Tag: umbrella

  • ಛತ್ರಿ ಹೇಳಿಕೆ; ಕ್ಷಮೆಯಾಚಿಸದ ಡಿಸಿಎಂ – ಡಿಕೆಶಿ ಹೇಳಿಕೆ ಖಂಡಿಸಿ ಇಂದು ಬೃಹತ್ ಪ್ರೊಟೆಸ್ಟ್

    ಮಂಡ್ಯ: ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಮಂಡ್ಯದವರು ಛತ್ರಿಗಳು ಎಂದು ಒಂದು ವಾರ ಕಳೆದಿದೆ. ಇನ್ನೊಂದೆಡೆ ಮಂಡ್ಯದವರು ಡಿಕೆಶಿಗೆ ಕ್ಷಮೆಯಾಚನೆ ಮಾಡಬೇಕೆಂದು ನೀಡಿದ್ದ ಡೆಡ್ ಲೈನ್ ಸಹ ಮುಗಿದಿದೆ. ಇಂದು ಕನಕಪುರ ಬಂಡೆಯ ವಿರುದ್ಧ ಸಕ್ಕರೆ ನಾಡಿನ ಅನ್ನದಾತರು ಬೀದಿಗಿಳಿದು ಛತ್ರಿ ಚಳುವಳಿ ನಡೆಸಲು ಮುಂದಾಗಿದ್ದಾರೆ.

    ಮಂಡ್ಯ (Mandya) ಜನರು ಅತೀ ಹೆಚ್ಚು ರಾಜಕೀಯ ಕ್ಷೇತ್ರದ ಕಡೆ ಬಲವನ್ನು ಇಟ್ಟಿದ್ದಾರೆ. ಇದೇ ಕಾರಣಕ್ಕೆ ಚುನಾವಣೆಗಳು ಬಂದಾಗ ಇಡೀ ಇಂಡಿಯಾವೇ ಮಂಡ್ಯ ಕಡೆ ತಿರುಗಿ ನೋಡುತ್ತವೆ. ಇಂತಹ ಜಿಲ್ಲೆಯ ಹೆಸರನ್ನು ಬಳಸಿಕೊಂಡು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಛತ್ರಿಗಳು ಎಂಬ ಪದ ಬಳಕೆ ಮಾಡಿರುವುದು ಇದೀಗ ವ್ಯಾಪಕ ಟೀಕೆ ಹಾಗೂ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಬಜೆಟ್‌ 5,259 ಕೋಟಿಗೆ ಹೆಚ್ಚಳ – ದೇವಾಲಯದಲ್ಲಿ ಅಡುಗೆ ಕೆಲಸಗಾರರ ವೇತನ ಹೆಚ್ಚಳಕ್ಕೆ ನಿರ್ಧಾರ

    ಡಿಕೆಶಿ ಛತ್ರಿ ಹೇಳಿಕೆಗೆ ಮಂಡ್ಯ ಜನ ಸಿಡಿದೆದ್ದಿದ್ದರು. ವಿಪಕ್ಷಗಳು ಕೂಡ ಡಿಕೆಶಿ ವಿರುದ್ಧ ಕಿಡಿಕಾರಿ ಕ್ಷಮೆಗೆ ಪಟ್ಟು ಹಿಡಿದಿದ್ದರು. ಅಧಿಕಾರದ ಮದದಿಂದಲೇ ಈ ರೀತಿ ಹೇಳಿಕೆ ನೀಡುತ್ತಿದ್ದಾರೆಂದು ವಿಪಕ್ಷ ವಾಗ್ದಾಳಿ ನಡೆಸಿತು. ಈ ಬಗ್ಗೆ ಮಾತನಾಡಿದ್ದ ಡಿಕೆಶಿ, ಹೌದು ನನಗೆ ಮದ ಇದೆ, ಕಡಿಮೆ ಮಾಡಿ ಎಂದು ಮತ್ತೆ ಸಮರ್ಥನೆ ಮಾಡಿಕೊಂಡಿದ್ದರು. ಈ ಹೇಳಿಕೆ ಮಂಡ್ಯ ಜನರ ಕಣ್ಣನ್ನು ಮತ್ತಷ್ಟು ಕೆಂಪಾಗಿಸಿತ್ತು. ಇದನ್ನೂ ಓದಿ: ಹೊಸ ವಾಹನ ಖರೀದಿದಾರರಿಗೆ ಶಾಕ್ – ಏಪ್ರಿಲ್‌ನಿಂದ ಆಟೋ, ಕಾರು, ಬೈಕ್ ದರ ಏರಿಕೆ

    ವಿಧಾನಸಭಾ ಚುನಾವಣೆ ವೇಳೆ ಡಿ.ಕೆ.ಶಿವಕುಮಾರ್, ನಾನು ಒಬ್ಬ ಒಕ್ಕಲಿಗ, ನಾನು ನಿಮ್ಮ ಮನೆಯ ಮಗ. ದೇವೇಗೌಡರಿಗೆ, ಎಸ್.ಎಂ.ಕೃಷ್ಣ ಅವರಿಗೆ, ಕುಮಾರಸ್ವಾಮಿಗೆ ಅಧಿಕಾರ ಕೊಟ್ಟಿದ್ದೀರಾ. ಈಗ ನಿಮ್ಮ ಮಗ ಕನಕಪುರದ ಡಿ.ಕೆ.ಶಿವಕುಮಾರ್‌ಗೂ ಒಂದು ಅವಕಾಶ ಕೊಡಿ. ನನಗೂ ಪೆನ್ನು ಪೇಪರ್ ಕೊಡಿ ಎಂದು ಮಂಡ್ಯ ಜನರಲ್ಲಿ ಡಿಕೆಶಿ ಕೇಳಿಕೊಂಡಿದ್ದರು. ಅದರಂತೆ ಮಂಡ್ಯ ಜನ ಕೂಡ ಕೈ ಹಿಡಿದಿದ್ದರು. ಸ್ವಾಭಿಮಾನಿ ಜನರಿಗೆ ಹೀಗೆ ಹೇಳೋದು ಎಷ್ಟು ಸರಿ ಎಂದು ಆಕ್ರೋಶ ಹೆಚ್ಚಾಗಿದೆ. ಇದನ್ನೂ ಓದಿ: ಬಾಗಲಕೋಟೆ | ಹಲವೆಡೆ ಬಿರುಗಾಳಿ ಸಹಿತ ಮಳೆ, ನೆಲಕ್ಕುರುಳಿದ ಬೆಳೆ

    ಮನೆ-ಮನೆಯಿಂದ ಛತ್ರಿ ತಂದು ಪ್ರತಿಭಟನೆ:
    ಡಿಕೆಶಿಗೆ ಇಷ್ಟೆಲ್ಲಾ ಮಾಡಿರುವ ಮಂಡ್ಯ ಜಿಲ್ಲೆಯ ಜನರನ್ನು ಛತ್ರಿಗಳು ಎಂದು ಹೇಳಿರೋದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರು, ರೈತ ಸಂಘಟನೆ, ಪ್ರಗತಿಪರ ಸಂಘಟನೆ, ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಡಿಕೆಶಿ ಮಂಡ್ಯ ಜನರನ್ನು ಛತ್ರಿಗಳು ಎಂದಿದ್ದಾರೆ. ನಿಜವಾಗಿ ಡಿ.ಕೆ.ಶಿವಕುಮಾರ್ ಅಂತರರಾಜ್ಯ ಛತ್ರಿ. ಮಂಡ್ಯ ಜನರ ಬಳಿ ಡಿಕೆಶಿ ಕ್ಷಮೆ ಕೇಳಬೇಕು. ಇದಕ್ಕೆ ಸೋಮವಾರ ಸಂಜೆಯವರೆಗೆ ಡೆಡ್‌ಲೈನ್ ನೀಡಿದ್ದರು. ಆದರೆ ಇಲ್ಲಿಯವರೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷಮೆಯಾಚಿಸಿಲ್ಲ. ಹೀಗಾಗಿ ಇಂದು ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಮನೆ ಮನೆಯಿಂದ ಛತ್ರಿ ತಂದು ಮಂಡ್ಯದ ಸಂಜಯ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ನಾಗ್ಪುರ ಕೋಮು ಗಲಭೆ – ಮಾಸ್ಟರ್‌ಮೈಂಡ್‌ ಮನೆ ಮೇಲೆ ಬುಲ್ಡೋಜರ್ ಅಸ್ತ್ರ ಪ್ರಯೋಗ!

  • ಧಾರಾಕಾರ ಮಳೆ – ಸೋರುತ್ತಿದ್ದ ಬಸ್‌ನಲ್ಲೂ ಕೊಡೆ ಹಿಡಿದು ಕುಳಿತ ಪ್ರಯಾಣಿಕ

    ಧಾರಾಕಾರ ಮಳೆ – ಸೋರುತ್ತಿದ್ದ ಬಸ್‌ನಲ್ಲೂ ಕೊಡೆ ಹಿಡಿದು ಕುಳಿತ ಪ್ರಯಾಣಿಕ

    ಧಾರವಾಡ: ಒಂದು ವಾರದಿಂದ ಧಾರವಾಡದಲ್ಲಿ (Dharwad) ಸುರಿಯುತ್ತಿರುವ ಮಳೆಯಿಂದಾಗಿ (Rain) ಕೇವಲ ಮನೆಗಳಷ್ಟೇ ಅಲ್ಲ ಸಾರಿಗೆ ಸಂಸ್ಥೆಯ ಬಸ್‌ಗಳೂ (Bus) ಸೋರುವ ಸ್ಥಿತಿಗೆ ತಲುಪಿದೆ.

    ಧಾರವಾಡ ನಗರ ಸಿಬಿಟಿ ಬಸ್ ನಿಲ್ದಾಣದಿಂದ ವಿವಿಧ ನಗರಗಳಿಗೆ ಹೋಗುವ ಬಸ್‌ಗಳು ಮಳೆಯಿಂದ ಸೋರುತ್ತಿವೆ. ಶ್ರೀರಾಮನಗರದಿಂದ ಸಿಬಿಟಿಗೆ ಬರುವ ಸಾರಿಗೆ ಸಂಸ್ಥೆಯ ಬಸ್ ಒಂದು ಸೋರುತ್ತಿತ್ತು. ಇದರಿಂದ ಪ್ರಯಾಣಿಕರೊಬ್ಬರು ಬಸ್‌ನಲ್ಲೇ ಕೊಡೆ (Umbrella) ಹಿಡಿದು ಕುಳಿತು ಪ್ರಯಾಣಿಸಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಮುಂದುವರಿದ ಭಾರೀ ಮಳೆ – ಶಾಲೆಗಳಿಗೆ ನಾಳೆಯೂ ರಜೆ ಘೋಷಣೆ

    ಸದ್ಯ ಈ ವೀಡಿಯೋ ವೈರಲ್ ಆಗಿದೆ. ಅಲ್ಲದೇ ಇದು ನಮ್ಮ ಸಾರಿಗೆ ಇಲಾಖೆಯ ಸ್ಥಿತಿ ನೋಡಿ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: KRS ಡ್ಯಾಂ 3 ಅಡಿ ಭರ್ತಿ – 29,552 ಕ್ಯೂಸೆಕ್ ನೀರು ಒಳಹರಿವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಸ್ತೆ ಕಾಂಕ್ರೀಟಿಕರಣ ತಡೆದ ಮಹಿಳೆ – ಛತ್ರಿಯ ಹಿಡಿಯಲ್ಲಿ ತಲೆ ಒಡೆದ ಪಂಚಾಯಿತಿ ಸದಸ್ಯ

    ರಸ್ತೆ ಕಾಂಕ್ರೀಟಿಕರಣ ತಡೆದ ಮಹಿಳೆ – ಛತ್ರಿಯ ಹಿಡಿಯಲ್ಲಿ ತಲೆ ಒಡೆದ ಪಂಚಾಯಿತಿ ಸದಸ್ಯ

    ಉಡುಪಿ: ನಮ್ಮ ಮನೆಯ ಮುಂದೆ ರಸ್ತೆ ಆಗಲಿ, ನಮ್ಮ ಊರು ಉದ್ಧಾರ ಆಗಲಿ ಅಂತ ಎಲ್ಲರೂ ಅಪೇಕ್ಷಿಸುತ್ತಾರೆ. ಆದರೆ ಉಡುಪಿಯ ಆತ್ರಾಡಿಯಲ್ಲೊಂದು ವಿಚಿತ್ರ ಘಟನೆ ನಡೆದಿದೆ. ನಮ್ಮ ಮನೆಯ ಮುಂದೆ ರಸ್ತೆ ಬೇಡ ಎಂದು ಮಹಿಳೆಯೊಬ್ಬರು ರಂಪಾಟ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪಂಚಾಯಿತಿ ಸದಸ್ಯ ಛತ್ರಿಯ ಹಿಡಿಯಲ್ಲಿ ಮಹಿಳೆಯ ತಲೆ ಒಡೆದಿದ್ದಾರೆ.

    ಉಡುಪಿ ಸಮೀಪದ ಆತ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಸಂಗ ನಡೆದಿದೆ. ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಿಸಲು ತಡೆಯೊಡ್ಡಿದ್ದಕ್ಕಾಗಿ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಹಲ್ಲೆ ನಡೆಸಲಾಗಿದೆ. ಆತ್ರಾಡಿ ಸಮೀಪದ ಪಡುಮನೆ ನಾಗಬನ ನಿವಾಸಿ ಆರತಿ(45) ಹಲ್ಲೆಗೊಳಗಾದ ಮಹಿಳೆ. ಆಕೆ ರಸ್ತೆ ಅಭಿವೃದ್ಧಿಗೆ ಅಡ್ಡಿಪಡಿಸಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ.

    ಆರತಿಯವರ ಪಟ್ಟಾ ಜಾಗದಲ್ಲಿ ವಿರೋಧದ ನಡುವೆಯೂ ಆತ್ರಾಡಿ ಗ್ರಾಮ ಪಂಚಾಯಿತಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ತಯಾರು ನಡೆಸಿತ್ತು. ಮನೆಯವರ ಆಕ್ಷೇಪ ಇದ್ದರೂ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದನ್ನು ಆರತಿ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿದ್ದ ಪಂಚಾಯಿತಿ ಸದಸ್ಯ ರತ್ನಾಕರ್ ಶೆಟ್ಟಿ ತಳ್ಳಿದ್ದಾರೆ. ಆರತಿ ತನ್ನ ಚಪ್ಪಲಿ ತೆಗೆದು ರತ್ನಾಕರ್ ಶೆಟ್ಟಿ ಮತ್ತು ಪಕ್ಕದಲ್ಲಿದ್ದವರ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗದಿದ್ದರೇ ಕೊಲೆ ಮಾಡುವುದಾಗಿ ಬೆದರಿಕೆ- ಇಬ್ಬರ ವಿರುದ್ಧ ಎಫ್‍ಐಆರ್

    ಕೋಪಗೊಂಡ ಚಂದ್ರಹಾಸ್ ಶೆಟ್ಟಿ ಹಾಗೂ ಸಂತೋಷ್ ಪೂಜಾರಿ ಆರತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ವಾಗ್ವಾದದ ಸಂದರ್ಭ ರತ್ನಾಕರ್ ಶೆಟ್ಟಿ ಛತ್ರಿಯ ಹಿಡಿಯಲ್ಲಿ ಹೊಡೆದು ಆರತಿಯವರನ್ನು ತಳ್ಳಿದ ಪರಿಣಾಮ ಅವರ ತಲೆಗೆ ಗಂಭೀರ ಗಾಯವಾಗಿದೆ. ಗಲಾಟೆಯನ್ನು ತಡೆಯಲು ಬಂದ ಆರತಿ ಅವರ ಮಗಳ ಮೇಲೂ ಹಲ್ಲೆ ನಡೆಸಲಾಗಿದೆ.

    ಇದೀಗ ಆರತಿ ಅವರು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ರತ್ನಾಕರ್ ಶೆಟ್ಟಿ ಮತ್ತು ತಂಡ ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಕೊಡಬೇಕಾಗಿದೆ. ಇದನ್ನೂ ಓದಿ: ಕೋರ್ಟ್ ಮುಂದೆಯೇ ರೌಡಿಶೀಟರ್ ಮೇಲೆ ಅಟ್ಯಾಕ್ – ದುಷ್ಕರ್ಮಿಗಳನ್ನು ಹಿಡಿದು ಠಾಣೆಗೆ ದಬ್ಬಿದ ಪೊಲೀಸ್ರು

    Live Tv
    [brid partner=56869869 player=32851 video=960834 autoplay=true]

  • ಬಸ್‍ನಲ್ಲಿ ಕೊಡೆ ಹಿಡಿದು ಕುಳಿತ ಪ್ರಯಾಣಿಕರು

    ಬಸ್‍ನಲ್ಲಿ ಕೊಡೆ ಹಿಡಿದು ಕುಳಿತ ಪ್ರಯಾಣಿಕರು

    ಧಾರವಾಡ: ರಾಜ್ಯದಲ್ಲೇ ಮಳೆ ಅಬ್ಬರ ಜೋರಾಗಿದ್ದು, ಎಲ್ಲೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಸೊರುತಿದ್ದ ಬಸ್‍ನಲ್ಲಿ ಪ್ರಯಾಣಿಕರು ಕೊಡೆ ಹಿಡಿದು ಕುಳಿತ ಘಟನೆ ನಡೆದಿದೆ.

    ಧಾರವಾಡ ತಾಲೂಕಿನ ನಾಗಲಾವಿ ಗ್ರಾಮಕ್ಕೆ ಹೋಗುವ ಬಸ್‍ನ್ನು ಹತ್ತಿದ ಪ್ರಯಾಣಿಕರು, ಮಳೆ ನೀರಿಗೆ ಹೆದರಿದ್ದಾರೆ. ಯಾಕೆಂದರೆ ಬಸ್ ಸಂಪೂರ್ಣ ಸೊರುತ್ತಿತ್ತು. ಈ ಹಿನ್ನೆಲೆಯಲ್ಲಿ ಬಸ್‍ನಲ್ಲಿದ್ದ ಪ್ರಯಾಣಿಕರೆಲ್ಲರೂ ಛತ್ರಿ ಹಿಡಿದು ಕುಳಿತುಕೊಳ್ಳಬೇಕಾಯಿತು. ಇನ್ನೂ ಬಸ್ ಸೀಟ್‍ಗಳು ಕೂಡ ನೀರಿನಿಂದ ತೊಯ್ದಿದ್ದರಿಂದ ಕೆಲ ಪ್ರಯಾಣಿಕರು ಚಾಲಕನ ಪಕ್ಕದ ಎಂಜಿನ್ ಮೇಲೆ ಕುಳಿತುಕೊಂಡಿದ್ದರು.

    ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯು ಮಳೆ ಮುಂದುವರಿಯುವ ಸಾಧ್ಯತೆಯ ಮುನ್ಸೂಚನೆ ನೀಡಿದ ಹಿನ್ನೆಲೆ ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಜನ ಹಾಗೂ ಜಾನುವಾರುಗಳ ಸುರಕ್ಷತೆಗೆ ಸಾರ್ವಜನಿಕರು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಇದನ್ನೂ ಓದಿ: ಪೆಗಾಸಸ್ ಮೂಲಕ ಗೂಢಚರ್ಯೆ – ಅಂತಿಮ ವರದಿ ಸಲ್ಲಿಕೆಗೆ ಕಾಲಾವಕಾಶ ವಿಸ್ತರಣೆ

    ಮಳೆಯಿಂದಾಗಿ ನಾವಳ್ಳಿ ಅಣ್ಣಿಗೇರಿ ರಸ್ತೆ ಸಂಪರ್ಕ ಕಡಿತವಾಗಿದ್ದುಮ ಹಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳದ ಅಕ್ಕ-ಪಕ್ಕ ಇರುವ ಜನತೆಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಕಂದಾಯ ಅಧಿಕಾರಿಗಳು ಹೊಲಗಳಿಗೆ ಹೋಗದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪೊಲೀಸರ ಮುಂದೆ ಶರಣಾಗಲು ಹೆಚ್ಚಿನ ಸಮಯ ಕೇಳಿದ ಸಿಧು

  • ಟಾಪ್ 5 ಛತ್ರಿಗಳ ಡಿಸೈನ್‍ಗಳು

    ಟಾಪ್ 5 ಛತ್ರಿಗಳ ಡಿಸೈನ್‍ಗಳು

    ಭಾರತದಲ್ಲಿ ಮನ್ಸೂನ್ ಬಂದರೆ ಸಾಕು ಎಲ್ಲರಿಗೂ ತೊಂದರೆ ತಪ್ಪಿದ್ದಲ್ಲ. ಕಿರಿದಾದ ರಸ್ತೆಗಳು, ಗುಂಡಿಗಳು ಮತ್ತು ಕಷ್ಟಕರವಾದ ಹವಾಮಾನ. ಈ ವೇಳೆ ನಮ್ಮನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿಗಳನ್ನು ಉಪಯೋಗಿಸುತ್ತೇವೆ. ಛತ್ರಿಗಳಲ್ಲಿ ನಾನಾ ರೀತಿಯ ಮುದ್ರಣ ಹಾಗೂ ಬಣ್ಣದ ಛತ್ರಿಗಳಿದೆ. ಛತ್ರಿಗಳ ಡಿಸೈನ್ ಕುರಿತಂತೆ ಕೆಲವು ಮಾಹಿತಿ ಈ ಕೆಳಗಿನಂತಿದೆ.

    ಕೆಹ್ಕ್ಲೊ ಬಣ್ಣದ ಛತ್ರಿಗಳು
    ಕಲೆಯನ್ನು ಪ್ರೀತಿಸುವವರಿಗೆ ಈ ಛತ್ರಿ ಬಹಳ ಇಷ್ಟವಾಗುತ್ತದೆ. ಈ ಛತ್ರಿ ಜನಸಂದಣಿಯ ಮಧ್ಯೆ ಎದ್ದು ಕಾಣಿಸುತ್ತದೆ. ಈ ಛತ್ರಿ ಮೇಲೆ ಮನುಷ್ಯನ ಮುಖವನ್ನು ಚಿತ್ರಿಸಲಾಗಿದೆ.

    ಸ್ಟೇಜ್ ಡೂಡಲ್ ಮುದ್ರಿತ ಬಿಳಿ ಛತ್ರಿ
    ನಿಮಗೆ ಬಿಳಿ ಬಣ್ಣ ಎಂದರೆ ಇಷ್ಟನಾ? ಹಾಗಾದರೆ ಈ ಛತ್ರಿ ನಿಮಗೆ ಬಲು ಬೇಗ ಇಷ್ಟ ಆಗುತ್ತದೆ. ಈ ಬಿಳಿ ಛತ್ರಿ ಮೇಲೆ ಹಾಸ್ಯಕರವಾದ ಕೆಲವು ಚಮತ್ಕಾರಿ ವ್ಯಂಗ್ಯ ಡೂಡಲ್‍ಗಳನ್ನು ಮುದ್ರಿಸಲಾಗಿದೆ. ಇದು ನಿಮಗೆ ದಿನವಿಡೀ ಸ್ಫೂರ್ತಿ ನೀಡುತ್ತದೆ. ಖಂಡಿತವಾಗಿಯೂ ಈ ಛತ್ರಿ ಸಹ ಪ್ರಯಾಣಿಕನಾಗಿ ನಿಮಗೆ ಕಂಪನಿ ನೀಡುತ್ತದೆ.

    ಹೆಲ್ಮೆಟ್ ಛತ್ರಿ
    ಸಾಮಾನ್ಯವಾಗಿ ಕೆಲವು ಛತ್ರಿಗಳನ್ನು ಹಿಡಿದುಕೊಂಡರೂ, ಮಳೆಯಲ್ಲಿ ನಮ್ಮ ಬಟ್ಟೆಗಳು ಒದ್ದೆಯಾಗಿ ಬಹಳ ಕಿರಿಕಿರಿಯುಂಟಾಗುತ್ತದೆ. ಆದರೆ ಹೆಲ್ಮೆಟ್ ಛತ್ರಿ ಬಳಸುವುದರಿಂದ ತಲೆ ಹಾಗೂ ಬಟ್ಟೆ ಒದ್ದೆಯಾಗುವುದನ್ನು ತಡೆಗಟ್ಟಬಹುದು. ಈ ಛತ್ರಿ ಕೈಯಲ್ಲಿ ಹಿಡಿದುಕೊಳ್ಳಲು ಬಹಳ ಸುಲಭಕರವಾಗಿದೆ ಮತ್ತು ಮಳೆ ಜೊತೆಗೆ ಗಾಳಿಯಿಂದ ಕೂಡ ನಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ.

    ಕೆಹ್ಕ್ಲೋ ಗೇಮ್ ಆಫ್ ಥ್ರೋನ್ಸ್ ಛತ್ರಿ
    ಈ ಛತ್ರಿಯ ಹೆಸರನ್ನು ಕೇಳಿದಾಗ ನಿಮಗೆ ನಗು ಬರಬಹುದು. ಆದರೆ ಈ ಛತ್ರಿ ಎಲ್ಲರಿಗೂ ಬಹಳ ಇಷ್ಟವಾಗುತ್ತದೆ. ಈ ಛತ್ರಿಯಲ್ಲಿ ಹಾರ್ಟ್ ಸಿಂಬಲ್ ಇದ್ದು, ಸಾಮಾನ್ಯವಾಗಿ ಕಪಲ್‍ಗಳು ಹೆಚ್ಚಾಗಿ ಬಳಸುತ್ತಾರೆ. ಮೊದಲಿಗೆ ಕಾಡ್ರ್ಸ್, ಡೈರಿ ಹಾಗೂ ಪೆನ್‍ಗಳಲ್ಲಿ ಈ ಅಕ್ಷರವನ್ನು ಮುದ್ರಿಸಲಾಗುತ್ತಿತ್ತು. ಆದರೆ ಇದೀಗ ಛತ್ರಿ ಮೇಲೆ ಕೂಡ ಮುದ್ರಿಸಲಾಗಿದೆ.

    ಬಾಳೆಹಣ್ಣು ಮಾದರಿಯ ಛತ್ರಿ
    ಈ ಛತ್ರಿ ಹಳದಿ ಬಣ್ಣವನ್ನು ಹೊಂದಿದ್ದು, ಪ್ರಕಾಶಮಾನವಾದ ಬಿಸಿಲಿನಲ್ಲಿ ಎದ್ದು ಕಾಣುತ್ತದೆ ಮತ್ತು ಈ ಛತ್ರಿಯನ್ನು ಬಾಳೆಹಣ್ಣಿನ ರೀತಿ ಇರುವ ಪೆಟ್ಟಿಗೆಯಲ್ಲಿ ಮಡಚಿ ಇಡಲಾಗುತ್ತದೆ. ಈ ಛತ್ರಿ ನೋಡಲು ಮುದ್ದಾಗಿರುವುದರಿಂದ ಚಿಕ್ಕ ಮಕ್ಕಳಿಗೆ ಬೇಗ ಇಷ್ಟವಾಗುತ್ತದೆ. ಇದನ್ನೂ ಓದಿ:ಕೇರಳದಲ್ಲಿ 20 ಸಾವಿರಕ್ಕೂ ಹೆಚ್ಚು ಕೇಸ್ – ಗಡಿ ಜಿಲ್ಲೆಗಳ ಡಿಸಿಗಳ ಜೊತೆ ಇಂದು ಸಿಎಂ ಸಭೆ

  • ಮಳೆಯಲ್ಲಿ ನೆನೆಯುತ್ತಿದ್ದ ಶ್ವಾನಕ್ಕೆ ಛತ್ರಿ ಹಿಡಿದ ಬಾಲಕಿ – ವೀಡಿಯೋ ವೈರಲ್

    ಮಳೆಯಲ್ಲಿ ನೆನೆಯುತ್ತಿದ್ದ ಶ್ವಾನಕ್ಕೆ ಛತ್ರಿ ಹಿಡಿದ ಬಾಲಕಿ – ವೀಡಿಯೋ ವೈರಲ್

    ಳೆಯಲ್ಲಿ ನೆನೆಯುತ್ತಿದ್ದ ಶ್ವಾನವನ್ನು ಪುಟ್ಟ ಬಾಲಕಿ ತನ್ನ ಛತ್ರಿಯ ಸಹಾಯದಿಂದ ರಕ್ಷಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    12 ಸೆಕೆಂಡುಗಳಿರುವ ಈ ವೀಡಿಯೋವನ್ನು ಭಾರತೀಯ ಅರಣ್ಯ ಸೇವೆ(ಐಎಫ್‍ಎಸ್) ಅಧಿಕಾರಿ ಸುಸಂತಾ ನಂದ ಎಂಬವರು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಪುಟ್ಟ ಬಾಲಕಿ, ಮಳೆಯಲ್ಲಿ ನೆನೆಯುತ್ತಿದ್ದ ಶ್ವಾನವನ್ನು ತನ್ನ ಛತ್ರಿಯನ್ನು ಬಳಸಿ ರಕ್ಷಿಸುತ್ತಾಳೆ. ಅಲ್ಲದೇ ಶ್ವಾನ ಎಲ್ಲಿಯೇ ಹೋದರೂ ಅದನ್ನು ಹಿಂಬಾಲಿಸುತ್ತಾಳೆ. ಆದರೆ ಶ್ವಾನ ಮಾತ್ರ ಛತ್ರಿಯನ್ನು ನಿರಾಕರಿಸುವುದನ್ನು ನೋಡಬಹುದಾಗಿದೆ.

    ಈ ಕ್ಯೂಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಾಲಕಿಯ ನಿಸ್ವಾರ್ಥ ಮನಸ್ಸಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ‘ದಯೆಯೊಂದಿದ್ದರೆ ಬೇರೆಯವರಿಗೆ ಪ್ರತಿಯೊಬ್ಬರು ಸಣ್ಣಪುಟ್ಟ ಕೆಲಸವನ್ನು ಮಾಡುತ್ತಾರೆ. ಏಕೆಂದರೆ ನಿಮಗೆ ಅದನ್ನು ಮಾಡುವ ಶಕ್ತಿ ಇರುತ್ತದೆ’ ಎಂದು ಐಎಫ್‍ಎಸ್ ಅಧಿಕಾರಿ ವೀಡಿಯೋ ಜೊತೆಗೆ ಕ್ಯಾಪ್ಷನ್ ಕೂಡ ಹಾಕಿಕೊಂಡಿದ್ದಾರೆ.

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನ ಗೆದ್ದಿದ್ದು, ಲೈಕ್ಸ್‌ಗಳ ಸುರಿ ಮಳೆ ಬರುತ್ತಿದೆ. ಬಾಲಕಿ ಚಿನ್ನದಂತ ಮನಸ್ಸು ಹೊಂದಿದ್ದಾಳೆ, ಬಾಲಕಿ ಸಹಾಯ ಮಾಡುವ ಗುಣ ಹೊಂದಿದ್ದಾಳೆ. ಹೀಗೆ ಹಲವಾರು ಕಾಮೆಂಟ್‍ಗಳು ಹರಿದು ಬರುತ್ತಿದೆ.

  • ಶಾಸಕಿ ಅನಿತಾ ಕುಮಾರಸ್ವಾಮಿಗೆ ಛತ್ರಿ ಸೇವೆ ನೀಡಿದ ಶಾಲಾ ಸಿಬ್ಬಂದಿ

    ಶಾಸಕಿ ಅನಿತಾ ಕುಮಾರಸ್ವಾಮಿಗೆ ಛತ್ರಿ ಸೇವೆ ನೀಡಿದ ಶಾಲಾ ಸಿಬ್ಬಂದಿ

    ರಾಮನಗರ: ನಗರದ ಖಾಸಗಿ ಶಾಲೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕಿ ಅನಿತಾ ಕುಮಾರಸ್ವಾಮಿಯವರಿಗೆ ಸಿಬ್ಬಂದಿ ಛತ್ರಿ ಸೇವೆ ನೀಡಿದ್ದಾರೆ.

    ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ನೂತನವಾಗಿ ಆಯ್ಕೆಯಾಗಿ ಬಂದ ಅನಿತಾ ಕುಮಾರಸ್ವಾಮಿಯವರು ಬಿಸಿಲಿಗೆ ಅಂಜಿ, ಸಿಬ್ಬಂದಿಯಿಂದ ಛತ್ರಿ ಸೇವೆ ಪಡೆದುಕೊಂಡಿದ್ದಾರೆ. ಅನಿತಾರವರು ನಗರದ ಖಾಸಗಿ ಶಾಲೆಯ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮ ಶಾಲಾ ಆವರಣದಲ್ಲೇ ನಡೆಯುತ್ತಿದ್ದರಿಂದ ಬಿಸಿಲ ಝಳ ನೇರವಾಗಿ ಅವರನ್ನು ಕುಟುಕುತ್ತಿತ್ತು.

    ಈ ವೇಳೆ ಇದನ್ನು ಗಮನಿಸಿದ ಶಾಲಾ ಆಡಳಿತ ಸಿಬ್ಬಂದಿ ಮೊದಲು ತಾವೇ ಛತ್ರಿ ಹಿಡಿದಿದ್ದರು, ಬಳಿಕ ಅನಿತಾರವರ ಗನ್ ಮ್ಯಾನ್ ಛತ್ರಿ ಹಿಡಿದು ಕಾರ್ಯಕ್ರಮ ಮುಗಿಯುವವರೆಗೂ ಬಿಸಿಲಿನಿಂದ ರಕ್ಷಿಸಿದ್ದಾರೆ. ನಂತರ ಅನಿತಾರವರು ಭಾಷಣ ಮಾಡುವ ವೇಳೆಯು ಸಿಬ್ಬಂದಿ ಛತ್ರಿ ಹಿಡಿದೇ ನಿಂತಿದ್ದರು. ವಿಪರ್ಯಾಸವೆಂದರೇ ಮಕ್ಕಳು ಹಾಗೂ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಎಲ್ಲರೂ ಸುಡು ಬಿಸಿಲಿನಲ್ಲೇ ಕುಳಿತಿದ್ದರೇ, ಶಾಸಕರು ಮಾತ್ರ ತಮ್ಮ ಸಿಬ್ಬಂದಿಯಿಂದ ಛತ್ರಿ ಸೇವೆ ಪಡೆದುಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರ್ಯಕ್ರಮದಲ್ಲಿ ಸರಳತೆ ಪ್ರದರ್ಶಿಸಿದ್ರು ಯದುವೀರ್ ಒಡೆಯರ್!

    ಕಾರ್ಯಕ್ರಮದಲ್ಲಿ ಸರಳತೆ ಪ್ರದರ್ಶಿಸಿದ್ರು ಯದುವೀರ್ ಒಡೆಯರ್!

    ಮೈಸೂರು: ಸಾಮಾನ್ಯವಾಗಿ ಗಣ್ಯರಿಗೆ ಮಳೆ ಬಂದಾಗ ಛತ್ರಿ ಹಿಡಿದು ಕೊಂಡು ಹಿಂಬಾಲಕರು ಅಥವಾ ಸಹಾಯಕರು ನಿಂತಿರುತ್ತಾರೆ. ತಮಗೆ ತಾವೇ ಛತ್ರಿ ಹಿಡಿದು ಕೊಳ್ಳುವುದು ಘನತೆ ಕಡಿಮೆ ಮಾಡಿಕೊಂಡಂತೆ ಅಂತಾ ಕೆಲವರು ಭಾವಿಸುತ್ತಾರೆ.

    ಇಂತಹದರ ನಡುವೆ ಮೈಸೂರಿನ ಯದುವಂಶದ ಮಹಾರಾಜ ತಮ್ಮ ಛತ್ರಿಯನ್ನು ತಾವೇ ಹಿಡಿದುಕೊಂಡು ಸರಳತೆ ಪ್ರದರ್ಶಿಸಿದರು. ಮೈಸೂರಿನಲ್ಲಿ ಯದುವೀರ್ ಒಡೆಯರ್ ಇವತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಯಿತು.

    ಆಗ ಅವರಿಗೆ ಛತ್ರಿ ಹಿಡಿಯಲು ಆಯೋಜಕರು ಮುಂದಾದರು. ಆಗ ಅದನ್ನು ನಿರಾಕರಿಸಿದ ಯದುವೀರ್ ತಾವೇ ಛತ್ರಿ ಹಿಡಿದುಕೊಂಡು ಸರಳತೆ ಮೆರೆದರು. ಮಳೆ ಬಂದರು ಯದುವೀರ್ ಕಾರ್ಯಕ್ರಮದಿಂದ ನಿರ್ಗಮಿಸದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು.

  • ಮದುವಣಗಿತ್ತಿಯಂತೆ ಶೃಂಗಾರಗೊಂಡ ಶ್ರೀಕ್ಷೇತ್ರದಲ್ಲಿ ಗಮನಸೆಳೆಯುತ್ತಿದೆ `ಕೊಡೆ ಅಲಂಕಾರ’

    ಮದುವಣಗಿತ್ತಿಯಂತೆ ಶೃಂಗಾರಗೊಂಡ ಶ್ರೀಕ್ಷೇತ್ರದಲ್ಲಿ ಗಮನಸೆಳೆಯುತ್ತಿದೆ `ಕೊಡೆ ಅಲಂಕಾರ’

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಆಗಮನಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಧರ್ಮಸ್ಥಳ ಮದುವಣಗಿತ್ತಿಯಂತೆ ಸಜ್ಜಾಗಿದೆ.

    ಒಂದೆಡೆ ವಿದ್ಯುತ್ ದೀಪಗಳ ಅಲಂಕಾರ, ಮತ್ತೊಂದೆಡೆ ಬಣ್ಣದ ಕೊಡೆಗಳ ಆಕರ್ಷಕ ಚಿತ್ತಾರ ಕಣ್ಮನ ಸೆಳೆಯುತ್ತಿದೆ. ಇಷ್ಟಕ್ಕೂ ಈ ಅಲಂಕಾರಕ್ಕೆ ಪ್ರೇರಣೆಯಾಗಿದ್ದು ಮಾರಿಷಸ್ ದ್ವೀಪ ರಾಷ್ಟ್ರದ ಒಂದು ಬೀದಿಯಂತೆ.

    ಹಿಂದೊಮ್ಮೆ ಧರ್ಮಸ್ಥಳದ ಧರ್ಮಾದಿಕಾರಿ ವೀರೇಂದ್ರ ಹೆಗ್ಗಡೆಯವರು ಮಾರಿಷಸ್ ದೇಶಕ್ಕೆ ಹೋಗಿದ್ದಾಗ ಅಂಬ್ರೆಲ್ಲಾ ಸ್ಟ್ರೀಟ್ ನೋಡಿ ಮಾರುಹೋಗಿದ್ದರು. ಇದೀಗ ಅದೇ ಮಾದರಿಯಲ್ಲಿ ಧರ್ಮಸ್ಥಳ ದೇವಸ್ಥಾನದ ಎದುರಲ್ಲಿ ಬಣ್ಣದ ಕೊಡೆಗಳಿಂದ ಅಲಂಕರಿಸಲಾಗಿದ್ದು, ಇದೀಗ ಭಾರೀ ಮೆಚ್ಚುಗೆ ಪಡೆದಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಕೂಡ ಈ ರೀತಿಯ ಅಲಂಕಾರ ಎಲ್ಲಿಯೂ ನೋಡಿಲ್ಲ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ದೇಗುಲ ದರ್ಶನದ ಬಳಿಕ ಪ್ರಧಾನಿ ಮೋದಿ ಬೆಳಗ್ಗೆ 11.45ರ ವೇಳೆಗೆ ಧರ್ಮಸ್ಥಳದಿಂದ 9 ಕಿಮೀ ದೂರವಿರುವ ಉಜಿರೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಗೆ ರೂಪೇ ಕಾರ್ಡ್ ವಿತರಿಸಲಿದ್ದಾರೆ.

    ನಂತರ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರನ್ನುದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಇದಕ್ಕಾಗಿ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ಜರ್ಮನ್ ತಂತ್ರಜ್ಞಾನದಡಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಬಿಗಿ ಪೊಲೀಸ್ ಪಹರೆ ಇದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್. ಕೆ. ದತ್ತಾ ನಿನ್ನೆ ಭದ್ರತೆ ಪರಿಶೀಲಿಸಿದರು. ಜನಧನ್ ಯೋಜನೆಯಡಿ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು 12 ಲಕ್ಷಕ್ಕೂ ಹೆಚ್ಚು ಖಾತೆ ತೆರೆದಿದ್ದು ಪ್ರಧಾನಿಯವರ ಗಮನ ಸೆಳೆದಿತ್ತು.

  • ಟ್ರೈನ್ ಛಾವಣಿಯಿಂದ ಮಳೆನೀರು ಸೋರಿಕೆ: ಛತ್ರಿ ಹಿಡ್ಕೊಂಡೇ ರೈಲು ಓಡಿಸಿದ ಚಾಲಕ- ವಿಡಿಯೋ ವೈರಲ್

    ಟ್ರೈನ್ ಛಾವಣಿಯಿಂದ ಮಳೆನೀರು ಸೋರಿಕೆ: ಛತ್ರಿ ಹಿಡ್ಕೊಂಡೇ ರೈಲು ಓಡಿಸಿದ ಚಾಲಕ- ವಿಡಿಯೋ ವೈರಲ್

    ರಾಂಚಿ: ಮಳೆ ಬಂದಾಗ ಮನೆಯ ಛಾವಣಿ ಸೋರಿಕೆಯಾಗೋದನ್ನ ಕೇಳಿರ್ತೀವಿ. ಹಾಗೇ ಕೆಲವು ಬಸ್‍ಗಳಲ್ಲೂ ಮಳೆ ನೀರು ಸೋರಿಕೆಯಾಗುತ್ತೆ. ಆದ್ರೆ ರೈಲಿನಲ್ಲಿ ಹೀಗಾದ್ರೆ ಏನ್ ಮಾಡೋದು? ಅದರಲ್ಲೂ ರೈಲು ಚಾಲನೆ ಮಾಡೋ ಚಾಲಕರೇ ಸೋರೋ ಮಳೆನೀರಿನಿಂದ ರಕ್ಷಿಸಿಕೊಳ್ಳೋಕೆ ಛತ್ರಿ ಹಿಡಿದು ಕೂತ್ರೆ? ಇಂತಹದ್ದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರೈಲು ಚಾಲಕ ಛತ್ರಿ ಹಿಡಿದು ರೈಲು ಚಾಲನೆ ಮಾಡುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ರೈಲಿನ ಛಾವಣಿಯಿಂದ ನೀರು ಸೋರಿಕೆಯಾಗ್ತಿದ್ದು, ಇದರಿಂದ ಕಂಟ್ರೋಲ್ ಪ್ಯಾನಲ್‍ಗೆ ಹಾನಿಯಾಗದಂತೆ ರಕ್ಷಿಸಲು ಚಾಲಕ ಛತ್ರಿ ಹಿಡಿದು ಕೂತಿದ್ದಾರೆ. ಅಲ್ಲದೆ ನೆಲದ ಮೇಲೆ ದಿನಪತ್ರಿಕೆಗಳನ್ನ ಹಾಸಲಾಗಿದ್ದು ಅವೂ ಕೂಡ ನೀರಿನಲ್ಲಿ ನೆಂದು ತೊಪ್ಪೆಯಾಗಿದೆ.

    ಇದನ್ನೂ ಓದಿ: ಈ ಸರ್ಕಾರಿ ಕಚೇರಿಯಲ್ಲಿ ಹೆಲ್ಮೆಟ್ ಕಡ್ಡಾಯ!

    ರೈಲು ಚಾಲಕ ತನ್ನ ಕರ್ತವ್ಯವನ್ನ ನಿರ್ವಹಿಸಿದ್ರೆ ಸ್ಪೀಕರ್ ಮತ್ತು ಕ್ಯಾಮೆರಾ ಹಿಂದಿದ್ದ ಮತ್ತೋರ್ವ ವ್ಯಕ್ತಿ ತಮ್ಮ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ವರ್ಷಗಳಿಂದ ಈ ಸೋರಿಕೆ ಸಮಸ್ಯೆಯನ್ನ ಎದುರಿಸುತ್ತಿದ್ದೇವೆ. ಎಲ್ಲಾ ಸಮಯದಲ್ಲೂ ನಾವು ಹೆಚ್ಚಾಗೇ ಜಾಗರೂಕರಾಗಿರಬೇಕು ಅಂತ ಹೇಳಿದ್ದಾರೆ.

    ಜಾಗರೂಕತೆಯಿಂದ ಇರೋಕೆ ನಮಗೇನೂ ತೊಂದರೆಯಿಲ್ಲ. ಆದ್ರೆ ಕೆಲಸದಲ್ಲಿ ಸಾಕಷ್ಟು ಅನಾನುಕೂಲಗಳು ಹಾಗೂ ತೊಂದರೆಗಳಿವೆ ಅಂತ ಅವರು ಹೇಳಿದ್ದಾರೆ.

    ತಮ್ಮ ಸಂಕಷ್ಟದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲು ಈ ವಿಡಿಯೋವನ್ನ ಸಾಧ್ಯವಾದಷ್ಟು ಹಂಚಿಕೊಳ್ಳಿ ಅಂತ ವ್ಯಕ್ತಿ ಕೇಳಿಕೊಂಡಿದ್ದಾರೆ. ಈ ವಿಡಿಯೋವನ್ನ ಜಾರ್ಖಂಡ್‍ನಲ್ಲಿ ಚಿತ್ರೀಕರಿಸಲಾಗಿದೆ ಆದ್ರೆ ಯಾವಾಗ ಚಿತ್ರೀಕರಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

    ಆದ್ರೆ ಈ ವಿಡಿಯೋ ಟ್ವಿಟ್ಟರ್‍ನಲ್ಲಿ ವೈರಲ್ ಆದ ಬಳಿಕ ರೈಲ್ವೆ ಇಲಾಖೆ ಟ್ವಿಟ್ಟರ್ ಖಾತೆಯಿಂದ ಪ್ರತಿಕ್ರಿಯೆ ಬಂದಿದೆ. ನಮಗೆ ಈ ಬಗ್ಗೆ ಕಾಳಜಿ ಇದೆ. ತನಿಖೆ ಮಾಡಲಾಗಿದೆ. ಇದು ಕಾರ್ಯನಿರ್ವಹಿಸದ ಎಂಜಿನ್ ಆಗಿದ್ದು ಮುಂದಿನಿಂದ ಮತ್ತೊಂದು ಎಂಜಿನ್ ಅದನ್ನ ಎಳೆದೊಯ್ಯೋದನ್ನ ವಿಡಿಯೋದಲ್ಲಿ ಕಾಣಬಹುದು ಎಂದು ಹೇಳಿದೆ.