Tag: Ukraine

  • ಪುಟಿನ್ ವಿರುದ್ಧ ಅರೆಬೆತ್ತಲಾದ ಮಹಿಳೆಯರು- ಯುದ್ಧ ನಿಲ್ಲಿಸುವಂತೆ ಆಗ್ರಹ

    ಪುಟಿನ್ ವಿರುದ್ಧ ಅರೆಬೆತ್ತಲಾದ ಮಹಿಳೆಯರು- ಯುದ್ಧ ನಿಲ್ಲಿಸುವಂತೆ ಆಗ್ರಹ

    ಮಾಸ್ಕೋ: ಉಕ್ರೇನ್ (Ukraine) ಮೇಲೆ ರಷ್ಯಾ (Russia) ದಾಳಿಯನ್ನು ಮುಂದುವರಿಸಿದೆ. ಈ ಯುದ್ಧದಿಂದ ಅನೇಕ ಮಂದಿ ತಮ್ಮ ಪ್ರಾಣ, ಮನೆ, ಬಂಧು ಬಾಂಧವರನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಮಧ್ಯೆ ಪ್ಯಾರಿಸ್‍ನಲ್ಲಿ ಮಹಿಳೆಯರು ಯುದ್ಧ ನಿಲ್ಲಿಸುವಂತೆ ಆಗ್ರಹಿಸಿ ವ್ಲಾಡಿಮಿರ್ ಪುಟಿನ್ (Vladimir Putin) ವಿರುದ್ಧ ಟಾಪ್‍ಲೆಸ್ (Topless  protest) ಆಗಿ ಪ್ರತಿಭಟನೆ ನಡೆಸುವ ಮೂಲಕವಾಗಿ ಗಮನ ಸೆಳೆದಿದ್ದಾರೆ.

    ವೀಡಿಯೋದಲ್ಲಿ ಏನಿದೆ?: ಪ್ಯಾರಿಸ್‍ನ (Paris) ಐಫೆಲ್ ಟವರ್‌ನ ಮುಂದೆ ಅನೇಕ ಮಹಿಳೆಯರು ಟಾಪ್‍ಲೆಸ್ ಆಗಿ ಪ್ರತಿಭಟನೆ ನಡೆಸುತ್ತಿರುವುದನ್ನು ಕಾಣಬಹುದು. ಅವರು ತಮ್ಮ ದೇಹದ ಮೇಲ್ಭಾಗದಲ್ಲಿ ಉಕ್ರೇನಿಯನ್ ಧ್ವಜವನ್ನು ಚಿತ್ರಿಸಿದ್ದಾರೆ ಮತ್ತು ಯುದ್ಧವನ್ನು ವಿರೋಧಿಸಿ ಘೋಷಣೆಗಳನ್ನು ಚಿತ್ರಿಸಿದ್ದಾರೆ. ಸ್ಟಾಪ್ ವಾರ್ ಪುಟಿನ್ ಯುದ್ಧದ ವಿರುದ್ಧ ಸ್ತ್ರೀವಾದಿಗಳು, ಸ್ಲಾವಾ ಉಕ್ರೇನಿ ಎಂಬಿತ್ಯಾದಿ ಘೋಷಣೆಗಳನ್ನು ತಮ್ಮ ದೇಹದ ಮೇಲೆ ಬರೆದುಕೊಂಡಿದ್ದಾರೆ. ಸುದ್ದಿ ಸಂಸ್ಥೆಯೊಂದು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ. ಇದನ್ನೂ ಓದಿ: ಜಾಗತಿಕ ರಾಷ್ಟ್ರಗಳ ನಿರ್ಬಂಧಕ್ಕೆ ರಷ್ಯಾ ಸೆಡ್ಡು- ಇಂಟರ್‌ನೆಟ್‌ ಸ್ವಾವಲಂಬನೆಯತ್ತ ಹೆಜ್ಜೆ

    ಯುದ್ಧ ಆರಂಭವಾದಂದಿನಿಂದಲೂ ದಿನವೂ ಒಂದಲ್ಲ ಒಂದು ಪಶ್ಚಿಮದ ದೇಶಗಳು, ವಿವಿಧ ಸರ್ಕಾರಗಳು ಮತ್ತು ಸಂಸ್ಥೆಗಳು ಒಂದರ ನಂತರ ಒಂದರಂತೆ ರಷ್ಯಾಗೆ ವಿವಿಧ ರೀತಿಯಲ್ಲಿ ನಿರ್ಬಂಧ  ಹೇರುವ ಮೂಲಕ ಬಹಿಷ್ಕರಿಸಲು ಆರಂಭಿಸಿವೆ. ಯಾವ ಬಹಿಷ್ಕಾರವೂ ರಷ್ಯಾವನ್ನು ಅಲುಗಾಡಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಯದಲ್ಲಿ ರಷ್ಯಾ ವಿರುದ್ಧ ಪ್ಯಾರಿಸ್‍ನಲ್ಲಿನ ಮಹಿಳೆಯರ ಈ ಟಾಪ್‍ಲೆಸ್ ಪ್ರತಿಭಟನೆಗಳು ಟ್ವಿಟರ್‌ನಲ್ಲಿ ಕಾಣಿಸಿಕೊಂಡಿವೆ. ಈ ಮಹಿಳೆಯರು ಯುದ್ಧಕ್ಕೆ ಮತ್ತು ನಿರ್ದಿಷ್ಟವಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

  • ಉಕ್ರೇನ್‌ ಏರ್‌ಪೋರ್ಟ್‌ ಮೇಲೆ ರಷ್ಯಾ ವೈಮಾನಿಕ ಬಾಂಬ್‌ ದಾಳಿ- 9 ಮಂದಿ ಬಲಿ

    ಉಕ್ರೇನ್‌ ಏರ್‌ಪೋರ್ಟ್‌ ಮೇಲೆ ರಷ್ಯಾ ವೈಮಾನಿಕ ಬಾಂಬ್‌ ದಾಳಿ- 9 ಮಂದಿ ಬಲಿ

    ಕೀವ್: ಉಕ್ರೇನ್‌ನ ವಿನ್ನಿಟ್ಸಿಯಾ ವಿಮಾನ ನಿಲ್ದಾಣದ ಮೇಲೆ ರಷ್ಯಾ ನಡೆಸಿದ ವೈಮಾನಿಕ ಬಾಂಬ್‌ ದಾಳಿಗೆ 9 ಮಂದಿ ಬಲಿಯಾಗಿದ್ದಾರೆ.

    ದಾಳಿಯಲ್ಲಿ ಅನೇಕರು ಗಂಭೀರ ಗಾಯಗೊಂಡಿದ್ದಾರೆ. ಉಕ್ರೇನಿಯನ್‌ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ 15 ಮಂದಿಯನ್ನು ರಕ್ಷಿಸಿದ್ದಾರೆ. ಮೃತಪಟ್ಟವರಲ್ಲಿ ಐವರು ನಾಯಕರು ಹಾಗೂ ನಾಲ್ವರು ಯೋಧರಾಗಿದ್ದಾರೆ. ಇದನ್ನೂ ಓದಿ: ಜಾಗತಿಕ ರಾಷ್ಟ್ರಗಳ ನಿರ್ಬಂಧಕ್ಕೆ ರಷ್ಯಾ ಸೆಡ್ಡು- ಇಂಟರ್‌ನೆಟ್‌ ಸ್ವಾವಲಂಬನೆಯತ್ತ ಹೆಜ್ಜೆ

    ದಾಳಿ ಕುರಿತು ಮಾತನಾಡಿರುವ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ, ಉಕ್ರೇನ್‌ ಮೇಲೆ ಹಾರಾಟ ನಿಷೇಧ ವಲಯವನ್ನು ರೂಪಿಸಿ ಎಂದು ನಾನು ಐರೋಪ್ಯ ರಾಷ್ಟ್ರಗಳಲ್ಲಿ ಮತ್ತೆ ಕೇಳುತ್ತಿದ್ದೇನೆ. ರಷ್ಯಾದ ಕ್ಷಿಪಣಿಗಳ ದಾಳಿ ಮಾಡದಂತೆ ಹಾರಾಟ ನಿಷೇಧ ವಲಯ ರೂಪಿಸಿ ಎಂದು ಒತ್ತಾಯಿಸಿದ್ದಾರೆ.

    Vladimir Putin

    ಐರೋಪ್ಯ ಒಕ್ಕೂಟದ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಅವರು, ಉಕ್ರೇನ್ ಮೇಲೆ ಹಾರಾಟ ನಿಷೇಧ ವಲಯ ರೂಪಿಸಿದರೆ ವಿಶ್ವಯುದ್ಧವನ್ನು ಹುಟ್ಟುಹಾಕಿದಂತಾಗುತ್ತದೆ ಎಂದು ಉಕ್ರೇನ್‌ ಮನವಿಯನ್ನು ತಿರಸ್ಕರಿಸಿತ್ತು. ಇದಕ್ಕೆ ಉಕ್ರೇನ್‌ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ

  • ಉಕ್ರೇನ್‍ನಿಂದ ಮರಳಿ ಬಂದ ವಿದ್ಯಾರ್ಥಿಯಿಂದ ಸಮಾಜಸೇವೆ

    ಉಕ್ರೇನ್‍ನಿಂದ ಮರಳಿ ಬಂದ ವಿದ್ಯಾರ್ಥಿಯಿಂದ ಸಮಾಜಸೇವೆ

    ರಾಯಚೂರು: ಉಕ್ರೇನ್‍ನಲ್ಲಿ ನಾನಾ ಕಷ್ಟ ಎದುರಿಸಿ ದೇಶಕ್ಕೆ ಮರಳಿ ಬಂದ ವಿದ್ಯಾರ್ಥಿ ಈಗ ಸಮಾಜ ಸೇವೆಗೆ ಮುಂದಾಗಿದ್ದಾನೆ.

    ಬಿಸಿಲನಾಡು ರಾಯಚೂರಿನ ಮೆಡಿಕಲ್ ವಿದ್ಯಾರ್ಥಿ ಮೊಹಮ್ಮದ್ ಅಸರ್ ಹುಸೇನ್, ಉಕ್ರೇನ್ ರಷ್ಯಾ ಯುದ್ದ ಹಿನ್ನೆಲೆ ಮೈನಸ್ 10 ಡಿಗ್ರಿಯಲ್ಲಿ ಗಂಟೆಗಟ್ಟಲೆ ಕಾದು ಉಕ್ರೇನ್ ಗಡಿದಾಟಿ ಭಾರತಕ್ಕೆ ಬಂದಿದ್ದಾನೆ. ರಾಯಚೂರಿಗೆ ಬಂದ ವಿದ್ಯಾರ್ಥಿ ಈಗ ಸಮಾಜಸೇವೆ ಮಡಲು ಮುಂದಾಗಿದ್ದಾನೆ.

    ಹಾವುಗಳ ರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಹಾವಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾನೆ. ತಂದೆ ಉರಗತಜ್ಞ ಅಫ್ಸರ್ ಹುಸೇನ್ ಕಳೆದ 32 ವರ್ಷಗಳಿಂದ ಹಾವುಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ತಂದೆಯಿಂದ ವಿವಿಧ ಬಗೆಯ ಹಾವುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರುವ ಅಸರ್ ಹುಸೇನ್ ಈಗ ತಾನೂ ಸಹ ಹಾವುಗಳ ರಕ್ಷಣೆ ಕೆಲಸ ಮಾಡುತ್ತಿದ್ದಾನೆ. ಯಾರೇ ಫೋನ್ ಕರೆ ಮಾಡಿದರು ಅವರ ಮನೆ, ಕಚೇರಿಗೆ ತೆರಳಿ ಹಾವುಗಳ ಹಿಡಿದು ಕಾಡಿಗೆ ಬಿಡುವ ಕೆಲಸಕ್ಕೆ ಮುಂದಾಗಿದ್ದಾನೆ. ಇದನ್ನೂ ಓದಿ: 3ನೇ ತರಗತಿ ಬಾಲಕಿಯ ಬಟ್ಟೆ ಬಿಚ್ಚಿ ಅತ್ಯಾಚಾರಗೈದ ಪ್ರಿನ್ಸಿಪಾಲ್!

    ಉಕ್ರೇನ್‍ನ ಇವ್ಯಾನೋ ಫ್ರಾನ್ಸಿವಿಸ್ಕ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಮೊದಲ ವರ್ಷದ ಎಂಬಿಬಿಎಸ್ ಓದುತ್ತಿದ್ದ ಅಸರ್ ಹುಸೇನ್ ದೇಶಕ್ಕೆ ಮರಳಿರುವುದರಿಂದ ಮುಂದಿನ ಓದಿನ ಬಗ್ಗೆ ಗೊಂದಲದಲ್ಲಿದ್ದಾನೆ. ತಾನು ಸುರಕ್ಷಿತವಾಗಿ ಬಂದ ಹಾಗೇ ಉಳಿದ ವಿದ್ಯಾರ್ಥಿಗಳನ್ನು ಕರೆತರಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿದ್ದಾನೆ.

    ಅಸರ್ ಇದ್ದ ಸ್ಥಳದಿಂದ ಕೇವಲ 10 ಕಿ.ಮೀ ದೂರದಲ್ಲಿ ರಷ್ಯಾ ದಾಳಿ ಜೋರಾಗಿತ್ತು. ಸ್ಫೋಟದ ಶಬ್ಧಕ್ಕೆ ಹೆದರಿ ಬಂಕರ್‍ಗೆ ಓಡುತ್ತಿದ್ದದ್ದನ್ನ ನೆನೆದು ಇನ್ನೂ ಉಳಿದವರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾನೆ. ಉಕ್ರೇನ್ ಗಡಿಯಲ್ಲಿ ಕುಡಿಯಲು ಊಟ, ನೀರು ಸಿಗದೆ ಕಷ್ಟ ಅನುಭವಿಸಿದ್ದು. ಗಡಿಗೆ ತಲುಪಲು 18 ಕಿ.ಮೀ ನಡೆದುಕೊಂಡೆ ಹೋದ ಅನುಭವ ಹಂಚಿಕೊಂಡಿದ್ದಾನೆ. ಇನ್ನೂ ಮಗ ಮನೆಗೆ ಸುರಕ್ಷಿತವಾಗಿ ಬಂದಿರುವುದಕ್ಕೆ ಪೋಷಕರು ಸಂತಸ ವ್ಯಕ್ತಪಡಿಸಿದ್ದು. ತಂದೆ ಉರಗತಜ್ಞ ತಮ್ಮ ಜೊತೆಯೆ ಮಗನನ್ನು ಹಾವುಗಳ ರಕ್ಷಣಾ ಕಾರ್ಯಕ್ಕೆ ಕರೆದೊಯ್ಯುತ್ತಿದ್ದಾರೆ. ಇದನ್ನೂ ಓದಿ: ಡಬಲ್ ಎಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ ಇದು: ಸಿದ್ದು ಕಿಡಿ

    ಒಟ್ಟಿನಲ್ಲಿ, ಯುದ್ದ ಭೂಮಿಯಿಂದ ಜೀವ ಉಳಿಸಿಕೊಂಡು ಬಂದವನು ಈಗ ಹಾವುಗಳ ರಕ್ಷಣೆ ಹಾಗೂ ಹಾವುಗಳಿಂದ ಜನರ ರಕ್ಷಣೆಗೆ ಮುಂದಾಗಿದ್ದಾನೆ.

  • ಜಾಗತಿಕ ರಾಷ್ಟ್ರಗಳ ನಿರ್ಬಂಧಕ್ಕೆ ರಷ್ಯಾ ಸೆಡ್ಡು- ಇಂಟರ್‌ನೆಟ್‌ ಸ್ವಾವಲಂಬನೆಯತ್ತ ಹೆಜ್ಜೆ

    ಜಾಗತಿಕ ರಾಷ್ಟ್ರಗಳ ನಿರ್ಬಂಧಕ್ಕೆ ರಷ್ಯಾ ಸೆಡ್ಡು- ಇಂಟರ್‌ನೆಟ್‌ ಸ್ವಾವಲಂಬನೆಯತ್ತ ಹೆಜ್ಜೆ

    ಮಾಸ್ಕೋ: ಉಕ್ರೇನ್‌ ವಿರುದ್ಧ ಯುದ್ಧ ನಡೆಸುತ್ತಿರುವ ಕಾರಣ ಅಮೆರಿಕ ಸೇರಿದಂತೆ ಐರೋಪ್ಯ ರಾಷ್ಟ್ರಗಳ ಒಕ್ಕೂಟದಿಂದ ಹಲವು ನಿರ್ಬಂಧಗಳ ಪರಿಣಾಮವನ್ನು ಎದುರಿಸುತ್ತಿರುವ ರಷ್ಯಾ ಈಗ ಇಂಟರ್‌ನೆಟ್‌ ವಲಯದಲ್ಲಿ ಸ್ವಾವಲಂಬಿಯಾಗುವತ್ತ ಹೆಜ್ಜೆ ಇಟ್ಟಿದೆ.

    ಯೂರೋಪ್‌ ರಾಷ್ಟ್ರಗಳ ವಿವಿಧ ಕಂಪನಿಗಳು ರಷ್ಯಾ ವಿರುದ್ಧ ಇಂಟರ್‌ನೆಟ್‌ ನಿರ್ಬಂಧ ಹೇರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮಾ.11ರ ಹೊತ್ತಿಗೆ ಜಾಗತಿಕ ಇಂಟರ್‌ನೆಟ್‌ ಸಂಪರ್ಕದಿಂದ ದೂರ ಉಳಿಯಲು ರಷ್ಯಾ ಮುಂದಾಗಿದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ

    ಮಾ.11ರ ನಂತರ ಎಲ್ಲಾ ಸರ್ವರ್‌ ಮತ್ತು ಡೊಮೈನ್‌ಗಳನ್ನು ರಷ್ಯಾ ವಲಯಕ್ಕೆ ವರ್ಗಾಯಿಸಿಕೊಳ್ಳಲು ಕ್ರಮವಹಿಸಲಾಗಿದೆ. ಸೈಟ್‌ಗಳ ನೆಟ್‌ವರ್ಕ್‌ ಮೂಲಸೌಕರ್ಯದ ವಿವರವಾದ ಡೇಟಾವನ್ನು ಸಂಗ್ರಹಿಸಲಾಗುತ್ತಿದೆ. ಅಗತ್ಯ ದತ್ತಾಂಶಗಳ ಸುರಕ್ಷತೆ ಹಾಗೂ ನಿರ್ವಹಣೆಗಾಗಿ ರಷ್ಯಾ ಕ್ರಮಕೈಗೊಂಡಿದೆ.

    ರಷ್ಯಾದ ಈ ಕ್ರಮದಿಂದ ಯೂರೋಪ್‌ ರಾಷ್ಟ್ರಗಳು ವಿಧಿಸಿರುವ ನಿರ್ಬಂಧದಿಂದ ಯಾವುದೇ ಗಂಭೀರ ಸಮಸ್ಯೆಯಾಗುವುದಿಲ್ಲ. ಸ್ವತಃ ರಷ್ಯಾ, ಸರ್ವರ್‌ ಮತ್ತು ಡೊಮೈನ್‌ಗಳನ್ನು ವರ್ಗಾಯಿಸಿಕೊಳ್ಳುತ್ತಿರುವುದು ಮುಂದೆ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರವಾಗಲಿದೆ. ಇದನ್ನೂ ಓದಿ: ರಷ್ಯಾ- ಉಕ್ರೇನ್‌ ಯುದ್ಧ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ

    ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ ವಿರೋಧಿಸಿ ಅಮೆರಿಕ ಅನೇಕ ನಿರ್ಬಂಧಗಳನ್ನು ವಿಧಿಸಿದೆ. ಆರ್ಥಿಕ ನಿರ್ಬಂಧವನ್ನೂ ಹೇರಲಾಗಿದೆ. ಇದಕ್ಕೆ ಅನೇಕ ರಾಷ್ಟ್ರಗಳು ಬೆಂಬಲ ಸೂಚಿಸಿವೆ. ಇದರಿಂದ ರಷ್ಯಾ ಸೇರಿದಂತೆ ಆ ದೇಶವನ್ನು ಅವಲಂಬಿಸಿರುವ ಅನೇಕ ರಾಷ್ಟ್ರಗಳು ತೊಂದರೆ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಷ್ಯಾ ಸ್ವಾವಲಂಬನೆಯತ್ತ ಹೆಜ್ಜೆ ಇರಿಸಿದೆ.

  • ದೇಶ ದ್ರೋಹಿಗಳಂದ್ರೆ ಕಾಂಗ್ರೆಸ್ಸಿಗರು, ಕಾಂಗ್ರೆಸ್ ಅಂದ್ರೆನೆ ದೇಶ ದ್ರೋಹ: ಚೈತ್ರಾ ಕುಂದಾಪುರ

    ದೇಶ ದ್ರೋಹಿಗಳಂದ್ರೆ ಕಾಂಗ್ರೆಸ್ಸಿಗರು, ಕಾಂಗ್ರೆಸ್ ಅಂದ್ರೆನೆ ದೇಶ ದ್ರೋಹ: ಚೈತ್ರಾ ಕುಂದಾಪುರ

    ಗದಗ: ದೇಶ ದ್ರೋಹಿಗಳಂದ್ರೆ ಕಾಂಗ್ರೆಸ್ಸಿಗರು, ಕಾಂಗ್ರೆಸ್ ಅಂದ್ರೆನೆ ದೇಶ ದ್ರೋಹ ಎಂದು ಹಿಂದೂ ಫೈಯರ್ ಬ್ಯಾಂಡ್ ಚೈತ್ರಾ ಕುಂದಾಪುರ ವಿವಾದಾತ್ಮಕ ಹೇಳಿಕೆ ನೀಡಿದರು.

    ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 995 ರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಬಹಿರಂಗ ಸಮಾವೇಶ ಭಾಷಣದಲ್ಲಿ ಮಾತನಾಡಿದ ಅವರು, ದೇಶ ದ್ರೋಹಕ್ಕೆ ಇನ್ನೊಂದು ಪರ್ಯಾಯ, ಸಮಾನಾರ್ಥಕ ಪದ ಇದ್ರೆ ಅದು ಕಾಂಗ್ರೆಸ್ ಮಾತ್ರ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಡಬಲ್ ಎಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ ಇದು: ಸಿದ್ದು ಕಿಡಿ

    ಉಕ್ರೇನ್ ದೇಶದಿಂದ ಭಾರತಕ್ಕೆ ಆಗಮಿಸಿದ ವಿದ್ಯಾರ್ಥಿಗಳ ಪೈಕಿ ಕೆಲವು ವಿದ್ಯಾರ್ಥಿಗಳು ಭಾರತಕ್ಕೆ ಗಟ್ಸ್ ಇಲ್ಲ ಎಂಬ ಹೇಳಿಕೆಗೆ ಸಹ ಅಸಮಾಧಾನ ವ್ಯಕ್ತಪಡಿಸಿದರು. ಉಕ್ರೇನ್ ದೇಶದಲ್ಲಿ ಸಿಲುಕಿದ ವಿದ್ಯಾರ್ಥಿಗಳನ್ನು ಕಷ್ಟಪಟ್ಟು ಭಾರತಕ್ಕೆ ಕರೆತರಲಾಗ್ತಿದೆ. ನಮ್ಮ ಮಕ್ಕಳು ವಿದ್ಯೆ ಪಡೀದೆ ಖಾಲಿ ಕೂತರೂ ಪರವಾಗಿಲ್ಲ. ವಿದೇಶಿ ಅರ್ಧ ಡಿಗ್ರಿ ಪಡಿದು ರಾಷ್ಟ್ರಕ್ಕೆ ಕೃತಘ್ನರಾಗುವ ದೇಶದ್ರೋಹಿಗಳನ್ನು ಹುಟ್ಟಿಸಬಾರದು. ಏನೂ ಓದದವರು, ಲಾರಿ, ಆಟೋ ಚಾಲಕರು ತಮ್ಮ ವಾಹನದ ಮೇಲೆ ‘ಮೇರಾ ಭಾರತ್ ಮಹಾನ್’, ‘ಭಾರತ ಮಾತಾಕಿ ಜೈ’ ಎಂದು ಬರೆದುಕೊಂಡಿರುತ್ತಾರೆ ಎಂದು ವಿವರಿಸಿದರು.

    Manipur elections 2022: Congress releases third list of candidates

    ಜಗತ್ತಿನ ಯಾವುದೇ ಯೂನಿವರ್ಸಿಟಿ ಕಲಿಸದ ರಾಷ್ಟ್ರ ಪ್ರೇಮ ಅವರಲ್ಲಿದೆ. ಆದರೆ ಬೇರೆ ದೇಶಕ್ಕೆ ಹೋಗಿ ಅರ್ಧ ಡಿಗ್ರಿ ತೆಗೆದುಕೊಂಡು ಬಂದವರು ದೇಶ ಸರಿ ಇಲ್ಲ ಅಂತಿದ್ದಾರೆ. ತಾಯಿ ಭಾರತಿಗೆ ಕೃತಜ್ಞರಾಗಿರುವುದನ್ನ ಕಲೆತರೆ ಮಾತ್ರ ಶಿಕ್ಷಣಕ್ಕೆ ಬೆಲೆ ಇರುತ್ತೆ. ಅನ್ನ ಕೊಟ್ಟ ಭೂಮಿಯನ್ನ ಮಾರಿ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿದ್ದಾರೆ. ಹೀಗೆ ಶಿಕ್ಷಣ ಪಡೆದು ದೇಶಕ್ಕೆ ವಾಪಾಸ್ ಆಗುವ ಮಕ್ಕಳು ಭಾರತ ಸರಿ ಇಲ್ಲ ಅಂತಾರೆ. ನಮ್ಮ ಮಕ್ಕಳು ಡಿಗ್ರಿ ಪಡೆಯದಿದ್ರೂ ಪರವಾಗಿಲ್ಲ. ಇಂಥ ಮಕ್ಕಳನ್ನ ಹುಟ್ಟಿಸಬಾರದು ಎಂದು ಆಕ್ರೋಶ ಹೊರಹಾಕಿದರು.

    ಶಿವಮೊಗ್ಗ ಹರ್ಷ ಹತ್ಯೆ ಬಗ್ಗೆ ಮಾತನಾಡಿದ ಅವರು, ಹರ್ಷ ಕೊಲೆ ಮಾಡಿದ ಸಮುದಾಯದ ಬಗ್ಗೆ ನಿಜವಾದ ಭಾವನೆ ಏನೆಂಬುದು ಈಗ ಸಮಾಜಕ್ಕೆ ಅರ್ಥವಾಗ್ತಿದೆ. ಹಿಂದೂ ರಕ್ತದ ಮೇಲೆ ಇರುವ ಸರ್ಕಾರವಿದು. ಆ ಹಿಂದೂ ರಕ್ತಕ್ಕೆ ಉತ್ತರ ಜೊತೆಗೆ ಸೂಕ್ತ ನ್ಯಾಯ ಕೊಡಿಸಬೇಕು. ಈ ಬಗ್ಗೆ ಗಂಡೆದೆ ತೋರಿಸಬೇಕು ಎಂದರು.

    ಮುಸ್ಲಿಂರನ್ನು ಡಿಕೆಶಿ ಬ್ರದರ್ಸ್ ಅಂತಾರೆ, ಹಾಗಾಗಿ ಡಿಕೆಶಿ ಬದರ್ಸ್‍ಗಳೆ ಹರ್ಷನನ್ನು ಕೊಂದದ್ದು. ಡಿಕೆಶಿ ಬ್ರದರ್ಸ್ ಗಳ ಪಾಪದಲ್ಲಿ ಡಿಕೆಶಿಗೂ ಪಾಲಿದೆ ಎಂದು ಭಾವಿಸುತ್ತೇನೆ ಎಂದರು. ಇದನ್ನೂ ಓದಿ: ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು: ವಿದ್ಯಾರ್ಥಿನಿ ಅಕ್ಷಿತಾ

    ಈ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಶಿವಾಜಿ ಸೇನೆ ಕಾರ್ಯಕರ್ತರು ಸೇರಿದಂತೆ ಅನೇಕ ಸಾರ್ವಜನಿಕರು ಪಾಲ್ಗೊಂಡಿದ್ದರು.

  • ಕಚ್ಚಾ ತೈಲ ಬೆಲೆ ಏರಿಕೆ ಬೆನ್ನಲ್ಲೇ ಭಾರತಕ್ಕೆ ರಷ್ಯಾದಿಂದ ಭಾರೀ ಆಫರ್

    ಕಚ್ಚಾ ತೈಲ ಬೆಲೆ ಏರಿಕೆ ಬೆನ್ನಲ್ಲೇ ಭಾರತಕ್ಕೆ ರಷ್ಯಾದಿಂದ ಭಾರೀ ಆಫರ್

    ನವದೆಹಲಿ: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಯಾವುದೇ ನಿಲುವು ಪ್ರಕಟಿಸದೇ ತಟಸ್ಥ ಧೋರಣೆ ತೋರಿದ ಭಾರತಕ್ಕೆ ರಷ್ಯಾ ಭರ್ಜರಿ ಆಫರ್ ಪ್ರಕಟಿಸಿದೆ.

    ಹೌದು. ರಷ್ಯಾ ದಾಳಿಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಏರಿಕೆ ಕಾಣುತ್ತಿದೆ. ಈ ಬೆನ್ನಲ್ಲೇ ಭಾರೀ ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾ ತೈಲ ನೀಡಲು ರಷ್ಯಾ ಮುಂದಾಗಿದೆ ಎಂದು ವರದಿಯಾಗಿದೆ.

    ಬ್ರೆಂಟ್ ಕಚ್ಚಾ ತೈಲ ದರಕ್ಕಿಂತ ಶೇ.25-27 ರಷ್ಟು ರಿಯಾಯಿತಿ ದರದಲ್ಲಿ ತೈಲ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ರಷ್ಯಾದ ಪ್ರತಿಷ್ಠಿತ ಕಚ್ಚಾ ತೈಲ ಕಂಪನಿಗಳಲ್ಲಿ ಒಂದಾದ ರೋಸ್ನೆಫ್ಟ್ ಆಯಿಲ್ ಕಂಪನಿಯೂ ಭಾರತಕ್ಕೆ ಬ್ರೆಂಟ್ ಕಚ್ಚಾ ತೈಲವನ್ನು ನೀಡಲು ಮುಂದಾಗಿದೆ.

    ಕಳೆದ ಡಿಸೆಂಬರ್‌ನಲ್ಲಿ ಪುಟಿನ್ ಭಾರತಕ್ಕೆ ಬಂದಾಗ ರೋಸ್ನೆಫ್ಟ್ ಆಯಿಲ್ ಕಂಪನಿ ಹಾಗೂ ಭಾರತದ ತೈಲ ಕಂಪನಿಗಳು ಒಪ್ಪಂದವನ್ನು ಮಾಡಿಕೊಂಡಿತ್ತು. ಈ ಒಪ್ಪಂದದಲ್ಲಿ 2022ರ ಕೊನೆಯವರೆಗೆ ಭಾರತಕ್ಕೆ 2 ಮಿಲಿಯನ್ ಟನ್ ತೈಲವನ್ನು ನೊವೊರೊಸಿಸ್ಕ್ ಬಂದರಿನ ಮೂಲಕ ರಫ್ತು ಮಾಡಲು ಒಪ್ಪಿಕೊಂಡಿತ್ತು.

    ರಷ್ಯಾದ ಆಫರ್ ಭಾರತಕ್ಕೆ ಇಷ್ಟವಾಗಿದ್ದರೂ ಹಣ ವ್ಯವಹಾರ ಮಾಡುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ರುಪಿ- ರೂಬೆಲ್ ಮೂಲಕ ವ್ಯವಹಾರ ನಡೆಸಬಹುದಾದರೂ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

    ರಷ್ಯಾದಿಂದ ಭಾರತ ಕಚ್ಚಾ ತೈಲವನ್ನು ಆಮದು ಮಾಡುವ ಪ್ರಮಾಣ ಕಡಿಮೆ. ಶೇ.70 ರಷ್ಟು ತೈಲವನ್ನು ಒಪೆಕ್ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುತ್ತದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ

    ಈಗ ಯಾಕೆ ಕಷ್ಟ?:
    ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿರುವ ಮಧ್ಯೆ, ಅಮೆರಿಕ, ಕೆನಡಾ, ಬ್ರಿಟನ್ ಮತ್ತು ಪಶ್ಚಿಮ ದೇಶಗಳು ಅಂತರಾಷ್ಟ್ರೀಯ ಹಣಕಾಸು ವ್ಯವಹಾರ ವಿನಿಮಯ ಸಂಸ್ಥೆ ಸ್ವಿಫ್ಟ್ (Society For Worldwide Interbank Financial Telecommunications) ನಿಂದ ರಷ್ಯಾವನ್ನು ದೂರವಿಟ್ಟಿದೆ. ಇದರಿಂದಾಗಿ ಡಾಲರ್ ಮೂಲಕ ತೈಲವನ್ನು ಖರೀದಿ ಮಾಡುವುದು ಕಷ್ಟವಾಗಿದೆ.

    ಏನಿದು ಸ್ವಿಫ್ಟ್ ?
    SWIFT ಇದು ಅಂತರಾಷ್ಟ್ರೀಯ ನಗದು ವ್ಯವಹಾರಗಳ ಸಂಸ್ಥೆಯಾಗಿದ್ದು, ವಿವಿಧ ದೇಶಗಳ ನಡುವೆ ವೇಗವಾಗಿ ನಗದು ವ್ಯವಹಾರ ನಡೆಯಲು ನೆರವಾಗುವಂತಹ ವ್ಯವಸ್ಥೆ ಸ್ವಿಫ್ಟ್‍ನಲ್ಲಿದೆ. 1973ರಲ್ಲಿ ಬೆಲ್ಜಿಯಂನಲ್ಲಿ ಆರಂಭವಾದ ಸ್ವಿಫ್ಟ್ ನೆಟ್‍ವರ್ಕನಲ್ಲಿ 200 ದೇಶಗಳ 11 ಸಾವಿರ ಬ್ಯಾಂಕುಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಸರ್ಕಾರಗಳು, ಸಂಸ್ಥೆಗಳ ಮಧ್ಯೆ ಲಕ್ಷ ಕೋಟಿ ಡಾಲರ್‌ಗಳ ವ್ಯವಹಾರ ನಡೆಯುತ್ತದೆ. ಇದನ್ನೂ ಓದಿ: Russia-Ukraine Crisis: ರಷ್ಯಾಗೆ ಮತ್ತೊಂದು ಶಾಕ್ – SWIFTನಿಂದ ರಷ್ಯಾವನ್ನು ದೂರವಿಡಲು ತೀರ್ಮಾನ

    ರಷ್ಯಾಗೆ ನಷ್ಟವೇನು?
    ಸ್ವಿಫ್ಟ್‌ನ  ಒಟ್ಟು ವ್ಯವಹಾರದಲ್ಲಿ ರಷ್ಯಾ ಪಾಲು ಶೇ.1 ರಷ್ಟಿದ್ದು, ಸ್ವಿಫ್ಟ್ ನೆರವಿಲ್ಲದೇ ಅಂತರಾಷ್ಟ್ರೀಯ ಆರ್ಥಿಕ ವ್ಯವಹಾರ ಕಷ್ಟವಾಗಬಹುದಾಗಿದೆ. ಅಂತರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯಲ್ಲಿ ರಷ್ಯಾ ಒಬ್ಬಂಟಿಯಾಗಲಿದೆ. ದಿಗ್ಬಂಧನ ತಡೆದುಕೊಳ್ಳಲು ರಷ್ಯಾ ಬಳಿ 600 ಬಿಲಿಯನ್ ಡಾಲರ್‍ಗಳಷ್ಟು ಅಂತರಾಷ್ಟ್ರೀಯ ಮೀಸಲು ನಿಧಿ ಇದೆ. ಈ ಮೀಸಲು ನಿಧಿಯನ್ನು ರಷ್ಯಾದ ಸೆಂಟ್ರಲ್ ಬ್ಯಾಂಕ್ ಬಳಸಿಕೊಳ್ಳದಂತೆ ಬ್ಯಾನ್ ಆಗಲಿದೆ. ಅಲ್ಲದೇ ಸ್ಥಳೀಯ ಕರೆನ್ಸಿಗಾಗಿ ಸೆಂಟ್ರಲ್ ಬ್ಯಾಂಕ್ ಬಳಿಯ ವಿದೇಶಿ ಆಸ್ತಿ ಮಾರಲಾಗುವುದಿಲ್ಲ. ವಿದೇಶಗಳಲ್ಲಿರುವ ರಷ್ಯಾದ ಮೀಸಲು ನಿಧಿ ಫ್ರೀಜ್ ಆಗಲಿದ್ದು, ರೂಬುಲ್ ಕರೆನ್ಸಿ ಮೌಲ್ಯ ಪತನಗೊಳ್ಳಲಿದೆ. ಆಗ ಇದರ ಬಳಕೆ ಕಷ್ಟವಾಗಬಹುದು. ಇದೆಲ್ಲದರ ಜೊತೆಗೆ ತೈಲ, ಅನಿಲ ಮಾರಾಟದಿಂದ ಬರುವ ಆದಾಯ ಗಣನೀಯವಾಗಿ ಕುಸಿಯಲಿದೆ. ರಷ್ಯಾದ ಆದಾಯದಲ್ಲಿ ತೈಲ, ಅನಿಲ ಮಾರಾಟದ ಪಾಲು ಶೇ.40 ರಷ್ಟಿದೆ. 2012ರಲ್ಲಿ ಸ್ವಿಫ್ಟ್‍ನಿಂದ ಇರಾನ್ ದೇಶವನ್ನು ಹೊರಗಿಡಲಾಗಿತ್ತು. ಇದರಿಂದ ಇರಾನ್ ಆರ್ಥಿಕವಾಗಿ ತುಂಬಾ ನಷ್ಟ ಅನುಭವಿಸಿತ್ತು. ಶೇಕಡಾ 50 ರಷ್ಟು ತೈಲಾದಾಯ, ಶೇಕಡಾ 30 ರಷ್ಟು ವಿದೇಶಿ ವ್ಯಾಪಾರ ಕಳೆದುಕೊಂಡಿತ್ತು.

  • ಮಾತುಕತೆಯ ಮೂಲಕ ಯುದ್ಧ ನಿಲ್ಲಿಸಿ – ಝೆಲೆನ್ಸ್ಕಿಗೆ ಮೋದಿ ಸಲಹೆ

    ಮಾತುಕತೆಯ ಮೂಲಕ ಯುದ್ಧ ನಿಲ್ಲಿಸಿ – ಝೆಲೆನ್ಸ್ಕಿಗೆ ಮೋದಿ ಸಲಹೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಸಮಾಲೋಚನೆ ನಡೆಸಿದರು.

    ಅಧ್ಯಕ್ಷ ಝೆಲೆನ್ಸ್ಕಿ ಅವರು ಸಂಘರ್ಷದ ಪರಿಸ್ಥಿತಿ, ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಮಾತುಕತೆಗಳ ಬಗ್ಗೆ ಮೋದಿ ಅವರಿಗೆ ವಿಸ್ತøತವಾಗಿ ವಿವರಿಸಿದರು. ಸಂಘರ್ಷ ನಡೆಯುತ್ತಿರುವುದು ಮತ್ತು ಅದರ ಪರಿಣಾಮವಾಗಿ ಉದ್ಭವಿಸಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಮೋದಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ತಕ್ಷಣವೇ ಹಿಂಸಾಚಾರವನ್ನು ನಿಲ್ಲಿಸಬೇಕೆಂಬ ತಮ್ಮ ಕರೆಯನ್ನು ಪುನರುಚ್ಚರಿಸಿದ ಮೋದಿ ಅವರು ಭಾರತವು ಸದಾ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಮತ್ತು ಉಭಯ ಪಕ್ಷಗಳ ನಡುವೆ ನೇರ ಮಾತುಕತೆಯ ಪರವಾಗಿ ನಿಂತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು: ವಿದ್ಯಾರ್ಥಿನಿ ಅಕ್ಷಿತಾ

    ಉಕ್ರೇನ್‍ನಿಂದ 20,000ಕ್ಕೂ ಅಧಿಕ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಉಕ್ರೇನಿಯನ್ ಅಧಿಕಾರಿಗಳಿಗೆ ಮೋದಿ ಅವರು ಧನ್ಯವಾದ ಸಲ್ಲಿಸಿದರು. ಉಕ್ರೇನ್‍ನಲ್ಲಿ ಇನ್ನೂ ಉಳಿದಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆತೆಯ ಬಗ್ಗೆ ತೀವ್ರ ಕಾಳಜಿಯನ್ನು ವ್ಯಕ್ತಪಡಿಸಿದರು. ಅವರ ತ್ವರಿತ ಮತ್ತು ಸುರಕ್ಷಿತ ಸ್ಥಳಾಂತರ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು.

  • ಉಕ್ರೇನ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಇಂದು ಭಾರತಕ್ಕೆ ವಾಪಸ್‌

    ಉಕ್ರೇನ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಇಂದು ಭಾರತಕ್ಕೆ ವಾಪಸ್‌

    ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಭಾರತದ ವಿದ್ಯಾರ್ಥಿ ಇಂದು ಭಾರತಕ್ಕೆ ವಾಪಸ್‌ ಆಗುತ್ತಿದ್ದಾರೆ.

    ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಗುಂಡೇಟಿನಿಂದ ಆಸ್ಪತ್ರೆ ಸೇರಿದ್ದ ವಿದ್ಯಾರ್ಥಿಯನ್ನು ಪೋಲೆಂಡ್‌ ದೇಶದಲ್ಲಿ ಕೇಂದ್ರ ಸಚಿವ ವಿ.ಕೆ.ಸಿಂಗ್‌ ಅವರು ಭೇಟಿಯಾಗಿದ್ದಾರೆ. ಅಲ್ಲದೇ ʼಆಪರೇಷನ್‌ ಗಂಗಾʼ ಕಾರ್ಯಾಚರಣೆಯಡಿ ವಿದ್ಯಾರ್ಥಿಯನ್ನು ಭಾರತಕ್ಕೆ ವಾಪಸ್‌ ಕರೆತರಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಯಿ ಬಿಡದಿದ್ದರೆ ನಾನು ಭಾರತಕ್ಕೆ ಬರುತ್ತಿರಲಿಲ್ಲ: ರಂಜಿತ್ ರೆಡ್ಡಿ

    ಸ್ಟ್ರೆಚರ್‌ನಲ್ಲಿದ್ದ 31 ವರ್ಷದ ವಿದ್ಯಾರ್ಥಿಯೊಂದಿಗೆ ಸಿಂಗ್‌ ಅವರು ರ್ಜೆಸ್ಜೋವ್‌ ವಿಮಾನ ನಿಲ್ದಾಣದಲ್ಲಿ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ. ವಿದ್ಯಾರ್ಥಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವ ಭರವಸೆ ನೀಡುತ್ತೇನೆ. ಆತ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗುವುದನ್ನು ನೋಡಲು ನಾನು ಎದುರು ನೋಡುತ್ತಿದ್ದೇನೆ. ಬಹುಬೇಗ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದು ಸಿಂಗ್‌ ತಿಳಿಸಿದ್ದಾರೆ.

    ವಿದ್ಯಾರ್ಥಿ ಹರ್ಜೋತ್‌ ಸಿಂಗ್‌ ಪ್ರಯಾಣಿಸುವ ವಿಮಾನ ರಾತ್ರಿ 7 ಗಂಟೆಗೆ ದೆಹಲಿ ತಲುಪಲಿದೆ. ಆತನೊಂದಿಗೆ 200 ಮಂದಿ ಭಾರತೀಯರು ಪೋಲೆಂಡ್‌ನಿಂದ ಪ್ರಯಾಣ ಬೆಳೆಸಲಿದ್ದಾರೆ. ಸದ್ಯ ವಿದ್ಯಾರ್ಥಿ ಉಕ್ರೇನ್‌ನಿಂದ ಪೋಲೆಂಡ್‌ಗೆ ಬಂದಿದ್ದಾರೆ. ಇದನ್ನೂ ಓದಿ:  ಮಧ್ಯೆ ಕೆಟ್ಟು ನಿಂತ ಬಸ್ – ರೊಮೆನಿಯಾ ತಲುಪದ 37 ಕನ್ನಡಿಗರು

    ಕೀವ್‌ನಲ್ಲಿ ಭಾರತದ ಹರ್ಜೋತ್‌ ಸಿಂಗ್‌ಗೆ ಗುಂಡೇಟು ಬಿದ್ದಿತ್ತು. ಈ ವೇಳೆ ಆತ ತನ್ನ ಪಾಸ್‌ಪೋರ್ಟ್‌ ಕೂಡ ಕಳೆದುಕೊಂಡಿದ್ದಾರೆ. ಹರ್ಜೋತ್‌ ನಾಳೆ ನಮ್ಮೊಂದಿಗೆ ಭಾರತವನ್ನು ತಲುಪುತ್ತಿದ್ದಾರೆ ಎಂದು ತಿಳಿಸಲು ಸಂತೋಷವಾಗಿದೆ ಎಂದು ಸಚಿವ ಟ್ವೀಟ್‌ ಮಾಡಿದ್ದಾರೆ.

  • ನವೀನ್ ಬೆಳಗ್ಗೆ ನಮ್ಮೊಂದಿಗೆ ಬರುತ್ತಿದ್ದರೆ ಉಳಿಯುತ್ತಿದ್ದ: ಸ್ನೇಹಿತೆ ವರ್ಷಿತಾ

    ನವೀನ್ ಬೆಳಗ್ಗೆ ನಮ್ಮೊಂದಿಗೆ ಬರುತ್ತಿದ್ದರೆ ಉಳಿಯುತ್ತಿದ್ದ: ಸ್ನೇಹಿತೆ ವರ್ಷಿತಾ

    ಕೋಲಾರ: ನವೀನ್ ಬೆಳಗ್ಗೆ 6 ಗಂಟೆಗೆ ನಮ್ಮ ಜೊತೆ ಬರುತ್ತಿದ್ದರೆ ಉಳಿಯುತ್ತಿದ್ದ. 10 ಗಂಟೆಗೆ ನವೀನ್ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಅನ್ನೋದನ್ನು ಕೇಳಿ ಅತೀವ ದುಃಖವಾಯಿತು ಎಂದು ಉಕ್ರೇನ್‍ನಿಂದ ವಾಪಸ್ ಆದ ಕೋಲಾರದ ವರ್ಷಿತಾ ಬೇಸರ ವ್ಯಕ್ತಪಡಿಸಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ನವೀನ್ ಒಳ್ಳೆಯ ಸ್ನೇಹಿತರು. ಇಬ್ಬರೂ ವಾಪಸ್ ಭಾರತಕ್ಕೆ ಬರುವ ಬಗ್ಗೆ ಮಾತನಾಡಿಕೊಂಡಿದ್ದವು. ಎಲ್ಲದರಲ್ಲೂ ನವೀನ್ ತುಂಬಾ ಒಳ್ಳೆಯ ಸ್ನೇಹಿತನಾಗಿದ್ದ. ಎಲ್ಲರೊಂದಿಗೆ ಸಂತೋಷದಿಂದ, ತಮಾಷೆ ಮಾಡಿಕೊಂಡು ನಗುನಗುತ್ತಾ ಇರ್ತಿದ್ದ. ನವೀನ್‍ಗೆ ಯಾರೂ ವಿರೋಧಿಗಳಿರಲಿಲ್ಲ. ಎಲ್ಲರೊಂದಿಗೆ ಕುಟುಂಬಸ್ಥರಂತೆ ಬೆರೆಯುತ್ತಿದ್ದ ಎಂದು ಹೇಳಿದರು.

    ನಾನು ರೈಲ್ವೇ ನಿಲ್ದಾಣದಲ್ಲಿದ್ದಾಗ ನವೀನ್ ಇಲ್ಲಾ ಅನ್ನೋ ವಿಷಯ ಕೇಳಿ ದು:ಖವಾಯಿತು. ನನಗೆ ಹೆಚ್ಚಾಗಿ ಉಕ್ರೇನ್‍ನಲ್ಲಿ ಏನೂ ಗೊತ್ತಿರಲಿಲ್ಲ, ಎಲ್ಲವನ್ನೂ ತೋರಿಸಿ ನನ್ನ ಜೊತೆಗಿದ್ದವನು ನವೀನ್. ಇಂದಿಗೂ ನವೀನ್ ಇಲ್ಲಾ ಅನ್ನೋದನ್ನ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್

    ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ, ರಾಯಭಾರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಪೋಲ್ಯಾಂಡ್ ಗಡಿಯಿಂದ ನಮ್ಮ ಮನೆಯವರೆಗೆ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ. ಬಾಂಬ್ ದಾಳಿ, ಗುಂಡಿನ ದಾಳಿ ನೋಡಿದರೆ ನಾನು ವಾಪಸ್ ಬರುತ್ತೇನೆ ಅನ್ನೋ ನಂಬಿಕೆ ಇರಲಿಲ್ಲ. ತಂದೆ-ತಾಯಿ ಧೈರ್ಯ ಹೇಳಿದ ಮೇಲೆ ಎಲ್ಲಾ ಕಷ್ಟವನ್ನು ಎದುರಿಸಿಕೊಂಡು ಇಂದು ವಾಪಸ್ಸಾಗಿದ್ದೇನೆ. ಅಷ್ಟು ದೂರದಿಂದ ಇಲ್ಲಿಗೇಕೆ ಬಂದೆ ಎನ್ನಿಸಿತ್ತು. ಆದರೆ ತಂದೆ ಹೇಳಿದ ಧೈರ್ಯದ ಮಾತುಗಳಿಂದ ನಾನು ವಾಪಸ್ಸಾಗಿದ್ದೇನೆ ಎಂದರು.

    ಕೇಂದ್ರ ಸರ್ಕಾರ ಜವಬ್ದಾರಿ ವಹಿಸಿದ್ದಕ್ಕೆ ನಾನು ಇಂದು ಸುರಕ್ಷಿತವಾಗಿ ವಾಪಸ್ಸಾಗಿದ್ದೇನೆ. ಎಲ್ಲ ವ್ಯವಸ್ಥೆಗಳನ್ನು ಮಾಡಿ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ವರ್ಷಿತಾ ತಿಳಿಸಿದರು. ಇದನ್ನೂ ಓದಿ: ಭಾರತೀಯರಿಗೆ ಎರಡು ಮಾರ್ಗ ತೆರೆದ ರಷ್ಯಾ

  • ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು: ವಿದ್ಯಾರ್ಥಿನಿ ಅಕ್ಷಿತಾ

    ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು: ವಿದ್ಯಾರ್ಥಿನಿ ಅಕ್ಷಿತಾ

    ಮಡಿಕೇರಿ: ಉಕ್ರೇನ್ ಮತ್ತು ರಷ್ಯಾ ದೇಶದ ನಡುವೆ ನಡೆಯುತ್ತಿರುವ ಯುದ್ಧ ಪ್ರಮಾಣ 12 ದಿನವಾದ್ರೂ ಇಂದಿಗೂ ಮುಂದುವರೆದಿದೆ. ಉಕ್ರೇನ್‍ನಲ್ಲಿ ಸಿಲುಕಿರುವ ಸಾವಿರಾರು ವಿದ್ಯಾರ್ಥಿಗಳು ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ವಿದ್ಯಾರ್ಥಿಗಳು ಹೈ ರಿಸ್ಕ್ ತೆಗೆದುಕೊಂಡು ಭಾರತಕ್ಕೆ ಅಗಮಿಸುತ್ತಿದ್ದಾರೆ.

    ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಮಲ್ಲೇನಹಳ್ಳಿಯ ರಮೇಶ್ ಮತ್ತು ಸವಿತಾ ದಂಪತಿ ಮಗಳು ಅಕ್ಷಿತಾ ಸುರಕ್ಷಿತವಾಗಿ ಜಿಲ್ಲೆಗೆ ಆಗಮಿಸಿದ್ದಾರೆ. ಉಕ್ರೇನ್ ನ ಖಾರ್ಕಿವ್ ನಗರದಲ್ಲಿ ಎಂಬಿಬಿಎಸ್ ಓದುತ್ತಿದ್ದ ಅಕ್ಷಿತಾ. ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎರಡನೇ ವರ್ಷದ ಎಂಬಿಬಿಎಸ್ ಓದುತ್ತಿದ್ದಾರೆ. ಉಕ್ರೇನ್ ಯುದ್ಧ ಅರಂಭವಾದ ಬಳಿಕ ಸಾಕಷ್ಟು ಸಂಕಷ್ಟ ಎದುರಿಸಿ ಮನೆಗೆ ಬಂದ ಮಗಳನ್ನು ಪೋಷಕರು ಅಪ್ಪಿ ಮುದ್ದಾಡಿದ್ದಾರೆ. ಇದನ್ನೂ ಓದಿ: ಮುದ್ದಿನ ಸಾಕುಪ್ರಾಣಿಗಳಾದ ಪ್ಯಾಂಥರ್, ಚಿರತೆ ಇಲ್ಲದೇ ದೇಶಕ್ಕೆ ಮರಳಲ್ಲ: ಭಾರತೀಯ ವೈದ್ಯ

    ಅಕ್ಷಿತಾಳಿಗೆ ಆರತಿ ಬೆಳಗಿ ತಾಯಿ ಸವಿತಾ ಸ್ವಾಗತಿಸಿದ್ದು, ನಂತರ ಸಿಹಿ ತಿನ್ನಿಸಿ ಆನಂದಿಸಿದ ಬಂಧು-ಬಾಂಧವರು. 8 ದಿನಗಳ ಕಾಲ ಘೋರ ಯುದ್ಧಭೂಮಿ ಖಾರ್ಕಿವ್ ನಲ್ಲಿ ಸಿಲುಕಿದ್ದ ಅಕ್ಷಿತಾ ಮಾಧ್ಯಮಗಳೊಂದಿಗೆ ಮಾತಾನಾಡಿದ್ದು, ನಾವು ಬದುಕಿ ಬರುತ್ತೇವೆ ಎಂಬ ನಂಬಿಕೆ ನಮಗೆ ಇರಲಿಲ್ಲ. ಐದೈದು ನಿಮಿಷಕ್ಕೂ ಬಾಂಬಿಂಗ್, ಶೆಲ್ಲಿಂಗ್ ಆಗುತ್ತಿತ್ತು. ಬಾಂಬ್ ಸಿಡಿತ ಮೊರೆತಗಳ ನಡುವೆ ಕಾಲ ಕಳೆಯಬೇಕಾಗಿತ್ತು. ಅಷ್ಟು ದಿನಗಳ ಕಾಲ ಬಂಕರ್‍ನಲ್ಲಿಯೇ ಆಶ್ರಯ ಪಡೆದಿದ್ದು, ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು ಎಂದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

    ಕೊನೆಗೂ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದೇವೆ. ಲಿವ್ಯುವ್ ಒಂದಷ್ಟು ಸುರಕ್ಷಿತವಾದ ಸ್ಥಳವಾಗಿತ್ತು. ಆದರೆ ಅಲ್ಲಿಗೆ ತಲುಪುವುದಕ್ಕೆ 1500 ಕಿ.ಮೀ ಪ್ರಯಾಣಿಸಬೇಕಾಗಿತ್ತು. ಅಲ್ಲಿಂದ ಪೋಲೆಂಡ್ ಮೂಲಕ ದೆಹಲಿ ತಲುಪಿದ್ದೆವು. ಅದಕ್ಕೆಲ್ಲ ಮೋದಿ ಜೀ ಸರ್ಕಾರ ತುಂಬಾ ಸಹಾಯ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್