Tag: Umapathy

  • ಧ್ರುವ ಹುಟ್ಟುಹಬ್ಬದ ದಿನ ನಿರ್ಮಾಪಕ ಉಮಾಪತಿಗೌಡ ಹೊಸ ಸಿನಿಮಾ ಅನೌನ್ಸ್!

    ಧ್ರುವ ಹುಟ್ಟುಹಬ್ಬದ ದಿನ ನಿರ್ಮಾಪಕ ಉಮಾಪತಿಗೌಡ ಹೊಸ ಸಿನಿಮಾ ಅನೌನ್ಸ್!

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೆಆರ್ ರಸ್ತೆಯ ತಮ್ಮ ನಿವಾಸದ ಮುಂದೆ ನಟ ಧ್ರುವ ಸರ್ಜಾ ಅದ್ಧೂರಿಯಾಗಿ ಬರ್ತ್‌ಡೇ (Dhruva Sarja Birthday) ಆಚರಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು (Dhruva Sarja Fans) ರಕ್ತದಾನ, ಅನ್ನದಾನ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ದಾನದಂತಹ ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದರು.

    ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ದೂರದ ಊರಿನಿಂದ ಅಭಿಮಾನಿಗಳು, ಆಪ್ತರು ಹಾಗೂ ಕುಟುಂಬಸ್ಥರು ಆಗಮಿಸಿ ಶುಭ ಹಾರೈಸಿದ್ದಾರೆ. ಇದೇ ವೇಳೆ ಆಗಮಿಸಿದ ನಿರ್ಮಾಪಕ ಉಮಾಪತಿ ಗೌಡ (Umapathy) ಧ್ರುವ ಸರ್ಜಾಗೆ ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ. ಬಳಿಕ ಮಾತನಾಡಿದ ಅವರು. ಧ್ರುವ ಸರ್ಜಾ ಅವರು ನಾಯಕರಾಗಿ ತಮ್ಮ ಬ್ಯಾನರ್ ನಲ್ಲಿ ಮುಂದಿನ ದಿನಗಳಲ್ಲಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಈ ಮಾತು ಕೇಳಿದ ಅಭಿಮಾನಿಗಳು ಖುಷಿಯಿಂದ ಕೇಕೆ ಹಾಕಿ ಕುಣಿದಾಡಿದ್ದಾರೆ. ಇದನ್ನೂ ಓದಿ: ನಂಬಿಕೆ, ಜಾನಪದದ ಮಿಶ್ರಣವೇ ಕಾಂತಾರ ಚಾಪ್ಟರ್-1: ಅಣ್ಣಾಮಲೈ ಶ್ಲಾಘನೆ

    ನಿರ್ಮಾಪಕ ಉಮಾಪತಿ ಗೌಡ ಈ ಹಿಂದೆ ಸುದೀಪ್ ಹಾಗೂ ದರ್ಶನ್ ಅವರಿಗೆ ಸಿನಿಮಾ ಮಾಡಿರುವ ನಿರ್ಮಾಪಕರು. ಇದೀಗ ಧ್ರುವ ಸರ್ಜಾ ಅವರ ಜೊತೆಗೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸದ್ಯ ಧ್ರುವ ಕೆಡಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸೀತಾ ಪಯಣ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಬಳಿಕ ಉಮಾಪತಿಗೌಡ ಅವರ ಚಿತ್ರದಲ್ಲಿ ನಟಿಸುವ ಪ್ಲ್ಯಾನ್ ಕೂಡಾ ನಡೆಯುತ್ತಿದೆ. ಇದನ್ನೂ ಓದಿ: ರಾಕೇಶ್ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ, ಆದ್ರೆ ಜನರಿಗೆ ಆತನ ಮೇಲಿರುವ ಪ್ರೀತಿಯನ್ನ ನೋಡ್ತಿದ್ದೀನಿ: ಗುಲ್ಶನ್ ದೇವಯ್ಯ

  • ಲ್ಯಾಂಬೋರ್ಗಿನಿ ತಗೋಳೋಕೆ ದರ್ಶನ್‌ಗೆ ಅಡ್ವಾನ್ಸ್ ಕೊಟ್ಟಿದ್ದೇ ನಾನು: ಉಮಾಪತಿ

    ಲ್ಯಾಂಬೋರ್ಗಿನಿ ತಗೋಳೋಕೆ ದರ್ಶನ್‌ಗೆ ಅಡ್ವಾನ್ಸ್ ಕೊಟ್ಟಿದ್ದೇ ನಾನು: ಉಮಾಪತಿ

    ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಇದೀಗ ರೇಣುಕಾಸ್ವಾಮಿ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ರಾಬರ್ಟ್, ಹೆಬ್ಬುಲಿ ಸಿನಿಮಾಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ‘ರಾಬರ್ಟ್’ ಸಿನಿಮಾ ವೇಳೆ ಆ ಲ್ಯಾಂಬೋರ್ಗಿನಿ ತಗೋಳೋಕೆ ದರ್ಶನ್‌ಗೆ ಅಡ್ವಾನ್ಸ್ ಕೊಟ್ಟಿದ್ದೇ ನಾನು ಎಂದು ಉಮಾಪತಿ (Umapathy Srinivas) ಹೇಳಿದ್ದಾರೆ.

    ಕೆಲವು ಫ್ಯಾನ್ಸ್ ನಮ್ಮ ಬಾಸ್ ಜೊತೆ ನೀವು ಸಿನಿಮಾ ಮಾಡಿದ್ದೀರಿ ಅಂತ ಸೋಷಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡಿದ್ದರು. ಈಗ ಹೇಳ್ತೀನಿ, ನಾನು ದುಡ್ಡು ಮಾಡಿದ ಮೇಲೆ ನಿಮ್ಮ ಬಾಸ್‌ಗೆ ದುಡ್ಡು ಕೊಟ್ಟು ಸಿನಿಮಾ ಮಾಡಿರೋದು. ಆ ಲ್ಯಾಂಬೋರ್ಗಿನಿ ಅಂತ ಮೂರೊತ್ತು ಅಂತಾರಲ್ವಾ ಅದಕ್ಕೆ ಅಡ್ವಾನ್ಸ್ ಕೊಟ್ಟಿದ್ದೇ ನಾನು ಎಂದಿದ್ದಾರೆ.  ಅವರ ದುಡ್ಡು ಅವರಿಗೆ ಕೊಟ್ಟಿದ್ದೀನಿ. ನಾನೇನು ಬಿಟ್ಟಿ ಕೆಲಸ ಮಾಡಿಸಿಕೊಂಡಿಲ್ಲ. ಅವರು ಏನು ಬೆಲೆ ಕೊಟ್ಟಿದ್ದಾರೋ ಅದಕ್ಕೆ ತಕ್ಕಂತೆ ಕೆಲಸ ತಗೊಂಡಿದ್ದೀನಿ ಎಂದು ದರ್ಶನ್ ಕುರಿತು ಉಮಾಪತಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಕಲ್ಕಿ’ ಸಿನಿಮಾದ ಭೈರವ ಆಂಥಮ್ ರಿಲೀಸ್: ಕುಣಿದ ಪ್ರಭಾಸ್ ಫ್ಯಾನ್ಸ್

    ಈ ಹಿಂದೆ ‘ಕಾಟೇರ’ ಸಿನಿಮಾ ಟೈಟಲ್ ಕೊಟ್ಟಿದ್ದು ನಾನೇ ಎಂದು ಉಮಾಪತಿ ಮಾತನಾಡಿದ್ದರು. ಆಗ ಅಯ್ಯೋ ತಗಡೇ ಎಂದು ಉಮಾಪತಿಗೆ ದರ್ಶನ್ ತಿರುಗೇಟು ನೀಡಿದ್ದರು. ಆಗ ತಗಡಿಗೂ ಚಿನ್ನದ ಬೆಲೆ ಬರುತ್ತದೆ ಎಂದು ಉಮಾಪತಿ ಹೇಳಿಕೆ ನೀಡಿದ್ದರು. ಇದೀಗ ರೇಣುಕಾಸ್ವಾಮಿ ಪ್ರಕರಣದ ವಿಚಾರವಾಗಿ ಅರೆಸ್ಟ್ ಆಗುತ್ತಿದ್ದಂತೆ ತಗಡಿಗೂ ಚಿನ್ನದ ಬೆಲೆ ಬರುತ್ತದೆ ಎಂದ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಇದರ ಬಗ್ಗೆ ನಿರ್ಮಾಪಕ ಪ್ರತಿಕ್ರಿಯೆ ನೀಡಿದ್ದಾರೆ.

    ತಗಡು ವಿಚಾರಕ್ಕೆ ನಾನೇನು ಉತ್ತರ ಕೊಡಬೇಕು ಅಂತಾ ಏನಿಲ್ಲ. ನಾನು ಪ್ರತಿ ದಿನ ಬೆಳೆಯಬೇಕು. ಉತ್ತುಂಗ ಸ್ಥಾನಕ್ಕೆ ಹೋಗಬೇಕು ಎಂಬುದು ಬಿಟ್ಟರೇ ಯಾರಿಗೂ ತೊಂದರೆ, ದ್ವೇಷ ಸಾಧಿಸುವ ಯೋಚನೆ ನನಗಿಲ್ಲ. ರೋಡ್‌ನಲ್ಲಿ ಯಾರೋ ಬೊಗಳ್ತಾರೆ ಅಂತಾ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ನಮ್ಮನ್ನು ಒಂದು ಕುಟುಂಬವಿದೆ. ನಮ್ಮ ಬೆಳವಣಿಗೆಯಲ್ಲಿ ಹಲವರ ಪಾತ್ರವಿದೆ. ಅದನ್ನು ತಲೆಯಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ದರ್ಶನ್‌ಗೆ ಉಮಾಪತಿ ಟಾಂಗ್ ಕೊಟ್ಟಿದ್ದಾರೆ.

    ಅಂದಹಾಗೆ, 2021ರಲ್ಲಿ ಬಿಡುಗಡೆಯಾದ ದರ್ಶನ್ ನಟನೆಯ `ರಾಬರ್ಟ್’ ಸಿನಿಮಾವನ್ನು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು.

  • ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮದುವೆ ಆಲ್ಬಂ

    ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮದುವೆ ಆಲ್ಬಂ

    ಹುಭಾಷಾ ನಟ ಅರ್ಜುನ್ ಸರ್ಜಾ (Arjun Sarja) ಪುತ್ರಿ ಐಶ್ವರ್ಯಾ (Aishwarya Sarja) ಮತ್ತು ತಮಿಳು ನಟ ಉಮಾಪತಿ ರಾಮಯ್ಯ ಮದುವೆಯ ಸುಂದರ ಫೋಟೋಗಳು.

    ಚೆನ್ನೈನ ಅಂಜನಸುತ ಶ್ರೀ ಯೋಗಾಂಜನೇಯ ದೇವಸ್ಥಾನದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಐಶ್ವರ್ಯಾ ಸರ್ಜಾ ಮದುವೆ ನಡೆಯಿತು. ಇದನ್ನೂ ಓದಿ:ತಮಿಳಿನಲ್ಲಿ ಬಿಗ್‌ ಚಾನ್ಸ್‌ ಗಿಟ್ಟಿಸಿಕೊಂಡ ಕನ್ನಡದ ಆಲಿಯಾ ಭಟ್

    ಜೂನ್ 7ರಿಂದ ಅರಿಶಿನ ಶಾಸ್ತ್ರದೊಂದಿಗೆ ನಟಿಯ ಮದುವೆ ಕಾರ್ಯಕ್ರಮಗಳು ಆರಂಭವಾದವು. ಆ ನಂತರ ಸಂಗೀತ್ ಹಾಗೂ ವರಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

    ಐಶ್ವರ್ಯಾ ಮದುವೆಗೆ ಸಂಗೀತ್ ಸಮಾರಂಭಕ್ಕೆ ಹೆಸರಾಂತ ಕಲಾ ನಿರ್ದೇಶಕ ಮೋಹನ್ ಅವರು ಅದ್ಧೂರಿ ಸೆಟ್ ಹಾಕಿದ್ದರು. ಎರಡು ಕುಟುಂಬದ ಬಂಧು ಮಿತ್ರರು ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

    ಚಿತ್ರರಂಗದ ನಟ-ನಟಿಯರಿಗೆ ಜೂನ್ 14ರಂದು ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

    ಐಶ್ವರ್ಯಾ ಮತ್ತು ಉಮಾಪತಿ (Umapathy Ramaiah) ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕುಟುಂಬಸ್ಥರ ಒಪ್ಪಿಗೆ ಪಡೆದು ಈಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

  • ಅಸಲಿಗೆ ‘ಕಾಟೇರ’ ಟೈಟಲ್‌ ಕೊಟ್ಟಿದ್ದು ಯಾರು? ನಿರ್ದೇಶಕ ಮಹೇಶ್‌ ಸ್ಪಷ್ಟನೆ

    ಅಸಲಿಗೆ ‘ಕಾಟೇರ’ ಟೈಟಲ್‌ ಕೊಟ್ಟಿದ್ದು ಯಾರು? ನಿರ್ದೇಶಕ ಮಹೇಶ್‌ ಸ್ಪಷ್ಟನೆ

    ಸ್ಯಾಂಡಲ್‌ವುಡ್‌ನಲ್ಲಿ ‘ಕಾಟೇರ’ ಟೈಟಲ್ ಬಗ್ಗೆ ಕದನ ಶುರುವಾಗಿದೆ. ‘ಕಾಟೇರ’ ಟೈಟಲ್ ಕೊಟ್ಟಿದ್ದು ನಾನೇ ಎಂದ ಉಮಾಪತಿಗೆ ದರ್ಶನ್ ಕೌಂಟರ್ ಕೊಟ್ಟಿದ್ದಾರೆ. ನಾವು ಗುಮ್ಮಿಸಿಕೊಳ್ಳುವವರಲ್ಲ ಎಂದು ದರ್ಶನ್‌ಗೆ ಉಮಾಪತಿ ಟಕ್ಕರ್ ಕೊಟ್ಟರು. ಅಸಲಿಗೆ ಕಾಟೇರ ಟೈಟಲ್ ಕೊಟ್ಟಿದ್ದು ಯಾರು? ಆಗಿದ್ದೇನು ಎಂದು ನಿರ್ದೇಶಕ ಮಹೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

    ‘ಮದಗಜ’ ಟೈಟಲ್ ಇದ್ದಿದ್ದು ನಿರ್ಮಾಪಕ ರಾಮ್‌ಮೂರ್ತಿ ಸರ್ ಹತ್ತಿರ. ಅದರಂತೆ ‘ಕಾಟೇರ’ ಟೈಟಲ್ ಇದ್ದಿದ್ದು ಉಮಾಪತಿ ಸರ್ ಹತ್ತಿರ. ಆದರೆ ಇದನ್ನು ಹೇಳಿ ಮಾಡಿಸಿದ್ದು ದರ್ಶನ್ ಅವರು ಎಂದು ಮಹೇಶ್ ಮಾತನಾಡಿದ್ದಾರೆ. ಎರಡು ಕಡೆ ಮಾತಾಡಿ ಸಿನಿಮಾ ಟೈಟಲ್ ಅನ್ನು ದರ್ಶನ್ ಎಕ್ಸ್‌ಚೇಂಜ್ ಮಾಡಿಸಿದ್ದರು.

    ದರ್ಶನ್ ಮನೆಯಲ್ಲಿ ಕಾಟೇರ ಎಂಬ ಕುದುರೆ ಇತ್ತು. ಅದು ಸತ್ತ ಮೇಲೆ ನೆನಪಿಗೋಸ್ಕರ ಆ ಟೈಟಲ್‌ನ ತುರುಣ್ ಸುಧೀರ್ ಅವರ ಬ್ಯಾನರ್‌ನಲ್ಲಿ ರಿಜಿಸ್ಟರ್ ಮಾಡಿಸುವ ಪ್ಲ್ಯಾನ್ ಇತ್ತು. ಆದರೆ ಒಂದೇ ಬ್ಯಾನರ್‌ನಲ್ಲಿ 3 ಹೆಸರನ್ನು ರಿಜಿಸ್ಟರ್ ಮಾಡೋಕೆ ಆಗಲ್ಲ ಅಂತ ಹೇಳಿ. ಉಮಾಪತಿ ಅವರ ಬ್ಯಾನರ್‌ನಲ್ಲಿ ದರ್ಶನ್ ರಿಜಿಸ್ಟರ್ ಮಾಡಿಸಿದ್ದರು. ಈಗ ಈ ವಿಚಾರ ದೊಡ್ಡದಾಗಿ ಇಲ್ಲಿತನಕ ಬಂದಿದೆ ಎಂದರು ಮಹೇಶ್.

    ದರ್ಶನ್ ಅವರು ಯಾವತ್ತು ಯಾವುದರ ಬಗ್ಗೆಯೂ ಮಾತನಾಡಲ್ಲ. ಈಗ ಮಾತನಾಡಿದ್ದಾರೆ ಅಂದರೆ ಅವರಿಗೆ ನೋವಾಗಿದೆ ಎಂದರ್ಥ. ಈಗ ಇದರ ಬಗ್ಗೆ ಸ್ಪಷ್ಟನೆ ನೀಡೋಣ ಅಂತ ನಿರ್ಧರಿಸಿದ್ದರು. ಯಾಕೆಂದ್ರೆ ಇದಾದ ಮೇಲೆ ಅವರು ‘ಡೆವಿಲ್’ ಶೂಟಿಂಗ್‌ನಲ್ಲಿ ಬ್ಯುಸಿಯಾಗ್ತಾರೆ ಅಂತ. ಈ ವಿಚಾರಕ್ಕೆ ಸ್ಪಷ್ಟನೆ ಇರಲಿ ಅಂತಲೇ ಕಾಟೇರ ಸಕ್ಸಸ್‌ ಕಾರ್ಯಕ್ರಮದಲ್ಲಿ ವೇದಿಕೆಗೆ ಕರೆದು ಡಿಬಾಸ್, ನನ್ನ ಮತ್ತು ತರುಣ್ ಬಳಿ ಕ್ಲ್ಯಾರಿಟಿ ಕೊಡಿಸಿದ್ದರು. ಇದನ್ನೂ ಓದಿ:ಟಾಪ್‌ಲೆಸ್ ಅವತಾರದಲ್ಲಿ ಸೋನಾಲಿ- ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ನಟಿ

    ಉಮಾಪತಿ ಅವರು ಕಾಟೇರ ಟೈಟಲ್ ಕೊಟ್ಟಿದ್ದು ನಾನೇ ಎಂದು ಹಲವು ಕಡೆ ಹೇಳಿದ್ದಾರೆ. ಹಾಗಾಗಿ ದರ್ಶನ್ ಅವರು ಇಂದು ಸ್ಪಷ್ಟನೆ ಕೊಟ್ಟರು. ಅಂದು ಸಾಕಷ್ಟು ಬಾರಿ ದರ್ಶನ್ ಅವರೇ ನನಗೆ ಕಾಟೇರ ಟೈಟಲ್ ಹೇಳಿದ್ದು ಎಂದು ನನ್ನ ಬಳಿ ಉಮಾಪತಿ ಸರ್ ಹೇಳಿಕೊಂಡಿದ್ದರು. ಈಗ ಸಮಯ ಬದಲಾಗಿದೆ ಅಷ್ಟೇ ಎಂದು ಮಹೇಶ್ ಮಾತನಾಡಿದ್ದರು.

    ಬೆಂಕಿ ಇಲ್ಲದೇ ಹೊಗೆಯಾಡಲ್ಲ. ಅವತ್ತಿನ ಅವರ ಹೇಳಿಕೆಯಿಂದಲೇ ಇದೆಲ್ಲಾ ಇಂದು ಶುರುವಾಗಿದ್ದು, ಆದರೆ ದರ್ಶನ್ ಮತ್ತು ಉಮಾಪತಿ ಒಂದಾಗಲಿ, ಅವರ ಸಂಬಂಧ ಸರಿ ಹೋಗಲಿ ಎಂದು ನಾನು ಅಶಿಸುತ್ತೇನೆ ಎಂದು ಮಹೇಶ್ ಮಾತನಾಡಿದ್ದರು.

  • ಯಶ್ ಜೊತೆ ಸಿನಿಮಾ ಮಾಡುವ ಬಗ್ಗೆ ಅಪ್‌ಡೇಟ್ ಕೊಟ್ಟ ನಿರ್ಮಾಪಕ ಉಮಾಪತಿ

    ಯಶ್ ಜೊತೆ ಸಿನಿಮಾ ಮಾಡುವ ಬಗ್ಗೆ ಅಪ್‌ಡೇಟ್ ಕೊಟ್ಟ ನಿರ್ಮಾಪಕ ಉಮಾಪತಿ

    ಸ್ಯಾಂಡಲ್‌ವುಡ್ (Sandalwood) ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ (Umapathy Srinivas Gowda) ಇದೀಗ ಸಿನಿಮಾ ಮತ್ತು ರಾಜಕೀಯ (Politics) ಎರಡರಲ್ಲೂ ಬ್ಯುಸಿಯಾಗಿದ್ದಾರೆ. `ಉಪಾಧ್ಯಕ್ಷ’ ಚಿತ್ರಕ್ಕೆ ನಿರ್ಮಾಣ ಮಾಡುವ ಮೂಲಕ ಉಮಾಪತಿ ಸುದ್ದಿಯಲ್ಲಿದ್ದಾರೆ. ಇದೀಗ `ಕೆಜಿಎಫ್ 2′ (KGF 2)ಸ್ಟಾರ್ ಯಶ್ (Yash) ಜೊತೆ ಸಿನಿಮಾ ಮಾಡುವುದಾಗಿ ನಿರ್ಮಾಪಕ ಉಮಾಪತಿ ಬಿಗ್ ಅಪ್‌ಡೇಟ್ ನೀಡಿದ್ದಾರೆ.

    ಹೆಬ್ಬುಲಿ, ರಾಬರ್ಟ್, ಮದಗಜ ಅಂತಹ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಉಮಾಪತಿ ಅವರು ರಾಜಕೀಯಕ್ಕೆ (Politics) ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಸಿನಿಮಾ ಜೊತೆ ಉಮಾಪತಿ ಅವರು ಚುನಾವಣೆ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾಹಿತಿಯಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಸಂದರ್ಶನವೊಂದರಲ್ಲಿ ಸಿನಿಮಾ, ರಾಜಕೀಯ ಹಲವು ವಿಚಾರಗಳ ಬಗ್ಗೆ ಉಮಾಪತಿ ಮಾತನಾಡಿದ್ದಾರೆ. ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಸಾಂಗ್ ಹಾಡಲಿದ್ದಾರೆ ಎಂ.ಎಂ ಕ್ಷೀರವಾಣಿ

    ನಿರ್ಮಾಪಕ ಉಮಾಪತಿ (Producer Umapathy) ಅವರು ರಾಕಿ ಭಾಯ್ ಯಶ್ ಜೊತೆ ಸಿನಿಮಾ ಮಾಡುತ್ತಾರಾ? ಯಾವಾಗ ಸಿನಿಮಾ ಮಾಡುತ್ತಾರೆ ಎಂದು ಎದುರಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. 100% ಸತ್ಯ. ಯಶ್ (Yash) ಅವರೇ ಕನ್ನಡ ನಿರ್ಮಾಪಕರಿಗೆ (Producer) ಪ್ರಾಮುಖ್ಯತೆ ಕೊಡುವುದಾಗಿ ತಿಳಿಸಿದ್ದರು. ಆ ಬಗ್ಗೆ ಅವರಿಗೆ ಬಹಳ ಅಭಿಮಾನವಿದೆ. ನನ್ನ ಬಗ್ಗೆ ವಿಶೇಷವಾದ ಪ್ರೀತಿಯೂ ಇದೆ. ಗೌರವವೂ ಇದೆ. ಹಾಗಾಗಿ ಖಂಡಿತವಾಗಿಯೂ ಒಟ್ಟಿಗೆ ಸಿನಿಮಾ ಮಾಡುತ್ತೇವೆ ಎಂದು ತಿಳಿಸಿದ್ದರು.

    `ಕೆಜಿಎಫ್ 2′ ನಂತರ ಯಶ್ ಜೊತೆಗಿನ ಸಿನಿಮಾ ಅಪ್‌ಡೇಟ್ ಸಿಗದೇ ಬೇಸರದಲ್ಲಿದ್ದ ಅಭಿಮಾನಿಗಳಿಗೆ, ಉಮಾಪತಿ ಜೊತೆಗಿನ ಸಿನಿಮಾ ಸುದ್ದಿ ಕೇಳಿ ಥ್ರಿಲ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಾರಾ ಎಂಬುದರ ಬಗ್ಗೆ ಯಶ್‌ ಕಡೆಯಿಂದ ಅಧಿಕೃತ ಅಪ್‌ಡೇಟ್‌ ಸಿಗುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದರ್ಶನ್ ಕ್ಷಮೆ ಕೇಳಲಿ, ಮುಂದುವರಿಸಿದ್ರೆ ಹೆಚ್ಚಿನ ತೇಜೋವಧೆ – ಇಂದ್ರಜಿತ್

    ದರ್ಶನ್ ಕ್ಷಮೆ ಕೇಳಲಿ, ಮುಂದುವರಿಸಿದ್ರೆ ಹೆಚ್ಚಿನ ತೇಜೋವಧೆ – ಇಂದ್ರಜಿತ್

    ಬೆಂಗಳೂರು: ಈಗಲೇ ದರ್ಶನ್ ಕ್ಷಮೆ ಕೇಳಿದರೆ ಒಳ್ಳೆಯವರಾಗುತ್ತೀರಿ. ಘಟನೆ ನಡೆದಿರುವ ಬಗ್ಗೆ ಕ್ಷಮೆ ಕೇಳಿ ನ್ಯಾಯ ಒದಗಿಸಿಕೊಡಿ ಎಂದು ನಿರ್ಮಾಪಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೊಲೀಸ್ ಆಫೀಸರ್ ಮುಂದೆ ಎಲ್ಲವನ್ನೂ ಹೇಳಲು ಸಿದ್ಧ. ನಾನು ವೈಯಕ್ತಿಕವಾಗಿ ಮುಂದೆ ಬಂದು ಮಾತನಾಡಿದ್ದೇನೆ. ಈ ಪ್ರಕರಣವನ್ನು ಮತ್ತಷ್ಟು ಮುಂದುವರಿಸುವುದು ಬೇಡ. ಮತ್ತೆ ಮುಂದುವರಿಸಿದರೆ ಇನ್ನು ಹೆಚ್ಚಿನ ತೇಜೋವಧೆಯಾಗಲಿದೆ. ಸಂದೇಶ್, ಸಂದೇಶ್ ನಾಗರಾಜ್ ಅವರಲ್ಲಿ ಕ್ಷಮೆ ಕೇಳಿದ್ರೆ ಏನ್ ಕಳ್ಕೋತ್ತೀರಾ ಎಂದು ದರ್ಶನ್ ಅವರನ್ನು ಇಂದ್ರಜಿತ್ ಪ್ರಶ್ನಿಸಿದ್ದಾರೆ.

    ಮೇರು ನಟ ಹೇಗಿರಬೇಕು ಎಂಬುದನ್ನು ರಾಜ್ ಕುಮಾರ್ ನೋಡಿ ಕಲಿಯಬೇಕು. ನಿಮ್ಮ ಪ್ರತಿಯೊಂದು ಹೆಜ್ಜೆಯೂ ಮುಖ್ಯವಾಗುತ್ತದೆ. ಸಾಮಾನ್ಯರ ವೈಯಕ್ತಿಕ ಜೀವನ ಫೋಕಸ್ ಆಗುವುದಿಲ್ಲ. ನಿಮ್ಮ ಜೀವನ ಹೆಚ್ಚು ಫೋಕಸ್ ಆಗಲಿದೆ. ಹಾಗಾಗಿ ನಾನು ಮಾತನಾಡುತ್ತೀದ್ದೇನೆ ಎಂದು ತಿಳಿಸಿದರು.

    ನನ್ನ ಟ್ರ್ಯಾಕ್ ರೆಕಾರ್ಡ್ ನೋಡಿದ್ದೀರಾ? ನನ್ನ ಮಾತುಗಳಿಗೆ ನಾನು ಬದ್ಧನಾಗಿದ್ದೇನೆ. ಸಮಾಜದ ಕಾಳಜಿಯಿಂದ ಮಾತನಾಡುತ್ತಿದ್ದೇನೆ. ಸಾಮಾನ್ಯ ಸಪ್ಲೈಯರಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಕೊಡಿಸಲು ಮುಂದೆ ಬಂದಿದ್ದೇನೆ ಎಂದರು. ಇದನ್ನೂ ಓದಿ: ನಾನು ದಲಿತ ಅಲ್ಲ ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು: ಗಂಗಾಧರ್

    ಇದು ಜಾತಿ ವಿಷಯ ಅಲ್ಲ. ಶೋಷಿತನಿಗೆ ಅನ್ಯಾಯವಾಗಿದೆ. ಆಡಿಯೋದಲ್ಲಿ ಹೋಟೆಲ್ ಮಾಲೀಕ ತಪ್ಪೊಪ್ಪಿಕೊಂಡಿದ್ದಾರೆ. ಅವರು ವಿಸ್ತಾರವಾಗಿ ಮಾತಾಡಿದ್ದು, ಆಡಿಯೋದಲ್ಲಿ ಇರುವ ಧ್ವನಿ ನನ್ನದೆ. ಸಂದೇಶ್ ಜೊತೆ ಮಾತನಾಡಿದ್ದು ನಾನೇ. ಕೇವಲ ಅವರೊಬ್ಬರ ಜೊತೆಯಲ್ಲ ಅಲ್ಲಿನ ಸಿಬ್ಬಂದಿ ಜೊತೆಯೂ ಸಹ ಮಾತನಾಡಿದ್ದೇನೆ ಎಂದು ಹೇಳಿದರು.

    ಮೈಸೂರಿನ ಮಾಧ್ಯಮದ ಮೂಲಕ ಹಲವು ವಿಚಾರದಲ್ಲಿ ನೊಂದವರು ನನಗೆ ಕರೆ ಮಾಡಿ ಮಾತನಾಡಿದ್ದಾರೆ. ನ್ಯಾಯಲಯದ ಬಗ್ಗೆ ಸಂಪೂರ್ಣ ನಂಬಿಕೆ ಇದೆ. ದರ್ಶನ್‍ನಿಂದ ಯಾವುದೇ ಕಾಲ್ ಬಂದಿಲ್ಲ. ಯಾರಿಂದಲೂ ಬೆದರಿಕೆ ಕರೆ ಬಂದಿಲ್ಲ. ರಾಜಿ ಸಂಬಂಧ ಯಾವುದೋ ಕಾಲ್ ಬಂದಿತ್ತು ಎಂದು ತಿಳಿಸಿದರು.

    ಕುಮಾರಸ್ವಾಮಿ ಜೊತೆಗೆ ಇದ್ದ ಫೋಟೋದ ಬಗ್ಗೆ ಪ್ರತಿಕ್ರಿಯಿಸಿ, ಹಲವಾರು ಬಾರಿ ನಾನು ಕುಮಾರಸ್ವಾಮಿ ಜೊತೆ ಭೇಟಿ ಮಾಡಿದ್ದೇನೆ. ಆ ಫೋಟೋ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆಯ ಫೋಟೋ ಎಂದು ಸ್ಪಷ್ಟನೆ ನೀಡಿದರು.

    ಹಿರಿಯ ವಕೀಲ ಶ್ಯಾಮ್ ಸುಂದರ್ ಮಾತನಾಡಿ, ಯಾವುದೇ ದಾಖಲೆಗಳನ್ನು ಮಾಧ್ಯಮಗಳಿಗೆ ಕೊಡಬೇಡಿ. ಕೇವಲ ತನಿಖೆಗೆ ಮಾತ್ರ ನೀಡಿ ಅಂತ ನಾನೇ ಇಂದ್ರಜಿತ್ ಲಂಕೇಶ್ ಅವರಿಗೆ ಹೇಳಿದ್ದೆ. ತನಿಖೆ ವೇಳೆ ಪೊಲೀಸರು ಸಹ ಸ್ಟೇಟ್ಮೆಂಟ್ ಕೊಡಬಾರದು. ಸಾಕ್ಷ್ಯಧಾರಗಳಿರುವಂತದ್ದನ್ನು ಮಾಧ್ಯಮಗಳಿಗೆ ಕೊಡದಂತೆ ಹೇಳಿದ್ದೇನೆ ಎಂದರು.

  • ರಾಜಿಯಾಗುವ ಪ್ರಶ್ನೆಯೇ ಇಲ್ಲ: ನಿರ್ಮಾಪಕ ಉಮಾಪತಿ

    ರಾಜಿಯಾಗುವ ಪ್ರಶ್ನೆಯೇ ಇಲ್ಲ: ನಿರ್ಮಾಪಕ ಉಮಾಪತಿ

    ಬೆಂಗಳೂರು: ನಟ ದರ್ಶನ್ ಹೆಸರಿನಲ್ಲಿ ವಂಚನೆ ಯತ್ನ ಪ್ರಕರಣದ ಗೊಂದಲಕ್ಕೆ ಇಂದು ನಿರ್ಮಾಪಕ ಉಮಾಪತಿ ಬನಶಂಕರಿಯಲ್ಲಿ ತೆರೆ ಎಳೆದಿದ್ದಾರೆ.

    ಬನಶಂಕರಿ ದೇವಸ್ಥಾನದ ದರ್ಶನ ಮುಗಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ಮಾಪಕ ಉಮಾಪತಿ ಅವರು, ನಟ ದರ್ಶನ್ ಹೆಸರಲ್ಲಿ 25 ಕೋಟಿ ವಂಚನೆ ಯತ್ನ ಪ್ರಕರಣ ಸಂಬಂಧ ರಾಜಿ ಪ್ರಶ್ನೆಯೇ ಇಲ್ಲ. ಈ ಪ್ರಕರಣದಲ್ಲಿ ಕಾನೂನು ಹೋರಾಟ ಮಾಡುತ್ತೇನೆ. ನಾನು ಪ್ರಕರಣ ಸಂಬಂಧವಾಗಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೇನೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಕಾನೂನಿನ ರೀತಿಯಲ್ಲಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.

    ಪ್ರಕರಣದಲ್ಲಿ ನನ್ನ ತಪ್ಪು ಇದ್ದಿದ್ರೆ ನಾನು ದೂರು ಕೊಡುತ್ತಿರಲಿಲ್ಲ. ಮೈಸೂರು ಸಿಸಿಬಿ ಕಚೇರಿಗೆ ಹೋಗುತ್ತಿರಲಿಲ್ಲ. ಪ್ರಕರಣದಲ್ಲಿ ನಾನು ಯಾರ ಮೇಲೂ ಆರೋಪ ಮಾಡಿಲ್ಲ. ಅರುಣಾ ಕುಮಾರಿ ಮೇಲೆ ಆರೋಪ ಬಂದಿದೆ ಅದನ್ನು ಅವರು ಕಾನೂನು ರೀತಿಯಲ್ಲಿ ಬಗೆಹರಿಸಿಕೊಳ್ಳಲಿ. ಘಟನೆ ಸಂಬಂಧವಾಗಿ ಜಯನಗರ ಪೊಲೀಸ್ ಹಾಗೂ ಡಿಸಿಪಿ ಜೊತೆ ಮಾತನಾಡಲಾಗಿದೆ. ಈ ಕುರಿತು ನ್ಯಾಯಾಧೀಶರ ಸಲಹೆ ಪಡೆದು ಮುಂದುವರೆಯುತ್ತೇನೆ ಎಂದರು. ಇದನ್ನೂ ಓದಿ – ಈ ಕೇಸಿಗೆ ಮಂಗಳ ಹಾಡಿದ್ದೇವೆ, ಇದನ್ನು ಬಿಟ್ಟುಬಿಡಿ – ದರ್ಶನ್

    ಎಂ.ಜಿ ರೋಡ್‍ನಲ್ಲಿರೋ ಆಸ್ತಿ ವಿಚಾರಕ್ಕೆ ಇಷ್ಟೆಲ್ಲಾ ಆಗುತ್ತಿದೆ ಎಂದು ಮಾತನಾಡಿದ ಅವರು, ನಾವು ಸಿನಿಮಾ ಮಾಡಿದ್ದೇವೆ. ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿಲ್ಲ. ದರ್ಶನ್ ಸಾರ್ ನನ್ನ ಬ್ಯಾನರ್‍ನಲ್ಲಿ ಒಂದು ಸಿನಿಮಾ ಮಾಡಿದ್ದರು. ಅವರಿಗೆ ಏನು ಕೊಡಬೇಕೋ ಅದನ್ನು ಕೊಟ್ಟಿದ್ದೇನೆ. ಆ ವಿಶ್ವಾಸ ಅವರಿಗೂ ಇದೆ, ನನಗೂ ಇದೆ. ಈ ವಿಚಾರದ ಬಗ್ಗೆ ನಾನು ಮತ್ತೆ ಅವರು ಎಲ್ಲಿಯೂ ಮಾತನಾಡಿಲ್ಲ. ಸುಳ್ಳು ಸುದ್ದಿಗಳಿಗೆ ಉತ್ತರ ನೀಡುವ ಅವಶ್ಯಕತೆ ನನಗಿಲ್ಲ. ಅದಕ್ಕೆ ನಾವು ಜವಾಬ್ದಾರನಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ.

  • ಮತ್ತೆ ಒಂದಾದ ದರ್ಶನ್, ಉಮಾಪತಿ

    ಮತ್ತೆ ಒಂದಾದ ದರ್ಶನ್, ಉಮಾಪತಿ

    ಬೆಂಗಳೂರು: 25 ಕೋಟಿ ರೂ. ವಂಚನೆ ಪ್ರಕರಣದಿಂದಾಗಿ ನಿರ್ಮಾಪಕ ಉಮಾಪತಿ ಮತ್ತು ದರ್ಶನ್ ಮಧ್ಯೆ ಉಂಟಾಗಿರುವ ಸಮಸ್ಯೆ ಸುಖಾಂತ್ಯವನ್ನು ಕಂಡಿದ್ದು, ಇಬ್ಬರು ಭೇಟಿಯಾಗಿದ್ದಾರೆ.

    ಕಳೆದ ಕೆಲವು ದಿನಗಳಿದಂದ ಭಾರೀ ಚರ್ಚೆಯಾಗುತ್ತಿದ್ದಂತಹ 25 ಕೋಟಿ ರೂ. ವಂಚನೆ ಪ್ರಕರಣ ಸುಖಾಂತ್ಯವನ್ನು ಕಂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ವಿವಾದದ ಬಳಿಕ ಒಂದಾದ ದರ್ಶನ್ ಮತ್ತು ಉಮಾಪತಿ ಕಹಿ ಘಟನೆ ಮರೆತು ಒಂದಾಗಿದ್ದಾರೆ. ನಟ ಮತ್ತು ನಿರ್ಮಾಪಕ, ಸ್ನೇಹಿತರೆಲ್ಲಾ ಒಂದಾಗಿದ್ದಾರೆ. ದರ್ಶನ್ ರವರ ಮನೆಯಲ್ಲಿ ಉಮಾಪತಿ ಭೇಟಿಯಾಗಿದ್ದಾರೆ.

    ತಮ್ಮ ಹೆಸರಿನಲ್ಲಿ ವಂಚನೆಗೆ ಮುಂದಾಗಿದ್ದ ಮಹಿಳೆ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಎಸಿಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು. 15 ದಿನಗಳ ಹಿಂದೆ ದರ್ಶನ್ ಬಳಿ ಓರ್ವ ಮಹಿಳೆ ಬಂದು, ನಿಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿಕೊಂಡು 25 ಕೋಟಿ ರೂ. ಸಾಲ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ದರ್ಶನ್ ಆಪ್ತ ರಾಬರ್ಟ್ ನಿರ್ಮಾಪಕರಾದ ಉಮಾಪತಿ ಮಹಿಳೆಯನ್ನ ದರ್ಶನ್ ಬಳಿ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಇನ್ನೂ ತಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿದ್ದಾರೆ ಎನ್ನಲಾದ ಎಲ್ಲ ಗೆಳೆಯರನ್ನು ದರ್ಶನ್ ವಿಚಾರಿಸಿದಾಗ ಮಹಿಳೆಯೇ ನಕಲಿ ಬ್ಯಾಂಕ್ ಮ್ಯಾನೇಜರ್ ಎಂಬುವುದು ತಿಳಿದು ಬಂದಿತ್ತು. ಈ ಕುರಿತಾಗಿ ದರ್ಶನ್ ದೂರು ದಾಖಲಿಸಿದ್ದರು.

  • ಅವತ್ತು ನಂದಿನಿ, ಇವತ್ತು ಅರುಣಾ ಕುಮಾರಿ – ಮಹಿಳೆಯೇ ಮೋಸಗಾತಿ ಅಂದ್ರು ನಾಗವರ್ಧನ್

    ಅವತ್ತು ನಂದಿನಿ, ಇವತ್ತು ಅರುಣಾ ಕುಮಾರಿ – ಮಹಿಳೆಯೇ ಮೋಸಗಾತಿ ಅಂದ್ರು ನಾಗವರ್ಧನ್

    – ಕಥೆ ಕಟ್ಟಿ ಚಿನ್ನಾಭರಣ ತೊಗೊಂಡ್ಳು
    – ಸುಳ್ಳನ್ನ ಸ್ಪಷ್ಟತೆಯಿಂದ ಹೇಳೋದು ಆ ಮಹಿಳೆಯ ಕೆಲಸ

    ಬೆಂಗಳೂರು: ಅಂದು ನನಗೆ ನಂದಿನಿ ಹೆಸರಿನಲ್ಲಿ ಪರಿಚಯವಾಗಿದ್ದ ಮಹಿಳೆಯೇ ಇವತ್ತಿನ ಅರುಣಾ ಕುಮಾರಿ. ಹೀಗೆ ಸುಮ್ಮನಾದ್ರೆ ಈ ಮಹಿಳೆ ಮತ್ತೆ ಇನ್ನಷ್ಟು ಜನರದಲ್ಲಿ ಜೀವನದಲ್ಲಿ ಆಟ ಆಡುವ ಸಾಧ್ಯತೆಗಳಿವೆ. ಮುಂದೆ ಯಾರಿಗೂ ಮೋಸ ಆಗಬಾರದು ಎಂದು ಮಾಧ್ಯಮಗಳ ಮುಂದೆ ಬಂದಿದ್ದೇನೆ.

    ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಜೊತೆಯಲ್ಲಿ ನಾಗವರ್ಧನ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅರುಣಾ ಕುಮಾರಿ ಅಲಿಯಾಸ್ ನಂದಿತಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ನಾಗೇಂದ್ರ ಪ್ರಸಾದ್ ಮತ್ತು ನನ್ನ ಗೆಳೆತನ ಕೊನೆಯಾಗಲು ಕಾರಣ ಈ ಮಹಿಳೆ. ಕಳೆದ ನಾಲ್ಕೈದು ವರ್ಷಗಳಿಂದ ನಾಗೇಂದ್ರ ಪ್ರಸಾದ್ ಜೊತೆ ಮಾತಾಡಿರಲಿಲ್ಲ. ನಿನ್ನೆಯಿಂದ ಸುದ್ದಿಗಳನ್ನು ನೋಡಿ, ನಮಗಾದ ಸ್ಥಿತಿ ಬೇರೆಯವರಿಗೆ ಬರೋದು ಬೇಡ. ಆ ಒಂದು ಕಾರಣಕ್ಕೆ ನಾಗೇಂದ್ರ ಅವರಿಗೆ ನಾನೇ ಫೋನ್ ಮಾಡಿ ಸುದ್ದಿಗೋಷ್ಠಿ ಮಾಡುತ್ತಿದ್ದೇನೆ ಎಂದು ಹೇಳಿದರು.

    ನಾಗವರ್ಧನ್ ಹೇಳಿದ್ದೇನು?:
    2015 ಸೆಪ್ಟಂಬರ್ ವೇಳೆ ಫೇಸ್‍ಬುಕ್‍ನಲ್ಲಿ ನಂದಿತಾ ಹೆಸರಿನಲ್ಲಿ ಈ ಮಹಿಳೆಯ ಪರಿಚಯವಾಯ್ತು. ಸದ್ಯ ದರ್ಶನ್ ಪ್ರಕರಣದಲ್ಲಿ ನಂದಿತಾ ಹೆಸರು ಬದಲಾಗಿ ಅರುಣಾ ಕುಮಾರಿ ಆಗಿದೆ. ತಂದೆ ಡೈರಿಯಲ್ಲಿ ಕೆಲಸ ಮಾಡುತ್ತಿದ್ದು, ತೆಲಗು ರಿಮೇಕ್ ಚಿತ್ರ ಮಾಡುತ್ತಿದ್ದೇನೆ. ಆ ಚಿತ್ರಕ್ಕೆ ನಿಮ್ಮನ್ನೇ ಹೀರೋ ಮಾಡ್ತೀನಿ. ಕನಕಪುರ ಬಳಿಯಲ್ಲಿರುವ 10-12 ಕೋಟಿ ಕಾಮಗಾರಿಯ ಪ್ರೊಜೆಕ್ಟ್ ಕೊಡಿಸುತ್ತೇನೆ ಎಂದು ಹಲವು ಆಫರ್ ನೀಡಿ ನನ್ನ ಸ್ನೇಹ ಸಂಪಾದಿಸಿಕೊಂಡಳು. ಇದನ್ನೂ ಓದಿ: ಸೆಪ್ಟೆಂಬರ್ 11ಕ್ಕೆ NEET ಪರೀಕ್ಷೆ

    ಸ್ನೇಹ ಬೆಳೆಯುತ್ತಿದ್ದಂತೆ 6 ಲಕ್ಷ ರೂಪಾಯಿ ಸೇರಿದಂತೆ, ಚಿನ್ನಾಭರಣ ಪಡೆದುಕೊಂಡಳು. ಸುಳ್ಳನ್ನು ನಂಬುವಂತೆ ಸ್ಪಷ್ಟವಾಗಿ ಹೇಳೋದು ಈ ಮಹಿಳೆಯ ಕಲೆ. ನಂತರ ಹಂತ ಹಂತವಾಗಿ ನನ್ನ ಸ್ನೇಹಿತರನ್ನು ನನ್ನಿಂದ ದೂರ ಮಾಡಿದಳು. ಈಗ ಉಮಾಪತಿ ಮತ್ತು ದರ್ಶನ್ ಪ್ರಕರಣದಲ್ಲಿಯೂ ಸ್ನೇಹಿತರ ಮಧ್ಯೆಯೇ ಜಗಳ ಆಗುತ್ತಿದೆ. ನನ್ನ ಸ್ನೇಹಿತರು ಮಹಿಳೆಗೆ ಹಣ ನೀಡಿ ಮೋಸಕ್ಕೆ ಒಳಗಾಗಿದ್ದಾರೆ. ಈ ಸಂಬಂಧ 2015ರಲ್ಲಿಯೇ ಅರುಣಾ ಕುಮಾರಿ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ನಾಗವರ್ಧನ್ ಹೇಳಿದ್ದಾರೆ. ಇದನ್ನೂ ಓದಿ: ಅರುಣಾ ಕುಮಾರಿ ತುಂಬಾ ಫ್ರಾಡ್: ಉದ್ಯಮಿ ನಾಗವರ್ಧನ್

  • ಈ ಕೇಸಿಗೆ ಮಂಗಳ ಹಾಡಿದ್ದೇವೆ, ಇದನ್ನು ಬಿಟ್ಟುಬಿಡಿ – ದರ್ಶನ್

    ಈ ಕೇಸಿಗೆ ಮಂಗಳ ಹಾಡಿದ್ದೇವೆ, ಇದನ್ನು ಬಿಟ್ಟುಬಿಡಿ – ದರ್ಶನ್

    ಬೆಂಗಳೂರು: 25 ಕೋಟಿ ರಗಳೆ ಪ್ರಕರಣವನ್ನು ಮಾತನಾಡಿ ಕೊನೆಗೊಳಿಸಲು ದರ್ಶನ್ ಮುಂದಾಗಿದ್ದಾರೆ. ಈ ಪ್ರಕರಣಕ್ಕೆ ನಾವು ಮಂಗಳ ಹಾಡಿದ್ದೇವೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ಇದು ನಿಲ್ಲುವ ಕೇಸ್ ಅಲ್ಲ. ಯಾರನ್ನೂ ಅರೆಸ್ಟ್ ಮಾಡುವುದಿಲ್ಲ. ಇದು ಮುಗಿದ ಕೇಸ್ ಆಗಿದ್ದು, ನಾನು ನಿರ್ಮಾಪಕರನ್ನು ಬಿಟ್ಟು ಕೊಡಲ್ಲ. ನಮ್ಮದೆಲ್ಲಾ ಮುಗಿದಿದೆ ಇನ್ನೇನು ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ : ಉಮಾಪತಿ ನನ್ನನ್ನು ಬಳಸಿಕೊಂಡಿದ್ದು ದೊಡ್ಡ ತಪ್ಪು – ಅರುಣಾ ಕುಮಾರಿ

    ಇದನ್ನು ಬಿಟ್ಟು ಬಿಡಿ. ನಾವು ಉಮಾಪತಿ ಜೊತೆಗೆ ಮಾತನಾಡುತ್ತೇವೆ. ಉಮಾಪತಿಯನ್ನು ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಅರುಣಾ ಅವರು ಹೇಳಿದ್ದಾರೆ. ನಾವು ನಾವೇ ಮಾತನಾಡಿ ಈ ವಿಚಾರವನ್ನು ಬಗೆ ಹರಿಸಿಕೊಳ್ಳುತ್ತೇವೆ. ನಾವು ಮಂಗಳ ಹಾಡಿದ್ದೇವೆ. ಉಮಾಪತಿಯವರು ಫುಲ್‍ಸ್ಟಾಪ್ ಹಾಕಿದ್ದಾರೆ ಎಂದರು.

    ಇಂದು ಬೆಳಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅರುಣಾ ಕುಮಾರಿ, ದರ್ಶನ್ ಸ್ನೇಹಿತರ ಮಧ್ಯೆ ಜಗಳ ತರಲು ಉಮಾಪತಿಯವರು ನನ್ನನ್ನು ಬಳಸಿಕೊಂಡಿದ್ದಾರೆ. ನೇರವಾಗಿ ದರ್ಶನ್ ಸರ್ ಅವರಿಗೆ ಹೇಳಬಹುದಿತ್ತು. ಇದೊಂದು ಸಣ್ಣ ವಿಷಯ. ಈ ಪ್ರಕರಣದಿಂದ ನನಗೆ ಅವಮಾನ ಆಗುತ್ತಿದೆ. ನನ್ನನ್ನು ಬಳಸಿಕೊಂಡಿದ್ದು ಯಾಕೆ ಎಂದು ಪ್ರಶ್ನಿಸಿ ಉಮಾಪತಿ ವಿರುದ್ಧವೇ ಗಂಭೀರ ಆರೋಪ ಮಾಡಿದ್ದರು.