ ರಾಣಾ ಸುಮಾರು 4-5 ದಿನಗಳ ಕಾಲ ಇಲ್ಲಿಯೇ ಇದ್ದು, ನಂತರ ಶಾಮ್ಲಿಗೆ ಬಂದಿದ್ದ. ಈ ಕುರಿತು ಮಾಹಿತಿ ಸಿಗುತ್ತಿದ್ದ ಕಾರ್ಯಾಚರಣೆ ಚುರುಕುಗೊಳಿಸಿದ ದೆಹಲಿ ಪೊಲೀಸರು ಬರೇಲಿಯಲ್ಲಿ ಬಂಧಿಸಿದ್ದಾರೆ. ಆದರೆ ಶಾರುಖ್ ಬಂಧನದ ಬಗ್ಗೆ ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ ಎಂದು ಬರೇಲಿ ಮತ್ತು ಮೀರತ್ ಪೊಲೀಸರು ತಿಳಿಸಿದ್ದರು.

    ಮಾದಕವಸ್ತು ಕಳ್ಳಸಾಗಣೆ ವ್ಯವಹಾರ:
    ಶಾರುಖ್ ಕುಟುಂಬದವರು ಪಂಜಾಬ್ ಮೂಲದವರು. ಅವರು ಕಳೆದ ಹಲವಾರು ವರ್ಷಗಳಿಂದ ದೆಹಲಿಯ ಘೋಂಡಾದಲ್ಲಿ ವಾಸಿಸುತ್ತಿದ್ದಾರೆ. ಆತನ ತಂದೆ ಸಬೀರ್ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದ ಎಂದು ವರದಿಯಾಗಿದೆ. ಆರೋಪಿಗಳು ಪಂಜಾಬ್‍ನಿಂದ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು. ಜೊತೆಗೆ ದೆಹಲಿಯ ಅನೇಕ ಜಿಲ್ಲೆಗಳಿಗೆ ಹಾಗೂ ಉತ್ತರ ಪ್ರದೇಶಕ್ಕೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಮಾದಕ ವಸ್ತು ಮಾರಾಟ ನಿಷೇಧ ಕಾಯ್ದೆ ಅಡಿ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಪ್ರಸ್ತುತ ಸಬೀರ್ ಹಾಸಿಗೆ ಹಿಡಿದಿದ್ದಾನೆ. ಪಂಜಾಬ್, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಸಬೀರ್ ಜೈಲು ಶಿಕ್ಷೆ ಅನುಭವಿಸಿದ್ದ. ಆರೋಪಿ ಶಾರುಖ್‍ಗೆ ಇಬ್ಬರು ಸಹೋದರರೂ ಇದ್ದಾರೆ ಎಂದು ವರದಿಯಾಗಿದೆ.

  • ಗುಮಾಸ್ತನ ಮನೆಯೇ ಪರೀಕ್ಷಾ ಕೇಂದ್ರ – ಮಕ್ಕಳ ಜೊತೆ ದುಡ್ಡು ನೀಡಿ ಕುಳಿತ್ತಿದ್ದವರು ಅರೆಸ್ಟ್

    ಗುಮಾಸ್ತನ ಮನೆಯೇ ಪರೀಕ್ಷಾ ಕೇಂದ್ರ – ಮಕ್ಕಳ ಜೊತೆ ದುಡ್ಡು ನೀಡಿ ಕುಳಿತ್ತಿದ್ದವರು ಅರೆಸ್ಟ್

    ಲಕ್ನೋ: ಖಾಸಗಿ ಕಾಲೇಜುವೊಂದರ ಗುಮಾಸ್ತ ತನ್ನ ಮನೆಯಲ್ಲೇ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ.

    ಖಾಸಗಿ ಕಾಲೇಜುವೊಂದರ ಗುಮಾಸ್ತ ತನ್ನ ಮನೆ ಕಾಲೇಜಿನ ಪಕ್ಕದಲ್ಲೇ ಇದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ತನ್ನ ಮನೆಗೆ ಕರೆಯಿಸಿ ಪರೀಕ್ಷೆ ಮಾಡಿದ್ದಾನೆ. ಜೊತೆಗೆ ವಿದ್ಯಾರ್ಥಿಗಳ ಜೊತೆ ಅಕ್ರಮವಾಗಿ ಬೇರೆಯವರ ಕೈಯಲ್ಲಿ ದುಡ್ಡು ಕೊಟ್ಟು ಪರೀಕ್ಷೆ ಬರೆಸುತ್ತಿದ್ದ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗುಮಾಸ್ತನ ಮನೆಯ ಮೇಲೆ ದಾಳಿಮಾಡಿದ್ದಾರೆ. ದಾಳಿ ವೇಳೆ ಗುಮಾಸ್ತ ಎಸ್ಕೇಪ್ ಆಗಿದ್ದು, ಪ್ರಶ್ನೆ ಪತ್ರಿಕೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಗ ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡಿದಾಗ ನಾವು ಇಲ್ಲಿ ಪರೀಕ್ಷೆ ಬರೆಯುತ್ತಿದ್ದೇವೆ ಎಂದು ಹೇಳಿದ್ದಾರೆ. ಮನೆಯಲ್ಲಿ ವಿದ್ಯಾರ್ಥಿಗಳ ಜೊತೆ ಅಕ್ರಮವಾಗಿ ಪರೀಕ್ಷೆ ಬರೆಯುತ್ತಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ 10ನೇ ತರಗತಿ ಮತ್ತು ಪಿಯುಸಿ ಪರೀಕ್ಷೆಗಳ ಆರಂಭಗೊಂಡಿದ್ದು, ಸುಮಾರು 56 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯನ್ನು ಕಟ್ಟುನಿಟ್ಟಿನಿಂದ ನಡೆಸಬೇಕು ಎಂದು ಉತ್ತರ ಪ್ರದೇಶದ ಶಿಕ್ಷಣ ಇಲಾಖೆ ಬಹಳ ಪ್ರಯತ್ನ ಮಾಡುತ್ತಿದೆ. ಈ ನಡುವೆ ಈ ರೀತಿಯ ಅವ್ಯವಹಾರ ನಡೆಯುತ್ತಿರುವುದು ಕಂಡು ಶಿಕ್ಷಣ ಇಲಾಖೆ ತಲೆಕೆಡಿಸಿಕೊಂಡಿದೆ.

    ಕಳೆದ ವಾರವಷ್ಟೇ ಹೇಗೆ ಮೋಸ ಮಾಡಿ ಪರೀಕ್ಷೆ ಬರೆಯಬೇಕು ಮತ್ತು ನೀವು ನೀವೇ ಮಾತನಾಡಿಕೊಂಡು ಪರೀಕ್ಷೆ ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದ ಖಾಸಗಿ ಶಾಲೆಯ ಪ್ರಾಂಶುಪಾಲನನ್ನು ಬಂಧಿಸಲಾಗಿತ್ತು.

  • ‘ನಿನಗೆ ಉಜ್ವಲ ಭವಿಷ್ಯವಿರಲಿ’ – ಮರಣ ಪ್ರಮಾಣ ಪತ್ರದಲ್ಲಿ ವಿಶ್ ಮಾಡಿದ ಊರಿನ ಮುಖ್ಯಸ್ಥ

    ‘ನಿನಗೆ ಉಜ್ವಲ ಭವಿಷ್ಯವಿರಲಿ’ – ಮರಣ ಪ್ರಮಾಣ ಪತ್ರದಲ್ಲಿ ವಿಶ್ ಮಾಡಿದ ಊರಿನ ಮುಖ್ಯಸ್ಥ

    ಲಕ್ನೋ: ಮರಣ ಪ್ರಮಾಣ ಪತ್ರದಲ್ಲಿ ನಿನಗೆ ಉಜ್ವಲ ಭವಿಷ್ಯವಿರಲಿ ಎಂದು ಊರಿನ ಮುಖ್ಯಸ್ಥನೋರ್ವ ಬರೆದಿರುವ ಡೆತ್ ಸರ್ಟಿಫಿಕೇಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಈ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಸಿರ್ವರಿಯಾ ಎಂಬ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ ವೃದ್ಧ ಲಕ್ಷ್ಮಿ ಶಂಕರ್ ಕಳೆದ ತಿಂಗಳ ಜನವರಿ 22 ರಂದು ದೀರ್ಘಕಾಲದ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ್ದರು. ಇವರ ಡೆತ್ ಸರ್ಟಿಫಿಕೇಟ್ ನೀಡಿದ ಗ್ರಾಮದ ಮುಖ್ಯಸ್ಥ ನಿನಗೆ ಉಜ್ವಲ ಭವಿಷ್ಯವಿರಲಿ ಎಂದು ಬರೆದ್ದಾನೆ.

    ಲಕ್ಷ್ಮಿ ಶಂಕರ್ ಸಾವಿನ ನಂತರ ಅವರ ಮಗ ಯಾವುದೋ ಅರ್ಥಿಕ ವಹಿವಾಟಿಗೆ ಬೇಕೆಂದು ಮರಣ ಪ್ರಮಾಣ ಪತ್ರ ಪಡೆಯಲು ಗ್ರಾಮದ ಮುಖ್ಯಸ್ಥ ಬಾಬುಲಾಲ್ ಬಳಿ ಹೋಗಿದ್ದಾರೆ. ಈ ವೇಳೆ ಮರಣ ಪ್ರಮಾಣ ಪತ್ರವನ್ನು ಬರೆದುಕೊಟ್ಟಿರುವ ಬಾಬುಲಾಲ್, ಕೊನೆಯುಲ್ಲಿ ನಾನು ಸಾವನ್ನಪ್ಪಿದ ವ್ಯಕ್ತಿಗೆ ಉಜ್ವಲ ಭವಿಷ್ಯವಿರಲಿ ಎಂದು ಬಯಸುತ್ತೇನೆ ಎಂದು ಹಿಂದಿಯಲ್ಲಿ ಬರೆದುಕೊಟ್ಟಿದ್ದಾನೆ.

    ಬಾಬುಲಾಲ್ ಬರೆದುಕೊಟ್ಟಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಚಾರವನ್ನು ತಿಳಿದ ಬಾಬುಲಾಲ್ ಮತ್ತೆ ಲಕ್ಷ್ಮಿ ಶಂಕರ್ ಪುತ್ರನನ್ನು ವಾಪಸ್ ಕರೆಸಿ ಕ್ಷೆಮೆ ಕೇಳಿ ಹೊಸ ಮರಣ ಪ್ರಮಾಣ ಪತ್ರವನ್ನು ಬರೆದು ಕೊಟ್ಟುಕಳುಹಿಸಿದ್ದಾನೆ.

  • ಅಪರಾಧ ಲೋಕಕ್ಕೆ ನಾನೇ ಅಧಿಪತಿ ಎಂದಿದ್ದ ಸ್ಲಂ ಭರತ ಅರೆಸ್ಟ್

    ಅಪರಾಧ ಲೋಕಕ್ಕೆ ನಾನೇ ಅಧಿಪತಿ ಎಂದಿದ್ದ ಸ್ಲಂ ಭರತ ಅರೆಸ್ಟ್

    ಬೆಂಗಳೂರು: ರೌಡಿಶೀಟರ್ ಲಕ್ಷ್ಮಣನ ಕೊಲೆ ನಂತರ ಅಪರಾಧ ಲೋಕಕ್ಕೆ ನಾನೇ ಅಧಿಪತಿ ಎಂದು ಮೆರೆಯುತ್ತಿದ್ದ ರೌಡಿಶೀಟರ್ ಸ್ಲಂ ಭರತನನ್ನು ಬೆಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

    ರೌಡಿ ಲಕ್ಷ್ಮಣ ಕೊಲೆಯಾದ ನಂತರ ಎಲ್ಲ ಡೀಲ್ ಗಳು ನನಗೇ ಬರಬೇಕು, ನಾನೇ ಎಲ್ಲ ಡೀಲ್ ಗಳನ್ನು ಮಾಡುತ್ತೇನೆ ಎಂದು ಲಕ್ಷ್ಮಣ ಮಾಡುತ್ತಿದ್ದ ವ್ಯವಹಾರಗಳಿಗೆ ಭರತ ಕೈ ಹಾಕಿದ್ದ. ಅಲ್ಲದೆ ಹಫ್ತಾ ವಸೂಲಿಗೆ ಇಳಿದಿದ್ದ, ಅಲ್ಲದೆ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಪೊಲೀಸರ ಮೇಲೆಯೇ ವಾಹನ ಹತ್ತಿಸೋಕೆ ಬಂದು ಎಸ್ಕೇಪ್ ಆಗಿದ್ದ. ಇದೀಗ ಸ್ಲಂ ಭರತನನ್ನು ಉತ್ತರ ಪ್ರದೇಶದ ಮುರದಾಬಾದ್‍ನಲ್ಲಿ ಬಂಧಿಸಲಾಗಿದೆ.

    ಸ್ಲಂ ಭರತ ತನ್ನ ಗೆಳತಿಯೊಂದಿಗೆ ಮುರದಾಬಾದ್ ನಲ್ಲಿ ಇರುವ ವಿಚಾರ ತಿಳಿದ ಬೆಂಗಳೂರು ಪೊಲೀಸರು ಉತ್ತರ ಪ್ರದೇಶದ ಮುರದಾಬಾದ್ ಗೆ ತೆರಳಿದ್ದರು. ಈ ವೇಳೆ ಪೊಲೀಸರನ್ನು ರೌಡಿಗಳು ಎಂದು ಬಿಂಬಿಸಿದ ಸ್ಲಂ ಭರತ ಸುಮಾರು 300ಕ್ಕೂ ಹೆಚ್ಚು ರೌಡಿಗಳನ್ನು ಬಳಸಿಕೊಂಡು ಪೊಲೀಸರ ಮೇಲೆ ಅಟ್ಯಾಕ್ ಮಾಡಿಸಿದ್ದ. ಈ ವೇಳೆ ಸ್ಥಳೀಯ ಪೊಲೀಸರ ನೆರವು ಪಡೆದ ಪೊಲೀಸರು ಸ್ಲಂ ಭರತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬೆಂಗಳೂರಿನಲ್ಲೇ ಸ್ಲಂ ಭರತನ ಮೇಲೆ 50ಕ್ಕೂ ಹೆಚ್ಚು ಕೇಸುಗಳು ದಾಖಲಾಗಿದ್ದು, ಕಳೆದ ತಿಂಗಳಲ್ಲಿ ರಾಜಗೋಪಾಲ ನಗರದ ಶ್ರೀನಿವಾಸ ಅವರು ಹಫ್ತಾ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಮನೆ ಮುಂದೆ ನಿಲ್ಲಿಸಿದ್ದ ಮೂರು ಕಾರುಗಳನ್ನು ಜಖಂ ಮಾಡಿಸಿದ್ದ. ಈ ಸಂಬಂಧ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಸ್ಲಂ ಭರತನಿಗಾಗಿ ಹುಡುಕಾಟ ನಡೆದಿತ್ತು.

  • ತಾಜ್‍ಮಹಲ್ ಭಾರತದ ವೈವಿಧ್ಯತೆ, ಅನಂತತೆಯ ವಿಸ್ಮಯ – ಪ್ರೇಮಸೌಧದ ಅಂದಕ್ಕೆ ಟ್ರಂಪ್ ದಂಪತಿ ಫಿದಾ

    ತಾಜ್‍ಮಹಲ್ ಭಾರತದ ವೈವಿಧ್ಯತೆ, ಅನಂತತೆಯ ವಿಸ್ಮಯ – ಪ್ರೇಮಸೌಧದ ಅಂದಕ್ಕೆ ಟ್ರಂಪ್ ದಂಪತಿ ಫಿದಾ

    ಆಗ್ರಾ: 2 ದಿನ ಭಾರತ ಪ್ರವಾಸ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪತ್ನಿ ಮೆಲಾನಿಯಾ ಟ್ರಂಪ್ ಜೊತೆ ಐತಿಹಾಸಿಕ ಪ್ರೇಮಸೌಧ ತಾಜ್‍ಮಹಲ್‍ಗೆ ಭೇಟಿಕೊಟ್ಟಿದ್ದು, ತಾಜ್‍ಮಹಲ್ ಭಾರತದ ವೈವಿಧ್ಯತೆ, ಅನಂತತೆಯ ವಿಸ್ಮಯ ಎಂದು ಹಾಡಿ ಹೊಗಳಿದ್ದಾರೆ.

    ಕುಟುಂಬದೊಂದಿಗೆ ಆಗ್ರಾಕ್ಕೆ ಬಂದ ಟ್ರಂಪ್ ಅವರಿಗೆ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯ್ತು. ಟ್ರಂಪ್ ತಮ್ಮ ಪತ್ನಿ ಮೆಲಾನಿಯಾ, ಪುತ್ರಿ ಇವಾಂಕ ಹಾಗೂ ಅಳಿಯ ಜ್ಯಾರಿದ್‍ನೊಂದಿಗೆ ತಾಜ್‍ಮಹಲ್ ವೀಕ್ಷಿಸಿ ಪ್ರೇಮಸೌಧದ ಅಂದವನ್ನು ಕಣ್ತುಂಬಿಕೊಂಡರು.

    ಈ ವೇಳೆ ಸಂದರ್ಶಕ ಪುಸ್ತಕದಲ್ಲಿ ತಮ್ಮ ಅನಿಸಿಕೆ ಬರೆದ ಟ್ರಂಪ್ ತಾಜ್‍ಮಹಲ್ ಅಂದವನ್ನು ಹೊಗಳಿದ್ದಾರೆ. ತಾಜ್‍ಮಹಲ್ ಪ್ರೇರಣೆಯ ವಿಸ್ಮಯ, ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಹಾಗೂ ಅನಂತತೆಯ ವಿಸ್ಮಯ ಎಂದು ಬರೆದಿದ್ದಾರೆ.

    ತಾಜ್‍ಮಹಲ್ ಇತಿಹಾಸ, ಭವ್ಯತೆಯ ಬಗ್ಗೆ ಟ್ರಂಪ್ ಕುಟುಂಬಕ್ಕೆ ಮಾರ್ಗದರ್ಶಕರು ಮಾಹಿತಿ ನೀಡಿದರು. ಅಲ್ಲದೆ ತಾಜ್‍ಮಹಲ್ ಆವರಣದಲ್ಲಿ ಟ್ರಂಪ್ ದಂಪತಿ ನಡೆದುಕೊಂಡು ಹೋಗಿಯೇ ಅದರ ಅಂದವನ್ನು ಕಣ್ತುಂಬಿಕೊಂಡರು. ಜೊತೆಗೆ ಪ್ರೇಮಸೌಧದ ಮುಂದೆ ಫೋಟೋವನ್ನು ತೆಗೆಸಿಕೊಂಡು ಖುಷಿಪಟ್ಟರು.

    ತಾಜ್ ಮಹಲ್ ಗೇಟಿನ 500 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್ ವಾಹನ ಸಂಚಾರಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ದಂಪತಿ ಎಕೋ ಫ್ರೆಂಡ್ಲಿ ಗಾಲ್ಫ್ ಕಾರ್ಟ್ ಮೂಲಕ ಸ್ಥಳಕ್ಕೆ ಬಂದು ನಂತರ ತಾಜ್ ಮಹಲ್ ಬಳಿ ನಡೆದುಕೊಂಡು ಹೋದರು.

  • ಅಪ್ಪ, ಅಮ್ಮನ ಜೊತೆ ಇರೋಣ ಎಂದ ಪತಿ – ಮಾತು ಕೇಳದ ಪತ್ನಿಗೆ ಶೂಟ್ ಮಾಡಿ ಪರಾರಿ

    ಅಪ್ಪ, ಅಮ್ಮನ ಜೊತೆ ಇರೋಣ ಎಂದ ಪತಿ – ಮಾತು ಕೇಳದ ಪತ್ನಿಗೆ ಶೂಟ್ ಮಾಡಿ ಪರಾರಿ

    -ಮನೆಗೆ ವಾಪಸ್ ಹೋಗೋಣ ಎಂದು ನಂಬಿಸಿ ಕರೆದೊಯ್ದ

    ಲಕ್ನೋ: ಅಪ್ಪ, ಅಮ್ಮನ ಜೊತೆಗೆ ಇರೋಣ ಬೇರೆಯಾಗಿ ಇರೋದು ಬೇಡ ಎಂದು ಪತಿ ತನ್ನ ಪತ್ನಿಗೆ ಹೇಳಿದನು. ಆದರೆ ಇದಕ್ಕೆ ಪತ್ನಿ ಒಪ್ಪದಿದ್ದಾಗ ಸಿಟ್ಟಿಗೆದ್ದ ಪತಿ ಆಕೆಗೆ ಗನ್‍ನಿಂದ ಶೂಟ್ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಶೂಟ್ ಮಾಡಿದ ಆರೋಪಿಯನ್ನು ಶಿಕೋಹಬಾದ್ ಮೂಲದ ಪಿಂಕಿ ಠಾಕುರ್ ಎಂದು ಗುರುತಿಸಲಾಗಿದ್ದು, ಈತ ತನ್ನ ಪತ್ನಿ ಶಿವಾನಿ ಸಿಂಗ್ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ. ಸದ್ಯ ಗುಂಡೇಟು ತಿಂದ ಶಿವಾನಿ ಫಿರೋಜಾಬಾದಿನ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

    ಶಿವಾನಿ ಹಾಗೂ ಪಿಂಕಿ ಕಳೆದ 5 ವರ್ಷದ ಹಿಂದೆ ಮದುವೆ ಆಗಿದ್ದರು. ಮದುವೆ ಬಳಿಕ ದಂಪತಿ ಜೈಪುರದಲ್ಲಿ ವಾಸಿಸುತ್ತಿದ್ದರು. ಆದರೆ ಕಳೆದ 15 ದಿನಗಳ ಹಿಂದೆ ಶಿವಾನಿ ಸಹೋದರಿಯ ಮದುವೆಗೆಂದು ದಂಪತಿ ಶಿಕೋಹಬಾದ್‍ಗೆ ಬಂದಿದ್ದರು. ಮದುವೆ ಮುಗಿದ ಬಳಿಕ ಪತ್ನಿ ವಾಪಸ್ ಜೈಪುರಕ್ಕೆ ತೆರಳಲು ತಯಾರಿ ನಡೆಸುತ್ತಿದ್ದಳು. ಈ ವೇಳೆ ಪತಿ ನಾವು ಜೈಪುರಕ್ಕೆ ಹೋಗೋದು ಬೇಡ, ಇಲ್ಲಿಯೇ ನಮ್ಮ ಅಪ್ಪ ಅಮ್ಮನ ಜೊತೆ ಇರೋಣ ಎಂದು ಗುರುವಾರ ಪತ್ನಿಗೆ ಹೇಳಿದ್ದನು.

    ಇದಕ್ಕೆ ಪತ್ನಿ ಒಪ್ಪದೇ, ನಾನು ಇಲ್ಲಿ ಇರಲ್ಲ ಜೈಪುರಕ್ಕೆ ಹೋಗೋಣ ಎಂದು ಪತಿ ಜೊತೆ ಜಗಳಕ್ಕೆ ಇಳಿದಳು. ಮಾತಿಗೆ ಮಾತು ಬೆಳೆದು ಪತ್ನಿ ವರ್ತನೆಯಿಂದ ಪತಿ ಸಿಟ್ಟಿಗೆದ್ದಿದ್ದನು. ಆದರೆ ಸಂಜೆ ಜೈಪುರಕ್ಕೆ ಹೋಗೋಣ ಎಂದು ಪತ್ನಿಯನ್ನು ನಂಬಿಸಿ ಬಸಾಯಿ ಮೊಹ್ಮದಾಪುರದ ಬಳಿ ಪತಿ ಕರೆದೊಯ್ದನು.

    ಸ್ಥಳಕ್ಕೆ ತಲುಪಿದ ಬಳಿಕ ತನ್ನ ಬಳಿ ಇದ್ದ ಗನ್‍ನಿಂದ ಪತ್ನಿಯ ಕತ್ತಿನ ಭಾಗಕ್ಕೆ ಪತಿ ಗುಂಡು ಹಾರಿಸಿದ್ದಾನೆ. ಗುಂಡು ತಗುಲಿದ ತಕ್ಷಣ ಪತ್ನಿ ಕುಸಿದು ಬಿದ್ದಿದ್ದು, ಆಕೆ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ಪತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಆದರೆ ಶಿವಾನಿಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಆಸ್ಪತ್ರಗೆ ಆಕೆಯನ್ನು ರವಾನಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಶಿವಾನಿ ಸ್ಥಿತಿ ಚಿಂತಾಜನಕವಾಗಿದ್ದು, ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪ್ರಜ್ಞೆ ಬಂದ ಬಳಿಕ ಶಿವಾನಿ ನಡೆದ ಘಟನೆ ಬಗ್ಗೆ ವಿವರಿಸಿದ್ದು, ಪತಿಯೇ ತನಗೆ ಶೂಟ್ ಮಾಡಿರುವುದಾಗಿ ಹೇಳಿದ್ದಾರೆ. ಆರೋಪಿ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದ್ದು, ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಯುಪಿಯಲ್ಲಿ 12 ಲಕ್ಷ ಕೋಟಿ ಮೌಲ್ಯದ 3 ಸಾವಿರ ಟನ್ ಚಿನ್ನದ ನಿಕ್ಷೇಪ ಪತ್ತೆ

    ಯುಪಿಯಲ್ಲಿ 12 ಲಕ್ಷ ಕೋಟಿ ಮೌಲ್ಯದ 3 ಸಾವಿರ ಟನ್ ಚಿನ್ನದ ನಿಕ್ಷೇಪ ಪತ್ತೆ

    ಲಕ್ನೋ: ಉತ್ತರ ಪ್ರದೇಶದಲ್ಲಿ ಬರೋಬ್ಬರಿ 12 ಲಕ್ಷ ಕೋಟಿ ರೂಪಾಯಿ ಮೌಲ್ಯದ, 3 ಸಾವಿರ ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಇದು ಭಾರತದ ಈಗಿನ ಚಿನ್ನದ ನಿಕ್ಷೇಪಗಳ ಮೌಲ್ಯಕ್ಕಿಂತ 5 ಪಟ್ಟು ಹೆಚ್ಚಿದೆ ಎಂದು ತಜ್ಞರು ತಿಳಿಸಿದ್ದಾರೆ.

    ಸೋನ್‍ಭದ್ರ ಜಿಲ್ಲೆಯಲ್ಲಿ ಇತ್ತೀಚೆಗೆ 3,000 ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿತ್ತು. ಈ ಚಿನ್ನದ ನಿಕ್ಷೇಪವನ್ನು ಹರಾಜು ಹಾಕಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಸೋನ್ ಪಹಾಡಿ ಮತ್ತು ಹಾರ್ಡಿ ಗ್ರಾಮದಲ್ಲಿ ಸುಮಾರು 3,000 ಟನ್ ಚಿನ್ನದ ನಿಕ್ಷೇಪವಿದೆ ಎಂದು ಭಾರತೀಯ ಭೂ ಸರ್ವೇಕ್ಷಣೆ ಇಲಾಖೆ ಮತ್ತು ಉತ್ತರ ಪ್ರದೇಶ ಭೂ ವಿಜ್ಞಾನ ಮತ್ತು ಗಣಿಗಾರಿಕೆ ನಿರ್ದೇಶನಾಲಯ ಇತ್ತೀಚಿಗಷ್ಟೆ ವರದಿ ಮಾಡಿತ್ತು. ಇದನ್ನೂ ಓದಿ:  ಮಂಡ್ಯದಲ್ಲಿ ಚಿನ್ನದ ನಿಕ್ಷೇಪ ಪತ್ತೆ!

    ವಿಶ್ವ ಚಿನ್ನದ ಮಂಡಳಿಯ ಪ್ರಕಾರ, ಭಾರತದಲ್ಲಿ ಪ್ರಸ್ತುತ 626 ಟನ್ ಚಿನ್ನದ ನಿಕ್ಷೇಪವಿದ್ದು, ಈಗ ಸೋನ್‍ಭದ್ರದಲ್ಲಿ ಪತ್ತೆಯಾಗಿರುವ ಚಿನ್ನದ ನಿಕ್ಷೇಪ ಭಾರತದಲ್ಲಿ ಈಗಿರುವ ಚಿನ್ನದ ಗಣಿಯ ಮೌಲ್ಯಕ್ಕಿಂತ ಐದು ಪಟ್ಟು ಹೆಚ್ಚಿದೆ. ಅಲ್ಲದೆ ಇದರ ಮೌಲ್ಯ ಸುಮಾರು 12 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಇದೆ ಎನ್ನಲಾಗಿದೆ. ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾಗಿರುವ ಲೀಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆ

    ಉತ್ತರ ಪ್ರದೇಶದ ಭೂ ವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆ ಇತ್ತೀಚೆಗಷ್ಟೆ ಈ ಬಗ್ಗೆ ಅಧಿಕೃತ ಪತ್ರ ಹೊರಡಿಸಿತ್ತು. ಸೋನ್ ಪಹಡಿಯಲ್ಲಿ 2,943.26 ಟನ್ ಚಿನ್ನದ ನಿಕ್ಷೇಪ ಹಾಗೂ ಹಾರ್ಡಿಯಲ್ಲಿ 646.15 ಕೆಜಿ ಚಿನ್ನದ ನಿಕ್ಷೇಪ ಪತ್ತೆ ಆಗಿವೆ ಎಂದು ವರದಿ ನೀಡಿತ್ತು.

    ಚಿನ್ನದ ನಿಕ್ಷೇಪ ಹರಾಜಿಗೆ ಸರ್ಕಾರ ಸಜ್ಜು:
    ಇ-ಟೆಂಡರಿಂಗ್ ಪ್ರಕ್ರಿಯೆ ಮೂಲಕ ಪತ್ತೆಯಾಗಿರುವ ಚಿನ್ನಸ ನಿಕ್ಷೇಪವನ್ನು ಹರಾಜು ಹಾಕಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಚಿನ್ನದ ನಿಕ್ಷೇಪಗಳ ಬ್ಲಾಕ್‍ಗಳನ್ನು ಹರಾಜು ಮಾಡಲು ಸರ್ಕಾರ ಏಳು ಸದಸ್ಯರ ತಂಡವನ್ನು ರಚಿಸಿದ್ದು, ಈ ತಂಡ ಇಡೀ ಪ್ರದೇಶವನ್ನು ಸಮೀಕ್ಷೆ ನಡೆಸಿ ಅದರ ವರದಿಯನ್ನು ತಯಾರಿಸಿ, ವರದಿಯನ್ನು ಲಕ್ನೋದ ಭೂವಿಜ್ಞಾನ ಮತ್ತು ಗಣಿಗಾರಿಕೆ ನಿರ್ದೇಶನಾಲಯಕ್ಕೆ ಸಲ್ಲಿಸಲಿವೆ.

    ಸೋನ್‍ಭದ್ರಾದಲ್ಲಿ ಚಿನ್ನದ ನಿಕ್ಷೇಪಗಳನ್ನು ಪತ್ತೆ ಮಾಡುವ ಪ್ರಕ್ರಿಯೆಯನ್ನು ಬ್ರಿಟಿಷರು ಈ ಮೊದಲೇ ಆರಂಭಿಸಿದ್ದರು ಎನ್ನಲಾಗಿದೆ. ಆದರೆ 1992-93ರಲ್ಲಿ ಕೇಂದ್ರ ಭೂವಿಜ್ಞಾನ ತಂಡ ಚಿನ್ನದ ನಿಕ್ಷೇಪ ಪತ್ತೆ ಮಾಡುವ ಸಂಶೋಧನೆ ಆರಂಭಿಸಿತ್ತು.

    ಈ ಬಗ್ಗೆ ಭಾರತೀಯ ಭೂ ಸರ್ವೇಕ್ಷಣೆ ಇಲಾಖೆಯ ನಿವೃತ್ತ ಸಿಬ್ಬಂದಿ ಪ್ರಥ್ವಿ ಮಿಶ್ರಾ ಪ್ರತಿಕ್ರಿಯಿಸಿ, ಚಿನ್ನದ ನಿಕ್ಷೇಪ ಪತ್ತೆಯಾದ ಸ್ಥಳವನ್ನು ಇರಡು ಭಾಗವಾಗಿ ಬೇರ್ಪಡಿಸಲಾಗಿದೆ. ಅಲ್ಲದೇ ಈ ಹಿಂದೆ ಇದೇ ಪ್ರದೇಶಲ್ಲಿ 1 ಕಿ.ಮಿ ಉದ್ದದ ಚಿನ್ನಡ ಕಲ್ಲು ಪತ್ತೆಯಾಗಿತ್ತು, ಅದು 15 ಮೀಟರ್ ಅಗಲವಿತ್ತು ಮತ್ತು 18 ಮೀಟರ್ ಎತ್ತರವಿತ್ತು ಎಂದು ತಿಳಿಸಿದರು.

  • ಕಾಣೆಯಾಗಿದ್ದ ತಾಯಿಗಾಗಿ 3000 ಕಿ.ಮೀ ದೂರದಿಂದ ಬಂದ ಮಗ

    ಕಾಣೆಯಾಗಿದ್ದ ತಾಯಿಗಾಗಿ 3000 ಕಿ.ಮೀ ದೂರದಿಂದ ಬಂದ ಮಗ

    – ಕೊನೆಗೂ 8 ತಿಂಗ್ಳ ನಂತ್ರ ಮಗನ ಸೇರಿದ ತಾಯಿ

    ಮಡಿಕೇರಿ: ತಾಯಿಯನ್ನು ಕಳೆದುಕೊಂಡ ಮಗ, ಹೆತ್ತ ಮಗನಿಂದ ದೂರಾದ ತಾಯಿ ಕೊನೆಗೂ 8 ತಿಂಗಳ ಬಳಿಕ ತಾಯಿ ಮಗ ಒಂದಾದ ಮನಕಲುಕುವ ಘಟನೆ ಮಂಜಿನ ನಗರಿ ಮಡಿಕೇರಿ ನಗರದಲ್ಲಿ ನಡೆದಿದೆ.

    ವೃದ್ಧೆ ಮುಕ್ಕು ಮಗನ ಸೇರಿದ ತಾಯಿ. ಇನ್ನೂ ಮಗ ಎಂಟು ತಿಂಗಳಿನಿಂದ ನಾಪತ್ತೆಯಾಗಿದ್ದ ತಾಯಿಯನ್ನು ಹುಡುಕಿಕೊಂಡು 3000 ಕಿಲೋಮೀಟರ್ ದೂರದ ಉತ್ತರ ಪ್ರದೇಶದಿಂದ ಮಡಿಕೇರಿಗೆ ಬಂದಿದ್ದನು. ತಕ್ಷಣ ತಾಯಿಯನ್ನ ಕಂಡು ಮಗ ಬಿಕ್ಕಿಬಿಕ್ಕಿ ಕಣ್ಣೀರಿಟ್ಟನು. ಮಗ ಕಣ್ಣೀರು ಹಾಕುತ್ತಿದ್ದನ್ನು ನೋಡಿ ತಾಯಿಯೂ ಕೂಡ ಕಣ್ಣೀರು ಹಾಕಿ, ಮಗನ ಕಣ್ಣೀರು ಒರೆಸಿದರು. ನಂತರ ಮಗನ ತಲೆಯನ್ನು ನೇವರಿಸಿ ಮುದ್ದಾಡಿದರು.

    ಉತ್ತರ ಪ್ರದೇಶದ ಡಾಣಿಣ್‍ಪುರ್ ಗ್ರಾಮದ ವೃದ್ಧೆ ಮುಕ್ಕು 8 ತಿಂಗಳ ಹಿಂದೆ ಜಾತ್ರೆಗೆಂದು ಹೋಗಿದ್ದವರು ಆಕಸ್ಮಿಕವಾಗಿ ರೈಲು ಹತ್ತಿ ಮೈಸೂರು ಸೇರಿದ್ದರು. ಅಲ್ಲಿಂದ ಮಡಿಕೇರಿಗೆ ಬಂದವರು ಬದುಕುವುದಕ್ಕಾಗಿ ಭಿಕ್ಷೆ ಬೇಡುತ್ತಿದ್ದರು.

    ವೃದ್ಧೆಯನ್ನು ಕಂಡ ತನಲ್ ವೃದ್ಧಾಶ್ರಮದ ಮುಖ್ಯಸ್ಥ ಮೊಹಮ್ಮದ್ ಮತ್ತು ಎಫ್‍ಎಂಸಿ ಕಾಲೇಜಿನ ಪ್ರೊಫೆಸರ್ ರಂಗಪ್ಪ ಇಬ್ಬರು ಮಗನ ಬಳಿಗೆ ಸೇರಿಸಲು ಎರಡು ತಿಂಗಳಿನಿಂದ ನಿರಂತರ ಪ್ರಯತ್ನಿಸಿದರು. ಕೊನೆಗೂ ಎರಡು ತಿಂಗಳ ಬಳಿಕ ಮಗನನ್ನು ಕರೆಸಿಸಿ ತಾಯಿ-ಮಗನ ಒಂದು ಮಾಡಿದ್ದಾರೆ.

  • ಲಿಫ್ಟ್ ಕೊಡುವ ನೆಪದಲ್ಲಿ ಸ್ನೇಹಿತೆಯನ್ನ ಅಪಹರಿಸಿ ಗ್ಯಾಂಗ್‍ರೇಪ್

    ಲಿಫ್ಟ್ ಕೊಡುವ ನೆಪದಲ್ಲಿ ಸ್ನೇಹಿತೆಯನ್ನ ಅಪಹರಿಸಿ ಗ್ಯಾಂಗ್‍ರೇಪ್

    – ಅತ್ಯಾಚಾರ ಎಸಗಿ, ತಲೆಗೆ ರಾಡ್‍ನಿಂದ ಹೊಡೆದ ಪಾಪಿಗಳು
    – ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನ ಎಸೆದು ಹೋದ್ರು

    ಲಕ್ನೋ: ಎಂಬಿಎ ವಿದ್ಯಾರ್ಥಿನಿಯನ್ನು ಸ್ನೇಹಿತರೇ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿ, ಮಾರಣಾಂತಿಕ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದಿದೆ.

    ಮೀರತ್‍ನ ಚೌಧರಿ ಚರಣ್‍ಸಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಅತ್ಯಾಚಾರಕ್ಕೆ ಒಳಗಾದ ಯುವತಿ. ಆರೋಪಿಗಳು ಲಿಫ್ಟ್ ನೀಡುವ ನೆಪದಲ್ಲಿ ಅಪಹರಿಸಿ, ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಕ್ರೂರಿಗಳು ವಿದ್ಯಾರ್ಥಿನಿಯ ಮೇಲೆ ಹಲ್ಲೆಗೈದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಗ್ರಾಮವೊಂದರ ಬಳಿ ಎಸೆದು ಹೋಗಿದ್ದರು. ವಿದ್ಯಾರ್ಥಿನಿ ಈಗ ಗಂಭೀರ ಸ್ಥಿತಿಯಲ್ಲಿದ್ದು, ಆಕೆಯನ್ನು ಮೀರತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ವಿದ್ಯಾರ್ಥಿನಿ ಫೆಬ್ರವರಿ 13ರಂದು ಮೀರತ್‍ನಿಂದ ಮನೆಗೆ ಹೋಗುತ್ತಿದ್ದಳು. ಈ ವೇಳೆ ವಿದ್ಯಾರ್ಥಿನಿಗೆ ಬಸ್ ಮಿಸ್ ಆಗಿತ್ತು. ಆಗ ಕೆಲ ಪರಿಚಿತ ವಿದ್ಯಾರ್ಥಿಗಳು ಲಿಫ್ಟ್ ಕೊಡುವುದಾಗಿ ಹೇಳಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ನಂತರ ಆಕೆಯನ್ನು ಅಪಹರಿಸಿ ಬುಲಂದ್‍ಶಹರ್ ನ ಸೈನಾ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ರಾಡ್‍ನಿಂದ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿದ್ದಾರೆ.

    ಇತ್ತ ಕತ್ತಲಾದರೂ ಮನೆಗೆ ಬರಲಿಲ್ಲ ಎಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ ಬಸ್ ನಿಲ್ದಾಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿನಿ ಕಾರಿನಲ್ಲಿ ಹೋಗಿರುವುದು ಖಚಿತವಾಗಿತ್ತು. ಬಳಿಕ ಕಾರು ಹೋದ ಮಾರ್ಗದಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಈ ವೇಳೆ ಸೈನಾ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯೊಂದರ ಬಳಿ ವಿದ್ಯಾರ್ಥಿನಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಮೀರತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

    ಚಿಕಿತ್ಸೆ ಬಳಿಕ ಸ್ವಲ್ಪ ಚೇತರಿಸಿಕೊಂಡಿರುವ ಸಂತ್ರಸ್ತೆ, ನಾಲ್ವರು ಆರೋಪಿಗಳು ನನಗೆ ಪರಿಚಯವಿದ್ದರು. ಆದ್ದರಿಂದ ವಿದ್ಯಾರ್ಥಿಗಳು ಲಿಫ್ಟ್ ಕೊಡುವುದಾಗಿ ಕೇಳಿದಾಗ, ನಾನು ಒಪ್ಪಿ ಅವರೊಂದಿಗೆ ಹೋದೆ. ಆದರೆ ಅವರು ನನ್ನ ಮುಖಕ್ಕೆ ರಾಡ್‍ನಿಂದ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

    ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು. ಸಂತ್ರಸ್ತೆ ಪರಿಯಚವಿದ್ದ ಕಾರಣಕ್ಕೆ ಆರೋಪಿಗಳ ಜೊತೆ ಹೋಗಿದ್ದಾಳೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ಹೇಳಿದ್ದಾರೆ.

  • ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಧಾನಿ ಮೋದಿ-ಬಿಎಸ್‍ವೈ

    ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಧಾನಿ ಮೋದಿ-ಬಿಎಸ್‍ವೈ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾನುವಾರ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ. ಈ ಕಾರ್ಯಕ್ರದಮದ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಸಿಎಂ ಕೂಡ ಸಮಾರಂಭದಲ್ಲಿ ಪಾಲ್ಗೋಳ್ಳುವ ನಿಟ್ಟಿನಲ್ಲಿ ಶನಿವಾರ ಸಂಜೆ ವಾರಣಾಸಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಸಿಎಂ ಕೈಮುಗಿದು ಮನವಿ ಮಾಡಿದ್ರೂ ನೆರೆ ಪರಿಹಾರದ ಬಗ್ಗೆ ಏನೂ ಮಾತನಾಡದ ಮೋದಿ 

    ಸಿಎಂ ಯಡಿಯೂರಪ್ಪ ಅವರು ಶನಿವಾರ ಸಂಜೆ 4 ಗಂಟೆಗೆ ಬೆಂಗಳೂರಿನಿಂದ ವಾರಣಾಸಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಿಎಂ ರಾತ್ರಿ ವಾರಣಾಸಿಯಲ್ಲೇ ವಾಸ್ತವ್ಯ ಹೂಡಲಿದ್ದು, ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭ ಭಾಗವಹಿಸಲಿದ್ದಾರೆ.

    ಪ್ರಧಾನಿ ಮೋದಿ ಅವರು ಸಮಾರಂಭದಲ್ಲಿ 18 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭಾಷೆಗಳಲ್ಲಿ ಭಾಷಾಂತರಗೊಂಡ ‘ಸಿದ್ಧಾಂತ ಶಿಖಾಮಣಿ’ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಸಿದ್ಧಾಂತ ಶಿಖಾಮಣಿ ಕೃತಿಯು ವೀರಶೈವ ಧರ್ಮದ ಧರ್ಮಗ್ರಂಥವಾಗಿದೆ.

    ಪ್ರಧಾನಿ ಮೋದಿ ಅವರೊಂದಿಗೆ ಸಿಎಂ ಯಡಿಯೂರಪ್ಪ ಅವರು ತುಮಕೂರಿನಲ್ಲಿ ಕಳೆದ ತಿಂಗಳು ನಡೆದ ಕಿಸಾನ್ ಸಮ್ಮಾನ್ ನಾಲ್ಕನೇ ಹಂತದ ಹಣ ಬಿಡುಗಡೆಗೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರಿಗೆ ಕೈ ಮುಗಿದು ನೆರೆ ಪರಿಹಾರದ ಹಣಕ್ಕಾಗಿ ಮನವಿ ಮಾಡಿಕೊಂಡಿದ್ದರು. ಆದರೆ ಪ್ರಧಾನಿ ಮೋದಿ, ಪರಿಹಾರ ನೀಡುವ ಕುರಿತಾಗಿ ಯಾವುದೇ ಮಾತನಾಡಿರಲಿಲ್ಲ.

    ಪ್ರಧಾನಿ ಮೋದಿ ಜೊತೆಗೆ ಭಾನುವಾರ ವೇದಿಕೆ ಹಂಚಿಕೊಳ್ಳುತ್ತಿರುವ ಸಿಎಂ ಯಡಿಯೂರಪ್ಪ ಅವರು ನೆರೆ ಪರಿಹಾರಕ್ಕಾಗಿ ಮತ್ತೆ ಮನವಿ ಸಲ್ಲಿಸುತ್ತಾರಾ? ಸಂಪುಟ ಪುನಾರಚನೆ ಬಗ್ಗೆ ಮಾತನಾಡುತ್ತಾರಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.