Tag: USA

  • ಬ್ಯಾಕ್ಟೀರಿಯಾ ಸೋಂಕಿಗೆ ತುತ್ತಾಗಿದ್ದ ಖ್ಯಾತ ಗಾಯಕಿ ಮಡೋನಾ ಆರೋಗ್ಯದಲ್ಲಿ ಚೇತರಿಕೆ

    ಬ್ಯಾಕ್ಟೀರಿಯಾ ಸೋಂಕಿಗೆ ತುತ್ತಾಗಿದ್ದ ಖ್ಯಾತ ಗಾಯಕಿ ಮಡೋನಾ ಆರೋಗ್ಯದಲ್ಲಿ ಚೇತರಿಕೆ

    ವಾಷಿಂಗ್ಟನ್: ಯುಎಸ್‌ನ ಖ್ಯಾತ ಗಾಯಕಿ (American Singer) ಮಡೋನಾ (Madonna) ಗಂಭೀರ ಬ್ಯಾಕ್ಟೀರಿಯಾ ಸೋಂಕಿನಿಂದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಲವು ದಿನಗಳ ವರೆಗೆ ಐಸಿಯುನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು ICUನಿಂದ ಬಿಡುಗಡೆ ಹೊಂದಿರುವುದಾಗಿ ಅವರ ಮ್ಯಾನೇಜರ್ ಗೈ ಓಸಿಯಾರಿ ತಿಳಿಸಿದ್ದಾರೆ.

    ಮಡೋನಾ ಅವರ ಆರೋಗ್ಯದಲ್ಲಿ (Health) ಈಗ ಸುಧಾರಣೆ ಕಂಡುಬರುತ್ತಿದೆ. ಅವರು ಇನ್ನೂ ವೈದ್ಯರ ಆರೈಕೆಯಲ್ಲಿದ್ದು (Medical Care), ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬ್ಲೈಂಡ್ ಸಿನಿಮಾ ನೇರವಾಗಿ ಓಟಿಟಿಯಲ್ಲಿ : ಬೇಸರಿಸಿಕೊಂಡ ಸೋನಂ ಕಪೂರ್ʼ

    ಗಾಯಕಿ ತನ್ನ ಸಂಗೀತ ವೃತ್ತಿ ಜೀವನದ 40ನೇ ವಾರ್ಷಿಕೋತ್ಸವದ ನೆನಪಿಗಾಗಿ ಈ ವರ್ಷದ ಆರಂಭದಲ್ಲಿ ಸೆಲೆಬ್ರೇಶನ್ ಪ್ರವಾಸ ಘೋಷಿಸಿದ್ದರು. ಜುಲೈ 15ರಂದು ಕೆನಡಾದ ವ್ಯಾಂಕೋವರ್‌ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಪ್ರವಾಸದಲ್ಲಿ ಜ್ಯಾಕ್ ಬ್ಲ್ಯಾಕ್, ಜುಡ್ ಅಪಾಟೊವ್, ಲಿಲ್ ವೇಯ್ನ್, ಆಮಿ ಶುಮರ್ ಸೇರಿದಂತೆ ಇನ್ನಿತರ ಪ್ರಮುಖ ಗಾಯಕರು ಪಾಲ್ಗೊಳ್ಳುವುದರಲ್ಲಿದ್ದರು. ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿರುವುದರಿಂದ ಕಾರ್ಯಕ್ರಮವನ್ನ ಮುಂದೂಡಲಾಗಿದೆ. ಏಕೆಂದರೆ ಇಂತಹ ಸಂದರ್ಭಗಳಲ್ಲಿ ಪ್ರವಾಸಗಳಿಗೆ ವಿರಾಮ ನೀಡುವುದು ಸೂಕ್ತ. ಪ್ರವಾಸದ ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಮ್ಯಾನೇಜರ್ ಹೇಳಿದ್ದಾರೆ.

    ʻಲೈಕ್ ಎ ವರ್ಜಿನ್’ ಸೇರಿದಂತೆ 7 ಬಾರಿ ಗ್ರ‍್ಯಾಮಿ ಪ್ರಶಸ್ತಿ ವಿಜೇತರೂ ಆಗಿರುವ ಮಡೋನಾ ಖ್ಯಾತ ಸಂಗೀತ ಗಾಯಕರಲ್ಲಿ ಒಬ್ಬರಾಗಿದ್ದಾರೆ. 2020 ರಲ್ಲಿ `ಮೇಡಮ್ ಎಕ್ಸ್’ ಪ್ರವಾಸದಲ್ಲಿ ಉಂಟಾದ ಅಪಘಾತದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದನ್ನೂ ಓದಿ: ನೈಟ್ ಶೂಟ್ ಗಾಗಿ ಶೇಷಾಚಲಂಗೆ ಬಂದಿಳಿದ ರಶ್ಮಿಕಾ ಮಂದಣ್ಣ

    1958ರಲ್ಲಿ ಜನಿಸಿದ ಮಡೋನಾ 1977ರಲ್ಲಿ ನ್ಯೂಯಾರ್ಕ್ಗೆ ಪ್ರಯಾಣ ಬೆಳೆಸಿದರು. ಆಗ ಆಕೆಯ ಬಳಿ ಇದ್ದದ್ದು ಕೇವಲ 35 ಡಾಲರ್ ಮಾತ್ರ. ಬದುಕು ಕಟ್ಟಿಕೊಳ್ಳಲು ನಗ್ನ ಮಾಡೆಲಿಂಗ್ ನಿಂದ ಹಿಡಿದು ಬೇಕರಿ ತಿನಿಸು ಮಾರಾಟ ಮಾಡುವ ಎಲ್ಲ ಕೆಲಸಗಳನ್ನೂ ಮಾಡುತ್ತಾ ಜೀವನ ಕಟ್ಟಿಕೊಂಡರು. 1982ರಲ್ಲಿ ರಿಲೀಸ್ ಆದ `ಎವೆರಿಬಡಿ’ ನಂತರ ರಿಲೀಸ್ ಆದ ʻಲಕ್ಕಿ ಸ್ಟಾರ್’ ʻಬಾರ್ಡರ್‌ಲೈನ್’ ಹಾಗೂ `ಹಾಲಿಡೇ’ ಸಾಂಗ್ಸ್ಗಳು ಅವರನ್ನ ಸ್ಟಾರ್ ಹಾದಿಯತ್ತ ಕೊಂಡೊಯ್ದವು. 1984ರಲ್ಲಿ ಬಿಡುಗಡೆಯಾದ ?ಲೈಕ್ ಎ ವರ್ಜಿನ್’ ಆಲ್ಬಂಬ್ ಸಾಂಗ್ ಮಡೋನಾರನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚುವಂತೆ ಮಾಡಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಗನಯಾತ್ರಿಗಳ ಮೂತ್ರ, ಬೆವರಿನಿಂದಲೇ ಕುಡಿಯುವ ನೀರಿನ ಉತ್ಪಾದನೆ – ಬಾಹ್ಯಾಕಾಶದಲ್ಲಿ ಮಹತ್ವದ ಸಂಶೋಧನೆ

    ಗಗನಯಾತ್ರಿಗಳ ಮೂತ್ರ, ಬೆವರಿನಿಂದಲೇ ಕುಡಿಯುವ ನೀರಿನ ಉತ್ಪಾದನೆ – ಬಾಹ್ಯಾಕಾಶದಲ್ಲಿ ಮಹತ್ವದ ಸಂಶೋಧನೆ

    ವಾಷಿಂಗ್ಟನ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (International Space Station) ನಾಸಾ ಗಗನಯಾತ್ರಿಗಳು ಮಹತ್ವದ ಸಾಧನೆಗೈದಿದ್ದಾರೆ.

    ಗಗನಯಾತ್ರಿಗಳ ಮೂತ್ರ ಹಾಗೂ ಬೆವರನ್ನು ನೀರಾಗಿ ಪರಿವರ್ತಿಸುವ ವಿಧಾನವನ್ನ ಕಂಡುಹಿಡಿಯಲಾಗಿದೆ. ಈ ವಿಧಾನವು ಬಾಹ್ಯಾಕಾಶದಲ್ಲಿ ನೀರಿನ ಕೊರತೆ ಪ್ರಮಾಣ ತಗ್ಗಿಸಲಿದೆ ಎಂದು ನಾಸಾ ಹೇಳಿದೆ. ಇದನ್ನೂ ಓದಿ: 2024ಕ್ಕೆ ನಾಸಾ-ಇಸ್ರೋ ಜಂಟಿ ಬಾಹ್ಯಾಕಾಶ ಯಾನ – ಭಾರತ-US ನಡುವೆ ಒಪ್ಪಂದ

    ಬಾಹ್ಯಾಕಾಶ ಸಂಸ್ಥೆಯು (Space Agency) ತಿಳಿಸಿರುವಂತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ ಕುಡಿಯಲು, ಆಹಾರ ತಯಾರಿಕೆ ಹಾಗೂ ನೈರ್ಮಲ್ಯದ ಬಳಕೆಗಾಗಿ ಪ್ರತಿದಿನ 1 ಗ್ಯಾಲನ್‌ನಷ್ಟು (ಸುಮಾರು 3 ಲಕ್ಷ ಲೀಟರ್‌ಗೂ ಅಧಿಕ) ನೀರು ಬೇಕಾಗುತ್ತದೆ. ಸದ್ಯ ಗಗನ ಯಾತ್ರಿಗಳು ಕಂಡುಹಿಡಿದಿರುವ ನೀರಿನ ಮರುಸ್ಥಾಪನೆಯ ವಿಧಾನದಿಂದ ಶೇ.98 ರಷ್ಟು ಚೇತರಿಕೆ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಮುಸ್ಲಿಂ ರಾಷ್ಟ್ರಗಳ ಮೇಲೆ ಬಾಂಬ್‌ ದಾಳಿ ನಡೆಸಿದವರು ರಕ್ಷಣೆ ಬಗ್ಗೆ ಮಾತಾಡೋದು ಹಾಸ್ಯಾಸ್ಪದ – ನಿರ್ಮಲಾ ಸೀತಾರಾಮನ್‌

    ಇದರೊಂದಿಗೆ ಬಾಹ್ಯಾಕಾಶದಲ್ಲಿ ಪರಿಸರ ನಿಯಂತ್ರಣ ಮತ್ತು ಜೀವನಕ್ಕೆ ಸಹಕಾರಿಯಾಗುವ ವ್ಯವಸ್ಥೆಗಳನ್ನು (ECLSS) ಬಳಸಿಕೊಂಡು ಆಹಾರ, ಗಾಳಿ ಮತ್ತು ನೀರಿನಂತಹ ಉಪಯುಕ್ತ ವಸ್ತುಗಳನ್ನ ಪುನರುತ್ಪಾದಿಸುವ ಗುರಿಯನ್ನು ಹೊಂದಲಾಗಿದೆ.

    ಇಸಿಎಲ್‌ಎಸ್‌ಎಸ್ ವಿಧಾನವು ಒಂದು ಯಂತ್ರಾಂಶದ ಸಂಯೋಜನೆಯಾಗಿದೆ. ಇದು ತ್ಯಾಜ್ಯದ ನೀರನ್ನು ಸಂಗ್ರಹಿಸಿಕೊಂಡು ವಾಟರ್ ಪ್ರೊಫೆಸಟರ್ ಅಸೆಂಬ್ಲಿಗೆ (WPA) ಕಳುಹಿಸುವ ಮೂಲಕ ನೀರು ಕುಡಿಯಲು ಯೋಗ್ಯವಾಗುವ ರೀತಿಯಲ್ಲಿ ಉತ್ಪಾದಿಸುತ್ತದೆ. ಜೊತೆಗೆ ಇಲ್ಲಿ ಸಿಬ್ಬಂದಿಯ ಉಸಿರು ಮತ್ತು ಬೆವರಿನಿಂದ ಬಿಡುಗಡೆಯಾಗುವ ತೇವಾಂಶವನ್ನ ಸೆರೆ ಹಿಡಿಯಲು ಕ್ಯಾಬಿನ್ ಏರ್ ವಿಶೇಷ ಘಟಕವನ್ನೂ ಸ್ಥಾಪಿಸಲಾಗಿದೆ.

    ಇಲ್ಲಿ ಪುನರುತ್ಪಾದಿಸಲಾಗುವ ನೀರು ಭೂಮಿಯಲ್ಲಿ ನೀರಿನ ವಿತರಣಾ ವ್ಯವಸ್ಥೆಯನ್ನೇ ಹೋಲುತ್ತದೆ. ಆದ್ರೆ ಭೂಮಿಯಲ್ಲಿ ಸಿಗುವ ಕುಡಿಯುವ ನೀರಿಗಿಂತಲೂ ಹೆಚ್ಚು ಶುಚಿಯಾಗಿರುತ್ತದೆ. ಏಕೆಂದರೆ ಪುನರುತ್ಪಾದಿಸಲಾದ ನೀರನ್ನು ಫಿಲ್ಟರ್ ಮಾಡಲಾಗಿರುತ್ತದೆ ಎಂದು ಇಸಿಎಲ್‌ಎಸ್‌ಎಸ್ ವ್ಯವಸ್ಥಾಪಕ ಜಿಲ್. ವಿಲಿಯಮ್ಸ್ ತಿಳಿಸಿದ್ದಾರೆ.

  • ಮೋದಿಗಾಗಿ ಬೃಹತ್‌ ಔತಣ ಕೂಟ – ಮುಖೇಶ್‌ ಅಂಬಾನಿ, ಸುಂದರ್‌ ಪಿಚೈ ಸೇರಿ ಹಲವು VIP ಗಣ್ಯರು ಭಾಗಿ: ಇಲ್ಲಿದೆ ಫುಲ್‌ ಲಿಸ್ಟ್‌

    ಮೋದಿಗಾಗಿ ಬೃಹತ್‌ ಔತಣ ಕೂಟ – ಮುಖೇಶ್‌ ಅಂಬಾನಿ, ಸುಂದರ್‌ ಪಿಚೈ ಸೇರಿ ಹಲವು VIP ಗಣ್ಯರು ಭಾಗಿ: ಇಲ್ಲಿದೆ ಫುಲ್‌ ಲಿಸ್ಟ್‌

    ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ  (Narendra Modi) ಅವರು ಅಮೆರಿಕಕ್ಕೆ ಭೇಟಿ ನೀಡಿದ್ದರ ಗೌರವಾರ್ಥವಾಗಿ ಅಧ್ಯಕ್ಷ ಜೋ ಬೈಡನ್‌ (Joe Biden) ಅವರು ಆಯೋಜಿಸಿದ್ದ ಔತಣಕೂಟದಲ್ಲಿ (State Dinner) ಭಾರತದ ಘಟಾನುಟಿ ನಾಯಕರು ಸೇರಿದಂತೆ ಅಮೆರಿಕದ (USA) ವಿವಿಧ ಗಣ್ಯರು ಭಾಗಿಯಾಗಿದ್ದರು.

    ಶ್ವೇತ ಭವನದಲ್ಲಿ ನಡೆದ ಔತಣ ಕೂಟದಲ್ಲಿ ಕೈಗಾರಿಕೋದ್ಯಮಿಗಳಾದ ಮುಖೇಶ್‌ ಅಂಬಾನಿ (Mukesh Ambani), ಆನಂದ್‌ ಮಹೀಂದ್ರಾ (Anand Mahindra) ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಲ್ಲದೇ ಪ್ರಮುಖ ಭಾರತೀಯ ಮೂಲದ ಉನ್ನತ ಹುದ್ದೆಯಲ್ಲಿರುವ ಗೂಗಲ್‌ ಸಿಇಒ ಸುಂದರ್ ಪಿಚೈ (Sundar Pichai), ಸತ್ಯ ನಾಡೆಲ್ಲಾ, ಇಂದ್ರಾ ನೂಯಿ, ಆಪಲ್ ಸಿಇಒ ಟಿಮ್ ಕುಕ್ (Tim Cook) ಸಹ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಮೊದಲ ಬಾರಿಗೆ ಪ್ರಧಾನಿಯಾಗಿ ಬಂದಾಗ ಭಾರತ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು, ಈಗ 5ನೇ ಸ್ಥಾನಕ್ಕೆ ಜಿಗಿದಿದೆ : ಅಮೆರಿಕದಲ್ಲಿ ಮೋದಿ

    ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಸೇರಿದಂತೆ ಭಾರತ ಸರ್ಕಾರದ ಪ್ರತಿನಿಧಿಗಳು ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಭಾರತೀಯ ಮೂಲದ ಯುಎಸ್ ಪ್ರತಿನಿಧಿಗಳಾದ ರೋ ಖನ್ನಾ ಮತ್ತು ರಾಜಾ ಕೃಷ್ಣಮೂರ್ತಿ, ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಪ್ರಸಿದ್ಧ ಫ್ಯಾಷನ್ ಡಿಸೈನರ್ ರಾಲ್ಫ್ ಲಾರೆನ್ ಔತಣಕೂಟದಲ್ಲಿ ಅತಿಥಿಗಳಾಗಿದ್ದರು. ಇದನ್ನೂ ಓದಿ: 2024ಕ್ಕೆ ನಾಸಾ-ಇಸ್ರೋ ಜಂಟಿ ಬಾಹ್ಯಾಕಾಶ ಯಾನ – ಭಾರತ-US ನಡುವೆ ಒಪ್ಪಂದ

    ಮೆನುವಿನಲ್ಲಿ ಏನೇನಿತ್ತು?
    ಶ್ವೇತಭವನದಲ್ಲಿ ನಡೆದ ಬೃಹತ್‌ ಔತಣ ಕೂಟದಲ್ಲಿ ನಿಂಬೆ-ಸಬ್ಬಸಿಗೆ, ಮೊಸರು ಸಾಸ್, ಕ್ರಿಸ್ಪಿ ರಾಗಿ ಕೇಕ್‌, ಬೇಸಿಗೆ ಆಹಾರ, ಮ್ಯಾರಿನೇಡ್ ರಾಗಿ, ಸಲಾಡ್, ಕಲ್ಲಂಗಡಿ, ಟ್ಯಾಂಜಿ ಆವಕಾಡೊ ಸಾಸ್, ಸ್ಟಫ್ಡ್ ಪೋರ್ಟೊಬೆಲ್ಲೋ ಮಶ್ರೂಮ್‌ಮ್‌ ಸೇರಿದಂತೆ ಬಗೆ ಬಗೆ ಖಾದ್ಯಗಳನ್ನ ತಯಾರಿಸಲಾಗಿತ್ತು.

    ಔತಣ ಕೂಟದಲ್ಲಿ ಮೋದಿಯೊಂದಿಗೆ ಯಾರೆಲ್ಲಾ ಇದ್ದರು?

    ಹುಮಾ ಅಬೇದಿನ್ ಮತ್ತು ಹೆಬಾ ಅಬೇದಿನ್
    ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ
    ಜೇಮ್ಸ್ ಬಿಡೆನ್ ಮತ್ತು ಸಾರಾ ಬಿಡೆನ್
    ಟಿಮ್ ಕುಕ್ ಮತ್ತು ಲಿಸಾ ಜಾಕ್ಸನ್
    ಜಿಮ್ ಕ್ರೌನ್ ಮತ್ತು ಪೌಲಾ ಕ್ರೌನ್
    ಲ್ಯಾರಿ ಕಲ್ಪ್ ಮತ್ತು ವೆಂಡಿ ಕಲ್ಪ್
    ಸ್ಟೆಫನಿ ಕಟ್ಟರ್ ಮತ್ತು ಕೆಲ್ಲಿ ಮೈಮನ್ ಹಾಕ್
    ಅಶ್ರಫ್ ಮನ್ಸೂರ್ ದಾಹೋದ್ ಮತ್ತು ಡಾ ಶಮೀಮ್ ಅಶ್ರಫ್ ದಾಹೋದ್
    ರೋನಕ್ ದೇಸಾಯಿ ಮತ್ತು ಡಾ ಬನ್ಸಾರಿ ಶಾ
    ದರ್ಶನ್ ಧಲಿವಾಲ್ ಮತ್ತು ಡೆಬ್ರಾ ಧಲಿವಾಲ್
    ಗ್ಯಾರಿ ಡಿಕರ್ಸನ್ ಮತ್ತು ಕೋನಿ ಡಿಕರ್ಸನ್
    ಸುಂದರ್‌ ಪಿಚೈ
    ಅನುರಾಗ್ ಜೈನ್
    ಎಸ್‌. ಜೈಶಂಕರ್, ಭಾರತದ ವಿದೇಶಾಂಗ ಸಚಿವ
    ಆಪಲ್ ಸಿಇಒ ಟಿಮ್ ಕುಕ್

    ರೀಮ್ ಅಕ್ರಾ ಮತ್ತು ಡಾ ನಿಕೋಲಸ್ ತಬ್ಬಲ್
    ರೇವತಿ ಅದ್ವೈತಿ ಮತ್ತು ಜೀವನ್ ಮುಳಗುಂದ
    ಸಲ್ಮಾನ್ ಅಹ್ಮದ್, ನೀತಿ ಯೋಜನಾ ಸಿಬ್ಬಂದಿ ನಿರ್ದೇಶಕರು, ಯುಎಸ್
    ಕಿರಣ್ ಅಹುಜಾ, ಐುಎಸ್‌ ಆಫೀಸ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ
    ಸ್ಯಾಮ್ ಆಲ್ಟ್ಮನ್ ಮತ್ತು ಆಲಿವರ್ ಮುಲ್ಹೆರಿನ್
    ಲಾಯ್ಡ್ ಆಸ್ಟಿನ್, ರಕ್ಷಣಾ ಕಾರ್ಯದರ್ಶಿ, ಯುಎಸ್
    ಅರಿಂದಮ್ ಬಾಗ್ಚಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ
    ಬೇಲಾ ಬಜಾರಿಯಾ ಮತ್ತು ರೇಖಾ ಬಜಾರಿಯಾ
    ಭರತ್ ಬಾರೈ ಮತ್ತು ಪನ್ನಾ ಬಾರೈ
    ಜಾನ್ ಬಾಸ್, ಮ್ಯಾನೇಜ್‌ಮೆಂಟ್‌ನ ಅಂಡರ್‌ಸೆಕ್ರೆಟರಿ, ಯುಎಸ್‌
    ಜೋಶ್ ಬೆಕೆನ್‌ಸ್ಟೈನ್ ಮತ್ತು ಅನಿತಾ ಬೆಕೆನ್‌ಸ್ಟೈನ್
    ಜೋಶುವಾ ಬೆಲ್
    ಅಮಿ ಬೆರಾ ಮತ್ತು ಡಾ ಜನೈನ್ ವಿವಿಯೆನ್ನೆ ಬೆರಾ
    ಆಂಥೋನಿ ಬರ್ನಾಲ್, ಅಧ್ಯಕ್ಷರ ಸಹಾಯಕ ಮತ್ತು ಪ್ರಥಮ ಮಹಿಳೆಯ ಹಿರಿಯ ಸಲಹೆಗಾರ
    ಹಂಟರ್ ಬಿಡೆನ್ ಮತ್ತು ಮೆಲಿಸ್ಸಾ ಕೊಹೆನ್ ಬಿಡೆನ್
    ಆಶ್ಲೇ ಬಿಡೆನ್ ಮತ್ತು ಸೀಮಾ ಸದಾನಂದನ್
    ಜೇಮ್ಸ್ ಬಿಡೆನ್ ಮತ್ತು ಸಾರಾ ಬಿಡೆನ್
    ನವೋಮಿ ಬಿಡೆನ್ ನೀಲ್ ಮತ್ತು ಪೀಟರ್ ನೀಲ್
    ಆಂಟೋನಿ ಜೆ. ಬ್ಲಿಂಕೆನ್, ಸಹಾಯಕ ಮತ್ತು ಕ್ಯಾಬಿನೆಟ್ ಕಾರ್ಯದರ್ಶಿ
    ಲಿಂಡೆನ್ ಪ್ರೌಸ್ ಬ್ಲೂ ಮತ್ತು ಡಾ ಚೋಲ್ಲಾಡಾ ಬ್ಲೂ
    ಡಾ ಏಂಜೆಲ್ ಕ್ಯಾಬ್ರೆರಾ ಮತ್ತು ಬೆತ್ ಕ್ಯಾಬ್ರೆರಾ
    ಡೇವಿಡ್ ಕ್ಯಾಲ್ಹೌನ್ ಮತ್ತು ಬಾರ್ಬರಾ ಕ್ಯಾಲ್ಹೌನ್
    ಆಂಥೋನಿ ಕ್ಯಾಪುವಾನೋ
    ಮನೇಶ್ ಚಂದ್ವಾನಿ ಮತ್ತು ಅಲ್ಪನಾ ಪಟೇಲ್
    ಜಗತಾರ್ ಚೌಧರಿ
    ಕೆನೆತ್ ಚೆನಾಲ್ಟ್ ಮತ್ತು ಕ್ಯಾಥರಿನ್ ಚೆನಾಲ್ಟ್
    ಮರಿಯಾ ಗ್ರಾಜಿಯಾ ಚಿಯುರಿ ಮತ್ತು ಕರಿಷ್ಮಾ ಸ್ವಾಲಿ
    ಮೈಕೆಲ್ ಕೋಹೆನ್ ಮತ್ತು ಡರಾಲಿನ್ ಸ್ಯಾಮ್ಯುಯೆಲ್ಸ್
    ಮಾರ್ಕ್ ಡೌಗ್ಲಾಸ್ ಮತ್ತು ಮೆಡೆಲೀನ್ ಡೌಗ್ಲಾಸ್
    ಅಜಿತ್ ದೋವಲ್, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ
    ಜೋಸ್ ಡಬ್ಲ್ಯೂ. ಫೆರ್ನಾಂಡಿಸ್,
    ಜಾನ್ ಫೈನರ್, ಪ್ರಧಾನ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ
    ಲಿಯೊನಾರ್ಡ್ ಫಾರ್ಸ್ಮನ್ ಮತ್ತು ಜನ ರೈಸ್
    ಜೇನ್ ಫ್ರೇಸರ್ ಮತ್ತು ಆಲ್ಬರ್ಟೊ ಪೀಡ್ರಾ
    ಅಡೆನಾ ಫ್ರೀಡ್ಮನ್ ಮತ್ತು ಮೈಕ್ ಫ್ರೀಡ್ಮನ್
    ಥಾಮಸ್ ಎಲ್. ಫ್ರೀಡ್ಮನ್ ಮತ್ತು ಆನ್ ಬಿ. ಫ್ರೀಡ್ಮನ್
    ರುಫಸ್ ಗಿಫೋರ್ಡ್, ಪ್ರೋಟೋಕಾಲ್‌ ಚೀಫ್‌, ಯುಎಸ್‌
    ಆನಂದ್ ಗಿರಿಧರದಾಸ್
    ಸಂಜಯ್ ಗೋವಿಲ್ ಮತ್ತು ವಿದ್ಯಾ ಗೋವಿಲ್
    ಪಲಾಶ್ ಗುಪ್ತಾ ಮತ್ತು ಖುಷಿ ಗುಪ್ತಾ
    ರಾಹುಲ್ ಗುಪ್ತಾ, ರಾಷ್ಟ್ರೀಯ ಔಷಧ ನಿಯಂತ್ರಣ ನೀತಿಯ ಕಚೇರಿಯ ನಿರ್ದೇಶಕ ಮತ್ತು ಸೀಮಾ ಗುಪ್ತಾ
    ಇಸಾಬೆಲ್ಲಾ ಗುಜ್ಮನ್, ಸಣ್ಣ ವ್ಯಾಪಾರ ಆಡಳಿತದ ನಿರ್ವಾಹಕರು ಮತ್ತು ಜೇವಿಯರ್ ಗುಜ್ಮನ್
    ಕಮಲಾ ಹ್ಯಾರಿಸ್
    ಫ್ರಾಂಕ್ ಇಸ್ಲಾಂ ಮತ್ತು ಡೆಬ್ಬಿ ಡ್ರೈಸ್‌ಮನ್
    ಹಿರೇನ್ ಜೋಶಿ, ವಿಶೇಷ ಕರ್ತವ್ಯದ ಅಧಿಕಾರಿ, ಭಾರತ
    ನಿಖಿಲ್ ಕಾಮತ್
    ವೃಂದಾ ಕಪೂರ್
    ವಿಮಲ್ ಕಪೂರ್
    ಆಲ್ಫ್ರೆಡ್ ಎಫ್. ಕೆಲ್ಲಿ, ಜೂನಿಯರ್ ಮತ್ತು ಮಾರ್ಗರೇಟ್ ಪಿ. ಕೆಲ್ಲಿ
    ಮ್ಯಾಕ್ಸ್‌ವೆಲ್ ಟೇಲರ್ ಕೆನಡಿ ಮತ್ತು ವಿಕ್ಕಿ ಎಸ್. ಕೆನಡಿ
    ಮ್ಯಾಕ್ಸ್ ಕೆನಡಿ
    ನೀರಜ್ ಖೇಮ್ಲಾನಿ ಮತ್ತು ಹೀದರ್ ಕ್ಯಾಬಟ್ ಖೇಮ್ಲಾನಿ
    ರೋ ಖನ್ನಾ, ಯುಎಸ್‌ ಪ್ರತಿನಿಧಿ

  • ಮೊದಲ ಬಾರಿಗೆ ಪ್ರಧಾನಿಯಾಗಿ ಬಂದಾಗ ಭಾರತ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು, ಈಗ 5ನೇ ಸ್ಥಾನಕ್ಕೆ ಜಿಗಿದಿದೆ : ಅಮೆರಿಕದಲ್ಲಿ ಮೋದಿ

    ಮೊದಲ ಬಾರಿಗೆ ಪ್ರಧಾನಿಯಾಗಿ ಬಂದಾಗ ಭಾರತ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು, ಈಗ 5ನೇ ಸ್ಥಾನಕ್ಕೆ ಜಿಗಿದಿದೆ : ಅಮೆರಿಕದಲ್ಲಿ ಮೋದಿ

    – ಅಮೆರಿಕ ಸಂಸತ್ತಿನಲ್ಲಿ ಮೋದಿ ಭಾಷಣ
    – ಎರಡು ಬಾರಿ ಭಾಷಣ ಮಾಡಿದ ಏಕೈಕ ಭಾರತದ ಪ್ರಧಾನಿ

    ವಾಷಿಂಗ್ಟನ್‌: ನಾನು ಪ್ರಧಾನಿಯಾಗಿ ಮೊದಲ ಬಾರಿಗೆ ಅಮೆರಿಕಗೆ ಭೇಟಿ ನೀಡಿದಾಗ ಭಾರತವು (India) ವಿಶ್ವದ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಇಂದು ಭಾರತವು 5ನೇ ಅತಿದೊಡ್ಡ ಆರ್ಥಿಕತೆಯಾಗಿ (Largest Economy) ಹೊರ ಹೊಮ್ಮಿದೆ. ಭಾರತವು ಶೀಘ್ರದಲ್ಲೇ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ನಾವು ದೊಡ್ಡ ಆರ್ಥಿಕತೆಯಾಗಿ ಬೆಳೆಯುವುದು ಮಾತ್ರವಲ್ಲದೆ ವೇಗವಾಗಿ ಬೆಳೆಯುತ್ತಿದ್ದೇವೆ. ಭಾರತ (India) ಬೆಳೆದಾಗ ಇಡೀ ಜಗತ್ತು ಬೆಳೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾರತದ ಸಾಧನೆಯನ್ನು ಕೊಂಡಾಡಿದ್ದಾರೆ.

    ಅಮೆರಿಕ ಸಂಸತ್ತಿನ (US Congress) ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಈ ಮೂಲಕ ಎರಡು ಬಾರಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಈ ಮೊದಲು 2016ರ ಜೂನ್‌ನಲ್ಲಿ ಮೋದಿ ಅಮೆರಿಕದ ಪ್ರವಾಸದ ವೇಳೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದರು.

    ಪ್ರಜಾಪ್ರಭುತ್ವ ನಮ್ಮ ನರನಾಡಿಯಲ್ಲಿಯೇ ಇದೆ. ದೇಶದಲ್ಲಿ ಎಲ್ಲರನ್ನೂ ಸಮಾನವಾಗಿಯೇ ಕಾಣುತ್ತೇವೆ. ಜಾತಿ-ಧರ್ಮ ಆಧಾರದಲ್ಲಿ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ. 2 ಸೂಪರ್ ಪವರ್ ದೇಶಗಳ 2 ಮಹಾನ್ ಶಕ್ತಿಗಳ ಹಾಗೂ ಇಬ್ಬರು ಸ್ನೇಹಿತರ ಮಹಾ ಸಮ್ಮಿಲನ ಇದಾಗಲಿದೆ. ಗಡಿಯಾಚಿನ ಉಗ್ರವಾದ ನಿಗ್ರಹಕ್ಕೆ ಭಾರತ-ಅಮೆರಿಕ ಜಂಟಿಯಾಗಿ ಕೆಲಸ ಮಾಡಲಿದೆ. ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡುತ್ತೇವೆ. ಎರಡೂ ದೇಶಗಳ ನಡುವೆ ಹೊಸ ಶಕೆ ಆರಂಭಗೊಂಡಿದೆ. ದೇಶಗಳ ನಡುವಿನ ಒಪ್ಪಂದ ದೇಶಕ್ಕಲ್ಲದೇ ಜಗತ್ತಿಗೆ ಅನುಕೂಲ ಆಗಲಿದೆ. ಆರ್ಥಿಕ, ಬಾಹ್ಯಾಕಾಶ, ಇಂಧನ ವಿಚಾರದಲ್ಲಿ ಒಪ್ಪಂದಗಳಾಗಿದ್ದು ಇದು ಇತರೆ ದೇಶಗಳಿಗೂ ಅನುಕೂಲ ಆಗಲಿದೆ ಎಂದರು.

    ಮೋದಿ ಭಾಷಣದ ಹೈಲೈಟ್ಸ್‌:
    ಇಂದು ಆಧುನಿಕ ಭಾರತದಲ್ಲಿ ಮಹಿಳೆಯರು ನಮ್ಮನ್ನು ಉತ್ತಮ ಭವಿಷ್ಯದತ್ತ ಕೊಂಡೊಯ್ಯುತ್ತಿದ್ದಾರೆ. ಭಾರತದ ದೃಷ್ಟಿ ಕೇವಲ ಮಹಿಳೆಯರಿಗೆ ಅನುಕೂಲವಾಗುವ ಅಭಿವೃದ್ಧಿಯಲ್ಲ. ಇದು ಮಹಿಳಾ ನೇತೃತ್ವದ ಅಭಿವೃದ್ಧಿಯಾಗಿದ್ದು, ಅಲ್ಲಿ ಮಹಿಳೆಯರು ಪ್ರಗತಿಯ ಪಯಣವನ್ನು ಮುನ್ನಡೆಸುತ್ತಾರೆ. ಬುಡಕಟ್ಟು ಹಿನ್ನೆಲೆಯಿಂದ ಬಂದ ಮಹಿಳೆ ನಮ್ಮ ರಾಷ್ಟ್ರದ ಮುಖ್ಯಸ್ಥೆ ಹುದ್ದೆಯನ್ನು ಏರಿದ್ದಾರೆ. ಇದನ್ನೂ ಓದಿ : 2024ಕ್ಕೆ ನಾಸಾ-ಇಸ್ರೋ ಜಂಟಿ ಬಾಹ್ಯಾಕಾಶ ಯಾನ – ಭಾರತ-US ನಡುವೆ ಒಪ್ಪಂದ

    ಪ್ಯಾರಿಸ್ ಹವಾಮಾನ ಬದ್ಧತೆಯನ್ನು ಪೂರೈಸಿದ ಏಕೈಕ ಜಿ20 ದೇಶ ಭಾರತ. ನಾವು 2030ರ ಗುರಿಗಿಂತ 9 ವರ್ಷಗಳ ಮೊದಲೇ ನಮ್ಮ ಶಕ್ತಿಯ ಮೂಲಗಳಲ್ಲಿ 40% ಕ್ಕಿಂತ ಹೆಚ್ಚು ನವೀಕರಿಸಬಹುದಾದ ಇಂಧನ ಮೂಲಗಳನ್ನು ಹೊಂದಿದ್ದೇವೆ. ಇಷ್ಟಕ್ಕೆ ನಾವು ನಿಲ್ಲಲ್ಲಿಲ್ಲ. ಗ್ಲ್ಯಾಸ್ಗೋ ಶೃಂಗಸಭೆಯಲ್ಲಿ, ನಾನು ಮಿಷನ್ ಲೈಫ್ ಅನ್ನು ಪ್ರಸ್ತಾಪಿಸಿದ್ದೆ. ನಮ್ಮ ಮಿಷನ್ ಭೂಮಿಯ ಪ್ರಗತಿಯ ಪರವಾಗಿದೆ, ಭೂಮಿಯ ಸಮೃದ್ಧಿಯ ಪರವಾಗಿದೆ, ಜನರ ಪರವಾಗಿದೆ. ಇದನ್ನೂ ಓದಿ: ಫೈಟರ್ ಜೆಟ್ ಎಂಜಿನ್ ತಯಾರಿಕೆ – HAL ಜೊತೆಗೆ USನ GE ಏರೋಸ್ಪೇಸ್ ಒಪ್ಪಂದ 

    ಭಾರತವು ಪ್ರಪಂಚದ ಎಲ್ಲಾ ನಂಬಿಕೆಗಳಿಗೆ ನೆಲೆಯಾಗಿದೆ ಮತ್ತು ನಾವು ಎಲ್ಲವನ್ನೂ ಆಚರಿಸುತ್ತೇವೆ. ಭಾರತದಲ್ಲಿ, ವೈವಿಧ್ಯತೆಯು ನೈಸರ್ಗಿಕ ಜೀವನ ವಿಧಾನವಾಗಿದೆ. ಇಂದು ಜಗತ್ತು ಭಾರತದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಬಯಸುತ್ತದೆ. ನಮ್ಮಲ್ಲಿ 2,500ಕ್ಕೂ ಹೆಚ್ಚು ರಾಜಕೀಯ ಪಕ್ಷಗಳಿವೆ. ಸುಮಾರು 20 ವಿವಿಧ ಪಕ್ಷಗಳು ಭಾರತದ ವಿವಿಧ ರಾಜ್ಯಗಳನ್ನು ಆಳುತ್ತವೆ. ನಮ್ಮಲ್ಲಿ 22 ಅಧಿಕೃತ ಭಾಷೆಗಳು ಮತ್ತು ಸಾವಿರಾರು ಉಪಭಾಷೆಗಳಿವೆ. ಆದರೂ ನಾವು ಒಂದೇ ಧ್ವನಿಯಲ್ಲಿ ಮಾತನಾಡುತ್ತೇವೆ.

    ‘ವಸುಧೈವ ಕುಟುಂಬಕಂ’ ಎಂಬ ಧ್ಯೇಯವಾಕ್ಯದಿಂದ ನಾವು ಬದುಕುತ್ತಿದ್ದೇವೆ. ಜಗತ್ತೇ ಒಂದು ಕುಟುಂಬ. ಪ್ರತಿಯೊಬ್ಬರ ಪ್ರಯೋಜನಕ್ಕಾಗಿ ನಾವು ಪ್ರಪಂಚದ ಜೊತೆ ಮಾತುಕತೆ ನಡೆಸುತ್ತೇವೆ. ನಾವು ಜಿ20 ಶೃಂಗಸಭೆ ಅಧ್ಯಕ್ಷತೆ ವಹಿಸಿದ ಬಳಿಕ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಥೀಮ್‌ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಜಾಗತಿಕ ಶಾಂತಿಪಾಲಕರನ್ನು ಗೌರವಿಸಲು ಸ್ಮಾರಕ ಗೋಡೆಯನ್ನು ನಿರ್ಮಿಸಲು ವಿಶ್ವಸಂಸ್ಥೆಯಲ್ಲಿ ಕಳೆದ ವಾರ ನಾವು ಮಾಡಿದ ಪ್ರಸ್ತಾಪಕ್ಕೆ ಎಲ್ಲಾ ರಾಷ್ಟ್ರಗಳು ಅನುಮೋದನೆ ನೀಡಿವೆ.

  • 2024ಕ್ಕೆ ನಾಸಾ-ಇಸ್ರೋ ಜಂಟಿ ಬಾಹ್ಯಾಕಾಶ ಯಾನ – ಭಾರತ-US ನಡುವೆ ಒಪ್ಪಂದ

    2024ಕ್ಕೆ ನಾಸಾ-ಇಸ್ರೋ ಜಂಟಿ ಬಾಹ್ಯಾಕಾಶ ಯಾನ – ಭಾರತ-US ನಡುವೆ ಒಪ್ಪಂದ

    ವಾಷಿಂಗ್ಟನ್‌: ಚಂದ್ರಯಾನ ಹಾಗೂ ಮಂಗಳಯಾನ ಜೊತೆಗೆ ಭವಿಷ್ಯದಲ್ಲಿ ಬಾಹ್ಯಾಕಾಶ ಅನ್ವೇಷಣೆಯ ಹಲವು ಕನಸುಗಳನ್ನ ಹೊಂದಿರುವ ಮಹತ್ವದ ಆರ್ಟೆಮೆಸ್‌ ಒಪ್ಪಂದಕ್ಕೆ ಭಾರತ ಕೂಡ ಸಹಿ ಹಾಕಿದೆ.

    ಮುಂದಿನ ವರ್ಷದ ಇಂಟರ್‌ ನ್ಯಾಷನಲ್‌ ಸ್ಪೇಸ್‌ ಸ್ಟೇಷನ್‌ (International Space Station) ಜಂಟಿ ಕಾರ್ಯಾಚರಣೆಗೆ ಅಮೆರಿಕದ ನಾಸಾ (NASA) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಜೊತೆಗೂಡಿ ಕೆಲಸ ಮಾಡಲಿವೆ. 2024ರಲ್ಲಿ ಮಾನವ ಸಹಿತ ಜಂಟಿ ಅಂತರಿಕ್ಷಯಾನ ಮಾಡಲಿವೆ ಹಾಗೂ ಇತರ ಅಂತರಿಕ್ಷ ಕುರಿತ ವಿಷಯಗಳ ಬಗ್ಗೆಯೂ ಅಧ್ಯಯನ ನಡೆಸಲಿದೆ. ಈ ಮೂಲಕ ಅಮೆರಿಕ ನೇತೃತ್ವದಲ್ಲಿ ಸೃಷ್ಟಿಯಾಗಿದ್ದ ವೇದಿಕೆ 26ನೇ ದೇಶವಾಗಿ ಭಾರತ ಸೇರ್ಪಡೆಯಾಗಿದೆ.

    ಅಧ್ಯಕ್ಷ ಜೋ ಬೈಡನ್ (Joe Biden) ಅವರ ಆಹ್ವಾನದ ಮೇರೆಗೆ ಯುಎಸ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದರು. ಈ ವೇಳೆ ಆರ್ಟೆಮೆಸ್‌ ಯೋಜನೆಯ ಭಾಗವಾಗಿ 2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ISS) ಜಂಟಿ ಪ್ರಯಾಣ ಕೈಗೊಳ್ಳಲು ಉಭಯ ದೇಶಗಳು ಸಮ್ಮತಿಸಿವೆ. ಇದನ್ನೂ ಓದಿ: 30 ವರ್ಷಗಳ ಹಿಂದೆ ಸಾಮಾನ್ಯ ನಾಗರಿಕ.. ಈಗ ಭಾರತದ ಪ್ರಧಾನಿಯಾಗಿ ಶ್ವೇತಭವನಕ್ಕೆ ಮೋದಿ ಭೇಟಿ

    1967ರ ಬಾಹ್ಯಾಕಾಶ ಒಪ್ಪಂದದ ಆಧಾರದಲ್ಲಿ ಆರ್ಟೆಮಿಸ್‌ ಒಪ್ಪಂದಗಳು ನಾಗರಿಕ ಬಾಹ್ಯಾಕಶ ಪರಿಶೋಧನೆ ಮತ್ತು ಬಳಕೆಗೆ ಮಾರ್ದರ್ಶನ ನೀಡಲು ವಿನ್ಯಾಸಗೊಳಿಸಲಾದ ಒಂದು ಕಾರ್ಯಾಚರಣೆಯಾಗಿದೆ. 2025ರ ವೇಳೆಗೆ ಮಾನವನನ್ನ ಚಂದ್ರನತ್ತ ಕಳುಹಿಸಲು ಪ್ರಯತ್ನ ನಡೆಸಿದೆ. ಜೊತೆಗೆ ಮಂಗಳಯಾನ ಮತ್ತು ಅದರಾಚೆಗೆ ಬ್ಯಾಹ್ಯಾಕಾಶ ಪರಿಶೋಧನೆ ವಿಸ್ತರಿಸುವ ಅಂತಿಮ ಗುರಿ ಹೊಂದಿದೆ. ನಾಸಾ ಮತ್ತು ಇಸ್ರೋ ಈ ವರ್ತಮಾನದ ಮಾನವ ಬಾಹ್ಯಾಕಾಶ ಯಾನ ಸಹಕಾರಕ್ಕಾಗಿ ಕಾಂರ್ಯತಂತ್ರವನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ಶ್ವೇತಭವನ ತನ್ನ ತಿಳಿಸಿದೆ. ಇದನ್ನೂ ಓದಿ: ಫೈಟರ್ ಜೆಟ್ ಎಂಜಿನ್ ತಯಾರಿಕೆ – HAL ಜೊತೆಗೆ USನ GE ಏರೋಸ್ಪೇಸ್ ಒಪ್ಪಂದ 

  • ಫೈಟರ್ ಜೆಟ್ ಎಂಜಿನ್ ತಯಾರಿಕೆ – HAL ಜೊತೆಗೆ USನ GE ಏರೋಸ್ಪೇಸ್ ಒಪ್ಪಂದ

    ಫೈಟರ್ ಜೆಟ್ ಎಂಜಿನ್ ತಯಾರಿಕೆ – HAL ಜೊತೆಗೆ USನ GE ಏರೋಸ್ಪೇಸ್ ಒಪ್ಪಂದ

    ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮೇಕ್ ಇನ್ ಇಂಡಿಯಾ ಯೋಜನೆಗೆ ಭಾರೀ ಉತ್ತೇಜನ ಸಿಕ್ಕಿದಂತಾಗಿದೆ. ಏಕೆಂದರೆ ಅಮೆರಿಕ ಜನರಲ್ ಎಲೆಕ್ಟ್ರಿಕ್ಸ್‌ನ ಏರೋಸ್ಪೇಸ್ ಆರ್ಮ್ (GE Aerospace), ಭಾರತದ ವಾಯುಪಡೆಗಾಗಿ ಫೈಟರ್ ಜೆಟ್ ಎಂಜಿನ್‌ಗಳನ್ನು (Fighter Jet Engines) ತಯಾರಿಸಲು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನೊಂದಿಗೆ ಕೈಜೋಡಿಸುವುದಾಗಿ ಗುರುವಾರ ತಿಳಿಸಿದೆ.

    ಅಧ್ಯಕ್ಷ ಜೋ ಬೈಡನ್ (Joe Biden) ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದು, ವಾಷಿಂಗ್ಟನ್‌ನಲ್ಲಿ ಜನರಲ್ ಎಲೆಕ್ಟ್ರಿಕ್ಸ್ ಅಧ್ಯಕ್ಷ ಹೆಚ್. ಲಾರೆನ್ಸ್ ಕಲ್ಫ್ ಜೂನಿಯರ್ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿದ ಕೆಲವೇ ಗಂಟೆಗಳಲ್ಲಿ ಘೋಷಣೆ ಹೊರಬಿದ್ದಿದೆ. ಮೋದಿ ಅವರು ಜೆಇ ಮುಖ್ಯಸ್ಥರೊಂದಿಗೆ ಈ ಕುರಿತು ಮಾತುಕತೆ ನಡೆದಿಸಿದ್ದಾರೆ.

    ಭಾರತ ಮತ್ತು ಯುಎಸ್ ನಡುವಿನ ರಕ್ಷಣಾ ಸಹಕಾರ ಒಪ್ಪಂದ ಒಂದು ದೊಡ್ಡ ಮೈಲುಗಲ್ಲು. ಜೊತೆಗೆ ಉಭಯ ದೇಶಗಳ ರಕ್ಷಣಾ ಸಹಕಾರ ಬಲಪಡಿಸಲು ಇದು ಪ್ರಮುಖ ಹೆಜ್ಜೆಯಾಗಿರಲಿದೆ ಎಂದು ಜಿಇ ಏರೋಸ್ಪೇಸ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

    ‘ಜಿಇ ಏರೋಸ್ಪೇಸ್‌ನ F414 ಎಂಜಿನ್‌ಗಳನ್ನ ಭಾರತದಲ್ಲಿ ಜಂಟಿಯಾಗಿ ಉತ್ಪಾದಿಸುವ ಅಂಶ ಒಪ್ಪಂದದಲ್ಲಿದೆ. ಇದಕ್ಕಾಗಿ ಅಗತ್ಯ ರಫ್ತು ಮಾನ್ಯತೆಯನ್ನ ಪಡೆಯಲು ಯುಎಸ್ ಸರ್ಕಾರದೊಂದಿಗೆ ಜಿಇ ಏರೋಸ್ಪೇಸ್ ಕೆಲಸ ಮಾಡಲಿದೆ. ಈ ಪ್ರಯತ್ನವು ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ ಎಂಕೆ2 ಕಾರ್ಯಕ್ರಮದ ಭಾಗವಾಗಿದೆ ಎಂದು ಹೇಳಿದೆ.

    ಈ ಕುರಿತು ಮಾತನಾಡಿದ ಲಾರೆನ್ಸ್ ಕಲ್ಫ್, ಇದೊಂದು ಐತಿಹಾಸಿಕ ಒಪ್ಪಂದವಾಗಿದೆ. ಎರಡೂ ರಾಷ್ಟ್ರಗಳ ನಡುವಿನ ನಿಕಟ ಸಮನ್ವಯತೆ ಸಾಧಿಸುವಲ್ಲಿ ನಾವು ಪ್ರಮುಖ ಪಾತ್ರ ವಹಿಸುತ್ತೇವೆ. ನಮ್ಮ F414 ಎಂಜಿನಿಗಳಿಗೆ ಸಾಟಿಯೇ ಇಲ್ಲ. ಇದರಿಂದ ಎರಡೂ ದೇಶಗಳಿಗೂ ಆರ್ಥಿಕ ಹಾಗೂ ರಾಷ್ಟ್ರೀಯ ಭದ್ರತೆಯ ಪ್ರಯೋಜನ ದೊರೆಯುತ್ತದೆ. ಅಲ್ಲದೇ ನಮ್ಮ ಗ್ರಾಹಕರಿಗೆ ಸಹಕರಿಸಲು ಹಾಗೂ ತಮ್ಮ ಮಿಲಿಟರಿ ನೌಕಾಪಡೆಯ ಅಗತ್ಯತೆಗಳನ್ನು ಪೂರೈಸಲು ಗುಣಮಟ್ಟದ ಎಂಜಿನ್‌ಗಳನ್ನು ಉತ್ಪಾದಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.

    ತೇಜಸ್‌ನ ಪ್ರಸ್ತುತ ರೂಪಾಂತರವು F404 ಎಂಜಿನ್‌ಗಳಿಂದ ಚಾಲಿತವಾಗಿರುವುದರಿಂದ ವಾಯುಪಡೆಯು ಜಿಇಯೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದೆ. ಆದ್ರೆ ಇದು ಎಷ್ಟರಮಟ್ಟಿಗೆ ಫಲಕಾರಿಯಾಗುತ್ತದೆ ಎಂಬುದನ್ನ ಕಾದುನೋಡಬೇಕಿದೆ.

    ಜಿಇ ಏರೋಸ್ಪೇಸ್‌ನ ಎಫ್414 ಎಂಜಿನ್‌ಗಳು 5 ದಶಲಕ್ಷಕ್ಕೂ ಹೆಚ್ಚು ಗಂಟೆಗಳ ಹಾರಾಟ ನಡೆಸಿದೆ. 8 ರಾಷ್ಟ್ರಗಳು ಈ ಎಂಜಿನ್‌ಗಳನ್ನು ತಮ್ಮ ಸೇನಾ ವಿಮಾನಗಳಿಗೆ ಬಳಸುತ್ತಿವೆ. ಜಿಇ ಇಲ್ಲಿಯವರೆಗೆ ಜಾಗತಿಕವಾಗಿ 1,600 ಕ್ಕಿಂತ ಹೆಚ್ಚು ಎಫ್414 ಎಂಜಿನ್‌ಗಳನ್ನು ವಿತರಿಸಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

  • ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

    ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಮೊದಲ ಈಜಿಪ್ಟ್ ಪ್ರವಾಸದಲ್ಲಿ 11ನೇ ಶತಮಾನದಲ್ಲಿ ನಿರ್ಮಾಣವಾದ ಅಲ್-ಹಕೀಮ್ ಮಸೀದಿಗೆ (Al-Hakim Mosque) ಭೇಟಿ ನೀಡಲಿದ್ದಾರೆ. ಮತ್ತು ಮೊದಲ ವಿಶ್ವ ಯುದ್ಧದ ಅವಧಿಯಲ್ಲಿ ಈಜಿಪ್ಟ್‌ಗಾಗಿ ಹೋರಾಡಿ ಮಡಿದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ (Vinay Mohan Kwatra) ಸೋಮವಾರ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅಮೆರಿಕ, ಈಜಿಪ್ಟ್ ಪ್ರವಾಸ (USA, Egypt Tour) ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಜೂನ್ 24 ಮತ್ತು 25 ರಂದು ಈಜಿಪ್ಟ್‌ಗೆ ಭೇಟಿ ನೀಡಲಿದ್ದಾರೆ. ಇದು ಈಜಿಪ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭೇಟಿಯಾಗಿದ್ದು, 1997ರ ಬಳಿಕ ಈಜಿಪ್ಟ್‌ಗೆ ತೆರಳಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿರುವ ಮೊದಲ ಪ್ರಧಾನಿಯೂ ಆಗಿದ್ದಾರೆ ಎಂದರು.

    ಈ ವರ್ಷದ ಗಣರಾಜೋತ್ಸವದಲ್ಲಿ ಈಜಿಪ್ಟ್ ಪ್ರಧಾನಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು, ಆನಂತರ ಎರಡು ದೇಶಗಳ ನಡುವಿನ ಒಡನಾಟ ಹೆಚ್ಚಿದೆ. ಭಾರತದ ವಿದೇಶಾಂಗ ಸಚಿವ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಜಿಪ್ಟ್‌ಗೆ ಭೇಟಿ ನೀಡಿದ್ದರು. ಈಜಿಪ್ಟ್‌ನ ಮೂರ್ನಾಲ್ಕು ಮಂದಿ ಸಚಿವರು ತಮ್ಮ ನಿಯೋಗದೊಂದಿಗೆ ಭಾರತಕ್ಕೆ ಬಂದಿದ್ದರು. ಇದನ್ನೂ ಓದಿ: ಒಡಿಶಾ ರೈಲು ಅಪಘಾತದ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ- ಟ್ರ್ಯಾಕ್‌ಗಳ ಡೀಪ್ ಸ್ಕ್ರೀನಿಂಗ್‌ಗೆ ನಿರ್ಧಾರ

    ಕೈರೋ ತಲುಪಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲು ಭಾರತದ ಘಟಕದೊಂದಿಗೆ ಸಂವಾದ ನಡೆಸಲಿದ್ದಾರೆ, ನಂತರ ಈಜಿಪ್ಟ್‌ನಲ್ಲಿರುವ ಸಣ್ಣ ಭಾರತೀಯ ಸಮುದಾಯದೊಂದಿಗೆ ಸಭೆ ನಡೆಸಲಿದ್ದಾರೆ. ಈಜಿಪ್ಟ್‌ನ ಕೆಲವು ಪ್ರಮುಖ ಗಣ್ಯರನ್ನ ಭೇಟಿ ಮಾಡಿದ ಬಳಿಕ ಅವರು ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ.

    ಅಲ್-ಹಕೀಮ್ ಮಸೀದಿ (Al-Hakim Mosque) 11ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಸದ್ಯ ಮತ್ತು ಬೊಹ್ರಾ ಸಮುದಾಯದಿಂದ ನವೀಕರಿಸಲಾಗಿದೆ. ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಿದ ಬಳಿಕ ಹೆಲಿಯೊಪೊಲಿಸ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಮೊದಲ ಮಹಾಯುದ್ಧದಲ್ಲಿ (World War) ಈಜಿಪ್ಟ್‌ಗಾಗಿ ಹೋರಾಡಿ ಸರ್ವೋಚ್ಚ ತ್ಯಾಗ ಮಾಡಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಕೈ ಜೋಡಿಸಲು ಹಿಂದೇಟು – ಲೋಕಸಭೆ ಚುನಾವಣೆಗೆ ವಿಪಕ್ಷಗಳ ಮೈತ್ರಿ ಅನುಮಾನ

    ಬಳಿಕ ಪ್ರಧಾನಿ ಮೋದಿ ಈಜಿಪ್ಟ್ ಅಧ್ಯಕ್ಷರನ್ನ ಭೇಟಿ ಮಾಡಲಿದ್ದಾರೆ. ಇಲ್ಲಿ ಈಜಿಪ್ಟ್ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆಗಳು, ವಿವಿಧ ಎಂಒಯುಗಳು ಮತ್ತು ಒಪ್ಪಂದಗಳಿಗೆ ಸಹಿ ಹಾಕಲಾಗುವುದು. ಈ ಒಪ್ಪಂದ ಎರಡು ದೇಶಗಳ‌ ನಡುವಿನ ವ್ಯಾಪಾರ, ಆರ್ಥಿಕತೆಗೆ ಶಕ್ತಿ ತುಂಬಲಿದೆ ಎಂದು ಕ್ವಾತ್ರಾ ಹೇಳಿದರು.

  • ಸೆಕ್ಸ್ ಕೂಡ ಒಂದು ಕೆಲಸ – ಕಾನೂನುಬದ್ಧಗೊಳಿಸಲು ಹೊಸ ಮಸೂದೆ ಮಂಡನೆ

    ಸೆಕ್ಸ್ ಕೂಡ ಒಂದು ಕೆಲಸ – ಕಾನೂನುಬದ್ಧಗೊಳಿಸಲು ಹೊಸ ಮಸೂದೆ ಮಂಡನೆ

    ವಾಟಿಂಗ್ಟನ್: ಅಮೆರಿಕದ (USA) ಕಾಪ್ ಹೇಟಿಂಗ್ ಕ್ವೀನ್ಸ್ ಕೌನ್ಸಿಲ್‌ನ (Queens CouncilWoman) ಟಿಫಾನಿ ಕ್ಯಾಬನ್ ಅವರು ಲೈಂಗಿಕ ಕಾರ್ಯಕರ್ತೆಯರ ಉದ್ಯಮವನ್ನ ಕಾನೂನುಬದ್ಧಗೊಳಿಸುವ ಹಾಗೂ ಲೈಂಗಿಕ ಕಾರ್ಯಕರ್ತೆಯರಿಗೆ (Sex Worker) ಸಹಾಯ ನೀಡುವ ಸಂಬಂಧ ಹೊಸ ಮಸೂದೆಯೊಂದನ್ನ ಮಂಡಿಸಿದ್ದಾರೆ.

    ನ್ಯೂಯಾರ್ಕ್‌ನಲ್ಲಿ ನಡೆದ ಕ್ವೀನ್ಸ್ ಕೌನ್ಸಿಲ್ ಸಭೆಯಲ್ಲಿ ಮಸೂದೆ ಮಂಡನೆಯಾಗಿದ್ದು, ಸೆಕ್ಸ್ ವೃತ್ತಿ ಅನ್ನೋದು ಅಪರಾಧವಲ್ಲ. ಹಿಂದಿನ ಮತ್ತು ಪ್ರಸ್ತುತ ಲೈಂಗಿಕ ಕಾರ್ಯಕರ್ತೆಯರು ತೆರಿಗೆದಾರರ ನಿಧಿಯ ಸಹಾಯವನ್ನು ಪಡೆಯಬಹುದಾಗಿದೆ. ಅಲ್ಲದೇ ಈ ಮಸೂದೆಯೂ ಕಾನೂನುಬದ್ಧವಾಗಿರಲಿದ್ದು, ಜೀವನೋಪಾಯಕ್ಕಾಗಿ ದೇಹವನ್ನು ಪ್ರದರ್ಶಿಸುವ ಎಲ್ಲರಿಗೂ ಅನ್ವಯಿಸುತ್ತದೆ. ಅವರು ಸಹಾಯ ಪಡೆದುಕೊಳ್ಳಬಹುದು ಎಂದಿದ್ದಾರೆ. ಇದನ್ನೂ ಓದಿ: ಟ್ರಂಪ್‌ ಮನೆಯ ಬೆಡ್‌ರೂಮ್‌, ಬಾತ್‌ರೂಮ್‌ನಲ್ಲಿ ರಹಸ್ಯ ದಾಖಲೆಗಳು

    ನ್ಯೂಯಾರ್ಕ್ ನಗರವು ತನ್ನ ಜನರ ಆರೋಗ್ಯ, ಸುರಕ್ಷತೆ ಮತ್ತು ಆರ್ಥಿಕ ಯೋಗಕ್ಷೇಮವನ್ನು ರಕ್ಷಿಸುವ ಜವಾಬ್ದಾರಿ ಹೊಂದಿದೆ. ಹಾಗಾಗಿ ಜೀವನಕ್ಕಾಗಿ ಏನು ಮಾಡಿದರೂ ಲೆಕ್ಕಿಸುವುದಿಲ್ಲ ಎಂದರಲ್ಲದೇ, ಲೈಂಗಿಕ ಕೆಲಸವೂ ಕೆಲಸವೇ ಆಗಿದೆ ಎಂದು ಕ್ಯಾಬನ್ (Tiffany Caban) ಹೇಳಿದ್ದಾರೆ.

    ಅಲ್ಲದೇ ಈ ಮಸೂದೆ ಮಂಡಿಸುವುದರಿಂದ ಚಲನಶೀಲತೆ, ಆರೋಗ್ಯ, ವಸತಿ ಮತ್ತು ಸಾಮಾಜಿಕ ಒಳಿಗಾಗಿ ಆರ್ಥಿಕ ಬೆಂಬಲ ಒದಗಿಸಬಹುದು. ಜೊತೆಗೆ ಲೈಂಗಿಕ ಕಾರ್ಯಕರ್ತರೊಂದಿಗೆ ನೇರವಾಗಿ ಕೆಲಸ ಮಾಡುವ ಗುಂಪುಗಳಿಗೆ ಸರ್ಕಾರದಿಂದ ಅನುದಾನ ಒದಗಿಸಬಹುದು. ಉದ್ಯೋಗದ ಆಧಾರದ ಮೇಲೆ ತಾರತಮ್ಯ ನಿಷೇಧಿಸಬಹುದು. ಜೊತೆಗೆ ಲೈಂಗಿಕ ಕಾರ್ಯಕರ್ತೆಯರ ಸ್ಥಾನಮಾನವನ್ನು ರಕ್ಷಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಗತ್ತಿನ ಅತ್ಯಂತ ಬಡರಾಷ್ಟ್ರ ಸೊಮಾಲಿಯಾದಲ್ಲಿ ಬಾಂಬ್ ಸ್ಫೋಟವಾಗಿ 25 ಮಕ್ಕಳು ಸಾವು

  • 2024ರ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರ ಬರಲಿದೆ – ರಾಹುಲ್ ಗಾಂಧಿ

    2024ರ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರ ಬರಲಿದೆ – ರಾಹುಲ್ ಗಾಂಧಿ

    ವಾಷಿಂಗ್ಟನ್‌: ಮುಂದಿನ ಎರಡು ವರ್ಷಗಳ ಕಾಲ ಕಾಂಗ್ರೆಸ್ (Congress) ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂದು ನಾನು ಭಾವಿಸಿದ್ದು, ದೇಶದಲ್ಲಿ ಅಂಡರ್ ಕರೆಂಟ್ ಇದ್ದು 2024ರ ಲೋಕಸಭೆ ಚುನಾವಣೆಯಲ್ಲಿ (2024 Parliament Elections) ಅಚ್ಚರಿಯ ಫಲಿತಾಂಶ ಹೊರ ಬರಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ವಾಷಿಂಗ್ಟನ್ ಡಿಸಿಯಲ್ಲಿ ಪ್ರಸುತ್ತ ರಾಜಕಾರಣ ಬಗ್ಗೆ ಮಾತನಾಡಿದ ಅವರು, ಭಾರತದಲ್ಲಿ ವಿಪಕ್ಷಗಳನ್ನು ಕಾಂಗ್ರೆಸ್ ಒಗ್ಗೂಡಿಸುತ್ತಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷರ ಪ್ರಯತ್ನ ಸಫಲವಾಗಲಿದೆ ಎಂದು ನಾನು ಭಾವಿಸಿದ್ದೇನೆ, ಸಾಕಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆ ಎಂದರು‌.

    ಕರ್ನಾಟಕ ವಿಧಾನಸಭಾ ಚುನಾವಣೆಯ (Karnaraka Assembly Election) ಫಲಿತಾಂಶ ಉಲ್ಲೇಖಿಸಿ ಮಾತನಾಡಿ, ಕಾಂಗ್ರೆಸ್ ಬಿಜೆಪಿಯನ್ನು (BJP) ಅಧಿಕಾರದಿಂದ ಕೆಳಗಿಳಿಸಿದೆ. ಮುಂದಿನ ಮೂರ್ನಾಲ್ಕು ರಾಜ್ಯಗಳ ಚುನಾವಣೆಗಳು ಏನಾಗಲಿದೆ ಎಂಬುದನ್ನ ಕಾದು ನೋಡಿ ಎಂದು ಹೇಳಿದರು. ಇದನ್ನೂ ಓದಿ: ಸಂಸದ ಸ್ಥಾನದಿಂದ ಅನರ್ಹತೆ ಜನ ಸೇವೆಗೆ ಸಿಕ್ಕ ಅವಕಾಶ: ರಾಹುಲ್ ಗಾಂಧಿ

    ಬಹುಪಾಲು ಸಮಾನ ಮನಸ್ಕ ಹಲವು ವಿರೋಧ ಪಕ್ಷಗಳು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಎದುರಿಸಲು ಕೈಜೋಡಿಸುತ್ತಿವೆ. ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ, ಜೂನ್ 12 ರಂದು ಪಾಟ್ನಾದಲ್ಲಿ ʻಸಮಾನ ಮನಸ್ಸಿನ ರಾಜಕೀಯ ಪಕ್ಷಗಳʼ ಸಮಾವೇಶ ನಡೆಯಲಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.

    ಇನ್ನೂ ಲೋಕಸಭೆ ಸ್ಪರ್ಧೆಯಲ್ಲಿ ಕಾಂಗ್ರೆಸ್ ಮತ್ತು ವಿಪಕ್ಷಗಳ ನಡುವೆ ಕೊಡು-ಕೊಳ್ಳುವಿಕೆ ಕೂಡಾ ಇರಲಿದೆ ಎಂದ ಅವರು, ಭಾರತದಲ್ಲಿ ಪತ್ರಿಕಾ ಮತ್ತು ಧಾರ್ಮಿಕ ಸ್ವಾತಂತ್ರ್ಯಗಳು, ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಆರ್ಥಿಕತೆಯ ಸ್ಥಿತಿ ಸೇರಿದಂತೆ ಹಲವಾರು ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಉತ್ತರಿಸಿದರು. ಇದನ್ನೂ ಓದಿ: ಬೇಕಂತಲೇ ಹೆಣ್ಮಕ್ಕಳ ಮೈ ಮುಟ್ಟುತ್ತಿದ್ದ, ಹಿಂಬಾಲಿಸುತ್ತಿದ್ದ – ಬ್ರಿಜ್‌ ಭೂಷಣ್‌ ವಿರುದ್ಧ 10 ಕಂಪ್ಲೆಂಟ್‌, 2 FIR

    ಪ್ರಧಾನಿ ನರೇಂದ್ರ ಮೋದಿಯವರ ವಿಶ್ವದಾದ್ಯಂತ ಉನ್ನತ ಮಟ್ಟದ ಜನಪ್ರಿಯತೆ ಬಗ್ಗೆ ಮಾತನಾಡಿ, ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಸೆರೆಹಿಡಿಯಲಾಗಿದೆ. ದೇಶದಲ್ಲಿ ಪತ್ರಿಕಾ ಮಾಧ್ಯಮವನ್ನ ಖಚಿತವಾಗಿ ಸೆರೆ ಹಿಡಿಯಲಾಗಿದೆ ಎಲ್ಲವನ್ನೂ ನಾನು ನಂಬುವುದಿಲ್ಲ ಎಂದರಲ್ಲದೇ, ಪ್ರಜಾಪ್ರಭುತ್ವಕ್ಕೆ ಪತ್ರಿಕಾ ಸ್ವಾತಂತ್ರ್ಯವು ತುಂಬಾ ಮುಖ್ಯವಾಗಿದೆ ಎಂದು ಒತ್ತಿ ಹೇಳಿದರು.

  • ಸ್ಟೇಜ್‌ನಲ್ಲೇ ಎಡವಿ ಬಿದ್ದ US ಅಧ್ಯಕ್ಷ ಜೋ ಬೈಡನ್‌ – ವೀಡಿಯೋ ವೈರಲ್‌

    ಸ್ಟೇಜ್‌ನಲ್ಲೇ ಎಡವಿ ಬಿದ್ದ US ಅಧ್ಯಕ್ಷ ಜೋ ಬೈಡನ್‌ – ವೀಡಿಯೋ ವೈರಲ್‌

    ವಾಷಿಂಗ್ಟನ್‌: ಅಮೆರಿಕದ ಕೊಲೊರಾಡೋ ಸ್ಪ್ರಿಂಗ್ಸ್‌ನಲ್ಲಿ ನಡೆದ ಏರ್‌ಫೋರ್ಸ್‌ ಅಕಾಡೆಮಿಯ ಪದವಿ ಪ್ರದಾನ ಸಮಾರಂಭದಲ್ಲಿ (Air Force Academy Graduation) ಭಾಗವಹಿಸಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ (Joe Biden) ವೇದಿಕೆಗೆ ಆಗಮಿಸುತ್ತಿದ್ದಂತೆ ಸ್ಟೇಜ್‌ ಮೇಲೆ ಎಡವಿ ಬಿದ್ದಿದ್ದಾರೆ. ಈ ಕುರಿತ ವೀಡಿಯೋ ತುಣುಕು ಜಾಲತಾಣದಲ್ಲಿ (Social Media) ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

    ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಭಾಷಣ ಮಾಡಿದ ನಂತರ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಕೆಡೆಟ್‌ಗಳೊಂದಿಗೆ ಹಸ್ತಲಾಘವ ಮಾಡಿದರು. ಬಳಿಕ ಮುಂದಿನ ಹೆಜ್ಜೆ ಇಟ್ಟ ತಕ್ಷಣ ಕಾಲು ತಡವರಿಸಿ ಬಿದ್ದಿದ್ದಾರೆ, ಕೂಡಲೇ ಏರ್‌ಫೋರ್ಸ್‌ ಅಧಿಕಾರಿಗಳು ಎದ್ದೇಳಲು ಸಹಕರಿಸಿದ್ದಾರೆ. ಎಡವಿ ಬಿದ್ದ 80 ವರ್ಷದ ಬೈಡನ್‌ ಬಳಿಕ ಡಿಪ್ಲೊಮಾ ಕೆಡೆಟ್‌ಗಳಿಗೆ ಪದವಿ ಪ್ರದಾನಮಾಡಿ, ವೇದಿಕೆಯಿಂದ ಹೊರಗುಳಿದಿದ್ದಾರೆ. ನಂತರ ಅಲ್ಲಿಂದ ಕ್ಷೇಮವಾಗಿ ನಡೆದುಕೊಂಡು ಶ್ವೇತ ಭವನಕ್ಕೆ ತೆರಳಿದರು. ಸದ್ಯ ಅಧ್ಯಕ್ಷರು ಗಾಯಗೊಂಡಿಲ್ಲ, ಫಿಟ್‌ ಆಗಿದ್ದಾರೆ ಎಂಬುದಾಗಿ ಶ್ವೇತಭವನದ ಸಂವಹನ ವಿಭಾಗದ ನಿರ್ದೇಶಕ ಬೆನ್ ಲಾಬೋಲ್ಟ್ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನದಿಂದ ಅನರ್ಹತೆ ಜನ ಸೇವೆಗೆ ಸಿಕ್ಕ ಅವಕಾಶ: ರಾಹುಲ್ ಗಾಂಧಿ

    ಬೈಡನ್‌ ಇತ್ತೀಚೆಗೆ ಜಪಾನ್‌ನಲ್ಲಿ ನಡೆದ G7 ಶೃಂಗಸಭೆಯಲ್ಲೂ ಎಡವಿದ್ದರು, ಹಿರೋಷಿಮಾದ ಇಟ್ಸುಕುಶಿಮಾ ದೇಗುಲದಲ್ಲಿ ಸಣ್ಣ ಮೆಟ್ಟಿಲುಗಳಲ್ಲಿ ಅವಸರದಿಂದ ಹೋಗುತ್ತಿದ್ದಾಗಲೂ ಎಡವಿ ಬಿದ್ದಿದ್ದರು. ಆದ್ರೆ ಸ್ವತಃ ಮೇಲೆದ್ದಿದ್ದರು. ಇದೀಗ 3ನೇ ಬಾರಿ ಬೈಡನ್‌ ಎಡವಿ ಬಿದ್ದ ಈ ದೃಶ್ಯ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೆಲವರು ಟ್ರೋಲಿಗೆಳೆದಿದ್ದಾರೆ, ಇನ್ನೂ ಕೆಲವರು ಅದು ಕೆಟ್ಟ ಸ್ಥಳವಾಗಿತ್ತೆಂದು ಭಾವಿಸುತ್ತೇವೆ. ಯಾವುದಕ್ಕೂ ನೀವು ಹುಷಾರಾಗಿರಿ ಅಂತಾ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಭಾರತ, ಚೀನಾ ಗಡಿ ವಿವಾದ – ಮಾತುಕತೆಗೆ ಮುಂದಾದ ಉಭಯ ರಾಷ್ಟ್ರಗಳು

    ಬೈಡನ್‌ ಅಧ್ಯಕ್ಷರ ಅವಧಿ ಇನ್ನೊಂದು ವರ್ಷ ಬಾಕಿಯಿದ್ದು, 2ನೇ ಅವಧಿಗೆ 2024ರಲ್ಲಿ ಮತ್ತೊಮ್ಮೆ ಅಧ್ಯಕ್ಷನ ಪಟ್ಟಕ್ಕೇರಲು ಸಿದ್ಧತೆಯಲ್ಲಿ ತೊಡಗಿದ್ದಾರೆ.