Tag: Ujjaini

  • ಸುವರ್ಣಾವಕಾಶ ಕಳೆದುಕೊಳ್ಳಲು ಬಯಸದ ಡಿಕೆಶಿ!

    ಸುವರ್ಣಾವಕಾಶ ಕಳೆದುಕೊಳ್ಳಲು ಬಯಸದ ಡಿಕೆಶಿ!

    ಬೆಂಗಳೂರು: ಮುಂದೊಂದು ದಿನ ಈ ರಾಜ್ಯದ ಸಿಎಂ ಆಗಲೇ ಬೇಕು ಎಂಬ ಆಕಾಂಕ್ಷೆ ಹೊಂದಿರುವ ಈಗಿನ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ತಮಗೆ ಬಂದೊದಗುವ ಯಾವುದೇ ಅವಕಾಶವನ್ನು ಕೈಚೆಲ್ಲಲು ಸಿದ್ಧರಿಲ್ಲ.

    ಹೌದು, ಸಂಕಷ್ಟ ಕಾಲದಲ್ಲಿ ಪಕ್ಷದ ಚುಕ್ಕಾಣಿ ಹಿಡಿಯುವ ಸಂದರ್ಭ ಬಂದಾಗ, ಅದು ಸೂಕ್ತ ಕಾಲವಲ್ಲ ಎಂಬ ಹಿತೈಷಿಗಳ ಕಿವಿಮಾತನ್ನು ಲೆಕ್ಕಿಸದೇ ಕೆಪಿಸಿಸಿ ಅಧ್ಯಕ್ಷ ಗಾದಿಯನ್ನು ಡಿಕೆಶಿ ಒಪ್ಪಿಕೊಂಡಿದ್ದರು. ಇದೀಗ ಮುಂದಿನ ಸರದಿಯಲ್ಲಿ ಸಿಎಂ ಗಾದಿ ಖಚಿತ ಎಂಬ ಹೈಕಮಾಂಡ್ (Congress HighCommand) ಭರವಸೆಯಲ್ಲಿ ಡಿಸಿಎಂ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ಮುಂದೊಂದು ದಿನ ಗುರಿ ತಲುಪುತ್ತೇನೆ ಎನ್ನುವ ಭರವಸೆಯಲ್ಲಿ ಇದ್ದಾರೆ.

    ಈಗ ವಿಷಯ ಏನಪ್ಪಾ ಅಂದ್ರೆ, ಕಾಂಗ್ರೆಸ್ ನ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಪೈಕಿ ಮೊದಲನೆಯದ್ದಕ್ಕೆ ನಾಳೆ ಅಧಿಕೃತ ಚಾಲನೆ ನೀಡಲಾಗುತ್ತಿದೆ. ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಕಾರ್ಯಕ್ರಮ ನಾಳೆ ನಡೆಯಲಿದೆ. ನಾಳಿನ ಮುಹೂರ್ತ ನಿಗದಿ ಮಾಡಿದ್ದೇ ಡಿ.ಕೆ ಶಿವಕುಮಾರ್ ಅಂತೆ. ಹೇಳಿ ಕೇಳಿ ಪರಮ ದೈವಭಕ್ತರಾದ ಅವರು, ಶುಭಮುಹೂರ್ತವನ್ನೇ ಆಯ್ಕೆ ಮಾಡಿಕೊಂಡಿದ್ದಾರಂತೆ. ಈ ನಡುವೆ ಅವರು ಚುನಾವಣೆಗೂ ಮುನ್ನ ಹರಕೆ ಹೊತ್ತುಕೊಂಡಂತೆ ಉಜ್ಜೈನಿ (Ujjaini) ಸೇರಿದಂತೆ ಉತ್ತರಭಾರತದ ಕೆಲವು ದೇವಾಲಯ ದರ್ಶನಕ್ಕೆ ಶನಿವಾರ ಹೊರಟು ನಿಂತಿದ್ದಾರೆ. ಇದನ್ನೂ ಓದಿ: ಶಕ್ತಿ ಯೋಜನೆಗೆ ಭಾನುವಾರ ಚಾಲನೆ- ಬಸ್ ಕಂಡಕ್ಟರ್ ಆಗಲಿದ್ದಾರೆ ಸಿದ್ದರಾಮಯ್ಯ

     ಶುಕ್ರವಾರ ನಿಗದಿಯಾದ ಕಾರ್ಯಕ್ರಮದಂತೆ ಅವರು ಭಾನುವಾರ ಸಂಜೆಯ ಹೊತ್ತಿಗೆ ವಾಪಸ್ಸಾಗಬೇಕಿತ್ತು. ಆದರೆ ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ನೂತನ ಸರ್ಕಾರದ ಮಹತ್ವದ ಮೊದಲ ಗ್ಯಾರಂಟಿ ಕಾರ್ಯಕ್ರಮಕ್ಕೆ ಡಿಕೆಶಿ ಗೈರಾಗುತ್ತಿದ್ದಾರಲ್ಲ. ಪಕ್ಷ ಹಾಗೂ ಸರ್ಕಾರದ ಕಾರ್ಯಕ್ಕಿಂತ ದೇವಾಲಯ ದರ್ಶನವೇ ಮುಖ್ಯವಾಯಿತೇ ಎಂದು. ಆದರೆ ಸಿಎಂ ಸಿದ್ದರಾಮಯ್ಯ (Siddaramaiah) ಬಿಡಬೇಕಲ್ಲ. ಏನಪ್ಪಾ ಮುಹೂರ್ತ ನಿಗದಿಪಡಿಸಿ ನೀವೇ ಇಲ್ಲಾಂದ್ರೆ ಹೇಗೇ ಅಂತ ಕೇಳಿದ್ರಂತೆ. ತಕ್ಷಣ ಡಿ.ಕೆ ಶಿವಕುಮಾರ್ ತಮ್ಮ ಮುಂದಿರುವ ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳಲು ಬಯಸಲಿಲ್ಲ.

    ದೇವಾಲಯ ದರ್ಶನ ಕಾರ್ಯಕ್ರಮದಲ್ಲೇ ಸ್ವಲ್ಪ ಬದಲಾವಣೆ ಮಾಡಿ, ನಾಳೆ (ಭಾನುವಾರ) 11 ಗಂಟೆಗೆ ಬೆಂಗಳೂರಿಗೆ ಬರುವಂತೆ ಪ್ಲಾನ್ ಮಾಡಿದ್ದಾರೆ. ಸರ್ಕಾರ ಮೊದಲ ಗ್ಯಾರಂಟಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೀರ್ಮಾನಿಸಿದ್ದಾರೆ. ಅಂದರೆ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿಕೆಶಿ, ತಮ್ಮ ಮುಂದೆ ಬರುವ ಯಾವುದೇ ಅವಕಾಶವನ್ನು ಕೈಚೆಲ್ಲುವ ತಪ್ಪನ್ನು ಮಾಡದಿರಲು ನಿರ್ಧರಿಸಿದಂತೆ ಕಾಣುತ್ತೆ. ಸದ್ಯ ಸಂಪುಟದಲ್ಲಿ ಎಲ್ಲರಿಗಿಂತ ಸ್ವಲ್ಪ ಹೆಚ್ಚಾಗಿಯೇ ನುಗ್ಗುತ್ತಿರುವ ಡಿಕೆಶಿವಕುಮಾರ್, ಕೆಲವೊಮ್ಮೆ ಸಿಎಂ ಸಿದ್ದರಾಮಯ್ಯ ಅವರನ್ನೂ ಓವರ್ ಟೇಕ್ ಮಾಡುವುದನನ್ನು ಗಮನಿಸಬಹುದು.

  • ಕಾಶಿ ಮಾದರಿಯಲ್ಲೇ ಉಜ್ಜೈನಿ ಮಹಾಕಾಲೇಶ್ವರ ಅಭಿವೃದ್ಧಿ- ಜ್ಯೋತಿರ್ಲಿಂಗಕ್ಕೆ ಮೋದಿ ಪೂಜೆ

    ಕಾಶಿ ಮಾದರಿಯಲ್ಲೇ ಉಜ್ಜೈನಿ ಮಹಾಕಾಲೇಶ್ವರ ಅಭಿವೃದ್ಧಿ- ಜ್ಯೋತಿರ್ಲಿಂಗಕ್ಕೆ ಮೋದಿ ಪೂಜೆ

    ನವದೆಹಲಿ: ಹತ್ತು ತಿಂಗಳ ಹಿಂದಷ್ಟೇ ಪ್ರಧಾನಿ ಮೋದಿ (Narendra Modi) ಕಾಶಿ ಕಾರಿಡಾರ್ ಉದ್ಘಾಟಿಸಿದ್ರು. ಇದೀಗ ದ್ವಾದಶ ಜ್ಯೋತಿರ್ಲಿಂಗಗಳು ನೆಲೆಸಿರುವ ಕ್ಷೇತ್ರಗಳಲ್ಲಿ ಒಂದಾದ ಉಜ್ಜೈನಿಯ ಮಹಾಕಾಲೇಶ್ವರ (Mahakaleshwara) ನ ಸನ್ನಿಧಿಯಲ್ಲಿ ಅತ್ಯದ್ಭುತ ಎನ್ನಬಹುದಾದ ಮಹಾಕಾಲ ಲೋಕವನ್ನು ಪ್ರಧಾನಿ ಮೋದಿ ಅನಾವರಣ ಮಾಡಿದ್ದಾರೆ.

    ಸಂಜೆ ಮಹಾಕಾಳೇಶ್ವರನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಗಂಧ, ರುದ್ರಾಕ್ಷಾಮಾಲಾಧಾರಿ ಮೋದಿ ದೇಶದ ಒಳಿತಿಗೆ ಭಗವಂತನ ಮುಂದೆ ಸಂಕಲ್ಪ ಮಾಡಿದರು. ಬಳಿಕ ರುದ್ರಸಾಗರ ಸರೋವರದ ಬಳಿಯಿರುವ ಶ್ರೀಮಹಾಕಾಳೇಶ್ವರಾಲಯ ಕಾರಿಡಾರ್‍ನ ಮೊದಲ ಹಂತವನ್ನು ಪ್ರಧಾನಿ ಮೋದಿ ದೇಶಕ್ಕೆ ಅರ್ಪಣೆ ಮಾಡಿದ್ರು. ಹೆಜ್ಜೆ ಹೆಜ್ಜೆಗೂ ಶಿವತತ್ತ್ವವೇ ಮೇಳೈಸಿರುವ, 900 ಮೀಟರ್‍ಗಿಂತ ಹೆಚ್ಚು ಉದ್ದವಿರುವ ಈ ಕಾರಿಡಾರ್‍ನಲ್ಲಿ ಪ್ರಧಾನಿ ಮೋದಿ ಹೆಜ್ಜೆ ಹಾಕಿ ಪ್ರತಿಯೊಂದನ್ನು ತಿಳಿದುಕೊಂಡರು.

    ಇದು ದೇಶದಲ್ಲೇ ಅತಿದೊಡ್ಡ ಧಾರ್ಮಿಕ ಕಾರಿಡಾರ್ ಎಂಬ ಗರಿಮೆಗೆ ಪಾತ್ರವಾಗಿದೆ. ಮಹಾಕಾಲ್ ಲೋಕ್ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ, ವಸಾಹತುಶಾಹಿ ಮನಸ್ಥಿತಿಯಿಂದ ದೇಶ ಹೊರಬಂದಿದೆ. ಇದು ಐದು ಪ್ರಾಣಗಳಿಗೆ ಧಾರೆ ಎರೆದಿದೆ. ಅಯೋಧ್ಯೆ ರಾಮಮಂದಿರ, ಕಾಶಿ ಕಾರಿಡಾಶರ್, ಕರ್ತಾರ್ ಪುರ ಕಾರಿಡಾರ್, ಈಗ ಮಹಾಕಾಲ ಲೋಕ್ (Mahakal Lok) ಉದ್ಘಾಟನೆಗೊಂಡಿದೆ. ಉಜ್ಜೈನಿ ಭಾರತದ ಹೆಮ್ಮೆಯ ಆಧ್ಯಾತ್ಮಿಕ ತಾಣಗಳಲ್ಲಿ ಒಂದು ಎಂದರು.

    ದೇಶದ ಪುರಾತನ ದೇಗುಲಗಳನ್ನು ಹೆಸರಿಸುವಾಗ ಬೇಲೂರು ಹಳೇಬೀಡನ್ನು ಕೂಡ ಪ್ರಧಾನಿ ಮೋದಿ ನೆನಪಿಸಿದ್ರು. ಇನ್ನು, ಎರಡನೇ ಹಂತದ ಕಾರಿಡಾರ್‍ನಲ್ಲಿ ಸೃಷ್ಟಿಯ ರಹಸ್ಯ, ಗಣೇಶನ ಹುಟ್ಟು, ಸತಿ, ದಕ್ಷ ಮುಂತಾದವರ ಕಥೆಗಳನ್ನು ಚಿತ್ರಿಸಲು ಯೋಜನೆ ರೂಪಿಸಲಾಗಿದೆ. ಸದ್ಯ ಉಜ್ಜೈನಿಗೆ ವರ್ಷಕ್ಕೆ 1.5 ಕೋಟಿ ಭಕ್ತರು ಭೇಟಿ ಕೊಡುತ್ತಿದ್ದು, ಇದನ್ನು ದುಪ್ಪಟ್ಟುಗೊಳಿಸುವ ಗುರಿ ಹೊಂದಲಾಗಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಸ್ತೆ ಮೇಲೆ ರಾಹುಲ್, ಡಿಕೆಶಿ ಪುಷ್-ಅಪ್ಸ್‌

    ಮಹಾಕಾಲ್ ಲೋಕದ ವಿಶೇಷತೆಗಳು ಏನು..?: 856 ಕೋಟಿ ರೂ. ವೆಚ್ಚದ 2 ಹಂತದ ಯೋಜನೆ ಇದಾಗಿದೆ. 900 ಮೀ.ಗಿಂತ ಹೆಚ್ಚು ಉದ್ದದ ಕಾರಿಡಾರ್, 2 ಭವ್ಯ ಹೆಬ್ಬಾಗಿಲು – ನಂದಿದ್ವಾರ, ಪಿನಾಕಿದ್ವಾರವಿದೆ. 108 ಮರಳುಗಲ್ಲಿನ ಸಾಲಂಕೃತ ಸ್ತಂಭ, ಶಿವಪುರಾಣದಂತೆ 190 ಶಿವ ವಿಗ್ರಹ, ನಯನಮನೋಹರ ಶಿವಕಾರಂಜಿ, ಮಿಡ್ ವೇ ಜೋನ್, ಪಾರ್ಕ್ ಹಾಗೂ ಕಾರ್, ಬಸ್‍ಗಳಿಗಾಗಿ ಬಹು ಅಂತಸ್ತಿನ ಪಾರ್ಕಿಂಗ್ ಲಾಟ್ ಇದೆ.

    Live Tv
    [brid partner=56869869 player=32851 video=960834 autoplay=true]

  • ಸ್ವಾಮೀಜಿಗಳಿಗೆ ಮಣಿದು ರಾಮಾಯಣ ಎಕ್ಸ್‌ಪ್ರೆಸ್‌ನಲ್ಲಿ ಸಿಬ್ಬಂದಿ ಸಮವಸ್ತ್ರ ಬದಲು

    ಸ್ವಾಮೀಜಿಗಳಿಗೆ ಮಣಿದು ರಾಮಾಯಣ ಎಕ್ಸ್‌ಪ್ರೆಸ್‌ನಲ್ಲಿ ಸಿಬ್ಬಂದಿ ಸಮವಸ್ತ್ರ ಬದಲು

    ನವದೆಹಲಿ: ರಾಮಾಯಣ ಎಕ್ಸ್‌ಪ್ರೆಸ್‌ನಲ್ಲಿ ಕೇಸರಿಮಣಿಗಳ ಉಡುಪಿನ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಸಮವಸ್ತ್ರವನ್ನು ಬದಲಾಯಿಸಿದೆ.

    ಈ ಬಗ್ಗೆ ಮಾತನಾಡಿದ ರೈಲ್ವೆ ಅಧಿಕಾರಿ, ಕೇಸರಿ ಸಮವಸ್ತ್ರಕ್ಕೆ ಪ್ರತಿಭಟಿಸಿದ್ದಕ್ಕೆ ಸಿಬ್ಬಂದಿಯ ಉಡುಪನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದಕ್ಕೆ ಕ್ಷಮೆಯಾಚಿಸುವುದಾಗಿ ತಿಳಿಸಿದರು. ಇದನ್ನೂ ಓದಿ: 100 ರೂ. ನೋಟ್ ಒಳಗೆ ವೈಟ್ ಪೇಪರ್ ಇಟ್ಟು ವಂಚನೆ- ಐವರು ಅರೆಸ್ಟ್

    ramayana express

    ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ರಾಮಾಯಣ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಿಬ್ಬಂದಿ ಕೇಸರಿ ಸಮವಸ್ತ್ರ ಧರಿಸಿದ್ದಕ್ಕೆ ಸ್ಥಳೀಯರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಕೂಡಲೇ ಸಮವಸ್ತ್ರ ಹಿಂಪಡೆಯದಿದ್ದರೇ ಡಿ.12ರಂದು ರೈಲನ್ನು ದೆಹಲಿಯಲ್ಲಿ ತಡೆಹಿಡಿಯಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

    ramayana express

    ರೈಲಲ್ಲಿ ಉಪಹಾರ ನೀಡುವ ವೇಟರ್ ಸಾಧುಗಳಂತೆ ಕೆಸರಿ ಉಡುಪು ಧರಿಸಿ ರುದ್ರಾಕ್ಷಿ ಮಾಲೆಗಳನ್ನು ಹಾಕಿಕೊಳ್ಳುವುದು ಹಿಂದೂ ಧರ್ಮ ಹಾಗೂ ಸಾಧುಗಳಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಉಜ್ಜಯಿನಿ ಅಖಾಡ ಪರಿಷತ್ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶ ಪುರಿ ಹೇಳಿದ್ದರು. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ

    ಎರಡು ದಿನಗಳ ಹಿಂದೆಯೇ ರಾಮಾಯಣ ವೇಟರ್‌ಗಳ ಸಮವಸ್ತ್ರವನ್ನು ವಿರೋಧಿಸಿ ಕೇಂದ್ರ ರೈಲ್ವೆ ಸಚಿವರಿಗೆ ಪತ್ರವನ್ನು ಬರೆಯಲಾಗಿದೆ. ಸಮವಸ್ತ್ರ ಬದಲಾವಣೆಗೊಳ್ಳದಿದರೇ ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟಿಸಲಾಗುವುದು ಎಂದಿದ್ದರು.

    ದೇಶದ ಮೊದಲ ರಾಮಾಯಣ ಸರ್ಕ್ಯೂಟ್ ರೈಲನ್ನು ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ನ.7ರಂದು ಪ್ರಾರಂಭಿಸಲಾಗಿದೆ. ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ 15 ಸ್ಥಳಗಳಿಗೆ ಈ ರೈಲ್ವೆ ಮೂಲಕ ಪ್ರಯಾಣಿಸಬಹುದು.

    7 ಸಾವಿರಕ್ಕೂ ಹೆಚ್ಚು ಕಿಮೀ ಚಲಿಸುವ ಈ ರೈಲು ಅಯೋಧ್ಯೆ, ಪ್ರಯಾಗ್, ನಂದಿಗ್ರಾಮ, ಜನಕಪುರ, ಚಿತ್ರಕೂಟ, ಸೀತಾಮರ್ಹಿ, ನಾಸಿಕ್, ಹಂಪಿ ಮತ್ತು ರಾಮೇಶ್ವರ ಸೇರಿದಂತೆ ಇನ್ನಿತರೆ ಸ್ಥಳಗಳಿಗೆ ಕರೆದೊಯ್ಯುತ್ತದೆ. ಈ ರೈಲಿನ ಪ್ರಥಮ ದರ್ಜೆ ರೆಸ್ಟೋರೆಂಟ್, ಗ್ರಂಥಾಲಯ, ಶವರ್ ಕ್ಯೂಬಿಕಲ್‍ಗಳನ್ನು ಹೊಂದಿದೆ. ಶಿವನ ದೇಗುಲವಿರುವ ಉಜ್ಜಯಿನಿಯಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಇದನ್ನೂ ಓದಿ: ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಹೈಟೆಕ್ ವಂಚನೆ

  • ಆಪರೇಷನ್ ಥಿಯೇಟರ್‌ನಲ್ಲಿ ನರ್ಸ್‌ಗೆ ಕಿಸ್ ಮಾಡಿದ ವೈದ್ಯ: ವಿಡಿಯೋ ವೈರಲ್

    ಆಪರೇಷನ್ ಥಿಯೇಟರ್‌ನಲ್ಲಿ ನರ್ಸ್‌ಗೆ ಕಿಸ್ ಮಾಡಿದ ವೈದ್ಯ: ವಿಡಿಯೋ ವೈರಲ್

    ಉಜ್ಜೈನಿ: ವೈದ್ಯನೊಬ್ಬ ಆಪರೇಷನ್ ಥಿಯೇಟರ್‌ನಲ್ಲೇ ನರ್ಸ್‌ಗೆ ಕಿಸ್ ಮಾಡಿದ ಘಟನೆಯೊಂದು ಮಧ್ಯಪ್ರದೇಶದ ಉಜ್ಜೈನಿಯ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯ ನರ್ಸ್‌ಗೆ ಕಿಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ.

    49 ವರ್ಷದ ಸಿವಿಲ್ ಸರ್ಜನ್‍ನ ವರ್ತನೆಯಿಂದ ಆತನನ್ನು ಕೆಲಸದಿಂದ ವಜಾ ಮಾಡಲಾಗಿದ್ದು, ಘಟನೆ ಬಗ್ಗೆ ವಿವರಣೆ ನೀಡಬೇಕೆಂದು ಆತನಿಗೆ ನೋಟಿಸ್ ಜಾರಿ ಮಾಡಿದ್ದೇನೆ ಎಂದು ಜಿಲ್ಲಾಧಿಕಾರಿ ಶಶಾಂಕ್ ಮಿಶ್ರಾ ತಿಳಿಸಿದ್ದಾರೆ.

    ಡಿವಿಶನಲ್ ಕಮಿಷನರ್ ಈ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಾರೆ. ವೈದ್ಯ, ನರ್ಸ್‌ಗೆ ಕಿಸ್ ಮಾಡುತ್ತಿರುವ ವಿಡಿಯೋ ಆಸ್ಪತ್ರೆಯಲ್ಲೇ ತೆಗೆದಿರುವುದೋ ಇಲ್ಲವೋ ಎನ್ನುವುದು ಖಚಿತವಾಗಿಲ್ಲ ಎಂದು ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಮೋಹನ್ ಮಾಳವಿಯಾ ತಿಳಿಸಿದ್ದಾರೆ.

    ನರ್ಸಿಂಗ್ ಸ್ಟಾಫ್ ವಾಟ್ಸಪ್ ಗ್ರೂಪಿನಲ್ಲಿ ಈ ಅಸಭ್ಯ ವಿಡಿಯೋ ಬಂತು ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ. ಈ ವಿಡಿಯೋ ಆಕಸ್ಮಿಕವಾಗಿ ಗ್ರೂಪಿನಲ್ಲಿ ಸೆಂಡ್ ಆಯ್ತೇ ಅಥವಾ ಉದ್ದೇಶಪೂರ್ವಕವಾಗಿಯೇ ಸೆಂಡ್ ಮಾಡಿದ್ದಾರಾ ಎನ್ನುವುದರ ಬಗ್ಗೆ ಜಿಲ್ಲಾಧಿಕಾರಿ ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv