Tag: Ukraine

  • ಮೋದಿ ನಿಜವಾದ ದೇಶಭಕ್ತ- `Make In India’ ಪರಿಕಲ್ಪನೆ ಹೊಗಳಿದ ರಷ್ಯಾ

    ಮೋದಿ ನಿಜವಾದ ದೇಶಭಕ್ತ- `Make In India’ ಪರಿಕಲ್ಪನೆ ಹೊಗಳಿದ ರಷ್ಯಾ

    ಮಾಸ್ಕೋ: ಮೋದಿ (Narendra Modi) ನಿಜವಾದ ದೇಶಭಕ್ತ ಎಂದಿರುವ ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) `ಮೇಕ್ ಇನ್ ಇಂಡಿಯಾ’ (Make In India) ಪರಿಕಲ್ಪನೆಯನ್ನು ಶ್ಲಾಘಿಸಿದ್ದಾರೆ.

    ಮಾಸ್ಕೋ ಮೂಲದ ಚಿಂತಕರ ಚಾವಡಿಯ ವಾಲ್ಡೈ ಚರ್ಚಾ ಕ್ಲಬ್‌ನ ವಾರ್ಷಿಕ ಭಾಷಣದಲ್ಲಿ ಮಾತನಾಡಿದ ಪುಟಿನ್, ಮೋದಿ ನಿಜವಾದ ದೇಶಭಕ್ತ. ತಮ್ಮ ನಾಯಕತ್ವದಲ್ಲಿ ದೇಶಕ್ಕೆ ಬಹಳಷ್ಟು ಕೆಲಸ ಮಾಡಿದ್ದಾರೆ. ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯು ಆರ್ಥಿಕ ಮತ್ತು ನೈತಿಕವಾಗಿ ಮುಖ್ಯವಾಗಿದೆ. ಅಲ್ಲದೇ ಭಾರತದ ಬೆಳವಣಿಗೆಯು ಬ್ರಿಟಿಷ್ ವಸಾಹತುಗಳ ಅಭಿವೃದ್ಧಿಯ ಫಲಿತಾಂಶವನ್ನು ನೀಡುತ್ತದೆ ಎಂದರಲ್ಲದೇ ಭಾರತ (India) ಮತ್ತು ರಷ್ಯಾ (Russia) ನಡುವಿನ ಸಂಬಂಧವನ್ನು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಡೀಲ್ ಮುಗಿಯುವ ಮುನ್ನವೇ ಟ್ವಿಟ್ಟರ್ ಚೀಫ್ ಎಂದು ಘೋಷಿಸಿಕೊಂಡ ಮಸ್ಕ್

    ಭಾರತದ ಕೃಷಿಗೆ (Agriculture) ಬಹಳ ಮುಖ್ಯವಾದ ರಸಗೊಬ್ಬರ ಪೂರೈಕೆ ಹೆಚ್ಚಿಸುವಂತೆ ಪ್ರಧಾನಿ ಮೋದಿ ಕೇಳಿಕೊಂಡಿದ್ದಾರೆ. ನಾವೂ 7.6 ರಷ್ಟು ಪ್ರಮಾಣವನ್ನು ಹೆಚ್ಚಿಸಿದ್ದೇವೆ. ಇದರಿಂದ ಕೃಷಿ ಉತ್ಪನ್ನಗಳ ವ್ಯಾಪಾರವು ದ್ವಿಗುಣಗೊಂಡಿದೆ. ಇದು ಭಾರತ ಮತ್ತು ರಷ್ಯಾ ನಡುವಿನ ಹಲವು ದಶಕಗಳ ನಿಕಟ ಮಿತ್ರ ಸಂಬಂಧದಿಂದ ಆಧಾರವಾಗಿದೆ. ನಾವು ಎಂದಿಗೂ ಯಾವುದೇ ಕಷ್ಟಕರ ಸಮಸ್ಯೆಗಳನ್ನು ಹೊಂದಿರಲಿಲ್ಲ. ಬದಲಾಗಿ ಪರಸ್ಪರ ಬೆಂಬಲಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಭೀಕರ ರಸ್ತೆ ಅಪಘಾತ – ಮೂವರು ಭಾರತೀಯರು ಸೇರಿದಂತೆ 20 ಮಂದಿ ಸಾವು

    ರಷ್ಯಾ ಕಳೆದ ಫೆಬ್ರವರಿ 24ರಂದು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿತು. ತನ್ನ ಪ್ರಾಬಲ್ಯ ಸಾಧಿಸುವುದಕ್ಕೆ ಮುಂದಾಯಿತು. ಆದರೆ ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳು ಅಸ್ತಿತ್ವಕ್ಕಾಗಿ ಅಪಾಯಕಾರಿ ಹಾದಿ ಹಿಡಿಯುತ್ತಿವೆ. ಇದು ಮುಂದೆ ರಕ್ತಸಿಕ್ತಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನವೆಂಬರ್ 8ಕ್ಕೆ ಜೈಶಂಕರ್ ರಷ್ಯಾ ಭೇಟಿ

    ನವದೆಹಲಿ: ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ (Jaishankar) ಅವರು ನವೆಂಬರ್ 8 ರಂದು ರಷ್ಯಾ (Russia) ಪ್ರವಾಸವನ್ನು ಕೈಗೊಳ್ಳಲಿದ್ದು, ತಮ್ಮ ಸಹವರ್ತಿ ಸರ್ಗೆ ಲಾವ್ರೊವ್ (Sergey Lavrov) ಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿಯಲ್ಲಿ ದ್ವಿಪಕ್ಷೀಯ ಸಂಬಂಧ ಹಾಗೂ ಅಂತಾರಾಷ್ಟ್ರೀಯ ಬೆಳವಣಿಗೆಗಳ ಕುರಿತು ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

    ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಉಕ್ರೇನ್ (Ukraine) ತಮ್ಮ ವಿರುದ್ಧ ದಾಳಿ ನಡೆಸಲು ಡರ್ಟಿ ಬಾಂಬ್ (Dirty Bomb) ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಆಧಾರರಹಿತವಾಗಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಬುಧವಾರ ರಷ್ಯಾದಲ್ಲಿ ಪರಮಾಣು ಪಡೆಗಳು ತಾಲೀಮು ನಡೆಸಿರುವುದಾಗಿ ವರದಿಯಾಗಿದೆ. ಇದೀಗ ಜೈಶಂಕರ್ ಅವರ ಮಾಸ್ಕೋ ಭೇಟಿಯ ನಿರ್ಧಾರವನ್ನು ಈ ಎಲ್ಲಾ ಬೆಳವಣಿಗೆಳ ಬೆನ್ನಲ್ಲೇ ಮಾಡಲಾಗಿದೆ. ಇದನ್ನೂ ಓದಿ: ಯೋಗಿ, ಮೋದಿ ವಿರುದ್ಧ ದ್ವೇಷದ ಭಾಷಣ – ಅಜಂ ಖಾನ್‍ಗೆ 3 ವರ್ಷ ಜೈಲು

    ರಷ್ಯಾ ಉಕ್ರೇನ್‌ನ ಯುದ್ಧ ಇನ್ನಷ್ಟು ತೀವ್ರಗೊಳ್ಳುವ ಭೀತಿಯ ನಡುವೆ ಬುಧವಾರ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಷ್ಯಾದ ಸಹವರ್ತಿ ಸರ್ಗೆಯ್ ಶೋಯಿಗು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಯುದ್ಧದಲ್ಲಿ ಯಾವುದೇ ಕಡೆಯಿಂದ ಅಣ್ವಸ್ತ್ರಗಳನ್ನು (Nuclear Weapons) ಬಳಸಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಿಒಕೆ ಮರಳಿ ಪಡೆದಾಗಲೇ ನಮ್ಮ ಸಂಕಲ್ಪ ಪೂರ್ಣಗೊಳ್ಳುತ್ತದೆ: ರಾಜನಾಥ್ ಸಿಂಗ್

    ಪರಮಾಣು ಅಥವಾ ರೇಡಿಯೋಲಾಜಿಕಲ್ ಶಸ್ತ್ರಾಸ್ತ್ರಗಳ ಬಳಕೆ ಮಾನವೀಯತೆಯ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಹೀಗಾಗಿ ಯಾರೊಬ್ಬರೂ ಅಣ್ವಸ್ತ್ರವನ್ನು ಆಶ್ರಯಿಸಬಾರದು ಎಂದು ರಾಜನಾಥ್ ಸಿಂಗ್ ಶೋಯಿಗು ಅವರಿಗೆ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಣ್ವಸ್ತ್ರವನ್ನು ಯಾರು ಕೂಡಾ ಆಶ್ರಯಿಸಬಾರದು: ರಷ್ಯಾಗೆ ರಾಜನಾಥ್ ಸಿಂಗ್ ಸಲಹೆ

    ಅಣ್ವಸ್ತ್ರವನ್ನು ಯಾರು ಕೂಡಾ ಆಶ್ರಯಿಸಬಾರದು: ರಷ್ಯಾಗೆ ರಾಜನಾಥ್ ಸಿಂಗ್ ಸಲಹೆ

    ನವದೆಹಲಿ: ಉಕ್ರೇನ್‌ನೊಂದಿಗಿನ (Ukraine) ಸಂಘರ್ಷವನ್ನು ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಬಗೆಹರಿಸಬೇಕು. ಆದರೆ ಅಣ್ವಸ್ತ್ರವನ್ನು (Nuclear Weapons) ಯಾರು ಕೂಡಾ ಆಶ್ರಯಿಸಬಾರದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ರಷ್ಯಾದ (Russia) ಸಹವರ್ತಿ ಸರ್ಗೆಯ್ ಶೋಯಿಗು (Sergei Shoigu) ಅವರಿಗೆ ಸಲಹೆ ನೀಡಿದ್ದಾರೆ.

    ಬುಧವಾರ ದೂರವಾಣಿ ಮೂಲಕ ಉಭಯ ರಾಷ್ಟ್ರಗಳ ರಕ್ಷಣಾ ಸಚಿವರು ಮಾತುಕತೆ ನಡೆಸಿದ್ದಾರೆ. ಈ ವೇಳೆ ಶೋಯಿಗು ಅವರು ಉಕ್ರೇನ್‌ನಲ್ಲಿ ನಡೆಸುತ್ತಿರುವ ತಮ್ಮ ಕಾರ್ಯಾಚರಣೆಯ ಬಗ್ಗೆ ಸಿಂಗ್‌ಗೆ ವಿವರಿಸಿದ್ದಾರೆ. ಈ ವೇಳೆ ರಾಜನಾಥ್ ಸಿಂಗ್ ಯುದ್ಧವನ್ನು ಮಾತುಕತೆ ಮೂಲಕ ಬಗೆಹರಿಸುವಂತೆ ಸಲಹೆ ನೀಡಿರುವುದಾಗಿ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

    ಮಾತುಕತೆಯ ವೇಳೆ ರಾಜನಾಥ್ ಸಿಂಗ್ ಅಣ್ವಸ್ತ್ರ ಬಳಕೆಯಿಂದ ಮುಂದಾಗಬಹುದಾದಂತಹ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಘರ್ಷಣೆಯ ಪರಿಹಾರಕ್ಕೆ ಮಾತುಕತೆ ಹಾಗೂ ರಾಜತಾಂತ್ರಿಕತೆಯ ಹಾದಿಯನ್ನು ಅನುಸರಿಸುವ ಅಗತ್ಯತೆಯನ್ನು ಸಿಂಗ್ ಪುನರುಚ್ಚರಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

    ಪರಮಾಣು ಅಥವಾ ರೇಡಿಯೊಲಾಜಿಕಲ್ ಶಸ್ತ್ರಾಸ್ತ್ರಗಳ ಬಳಕೆ ಮಾನವೀಯತೆಯ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಹೀಗಾಗಿ ಪರಮಾಣು ಆಯ್ಕೆಯನ್ನು ಯಾವೊಬ್ಬ ದೇಶವೂ ಆಶ್ರಯಿಸಬಾರದು ಎಂದು ರಾಜನಾಥ್ ಸಿಂಗ್ ಸೂಚಿಸಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ಅಂಪೈರಿಂಗ್ ಮಾಡಿದ ಫುಟ್‍ಬಾಲ್ ದಿಗ್ಗಜ ಮೆಸ್ಸಿ! – ಫೋಟೋ ವೈರಲ್

    ತೀವ್ರ ಸ್ಥಿತಿಗೆ ಯುದ್ಧ:
    ಕಳೆದ 2 ವಾರಗಳ ಹಿಂದೆ ಕ್ರೈಮಿಯಾದಲ್ಲಿ ಸಂಭವಿಸಿದ ಭಾರೀ ಸ್ಫೋಟಕ್ಕೆ ಪ್ರತಿಕ್ರಿಯೆಯಾಗಿ ರಷ್ಯಾ ಉಕ್ರೇನ್‌ನ ವಿವಿಧ ನಗರಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಈ ಪ್ರತೀಕಾರದ ದಾಳಿ ಯುದ್ಧದ ತೀವ್ರತೆಯನ್ನು ಹೆಚ್ಚಿಸಿದೆ.

    ಯುದ್ಧ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ಪ್ರಜೆಗಳು ಹಾಗೂ ವಿದ್ಯಾರ್ಥಿಗಳನ್ನು ತಕ್ಷಣವೇ ಉಕ್ರೇನ್ ತೊರೆಯುವಂತೆ ಕೇಳಿಕೊಂಡಿದೆ. ಇದನ್ನೂ ಓದಿ: ಎಂಇಎಸ್‍ನಿಂದ ಮತ್ತೆ ಗಡಿ ಖ್ಯಾತೆ – ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಣೆಗೆ ಸಿದ್ಧತೆ

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್ ಬಿಟ್ಟು ಬನ್ನಿ – ಭಾರತೀಯರಿಗೆ 5 ಬಾರ್ಡರ್ ಕ್ರಾಸಿಂಗ್ ಗುರುತಿಸಿದ ರಾಯಭಾರ ಕಚೇರಿ

    ಉಕ್ರೇನ್ ಬಿಟ್ಟು ಬನ್ನಿ – ಭಾರತೀಯರಿಗೆ 5 ಬಾರ್ಡರ್ ಕ್ರಾಸಿಂಗ್ ಗುರುತಿಸಿದ ರಾಯಭಾರ ಕಚೇರಿ

    ಕೀವ್: ರಷ್ಯಾ-ಉಕ್ರೇನ್ (Russia-Ukraine) ನಡುವೆ ಮತ್ತೆ ಯುದ್ಧದ (War) ಭೀತಿ ಆರಂಭವಾಗಿದ್ದು, ಉಕ್ರೇನ್‍ನಲ್ಲಿರುವ ಭಾರತೀಯರು (Indians) ಕೂಡಲೇ ಉಕ್ರೇನ್ ಬಿಟ್ಟು ಬನ್ನಿ ಎಂದು ಭಾರತೀಯರಿಗಾಗಿ 5 ಬಾರ್ಡರ್ ಕ್ರಾಸಿಂಗ್‍ನ್ನು (Border-Crossing) ಭಾರತದ ರಾಯಭಾರ ಕಚೇರಿ (Indian Embassy) ಗುರುತಿಸಿದೆ.

    ರಷ್ಯಾ-ಉಕ್ರೇನ್ ಮೇಲೆ ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸಿದ್ದು, ಇದೀಗ ಭಾರತ ಭಾರೀ ಕಳವಳ ವ್ಯಕ್ತಪಡಿಸಿದೆ. ಉಕ್ರೇನ್‍ನಲ್ಲಿರುವ ತನ್ನ ನಾಗರಿಕರಿಗೆ ಭಾರತ, ತುರ್ತಾಗಿ ಉಕ್ರೇನ್ ಅನ್ನು ತೊರೆಯುವಂತೆ ತಿಳಿಸಿದೆ. ಪ್ರಸ್ತುತ ಉಕ್ರೇನ್‍ನಲ್ಲಿರುವ ವಿದ್ಯಾರ್ಥಿಗಳು (Students) ಸೇರಿದಂತೆ ಭಾರತೀಯ ನಾಗರಿಕರು ಕೂಡಲೇ ಉಕ್ರೇನ್ ಬಿಟ್ಟು ಬರುವಂತೆ ಭಾರತೀಯರಿಗೆ 5 ಬಾರ್ಡರ್ ಕ್ರಾಸಿಂಗ್ ಗುರುತಿಸಿ ಸುರಕ್ಷಿತವಾಗಿ ಭಾರತಕ್ಕೆ ಮರಳಲು ಸಹಾಯ ಮಾಡುತ್ತಿದೆ. ಜೊತೆಗೆ ಸಹಾಯವಾಣಿ ಕೂಡ ತೆರೆದಿದೆ. ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು

    ಯಾವೆಲ್ಲ ಬಾರ್ಡರ್?
    ಉಕ್ರೇನ್-ಹಂಗೇರಿ ಗಡಿ:
    ಉಕ್ರೇನ್-ಹಂಗೇರಿ ಗಡಿ ಪ್ರದೇಶದ ಚೆಕ್‍ಪೋಸ್ಟ್‌ಗಳು ಜಕಾರ್ಪತಿಯಾ ಪ್ರದೇಶದಲ್ಲಿವೆ. ಇಲ್ಲಿಂದ ರೈಲಿನಲ್ಲಿ ಚಾಪ್ ಸಿಟಿಗೆ ಪ್ರಯಾಣಿಸುವುದು ಅನುಕೂಲಕರ ಆಯ್ಕೆಯಾಗಿದೆ. ಗಡಿ ದಾಟಲು, ಭಾರತೀಯ ಪ್ರಜೆಗಳು ಮಾನ್ಯವಾದ ಪಾಸ್‌ಪೋರ್ಟ್‌, ಮಾನ್ಯ ಉಕ್ರೇನಿಯನ್ ನಿವಾಸಿ ಪರವಾನಿಗೆ (Posvidka). ವಿದ್ಯಾರ್ಥಿ ಕಾರ್ಡ್ ಅಥವಾ ವಿದ್ಯಾರ್ಥಿ ಪ್ರಮಾಣಪತ್ರ, ವಿಮಾನ ಟಿಕೆಟ್ ಇದ್ದರೆ ಈ ಗಡಿ ಮೂಲಕ ದಾಖಲೆಗಳೊಂದಿಗೆ ಬರಬಹುದಾಗಿದೆ. ಇದನ್ನೂ ಓದಿ: ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ಉಕ್ರೇನ್-ಸ್ಲೋವಾಕಿಯಾ ಗಡಿ:
    ಉಕ್ರೇನ್-ಸ್ಲೋವಾಕಿಯಾ ಗಡಿಯಲ್ಲಿ ಚೆಕ್‍ಪಾಯಿಂಟ್‍ಗಳು ಜಕಾರ್ಪತಿಯಾ ಪ್ರದೇಶದಲ್ಲಿದೆ. ಅಲ್ಲಿ ಈಗಾಗಲೇ ಮಾನ್ಯವಾದ ಷೆಂಗೆನ್/ಸ್ಲೋವಾಕ್ ವೀಸಾವನ್ನು ಹೊಂದಿಲ್ಲದಿದ್ದರೆ, ಭಾರತೀಯ ಪ್ರಜೆಗಳು ಗಡಿ ಚೆಕ್ ಪೋಸ್ಟ್‌ನಲ್ಲಿ ವೀಸಾವನ್ನು ಪಡೆಯಬೇಕಾಗುತ್ತದೆ. ಇಲ್ಲಿ ವೀಸಾ ಪಡೆಯಲು ಮತ್ತು ಗಡಿ ದಾಟಲು, ಭಾರತೀಯ ಪ್ರಜೆಗಳು ಮಾನ್ಯವಾದ ಪಾಸ್‌ಪೋರ್ಟ್‌. ಮಾನ್ಯ ಉಕ್ರೇನಿಯನ್ ನಿವಾಸಿ ಪರವಾನಿಗೆ . ವಿದ್ಯಾರ್ಥಿ ಕಾರ್ಡ್ ಅಥವಾ ವಿದ್ಯಾರ್ಥಿ ಪ್ರಮಾಣಪತ್ರ, ವಿಮಾನ ಟಿಕೆಟ್ ದಾಖಲೆ ಇದ್ದರೆ ಸಾಕು.

    ಉಕ್ರೇನ್-ಮಾಲ್ಡೊವಾ ಗಡಿ:
    ಉಕ್ರೇನ್-ಮಾಲ್ಡೊವಾ ಗಡಿ ಮೂಲಕ ಬಂದರೆ ಚೆಕ್‍ಪಾಯಿಂಟ್‍ಗಳು ಚೆರ್ನಿವೆಟ್ಸ್ಕಾ, ವಿನ್ನಿಟ್ಸ್ಕಾ ಮತ್ತು ಒಡೆಸ್ಕಾ ಪ್ರದೇಶದಲ್ಲಿದೆ. ಅಲ್ಲಿಗೆ ಬಂದು ಈಗಾಗಲೇ ಮಾನ್ಯವಾದ ಮೊಲ್ಡೊವನ್ ವೀಸಾವನ್ನು ಹೊಂದಿಲ್ಲದಿದ್ದರೆ, ಭಾರತೀಯ ಪ್ರಜೆಗಳು ಕೈವ್‍ನಲ್ಲಿರುವ ಮೊಲ್ಡೊವಾ ರಾಯಭಾರ ಕಚೇರಿಯಲ್ಲಿ ಮುಂಚಿತವಾಗಿ ಮೊಲ್ಡೊವನ್ ಟ್ರಾನ್ಸಿಟ್ ವೀಸಾವನ್ನು ಪಡೆಯಬೇಕಾಗುತ್ತದೆ. ಗಡಿ ದಾಟಲು ಭಾರತೀಯ ಪ್ರಜೆಗಳು ಭಾರತೀಯ ಪ್ರಜೆಗಳು ಮಾನ್ಯವಾದ ಪಾಸ್‌ಪೋರ್ಟ್‌. ಮಾನ್ಯ ಉಕ್ರೇನಿಯನ್ ನಿವಾಸಿ ಪರವಾನಿಗೆ. ವಿದ್ಯಾರ್ಥಿ ಕಾರ್ಡ್ ಅಥವಾ ವಿದ್ಯಾರ್ಥಿ ಪ್ರಮಾಣಪತ್ರ, ಏರ್ ಟಿಕೆಟ್ ದಾಖಲೆ ಹೊಂದಿದ್ದರೆ ಗಡಿ ದಾಟ ಬಹುದಾಗಿದೆ. ಇದನ್ನೂ ಓದಿ:
    ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಚೀನಾದ ಅಧ್ಯಕ್ಷ ಜಿನ್‌ಪಿಂಗ್ 3ನೇ ಅವಧಿಗೆ ಮರು ಆಯ್ಕೆ

    ಉಕ್ರೇನ್-ಪೋಲೆಂಡ್ ಗಡಿ:
    ಉಕ್ರೇನ್-ಪೋಲೆಂಡ್ ಗಡಿಯಲ್ಲಿ ಚೆಕ್‍ಪಾಯಿಂಟ್‍ಗಳು ಎಲ್ವಿವ್ಸ್ಕಾ, ವೊಲಿನ್ಸ್ಕಾ ಪ್ರದೇಶಗಳಲ್ಲಿದೆ. ಇಲ್ಲಿಗೆ ಬರುವ ಭಾರತೀಯರು ಮಾನ್ಯವಾದ ಷೆಂಗೆನ್, ಪೋಲಿಷ್ ವೀಸಾವನ್ನು ಹೊಂದಿಲ್ಲದಿದ್ದರೆ, ಭಾರತೀಯ ಪ್ರಜೆಗಳು ಪೋಲೆಂಡ್‍ನ ಕಾನ್ಸುಲೇಟ್ ಜನರಲ್‍ನಲ್ಲಿ ಮುಂಚಿತವಾಗಿ ಷೆಂಗೆನ್, ಪೋಲಿಷ್ ವೀಸಾವನ್ನು ಪಡೆಯಬೇಕಾಗುತ್ತದೆ. ಭಾರತೀಯ ಪ್ರಜೆಗಳು ಮಾನ್ಯವಾದ ಪಾಸ್‌ಪೋರ್ಟ್‌. ಮಾನ್ಯ ಉಕ್ರೇನಿಯನ್ ನಿವಾಸಿ ಪರವಾನಿಗೆ. ವಿದ್ಯಾರ್ಥಿ ಕಾರ್ಡ್ ಅಥವಾ ವಿದ್ಯಾರ್ಥಿ ಪ್ರಮಾಣಪತ್ರ, ವಿಮಾನ ಟಿಕೆಟ್ ದಾಖಲೆ ಇದ್ದರೆ ಇಲ್ಲಿ ಗಡಿ ದಾಟಲು ಅವಕಾಶವಿದೆ.

    ಉಕ್ರೇನ್-ರೊಮೇನಿಯಾ ಗಡಿ:
    ಭಾರತೀಯ ರಾಯಭಾರ ಕಚೇರಿ ಹೊರಡಿಸಿದ ಸಲಹೆಯ ಪ್ರಕಾರ, ಚೆಕ್‍ಪೋಸ್ಟ್‌ಗಳು ಜಕಾರ್ಪತಿಯಾ ಮತ್ತು ಚೆರ್ನಿವೆಟ್ಸ್ಕಾನಲ್ಲಿವೆ. ಇಲ್ಲಿಗೆ ಬಂದು ಮಾನ್ಯವಾದ ರೊಮೇನಿಯನ್ ವೀಸಾವನ್ನು ಹೊಂದಿಲ್ಲದಿದ್ದರೆ, ಭಾರತೀಯ ಪ್ರಜೆಗಳು ಕಾನ್ಸುಲೇಟ್ ಜನರಲ್‍ನಲ್ಲಿ ಮುಂಚಿತವಾಗಿ ರೊಮೇನಿಯನ್ ವೀಸಾವನ್ನು ಪಡೆಯಬೇಕು. ಈ ವೀಸಾ ಪಡೆಯಲು ಭಾರತೀಯ ಪ್ರಜೆಗಳು ಮಾನ್ಯವಾದ ಪಾಸ್‌ಪೋರ್ಟ್‌. ಮಾನ್ಯ ಉಕ್ರೇನಿಯನ್ ನಿವಾಸಿ ಪರವಾನಿಗೆ. ವಿದ್ಯಾರ್ಥಿ ಕಾರ್ಡ್ ಅಥವಾ ವಿದ್ಯಾರ್ಥಿ ಪ್ರಮಾಣಪತ್ರ, ವಿಮಾನ ಟಿಕೆಟ್ ದಾಖಲೆ ಇದ್ದರೆ ಗಡಿ ದಾಟಲು ಅವಕಾಶ ನೀಡಲಾಗಿದೆ.

    ಸಹಾಯವಾಣಿ:
    ಭಾರತದ ರಾಯಭಾರ ಕಚೇರಿ, ಕೈವ್: +380933559958, +380635917881, +380678745945
    ಹಂಗೇರಿಯಲ್ಲಿರುವ ಭಾರತದ ರಾಯಭಾರ ಕಚೇರಿ: +361325-7742/43, +36305154192
    ಸ್ಲೋವಾಕಿಯಾದಲ್ಲಿ ಭಾರತದ ರಾಯಭಾರ ಕಚೇರಿ: +421252962916, +421908025212, +421951697560
    ರೊಮೇನಿಯಾದಲ್ಲಿ ಭಾರತದ ರಾಯಭಾರ ಕಚೇರಿ: +40372147432, +40731347727
    ಪೋಲೆಂಡ್‍ನಲ್ಲಿರುವ ಭಾರತದ ರಾಯಭಾರ ಕಚೇರಿ: +48225400000, +48606700105

    Live Tv
    [brid partner=56869869 player=32851 video=960834 autoplay=true]

  • ತಕ್ಷಣ ಉಕ್ರೇನ್‌ನಿಂದ ಹೊರಟುಬಿಡಿ – ವಿದ್ಯಾರ್ಥಿಗಳು, ನಾಗರಿಕರಿಗೆ ಭಾರತ ತುರ್ತು ಸಲಹೆ

    ತಕ್ಷಣ ಉಕ್ರೇನ್‌ನಿಂದ ಹೊರಟುಬಿಡಿ – ವಿದ್ಯಾರ್ಥಿಗಳು, ನಾಗರಿಕರಿಗೆ ಭಾರತ ತುರ್ತು ಸಲಹೆ

    ನವದೆಹಲಿ: ರಷ್ಯಾ ಉಕ್ರೇನ್ ಮೇಲೆ ಯುದ್ಧವನ್ನು (Russia Ukraine War) ಇನ್ನಷ್ಟು ತೀವ್ರಗೊಳಿಸಿದ್ದು, ಇದೀಗ ಭಾರತ (India) ಭಾರೀ ಕಳವಳ ವ್ಯಕ್ತಪಡಿಸಿದೆ. ಉಕ್ರೇನ್‌ನಲ್ಲಿರುವ ತನ್ನ ನಾಗರಿಕರಿಗೆ ಭಾರತ, ತುರ್ತಾಗಿ ಉಕ್ರೇನ್ ಅನ್ನು ತೊರೆಯುವಂತೆ ಬುಧವಾರ ಕೇಳಿಕೊಂಡಿದೆ.

    ಉಕ್ರೇನ್‌ನಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಉಕ್ರೇನ್‌ಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಭಾರತ ತನ್ನ ಎಲ್ಲಾ ನಾಗರಿಕರಿಗೆ ಬುಧವಾರ ಸಲಹೆ ನೀಡಿದೆ. ಪ್ರಸ್ತುತ ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರು ಲಭ್ಯವಿರುವ ವಿಧಾನಗಳ ಮೂಲಕ ಅಲ್ಲಿಂದ ಆದಷ್ಟು ಬೇಗ ಹೊರಡುವಂತೆ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ (Embassy) ತನ್ನ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.

    ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬುಧವಾರ ಉಕ್ರೇನ್‌ನ 4 ಪ್ರದೇಶಗಳಲ್ಲಿ ಸಮರ ಕಾನೂನನ್ನು ಜಾರಿಗೊಳಿಸಿದ್ದಾರೆ. ಇದರ ಹಿನ್ನೆಲೆ ಯುದ್ಧ ತೀವ್ರಗೊಳ್ಳುವ ಭೀತಿ ಉಂಟಾಗಿದ್ದು, ಭಾರತ ತನ್ನ ನಾಗರಿಕರಿಗೆ ಉಕ್ರೇನ್ ತೊರೆಯುವಂತೆ ಸಲಹೆ ನೀಡಿದೆ. ಇದನ್ನೂ ಓದಿ: ದೀಪಾವಳಿಯಲ್ಲಿ ನಿಷೇಧಿತ ಪಟಾಕಿ ಸಿಡಿಸಿದ್ರೆ 6 ತಿಂಗಳು ಜೈಲು ಶಿಕ್ಷೆ

    ಇದೇ ವೇಳೆ ಆಕ್ರಮಿತ ನಗರ ಖರ್ಸನ್‌ನ ಕೆಲವು ನಿವಾಸಿಗಳು ದೋಣಿಗಳ ಮೂಲಕ ಸ್ಥಳವನ್ನು ತೊರೆದಿದ್ದಾರೆ. ಈ ಪ್ರದೇಶ ಯುದ್ಧ ವಲಯವಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆ ನಾಗರಿಕರನ್ನು ಅಲ್ಲಿಂದ ತೆರವುಗೊಳಿಸಲಾಗುತ್ತಿದೆ. ಖರ್ಸನ್‌ನಿಂದ ಜನರು ಪಲಾಯನವಾಗುತ್ತಿರುವ ಚಿತ್ರಗಳನ್ನು ರಷ್ಯಾ ತನ್ನ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದೆ. ಇದನ್ನೂ ಓದಿ: ಕಾಶ್ಮೀರ ಪ್ರತ್ಯೇಕ ದೇಶ – ಶಾಲಾ ಪ್ರಶ್ನೆ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದಕ್ಕೆ ವಿವಾದ

    Live Tv
    [brid partner=56869869 player=32851 video=960834 autoplay=true]

  • ರಷ್ಯಾದಿಂದ ಮತ್ತೆ ಡೆಡ್ಲಿ ಡ್ರೋನ್ ದಾಳಿ – ಉಕ್ರೇನ್‌ನಲ್ಲಿ ಅಲ್ಲೋಲ ಕಲ್ಲೋಲ

    ರಷ್ಯಾದಿಂದ ಮತ್ತೆ ಡೆಡ್ಲಿ ಡ್ರೋನ್ ದಾಳಿ – ಉಕ್ರೇನ್‌ನಲ್ಲಿ ಅಲ್ಲೋಲ ಕಲ್ಲೋಲ

    ಕೀವ್/ಮಾಸ್ಕೋ: ಉಕ್ರೇನ್ (Ukraine) ವಿರುದ್ಧ ಕ್ಷಿಪಣಿ ದಾಳಿ ಅಂತ್ಯಗೊಳಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹೇಳಿದ ನಂತರ ಈಗ ಡ್ರೋನ್ (Drone) ದಾಳಿ ನಡೆಯುತ್ತಿದೆ.

    ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಅಂತ್ಯಗೊಳಿಸಿದ ರಷ್ಯಾ  (Russia) ಇದೀಗ ಕಾಮಿಕೇಜ್ ಡ್ರೋನ್ ದಾಳಿಯನ್ನು ಮುಂದುವರಿಸಿದೆ.

    ಮೊಪೆಡ್ ಸೌಂಡ್ ಕೇಳಿಬಂದ್ರೇ ಉಕ್ರೇನ್ ಜನ ಬೆಚ್ಚಿ ಬೀಳ್ತಿದ್ದಾರೆ. ಭಾರೀ ಶಸ್ತ್ರಾಸ್ತ್ರ ಬಳಸಿ ಸಿಕ್ಕಾಪಟ್ಟೆ ನಷ್ಟ ಹೋಗಿರುವ ರಷ್ಯಾ ಇದೀಗ ಅಗ್ಗದ ಬೆಲೆ ಅಸ್ತ್ರಗಳನ್ನು ಉಕ್ರೇನ್ ವಿರುದ್ಧ ಬಳಸತೊಡಗಿದೆ. ಇರಾನ್‌ನಿಂದ (Iranian Drones) ಆಮದು ಮಾಡಿಕೊಂಡ ಶಾಹಿದ್ ಸರಣಿಯ ಡ್ರೋನ್‌ಗಳನ್ನು ಬಳಸಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದೆ. ಇದನ್ನೂ ಓದಿ: ನ.11ರಂದು ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ – ಆದಿಚುಂಚನಗಿರಿ ಶ್ರೀಗಳ ಜತೆ ಸಚಿವರ ಸಮಾಲೋಚನೆ

    https://twitter.com/Euan_MacDonald/status/1582056362200031236

    ಕೀವ್‌ನಲ್ಲಿಂದು (Kyiv) ಕೆಲವೇ ನಿಮಿಷಗಳ ಅಂತರದಲ್ಲಿ 3 ಡ್ರೋನ್ ದಾಳಿ ನಡೆದಿವೆ. ಈ ಡ್ರೋನ್‌ಗಳಲ್ಲಿ ಮೊಪೆಡ್‌ಗಳಲ್ಲಿ ಬಳಸುವ 50 ಹಾರ್ಸ್ ಪವರ್‌ನ 2 ಸ್ಟ್ರೋಕ್‌ ಎಂಜಿನ್‌ಗಳನ್ನು ಬಳಸಲಾಗುತ್ತದೆ. ಇವು 40 ಕೆಜಿ ಸ್ಫೋಟಕ ಹೊತ್ತು ಗಾಳಿಯಲ್ಲಿ ಎಗರುವಾಗ ಮೊಪೆಡ್ ಸೌಂಡ್ ಬರುತ್ತದೆ. ಇವುಗಳನ್ನು ಟ್ರಕ್ ಮೇಲ್ಭಾಗ ನಿಂತು ಹಾರಿಸಲಾಗುತ್ತದೆ. ಇದನ್ನೂ ಓದಿ: ದರೋಡೆಗೆ ಬಂದವನಿಗೆ ಕಟ್ಟಿಂಗ್ ಪ್ಲೆಯರ್ ತೋರಿಸಿ ಓಡಿಸಿದ ಲೇಡಿ ಬ್ಯಾಂಕ್ ಮ್ಯಾನೇಜರ್

    ಇತ್ತೀಚೆಗಷ್ಟೇ ಉಕ್ರೇನ್ ರಷ್ಯಾದ ಕ್ರಿಮಿಯಾ ಸೇತುವೆಯನ್ನು (Crimean Bridge) ಧ್ವಂಸಗೊಳಿಸಿದ ನಂತರ ಪ್ರತೀಕಾರವಾಗಿ ರಷ್ಯಾ ದಾಳಿ ನಡೆಸಿತು. ಸತತವಾಗಿ 75 ಕ್ಷಿಪಣಿಗಳು, 5 ಡೆಡ್ಲಿ ರಾಕೆಟ್‌ಗಳನ್ನು ಉಕ್ರೇನ್ ಮೇಲೆ ಹಾರಿಬಿಟ್ಟಿತ್ತು. ಇದಾದ ಒಂದು ವಾರದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ವಿರುದ್ಧ ಕ್ಷಿಪಣಿ ದಾಳಿ ಅಂತ್ಯಗೊಳಿಸುವುದಾಗಿ ಹೇಳಿದ್ದರು. ಇದೀಗ ಮತ್ತೆ ಡ್ರೋನ್ ದಾಳಿಯನ್ನು ಮುಂದುವರಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಅಂತ್ಯ – ಪುಟಿನ್ ಸ್ಪಷ್ಟನೆ

    ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಅಂತ್ಯ – ಪುಟಿನ್ ಸ್ಪಷ್ಟನೆ

    ಮಾಸ್ಕೋ: ಉಕ್ರೇನ್ (Ukraine) ವಿರುದ್ಧ ಇನ್ನುಮುಂದೆ ಸಾಮೂಹಿಕ ಕ್ಷಿಪಣಿ ದಾಳಿ (Missile Strikes) ನಡೆಸುವುದಿಲ್ಲ ಎಂದು ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin)  ಹೇಳಿದ್ದಾರೆ.

    ತನ್ನ ಕನಸಿನ ಕ್ರಿಮಿಯಾ ಸೇತುವೆಯನ್ನು (Missile Strikes) ಉಕ್ರೇನ್ ಉಡೀಸ್ ಮಾಡಿದ ಬಳಿಕ ಡೆಡ್ಲಿ ರಾಕೆಟ್‌ಗಳ ಮೂಲಕ ಸತತ ದಾಳಿ ನಡೆಸಿದ ರಷ್ಯಾ ಇದೀಗ ಕ್ಷಿಪಣಿ ದಾಳಿ ನಡೆಸುವುದಿಲ್ಲ. ಪಾಶ್ಚಿಮಾತ್ಯ ದೇಶವನ್ನು ನಾಶಗೊಳಿಸುವುದು ಕ್ರೆಮ್ಲಿನ್ (Kremlin) ಉದ್ದೇಶವಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಪುಟಿನ್ ಕನಸಿನ ಸೇತುವೆ ಧ್ವಂಸಗೊಳಿಸಿದ್ದಕ್ಕೆ ಕೆರಳಿದ ರಷ್ಯಾ – ಉಕ್ರೇನ್ ಮೇಲೆ ಮತ್ತಷ್ಟು ತೀವ್ರ ದಾಳಿ

    ರಷ್ಯಾದ ಮಾರಣಾಂತಿಕ ಕ್ಷಿಪಣಿ ದಾಳಿಯು ಉಕ್ರೇನ್‌ನ ಹಲವು ಮೂಲ ಸೌಕರ್ಯಗಳಿಗೆ ಹೊಡೆತ ನೀಡಿದೆ. ಅಲ್ಲದೇ ಅಮಾಯಕರ ಪ್ರಾಣ ಬಲಿ ತೆಗೆದುಕೊಂಡಿದೆ. ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆಯಿಂದಾಗಿ ಉಕ್ರೇನ್ ನಗರವು ಕತ್ತಲೆಯಲ್ಲಿ ಕಳೆಯುವಂತಾಗಿದೆ. ರಷ್ಯಾದ ಮಿಲಿಟರಿ ದಾಳಿಯನ್ನು ವಿಶ್ವದ ಅನೇಕ ನಾಯಕರು ಖಂಡಿಸಿದರು. ಇದರಿಂದ ರಷ್ಯಾ ತನ್ನ ಕ್ಷಿಪಣಿ (Missile) ದಾಳಿಯಿಂದ ಹಿಂದೆ ಸರಿದಿದೆ. ಇದನ್ನೂ ಓದಿ: ಲಂಕನ್ನರಿಗೆ ಲಗಾಮು ಹಾಕಿ 7ನೇ ಬಾರಿ ಏಷ್ಯಾಕಪ್ ಗೆದ್ದ ಭಾರತ

    ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿಕ್ರಿಯಿಸಿ, ಉಕ್ರೇನ್ ವಿರುದ್ಧ ವ್ಯಾಪಕ ದಾಳಿಯ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

    ಸೇತುವೆ ಉಡೀಸ್ ಮಾಡಿದ್ದ ಉಕ್ರೇನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಕನಸಿನ ಕ್ರಿಮಿಯಾ-ರಷ್ಯಾ ಸಂಪರ್ಕಿಸುವ ಸೇತುವೆಯನ್ನು (Missile Strikes) ಉಕ್ರೇನ್ ಉಡೀಸ್ ಮಾಡಿತ್ತು. ರಷ್ಯಾ ಆಕ್ರಮಿತ ಕ್ರಿಮಿಯಾ ಭಾಗದ ಮೂಲಕ ಉಕ್ರೇನ್‌ನ ಖೇರ್ಸನ್, ರ‍್ಝಿಯಾದಲ್ಲಿರುವ ಸೇನೆಗೆ ಇಂಧನ ಸರಬರಾಜು ರಷ್ಯಾದ ರೈಲನ್ನು ಉಕ್ರೇನ್ ಉಡಾಯಿಸಿತ್ತು. ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದರು.

    ಕಪ್ಪುಸಮುದ್ರ ಮತ್ತು ಅಜೋವ್ ಸಮುದ್ರವನ್ನು ಸಂಪರ್ಕಿಸುವ ಕ್ರೆಚ್ ಜಲಸಂಧಿಗೆ ಅಡ್ಡಲಾಗಿ ನಿರ್ಮಿಸಿರುವ 19 ಕಿ.ಮೀ. ಉದ್ದದ ಈ ಸೇತುವೆಯನ್ನು 2018ರಲ್ಲಿ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಇದು ಯೂರೋಪ್‌ನಲ್ಲಿಯೇ ಅತಿ ಉದ್ದದ ಸೇತುವೆಯಾಗಿದೆ.

    ಸೇತುವೆ ಧ್ವಂಸಗೊಳಿಸಿದ ಬಳಿಕ ಕೆರಳಿದ ರಷ್ಯಾ ಪ್ರತಿಯಾಗಿ 75 ಕ್ಷಿಪಣಿ ಹಾಗೂ 5 ಡೆಡ್ಲಿ ರಾಕೆಟ್‌ಗಳ ಮೂಲಕ ಉಕ್ರೇನ್ ಮೇಲೆ ದಾಳಿ ನಡೆಸಿತ್ತು. ಇರಾನಿ ಡ್ರೋನ್‌ಗಳ (Iranian Drones) ಮೂಲಕ ಅಟ್ಯಾಕ್ ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಪುಟಿನ್ ಕನಸಿನ ಸೇತುವೆ ಧ್ವಂಸಗೊಳಿಸಿದ್ದಕ್ಕೆ ಕೆರಳಿದ ರಷ್ಯಾ – ಉಕ್ರೇನ್ ಮೇಲೆ ಮತ್ತಷ್ಟು ತೀವ್ರ ದಾಳಿ

    ಪುಟಿನ್ ಕನಸಿನ ಸೇತುವೆ ಧ್ವಂಸಗೊಳಿಸಿದ್ದಕ್ಕೆ ಕೆರಳಿದ ರಷ್ಯಾ – ಉಕ್ರೇನ್ ಮೇಲೆ ಮತ್ತಷ್ಟು ತೀವ್ರ ದಾಳಿ

    ಕೈವ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin)  ಕನಸಿನ ಕ್ರಿಮಿಯಾ ಸಂಪರ್ಕಿಸುವ ಕ್ರಚ್ ಸೇತುವೆಯನ್ನು ಉಕ್ರೇನ್ (Ukraine) ಧ್ವಂಸಗೊಳಿಸಿದ ಬಳಿಕ ಆಕ್ರೋಶಗೊಂಡ ರಷ್ಯಾ (Russia), ಉಕ್ರೇನ್ ವಿರುದ್ಧ ಸಮರ ಸಾರಿದೆ.

    ಸೋಮವಾರದಿಂದ ಸತತವಾಗಿ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸಿದೆ. ಸೋಮವಾರ 75 ಮಿಸೆಲ್ (Cruise Missiles) ಹಾಗೂ 5 ಡೆಡ್ಲಿ ರಾಕೆಟ್‌ಗಳಿಂದ ಅಗ್ನಿಮಳೆಗರೆದಿದ್ದ ರಷ್ಯಾ ಇಂದೂ ತನ್ನ ದಾಳಿಯನ್ನೂ ಮುಂದುವರಿಸಿದೆ. ಇದನ್ನೂ ಓದಿ: ಸೇಡಿಗೆ ಸೇಡು – ಇರಾನ್‌ ಡ್ರೋನ್ ಬಳಸಿ ರಷ್ಯಾ, ಉಕ್ರೇನ್ ಮೇಲೆ ದಾಳಿ

    ಬೆಳ್ಳಂಬೆಳಗ್ಗೆ ಉಕ್ರೇನ್ ರಾಜಧಾನಿ ಕೀವ್ (Kyiv) ಮೇಲೆ ನಡೆಸಿದ ದಾಳಿಯಲ್ಲಿ 14 ಮಂದಿ ದುರ್ಮರಣಕ್ಕೀಡಾಗಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಆದರೆ ಉಕ್ರೇನ್ ತನ್ನ ಮೇಲೆ ರಷ್ಯಾ 84 ಕ್ರೂಸ್ ಮಿಸೆಲ್‌ಗಳಿಂದ (Cruise Missiles) ದಾಳಿ ನಡೆಸಿದೆ ಎಂದು ಹೇಳಿದೆ. ಜೂನ್ ತಿಂಗಳ ಅಂತ್ಯದ ಬಳಿಕ ನಡೆದ ಮೊದಲ ಭೀಕರ ದಾಳಿ ಇದಾಗಿದೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ ದಾಳಿ- ಸೇತುವೆ ಉಡೀಸ್ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ರಷ್ಯಾ

    ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಗಲ್ ಪ್ರಕಾರ, ಕೀವ್ ಮತ್ತು ಇತರ 8 ಪ್ರದೇಶಗಳಲ್ಲಿ 11 ಪ್ರಮುಖ ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ಇದರಿಂದ ವಿದ್ಯುತ್, ನೀರು ಸಂಪರ್ಕ ತಾತ್ಕಾಲಿಕವಾಗಿ ಕಡಿತಗೊಳ್ಳಲಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಪುಟಿನ್, ಮಿಸೆಲ್ ದಾಳಿಗಳು, ಉಕ್ರೇನ್‌ನ ಇಂಧನ ಮೂಲಸೌಕರ್ಯಗಳನ್ನು ಹೊಡೆದುರುಳಿಸಿವೆ. ಉಕ್ರೇನ್‌ನ ಮಿಲಿಟರಿ ಶಕ್ತಿ ಹಾಗೂ ವಾಹನ ಸೌಲಭ್ಯಗಳ ಮೇಲೆ ಹೆಚ್ಚಿನ ದಾಳಿ ನಡೆದಿದೆ ಎಂದಿದ್ದಾರೆ.

    ಸೇತುವೆ ಉಡೀಸ್ ಮಾಡಿದ್ದ ಉಕ್ರೇನ್:
    ಕಳೆದ ಮೂರು ದಿನಗಳ ಹಿಂದೆಯಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕನಸಿನ ಕ್ರಿಮಿಯಾ – ರಷ್ಯಾ ಸಂಪರ್ಕಿಸುವ ಕ್ರಚ್ ಸೇತುವೆಯನ್ನು (Crimean Bridge) ಉಕ್ರೇನ್ ಉಡೀಸ್ ಮಾಡಿತ್ತು. ರಷ್ಯಾ ಆಕ್ರಮಿತ ಕ್ರಿಮಿಯಾ ಭಾಗದ ಮೂಲಕ ಉಕ್ರೇನ್‌ನ ಖೇರ್ಸನ್, ರ‍್ಝಿಯಾದಲ್ಲಿರುವ ಸೇನೆಗೆ ಇಂಧನ ಸರಬರಾಜು ಮಾಡುವ ರಷ್ಯಾದ ರೈಲನ್ನು (Railway) ಉಕ್ರೇನ್ ಉಡಾಯಿಸಿತ್ತು. ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದರು.

    ಇದಕ್ಕೆ ಪ್ರತಿಕಾರವಾಗಿ ರಷ್ಯಾ ಭೀಕರ ದಾಳಿ ನಡೆಸುತ್ತಿದೆ. ನಿನ್ನೆ ಇರಾನಿನ `ಶಾಹೆಡ್-136 VAV ಡ್ರೋನ್‌ಗಳನ್ನು (ಮಾನವರಹಿತ ವೈಮಾನಿಕ ವಾಹನಗಳು) (Iranian Drones) ಬಳಸಿ ದಾಳಿ ನಡೆಸಿತ್ತು. 75 ಮಿಸೆಲ್‌ಗಳಿಂದ ದಾಳಿ ನಡೆಸಿ ಹಲವು ಕಟ್ಟಡಗಳನ್ನು ಧ್ವಂಸಗೊಳಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಿ- ಉಕ್ರೇನ್‌ನಲ್ಲಿನ ನಾಗರಿಕರಿಗೆ ಭಾರತ ಸಲಹೆ

    ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಿ- ಉಕ್ರೇನ್‌ನಲ್ಲಿನ ನಾಗರಿಕರಿಗೆ ಭಾರತ ಸಲಹೆ

    ನವದೆಹಲಿ: ಉಕ್ರೇನ್‌ನಲ್ಲಿ (Ukraine) ಹೆಚ್ಚುತ್ತಿರುವ ಘರ್ಷಣೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ (India) ಸೋಮವಾರ ಉಕ್ರೇನ್‌ಗೆ ತೆರಳುವ ಹಾಗೂ ಉಕ್ರೇನ್‌ನಲ್ಲಿ ಇರುವ ತನ್ನ ನಾಗರಿಕರಿಗೆ (Citizens) ಅನಿವಾರ್ಯವಲ್ಲದ ಎಲ್ಲಾ ರೀತಿಯ ಪ್ರಯಾಣವನ್ನು ತಪ್ಪಿಸುವಂತೆ ಸಲಹೆ ನೀಡಿದೆ.

    ಕೀವ್ (Kyiv) ಸೇರಿದಂತೆ ಉಕ್ರೇನ್‌ನ ಹಲವು ಪ್ರಮುಖ ನಗರಗಳಲ್ಲಿ ರಷ್ಯಾ (Russia) ಇಂದು ಭೀಕರವಾಗಿ ದಾಳಿ ನಡೆಸಿದೆ. ಇಂದು ಉಕ್ರೇನ್‌ನಾದ್ಯಂತ ನಡೆದ ದಾಳಿಗಳಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಹಿನ್ನೆಲೆ ಭಾರತ ತನ್ನ ನಾಗರಿಕರಿಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಕೇಳಿಕೊಂಡಿದೆ.

    ಉಕ್ರೇನ್‌ನಲ್ಲಿ ಪ್ರಸ್ತುತ ಉಲ್ಬಣಗೊಳ್ಳುತ್ತಿರುವ ಹಗೆತನದ ದೃಷ್ಟಿಯಿಂದ, ಭಾರತೀಯ ಪ್ರಜೆಗಳು ಉಕ್ರೇನ್‌ಗೆ ಹಾಗೂ ಯುದ್ಧಪೀಡಿತ ದೇಶದೊಳಗೆ ಅನಿವಾರ್ಯವಲ್ಲದ ಎಲ್ಲಾ ರೀತಿಯ ಪ್ರಯಾಣವನ್ನು ತಪ್ಪಿಸಿ. ಉಕ್ರೇನ್ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳು ನೀಡಿರುವ ಸುರಕ್ಷತೆ ಮತ್ತು ಭದ್ರತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಎಂದು ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ. ಇದನ್ನೂ ಓದಿ:  ಉಕ್ರೇನ್‌ನಲ್ಲಿ ಸಂಘರ್ಷ ಉಲ್ಬಣ- ಕಳವಳ ವ್ಯಕ್ತಪಡಿಸಿದ ಭಾರತ

    ಭಾರತೀಯ ಪ್ರಜೆಗಳು ಉಕ್ರೇನ್‌ನಲ್ಲಿ ತಮ್ಮ ಉಪಸ್ಥಿತಿಯ ಬಗ್ಗೆ ರಾಯಭಾರ ಕಚೇರಿಗೆ ತಿಳಿಸಲು ವಿನಂತಿಸಲಾಗಿದೆ. ಇದರಿಂದ ಅಗತ್ಯವಿರುವಲ್ಲಿ ರಾಯಭಾರ ಕಚೇರಿ ಅವರನ್ನು ತಲುಪಲು ಸಹಾಯವಾಗಲಿದೆ.

    ಉಕ್ರೇನ್‌ನಲ್ಲಿ ಹೆಚ್ಚುತ್ತಿರುವ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಹಗೆತನವನ್ನು ಹೆಚ್ಚಿಸುವುದು ಯಾರ ಹಿತಾಸಕ್ತಿಯೂ ಅಲ್ಲ. ಪರಿಸ್ಥಿತಿಯನ್ನು ಸರಿಪಡಿಸುವ ಗುರಿ ಹೊಂದಿರುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೇಡಿಗೆ ಸೇಡು – ಇರಾನ್‌ ಡ್ರೋನ್ ಬಳಸಿ ರಷ್ಯಾ, ಉಕ್ರೇನ್ ಮೇಲೆ ದಾಳಿ

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್‌ನಲ್ಲಿ ಸಂಘರ್ಷ ಉಲ್ಬಣ- ಕಳವಳ ವ್ಯಕ್ತಪಡಿಸಿದ ಭಾರತ

    ಉಕ್ರೇನ್‌ನಲ್ಲಿ ಸಂಘರ್ಷ ಉಲ್ಬಣ- ಕಳವಳ ವ್ಯಕ್ತಪಡಿಸಿದ ಭಾರತ

    ನವದೆಹಲಿ: ಉಕ್ರೇನ್‌ನಲ್ಲಿನ (Ukraine) ಸಂಘರ್ಷ ಉಲ್ಬಣಗೊಳ್ಳುತ್ತಿರುವ ಬಗ್ಗೆ ಭಾರತ (India) ತೀವ್ರ ಕಳವಳ ವ್ಯಕ್ತಪಡಿಸಿದೆ. ಯುದ್ಧವನ್ನು (War) ತಕ್ಷಣವೇ ನಿಲ್ಲಿಸಲು, ರಾಜತಾಂತ್ರಿಕತೆ ಮತ್ತು ತುರ್ತಾಗಿ ಮಾತುಕತೆ ನಡೆಸಲು ಭಾರತ ಕರೆ ನೀಡಿದೆ.

    ಸಂಘರ್ಷದ ಕುರಿತು ಭಾರತದ ನಿಲುವನ್ನು ಪುನರುಚ್ಚರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi), ಸಂಘರ್ಷವನ್ನು ಹೆಚ್ಚಿಸುವುದು ಯಾರ ಹಿತಾಸಕ್ತಿಯೂ ಅಲ್ಲ. ಪರಿಸ್ಥಿತಿಯನ್ನು ತಗ್ಗಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ ಎಂದು ಟ್ವೀಟ್‌ನಲ್ಲಿ ಹೇಳಿದರು.

    ಟ್ವೀಟ್‌ನಲ್ಲೇನಿದೆ?
    ಉಕ್ರೇನ್‌ನಲ್ಲಿ ಮೂಲಭೂತ ಸೌಕರ್ಯಗಳು ಮತ್ತು ನಾಗರಿಕರ ಸಾವು ಸೇರಿದಂತೆ ಸಂಘರ್ಷದ ಉಲ್ಬಣಕ್ಕೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದನ್ನೂ ಓದಿ: ಸೇಡಿಗೆ ಸೇಡು – ಇರಾನ್‌ ಡ್ರೋನ್ ಬಳಸಿ ರಷ್ಯಾ, ಉಕ್ರೇನ್ ಮೇಲೆ ದಾಳಿ

    ಹಗೆತನವನ್ನು ಹೆಚ್ಚಿಸುವುದು ಯಾರ ಹಿತಾಸಕ್ತಿಯಲ್ಲ ಎಂಬುದನ್ನು ನಾವು ಪುನರುಚ್ಚರಿಸುತ್ತೇವೆ. ಯುದ್ಧವನ್ನು ತಕ್ಷಣವೇ ನಿಲ್ಲಿಸಲು, ರಾಜತಾಂತ್ರಿಕತೆ ಮತ್ತು ಮಾತುಕತೆಯ ಹಾದಿಗೆ ತುರ್ತಾಗಿ ಮರಳಲು ನಾವು ಒತ್ತಾಯಿಸುತ್ತೇವೆ. ಯುದ್ಧವನ್ನು ನಿಲ್ಲಿಸುವ ಗುರಿಯನ್ನು ಹೊಂದಿರುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

    ಸೋಮವಾರ ಉಕ್ರೇನ್‌ನ ಅನೇಕ ನಗರಗಳ ಮೇಲೆ ರಷ್ಯಾ ದಾಳಿ ನಡೆಸಿದೆ. ಡೌನ್‌ಟೌನ್, ಕೀವ್ ಸೇರಿದಂತೆ ಹಲವೆಡೆ ರಾಕೆಟ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ ದಾಳಿ- ಸೇತುವೆ ಉಡೀಸ್ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ರಷ್ಯಾ

    Live Tv
    [brid partner=56869869 player=32851 video=960834 autoplay=true]