Tag: uri gowda

  • ದೇಶದ ಬಗ್ಗೆ ರಾಹುಲ್ ಗಾಂಧಿಯ ಯಾವ ಬಗೆಯ ಬದ್ಧತೆ?- ಬೊಮ್ಮಾಯಿ ವ್ಯಂಗ್ಯ

    ದೇಶದ ಬಗ್ಗೆ ರಾಹುಲ್ ಗಾಂಧಿಯ ಯಾವ ಬಗೆಯ ಬದ್ಧತೆ?- ಬೊಮ್ಮಾಯಿ ವ್ಯಂಗ್ಯ

    ಹುಬ್ಬಳಿ: ರಾಹುಲ್ ಗಾಂಧಿ (Rahul Gandhi) ದೇಶದ ಬಗ್ಗೆ ಅಪಾರ ಗೌರವ ಹೊಂದಿದವರು. ಆದರೆ ಅವರು ವಿದೇಶಕ್ಕೆ ಹೋದಾಗ ದೇಶದ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡುತ್ತಾರೆ. ಇದು ದೇಶದ ಬಗ್ಗೆ ಇರುವ ಯಾವ ಬಗೆಯ ಬದ್ಧತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವ್ಯಂಗ್ಯವಾಡಿದ್ದಾರೆ.

    ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಸೋಲುವ ಹತಾಶೆಯಲ್ಲಿ ಬೋಗಸ್ ಕಾರ್ಡ್‍ನ ಸರಣಿ ನಡೆಸಿದೆ. ಇದೀಗ ತನ್ನ ನಾಲ್ಕನೇ ಬೋಗಸ್ ಕಾರ್ಡ್ ಬಿಡುಗಡೆ ಮಾಡಿದೆ. ಇದಕ್ಕೆ ನಾಡಿನ ಜನರು ಮರಳಾಗುವುದಿಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಕುಡಿದು ಗಲಾಟೆ ಮಾಡುತ್ತಿದ್ದವನ ಪ್ರಶ್ನೆ ಮಾಡಿದ ಸಂಬಂಧಿಯನ್ನೇ ಕೊಂದ- ಮತ್ತೋರ್ವನಿಗೆ ಗಾಯ

    ರಾಜಸ್ಥಾನ, ಛತ್ತೀಸಗಢ ಸೇರಿದಂತೆ ಒಟ್ಟು ನಾಲ್ಕು ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲಿ ಪದವೀಧರರಿಗೆ ಮಾಶಾಸನ ಕೊಡತ್ತೇವೆ ಎಂದು ಹೇಳಿದ್ದರು. ಆದರೆ ಕಾಂಗ್ರೆಸ್ ಎಲ್ಲಿಯೂ ಏನೂ ಕೊಟ್ಟಿಲ್ಲ ಎಂದಿದ್ದಾರೆ.

    ಬರುವ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‍ಗೆ ಗೊತ್ತಾಗಿದೆ. ಅದಕ್ಕಾಗಿಯೇ ಸುಳ್ಳು ಭರವಸೆ ನೀಡಿ ಜನರನ್ನು ಮೋಸ ಮಾಡಲು ತಯಾರಾಗಿದ್ದಾರೆ. 2010 ರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) 10 ಕೆಜಿ ಕೊಡುತ್ತಿದ್ದ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದರು. ಚುನಾವಣೆ ಬಂದಾಗ 7 ಕೆಜಿಗೆ ಏರಿಸಿದ್ದರು. ಚುನಾವಣೆಗಾಗಿ ಯೋಜನೆ ಮಾಡುವುದು, ಬೋಗಸ್ ಕಾರ್ಡ್ ಬಿಡುಗಡೆ ಮಾಡುವುದು ಕಾಂಗ್ರೆಸ್ ಗುಣಧರ್ಮ ಎಂದು ವಾಗ್ದಾಳಿ ನಡೆಸಿದ್ದಾರೆ.

    ಉರಿಗೌಡ (Uri Gowda), ನಂಜೆಗೌಡ (Nanje Gowda) ಆಧಾರ್ ಕಾರ್ಡ್ ಮಾಡಿ ಸಿಟಿ ರವಿ ತಂದೆ, ಅಶ್ವಥ್ ನಾರಾಯಣ ತಾಯಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಸಂಶೋಧನೆಯಿಂದ ಸತ್ಯ ಹೊರಗಡೆ ಬರಬೇಕಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ನಾಯಕರಿಗೆ ISI ಜೊತೆ ಲಿಂಕ್‌ ಇದೆ – ಪಂಬಾಜ್‌ ಪೊಲೀಸರಿಂದ ಸ್ಫೋಟಕ ಮಾಹಿತಿ

  • ಇತಿಹಾಸದ ಪುಟ ತೆರೆದು ನೋಡಿದ್ರೆ ಉರಿಗೌಡ, ನಂಜೇಗೌಡನ ಹೆಸರಿದೆ: ಶೋಭಾ ಕರಂದ್ಲಾಜೆ

    ಇತಿಹಾಸದ ಪುಟ ತೆರೆದು ನೋಡಿದ್ರೆ ಉರಿಗೌಡ, ನಂಜೇಗೌಡನ ಹೆಸರಿದೆ: ಶೋಭಾ ಕರಂದ್ಲಾಜೆ

    ಬೆಂಗಳೂರು: ಹಿಂದೂಗಳನ್ನೆಲ್ಲ ಕೊಲ್ಲುವುದಕ್ಕೆ ಅಂತ ಟಿಪ್ಪು ಡ್ರಾಪ್ ಮಾಡಿದ್ರು. ಟಿಪ್ಪು ಡ್ರಾಪ್‍ನಲ್ಲಿ ಹಿಂದೂಗಳನ್ನೆಲ್ಲ ಕೊಲ್ಲಲಾಗುತಿತ್ತು. ರಸ್ತೆಗೆ, ಕಟ್ಟಡಕ್ಕೆಲ್ಲ ಗುಲಾಮಿತನದ ಹೆಸರಿಡಲಾಗಿದೆ. ಇತಿಹಾಸದ ಪುಟ ತೆರೆದು ನೋಡಿದ್ರೆ ಉರಿಗೌಡ-ನಂಜೇಗೌಡ (Uri Gowda- Nanje Gowda) ನ ಹೆಸರಿದೆ ಎಂದು ಹೇಳುವ ಮೂಲಕ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸಿನಿಮಾ ಟೈಟಲ್ ಉರಿತು ಸಮರ್ಥನೆ ಮಾಡಿಕೊಂಡರು.

    ಬಿಜೆಪಿ ಕಚೇರಿ (BJP Office) ಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ ನಡೆಸಿ ಅವರು ಮಾನಾಡಿದರು. ನಂಜೇಗೌಡ-ಉರಿಗೌಡ ಹೆಸರಿನಲ್ಲಿ ಬಿಜೆಪಿ ಸಿನಿಮಾ ಟೈಟಲ್ ಕುರಿತು ಮಾಜಿ ಸಿಎಂ ಎಚ್‍ಡಿಕೆ (HD Kumaraswamy) ವಿರೋಧ ವ್ಯಕ್ತಪಡಿಸಿದ್ದು, ಟಿಪ್ಪು ದೇಶದ್ರೋಹಿಯಾದರೂ ಅವರ ಹೆಸರು ಇಟ್ಟಿಲ್ವಾ..? ಎಂದು ಶೋಭಾ ತಿರುಗೇಟು ನೀಡಿದರು.

    ಇದು ಖಳನಾಯಕನ ಕೆಲಸ ಅಲ್ಲ. ಇವತ್ತು ಟಿಪ್ಪು ಬಗ್ಗೆ ಏಕೆ ಮಾತಾಡ್ತೀವಿ. ಟಿಪ್ಪು ದೇಶ ವಿರೋಧಿ, ಹಿಂದೂ ವಿರೋಧಿ, ಕನ್ನಡ ವಿರೋಧಿ ಆಗಿದ್ದ. ನಂದಿ ಬೆಟ್ಟಕ್ಕೆ ಹೋದ್ರೆ ಟಿಪ್ಪು ಡ್ರಾಪ್ ಇದೆ. ಅವರ ವಿರೋಧಿಗಳನ್ನ ಕೊಲ್ಲಲು ಟಿಪ್ಪು ಡ್ರಾಪ್ ಇದೆ, ಹಿಂದೂಗಳನ್ನ ಕೊಲ್ಲುತ್ತಿದ್ದ. ಮೈಸೂರು ಮಹಾರಾಜರ ಅನುಯಾಯಿಗಳಾಗಿ ಕೆಲಸ ಮಾಡಿದವರು ಉರಿಗೌಡ, ನಂಜೇಗೌಡ. ಅವರವರ ನೇರಕ್ಕೆ ಕೆಲವರು ಪುಸ್ತಕ ಬರೆಸಿಕೊಂಡಿದ್ದಾರೆ. ಇತಿಹಾಸ ತೆರೆದು ನೋಡಿದ್ರೆ ಉರಿಗೌಡ, ನಂಜೇಗೌಡ ಹೆಸರಿದೆ. ಅವರು ಮೈಸೂರು ಮಹಾರಾಜರ ಪರವಾಗಿ ಕೆಲಸ ಮಾಡುತ್ತಿದ್ದರು ಎಂದರು.

    ಟಿಪ್ಪುವನ್ನ ಕೊಲ್ಲುವ ಮೂಲಕ ಇಬ್ಬರು ಇತಿಹಾಸ ಪುಟ ಸೇರಿದ್ದಾರೆ. ಹೆಸರಿಡುವುದರಲ್ಲೂ ಗುಲಾಮಿತನ ಮಾಡಿದ್ದಾರೆ. ರಸ್ತೆಗೆ, ಕಟ್ಟಡಕ್ಕೆಲ್ಲ ಗುಲಾಮಿತನದ ಹೆಸರಿಡಲಾಗಿದೆ. ಟಿಪ್ಪು ಓಲೈಕೆ ಮಾಡ್ತಿದ್ದಾರೆ ಇವರು ಎಂದು ಹೇಳಿದರು. ಇದನ್ನೂ ಓದಿ: ಉರಿಗೌಡ, ನಂಜೇಗೌಡ ಟಿಪ್ಪುವನ್ನ ಕೊಂದಿರೋದು ಸತ್ಯ – ಸಿ.ಟಿ ರವಿ

    ಮೈಸೂರು-ಬೆಂಗಳೂರು ರಸ್ತೆಗೆ ಉರಿಗೌಡ, ನಂಜೇಗೌಡ ಮಹಾದ್ವಾರವನ್ನು ಹೈವೇ ಉದ್ಘಾಟನೆ ಕಾರ್ಯಕ್ರಮಕ್ಕೆ ಮಾತ್ರ ನಿರ್ಮಾಣ ಮಾಡಲಾಗಿತ್ತು. ಅದು ಪರ್ಮನೆಂಟ್ ಅಲ್ಲ, ಅದು ಶಾಶ್ವತ ದ್ವಾರ ಆಗಿರಲಿಲ್ಲ. ಬಾಲಗಂಗಾಧರನಾಥ ಶ್ರೀಗಳ ಮಹಾದ್ವಾರ ಈಗಲೂ ಇದೆ. ಮುಂದೆಯೂ ಇರುತ್ತೆ ಎಂದು ಇದೇ ವೇಳೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದರು.