ಬೀದರ್: ಉಕ್ರೇನ್ನಲ್ಲಿ ಸಿಲುಕಿದ್ದ ಬೀದರ್ ಮೂಲದ ಅಮಿತ್ ಕೊನೆಗೂ ಜಿಲ್ಲೆಗೆ ಆಗಮಿಸಿದ್ದು, ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಆರತಿ ಮಾಡಿ ಪರಸ್ಪರ ಸಿಹಿ ಹಂಚಿಕೊಂಡು ಕುಟುಂಬಸ್ಥರು ಅಮಿತ್ರನ್ನು ಬರಮಾಡಿಕೊಂಡಿದ್ದಾರೆ.
ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮನೆಗೆ ವಾಪಸ್ ಹೋಗುತ್ತೀವೋ ಇಲ್ಲವೋ ಎಂದು ಪ್ರಾರಂಭದಲ್ಲಿ ಭಯವಾಗುತ್ತಿತ್ತು. ಬಂಕರ್ನಲ್ಲಿಯೇ 5 ರಿಂದ 6 ದಿನ ಕಾಲ ಕಳೆದೇವು. ಈ ವೇಳೆ ನಮಗೆ ತಿನ್ನಲು ಅನ್ನ ಸಿಗಲಿಲ್ಲ. ವಾರ್ ನಡೆಯುತ್ತಿತ್ತು. ಆದರೂ ಜೀವ ಕೈಯಲ್ಲಿ ಹಿಡಿದು ಬಂಕರ್ ನಿಂದ 12 ಕೀಲೋ ಮೀಟರ್ ನಡೆದುಕೊಂಡೇ ಖಾರ್ಕಿವ್ನ ರೈಲು ನಿಲ್ದಾಣ ತಲುಪಿದೇವು. ನಾವು ಇರುವ ಬಿಲ್ಡಿಂಗ್ ಮೇಲೆ ಬಾಂಬ್ಗಳು ಬೀಳುತ್ತಿದ್ದವು. ಇದನ್ನೂ ಓದಿ: 100ರೂ. ಹಣ ವಾಪಸ್ ಕೊಡದಿದ್ದಕ್ಕೆ ಸಹೋದ್ಯೋಗಿಯನ್ನೇ ಹತ್ಯೆಗೈದ
ಮೊದಲು ಉಕ್ರೇನ್ ಸ್ವರ್ಗದ ತರಹ ಇತ್ತು ಈಗ ನರಕವಾಗಿದೆ. ಸಾವನ್ನಪ್ಪಿದ ನವೀನ್ ಹಾಗೂ ನಾನು ಒಂದೇ ಕಾಲೇಜು. ನಮ್ಮ ಸೀನಿಯರ್ ಆಗಿದ್ದ ನವೀನ್ ನನಗೂ ಪರಿಚಯವಿದ್ದರು ಎಂದು ಅಮಿತ್ ತನ್ನ ಅನುಭವವನ್ನು ಹಂಚಿಕೊಂಡರು.
ನಂತರ ಮಗ ಮನೆಗೆ ಬಂದಿದ್ದಾನೆ ಎಂದು ಖುಷಿಯಾಗುತ್ತಿದೆ. ಭಾರತ ಸರ್ಕಾರ ಹಾಗೂ ಎಂಬೆಸಿ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು ಮತ್ತು ನವೀನ್ ಪೋಷಕರಿಗೆ ಆ ದೇವರು ಕಷ್ಟ ಭರಿಸುವ ಶಕ್ತಿ ನೀಡಲಿ ಎಂದು ಅಮಿತ್ ಪೋಷಕರು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಯುಪಿ ಭವಿಷ್ಯ ಅಖಿಲೇಶ್ ಯಾದವ್ ಕೈಯಲ್ಲಿ ಸುರಕ್ಷಿತವಾಗಿರುತ್ತೆ: ಮಯಾಂಕ್ ಜೋಶಿ
ಕೀವ್: ರಷ್ಯಾದ ತೈಲವು ಇಂದು ಉಕ್ರೇನ್ ಪ್ರಜೆಗಳ ರಕ್ತದ ವಾಸನೆಯೊಂದಿಗೆ ಬೆರೆತಿದೆ. ಇದನ್ನು ಖರೀದಿಸುವುದರಿಂದ ಯುದ್ಧದ ಪರಿಹಾರವಾಗಿ ರಷ್ಯಾಕ್ಕೆ ಹಣ ನೀಡಿದಂತಾಗುತ್ತದೆ ಎಂದು ಉಕ್ರೇನ್ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಷ್ಯಾದ ವ್ಯಾಪಾರದಿಂದ ಗಳಿಸಿದ ಪ್ರತಿ ಡಾಲರ್ ಅಥವಾ ಯುರೋ, ಉಕ್ರೇನಿನ ಪುರುಷ ಮತ್ತು ಮಹಿಳೆಯರ ರಕ್ತದಲ್ಲಿ ನೆನೆಸಲ್ಪಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಭವಿಷ್ಯದಲ್ಲಿ ನಾವು ರಷ್ಯಾದ ಮಾರುಕಟ್ಟೆಯಿಂದ ಬಹುರಾಷ್ಟ್ರೀಯ ಕಂಪನಿಗಳ ಸಾಮೂಹಿಕ ನಿರ್ಗಮನವನ್ನು ನೋಡುತ್ತೇವೆ. ಈಗಾಗಲೇ 113 ಕಂಪನಿಗಳು ರಷ್ಯಾದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿವೆ. ಅವರ ನಿರ್ಧಾರವನ್ನು ನಾನು ಪ್ರಶಂಸಿಸುತ್ತೇನೆ ಎಂದು ಹೇಳಿದ್ದಾರೆ.
ಉಕ್ರೇನ್ನಲ್ಲಿ ರಷ್ಯಾ ದಾಳಿ ತೀವ್ರವಾಗಿರುವುದನ್ನು ಖಂಡಿಸಿದ ಅವರು, ರಷ್ಯನ್ನರು ಮನೆಗೆ ಹೋಗಿ. ನೀವು ವಿದೇಶಿ ನೆಲದಲ್ಲಿ ಇದ್ದೀರಿ, ಇಲ್ಲಿ ಯಾರೂ ನಿಮಗೆ ಅಗತ್ಯವಿಲ್ಲ ಮತ್ತು ಯಾರೂ ನಿಮ್ಮನ್ನು ಹೂವುಗಳಿಂದ ಸ್ವಾಗತಿಸುವುದಿಲ್ಲ. ಪುಟಿನ್, ಉಕ್ರೇನ್ ಅನ್ನು ಬಿಟ್ಟುಬಿಡಿ. ರಷ್ಯಾ ಈ ಯುದ್ಧವನ್ನು ಗೆಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಮೋದಿ ಸರ್ಕಾರದ ಆಫರ್ ಮುಗಿಯಲಿದೆ, ಬೇಗ ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ: ರಾಹುಲ್ ಗಾಂಧಿ
ನಾವು ಮೇಲುಗೈ ಸಾಧಿಸಲು ರಷ್ಯಾದ ಮೇಲೆ ಒತ್ತಡವನ್ನು ಹೆಚ್ಚಿಸಬೇಕಾಗಿದೆ. ಉಕ್ರೇನ್ ಭದ್ರತೆಗೆ ಮಾತ್ರವಲ್ಲದೆ ನಮಗೆ ತಿಳಿದಿರುವಂತೆ ಯೂರೋಪಿಯನ್ ಆದೇಶವನ್ನೂ ಸಹ ಮೇಲುಗೈ ಸಾಧಿಸಬೇಕು ಎಂದು ಉಕ್ರೇನ್ ಪ್ರಜೆಗಳಿಗೆ ಧೈರ್ಯ ತುಂಬಿದ್ದಾರೆ.
ಕೀವ್/ಲಂಡನ್: ಶಸ್ತ್ರಾಸ್ತ್ರ ಪೂರೈಸುವ ಮೂಲಕ ಹಿಂದಿನಿಂದ ಉಕ್ರೇನ್ ಬೆಂಬಲಕೊಂಡುತ್ತಿರುವ ನ್ಯಾಟೋ ಪಡೆಗಳು, ನೇರವಾಗಿ ರಷ್ಯಾವನ್ನು ಎದಿರುಹಾಕಿಕೊಳ್ಳಲು ಮತ್ತೆ ಹಿಂದೇಟು ಹಾಕಿದೆ.
ರಷ್ಯಾ ಮತ್ತು ಉಕ್ರೇನ್ ದಾಳಿ ಇಂದಿಗೆ 10ನೇ ದಿನಕ್ಕೆ ಮುಟ್ಟಿದ್ದು, ಇಂದು 6 ಗಂಟೆಗಳ ಕಾಲ ರಷ್ಯಾ ಕದನ ವಿರಾಮವನ್ನು ಘೋಷಿಸಿತ್ತು. ಇಂದು ರಷ್ಯಾ ದಾಳಿ ತಡೆಯಲು ನೋ ಫ್ಲೈ ಜೋನ್ ಘೋಷಣೆ ಮಾಡುವಂತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾಡಿದ ಮನವಿಯನ್ನು ನ್ಯಾಟೋ ಪುರಸ್ಕರಿಸಿಲ್ಲ. ಇದನ್ನೂ ಓದಿ: ಭಾರತದ ಮೇಲೆ ಯುದ್ಧದ ಎಫೆಕ್ಟ್: ಖಾದ್ಯತೈಲ, ಗೋಧಿ, ಸಿಮೆಂಟ್, ಕಬ್ಬಿಣ ದುಬಾರಿ
ನಾವು ನೋ ಫ್ಲೈ ಜೋನ್ ಎಂದು ಘೋಷಿಸಿದರೆ ಉಕ್ರೇನ್ಗೆ ನ್ಯಾಟೋ ಯುದ್ಧ ವಿಮಾನ ಕಳಿಸಿ ರಷ್ಯಾದ ವಿಮಾನ ತಡೆಯಬೇಕಾಗುತ್ತದೆ. ಇದು ನೇರವಾಗಿ ಯುದ್ಧಕ್ಕೆ ಧುಮುಕಿದಂತೆ. ಇದು ಮೂರನೇ ಮಹಾಯುದ್ಧಕ್ಕೂ ನಾಂದಿ ಹಾಡಬಹುದು. ನಾವಿದಕ್ಕೆ ತಯಾರಿಲ್ಲ. ನಾವು ನೋ ಫ್ಲೈ ಜೋನ್ ಎಂದು ಘೋಷಿಸಲ್ಲ ಎಂದು ನ್ಯಾಟೋ ದೇಶಗಳು ಪ್ರಕಟಿಸಿವೆ.
ಈ ಪ್ರಕಟನೆ ಕೇಳಿ ಝೆಲೆನ್ಸ್ಕಿ ಗರಂ ಆಗಿದ್ದಾರೆ. ನ್ಯಾಟೋ ತೀರ್ಮಾನ ರಷ್ಯಾಗೆ ಇನ್ನಷ್ಟು ದಾಳಿ ಮಾಡಲು ಗ್ರೀನ್ ಸಿಗ್ನಲ್ ನೀಡಿದಂತಾಗಿದೆ. ಇದನ್ನು ನ್ಯಾಟೋದಿಂದ ನಿರೀಕ್ಷೆ ಮಾಡಿರಲಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ನಾನೇಲ್ಲೂ ಓಡಿಹೋಗಿಲ್ಲ. ಕೀವ್ನಲ್ಲೇ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ರಷ್ಯಾದ ಮೇಲಿನ ದಿಗ್ಬಂಧನ ಯುದ್ಧಕ್ಕೆ ಸಮ. ಇದಕ್ಕೆ ತಕ್ಕ ಮೌಲ್ಯ ತೆರುತ್ತೀರಿ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಸಿದ್ದಾರೆ. ಈ ಯುದ್ಧದಲ್ಲಿ ಗೆಲ್ಲೋದು ಉಕ್ರೇನ್ ದೇಶ ಎಂದು ಅಮೆರಿಕ ಭವಿಷ್ಯ ಹೇಳಿದೆ. ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಮುಂದಿನ ವಾರ ಪೋಲೆಂಡ್, ರೋಮೇನಿಯಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದನ್ನೂ ಓದಿ: ರಾಜವಂಶಗಳು ತಮ್ಮ ಸ್ವಾರ್ಥಕ್ಕೆ ಉಕ್ರೇನ್ ಸಮಸ್ಯೆಯನ್ನ ಬಳಸಿಕೊಳ್ಳುತ್ತೀವೆ: ಮೋದಿ ಕಿಡಿ
ಶಿಮ್ಲಾ: ರಷ್ಯಾ, ಉಕ್ರೇನ್ ನಡುವಿನ ಯುದ್ಧದಲ್ಲಿ ಸಿಲುಕಿದ್ದ ಮಗಳನ್ನು ಅಪಾಯದಿಂದ ಪಾರು ಮಾಡಿ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದ ಕಾರಣಕ್ಕೆ ತಂದೆಯೊಬ್ಬರು ಪಿಎಂ ಕೇರ್ಸ್ ಫಂಡ್ಗೆ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.
ಯುದ್ಧದ ನಡುವೆ ಬಂಕರ್ನಲ್ಲಿ ಉಳಿದುಕೊಂಡಿದ್ದ 32 ಜನ ಹಿಮಾಚಲಪ್ರದೇಶದ ವಿದ್ಯಾರ್ಥಿಗಳ ತಂಡ ಭಾನುವಾರ ಸುರಕ್ಷಿತವಾಗಿ ದೆಹಲಿ ಬಂದು ತಲುಪಿತ್ತು. ಈ ತಂಡದಲ್ಲಿ ಅಂಕಿತಾ ಠಾಕೂರ್ ಕೂಡ ಒಬ್ಬರಾಗಿದ್ದರು. ಅಂಕಿತಾ ಠಾಕೂರ್ ಹಿಮಾಚಲಪ್ರದೇಶದ ಹಮೀರ್ಪುರ ಜಿಲ್ಲೆಯ ಚುನ್ಹಾಲ್ ಗ್ರಾಮದವರು. ಉನ್ನತ ವ್ಯಾಸಂಗಕ್ಕಾಗಿ ಉಕ್ರೇನ್ಗೆ ತೆರಳಿದ್ದರು. ಈ ಮಧ್ಯೆ ಉಕ್ರೇನ್ನಲ್ಲಿ ಯುದ್ಧ ಆರಂಭವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನೂ ಓದಿ: ಭಾರತದ ಮೇಲೆ ಯುದ್ಧದ ಎಫೆಕ್ಟ್: ಖಾದ್ಯತೈಲ, ಗೋಧಿ, ಸಿಮೆಂಟ್, ಕಬ್ಬಿಣ ದುಬಾರಿ
ಅಂಕಿತಾ ಠಾಕೂರ್ ತಂದೆ ಜಿಪಿ ಸಿಂಗ್ ಆರ್ಯುವೇದ ವೈದ್ಯರು. ತಾಯಿ ಅನಿತಾ ದೇವಿ ಗೃಹಿಣಿ. ಮಗಳು ಅಂಕಿತಾ ಠಾಕೂರ್ರನ್ನು ಉನ್ನತ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ಗೆ ಕಳುಹಿಸಿದ್ದರು. ಈ ನಡುವೆ ಏಕಾಏಕಿ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಘೋಷಿಸಿತ್ತು. ಈ ವೇಳೆ ಮಗಳ ಸ್ಥಿತಿಯನ್ನು ಕಂಡು ಮರುಗಿದ್ದ ಪೋಷಕರು ಮಗಳನ್ನು ಹೇಗಾದರೂ ಮಾಡಿ ಕರೆ ತನ್ನಿ ಎಂದು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಖಾರ್ಕಿವ್ನಲ್ಲಿ ಸಿಲುಕಿದ್ದ ಎಲ್ಲಾ ಭಾರತೀಯರ ರಕ್ಷಣೆ – ಎಂಇಎ
ಕಡೆಗೂ ಯುದ್ಧದ ನಡುವೆ ಕೆಂದ್ರ ಸರ್ಕಾರದ ಯಶಸ್ವಿ ಕಾರ್ಯಚರಣೆ ಆಪರೇಷನ್ ಗಂಗಾದಡಿ ಅಂಕಿತಾ ಠಾಕೂರ್ರನ್ನು ಯಶಸ್ವಿಯಾಗಿ ತಾಯ್ನಾಡಿಗೆ ಮರಳಿದರು. ಇದರಿಂದ ಆಕೆಯ ಪೋಷಕರು ತುಂಬಾ ಸಂತೋಷಗೊಂಡಿದ್ದಾರೆ. ಮಗಳ ಮುಖ ಮತ್ತೆ ನೋಡಳು ಸಿಗುತ್ತೋ ಇಲ್ಲವೋ ಎಂಬ ಆತಂಕದಲ್ಲಿದ್ದ ಜಿಪಿ ಸಿಂಗ್ ಮತ್ತು ಅನಿತಾ ದೇವಿಗೆ ಮಗಳು ಮತ್ತೆ ಮನೆಗೆ ಬಂದಾಗ ಸಂತಸವಾಗಿದೆ. ಈ ಸಂತಸದ ನಡುವೆ ಅಂಕಿತಾ ಠಾಕೂರ್ರನ್ನು ಸುರಕ್ಷಿತವಾಗಿ ಕರೆತಂದ ಕಾರಣಕ್ಕಾಗಿ ಅದರ ಖರ್ಚು ಎಂಬಂತೆ, ಜಿಪಿ ಸಿಂಗ್ ಕೇಂದ್ರ ಸರ್ಕಾರದ ಪಿಎಂ ಕೇರ್ಸ್ ಫಂಡ್ಗೆ 21 ಸಾವಿರ ರೂ. ಮತ್ತು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿಗೆ 11 ಸಾವಿರ ರೂ. ದೇಣಿಗೆಯಾಗಿ ನೀಡಿದ್ದಾರೆ.
ಹಿಮಾಚಲ ಪ್ರದೇಶದ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಶಿಕ್ಷಣ ಪಡೆಯುತ್ತಿದ್ದರು ಎಂಬ ಮಾಹಿತಿ ಸರ್ಕಾರ ನೀಡಿದೆ. ಅಲ್ಲದೆ ಬಜೆಟ್ ಅಧಿವೇಶನದಲ್ಲಿ ಸಿಎಂ ಜೈ ರಾಮ್ ಠಾಕೂರ್ ಉಕ್ರೇನ್ನಲ್ಲಿ ಸಿಲುಕಿರುವ ಹಿಮಾಚಲ ಪ್ರದೇಶದ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಚರಣೆ ಬಗ್ಗೆ ವಿದೇಶಾಂಗ ಸಚಿವಾಲಯದ ಜೊತೆ ಮಾತನಾಡಿದ್ದರು. ಈಗಾಗಲೇ ಕೆಲ ವಿದ್ಯಾರ್ಥಿಗಳು ಸುರಕ್ಷಿತವಾಗಿ ರಾಜ್ಯಕ್ಕೆ ಆಗಮಿಸಿದ್ದು, ಇನ್ನಷ್ಟು ವಿದ್ಯಾರ್ಥಿಗಳು ಬರಬೇಕಾಗಿದೆ.
ಉಕ್ರೇನ್ಗೆ ವಿದ್ಯಾರ್ಥಿಗಳು ಸ್ವತಂ ಖರ್ಚಿನಲ್ಲಿ ಹೋಗಿದ್ದಾರೆ. ಹೀಗಾಗಿ ಅವರನ್ನು ಭಾರತ ಸರ್ಕಾರ ಮಾನವೀಯತೆ ದೃಷ್ಟಿಯಿಂದ ಉಚಿತವಾಗಿ ಕರೆ ತಂದರೂ ವಿಮಾನ ಪ್ರಯಾಣದ ವೆಚ್ಚವನ್ನು ಅವರು ನೀಡಬೇಕು. ಜನರ ತೆರಿಗೆ ದುಡ್ಡಿನಿಂದ ಅವರು ವಿದೇಶದಿಂದ ಬರುವುದು ಸರಿಯಲ್ಲ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡಯುತ್ತಿದೆ. ಈ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಗಳ ವಿಮಾನ ಪ್ರಯಾಣದ ಖರ್ಚನ್ನು ಪಿಎಂ ಕೇರ್ಸ್ ಫಂಡ್ಗೆ ಜಿಪಿ ಸಿಂಗ್ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ನವದೆಹಲಿ: ಉಕ್ರೇನ್ ಮೇಲಿನ ರಷ್ಯಾ ಯುದ್ಧ ಭಾರತ ಆರ್ಥಿಕತೆ ಮೇಲೆಯೂ ಭಾರೀ ಪರಿಣಾಮ ಬೀರಲು ಶುರು ಮಾಡಿದೆ. ಅಗತ್ಯವಸ್ತುಗಳ ಬೆಲೆಗಳು ಮತ್ತೆ ಗಗನಮುಖಿಯಾಗತೊಡಗಿವೆ. ದೇಶದಲ್ಲಿ ಖಾದ್ಯ ತೈಲಗಳ ಬೆಲೆ ಮತ್ತೆ ದಾಖಲೆ ಮಟ್ಟಕ್ಕೆ ಏರುತ್ತಿವೆ.
ಒಂದು ವಾರದೊಳಗೆ ಒಂದು ಲೀಟರ್ ಸೂರ್ಯಕಾಂತಿ ಎಣ್ಣೆ ಬೆಲೆ ಒಂದೇ ಸಾರಿ 40 ರೂ. ಹೆಚ್ಚಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಬಹುದು ಎಂಬ ಆತಂಕವನ್ನು ವ್ಯಾಪಾರಿಗಳು ಹೊರಹಾಕಿದ್ದಾರೆ. ಆದ್ರೇ ಕೇಂದ್ರ ಮಾತ್ರ ಆ ರೀತಿ ಏನು ಆಗುವುದಿಲ್ಲ ಹೇಳುತ್ತಿದೆ. ಇದಷ್ಟೇ ಅಲ್ಲ, ಗೋಧಿ, ಬೆಳೆ, ಕಾಳುಗಳ ಬೆಲೆಯೂ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಇದನ್ನೂ ಓದಿ: ರಾಜವಂಶಗಳು ತಮ್ಮ ಸ್ವಾರ್ಥಕ್ಕೆ ಉಕ್ರೇನ್ ಸಮಸ್ಯೆಯನ್ನ ಬಳಸಿಕೊಳ್ಳುತ್ತೀವೆ: ಮೋದಿ ಕಿಡಿ
ಚಿನ್ನ, ಬೆಳ್ಳಿ, ಸಿಮೆಂಟ್, ಕಬ್ಬಿಣದ ಬೆಲೆಯೂ ಹಿಗ್ಗಾಮುಗ್ಗಾ ಹೆಚ್ಚುತ್ತಿದೆ. ಇನ್ನೆರಡು ದಿನಗಳಲ್ಲಿ ಪೆಟ್ರೊಲ್, ಡೀಸೆಲ್ ಬೆಲೆಯೂ ದುಬಾರಿ ಆಗಲಿದ್ದು, ಆಗ ಇನ್ನೆಷ್ಟು ಹೆಚ್ಚಾಗಲಿದೆ? ಸೆಮಿ ಕಂಡಕ್ಟರ್ಗಳಿಗೆ ಬಳಸುವ ಲೋಹದ ಕೊರತೆ ಎದುರಾಗ್ತಿರೋದ್ರಿಂದ ಮುಂದಿನ ದಿನಗಳಲ್ಲಿ ಮೊಬೈಲ್ ಫೋನ್, ವಾಹನ, ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ದುಬಾರಿ ಆಗಲಿವೆ.
ಕಚ್ಚಾ ತೈಲ ಬೆಲೆ ನಿರಂತರವಾಗಿ ಹೆಚ್ಚುತ್ತಿರುವ ಕಾರಣ ಹಣದುಬ್ಬರ ಪ್ರಮಾಣವೂ ಹೆಚ್ಚಾಗುವ ಆತಂಕ ಎದುರಾಗಿದೆ.
ಯುದ್ಧದ ಎಫೆಕ್ಟ್: ಏನೇನು ದುಬಾರಿ?
* ಸೂರ್ಯಕಾತಿ ಎಣ್ಣೆ(ಲೀ) – 140-180 ರೂ.
* ಶೇಂಗಾ ಎಣ್ಣೆ (ಲೀ) – 160-190 ರೂ.
* ಪೆಟ್ರೋಲ್(ಲೀ) – ಮಾರ್ಚ್ 16ರೊಳಗೆ 15 ರೂ. ಹೆಚ್ಚಳ ಸಾಧ್ಯತೆ
* ಡೀಸೆಲ್ (ಲೀ) – ಮಾರ್ಚ್ 16ರೊಳಗೆ 15 ರೂ. ಹೆಚ್ಚಳ ಸಾಧ್ಯತೆ
* ಬಂಗಾರ (24ಕೆ) (10 ಗ್ರಾಂ) – 53,950 ರೂ
* ಬೆಳ್ಳಿ (1ಕೆಜಿ)- 70,500 ರೂ.
* ಗೋಧಿ – ಶೇ.55ರಷ್ಟು ಹೆಚ್ಚಳ ಸಾಧ್ಯತೆ
(2,000 ರೂ. -2,100 ರೂ. ಆಜುಬಾಜಿನಲ್ಲಿದ್ದ ಕ್ವಿಂಟಾಲ್ ಗೋಧಿ ಈಗಾಗಲೇ 2500 ರೂ. ಆಗಿದೆ. ಅಮೆರಿಕಾದಲ್ಲಂತೂ 14 ವರ್ಷಗಳ ಗರಿಷ್ಠ ತಲುಪಿದೆ.)
* ಸಿಮೆಂಟ್ ಬ್ಯಾಗ್ – 30-50 ರೂ. ಹೆಚ್ಚಳ
* ಕಬ್ಬಿಣ (ಟನ್) – 10ಸಾವಿರ ರೂ. ಹೆಚ್ಚಳ
* ಮೊಬೈಲ್
* ವಾಹನ
* ಎಲೆಕ್ಟ್ರಾನಿಕ್ ಗೂಡ್ಸ್
ನವದೆಹಲಿ: ಉಕ್ರೇನ್ನ 2 ನಗರಗಳಲ್ಲಿ ರಷ್ಯಾ 6 ಗಂಟೆಗಳ ಕದನ ವಿರಾಮ ಘೋಷಿಸಿದ ಬಳಿಕ ಭಾರತೀಯರನ್ನು ಸ್ಥಳಾಂತರಿಸುವ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಇದೀಗ ಖಾರ್ಕಿವ್ ನಗರದಲ್ಲಿ ಯಾವುದೇ ಭಾರತೀಯರು ಸಿಲುಕಿಕೊಂಡಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯ(ಎಂಇಎ) ದೃಢಪಡಿಸಿದೆ.
ಉಕ್ರೇನ್ನ ಪ್ರಮುಖ ನಗರಗಳಾದ ಖಾರ್ಕಿವ್ನಿಂದ ಎಲ್ಲಾ ಭಾರತೀಯರನ್ನು ರಕ್ಷಿಸಲಾಗಿದೆ. ಆದರೆ ಸುಮಿಯಲ್ಲಿ ಇನ್ನೂ 600ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುವಲ್ಲಿ ನಾವು ಹೆಚ್ಚಿನ ಗಮನ ಹರಿಸುತ್ತಿದ್ದೇವೆ ಎಂದು ಎಂಇಎ ತಿಳಿಸಿದೆ. ಇದನ್ನೂ ಓದಿ: ರಾಯಭಾರ ಕಚೇರಿಯವರು ಕರೆದಾಗ ತಾಯಿಯೇ ಮಕ್ಕಳನ್ನು ಕರೆದಂತಹ ಅನುಭವ ಆಯ್ತು: ವಿದ್ಯಾರ್ಥಿನಿ ರುಬಿನಾ
From Pisochyn & Kharkiv, we should be able to clear out everyone in the next few hours, so far I know no one left in Kharkhiv. Main focus is on Sumy now, challenge remains ongoing violence & lack of transportation; best option would be ceasefire: MEA#UkraineRussianWarpic.twitter.com/EdNf5Zhkcz
ಉಕ್ರೇನ್ನಲ್ಲಿ ಇನ್ನೂ ಎಷ್ಟು ಭಾರತೀಯರು ಸಿಲುಕಿದ್ದಾರೆ ಎಂಬುದನ್ನು ಸರ್ಕಾರ ನೋಡುತ್ತಿದೆ. ಇಂದು ಪಿಸೊಚಿನ್ಗೆ ಬಂದಿರುವ ಎಲ್ಲಾ ಭಾರತೀಯರನ್ನು ತವರಿಗೆ ಕರೆಸಿಕೊಳ್ಳುವ ಕಾರ್ಯವನ್ನು ಪೂರ್ಣಗೊಳಿಸುವಂತೆ ಸರ್ಕಾರ ಆದೇಶಿಸಿದೆ. ಸದ್ಯ ಪಿಸೊಚಿನ್ನಲ್ಲಿ 298 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಇಂದು ಈ ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯ ಪುರ್ಣಗೊಳ್ಳುವ ಭರವಸೆ ಇದೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಜೀವದ ಮೇಲೆ ಅಸೆ ಬಿಟ್ಟು, ಒಂದು ವಾರ ನಡೆದುಕೊಂಡು ಬಂದು ಉಕ್ರೇನ್ ದಾಟಿದೆ: ಸೀನ್ಯ
ಕಳೆದ 24 ಗಂಟೆಗಳಲ್ಲಿ 5 ವಿಮಾನಗಳು ಭಾರತ ತಲುಪಿದ್ದು, ಸುಮಾರು 2,900 ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಲಾಗಿದೆ. ಇದುವರೆಗೆ ಸುಮಾರು 13,300 ಜನರು ಭಾರತಕ್ಕೆ ಮರಳಿದ್ದಾರೆ. ಮುಂದಿನ 24 ಗಂಟೆಗಳಿಗೆ 13 ವಿಮಾನಗಳನ್ನು ನಿಯೋಜಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ನವದೆಹಲಿ: ನಾವು ಭಾರತಕ್ಕೆ ಬರುತ್ತೇವೆ ಎಂಬ ಭರವಸೆಯನ್ನೇ ಕಳೆದುಕೊಂಡಿದ್ದೆವು. ಇದೀಗ ಭಾರತಕ್ಕೆ ಮರಳಿ ಬಂದು ಸತ್ತು ಬದುಕಿದಂತಹ ಅನುಭವವಾಗುತ್ತಿದೆ ಎಂದು ಉಕ್ರೇನ್ನಿಂದ ಮರಳಿ ಭಾರತಕ್ಕೆ ಬಂದ ವಿದ್ಯಾರ್ಥಿನಿ ರುಬಿನಾ ಹೇಳಿದ್ದಾರೆ.
ದೆಹಲಿಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ರುಬಿನಾ, ನಾವು ಉಕ್ರೇನ್ ಗಡಿ ದಾಟಿ ಪೋಲೆಂಡ್ ತಲುಪಿದ ತಕ್ಷಣ ಭಾರತೀಯ ರಾಯಭಾರ ಕಚೇರಿಯವರು ನಮ್ಮನ್ನು ಕರೆದರು. ಆ ಸಂದರ್ಭದಲ್ಲಿ ನಾವು ಎಲ್ಲಾ ಮರೆತು ಬಿಟ್ಟೆವು. ತಾಯಿನೇ ಮಕ್ಕಳನ್ನು ಕರೆಯುತ್ತಿದ್ದಾಳೆ ಅನ್ನುವಂತಹ ಅನುಭವ ನನಗಾಯ್ತು ಎಂದು ರುಬಿನಾ ತಿಳಿಸಿದರು.
ಯುದ್ಧದ ಸ್ಥಿತಿಗತಿ ಬಗ್ಗೆ ವಿವರಿಸಿದ ರುಬಿನಾ ಯುದ್ಧ ಪ್ರಾರಂಭವಾದಾಗ ನಾವು 1 ವಾರಗಳ ಕಾಲ ಬಂಕರ್ನಲ್ಲಿ ಇರಬೇಕಾಯ್ತು. ಬಂಕರ್ ಒಳಗಡೆಯೇ ನಮಗೆ ಬಾಂಬಿಂಗ್ ಹಾಗೂ ಶೆಲ್ಲಿಂಗ್ ಶಬ್ಧಗಳು ಕೇಳಿ ಬರುತ್ತಿತ್ತು. ಮೊದಲ ಎರಡು ದಿನ ಅಷ್ಟೊಂದು ಕಷ್ಟ ಎನಿಸಲಿಲ್ಲ. ಆದರೆ ಬಳಿಕ ಊಟ, ನೀರಿಗೆ ಕೊರತೆಯಾಗುತ್ತಿದ್ದಂತೆ ಇಲ್ಲಿ ಜಾಸ್ತಿ ದಿನ ಉಳಿಯೋಕೆ ಸಾಧ್ಯವಿಲ್ಲ. ಊರಿಗೆ ಮರಳಲೇ ಬೇಕು ಎಂದು ಅನಿಸುತ್ತಿತ್ತು. ನಾಳೆ ನಮಗೆ ನೀರು, ಊಟ ಸಿಗುತ್ತೋ ಇಲ್ಲವೋ ಎಂಬ ಭಯದಲ್ಲಿ ನೀರನ್ನು ಕೂಡಾ ಬಹಳ ಯೋಚನೆ ಮಾಡಿ ಕುಡಿಯುತ್ತಿದ್ದೆವು ಎಂದರು. ಇದನ್ನೂ ಓದಿ: ಜೀವದ ಮೇಲೆ ಅಸೆ ಬಿಟ್ಟು, ಒಂದು ವಾರ ನಡೆದುಕೊಂಡು ಬಂದು ಉಕ್ರೇನ್ ದಾಟಿದೆ: ಸೀನ್ಯ
ನಾವು ಬಂಕರ್ನಲ್ಲಿದ್ದಾಗ 2-3 ಕಿ.ಮೀ ದೂರದಲ್ಲಿ ಬಾಂಬ್ ಬೀಳುತ್ತಿತ್ತು. ಆಗ ಭಾರೀ ಶಬ್ದ ಕೇಳಿಸುತ್ತಿತ್ತು, ಹೊಗೆ ಕಾಣಿಸಿಕೊಳ್ಳುತ್ತಿತ್ತು. ನಾವು ಟ್ರೇನ್ ಮೂಲಕ ಕೀವ್ ತಲುಪಿದಾಗಲೂ ಬಾಂಬ್ ಶಬ್ಧ ಕೇಳಿಸಿತು. ಆ ಸಂದರ್ಭ ನಾವು ಬದುಕುವುದಿಲ್ಲ ಅನ್ನಿಸಿತ್ತು. ಭಾರತೀಯರು ಉಕ್ರೇನ್ನಿಂದ ಹಿಂತಿರುಗಲಿಲ್ಲ ಎಂದು ಭಾರತದ ಸುದ್ಧಿ ಮಾಧ್ಯಮಗಳಲ್ಲಿ ಬರುತ್ತೀವಿ ಎಂದು ಒಂದು ಬಾರಿ ಅನ್ನಿಸಿತು. ಸದ್ಯ ನಾವೀಗ ಭಾರತೀಯ ರಾಯಭಾರ ಕಚೇರಿಯ ಸಹಾಯದಿಂದ ಸುರಕ್ಷಿತವಾಗಿ ಬಂದಿದ್ದೀವಿ ಎಂದರು.
ಉಕ್ರೇನ್ ಗಡಿ ದಾಟಿ ಪೋಲೆಂಡ್ ಬಂದ ತಕ್ಷಣ ಅಲ್ಲಿ ನಮ್ಮನ್ನು ಭಾರತದ ಅಧಿಕಾರಿಗಳು ಬರಮಾಡಿಕೊಂಡರು. ಆ ಸಂದರ್ಭ ನಮ್ಮ ದೇಶಕ್ಕೇ ಬಂದೆವೇನೋ ಎನಿಸಿತು. 3 ದಿನದಿಂದ ಊಟ ಮಾಡಿರಲಿಲ್ಲ. ಅವರು ಊಟ ಕೂಡಾ ನೀಡಿದ್ರು. ನಮಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿ ಇದೀಗ ದೆಹಲಿಯನ್ನು ತಲುಪಿಸಿದ್ದಾರೆ. ಇದನ್ನೂ ಓದಿ: ರಾಜವಂಶಗಳು ತಮ್ಮ ಸ್ವಾರ್ಥಕ್ಕೆ ಉಕ್ರೇನ್ ಸಮಸ್ಯೆಯನ್ನ ಬಳಸಿಕೊಳ್ಳುತ್ತೀವೆ: ಮೋದಿ ಕಿಡಿ
ಭಾರತ ಉಕ್ರೇನ್ ಪ್ರವೇಶಿಸಿ ವಿದ್ಯಾರ್ಥಿಗಳನ್ನು ರಕ್ಷಿಸುವ ಬದಲು ಗಡಿ ದೇಶಗಳಲ್ಲಿ ನಿಂತುಕೊಂಡು ನಾವಾಗೇ ಬರೋದನ್ನು ಕಾದು ಕುಳಿತಿತ್ತು. ಈ ಸಂದರ್ಭದಲ್ಲಿ ಭಾರತಕ್ಕೆ ಧೈರ್ಯ ಇಲ್ಲ ಎಂದು ಹಲವರು ಟೀಕೆ ಮಾಡಿದ್ದಾರೆ. ಆದರೆ ಭಾರತದ ಶಕ್ತಿ ಏನು ಎಂಬುದು ನಮಗೆ ಅಲ್ಲಿದ್ದಾಗಲೇ ಅರಿವಾಗಿದೆ ಎಂದರು.
ರಷ್ಯಾದವರು ಶೆಲ್ಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ನಾವು ಭಾರತದ ಧ್ವಜವನ್ನು ತೋರಿಸಿದ್ವಿ. ಆಗ ಅವರು ನಮ್ಮ ಮೇಲೆ ದಾಳಿ ಮಾಡೋದನ್ನು ನಿಲ್ಲಿಸಿದ್ರು. ಆವಾಗ ನಮಗೆ ಭಾರತದ ಶಕ್ತಿ ಏನು ಎಂಬುದು ಅರಿವಾಯ್ತು. ಭಾರತಕ್ಕೆ ಧೈರ್ಯ ಇಲ್ಲ ಎನ್ನುವವರಿಗೆ ನಾನು ಈ ಮಾತನ್ನು ಹೇಳಲು ಇಷ್ಟ ಪಡುತ್ತೇನೆ ಎಂದು ರುಬಿನಾ ಹೆಮ್ಮೆಯಿಂದ ಹೇಳಿದರು.
ನಾನೀಗ ಭಾರತೀಯಳು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತೆ. ಭಾರತೀಯ ರಾಯಭಾರ ಕಚೇರಿ ನಮ್ಮನ್ನು ಇಲ್ಲಿಗೆ ಕರೆ ತರಲು ಬಹಳ ಸಹಾಯ ಮಾಡಿದೆ. ನಮ್ಮ ದೇಶದವರು ಯಾವ ದೇಶಕ್ಕೂ ಕಮ್ಮಿ ಇಲ್ಲದಂತೆ ನಮ್ಮ ರಕ್ಷಣೆ ಮಾಡಿದ್ದಾರೆ ಎಂದು ರುಬಿನಾ ಮೆಚ್ಚುಗೆ ವ್ಯಕ್ತಪಡಿಸಿದರು.
ಮಡಿಕೇರಿ: ಉಕ್ರೇನ್, ರಷ್ಯಾ ನಡುವೆ ಯುದ್ಧ ಆರಂಭವಾದ ದಿನದಿಂದ ಉಕ್ರೇನ್ ತೊರೆಯಲು ಆರಂಭಿಸಿ ಜೀವದ ಮೇಲಿನ ಆಸೆ ಬಿಟ್ಟು ಒಂದು ವಾರ ನಡೆದುಕೊಂಡು ಬಂದು ಹಂಗೇರಿ ತಲುಪಿದೆವು ಎಂದು ಉಕ್ರೇನ್ನಿಂದ ತಾಯ್ನಾಡಿಗೆ ಮರಳಿದ ಕೊಡಗಿನ ಸೀನ್ಯ ಭಯಾನಕ ದಿನಗಳನ್ನು ಬಿಚ್ಚಿಟ್ಟಿದ್ದಾರೆ.
ಉಕ್ರೇನ್, ರಷ್ಯಾ ದೇಶದ ನಡುವೆ ಯುದ್ಧ ಆರಂಭವಾಗಿ 10 ದಿನ ಕಳೆದಿದೆ. ಈಗಾಗಲೇ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳುತ್ತಿದ್ದಾರೆ. ಅದರಂತೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೃಷ್ಣ ನಗರದ ವಿದ್ಯಾರ್ಥಿನಿ ಸೀನ್ಯ ಉಕ್ರೇನ್ ನಗರದಿಂದ ಹೈ ರಿಸ್ಕ್ ತೆಗೆದುಕೊಂಡು ಕೊಡಗು ಜಿಲ್ಲೆಗೆ ಅಗಮಿಸಿದ್ದಾರೆ. ಇದನ್ನೂ ಓದಿ: ರಾಜವಂಶಗಳು ತಮ್ಮ ಸ್ವಾರ್ಥಕ್ಕೆ ಉಕ್ರೇನ್ ಸಮಸ್ಯೆಯನ್ನ ಬಳಸಿಕೊಳ್ಳುತ್ತೀವೆ: ಮೋದಿ ಕಿಡಿ
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸೀನ್ಯ, ನಾನು ಫೆಬ್ರವರಿ 24 ರಂದು ಭಾರತಕ್ಕೆ ಹೊರಟಿದ್ದೆ, ಆದರೆ ಅಂದೇ ರಷ್ಯಾ, ಉಕ್ರೇನ್ ಯುದ್ಧ ಆರಂಭವಾಗಿತ್ತು. ಹೀಗಾಗಿ ಫ್ಲೈಟ್ ಕ್ಯಾನ್ಸಲ್ ಆಯಿತು ಅದರೂ ಭಾರತಕ್ಕೆ ಬರಬೇಕೆಂದು ಫೆಬ್ರವರಿ 24 ರಂದು ನಡೆಯುವುದಕ್ಕೆ ಆರಂಭಿಸಿದೆ. ಅಂದಿನಿಂದ ಮಾರ್ಚ್ 3 ವರೆಗೆ ನಡೆದುಕೊಂಡು ಉಕ್ರೇನ್ನ ಒಂದೊಂದು ಭಾಗದಲ್ಲಿದ್ದು ಒಂದು ವಾರ ನಡೆಯುತ್ತಲೇ ಇದ್ದೆ. ನಮ್ಮ ಕಣ್ಮುಂದೆ ಬಾಂಬ್ ಬ್ಲಾಸ್ಟ್ ಆಗುತ್ತಿದ್ದವು ಅದನ್ನು ನೋಡಿ, ನೋಡಿ ಕೊನೆಗೆ ಹೆದರಿಕೆ ಇಲ್ಲದಂತಾಯಿತು. ಆದರೆ ನಮ್ಮ ಜೀವದ ಮೇಲಿನ ಆಸೆ ಬಿಟ್ಟಿದ್ದೆ, ಕೀವ್ ನಿಂದ ಹುಷ್ಗುರೋ ಯುನಿವರ್ಸಿಟಿವರೆಗೆ ನಡೆದೇ ಸಾಗಿದೆವು ಕೊನೆಗೂ ಹಂಗೇರಿ ತಲುಪಿದಾಗ ಇಂಡಿಯನ್ ರಾಯಭಾರಿ ಕಚೇರಿ ಸಹಾಯ ಮಾಡಿತು. ಅದಕ್ಕಾಗಿ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಎಷ್ಟು ಧನ್ಯವಾದ ಹೇಳಿದ್ರು ಸಾಲುವುದಿಲ್ಲ ಎಂದರು.
ಉಕ್ರೇನ್ನಲ್ಲಿ ಇರುವಾಗ ನಮ್ಮ ವಸತಿ ಪ್ರದೇಶದಲ್ಲಿ ನಾವು ಇರುವಾಗ ನಮ್ಮ ಕಣ್ಣ ಮುಂದೆ ಯುದ್ಧ ನಡೆಯುತ್ತಿತ್ತು. ಬಾಂಬ್ ದಾಳಿ ಸೈರನ್ ಶಬ್ದಗಳು ಕೇಳುವಾಗ ಬದುಕುವ ವಿಶ್ವಾಸ ಕಳೆದುಕೊಂಡಿದ್ದೆ. ಅದರೆ ದೇವರ ದಯೆಯಿಂದ ಬದುಕಿ ಬಂದಿದ್ದೇನೆ. ನಮ್ಮ ದೇಶದ ಪ್ರಧಾನಿ ಮೋದಿ ಹಾಗೂ ರಾಯಭಾರಿ ಕಚೇರಿಯ ಆಧಿಕಾರಿಗಳು ಸಾಕಷ್ಟು ಸಹಾಯ ಮಾಡಿದ್ದಾರೆ. ಆದರೆ ಯುದ್ಧ ಸನ್ನಿವೇಶ ನನ್ನ ಕಣ್ಣ ಮುಂದೆ ಹಾಗೆ ಇದೆ. ಈಗಲೂ ನಾನು ಸಣ್ಣ ಶಬ್ದ ಕೇಳಿದ್ರೆ ಬೆಚ್ಚಿಬೀಳುತ್ತೇನೆ. ಅಷ್ಟು ಭಯ ನನಗೆ ಕಾಡಿದೆ. ನಾನು ಕೊಡಗಿನಲ್ಲಿ ಇರುವಾಗ ಅಷ್ಟು ದೂರ ನಡೆಯುವುದಕ್ಕೂ ಯೋಚನೆ ಮಾಡತ್ತ ಇದ್ದೆ, ಅದ್ರೆ ಇದೀಗಾ ನಾನೇ ಮನೆಗೆ ಬಂದು ಯೋಚನೆ ಮಾಡಿದೆ, ಅಷ್ಟು ದೂರ ಹೇಗೆ ನಡೆದೆ ಎಂದು. ಇದೀಗ ನನ್ನ ಮೇಲೆ ನನಗೆ ವಿಶ್ವಾಸ ಇದೆ ಯಾವುದೇ ಕಷ್ಟ ಬಂದರು ಎದುಸಿರುವ ಶಕ್ತಿ ಈ ಯುದ್ಧದ ಸನ್ನಿವೇಶದಿಂದ ಕಲಿತಿದ್ದೇನೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಉಕ್ರೇನ್ನಲ್ಲಿ ಸಿಲುಕಿದ್ದ ಬೀದರ್ ಮೂಲದ ಇಬ್ಬರು ವಿದ್ಯಾರ್ಥಿಗಳು ತಾಯ್ನಾಡಿಗೆ
ಸೀನ್ಯರ ತಾಯಿ ಅನ್ಮಮ್ಮ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಗಳು ಉಕ್ರೇನ್ನಲ್ಲಿ ಸಂಕಷ್ಟ ಅನುಭವಿಸುತ್ತಿರುವುದನ್ನು ಕಂಡು ನಮ್ಮ ಮಗಳು ಬದುಕಿ ಬರುತ್ತಾಳೆ ಎನ್ನುವ ಆತ್ಮವಿಶ್ವಾಸವನ್ನು ನಾವು ಕಳೆದುಕೊಂಡಿದ್ದೇವು. ಅದರೆ ದೇವರು ನಮ್ಮ ಮಗಳನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ. ನಮಗೆ ಅದೇ ಸ್ವಲ್ಪ ಖುಷಿಯ ವಿಚಾರ ಆದರೆ ಕನ್ನಡಿಗ ನವೀನ್ ಮೃತ ಪಟ್ಟಿದ್ದು, ಈಗಲೂ ಜೀರ್ಣಿಸಿಕೊಳ್ಳಲು ಅಸಾದ್ಯವಾಗಿದೆ. ಆದಷ್ಟು ಬೇಗಾ ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ವಾಪಸ್ ಬಂದರೆ ಸಾಕು ನಾವು ದೇವರಲ್ಲಿ ಅದನ್ನೆ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಕೀವ್: ಉಕ್ರೇನ್ ಮತ್ತು ರಷ್ಯಾ ನಡುವೆ 10 ದಿನಗಳಿಂದ ಭೀಕರ ಯುದ್ಧ ನಡೆಯುತ್ತಿದ್ದು, ದಿನಕ್ಕೊಂದು ಹೊಸ ಸುದ್ದಿ ಕೇಳಿಬರುತ್ತಿದೆ. ಇಂದು ತನ್ನದೇ ದೇಶದ ಸಂಧಾನಕಾರನನ್ನು ಉಕ್ರೇನ್ ಹತ್ಯೆ ಮಾಡಿದೆ ಎಂದು ವರದಿಯಾಗಿದೆ.
ಉಕ್ರೇನ್ ನಿನ್ನೆಯೂ ಸಹ ತನ್ನ ದೇಶವನ್ನು ರಷ್ಯಾದಿಂದ ಬಚಾವ್ ಮಾಡಲು ತನ್ನದೇ ಹಡಗನ್ನು ಸ್ಫೋಟಿಸಿಕೊಂಡಿತ್ತು. ಆದರೆ ಇಂದು ಉಕ್ರೇನ್ ಸಂಧಾನಕಾರ ರಷ್ಯಾ ಜೊತೆಗೆ ಕೈ ಜೋಡಿಸಿದ್ದಾನೆ ಎಂದು ಶಂಕೆ ಹಿನ್ನೆಲೆಯಲ್ಲಿ ಆತನನ್ನು ಹತ್ಯೆ ಮಾಡಲಾಗಿದೆ. ಇದನ್ನೂ ಓದಿ: ಉಕ್ರೇನ್ನಲ್ಲಿ ಸಿಲುಕಿದ್ದ ಬೀದರ್ ಮೂಲದ ಇಬ್ಬರು ವಿದ್ಯಾರ್ಥಿಗಳು ತಾಯ್ನಾಡಿಗೆ
10 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಯುದ್ಧಕ್ಕೆ ರಷ್ಯಾ 6 ಗಂಟೆ ಬ್ರೇಕ್ ಕೊಟ್ಟಿತ್ತು. ಈ ನಡುವೆಯೂ ಸಹ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ್ದಾರೆ. ಇದು ನಿಯಮ ಉಲ್ಲಂಘನೆ ಎಂದು ತಿಳಿದಿದ್ದರೂ ರಷ್ಯಾ ಈ ಕೃತ್ಯವನ್ನು ಮಾಡಿದೆ. ಇದಕ್ಕೆ ತನ್ನ ದೇಶದ ಸಂಧಾನಕನೇ ಕಾರಣವೆಂದು ಶಂಕಿಸಿದ ಉಕ್ರೇನ್ ಅವನ ಮೇಲೆಯೇ ದಾಳಿ ಮಾಡಿ ಕೊಂದಿದ್ದಾರೆ. ಒಂದು ಕಡೆ ಕದನ ವಿರಾಮ ಇದ್ದರೂ, ಇನ್ನೊಂದು ಕಡೆ ತೀವ್ರ ದಾಳಿ ನಡೆಯುತ್ತಿದೆ.
ನವದೆಹಲಿ: ಉಕ್ರೇನ್ನಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಆದೇಶಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಟ್ವೀಟ್ನಲ್ಲಿ ಏನಿದೆ: ಯುದ್ಧ ಪೀಡಿತ ಉಕ್ರೇನ್ನಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಆದೇಶಿಸಲಾಗಿದೆ. ಅಸಹಾಯಕ ವಿದ್ಯಾರ್ಥಿಗಳ ಜೊತೆಗೆ ಇಂತಹ ನಾಚಿಕೆಗೇಡಿನ ವರ್ತನೆ ಇಡೀ ದೇಶಕ್ಕೆ ಮಾಡಿದ ಅವಮಾನ. ಆಪರೇಷನ್ ಗಂಗಾದ ಈ ಕಹಿ ಸತ್ಯವು ಮೋದಿ ಸರ್ಕಾರದ ನೈಜ ಮುಖವನ್ನು ತೆರೆದಿಟ್ಟಿದೆ ಎಂದೂ ರಾಹುಲ್ ಟೀಕಿಸಿದ್ದಾರೆ. ಇದನ್ನೂ ಓದಿ:ನಾನು ಕೀವ್ನಲ್ಲಿದ್ದೇನೆ, ತಪ್ಪಿಸಿಕೊಂಡು ಹೋಗಿಲ್ಲ: ಉಕ್ರೇನ್ ಅಧ್ಯಕ್ಷ
ಆಪರೇಷನ್ ಗಂಗಾ: ರಷ್ಯಾ ಆಕ್ರಮಣದ ಹಿನ್ನೆಲೆಯಲ್ಲಿ ಉಕ್ರೇನ್ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆ ಹಿನ್ನೆಲೆಯಲ್ಲಿ ಫೆಬ್ರುವರಿ 24ರಿಂದ ಉಕ್ರೇನ್ನ ನೆರೆ ದೇಶಗಳಾದ ನಿಯಾ, ಹಂಗೆರಿ, ಸ್ಲೋವಾಕಿಯಾ ಮತ್ತು ಪೋಲೆಂಡ್ನಿಂದ ಭಾರತೀಯರನ್ನು ತೆರವುಗೊಳಿಸಲಾಗುತ್ತಿದೆ. ಈ ಕಾರ್ಯಾಚರಣೆಗೆ ಆಪರೇಷನ್ ಗಂಗಾ ಎಂದು ಹೆಸರಿಡಲಾಗಿದೆ.