Tag: ugc

  • ಹೊಸ ವೇಳಾಪಟ್ಟಿ ಬಿಡುಗಡೆಗೊಳಿಸಿದ ಯುಜಿಸಿ

    ಹೊಸ ವೇಳಾಪಟ್ಟಿ ಬಿಡುಗಡೆಗೊಳಿಸಿದ ಯುಜಿಸಿ

    ನವದೆಹಲಿ: ಕೊರೊನಾ ಲಾಕ್‍ಡೌನ್ ನಿಂದಾಗಿ ಮಾರ್ಚ್ ಮಧ್ಯದಲ್ಲಿಯೇ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹೀಗಾಗಿ ಯುಜಿಸಿ ವಾರ್ಷಿಕ ಪರೀಕ್ಷೆ ಸಮಯ ಮತ್ತು 2020-21ರ ಶೈಕ್ಷಣಿಕ ವರ್ಷದ ಹೊಸ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.

    ಪದವಿ ಸೆಮಿಸ್ಟರ್ ಪರೀಕ್ಷೆಗಳು ಜುಲೈ ತಿಂಗಳಲ್ಲಿ ನಡೆಯಲಿವೆ. ಹಳೆಯ ವಿದ್ಯಾರ್ಥಿಗಳಿಗೆ ಆಗಸ್ಟ್ ನಲ್ಲಿ ಕಾಲೇಜು ಆರಂಭಗಗೊಂಡ್ರೆ, ಹೊಸ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ. ಕೊರೊನಾ ವೈರಸ್ ನಿಂದಾಗಿ ದೇಶದಾದ್ಯಂತ ಶಾಲೆ, ಕಾಲೇಜುಗಳ ಬಂದ್ ಆಗಿವೆ.

    2019-2020 ಶೈಕ್ಷಣಿಕ ವರ್ಷದ ಬಾಕಿ ಉಳಿದಿರುವ ಪರೀಕ್ಷೆಗಳನ್ನು ನಡೆಸಲು ಪರ್ಯಾಯ ಮಾರ್ಗಗಳ ಅನುಸರಿಸುವ ಮೂಲಕ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಸರಳವಾಗಿ ನಡೆಸಲು ಯುಜಿಸಿ ತೀರ್ಮಾನಿಸಿದೆ. ನಡೆಯಬೇಕಿರುವ ಪರೀಕ್ಷೆಗಳು ಕಡಿಮೆ ಅವಧಿಯಲ್ಲಿ ಮುಗಿಯಲಿವೆ. ಪರೀಕ್ಷಾ ಅವಧಿಯನ್ನು 3 ರಿಂದ 2 ಗಂಟೆಗೆ ಇಳಿಸಲು ಚಿಂತನೆ ನಡೆಸಿದೆ. ಎಲ್ಲ ವಿಧದ ಪರೀಕ್ಷೆಗಳು ನಡೆಯಲಿದ್ದು, ಶಿಕ್ಷಣ ಸಂಸ್ಥೆಗಳು ಕೋವಿಡ್-19 ನಿಯಮ(ಮಾಸ್ಕ್, ಸಾಮಾಜಿಕ ಅಂತರ)ಗಳನ್ನು ಕಡ್ಡಾಯಾಗಿ ಪಾಲಿಸಬೇಕು.

    ಎಂ.ಫಿಲ್/ಪಿಎಚ್‍ಡಿ ಅವಧಿಯನ್ನು 6 ತಿಂಗಳು ವಿಸ್ತರಿಸಲಾಗಿದೆ. ಎಂ.ಫಿಲ್/ಪಿಎಚ್‍ಡಿ ವಿದ್ಯಾರ್ಥಿಗಳ ಮೌಖಿಕ ಪರೀಕ್ಷೆಗಳನ್ನು ಯುನಿವರ್ಸಿಟಿಗಳು ಆನ್‍ಲೈನ್ ವಿಡಿಯೋ ಕಾನ್ಪರೆನ್ಸ್ ಮೂಲಕವೇ ನಡೆಸಲು ಯುಜಿಸಿ ಸೂಚಿಸಿದೆ.

    2019-20 ಶೈಕ್ಷಣಿಕ ವರ್ಷದ ಬದಲಾದ ವೇಳಾಪಟ್ಟಿ
    * ಪರೀಕ್ಷೆಯ ಬಳಿಕ ಕಾಲೇಜ್ ಆರಂಭಗೊಂಡಿದ್ದು: 01-01-2020
    * ತರಗತಿ ಸ್ಥಗಿತಗೊಂಡಿದ್ದು: 16-03-2020
    * ಆನ್‍ಲೈನ್ ಕ್ಲಾಸ್ : 16-03-2020 ರಿಂದ 31-05-2020
    * ಪರೀಕ್ಷಾ ತಯಾರಿ/ ಪ್ರೊಜೆಕ್ಟ್ ವರ್ಕ್/ ಇ-ಲ್ಯಾಬ್ಸ್ / ಪ್ರಾಯೋಗಿಕ ಪರೀಕ್ಷೆ / ಅಸೈನ್‍ಮೆಂಟ್ / ಪ್ಲೇಸಮೆಂಟ್ ಡ್ರೈವ್ ಇತ್ಯಾದಿ: 01-06-2020 ರಿಂದ 15-06-2020
    ರಜೆ: 16-06-2020 ರಿಂದ 30-06-2020
    ಪರೀಕ್ಷಾ ಅವಧಿ
    1. ಟರ್ಮಿನಲ್ ಸೆಮಿಸ್ಟರ್/ವಾರ್ಷಿಕ: 01-07-2020 ರಿಂದ 15-07-2020
    2. ಇಂಟರ್ ಮೀಡಿಯೆಟ್ ಸೆಮಿಸ್ಟರ್ / ವಾರ್ಷಿಕ: 16-07-2020 ರಿಂದ 31-07-2020
    ಪರೀಕ್ಷಾ ಫಲಿತಾಂಶ:
    1. ಟರ್ಮಿನಲ್ ಸೆಮಿಸ್ಟರ್/ವಾರ್ಷಿಕ: 31-07-2020
    2. ಇಂಟರ್ ಮೀಡಿಯೆಟ್ ಸೆಮಿಸ್ಟರ್ / ವಾರ್ಷಿಕ: 14-08-2020

    2020-21 ಶೈಕ್ಷಣಿಕ ವರ್ಷದ ವೇಳಾಪಟ್ಟಿ ಹೀಗಿದೆ:
    * ದಾಖಲಾತಿ ಆರಂಭ: 01-08-2020 ರಿಂದ 31-08-2020
    * ತರಗತಿ ಆರಂಭ:
    1. ಹಳೆಯ ವಿದ್ಯಾರ್ಥಿಗಳು(2 ಮತ್ತು 3ನೇ ವರ್ಷದವರಿಗೆ): 01-08-2020
    2. ಮೊದಲ ವರ್ಷದ ವಿದ್ಯಾರ್ಥಿಗಳಿಗೆ: 01-09-2020
    * ಪರೀಕ್ಷಾ ಅವಧಿ: 01-01-2021 ರಿಂದ 25-01-2021
    * ಕಾಲೇಜು ಪುನರಾರಂಭ: 27-01-2021
    * ಕ್ಲಾಸ್ ನಡೆಯುವ ಕೊನೆಯ ದಿನ: 25-05-2021
    * ಪರೀಕ್ಷಾ ಅವಧಿ: 26-05-2021 ರಿಂದ 25-06-2021
    * ರಜೆ ಅವಧಿ: 01-07-2021 ರಿಂದ 30-07-2021
    * ಹೊಸ ಶೈಕ್ಷಣಿಕ ವರ್ಷ ಆರಂಭ (2021-2022): 02-08-2021

  • ಕೆಎಸ್‍ಒಯುಗೆ ಮತ್ತೆ ಸಿಕ್ಕಿತು ಯುಜಿಸಿ ಮಾನ್ಯತೆ – 17 ಕೋರ್ಸ್ ಗಳ ಆರಂಭಕ್ಕೆ ಒಪ್ಪಿಗೆ

    ಕೆಎಸ್‍ಒಯುಗೆ ಮತ್ತೆ ಸಿಕ್ಕಿತು ಯುಜಿಸಿ ಮಾನ್ಯತೆ – 17 ಕೋರ್ಸ್ ಗಳ ಆರಂಭಕ್ಕೆ ಒಪ್ಪಿಗೆ

    ಮೈಸೂರು: ಯುಜಿಸಿ ಮಾನ್ಯತೆ ನವೀಕರಣದ ಸಮಸ್ಯೆ ಎದುರಿಸುತ್ತಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಕೊನೆಗೂ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ದೂರ ಶಿಕ್ಷಣದಡಿ ಕೋರ್ಸ್‍ಗಳನ್ನು ನಡೆಸಲು ಅನುಮತಿ ನೀಡಿದೆ.

    ಯುಜಿಸಿಯಿಂದ ಮುಕ್ತ ವಿವಿಗೆ 2018-19ನೇ ಸಾಲಿನಿಂದ 2022-23ನೇ ಸಾಲಿನವರೆಗೆ ದೂರ ಶಿಕ್ಷಣದಡಿ ಒಟ್ಟು ಆಯ್ದ 17 ಕೋರ್ಸ್ ನಡೆಸಲು ಅನುಮತಿ ನೀಡಲಾಗಿದೆ. ಕಳೆದ ಐದು ವರ್ಷಗಳಿಂದ ಯುಜಿಸಿ ದೂರ ಶಿಕ್ಷಣ ಕೋರ್ಸ್‍ಗೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಮುಕ್ತಿ ವಿವಿಯಲ್ಲಿ ಸರ್ಟಿಫಿಕಟ್ ಪಡೆದ ವಿದ್ಯಾರ್ಥಿಗಳ ಭವಿಷ್ಯ ಅಂತಂತ್ರವಾಗಿತ್ತು. ಆದ್ರೆ 5 ವರ್ಷಕ್ಕೆ ಯುಜಿಸಿ ಹೊಸ ಮಾನ್ಯತೆ ಘೋಷಿಸಿದೆ.

     

    ಮುಕ್ತ ವಿವಿಯ ದೂರ ಶಿಕ್ಷಣಕ್ಕೆ ಅನುಮತಿ ರದ್ದುಗೊಂಡಿದ್ದರಿಂದ ಸಾವಿರಾರು ಆಕಾಂಕ್ಷಿಗಳು ಗೊಂದಲಕ್ಕೆ ಈಡಾಗಿದ್ದರು. ಜತೆಗೆ ವಿವಿಧ ಕೋರ್ಸ್‍ಗಳಲ್ಲಿ ಈಗಾಗಲೇ ನೋಂದಾಯಿಸಿ ಪರೀಕ್ಷೆ ಬರೆದಿದ್ದವರು ಕೂಡ ಆತಂಕಕ್ಕೆ ಒಳಗಾಗಿದ್ದರು. ಕೊನೆಗೂ ಯುಜಿಸಿ ಮಾನ್ಯತೆ ನೀಡಿದ್ದರಿಂದ ಕೋರ್ಸ್ ಆಕಾಂಕ್ಷಿಗಳಿಗೆ ಪ್ರಯೋಜನವಾಗಲಿದೆ. ಬಿಎ, ಬಿಕಾಂ,ಲೈಬ್ರರಿ ಸೈನ್ಸ್. ಎಂ.ಎ ಹಿಸ್ಟರಿ, ಒಂ-ಅರ್ಥಶಾಸ್ತ್ರ, ಹಿಂದಿ, ಇಂಗ್ಲಿಷ್, ಪತ್ರಿಕೋದ್ಯಮ, ಕನ್ನಡ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಉರ್ದು, ಪರಿಸರ ಅಧ್ಯಾಯನ, ಎಂಕಾಂ. ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ವಿಷಯಗಳಿಗೆ ಮಾನ್ಯತೆ ಸಿಕ್ಕಿದ್ದು, ಉಳಿದ ಯಾವುದೇ ವಿಷಯದ ಕೋರ್ಸ್ ಪ್ರಾರಂಭ ಮಾಡುವಂತಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಕೆಎಸ್ಒಯುಗೆ ಸಿಕ್ತು ಯುಜಿಸಿ ಮಾನ್ಯತೆ!

    ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಕೆಎಸ್ಒಯುಗೆ ಸಿಕ್ತು ಯುಜಿಸಿ ಮಾನ್ಯತೆ!

    ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕೆಎಸ್ಒಯು)ಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಮತ್ತೆ ಮಾನ್ಯತೆ ನೀಡಿದೆ.

    ಹೌದು. ಯುಜಿಸಿಯು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಮಾನ್ಯತೆ ನೀಡಲು ಒಪ್ಪಿದ್ದು, ಈ ಸಂಬಂಧ ಆಗಸ್ಟ್ 10ರೊಳಗಾಗಿ ಆದೇಶ ನೀಡಲಿದೆ ಎಂದು ತಿಳಿದು ಬಂದಿದೆ.

    ಯುಜಿಸಿಯು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆ ರದ್ದು ಮಾಡಿದ್ದ ಹಿನ್ನೆಲೆಯಲ್ಲಿ, ಇಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿವಿ ಸದಾನಂದಗೌಡರು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿ ಮಾಡಿ ಕೆಎಸ್‍ಓಯುನ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದರು.

    ಕೇಂದ್ರ ಸಚಿವ ಸದಾನಂದಗೌಡ ಮನವಿಗೆ ಸ್ಪಂದಿಸಿದ ಮಾನವ ಸಂಪನ್ಮೂಲ ಇಲಾಖೆಯು ಕೆಎಸ್‍ಓಯುಗೆ ಮಾನ್ಯತೆ ನೀಡಲು ಒಪ್ಪಿಗೆ ನೀಡಿದ್ದು, ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ಯುಜಿಸಿ ಮಾನ್ಯತೆಯನ್ನು ನೀಡುವಂತೆ, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಯುಜಿಸಿ ಗೆ ಕಡತ ರವಾನಿಸಿದೆ.

    ಅನಿಶ್ಚಿತತೆಯ ತೂಗುಯ್ಯಾಲೆಯಲ್ಲಿದ್ದ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಗಳ ಭವಿಷ್ಯವನ್ನು ನಿಶ್ಚಿತ ಗುರಿ ಮುಟ್ಟಿಸುವಲ್ಲಿ ಕೇಂದ್ರ ಸರಕಾರವು ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಬರೆದು ಡಿವಿ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

    https://www.youtube.com/watch?v=CAKZXF9tw0w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕರ್ನಾಟಕದಲ್ಲಿ 23, ದೇಶದಲ್ಲಿದೆ 277 ನಕಲಿ ಎಂಜಿನಿಯರಿಂಗ್ ಕಾಲೇಜುಗಳು!

    ಕರ್ನಾಟಕದಲ್ಲಿ 23, ದೇಶದಲ್ಲಿದೆ 277 ನಕಲಿ ಎಂಜಿನಿಯರಿಂಗ್ ಕಾಲೇಜುಗಳು!

    ನವದೆಹಲಿ: ದೇಶದಲ್ಲಿ ಒಟ್ಟಾರೆ 277 ನಕಲಿ ಎಂಜಿನಿಯರಿಂಗ್ ಕಾಲೇಜುಗಳು ಇರುವುದಾಗಿ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.

    ದೇಶಾದ್ಯಂತ ಇರುವ ನಕಲಿ ಕಾಲೇಜುಗಳ ಪೈಕಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತಿಹೆಚ್ಚು 66 ನಕಲಿ ಕಾಲೇಜುಗಳಿವೆ. ಉಳಿದಂತೆ ತೆಲಂಗಾಣದಲ್ಲಿ 35, ಪಶ್ಚಿಮ ಬಂಗಾಳದಲ್ಲಿ 23 ಕಾಲೇಜುಗಳಿದ್ದು ಪಟ್ಟಿಯಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿದೆ.

    ಕರ್ನಾಟಕ ನಕಲಿ ಕಾಲೇಜುಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದು, 23 ನಕಲಿ ಕಾಲೇಜುಗಳಿದೆ. ನಂತರದಲ್ಲಿ ಉತ್ತರ ಪ್ರದೇಶದ 5ನೇ ಸ್ಥಾನದಲ್ಲಿದ್ದು 22 ನಕಲಿ ಕಾಲೇಜುಗಳು ಪತ್ತೆಯಾಗಿದೆ.

    ದೇಶದಲ್ಲಿ ನಕಲಿ ಎಂಜಿನಿಯರಿಂಗ್ ಕಾಲೇಜುಗಳು ಎಷ್ಟಿವೆ ಎಂದು ಎಐಎಂಡಿಕೆ ಸಂಸದ ಪಿ ನಾಗರಾಜನ್, ಬಿಜೆಪಿಯ ಲಕ್ಷ್ಮಣ್ ಗಲುವಾ ಹಾಗೂ ರಮಾದೇವಿ ಅವರು ಪ್ರಶ್ನಿಸಿದ್ದರು. ಮೂವರ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಮಾನವ ಸಂಪನ್ಮೂಲ ಖಾತೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ನಕಲಿ ಕಾಲೇಜುಗಳ ವಿವರ ನೀಡಿದರು. ಅಲ್ಲದೇ ಇಂತಹ ಕಾಲೇಜುಗಳ ಮೇಲೆ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದು, ರಾಜ್ಯ ಸರ್ಕಾರಗಳು ಇಂತಹ ಕಾಲೇಜುಗಳನ್ನು ಮುಚ್ಚಲು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

    ನಕಲಿ ಕಾಲೇಜುಗಳ ಮಾಹಿತಿಯನ್ನು ಸಾರ್ವಜನಿಕವಾಗಿ ನೋಟಿಸ್ ನೀಡುವ ಮೂಲಕ ಮಾಹಿತಿ ನೀಡಲಾಗುವುದು. ಅಲ್ಲದೇ ರಾಜ್ಯ ಸರ್ಕಾರಗಳು ಹೊಸ ಕಾಲೇಜು ಆರಂಭಿಸಲು ಹಾಗೂ ಅವುಗಳನ್ನು ಮುಚ್ಚಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅನುಮತಿ ಕಡ್ಡಾಯ ಎಂದು ತಿಳಿಸಿದರು.

    ನಕಲಿ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ತನ್ನ ವೆಬ್‍ಸೈಟ್ ನಲ್ಲಿ ಪ್ರಕಟಿಸಿದೆ. ಅಲ್ಲದೇ ಈ ಪಟ್ಟಿಯನ್ನು ನಿರಂತರವಾಗಿ ಪರಿಶೀಲನೆ ನಡೆಸಿ ಹೊಸ ನಕಲಿ ಕಾಲೇಜು ಪತ್ತೆಯಾದರೆ ಅವುಗಳನ್ನು ಸಾರ್ವಜನಿಕವಾಗಿ ಪ್ರಕಟಗೊಳಿಸಲಿದೆ.

  • ಹಾಸನದ ಕಾಲೇಜಿನಲ್ಲಿಯೂ ಸಿಗುತ್ತೆ ಬಿಸಿಯೂಟ – ಎಲ್ಲರಿಗೂ ಮಾದರಿಯಾದ ಉಪನ್ಯಾಸಕರು

    ಹಾಸನದ ಕಾಲೇಜಿನಲ್ಲಿಯೂ ಸಿಗುತ್ತೆ ಬಿಸಿಯೂಟ – ಎಲ್ಲರಿಗೂ ಮಾದರಿಯಾದ ಉಪನ್ಯಾಸಕರು

    ಹಾಸನ: ನಗರದ ಪ್ರತಿಷ್ಠಿತ ಸರ್ಕಾರಿ ವಿಜ್ಞಾನ ಪದವಿ ಕಾಲೇಜಿನಲ್ಲಿ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

    ಹಾಸನದ ಪ್ರತಿಷ್ಟಿತ ಸರ್ಕಾರಿ ವಿಜ್ಞಾನ ಪದವಿ ಕಾಲೇಜು ಬೇರೆ ಎಲ್ಲಾ ಕಾಲೇಜುಗಳಿಗಿಂತಲೂ ವಿಭಿನ್ನವಾಗಿ ನಿಂತಿದ್ದು, ವಿದ್ಯಾರ್ಥಿಗಳ ಪ್ರೀತಿಯ ಕಾಲೇಜಾಗಿ ಪರಿಣಮಿಸಿದೆ. ಕಾರಣ ಕಾಲೇಜಿನ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಎಲ್ಲರೂ ಸೇರಿ ‘ಸಂವೇದನಾ ಬಳಗ’ ರಚಿಸಿಕೊಂಡಿದ್ದು, ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸಲು ಮುಂದಾಗಿದ್ದಾರೆ.

    ಪ್ರತಿದಿನ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟವನ್ನು ಕಾಲೇಜಿನಲ್ಲಿಯೇ ಉಚಿತವಾಗಿ ನೀಡಲಾಗುತ್ತಿದೆ. ಗ್ರಾಮೀಣ ಭಾಗಗಳಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಇಲ್ಲಿ ಮಧ್ಯಾಹ್ನ ಬಿಸಿ ಊಟದ ವ್ಯವಸ್ಥೆಯನ್ನು ಮಾಡಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ. ಕಾಲೇಜಿನಲ್ಲಿ ಪ್ರತಿದಿನ 180 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಿಸಿ ಊಟ ವ್ಯವಸ್ಥೆಯನ್ನು ನೀಡಲಾಗುತ್ತಿದೆ. ಸಂವೇದನಾ ಬಳಗದಿಂದ ಪ್ರತಿ ತಿಂಗಳು 30 ಸಾವಿರ ಹಣ ಸಂಗ್ರಹವಾಗುತ್ತಿದ್ದು, ಕಾಲೇಜು ತರಗತಿ ಇರುವ ದಿನಗಳಲ್ಲಿ ಊಟವನ್ನು ನೀಡಲಾಗುತ್ತಿದೆ. ಸಂವೇದನಾ ಬಳಗದಲ್ಲಿರುವ ಎಲ್ಲರೂ ತಮ್ಮ ಕೈಲಾದಷ್ಟು ಹಣವನ್ನು ವಿದ್ಯಾರ್ಥಿಗಳಿಗಾಗಿ ನೀಡಿ ಮಾದರಿಯಾಗಿದ್ದಾರೆ.

    ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೂ ತರಗತಿಗಳು ನಡೆಯುವುದರಿಂದ ವಿದ್ಯಾರ್ಥಿಗಳು ಹೊರಗಡೆ ಹೋಗಲೂ ಸಾಧ್ಯವಾಗದೆ, ಸಮಸ್ಯೆ ಎದುರಿಸುತ್ತಿದ್ದರು. ಇಂತಹ ವಿದ್ಯಾರ್ಥಿಗಳಿಗೆ ಕಾಲೇಜಿನ ಸಂವೇದನಾ ಬಳಗದ ಬಿಸಿ ಊಟದ ಕಾರ್ಯಕ್ರಮ ಸಾಕಷ್ಟು ಅನುಕೂಲ ಕಲ್ಪಿಸಿದೆ. ಸದ್ಯ ಕಾಲೇಜು ಯುಜಿಸಿ ಯಿಂದ ಉತ್ತಮ ಗುಣಮಟ್ಟದ ಪ್ರಮಾಣ ಪತ್ರವನ್ನು ಕೂಡ ಪಡೆದುಕೊಂಡಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ವರ್ಷದಿಂದ ಹೆಚ್ಚಾಗುತ್ತಿದೆ. ಕಾಲೇಜು ವಾತಾವರಣ ಕೂಡ ಉತ್ತಮವಾಗಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದು, ಉಪನ್ಯಾಸಕರು ಸಹ ತಮ್ಮ ಕಾರ್ಯದಲ್ಲಿ ಸಂತೃಪ್ತಿಯನ್ನು ಕಾಣುತ್ತಿದ್ದಾರೆ.

  • ಕರ್ನಾಟಕ ರಾಜ್ಯ ಮುಕ್ತ ವಿವಿ ಕೊನೆಗೂ ಪುನರಾರಂಭ

    ಕರ್ನಾಟಕ ರಾಜ್ಯ ಮುಕ್ತ ವಿವಿ ಕೊನೆಗೂ ಪುನರಾರಂಭ

    ಬೆಂಗಳೂರು:2018-19 ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕ ರಾಜ್ಯ ಮುಕ್ತ ವಿವಿ ಪುನರಾರಂಭಕ್ಕೆ ಕೊನೆಗೂ ಅನುಮತಿ ದೊರೆತು ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಆಶಾಕಿರಣ ಮೂಡಿದೆ.

    2013ರಿಂದ ಮಾನ್ಯತೆ ರದ್ದಾಗಿ ಸ್ಥಗಿತಗೊಂಡಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ)ದಿಂದ ಮಾನ್ಯತೆ ಸಿಕ್ಕಿದೆ. ಸಾಕಷ್ಟು ಹೋರಾಟದ ನಂತರ ಮುಕ್ತ ವಿವಿ ಆರಂಭಕ್ಕೆ ಯುಜಿಸಿ ಅನುಮತಿ ನೀಡಿದೆ.

    ಇದೇ ವಿಚಾರವಾಗಿ ಜೂನ್ 4ರಂದು ಮೈಸೂರಿನಲ್ಲಿ ಮಾನವ ಸಂಪನ್ಮೂಲ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಸಭೆ ನಡೆದಿತ್ತು. ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಹಾಗೂ ಲೋಕಸಭೆ ಹಾಗೂ ರಾಜ್ಯಸಭೆಯ 16 ಮಂದಿ ಸಂಸದರು ಭಾಗವಹಿಸಿದ್ದರು. ಸಭೆಯಲ್ಲಿ ವಿವಿ ಎದುರಿಸುತ್ತಿರುವ ಸಮಸ್ಯೆಯನ್ನು ಕುಲಪತಿ ವಿವರವಾಗಿ ಪ್ರಸ್ತುತ ಪಡಿಸಿದ್ದರು.

    2013, 14ರಿಂದ ವಿ.ವಿ.ಗೆ ಮಾನ್ಯತೆಯಿಲ್ಲ. ಇಲ್ಲಿ ವ್ಯಾಸಂಗ ಮಾಡಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಮಾನ್ಯತೆ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದ್ದರೂ ಆಯೋಗ ಪಾಲಿಸುತ್ತಿಲ್ಲ ಎಂದು ಕಟುವಾಗಿ ತಮ್ಮ ವಾದ ಮಂಡಿಸಿದ್ದರು. 2013,14 ಹಾಗೂ 2015,16 ಸಾಲಿಗೂ ಮಾನ್ಯತೆ ನೀಡಲು ಕೋರಿ ಸಮಿತಿಯ ಅಧ್ಯಕ್ಷರಿಗೆ ಮನವಿ ಪತ್ರವನ್ನೂ ನೀಡಿದ್ದರ ಕಾರಣ ಮಾನ್ಯತೆ ದೊರೆಯುವಲ್ಲಿ ಸಹಾಯವಾಗಿದೆ ಎನ್ನಲಾಗಿದೆ.

    2018,19ನೇ ಸಾಲಿಗೆ ಮಾನ್ಯತೆ ಕೋರಿ ವಿಶ್ವವಿದ್ಯಾಲಯ ಸಲ್ಲಿಸಿದ್ದ ಅರ್ಜಿ ತಲುಪಿದೆ. ಮಾನ್ಯತೆ ನೀಡಲು ನಾವು ಸಿದ್ಧರಿದ್ದೇವೆ. ಅರ್ಜಿ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಸಿದ್ಧವಿರಿ ಎಂದು ವಿವಿ ಗೆ ಯುಜಿಸಿ ಜೂನ್ 6ರಂದು ಪತ್ರ ಬರೆದಿದೆ.

    2013 ರಿಂದ 2018ರವರೆಗಿನ ಶೈಕ್ಷಣಿಕ ವಿಚಾರದ ಕುರಿತು ಯುಜಿಸಿ ಯಾವುದೇ ನಿರ್ಧಾರವನ್ನ ತಿಳಿಸಿಲ್ಲ. 2018-19 ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನುಮತಿ ಕೊಟ್ಟಿರುವ ಯುಜಿಸಿ ನಡೆ ಕುತೂಹಲ ಮೂಡಿಸಿದೆ.

    ಕರ್ನಾಟಕ ರಾಜ್ಯ ಮುಕ್ತ ವಿವಿ ಯುಜಿಸಿ ನಿಯಮಗಳನ್ನು ಉಲ್ಲಂಘಿಸಿದ್ದ ಕಾರಣ ಯುಜಿಸಿ ವಿವಿ ಮಾನ್ಯತೆಯನ್ನು 2013 ರಲ್ಲಿ ರದ್ದು ಮಾಡಿತ್ತು.ಇದನ್ನೂ ಓದಿ:ಮುಕ್ತ ವಿವಿಗೆ ಇನ್ನು 3 ವರ್ಷ ಮಾನ್ಯತೆ ಸಿಗೋದು ಕಷ್ಟ!

  • ಕರ್ನಾಟಕ ಓಪನ್ ವಿವಿಗೆ ಬೀಗ ಖಾತ್ರಿ-ಸರ್ಕಾರದಿಂದ ಸಿಬ್ಬಂದಿ ಬೇರೆಡೆ ಶಿಫ್ಟ್

    ಕರ್ನಾಟಕ ಓಪನ್ ವಿವಿಗೆ ಬೀಗ ಖಾತ್ರಿ-ಸರ್ಕಾರದಿಂದ ಸಿಬ್ಬಂದಿ ಬೇರೆಡೆ ಶಿಫ್ಟ್

    ಮೈಸೂರು: ನಗರದಲ್ಲಿನ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯಕ್ಕೆ ರಾಜ್ಯ ಸರಕಾರ ಕೊನೆಗೂ ಬೀಗ ಹಾಕಿದೆ.

    ಯುಜಿಸಿಯ ನಿಯಾಮಾವಳಿಗಳನ್ನು ಉಲ್ಲಂಘಿಸಿ ಔಟ್ ರೀಚ್ ಸೆಂಟರ್‍ಗಳನ್ನು ಆರಂಭಿಸುವ ಮೂಲಕ ಮುಕ್ತ ವಿವಿಯ ಮೂಲ ಆಶಯಕ್ಕೆ ಧಕ್ಕೆ ಮಾಡಲಾಗಿದೆ ಅಂತ ಯುಜಿಸಿ ಮಾನ್ಯತೆಯನ್ನ ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಇದರಿಂದ ಕಳೆದ ಎರಡು ವರ್ಷಗಳಿಂದ ವಿವಿಯಲ್ಲಿ ಪ್ರವೇಶಾತಿ ನಿಂತು ಎಲ್ಲಾ ಕೋರ್ಸ್ ಅರ್ಧಕ್ಕೆ ಬಂದ್ ಆಗಿದ್ದವು.

    ಯುಜಿಸಿ ಮಾನ್ಯತೆ ನವೀಕರಣಗೊಳಿಸಲು ಸರ್ಕಾರ ಪ್ರಯತ್ನಿಸಿತ್ತು. ಆದ್ರೆ, ನವೀಕರಣ ಸಾಧ್ಯತೆಯೇ ಇಲ್ಲದ ಕಾರಣ ಈಗ ವಿಶ್ವವಿದ್ಯಾನಿಲಯವನ್ನು ಮುಚ್ಚಲು ರಾಜ್ಯ ಸರಕಾರ ಆದೇಶಿಸಿದೆ. ಇದೀಗ ಹಾಲಿ ಇರುವ ಸಿಬ್ಬಂದಿ ವರ್ಗಾವಣೆ ಹೇಗೆ ಮಾಡಬೇಕು. ವಿವಿಯಲ್ಲಿನ ಬಳಕೆ ಆಗದೆ ಉಳಿದ ಅನುದಾನವನ್ನು ಹೇಗೆ ಬೇರೆ ವಿವಿಗಳಿಗೆ ಪರಿವರ್ತಿಸಬೇಕು ಎಂಬ 2 ವಿಚಾರಗಳಲ್ಲಿ ಸರಕಾರ ಹೇಗೆ ಆದೇಶ ನೀಡಬೇಕೆಂದು ತಿಳಿಸಲು ಉನ್ನತ ತಜ್ನರ ಸಮಿತಿಯನ್ನು ರಾಜ್ಯ ಸರಕಾರ ರಚಿಸಿದೆ.

  • ವಿವಿಗಳಲ್ಲಿರೋ ಹಿಂದೂ, ಮುಸ್ಲಿಂ ಪದಗಳನ್ನು ಕೈಬಿಡಿ: ಕೇಂದ್ರಕ್ಕೆ ಯುಜಿಸಿ ಸಲಹೆ

    ವಿವಿಗಳಲ್ಲಿರೋ ಹಿಂದೂ, ಮುಸ್ಲಿಂ ಪದಗಳನ್ನು ಕೈಬಿಡಿ: ಕೇಂದ್ರಕ್ಕೆ ಯುಜಿಸಿ ಸಲಹೆ

    ನವದೆಹಲಿ: ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‍ಯು) ಹಾಗೂ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು)ಗಳ ಹೆಸರಿನಲ್ಲಿರುವ ಹಿಂದೂ ಹಾಗೂ ಮುಸ್ಲಿಂ ಪದಗಳನ್ನು ಕೈಬಿಡುವಂತೆ ವಿಶ್ವ ವಿದ್ಯಾಲಯಗಳ ಧನ ಸಹಾಯ ಆಯೋಗದ (ಯುಜಿಸಿ) ಸಮಿತಿ ಸಲಹೆಯನ್ನು ನೀಡಿದೆ.

    “ಎಚ್” ಮತ್ತು “ಎಂ” ಪದಗಳು ಭಾರತೀಯ ಸಂವಿಧಾನದಲ್ಲಿ ಅಳವಡಿಸಲಾಗಿರುವ ಜ್ಯಾತ್ಯಾತೀತ ತತ್ವಕ್ಕೆ ಸರಿ ಹೊಂದುವುದಿಲ್ಲ ಎಂಬ ಕಾರಣಕ್ಕೆ ಯುಜಿಸಿ ಸಮಿತಿ ಶಿಫಾರಸ್ಸು ಮಾಡಿದೆ.

    ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಕೇಂದ್ರದ ಹತ್ತು ವಿಶ್ವವಿದ್ಯಾಲಗಳ ಕುರಿತು ಬಂದ ದೂರುಗಳನ್ನು ಆಧಾರಿಸಿ ವರದಿಯನ್ನು ನೀಡುವಂತೆ ಎಎಂಯು ಅಡಿಯಲ್ಲಿ ಯುಜಿಸಿ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಆದರೆ ಬಿಎಸ್‍ಯು ವಿಶ್ವವಿದ್ಯಾಲಯ ಈ ಪಟ್ಟಿಯಲ್ಲಿ ಇರಲಿಲ್ಲ ಆದರೂ ಸಲಹೆಯನ್ನು ಸಮಿತಿ ತನ್ನ ವರದಿಯಲ್ಲಿ ನೀಡಿದೆ. ಅಲ್ಲದೆ ಈ ವಿಶ್ವವಿದ್ಯಾಲಯಗಳನ್ನು ಅಲಿಗಢ ಮತ್ತು ಬನಾರಸ್ ವಿಶ್ವವಿದ್ಯಾಲಯ ಎಂದು ಕರೆಯಬಹುದು ಎಂದು ಸೂಚಿಸಿದೆ.

    ಯುಜಿಸಿ ಸಮಿತಿಯ ಅಡಿಯಲ್ಲಿ ಎಎಂಯು ಹೊರತುಪಡಿಸಿ ತ್ರಿಪುರ, ಪಾಂಡೀಚೆರಿ, ಅಲಹಾಬಾದ್ ವಿಶ್ವವಿದ್ಯಾಲಯ, ಜಮ್ಮು, ರಾಜಸ್ಥಾನ್ ಮತ್ತು ಜಾರ್ಖಂಡ್ ಕೇಂದ್ರಿಯ ವಿಶ್ವವಿದ್ಯಾಲಯ, ಉತ್ತರಾಖಂಡದ ಹೇಮವಾತಿ ನಂದನ್ ಗಡ್ವಾಲ್ ವಿಶ್ವವಿದ್ಯಾಲಯ, ವರ್ಧಾದ ಮಹಾತ್ಮ ಗಾಂಧೀ ಅಂತರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯ, ಮಧ್ಯಪ್ರದೇಶದ ಹರಿಸಿಂಗ್ ಗೌರ್ ವಿಶ್ವವಿದ್ಯಾಲಯದ ಆಡಳಿತಾತ್ಮಕ, ಸಂಶೋಧನ, ಆರ್ಥಿಕ ಮತ್ತು ಹಣಕಾಸು ವಿಷಯಗಳ ಲೆಕ್ಕಪರಿಶೋಧನೆಯನ್ನು ಮಾಡಲಾಯಿತು.

    ಸಮಿತಿಯಿಂದ ವಿಶ್ವವಿದ್ಯಾಲಯಗಳ ಮೂಲಭೂತ ಅಗತ್ಯತೆಗಳು ಹಾಗೂ ಆರ್ಥಿಕತೆಯ ಕುರಿತು ವರದಿಯನ್ನು ಸಿದ್ಧಪಡಿಸಲಾಗಿದೆ. ವಿಶೇಷವಾಗಿ ಎಎಂಯು ವಿಶ್ವವಿದ್ಯಾಲದಲ್ಲಿ ಕೈಗೊಂಡಿರುವ ನೇಮಕಾತಿಗಳಲ್ಲಿ ಉಂಟಾಗಿರುವಂತಹ ಭ್ರಷ್ಟಚಾರದ ಕುರಿತು ತನ್ನ ವರದಿಯಲ್ಲಿ ಮಾಹಿತಿಯನ್ನು ನೀಡಿದೆ. ಇದುವರೆಗೂ ಎಎಂಯುನಲ್ಲಿ ನೇಮಕವಾದ ಎಲ್ಲಾ ಬೋಧಕರು ಸಹ ಅದೇ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದವರಾಗಿದ್ದಾರೆ. ಅಲ್ಲದೆ ಹುದ್ದೆಗಳು ಖಾಲಿ ಇಲ್ಲದಿದ್ದರೂ ಸಹ ಆಕ್ರಮವಾಗಿ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುವ ಕುರಿತ ದೂರಗಳ ಬಗ್ಗೆಯು ವರದಿಯನ್ನು ನೀಡಲು ಯುಜಿಸಿ ಸೂಚಿಸಿದೆ.

  • ಯುಜಿಸಿ ಯಿಂದ ಮಾನ್ಯತೆ ಕಳೆದುಕೊಳ್ಳುವ ಭೀತಿಯಲ್ಲಿ ಬೆಂಗಳೂರು ವಿವಿ!

    ಯುಜಿಸಿ ಯಿಂದ ಮಾನ್ಯತೆ ಕಳೆದುಕೊಳ್ಳುವ ಭೀತಿಯಲ್ಲಿ ಬೆಂಗಳೂರು ವಿವಿ!

    ಬೆಂಗಳೂರು: ಯುಜಿಸಿಯಿಂದ ಮೈಸೂರಿನ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‍ಓಯು) ಮಾನ್ಯತೆಯನ್ನು ಕಳೆದುಕೊಂಡಿದೆ. ಇಂದು ಬೆಂಗಳೂರು ವಿಶ್ವವಿದ್ಯಾಲಯ ತನ್ನ ನಿರ್ಲಕ್ಷ್ಮದಿಂದ ಯುಜಿಸಿಯಿಂದ ಮಾನ್ಯತೆ ಕಳೆದುಕೊಳ್ಳುವ ಭೀತಿಯಲ್ಲಿದೆ.

    ಬೆಂಗಳೂರು ವಿವಿ ದೂರ ಶಿಕ್ಷಣ ವಿಭಾಗ ನವೀಕರಣ ಮಾಡಿಕೊಳ್ಳಲು ಎರಡು ವರ್ಷಗಳ ಅವಧಿಯನ್ನು ತೆಗೆದುಕೊಂಡಿತ್ತು. ಆದರೆ ಅವಧಿ ಮುಕ್ತಾಯವಾಗುತ್ತಿದ್ದರು, ಕುಲಪತಿ ಮತ್ತು ಕುಲಸಚಿವರು ಇನ್ನೂ ಯಾವುದೇ ದಾಖಲಾತಿಯನ್ನು ನೀಡಿಲ್ಲ. ಈವರೆಗೂ ನವೀಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಯುಜಿಸಿ ಜೊತೆ ಮಾತುಕತೆ ಕೂಡ ನಡೆಸಿಲ್ಲ. ಹೀಗಾಗಿ ನಿಯಮ ಪಾಲನೆ ಮಾಡದ ಹಿನ್ನೆಲೆ ಬೆಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣ ಕೋರ್ಸ್ ಅನ್ನು ಕಳೆದುಕೊಳ್ಳುವ ಸಾಧ್ಯತೆಗಳು ಕಂಡುಬರುತ್ತಿವೆ. ಇದು ಅಧಿಕಾರಿಗಳ ನಿರ್ಲಕ್ಷ್ಮದಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನಾಶವಾಗುತ್ತಿದೆ.

    ಬೆಂಗಳೂರು ವಿಶ್ವವಿದ್ಯಾಲಯ ನಿಯಮ ಪಾಲನೆ ಮಾಡದೇ ಇದ್ದ ಕಾರಣಕ್ಕೆ 2012-15 ವರೆಗೆ ಯುಜಿಸಿಯ ಮಾನ್ಯತೆ ರದ್ದು ಮಾಡಲಾಗಿತ್ತು. ನಂತರ ಕುಲಪತಿಯಾಗಿದ್ದ ಪ್ರೊ.ತಿಮ್ಮೆಗೌಡರು ಯುಜಿಸಿಗೆ ಸೂಕ್ತ ದಾಖಲೆ ನೀಡಿ 2016-17, 2017-18 ನೇ ಸಾಲಿನ ಎರಡು ವರ್ಷಗಳ ಅವಧಿಗೆ ನವೀಕರಣ ಮಾಡಿಸಿಕೊಂಡರು. ಆದರೆ ಈಗ ಇದರ ಅವಧಿ ಸೆಪ್ಟೆಂಬರ್ 23 ಕ್ಕೆ ಮುಗಿಯುತ್ತಿದ್ದು, ಈವರೆಗೂ ಯುಜಿಸಿಗೆ ಅಗತ್ಯ ದಾಖಲೆಯನ್ನು ಒದಗಿಸಿ ನವೀಕರಣ ಮಾಡಿಕೊಂಡಿಲ್ಲ.

    ಈ ಬಗ್ಗೆ ದೂರ ಶಿಕ್ಷಣ ವಿಭಾಗದ ನಿರ್ದೇಶಕರು ದಾಖಲಾತಿ ಒದಗಿಸೋದನ್ನು ತಡಮಾಡಿದೆ. ಅಂತಿಮವಾಗಿ ಯುಜಿಸಿ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲು ಒಂದು ತಿಂಗಳು ಅವಧಿಯನ್ನು ವಿಸ್ತರಿಸಿದ್ದು, ಅಷ್ಟರಲ್ಲಿ ದಾಖಲಾತಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ದೂರ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳ ಜೀವನ ಅತಂತ್ರವಾಗಲಿದೆ ಎಂದು ದೂರ ಶಿಕ್ಷಣ ವಿಭಾಗದ ನಿರ್ದೇಶಕ ಷಡಾಕ್ಷರಿ ತಿಳಿಸಿದ್ದಾರೆ.

    ಸದ್ಯಕ್ಕೆ ದೂರ ಶಿಕ್ಷಣ ವಿಭಾಗದ ನಿರ್ದೇಶಕರ ಅವಧಿ ಮುಕ್ತಾಯವಾಗಿದೆ. ಆದ್ದರಿಂದ ಹೊಸ ನಿರ್ದೇಶಕರ ಹುಡುಕಾಟದಲ್ಲಿ ವಿಶ್ವವಿದ್ಯಾಲಯವಿದೆ.

     

  • ಮುಕ್ತ ವಿವಿಗೆ ಇನ್ನು 3 ವರ್ಷ ಮಾನ್ಯತೆ ಸಿಗೋದು ಕಷ್ಟ!

    ಮುಕ್ತ ವಿವಿಗೆ ಇನ್ನು 3 ವರ್ಷ ಮಾನ್ಯತೆ ಸಿಗೋದು ಕಷ್ಟ!

    ಮೈಸೂರು: ಕರ್ನಾಟಕ ಮುಕ್ತ ವಿವಿ ಮಾನ್ಯತೆ ಕಳೆದುಕೊಂಡು 4 ವರ್ಷಗಳೆ ಕಳೆದಿದೆ. ಇನ್ನು ಮೂರು ವರ್ಷ ಮಾನ್ಯತೆ ಸಿಗೋದು ಕಷ್ಟ ಎನ್ನುವ ವಿಚಾರವು, ಇದೀಗ ಬೆಳಕಿಗೆ ಬಂದಿದ್ದು ಸ್ವತ: ರಾಜ್ಯ ಹೆಚ್ಚುವರಿ ಕಾರ್ಯದರ್ಶಿಯವರೇ ಟ್ವೀಟ್ ಮೂಲಕ, ತಮ್ಮ ಅಸಹಾಯಕತೆ ಪ್ರದರ್ಶಿಸಿದ್ದಾರೆ.

    ಯಾರು, ಏನೇ ಮಾಡಿದ್ರು ಇನ್ನೆರಡು ಶೈಕ್ಷಣಿಕ ವರ್ಷ ಮಾನ್ಯತೆ ಸಿಗೋದು ಕಷ್ಟ ಎನ್ನುತ್ತಿರೋ ಅಧಿಕಾರಿಗಳ ಮಾತುಗಳಿಂದ, ಮುಕ್ತ ವಿವಿ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಈ ಮಧ್ಯೆ ಮುಂದಿನ ದೆಹಲಿ ಪ್ರವಾಸದಲ್ಲಿ ಯುಜಿಸಿ ಅಧಿಕಾರಿಗಳನ್ನು ಭೇಟಿ ಮಾಡುವುದಾಗಿ ಭರವಸೆ ನೀಡಿರುವ ಸಿಎಂ, ಮಾನ್ಯತೆ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

    ಮುಕ್ತ ವಿವಿ ಯುಜಿಸಿ ನಿಯಮಗಳನ್ನ ಉಲ್ಲಂಘಿಸಿರುವುದನ್ನ ನೋಡಿದರೆ, ಸದ್ಯಕ್ಕೆ ಮುಕ್ತ ವಿವಿಗೆ ಮಾನ್ಯತೆ ಸಿಗೋದು ಕಷ್ಟಸಾಧ್ಯ. ಹೀಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಜ್ಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರತ್ನ ಪ್ರಭ, ಮುಕ್ತ ವಿವಿಗೆ ಮಾನ್ಯತೆ ಸಿಗುವ ವಿಚಾರವಾಗಿ, ಯಾರು ಏನೂ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹೇಳಿದ್ದಾರೆ.

    2013ರಲ್ಲಿ ಮಾನ್ಯತೆ ಕಳೆದುಕೊಂಡಿರುವ ಮುಕ್ತ ವಿವಿ. 2017-18 ಹಾಗೂ 2018-19 ಸಾಲಿಗೂ ಮಾನ್ಯತೆ ಪಡೆಯುವುದು ಅನುಮಾನವಾಗಿದೆ. ಅಲ್ಲದೆ ಮುಕ್ತ ವಿವಿಗೆ ಯುಜಿಸಿಯಿಂದ ಹೊಸ ನಿಯಮವಳಿಗಳು ಬಂದರೆ ಮಾತ್ರ ಮಾನ್ಯತೆ ಸಿಗಲು ಅವಕಾಶ ಇದೆ ಎಂದು ಟ್ವೀಟ್ ಮಾಡಿದ್ದಾರೆ. ಅವರ ಈ ಟ್ವೀಟ್ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ವಿವಿಯಲ್ಲಿ ಪದವಿ ಪಡೆದವರ ಎದೆಯಲ್ಲಿ ನಡುಕ ಹುಟ್ಟಿಸಿದೆ.

    ಈ ವಿಚಾರವಾಗಿ ಇಂದು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಕ್ತ ವಿವಿ ಮಾನ್ಯತೆ ರದ್ದಾಗಲು ಸರ್ಕಾರ ಕಾರಣವಲ್ಲ. ಹಿಂದೆ ಇದ್ದ ಕುಲಪತಿಗಳ ಮಾಡಿದ ತಪ್ಪಿನಿಂದಾಗಿ ಮಾನ್ಯತೆ ರದ್ದಾಗಿದೆ. ಈ ಬಗ್ಗೆ ಈಗಾಗಲೆ ಕೇಂದ್ರಕ್ಕೆ ಪತ್ರ ಬರೆದಿದ್ದು. ಮುಂದಿನ ಬಾರಿ ದೆಹಲಿ ಭೇಟಿಯ ಸಂದರ್ಭದಲ್ಲಿ ಯುಜಿಸಿ ಅಧಿಕಾರಿಗಳನ್ನು ಭೇಟಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.