Tag: urulu seve

  • ಲೋಕಕಲ್ಯಾಣಕ್ಕಾಗಿ 220 ಕಿ.ಮೀ. ಉರುಳು ಸೇವೆ ಮಾಡಿದ ಪಂಡರಪುರದ ವಿಠ್ಠಲನ ಭಕ್ತ

    ಲೋಕಕಲ್ಯಾಣಕ್ಕಾಗಿ 220 ಕಿ.ಮೀ. ಉರುಳು ಸೇವೆ ಮಾಡಿದ ಪಂಡರಪುರದ ವಿಠ್ಠಲನ ಭಕ್ತ

    ಚಿಕ್ಕೋಡಿ: ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ದೇವಸ್ಥಾನಗಳಲ್ಲಿ ಉರುಳು ಸೇವೆ ಮಾಡೋದನ್ನ ಕೇಳಿದ್ದೀವಿ, ನೋಡಿದ್ದೀವಿ‌. ಅಷ್ಟೆ ಯಾಕೆ ಪಾದಯಾತ್ರೆ ಮೂಲಕ ತಮ್ಮ ಮನೆದೇವರ ಹರಕೆ ತೀರಿಸಿದವರನ್ನೂ ಸಹ ನೋಡಿರ್ತೀವಿ. ಆದರೆ ಇಲ್ಲೊಬ್ಬ ವಿಠ್ಠಲನ ಭಕ್ತ ಲೋಕಕಲ್ಯಾಣಕ್ಕಾಗಿ ಸುಮಾರು 220 ಕಿ.ಮೀ. ಉರುಳು ಸೇವೆ ಮಾಡಿ ಪಂಡರಪುರದ ವಿಠ್ಠಲನ ಕೃಪೆಗೆ ಪಾತ್ರನಾಗಿದ್ದಾ‌ನೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬೇವನೂರು ಗ್ರಾಮದ ನಿವಾಸಿ ಶಹಾಜೀ ಜಾಧವ್ ಉರುಳು ಸೇವೆ ಸಲ್ಲಿಸಿದ ಭಕ್ತ. ಶಹಾಜೀ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಿಂದ ಮಹಾರಾಷ್ಟ್ರದ ಪಂಡರಪುರದವರೆಗೂ ಉರುಳು ಸೇವೆ ಮಾಡಿದ್ದಾರೆ‌‌‌.‌ ಇದನ್ನೂ ಓದಿ: 60 ವರ್ಷ ವಯಸ್ಸಾಗಿದ್ದು, ಹೃದಯ ತುಂಬಾ ಸೂಕ್ಷ್ಮವಾಗಿದ್ರಿಂದ ಪ್ರಾಬ್ಲಂ ಬರೋದು ಸಹಜ: ಡಾ. ರಂಗನಾಥ್

    ಕೋವಿಡ್, ನೆರೆ ತೊಲಗಿಸಿ ಇಡೀ ಮನುಕುಲದ ಒಳಿತಿಗಾಗಿ ವಿಠ್ಠಲನ ಬಳಿ ಪ್ರಾರ್ಥಿಸಿ ಶಹಾಜೀ ಹರಕೆ ತೀರಿಸಿದ್ದಾರೆ. ದಿನಕ್ಕೆ ನಾಲ್ಕು ಕಿ.ಮೀ. ಉರುಳು ಸೇವೆ ಮಾಡಿ ಶಹಾಜೀ ಪಂಡರಪುರ ತಲುಪಿದ್ದಾರೆ. ವಿಜ್ಞಾನ-ತಂತ್ರಜ್ಞಾನದ ಯುಗದಲ್ಲಿ ದೇವರು ಮತ್ತು ಭಕ್ತಿ ಎಂಬ ನಂಬಿಕೆಗಳು ಜನರ ಮನಸ್ಸಿನಲ್ಲಿ ಇನ್ನೂ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಾನವ ಕುಲದ ಏಕತೆ, ವಿಶ್ವಶಾಂತಿಗಾಗಿ ವ್ಯಕ್ತಿಯಿಂದ 40 ಕಿ.ಮೀ ಉರುಳು ಸೇವೆ

    ಮಾನವ ಕುಲದ ಏಕತೆ, ವಿಶ್ವಶಾಂತಿಗಾಗಿ ವ್ಯಕ್ತಿಯಿಂದ 40 ಕಿ.ಮೀ ಉರುಳು ಸೇವೆ

    ಧಾರವಾಡ: ಮಾನವ ಕುಲದ ಏಕತೆ ಹಾಗೂ ವಿಶ್ವಶಾಂತಿಗಾಗಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಸುಮಾರು 40 ಕಿಲೋ ಮೀಟರ್ ಉರುಳು ಸೇವೆಯನ್ನ ಆರಂಭಿಸಿದ್ದಾರೆ.

    ಜಿಲ್ಲೆಯ ಕಲಘಟಗಿ ತಾಲೂಕಿನ ಎಮ್ಮೇಟ್ಟಿ ಗ್ರಾಮದ ಈಶ್ವರ ತೋರಣಕಟ್ಟಿ ಅವರೇ ಈ ಉರುಳು ಸೇವೆಯನ್ನ ಆರಂಭಿಸಿದ್ದಾರೆ. ಧಾರವಾಡ ನಗರದ ಗಾಂಧಿಚೌಕದಿಂದ ತಮ್ಮ ಸೇವೆಯನ್ನ ಆರಂಭಿಸಿರುವ ಇವರು, ಮೂರು ದಿನಗಳ ನಂತರ ಎಮ್ಮೇಟ್ಟಿ ಗ್ರಾಮಕ್ಕೆ ತಲುಪಲಿದ್ದಾರೆ.

    ನಗರದ ರಸ್ತೆಗಳಲ್ಲೇ ಉರುಳು ಸೇವೆಯನ್ನ ಆರಂಭಿಸಿರುವ ಇವರು, ಸೆಪ್ಟೆಂಬರ್ 2 ರಂದು ತಮ್ಮ ಗ್ರಾಮಕ್ಕೆ ತಲುಪಲಿದ್ದಾರೆ. ಕಳೆದ 19 ವರ್ಷಗಳಿಂದ ಇವರು ಇದೇ ರೀತಿ ಸೇವೆಯನ್ನ ಮಾಡುತ್ತಾ ಬಂದಿದ್ದಾರೆ. ಉರುಳು ಸೇವೆ ಮಾಡುತ್ತಿರುವ ಇವರಿಗೆ ಅನೇಕರು ಸಾಥ್ ನೀಡಿದ್ದಾರೆ. ತಮ್ಮ ಉರುಳು ಸೇವೆಯ ನಂತರ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಕೂಡಾ ಇವರು ಇಟ್ಟುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv