Tag: union

  • ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಇನ್ನಿಲ್ಲ

    ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಇನ್ನಿಲ್ಲ

    ಹೈದರಾಬಾದ್: ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.

    ಇತ್ತೀಚೆಗೆ ನ್ಯೂಮೋನಿಯಾ ಎಂಬ ರೋಗದಿಂದ ಬಳಲುತ್ತಿದ್ದ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಮುಂಜಾನೆ 1.28ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ತಮ್ಮ 77 ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ.

    ಜೈಪಾಲ್ ರೆಡ್ಡಿ ಅವರು 1984 ರಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಇದರ ಜೊತೆಗೆ ಎರಡು ಬಾರಿ ರಾಜ್ಯಸಭೆಗೂ ಆಯ್ಕೆಯಾಗಿದ್ದರು. ಈ ಮೂಲಕ ಕಾಂಗ್ರೆಸ್ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ಪಡೆದಿದ್ದರು.

    ಜೈಪಾಲ್ ರೆಡ್ಡಿ ಅವರು ಐಕೆ ಗುಜ್ರಾಲ್ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಅವರು ನಗರ ಅಭಿವೃದ್ಧಿ ಮತ್ತು ಸಂಸ್ಕೃತಿಯಂತಹ ಖಾತೆಗಳಲ್ಲಿ ಸೇವೆ ಸಲ್ಲಿಸಿದ್ದರು.

  • ನಮ್ಮದು ಲಾಲಿಪಪ್ ಆದ್ರೆ, ನಿಮ್ಮದು ಬಾಂಬೆ ಮಿಠಾಯಿನಾ?: ಕೇಂದ್ರ ಬಜೆಟ್‍ಗೆ ಸಿಎಂ ವ್ಯಂಗ್ಯ

    ನಮ್ಮದು ಲಾಲಿಪಪ್ ಆದ್ರೆ, ನಿಮ್ಮದು ಬಾಂಬೆ ಮಿಠಾಯಿನಾ?: ಕೇಂದ್ರ ಬಜೆಟ್‍ಗೆ ಸಿಎಂ ವ್ಯಂಗ್ಯ

    -ತಾತ್ಕಾಲಿಕ ಖುಷಿ ಆದ್ರು ಸಿಗುತ್ತೆ ಅಂದ್ಕೊಂಡೆ, ಆದ್ರೆ ನಿರೀಕ್ಷೆ ಹುಸಿಯಾಗಿದೆ

    ಬೆಂಗಳೂರು: ಕೇಂದ್ರ ಸರ್ಕಾರ ಬಿಜೆಟ್ ಮೇಲೆ ನಾನು ಹೆಚ್ಚಿನ ನಿರೀಕ್ಷೆ ಹೊಂದಿದ್ದೆ. ಆದರೆ ಆ ನಿರೀಕ್ಷೆ ಹುಸಿಯಾಗಿದ್ದು, ನಮ್ಮ ಬಿಜೆಪಿ ನಾಯಕರು ರಾಜ್ಯಕ್ಕೆ ತಂದ ಕೊಡುಗೆ ಇದಾಗಿದೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಿದಾಗ ಬಿಜೆಪಿ ನಾಯಕರು ಅದನ್ನು ಲಾಲಿಪಪ್ ಎಂದರು. ಆದರೆ ಇಂದು 6 ಸಾವಿರ ಬಗ್ಗೆ ಅವರ ಅಭಿಪ್ರಾಯವೇನು? ಬಜೆಟ್‍ನಲ್ಲಿ ತಾತ್ಕಾಲಿಕ ಖುಷಿ ಆದ್ರು ಸಿಗುತ್ತೇ ಎಂಬ ಆಸೆ ಇತ್ತು. ಆದರೆ ನನ್ನ ಮೇಲೆ ಹಾಕಿದ ಒತ್ತಡವೂ ವ್ಯಕ್ತವಾಗಿದೆ. ಏಕೆಂದರೆ ನಗರ ಉಪನಗರ ರೈಲ್ವೇಗೆ ಒಪ್ಪಿಗೆ ಸಿಗುತ್ತೇ ಎಂಬ ಆಶ್ವಾಸನೆ ನೀಡಿದ್ದರು. ಆದರೆ ಅದಕ್ಕೂ ಅನುಮತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಕೇಂದ್ರ ಕಳೆದ 5 ಬಜೆಟ್‍ಗಳು ಕೂಡ ಸಾರ್ವಜನಿಕ ನಿರೀಕ್ಷೆಗೆ ಅನುಗುಣವಾಗಿ ಇರಲಿಲ್ಲ. ಈ ಬಾರಿ ಮುಂದಿನ ಚುನಾವಣೆಯಲ್ಲಿ ಮತ ಪಡೆಯಲಾದ್ರು ಜನರಿಗೆ ತಾತ್ಕಾಲಿಕ ಖುಷಿ ನೀಡವ ಯೋಜನೆ ಬರುತ್ತೆ ಎಂಬ ನಿರೀಕ್ಷೆ ಇತ್ತು. ಆದರೆ ಬಜೆಟ್ ಹಣಕಾಸು ಇಲಾಖೆ ಅವರು ಮಾಡಿದ್ದಾರೋ ಅಥವಾ ಆರ್ ಎಸ್‍ಎಸ್, ಬಿಜೆಪಿ ಕೇಂದ್ರ ಕಚೇರಿ ಅವರು ಮಾಡಿದಂತೆ ಇದೆ ಎಂದರು.

    ಕಳೆದ 5 ವರ್ಷಗಳಿಂದ ಆದಾಯ ಮಿತಿ ಹೆಚ್ಚಳ ಆಗಿರಲಿಲ್ಲ. ಅದು ಈ ವರ್ಷ ಮಾಡಿದ್ದಾರೆ ಅಷ್ಟೇ ಎಂದರು. ಅಲ್ಲದೇ ರೈತರಿಗೆ 6 ಸಾವಿರ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಎಕರೆಗೆ 1,200 ರೂ.ಬರುತ್ತೆ, ಇದು ರೈತರಿಗೆ ತೀರಾ ಕಡಿಮೆ. ಆರು ಸಾವಿರದಿಂದ 75 ಸಾವಿರ ಕೋಟಿ ರೂ. ಖರ್ಚಾಗುತ್ತಿದೆ. ಅದರಲ್ಲಿ ಕರ್ನಾಟಕ ರೈತರಿಗೆ ಸುಮಾರು 3,579 ಕೋಟಿ ಲಾಭ ಆಗಬಹುದು ಎಂದು ಅಭಿಪ್ರಾಯ ಪಟ್ಟರು.

    ರೈತ ಮುಖಂಡರು ಹಾಗೂ ಆರ್ಥಿಕ ತಜ್ಞರು ಬಜೆಟ್ ಸರಿ ಇಲ್ಲ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ರೈತನಿಗೆ 48 ಸಾವಿರ ಕೋಟಿ ರೂ. ಸಾಲಮನ್ನಾ ಮಾಡುತ್ತಿದ್ದೇವೆ. ಇದರಿಂದ 44 ಲಕ್ಷ ರೈತರಿಗೆ ಸಾಲಮನ್ನಾ ಆಗುತ್ತಿದೆ. ಆದರೆ ರೈತರಿಗೆ 2% ಬಡ್ಡಿ ವಿನಾಯ್ತಿ ಎಂದು ಕೇಂದ್ರ ಕ್ರಮ ಬರಿ ಬೋಗಸ್ ಅಷ್ಟೇ. ನಮ್ಮದು ಲಾಲಿ ಪಪ್ ಅಂದರೆ ಮೋದಿ ಬಜೆಟ್ ಬೊಂಬೆ ಮಿಠಾಯಿ ಬಜೆಟ್ ಎನ್ನಬಹುದಾ? ಎಂದು ಟಾಂಗ್ ಕೊಟ್ಟರು. ಅಲ್ಲದೇ 11 ಸಾವಿರ ಕೋಟಿ ರೂ. ಮೊತ್ತದಲ್ಲಿ ರೈತರಿಗೆ ವಿದ್ಯುತ್ ಸಬ್ಸಿಡಿಯನ್ನು ರಾಜ್ಯ ಸರ್ಕಾರ ಕೊಡುತ್ತಿದೆ. ಆದರೆ ಹಾಲಿನ ಸಬ್ಸಿಡಿ 1,200 ಕೋಟಿ ರೂ. ನೀಡುತ್ತಿದ್ದೆ. ಇದನ್ನ ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು. ಬರಗಾಲ ಇದ್ದರು ನಮ್ಮ ಸರ್ಕಾರ ರೈತರ ಪರವಾಗಿ ಕೆಲಸ ಮಾಡಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನಾವು ಮುಂದೆ ಮುಂದೆ ಸಾಗುತ್ತೇವೆ, ನೀವೂ ಜೊತೆಗೆ ಬನ್ನಿ ಅಂತಾ ಕವಿತೆ ಹೇಳಿದ್ರು ಜೇಟ್ಲಿ!

    ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಕೇಂದ್ರ ಬಜೆಟ್ ಮಂಡನೆ ಮಾಡಿದ ಭಾಷಣದಲ್ಲಿ ಕವಿತೆಗಳನ್ನೂ ಸೇರಿಸಿಕೊಂಡಿದ್ದರು. ಕೆಲವು ಕವನಗಳನ್ನು ಬಳಸಿ ವಿಪಕ್ಷಗಳನ್ನು ಕಾಲೆಳೆದ ಪ್ರಸಂಗವೂ ನಡೆಯಿತು.

    ನೋಟ್ ಬ್ಯಾನ್ ಹಾಗೂ ಡಿಜಿಟಲ್ ಪೇಮೆಂಟ್ ಬಗ್ಗೆ ಬಜೆಟ್‍ನಲ್ಲಿ ಉಲ್ಲೇಖಿಸಿದ ಜೇಟ್ಲಿ, ಹಿಂದಿ ಕವನದ ಸಾಲುಗಳನ್ನು ವಾಚಿಸಿದಾಗ ಲೋಕಸಭಾ ಸದಸ್ಯರು ಕರತಾಡನದೊಂದಿಗೆ ಮೆಚ್ಚುಗೆ ಸೂಚಿಸಿದರು.

    ಇಸ್ ಮೋಡ್ ಪರ್ ಗಬರಾಕರ್ ಥಮ್ ಜಾಯಿಯೇ ಆಪ್| ಜೋ ಬಾತ್ ನಯೀ ಹೈ ಉಸೇ ಅಪ್‍ನಾಯಿಯೇ ಆಪ್| ಡರ್‍ತೇ ಹೈ ನಯೀ ರಾಹ್ ಪೇ ಕ್ಯೂ ಚಲ್ ನೇ ಸೇ| ಹಮ್ ಆಗೇ ಆಗೇ ಚಲ್ತೇ ಹೈ, ಆಯಿಯೇ ಆಪ್
    (ಅರ್ಥ: ನೀವು ಇಂಥಾ ಪರಿಸ್ಥಿತಿ ಬಂದಾಗ ಹೆದರಬೇಡಿ, ಹೊಸತನ್ನು ನೀವು ನಿಮ್ಮದಾಗಿಸಿಕೊಳ್ಳಿ. ಹೊಸ ದಾರಿಯಲ್ಲಿ ನಡೆಯಲು ನಿಮಗೆ ಹೆದರಿಕೆ ಏಕೆ, ನಾವು ಮುಂದೆ ಮುಂದೆ ಸಾಗುತ್ತೇವೆ, ನೀವೂ ನಮ್ಮ ಜೊತೆಗೆ ಬನ್ನಿ)

    ಈ ಸಾಲುಗಳು ನೋಟು ರದ್ದತಿ ನಿರ್ಧಾರವನ್ನು ವಿರೋಧಿಸಿದ ವಿಪಕ್ಷಗಳಿಗೆ ಟಾಂಗ್ ಕೊಟ್ಟಂತಿತ್ತು.

    ಇದಾದ ಬಳಿಕ ಬಜೆಟಲ್ಲಿ ತೆರಿಗೆ ಬಗ್ಗೆ ಪ್ರಸ್ತಾಪಿಸುತ್ತಾ ಮತ್ತೊಂದು ಕವಿತೆಯನ್ನು ಜೇಟ್ಲಿ ಹೇಳಿದರು.

    ನಯೀ ದುನಿಯಾ ಹೈ, ನಯಾ ದೌರ್ ಹೈ, ನಯೀ ಹೈ ಉಮಂಗ್| ಕುಚ್ ಥೆ ಪೆಹಲೇ ಕೆ ತರೀಕೆ, ತೋ ಕುಚ್ ಹೈ ಆಜ್ ಕೆ ಡಂಗ್ | ರೋಶನಿ ಆಕೆ ಅಂಧೇರೋಂ ಸೇ ಜೊ ಟಕರಾಯೀ ಹೈ| ಕಾಲೇ ಧನ್ ಕೋ ಭೀ ಬದಲ್ನಾ ಪಡಾ, ಆಜ್ ಅಪ್‍ನಾ ರಂಗ್||

    (ಅರ್ಥ: ಇದೊಂದು ಹೊಸ ಲೋಕ, ಹೊಸ ನಡೆ, ಹೊಸ ಉತ್ಸಾಹ. ಕೆಲವು ಹಳೇ ರೀತಿಗಳಿದ್ದವು, ಇನ್ನು ಕೆಲವು ಈಗಿನ ಹೊಸ ರೀತಿಗಳಾಗಿವೆ. ಹೊಸ ಬೆಳಕೊಂದು ಬಂದು ಕತ್ತಲನ್ನು ಬಡಿದಾಗ, ಕಪ್ಪು ಹಣಕ್ಕೂ ಕೂಡಾ ತನ್ನ ಬಣ್ಣ ಬದಲಾಯಿಸಬೇಕಾಗಿ ಬಂತು).

    2017ರ ಬಜೆಟ್‍ನಲ್ಲಿ 2 ಬಾರಿ ಕವನ ವಾಚಿಸಿದ ಅರುಣ್ ಜೇಟ್ಲಿ ಈ ರೀತಿ ಕವನ ವಾಚನ ಮಾಡಿದ್ದು ಇದೇ ಮೊದಲೇನೂ ಅಲ್ಲ. ಕಳೆದ ವರ್ಷ ಬಜೆಟ್ ಭಾಷಣ ಮಾಡುವಾಗಲೂ ಅವರು ಕವನ ವಾಚನ ಮಾಡಿದ್ದರು.

  • ಅಂಕಿ ಸಂಖ್ಯೆಯಲ್ಲಿ ಬಜೆಟ್: ರೂಪಾಯಿ ಬಂದಿದ್ದು ಎಲ್ಲಿಂದ? ಹೋಗಿದ್ದು ಎಲ್ಲಿಗೆ?

    ನವದೆಹಲಿ: 21.47 ಲಕ್ಷ ಕೋಟಿ ರೂ. ಅಂದಾಜು ವೆಚ್ಚದ ವೆಚ್ಚದ ಬಜೆಟ್ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ. ಹೀಗಾಗಿ ಇಲ್ಲಿ ಬಜೆಟ್‍ಗೆ ಸಂಬಂಧಿಸಿದ ಅಂಕಿ ಸಂಖ್ಯೆಯ ಮಾಹಿತಿಯನ್ನು ನೀಡಲಾಗಿದೆ.

    2017-18ರ ಬಜೆಟ್ ಅಂದಾಜು ಯಾವುದು ಎಷ್ಟು?
    ಆದಾಯ ಸ್ವೀಕೃತಿಗಳು – 15,15,771 ಕೋಟಿ ರೂ.
    ಬಂಡವಾಳ ಸ್ವೀಕೃತಿಗಳು – 6,30,964 ಕೋಟಿ ರೂ.
    ಒಟ್ಟು ಸ್ವೀಕೃತಿಗಳು – 21,46,735 ಕೋಟಿ ರೂ.
    ಯೋಜನಾ ವೆಚ್ಚ – 9,45,078 ಕೋಟಿ ರೂ.
    ಯೋಜನೇತರ ವೆಚ್ಚ – 21,46,735 ಕೋಟಿ ರೂ.
    ಒಟ್ಟು ವೆಚ್ಚ – 21,46,735 ಕೋಟಿ ರೂ.
    ಆದಾಯ ಕೊರತೆ – 3,21,163 ಕೋಟಿ ರೂ.
    ವಿತ್ತೀಯ ಕೊರತೆ – 5,46,532 ಕೋಟಿರೂ.
    ಪ್ರಾಥಮಿಕ ಕೊರತೆ – 23,454 ಕೋಟಿ ರೂ.

    ರೂಪಾಯಿ ಬಂದಿದ್ದು ಎಲ್ಲಿಂದ..?
    ಸಾಲ ಮತ್ತು ಇತರ ಹೊಣೆ – 19 ಪೈಸೆ
    ಕಾರ್ಪೊರೇಟ್ ತೆರಿಗೆ – 19 ಪೈಸೆ
    ಆದಾಯ ತೆರಿಗೆ – 16 ಪೈಸೆ
    ಸೀಮಾ ಸುಂಕ – 9 ಪೈಸೆ
    ಕೇಂದ್ರ ಮತ್ತು ಅಬಕಾರಿ ತೆರಿಗೆ – 14 ಪೈಸೆ
    ಸೇವಾ ಮತ್ತು ಇತರ ತೆರಿಗೆ – 10 ಪೈಸೆ
    ತೆರಿಗೆಯೇತರ ವರಮಾನ – 10 ಪೈಸೆ
    ಸಾಲ ಪತ್ರಯೇತರ ವರಮಾನ – 3 ಪೈಸೆ

    ರೂಪಾಯಿ ಹೋಗಿದ್ದು ಎಲ್ಲಿಗೆ..?
    ಕೇಂದ್ರೀಯ ಯೋಜನೆ – 11 ಪೈಸೆ
    ಬಡ್ಡಿ ಪಾವತಿ – 18 ಪೈಸೆ
    ರಕ್ಷಣೆ – 9 ಪೈಸೆ
    ಸಬ್ಸಿಡಿ – 10 ಪೈಸೆ
    ಯೋಜನೇತರ ವೆಚ್ಚಗಳು – 5 ಪೈಸೆ
    ತೆರಿಗೆಯಲ್ಲಿ ರಾಜ್ಯಗಳ ಪಾಲು – 24 ಪೈಸೆ
    ರಾಜ್ಯಗಳಿಗೆ ಯೋಜನೇತರ ನೆರವು – 13 ಪೈಸೆ
    ರಾಜ್ಯಗಳಿಗೆ ಯೋಜನಾ ನೆರವು – 10 ಪೈಸೆ