Tag: umesh jadhav

  • ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ್ದಕ್ಕೆ ಜಾಧವ್ ಮಗಳು ಫೇಲ್: ಸಿದ್ದರಾಮಯ್ಯ

    ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ್ದಕ್ಕೆ ಜಾಧವ್ ಮಗಳು ಫೇಲ್: ಸಿದ್ದರಾಮಯ್ಯ

    ಕಲಬುರಗಿ: ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ್ದಕ್ಕೆ ಜಾಧವ್ ಮಗಳು ಫೇಲ್ ಆಗಿದ್ದಾಳೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

    ಮಗಳು ಪಿಯುಸಿ ಫೇಲ್ ಆಗಲು ಕಾಂಗ್ರೆಸ್ ಕಾರಣ ಎಂದಿದ್ದ ಜಾಧವ್ ಹೇಳಿಕೆಗೆ ಚಿಂಚೋಳಿಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಜಾಧವ್ ತಮ್ಮ ಮಗಳು ಫೇಲ್ ಆಗಿದ್ದಕ್ಕೆ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇದನ್ನು ಕೇಳಿ ನನಗೆ ಆಶ್ವರ್ಯವಾಯಿತು. ಜಾಧವ್ ಮಾತು ಜೋಕ್ ಆಫ್ ದಿ ಈಯರ್. ಕಾಂಗ್ರೆಸ್ ಬಿಟ್ಟು ತಂದೆ ಬಿಜೆಪಿಗೆ ಹೋಗಿದ್ದಕ್ಕೆ ನೊಂದು ಅವರ ಮಗಳು ಫೇಲಾಗಿದ್ದಾಳೆ. ಅನುಕಂಪ ಬರಲಿ ಅಂತ ಜಾಧವ್ ಆ ರೀತಿ ಹೇಳಿರಬಹುದು. ಆದರೆ ಇದಕ್ಕೆ ಅನುಕಂಪ ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

    ನಾನು ನಮ್ಮಪ್ಪನ ಹಣದಿಂದ ಸಾಲಮನ್ನಾ ಮಾಡಿರಲಿಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲಿದಾಗೆ ಜನರ ದುಡ್ಡನ್ನು ಅವರಿಗೆ ಕೊಟ್ಟಿದ್ದೇವೆ. ಅದು ಸಾರ್ವಜನಿಕರ ಹಣವಾಗಿದೆ. ರೈತರು ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಕಷ್ಟದಲ್ಲಿದ್ದಾಗ ಅವರ ಹಣದಿಂದಲೇ ಸಾಲಮನ್ನಾ ಮಾಡಿದ್ದೇವೆ ಎಂದರು.

    ಜಾಧವ್ ಹೇಳಿದ್ದೇನು?
    ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಉಮೇಶ್ ಜಾಧವ್, ರಾಜಕೀಯ ಗೊಂದಲ ಶುರುವಾಗುವ ಮೊದಲೇ ಪ್ರಿಯಾಂಕ್ ಖರ್ಗೆ ಅವರು ಡಾ.ಉಮೇಶ್ ಜಾಧವ್ ಅವರನ್ನು ಕಾಂಗ್ರೆಸ್ಸಿನಿಂದ ಓಡಿಸಬೇಕು ಎಂದು ಹುನ್ನಾರ ಮಾಡಿಕೊಂಡಿದ್ದರು. ಹಣ ತೆಗೆದುಕೊಂಡಿದ್ದೇನೆ ಎಂದು ದಿನವೂ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ನನ್ನ ಮಗಳು ಪಿಯುಸಿ ಪರೀಕ್ಷೆ ಬರೆಯಲು ಹೋದಾಗ ಶಿಕ್ಷಕರೊಬ್ಬರು, ಇವರ ಅಪ್ಪ ಮಾರಾಟವಾಗಿದ್ದಾನೆ ಎಂದು ಹೇಳಿದ್ದರು. ಇದರಿಂದ ನೊಂದ ಮಗಳು ಪರೀಕ್ಷೆ ಬರೆಯದೇ ಅಳುತ್ತಾ ಮನೆಗೆ ಬಂದು ಮಾತ್ರೆ ಸೇವಿಸಿ ಆತ್ಮಹತ್ಯೆಗೂ ಮುಂದಾಗಿದ್ದಳು. ಹೀಗಾಗಿ ಕಾಂಗ್ರೆಸ್ ಆರೋಪದಿಂದ ನನ್ನ ಮಗಳು ಫೇಲಾಗಿದ್ದಾಳೆ ಎಂದು ಉಮೇಶ್ ಜಾಧವ್ ಆರೋಪಿಸಿದ್ದರು.

  • ಮಗಳು ಪಿಯುಸಿಯಲ್ಲಿ ಫೇಲ್ ಆದ ಕಾರಣ ಬಿಚ್ಚಿಟ್ರು ಉಮೇಶ್ ಜಾಧವ್

    ಮಗಳು ಪಿಯುಸಿಯಲ್ಲಿ ಫೇಲ್ ಆದ ಕಾರಣ ಬಿಚ್ಚಿಟ್ರು ಉಮೇಶ್ ಜಾಧವ್

    ಯಾದಗಿರಿ: ನನ್ನ ಕಿರಿಯ ಮಗಳು ದ್ವಿತೀಯ ಪರೀಕ್ಷೆಯಲ್ಲಿ ಅನುತ್ತೀರ್ಣ ವಾಗಲೂ ಕಾಂಗ್ರೆಸ್ ಅವರೇ ಕಾರಣ ಎಂದು ಡಾ.ಉಮೇಶ್ ಜಾಧವ್ ಕೈ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಮೇಶ್ ಜಾಧವ್, ರಾಜಕೀಯ ಗೊಂದಲ ಶುರುವಾಗುವ ಮೊದಲೇ ಪ್ರಿಯಾಂಕ್ ಖರ್ಗೆ ಅವರು ಡಾ.ಉಮೇಶ್ ಜಾಧವ್ ಅವರನ್ನು ಕಾಂಗ್ರೆಸ್ಸಿನಿಂದ ಓಡಿಸಬೇಕು ಎಂದು ಹುನ್ನಾರ ಮಾಡಿಕೊಂಡಿದ್ದರು. ನನ್ನ ಮಗನ ಮದುವೆ ವೇಳೆ ಪ್ರಿಯಾಂಕ್ ಖರ್ಗೆಯ ಆಪ್ತರು ಮನೆಗೆ ಬಂದು ಗಲಾಟೆ ಮಾಡಿದ್ದರು. ಇದನ್ನು ಕಂಡು ನಮ್ಮ ಮನೆಯಲ್ಲಿದ್ದ ಬೀಗರು ಅಂದೇ ಅವರ ಊರಿಗೆ ಮರಳಿದ್ದರು ಎಂದು ತಿಳಿಸಿದ್ದಾರೆ.

    ಹಣ ತೆಗೆದುಕೊಂಡಿದ್ದೇನೆ ಎಂದು ದಿನವೂ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ನನ್ನ ಮಗಳು ಪಿಯುಸಿ ಪರೀಕ್ಷೆ ಬರೆಯಲು ಹೋದಾಗ ಶಿಕ್ಷಕರೊಬ್ಬರು, ಇವರ ಅಪ್ಪ ಮಾರಾಟವಾಗಿದ್ದಾನೆ ಎಂದು ಹೇಳಿದ್ದಾರೆ. ಇದರಿಂದ ನೊಂದ ಮಗಳು ಪರೀಕ್ಷೆ ಬರೆಯದೇ ಅಳುತ್ತಾ ಮನೆಗೆ ಬಂದು ಮಾತ್ರೆ ಸೇವಿಸಿ ಆತ್ಮಹತ್ಯೆಗೂ ಮುಂದಾಗಿದ್ದಳು. ತಕ್ಷಣ ನನ್ನ ಪತ್ನಿ ನೋಡಿ ಆಕೆಯನ್ನು ಬದುಕಿಸಿದ್ದೇವೆ ಎಂದು ಉಮೇಶ್ ಜಾಧವ್ ಆರೋಪಿಸಿದ್ದಾರೆ.

    ಸಂಸದ ಸ್ಥಾನದ ಚುನಾವಣೆಯಿಂದಲೂ ನನ್ನ ಮೇಲೆ ಕಾಂಗ್ರೆಸ್ ನಾಯಕರು ವೈಯಕ್ತಿಕ ಆರೋಪ ಮಾಡುತ್ತಾ ಬಂದಿದ್ದಾರೆ. ನನ್ನ ಮೇಲೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿರುವ ಸಲುವಾಗಿ ನನ್ನ ಕುಟುಂಬಸ್ಥರು ಮಾನಸಿಕವಾಗಿ ಕುಗ್ಗಿದ್ದಾರೆ. ನಾನು ಹಣ ತೆಗೆದುಕೊಂಡಿದ್ದೇನೆಂದು ನನ್ನ ಮಗಳ ಕಾಲೇಜಿನಲ್ಲಿ ಅವಳಿಗೆ ಅವಮಾನ ಮಾಡಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡದೆ ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಜಾಧವ್ ಆಕ್ರೋಶಗೊಂಡಿದ್ದಾರೆ.

  • 2 ಎತ್ತುಗಳು ಯಾವ ಸಂತೆಯಲ್ಲೂ ಮಾರಾಟವಾಗಲ್ಲ- ಪ್ರಿಯಾಂಕ್ ಖರ್ಗೆ

    2 ಎತ್ತುಗಳು ಯಾವ ಸಂತೆಯಲ್ಲೂ ಮಾರಾಟವಾಗಲ್ಲ- ಪ್ರಿಯಾಂಕ್ ಖರ್ಗೆ

    ಕಲಬುರಗಿ: ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್ ಹಾಗೂ ಉಮೇಶ್ ಜಾಧವ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

    ಚಿಂಚೋಳಿಯ ಚೆಂಗಟಾ ಗ್ರಾಮದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಲೀಕಯ್ಯ ಹಾಗೂ ಬಾಬುರಾವ್ ಚಿಂಚನಸೂರ್ ಜೋಡೆತ್ತು ಅಲ್ಲ. ಅವರು ಕಳ್ಳೆತ್ತುಗಳು. ಈ ಎರಡು ಎತ್ತುಗಳನ್ನು ಯಾವ ಸಂತೆಯಲ್ಲಿ ಮಾರಾಟ ಮಾಡಲು ಹೋದರೂ ಅವುಗಳು ಮಾರಾಟವಾಗಲ್ಲ ಎಂದು ಲೇವಡಿ ಮಾಡಿದ್ದಾರೆ.

    ಈ ಎತ್ತುಗಳು ತಮ್ಮ ಜಮೀನಿನಲ್ಲಿ ಮೇಯೋದಿಲ್ಲ. ಅವು ಬರೀ ಬೇರೆಯವರ ಜಮೀನಿನಲ್ಲಿ ಮೇಯೋದೇ ಕಾಯಕವಾಗಿದೆ. ಇವರಿಬ್ಬರು ಜೊಡೆತ್ತುಗಳಂತೆ ಕೆಲಸ ಮಾಡಿ ಖರ್ಗೆಯನ್ನು ಸೋಲಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಇಂತಹ ಸೋತ ಎತ್ತುಗಳು ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

    ಇನ್ನು ಇತ್ತೀಚೆಗೆ ಬಿಜೆಪಿ ಸೇರಿರುವ ಜಾಧವ್ ವಿರುದ್ಧವೂ ವಾಗ್ದಾಳಿ ನಡೆಸಿದ ಸಚಿವರು, ಜಾಧವ್ ಅವರ ತಂದೆ ಮೋದಿ ಜೊತೆ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವ ಧೈರ್ಯ ಇರೋದು ಮಲ್ಲಿಕಾರ್ಜುನ ಖರ್ಗೆಯವರಿಗೆ ಮಾತ್ರ ಎಂದರು.

  • ಅಮ್ಮಾ ನಾ ಸೇಲ್ ಆದೆ, 50 ಕೋಟಿಗೆ ಸೇಲ್ ಆದೆ: ಜಾಧವ್‍ಗೆ ಸೋಮಶೇಖರ್ ಟಾಂಗ್

    ಅಮ್ಮಾ ನಾ ಸೇಲ್ ಆದೆ, 50 ಕೋಟಿಗೆ ಸೇಲ್ ಆದೆ: ಜಾಧವ್‍ಗೆ ಸೋಮಶೇಖರ್ ಟಾಂಗ್

    ಕಲಬುರಗಿ: ಅಮ್ಮಾ ನಾ ಸೇಲ್ ಆದೆ, ಅಪ್ಪಾ ನಾ ಸೇಲ್ ಆದೆ 50 ಕೋಟಿಗೆ ಸೇಲ್ ಆದೆ ಎಂದು ಶಾಸಕ ಎಸ್.ಟಿ.ಸೋಮಶೇಖರ್, ಹಾಡುವ ಮೂಲಕ ಬಿಜೆಪಿ ಮುಖಂಡ ಉಮೇಶ್ ಜಾಧವ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಚಿಂಚೋಳಿ ವಿಧಾನಸಭಾ ಕ್ಷೇತ್ರದ ಚೆಂಗಟಾದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಶಾಸಕರು, ಉಮೇಶ್ ಜಾಧವ್ ಅವರಿಗೆ ತಾಯಿ ಟಿವಿಯಲ್ಲಿ ಮಾರಾಟ ಅಂತ ಬರತ್ತಿದೆ ಏನಾಗಿದೆ ಎಂದು ಕೇಳುತ್ತಾರೆ. ಇದಕ್ಕೆ ಉತ್ತರ ಕೊಡಲು ಆಗದ ಉಮೇಶ್ ಜಾಧವ್ ಅವರು ಹಾಡಿನ ಮೂಲಕ ಅಮ್ಮಾ ನಾ ಸೇಲ್ ಆದೆ. 50 ಕೋಟಿ ರೂ.ಗೆ ಸೇಲ್ ಆದೆ ಅಂತ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಉಮೇಶ್ ಜಾಧವ್ ಗೋಮುಖ ವ್ಯಾಘ್ರ: ದಿನೇಶ್ ಗುಂಡೂರಾವ್

    ನಾನು ಸೇಲ್ ಆಗಿದ್ದೇನೆ ಎನ್ನುವ ಬೋರ್ಡ್ ಹಾಕಿಕೊಂಡು ಮನೆಗೆ ಹೋಗುವ ಸನ್ನಿವೇಶ ಉಮೇಶ್ ಜಾಧವ್ ಅವರಿಗೆ ಎದುರಾಗಿದೆ. ಈಗ ಮಗ ಅವಿನಾಶ್ ಜಾಧವ್ ಅವರನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಅಣ್ಣನಿಗೆ ಟಿಕೆಟ್ ತಪ್ಪಿಸಿ ಮಗನಿಗೆ ಕೊಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಈ ಹಿಂದೆ ಅನೇಕ ಶಾಸಕರು ಮತ್ತೊಂದು ಪಕ್ಷಕ್ಕೆ ಮಾರಾಟವಾಗಿ, ಉಪ ಚುನಾವಣೆಯಲ್ಲಿ ಸೋತರು. ಹೀಗಾಗಿ ಚಿಂಚೋಳಿ ವಿಧಾನಸಭಾ ಉಪ ಚುನಾವಣೆಯಲ್ಲಿ ಉಮೇಶ್ ಜಾಧವ್ ಅವರ ಪುತ್ರ ಗೆಲುವು ಸಾಧಿಸಲ್ಲ ಎನ್ನುವ ಭರವಸೆಯಿದೆ ಎಂದು ಹೇಳಿದರು.

  • ಉಮೇಶ್ ಜಾಧವ್ ಗೋಮುಖ ವ್ಯಾಘ್ರ: ದಿನೇಶ್ ಗುಂಡೂರಾವ್

    ಉಮೇಶ್ ಜಾಧವ್ ಗೋಮುಖ ವ್ಯಾಘ್ರ: ದಿನೇಶ್ ಗುಂಡೂರಾವ್

    – ಯತ್ನಾಳ್ ಒಂದು ರೀತಿ ಜೋಕರ್

    ಕಲಬುರಗಿ: ಬಿಜೆಪಿ ಮುಖಂಡ ಉಮೇಶ್ ಜಾಧವ್ ಓರ್ವ ಗೋಮುಖ ವ್ಯಾಘ್ರ. ಅವನಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

    ಚಿಂಚೋಳಿಯ ರಟಕಲ್ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಉಮೇಶ್ ಜಾಧವ್ ಅವರನ್ನು ಹೀಗೆ ವರ್ಣನೆ ಮಾಡಬೇಕು. ಪಕ್ಷ ಎಲ್ಲವನ್ನೂ ಅವರಿಗೆ ಕೊಟ್ಟಿದೆ. ಆದರೆ ಅನಾವಶ್ಯಕವಾಗಿ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಆರೋಪ ಮಾಡಿ, ಹಣದಾಸೆಗೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದರು ಎಂದು ಕಿಡಿಕಾರಿದರು.

    ಬಳಿಕ ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬೇಕು ಎನ್ನುವ ಏಕೈಕ ಗುರಿ ಇಟ್ಟುಕೊಂಡಿದ್ದಾರೆ. ಅದಕ್ಕಾಗಿ ಎಲ್ಲಾ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಅವರಿಗೆ ರಾಜ್ಯದ ಅಭಿವೃದ್ಧಿಗಿಂತ ಪಕ್ಷದ ಸ್ವಾರ್ಥವೇ ಮುಖ್ಯವಾಗಿದೆ. ಡೋಂಗಿತನ ಬಿಟ್ಟು ನಿಜವಾದ ನಾಯಕರಾಗಿ ಕೆಲಸ ಮಾಡಿ ಯಡಿಯೂರಪ್ಪನವರೇ ಎಂದು ಹೇಳಿದರು.

    ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಮನಸಿನಲ್ಲಿ ಒಳ್ಳೆಯ ವಿಚಾರ ಇವೆಯೋ, ಇಲ್ಲವೋ ಗೊತ್ತಿಲ್ಲ. ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ. ಅವರು ಮಹಿಳೆಯರ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿದರೂ ಬಿಜೆಪಿ ನಾಯಕರು ಅವರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಕೆ.ಎಸ್.ಈಶ್ವರಪ್ಪ ಅವರು ರಾಜಕಾರಣಿ ಆಗಲು ಯೋಗ್ಯರಲ್ಲ. ಬಿಜೆಪಿಗೆ ನೈತಿಕತೆ ಇದ್ದರೆ ಈಶ್ವರಪ್ಪನವರ ಬಾಯಿ ಮುಚ್ಚಿಸಬೇಕು. ಆಗದಿದ್ದರೆ ಭಾರತ್ ಮಾತಾಕಿ ಜೈ ಎನ್ನುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.

    ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಭ್ರಮೆಯಲ್ಲಿ ಇದ್ದಾರೆ. ಮುಖ್ಯಮಂತ್ರಿ ಸ್ಥಾನ ಈಗ ಖಾಲಿಯಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತದೆ ಎನ್ನುವುದು ಸುಳ್ಳು ಆರೋಪ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರಾಧ್ಯನತೆ ನೀಡಲಾಗುತ್ತಿದೆ. ಯತ್ನಾಳ್ ಅವರು ಒಂದು ರೀತಿಯ ಜೋಕರ್ ಆಗಿದ್ದಾರೆ ಎಂದು ತಿರುಗೇಟು ನೀಡಿದರು.

  • ಚಿಂಚೋಳಿ ಉಪಕದನ: ಕೈ, ಬಿಜೆಪಿ ಅಭ್ಯರ್ಥಿಗಳು ಪ್ಲಸ್, ಮೈನಸ್ ಏನು? 2018ರ ಫಲಿತಾಂಶ ಏನಾಗಿತ್ತು?

    ಚಿಂಚೋಳಿ ಉಪಕದನ: ಕೈ, ಬಿಜೆಪಿ ಅಭ್ಯರ್ಥಿಗಳು ಪ್ಲಸ್, ಮೈನಸ್ ಏನು? 2018ರ ಫಲಿತಾಂಶ ಏನಾಗಿತ್ತು?

    ಬೆಂಗಳೂರು: ಕುಂದಗೋಳ ಉಪ ಚುನಾವಣೆ ಜೊತೆಗೆ ಚಿಂಚೋಳಿಯಲ್ಲಿಯೂ ಬೈ ಎಲೆಕ್ಷನ್ ನಡೆಯುತ್ತಿದೆ. ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮೇ 19ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಉಮೇಶ್ ಜಾಧವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಉಮೇಶ್ ಜಾಧವ್ ಅವರನ್ನೇ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿಸಿತ್ತು.

    ಬಿಜೆಪಿಯಿಂದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಕಣದಲ್ಲಿದ್ದಾರೆ. ಇತ್ತ ಕಾಂಗ್ರೆಸ್‍ನಿಂದ ಸುಭಾಷ್ ರಾಠೋಡ್ ಚುನಾವಣಾ ಅಖಾಡಕ್ಕೆ ಧುಮಿಕಿದ್ದಾರೆ. ಚಿಂಚೋಳಿಯಲ್ಲಿ ಅವಿನಾಶ್ ಜಾಧವ್ ಕೇವಲ ಹೆಸರಿಗೆ ಸ್ಪರ್ಧೆ ಮಾಡಿದಂತಾಗಿದ್ದು, ತಂದೆ ಉಮೇಶ್ ಜಾಧವ್ ಮಗನ ಪರವಾಗಿ ಕಾಲಿಗೆ ಚಕ್ರಕಟ್ಟಿಕೊಂಡಂತೆ ಕ್ಷೇತ್ರದ ತುಂಬೆಲ್ಲಾ ತಿರುಗಾಡುತ್ತಿದ್ದಾರೆ.

    ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಕುಟುಂಬ ರಾಜಕಾರಣ ವಿರೋಧಿಸಿ ಕಾಂಗ್ರೆಸ್ ತೊರೆದ ಉಮೇಶ್ ಜಾಧವ್, ಇದೀಗ ಪುತ್ರನಿಗೆ ಬಿಜೆಪಿ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಅವಿನಾಶ್ ಜಾಧವ್‍ಗೆ ಟಿಕೆಟ್ ನೀಡಿದ ಬೆನ್ನಲ್ಲೇ ಬಿಜೆಪಿ ಸ್ಥಳೀಯ ಹಿರಿಯ ಮುಖಂಡ ಸುನಿಲ್ ವಲ್ಯಾಪುರೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಕಾಂಗ್ರೆಸ್‍ನಿಂದ ಹೊರ ಬಂದು ಉಮೇಶ್ ಜಾಧವ್ ಅವರಿಗೆ ತಿರುಗೇಟು ನೀಡಲು ಕಾಂಗ್ರೆಸ್ ತನ್ನ ಎಲ್ಲ ರಣತಂತ್ರಗಳನ್ನು ಪ್ರಯೋಗಿಸಲು ಮುಂದಾಗುತ್ತಿದೆ. ಒಂದು ವೇಳೆ ಅವಿನಾಶ್ ಜಾಧವ್ ಸೋತ್ರೆ ಅದು ಉಮೇಶ್ ಜಾಧವ್ ಸೋಲು ಎಂಬಂತೆ ಆಗಲಿದೆ ಎಂಬ ಮಾತುಗಳು ರಾಜಕೀಯ ಕೇಳಿ ಬರುತ್ತಿವೆ.

    ಮತದಾರರು (2018ರ ಪ್ರಕಾರ)
    ಒಟ್ಟು ಮತದಾರರು: 1,90,976
    ಪುರುಷ ಮತದಾರರು: 97,243
    ಮಹಿಳಾ ಮತದಾರರು: 93,718
    ಚಲಾವಣೆಯಾದ ಮತಗಳು: 1,31,916 (69.6%)

    2018ರ ಫಲಿತಾಂಶ
    2018ರಲ್ಲಿ ನಡೆದ ಚುನಾವಣೆಯ ಚಿಂಚೋಳಿ ಅಖಾಡದಲ್ಲಿ ಒಟ್ಟು 10 ಜನರಿದ್ದರು. ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಉಮೇಶ್ ಜಾಧವ್ 73,905 ಮತಗಳನ್ನು ಪಡೆದು ಶಾಸಕರಾಗಿದ್ದರು. ಬಿಜೆಪಿ ಸುನಿಲ್ ವಲ್ಯಾಪುರೆ 54,693 ಮತ ಪಡೆದು 19,212 ವೋಟ್ ಅಂತರದಿಂದ ಸೋಲು ಅನುಭವಿಸಿದ್ದರು. ಜೆಡಿಎಸ್ ನಿಂದ ಕಣಕ್ಕಿಳಿದ ಸುಶೀಲಾಬಾಯಿ ಕೋವಿ ಎಂಬವರು ಕೇವಲ 1,621 ಮತ ಪಡೆದಿದ್ದರು. ನೋಟಾ 1,082 ಮತಗಳನ್ನು ಪಡೆದಿತ್ತು. ಒಟ್ಟಾರೆ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.69.6ರಷ್ಟು ಮತದಾನವಾಗಿತ್ತು.

    ಒಂದು ರೀತಿ ಚಿಂಚೋಳಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಹಾಗಾದ್ರೆ ಅವಿನಾಶ್ ಜಾಧವ್ ಮತ್ತು ಸುಭಾಷ್ ರಾಠೋಡ ಪ್ಲಸ್, ಮೈನಸ್ ಪಾಯಿಂಟ್ ಈ ಕೆಳಗಿನಂತಿವೆ.

    ಸುಭಾಷ್ ರಾಠೋಡ್ (ಕಾಂಗ್ರೆಸ್)
    ಪ್ಲಸ್ ಪಾಯಿಂಟ್
    * ಉಮೇಶ್ ಜಾಧವ್ ಪಕ್ಷಾಂತರ ಮಾಡಿದ್ದು
    * ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಬೆಂಬಲ
    * ಸ್ಥಳೀಯ ಮಟ್ಟದಲ್ಲಿ ಪ್ರಭಾವಿ ನಾಯಕ
    * ಬಿಜೆಪಿ ಬಂಡಾಯ
    * ಅವಿನಾಶ್ ಜಾಧವ್ ರಾಜಕಾರಣಕ್ಕೆ ಹೊಸ ಮುಖ

    ಮೈನಸ್ ಪಾಯಿಂಟ್
    * ಪ್ರಚಾರದಿಂದ ದೂರ ಉಳಿದುಕೊಂಡ ಕೈ ನಾಯಕರು
    * ಕೈ ನಾಯಕರ ಆಂತರಿಕ ಕಲಹ
    * ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಬಿಜೆಪಿ ರಾಷ್ಟ್ರೀಯ ನಾಯಕರು

    ಅವಿನಾಶ್ ಜಾಧವ್
    ಪ್ಲಸ್ ಪಾಯಿಂಟ್
    * ತಂದೆ ಉಮೇಶ್ ಜಾಧವ್ ಕ್ಷೇತ್ರದಲ್ಲಿನ ಹಿಡಿತ
    * ರಾಷ್ಟ್ರೀಯ ನಾಯಕರ ಬೆಂಬಲ
    * ಲೋಕಸಭಾ ಚುನಾವಣೆ ಸಮಯವಾಗಿದ್ದರಿಂದ ಮೋದಿ ಅಲೆ

    ಮೈನಸ್ ಪಾಯಿಂಟ್
    * ಟಿಕೆಟ್ ವಂಚಿತ ನಾಯಕರ ಅಸಮಾಧಾನ
    * ಕ್ಷೇತ್ರಕ್ಕೆ ಹೊಸ ಮುಖ
    * ಬಿಜೆಪಿ ಬಂಡಾಯ

  • ಕಲಬುರಗಿ ಯಾರಿಗೆ? ದೋಸ್ತಿ, ಬಿಜೆಪಿ ಲೆಕ್ಕದಲ್ಲಿ ಯಾರಿಗೆ ಎಷ್ಟು ಅಂತರದ ಗೆಲುವು?

    ಕಲಬುರಗಿ ಯಾರಿಗೆ? ದೋಸ್ತಿ, ಬಿಜೆಪಿ ಲೆಕ್ಕದಲ್ಲಿ ಯಾರಿಗೆ ಎಷ್ಟು ಅಂತರದ ಗೆಲುವು?

    – ಗುಪ್ತಚರ ವರದಿ ಏನ್ ಹೇಳುತ್ತೆ?

    ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಏರ್ಪಟ್ಟಿತ್ತು. ಸೋಲಿಲ್ಲದ ಸರದಾರ ಖ್ಯಾತಿಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಕೈ ನಾಯಕ ಉಮೇಶ್ ಜಾಧವ್ ಅವರನ್ನೇ ಹೈಜಾಕ್ ಮಾಡಿಕೊಂಡು ಕಣಕ್ಕಿಳಿಸಿತ್ತು. ಹಾಗಾಗಿ ಮೊದಲಿಗಿಂತಲೂ ಈ ಬಾರಿ ಕಲಬುರಗಿ ಕ್ಷೇತ್ರ ಕೊಂಚ ದೇಶದ ಗಮನವನ್ನೇ ಸೆಳೆದಿತ್ತು.

    ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ಖಾಸಗಿ ಏಜೆನ್ಸಿ ಮುಖಾಂತರ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯ ಅಂಕಿ ಅಂಶಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಇತ್ತ ರಾಜ್ಯ ಸರ್ಕಾರ ಗುಪ್ತಚರ ಇಲಾಖೆಯ ಸಮೀಕ್ಷೆ ಸಹ ತನ್ನ ವರದಿಯನ್ನು ಸಿಎಂ ಮುಂದೆ ನೀಡಿದೆ.

    ದೋಸ್ತಿ ಲೆಕ್ಕ: ಕಲಬುರಗಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಮಲ್ಲಿಕಾರ್ಜುನ ಖರ್ಗೆ ಮುನ್ನಡೆ ಕಾಯ್ದುಕೊಳ್ಳಲಿದ್ದು, ಅಫಜಲಪುರ ಹಾಗೂ ಜೇವರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಉಮೇಶ್ ಜಾಧವ್ ಸಮಬಲದ ಮತ ಪಡೆಯುವ ಸಾಧ್ಯತೆಗಳಿವೆ ಎಂದು ದೋಸ್ತಿ ನಾಯಕರು ನಡೆಸಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

    ಕಲಬುರಗಿ ದಕ್ಷಿಣದಲ್ಲಿ 3 ಸಾವಿರ, ಕಲಬುರಗಿ ಉತ್ತರದಲ್ಲಿ 25 ಸಾವಿರ, ಕಲಬುರಗಿ ಗ್ರಾಮಾಂತರದಲ್ಲಿ 5 ಸಾವಿರ, ಸೇಡಂನಲ್ಲಿ 10 ಸಾವಿರ, ಗುರುಮಠಕಲ್ ನಲ್ಲಿ 3 ಸಾವಿರ, ಚಿತ್ತಾಪುರದಲ್ಲಿ 10 ಸಾವಿರ ಮುನ್ನಡೆ ಪಡೆದು ಒಟ್ಟು 70 ಸಾವಿರ ಮತಗಳ ಅಂತರದಲ್ಲಿ ಮಲ್ಲಿಕಾರ್ಜುನ ಖರ್ಗೆ 12ನೇ ಬಾರಿ(ವಿಧಾನಸಭಾ + ಲೋಕಸಭಾ ಸೇರಿ) ಗೆಲುವು ದಾಖಲಿಸುತ್ತಾರೆ ಎಂದು ದೋಸ್ತಿ ಸಮೀಕ್ಷೆ ಹೇಳಿದೆ.

    ಬಿಜೆಪಿ ಲೆಕ್ಕ: ಕಮಲ ನಾಯಕರು ನಡೆಸಿರುವ ಸಮೀಕ್ಷೆ ಪ್ರಕಾರ, ಕಲಬುರಗಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಉಮೇಶ್ ಜಾಧವ್ 5ರಲ್ಲಿ ಮುನ್ನಡೆ ಪಡೆದು ಗೆಲುವು ಕಾಣುತ್ತಾರೆ. ಉಳಿದ ಮೂರು ಕ್ಷೇತ್ರಗಳಾದ ಕಲಬುರಗಿ ಉತ್ತರದಲ್ಲಿ 20 ಸಾವಿರ, ಗುರುಮಿಠಕಲ್ ನಲ್ಲಿ 4 ಸಾವಿರ, ಚಿತ್ತಾಪುರದಲ್ಲಿ 5 ಸಾವಿರ ಲೀಡ್ ನಲ್ಲಿ ಕೈ ನಾಯಕ ಮಲ್ಲಿಕಾರ್ಜುನ ಖರ್ಗೆ ಮುನ್ನಡೆ ಕಾಯ್ದುಕೊಳ್ಳುತ್ತಾರೆ ಎನ್ನುವ ವರದಿ ನೀಡಿದೆ.

    ಕಲಬುರಗಿ ದಕ್ಷಿಣದಲ್ಲಿ 10 ಸಾವಿರ, ಕಲಬುರಗಿ ಗ್ರಾಮೀಣದಲ್ಲಿ 10 ಸಾವಿರ, ಸೇಡಂನಲ್ಲಿ 10 ಸಾವಿರ, ಜೇವರ್ಗಿಯಲ್ಲಿ 10 ಸಾವಿರ ಮತ್ತು ಅಫಜಲಪುರದಲ್ಲಿ 12 ಸಾವಿರ ಮತಗಳ ಲೀಡ್ ಉಮೇಶ್ ಜಾಧವ್ ಪಡೆದುಕೊಂಡು ಕನಿಷ್ಠ 20 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ಸಮೀಕ್ಷೆ ಹೇಳಿದೆ.

    ಗುಪ್ತಚರ ವರದಿ: ಗುಪ್ತಚರ ಇಲಾಖೆ ಮಲ್ಲಿಕಾರ್ಜುನ ಖರ್ಗೆಯವರ ಗೆಲುವು ನಿಶ್ಚಿತ ಎಂದು ಹೇಳಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿನಲ್ಲಿ ಮೂರರಲ್ಲಿ ಉಮೇಶ್ ಜಾಧವ್ ಮತ್ತು 5ರಲ್ಲಿ ಮಲ್ಲಿಕಾರ್ಜುನ ಖರ್ಗೆ ಮುನ್ನಡೆ ಕಾಯ್ದುಕೊಳ್ಳಲಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

    ಕಲಬುರಗಿ ದಕ್ಷಿಣದಲ್ಲಿ 5 ಸಾವಿರ, ಜೇವರ್ಗಿಯಲ್ಲಿ 7 ಸಾವಿರ, ಅಫಜಲಪುರದಲ್ಲಿ 8 ಸಾವಿರ ಮತಗಳ ಮುನ್ನಡೆಯನ್ನು ಉಮೇಶ್ ಜಾಧವ್ ಕಾಣಲಿದ್ದಾರೆ. ಉಳಿದಂತೆ ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ದಕ್ಷಿಣದಲ್ಲಿ 15 ಸಾವಿರ, ಕಲಬುರಗಿ ಗ್ರಾಮೀಣದಲ್ಲಿ 5 ಸಾವಿರ, ಸೇಡಂನಲ್ಲಿ 10 ಸಾವಿರ, ಗುರುಮಿಠಕಲ್ ನಲ್ಲಿ 35 ಸಾವಿರ ಮತ್ತು ಚಿತ್ತಾಪುರದಲ್ಲಿ 10 ಸಾವಿರ ಮತಗಳ ಮುನ್ನಡೆ ಪಡೆದುಕೊಂಡು ಸುಮಾರು 55 ಸಾವಿರ ಲೀಡ್ ನಲ್ಲಿ ಸಂಸದೀಯ ನಾಯಕ 12ನೇ ಗೆಲುವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಗುಪ್ತಚರ ವರದಿಯಲ್ಲಿ ತಿಳಿಸಿದೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಜಾಧವ್ ಪುತ್ರನಿಗೆ ಬಿಜೆಪಿ ಟಿಕೆಟ್- ಇದ್ಯಾವ ಡಿಎನ್‍ಎ ಎಂದು ಕಾಲೆಳೆದ ಪ್ರಿಯಾಂಕ್ ಖರ್ಗೆ!

    ಜಾಧವ್ ಪುತ್ರನಿಗೆ ಬಿಜೆಪಿ ಟಿಕೆಟ್- ಇದ್ಯಾವ ಡಿಎನ್‍ಎ ಎಂದು ಕಾಲೆಳೆದ ಪ್ರಿಯಾಂಕ್ ಖರ್ಗೆ!

    – ಜಾಧವ್ ಕಟ್ಟಿಹಾಕಲು ಖರ್ಗೆ ಮಾಸ್ಟರ್ ಪ್ಲಾನ್

    ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧೆ ಮಾಡಿರುವ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ನಡುವಿನ ಮಾತಿನ ಸಮರ ಮುಂದುವರಿದಿದ್ದು, ಚಿಂಚೋಳಿ ಉಪಚುಣಾವಣೆಯಲ್ಲಿ ಜಾಧವ್ ಪುತ್ರ ಡಾ. ಅವಿನಾಶ್ ಜಾಧವ್ ಅವರಿಗೆ ಟಿಕೆಟ್ ನೀಡಿರುವ ಬಗ್ಗೆ ಟ್ವೀಟ್ ಮಾಡಿ ಪ್ರಿಯಾಂಕ್ ಖರ್ಗೆ ಬಿಜೆಪಿ ಕಾಲೆಳೆದಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಟಿಕೆಟ್ ನೀಡದಿರುವ ಕುರಿತು ಬಿಜೆಪಿ ರಾಷ್ಟ್ರಿಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿರುವ ಪ್ರಿಯಾಂಕ್ ಖರ್ಗೆ, ಕಲಬುರಗಿಯಲ್ಲಿ ಬಿಜೆಪಿ ಕುಟುಂಬ ರಾಜಕಾರಣದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್‍ಗೆ ಡಿಎನ್‍ಎ ಲೆಕ್ಕಕ್ಕೆ ಬರುತ್ತದೆ. ಆದರೆ ಕಲಬುರಗಿ ದಕ್ಷಿಣ ಶಾಸಕ, ಗುತ್ತೇದಾರ್, ಚಿಂಚನಸೂರ್, ಸೇಡಂ ಶಾಸಕರ ಕುಟುಂಬ ರಾಜಕೀಯದಲ್ಲಿ ಸಕ್ರೀಯರಾಗಿದ್ದು, ಇದೀಗ ಚಿಂಚೋಳಿಯಲ್ಲಿ ಕುಟುಂಬ ರಾಜಕೀಯ ನಡೆದಿದೆ. ಮಡಕೆ ಕಪ್ಪಗಿದ್ರೂ ಬೇರೆಯವರಿಗೆ ಕಪ್ಪು ಅನ್ನುತ್ತೆ ಎಂದು ಟ್ವೀಟ್ ಮಾಡಿ ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕೀಯದ ಬಗ್ಗೆ ಮಾತಾಡುವವರಿಗೆ ಟಾಂಗ್ ನೀಡಿದ್ದಾರೆ.

    ಖರ್ಗೆ ಮಾಸ್ಟರ್ ಪ್ಲಾನ್: ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಪುತ್ರನಿಗೆ ಟಿಕೆಟ್ ಖಚಿತವಾಗುತ್ತಿದೆ ಅವರನ್ನು ಕಟ್ಟಿಹಾಕಲು ಪ್ರಿಯಾಂಕ್ ಖರ್ಗೆ ಅವರು ಮಾಸ್ಟರ್ ಪ್ಲಾನ್ ಮಾಡಿದ್ದು, ಕಾಂಗ್ರೆಸ್ ನಿಂದ ಸುಭಾಷ್ ರಾಠೋಡ್ ಅವರಗೆ ಟಿಕೆಟ್ ಲಭಿಸುವಂತೆ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್ ಜಾಧವ್ ಕೂಡಾ ಲಂಬಾಣಿ ಸಮಾಜಕ್ಕೆ ಸೇರಿದವರಾಗಿದ್ದು, ಸದ್ಯ ಕಾಂಗ್ರೆಸ್ ಕೂಡ ಲಂಬಾನಿ ಅಭ್ಯರ್ಥಿಯನ್ನೇ ಆಯ್ಕೆ ಮಾಡುವ ಮೂಲಕ ಮತ ನಿರ್ಣಾಯಕ ಲಂಬಾಣಿ ಮತಗಳ ವಿಭಜನೆಗೆ ಪ್ಲಾನ್ ಮಾಡಿದ್ದಾರೆ.

    ಕ್ಷೇತ್ರದಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಲಂಬಾಣಿ ಮತಗಳು ಇದ್ದು, ಆ ಮೂಲಕ ಲಂಬಾಣಿ ಮತಗಳನ್ನು ವಿಭಜಸಿ ಜಾಧವ್ ಕಟ್ಟಿಹಾಕಲು ರಣತಂತ್ರ ರೂಪಿಸಲಾಗಿದೆ. ಜಾಧವ್ ಸ್ವಕ್ಷೇತ್ರದಲ್ಲಿಯೇ ಸೋಲಿಸುವ ಮೂಲಕ ಟಾಂಗ್ ನೀಡಲು ಸಿದ್ಧತೆ ನಡೆದಿದೆ. ಈ ಹಿಂದೆ ಚಿಂಚೋಳಿ ಕ್ಷೇತ್ರದಲ್ಲಿ ಸ್ವತಃ ಸಚಿವ ಪ್ರಿಯಾಂಕ್ ಅವರೇ ತಮ್ಮ ಪುತ್ರನ ವಿರುದ್ಧ ಸ್ಪರ್ಧೆ ನಡೆಸಲಿ ಎಂದು ಉಮೇಶ್ ಜಾಧವ್ ಸವಾಲು ಎಸೆದಿದ್ದರು. ಪರಿಣಾಮ ಖರ್ಗೆ ಹಾಗೂ ಜಾಧವ್ ಕುಟುಂಬಗಳಿಗೆ ಚಿಂಚೋಳಿ ಕ್ಷೇತ್ರ ಪ್ರತಿಷ್ಠೆಯ ಕದನವಾಗಿ ಏರ್ಪಟ್ಟಿದೆ.

  • ಲೋಕಸಮರದ ಬಳಿಕ ಉಪಸಮರದ ಕಾವು- ಸಹೋದರನಿಗೆ ಟಿಕೆಟ್ ಕೊಡಿಸಲು ಜಾಧವ್ ಸರ್ಕಸ್

    ಲೋಕಸಮರದ ಬಳಿಕ ಉಪಸಮರದ ಕಾವು- ಸಹೋದರನಿಗೆ ಟಿಕೆಟ್ ಕೊಡಿಸಲು ಜಾಧವ್ ಸರ್ಕಸ್

    – ಖರ್ಗೆ ಪಡೆಯಿಂದಲೂ ರಣತಂತ್ರ

    ಕಲಬುರಗಿ: ಜಿಲ್ಲೆಯ ಚಿಂಚೋಳಿ ಕ್ಷೇತ್ರ ಅಂದ್ರೆ ಅದು ರಾಜ್ಯದ ಲಕ್ಕಿ ಕ್ಷೇತ್ರ ಅಂತಾನೇ ಖ್ಯಾತಿ ಪಡೆದಿದ್ದು, ಇಂತಹ ಕ್ಷೇತ್ರದಲ್ಲಿ ಶಾಸಕರಾಗಿದ್ದ ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಸ್ಪರ್ಧಿಸಿದ್ದರು. ಹೀಗಾಗಿ ಆ ಕ್ಷೇತ್ರದಲ್ಲಿಗ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

    ಹೌದು. ಜಿಲ್ಲೆಯ ಚಿಂಚೋಳಿ ಕ್ಷೇತ್ರದಲ್ಲಿ ಗೆದ್ದ ಪಕ್ಷವೇ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇಂತಹ ಕ್ಷೇತ್ರದಲ್ಲಿ ಸತತ ಎರಡು ಬಾರಿ ಕಾಂಗ್ರೆಸ್‍ನಿಂದ ಗೆದ್ದ ಡಾ.ಉಮೇಶ್ ಜಾಧವ್, ಇತ್ತೀಚೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಲಬುರಗಿ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

    ಹೀಗಾಗಿ ಅವರ ತೆರವಿನಿಂದ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಜಾಧವ್ ಅವರಿಗೆ ತಕ್ಕ ಪಾಠ ಕಲಿಸಿ ಅವರ ರಾಜಕೀಯ ಭವಿಷ್ಯ ಅಂತ್ಯ ಹಾಡಲು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕೈ ಪಕ್ಷದ ಘಟಾನುಘಟಿ ನಾಯಕರು ಸಜ್ಜಾಗಿದ್ದಾರೆ. ಈ ಕ್ಷೇತ್ರದಿಂದ ಮಾಜಿ ಸಚಿವ ಬಾಬುರಾವ್ ಚವ್ಹಾಣ ಅಥವಾ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಭಾಷ್ ರಾಠೋಡ ಅವರನ್ನು ಕಣಕ್ಕಿಳಿಸಿ ಜಾಧವ್ ಅವರಿಗೇ ಟಕ್ಕರ್ ನೀಡಲು ಸಜ್ಜಾಗಿದ್ದಾರೆ.

    2013 ಹಾಗು 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತ ಮಾಜಿ ಸಚಿವ ಸುನಿಲ್ ವಲ್ಯಾಪುರ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನೊಂದೆಡೆ ಕುಟುಂಬ ರಾಜಕಾರಣದ ವಿರುದ್ಧ ಸಿಟ್ಟಾಗಿ ಕಾಂಗ್ರೆಸ್‍ನಿಂದ ಬಿಜೆಪಿ ಸೇರಿದ್ದ ಉಮೇಶ್ ಜಾಧವ್, ತಮ್ಮ ಸಹೋದರ ರಾಮಚಂದ್ರ ಜಾಧವ್ ಅವರಿಗೆ ಬಿಜೆಪಿಯ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ರಾಮಚಂದ್ರ ಜಾಧವ್ ಹೇಳುತ್ತಿದ್ದಾರೆ.

    ಸದ್ಯ ತೆರೆಮರೆಯಲ್ಲಿ ಆಪರೇಷನ್ ಕಮಲ ನಡೆಸಿ ರಾಜ್ಯದಲ್ಲಿ ಕಮಲ ಅರಳಿಸಲು ಮುಂದಾಗಿರುವ ಬಿಜೆಪಿ ನಾಯಕರಿಗೆ, ಚಿಂಚೋಳಿ ಹಾಗು ಕುಂದಗೋಳ ಕ್ಷೇತ್ರಗಳ ಉಪಚುನಾವಣೆ ಸೆಮಿಫೈನಲ್ ಮ್ಯಾಚ್‍ನಂತಾಗಿದೆ.

  • ನನ್ ಮಗನಿಗೆ ಟಿಕೆಟ್ ಕೊಡಿ – ಕುಟುಂಬ ರಾಜಕಾರಣ ವಿರೋಧಿಸಿದವ್ರಿಂದಲೇ ಮತ್ತದೇ ಪಾಲಿಟಿಕ್ಸ್

    ನನ್ ಮಗನಿಗೆ ಟಿಕೆಟ್ ಕೊಡಿ – ಕುಟುಂಬ ರಾಜಕಾರಣ ವಿರೋಧಿಸಿದವ್ರಿಂದಲೇ ಮತ್ತದೇ ಪಾಲಿಟಿಕ್ಸ್

    ಬೆಂಗಳೂರು: ಕುಟುಂಬ ರಾಜಕಾರಣವನ್ನು ವಿರೋಧಿಸಿ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಜಿಗಿದ ನಾಯಕ ಇದೀಗ ಉಪಚುನಾವಣೆಯಲ್ಲಿ ತಮ್ಮ ಮಗನಿಗೆ ಟಿಕೆಟ್ ಕೊಡಿ ಎಂದು ಬಿಜೆಪಿ ನಾಯಕರ ಮುಂದೆ ಲಾಬಿ ಮಾಡುತ್ತಿದ್ದಾರೆ.

    ಬಿಜೆಪಿಯ ಉಮೇಶ್ ಜಾಧವ್ ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಬಿಜೆಪಿ ನಾಯಕರ ಮುಂದೆ ಭಾರೀ ಲಾಬಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಂಚೋಳಿ ಟಿಕೆಟ್ ಫೈನಲ್ ಮಾಡಿಸಲು ಎಲೆಕ್ಷನ್ ಮುಗಿದ ರಾತ್ರಿಯೇ ಜಾಧವ್ ಬೆಂಗಳೂರಿಗೆ ಬಂದಿದ್ದಾರೆ. ಬೈ ಎಲೆಕ್ಷನ್‍ನಲ್ಲಿ ನನ್ನ ಮಗನಿಗೆ ಟಿಕೆಟ್ ಕೊಡಿ, ನನ್ನ ಮಗನಿಗೆ ಟಿಕೆಟ್ ಕೊಡದಿದ್ದರೆ, ನನ್ನ ಸಹೋದರನಿಗಾದರೂ ಟಿಕೆಟ್ ಕೊಡಿ ಅಥವಾ ನನ್ನ ಸಂಬಂಧಿಗಾದರೂ ಟಿಕೆಟ್ ಕೊಡಲೇಬೇಕು ಎಂದು ಭಾರೀ ಲಾಬಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಚಿಂಚೋಳಿ ಶಾಸಕ ಡಾ.ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಮೇ 19ಕ್ಕೆ ಉಪಚುನಾವಣೆ ನಡೆಯುತ್ತಿದ್ದು. ಇಂದು ಬೆಂಗಳೂರಿನ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಆಯ್ಕೆಯ ಸಭೆ ನಡೆದರೆ, ಇತ್ತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕೈ ಅಭ್ಯರ್ಥಿಯ ಆಯ್ಕೆ ನಡೆಯಲಿದೆ.

    ಬಿಜೆಪಿಯಿಂದ ಜಾಧವ್ ಪುತ್ರ ಅವಿನಾಶ್ ಜಾಧವ್, ಸಹೋದರ ರಾಮಚಂದ್ರ ಜಾಧವ್, ಸಂಬಂಧಿ ಅರುಣ್ ಪವಾರ್ ಹಾಗೂ ನಿವೃತ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ ಹೆಸರು ಕೇಳಿ ಬರುತ್ತಿದೆ. ಇನ್ನು ಕಾಂಗ್ರೆಸ್ಸಿನಿಂದ ಮಾಜಿ ಸಚಿವ ಬಾಬುರಾವ ಚಬ್ಹಾಣ ಹಾಗೂ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸುಭಾಷ್ ರಾಠೋಡ ಹೆಸರು ಕೇಳಿ ಬರುತ್ತಿದೆ. ಇದೇ ತಿಂಗಳ 29 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.