Tag: udupi mutt

  • ಹಿಂದೂ ಸಂಕೇತ ಬಳಸಿ, ಹಿಂದೂ ಸಮಾಜದ ಮೇಲೆ ದುಷ್ಕೃತ್ಯ – ಪೇಜಾವರ ಶ್ರೀ ಬೇಸರ

    ಹಿಂದೂ ಸಂಕೇತ ಬಳಸಿ, ಹಿಂದೂ ಸಮಾಜದ ಮೇಲೆ ದುಷ್ಕೃತ್ಯ – ಪೇಜಾವರ ಶ್ರೀ ಬೇಸರ

    ಉಡುಪಿ: ಹಿಂದೂ ಸಂಕೇತಗಳನ್ನು (Hindu Symbols) ಬಳಸಿ ಹಿಂದೂ ಸಮಾಜದ ಮೇಲೆ ದೃಷ್ಕೃತ್ಯಗಳನ್ನು ನಡೆಸಲಾಗುತ್ತಿದ್ದು, ಪ್ರತಿಯೊಬ್ಬರೂ ಸದಾ ಜಾಗೃತರಾಗಿಬೇಕು ಎಂದು ಉಡುಪಿ ಮಠದ (Udupi Mutt) ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ (Vishwaprasanna Teertha Swamiji) ಎಚ್ಚರಿದ್ದಾರೆ.

    ಉಡುಪಿ ಮಠದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಅವರು, ಹಿಂದೂ ಸಮಾಜದ ಮೇಲೆ ದುಷ್ಕೃತ್ಯ ಹೇರುತ್ತಿದ್ದಾರೆ. ಮಂಗಳೂರು ಬಾಂಬರ್ (Mangaluru Bomb Blast) ಉಡುಪಿ ಮಠದ ಸುತ್ತಮುತ್ತ ಓಡಾಟ ನಡೆಸಿದ್ದಾನೆ ಅನ್ನೋ ಮಾಹಿತಿ ಇದೆ. ಕರಾವಳಿ ಭಾಗದ ಉಗ್ರ ಕೃತ್ಯಗಳು ಕುಕ್ಕರ್ ಬಾಂಬ್ ಸ್ಫೋಟದ ವೇಳೆ ಗೊತ್ತಾಗಿದೆ. ಆದ್ದರಿಂದ ಕರಾವಳಿ ಭಾಗದ ಜನರು ಸದಾ ಜಾಗೃತರಾಗಿರಬೇಕು. ಸಂದೇಹಾಸ್ಪದ ಚಟುವಟಿಕೆಗಳು ಕಂಡ ಕೂಡಲೇ ಎಚ್ಚೆತ್ತುಕೊಂಡು ಪೊಲೀಸರಿಗೆ ಮಾಹಿತಿ ನೀಡಬೇಕು. ಸರ್ಕಾರ ಸಂಬಂಧಿಸಿದ ಇಲಾಖೆಗೆ ಕೂಡಲೇ ಸೂಚನೆ ನೀಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಂಧ್ರ ಸಿಎಂ ಜಗನ್ ಸಹೋದರಿ ಅರೆಸ್ಟ್

    ಉತ್ಥಾನ ದ್ವಾದಶಿ ಬಳಿಕ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ಯಕ್ಷಗಾನ, ಕೋಲ, ಉತ್ಸವ, ಕಂಬಳ, ದೀಪೋತ್ಸವ, ನಾಗಮಂಡಲದಂತಹ ಹಲವಾರು ಉತ್ಸವಗಳು ನಡೆಯುತ್ತಿವೆ. ಕಾರ್ಯಕ್ರಮಗಳಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಅನಾಹುತ ನಡೆದಲ್ಲಿ ನಮ್ಮ ಸಮಾಜಕ್ಕೆ ದೊಡ್ಡ ಹಾನಿಯುಂಟಾಗುತ್ತದೆ. ಹಿಂದೂ ಸಮಾಜದ ಮೇಲೆ ದುಷ್ಕೃತ್ಯ ಹೇರುವಂತಹ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಪ್ರತಿಯೊಬ್ಬರೂ ಸದಾ ಜಾಗೃತರಾಗಿಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಲೇಖಕ ಚೇತನ್ ಭಗತ್, ನಟಿ ಉರ್ಫಿ ಜಾವೇದ್ ಜಟಾಪಟಿ: ಸ್ಕ್ರೀನ್ ಶಾಟ್ ಶೇರ್

    ಹಿಂದೂ ಸಂಕೇತ ಬಳಸಿ ಇಂತಹ ಕೃತ್ಯ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಆದ್ದರಿಂದ ಮೊಬೈಲ್ (Mobile) ಹಾಗೂ ದಾಖಲೆಗಳು ಕಳೆದುಹೋದರೆ ಸಂಬಂಧಪಟ್ಟ ಇಲಾಖೆಗೆ ತಿಳಿಸಬೇಕು. ಇಲ್ಲವಾದರೆ, ಇಂತಹ ಸಂದರ್ಭದಲ್ಲಿ ಸಂದೇಹಕ್ಕೆ ಒಳಗಾಗಬೇಕಾಗುತ್ತದೆ ಎಂದು ತಿಳಿವಳಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೋವಿಡ್ ಕಾಲಘಟ್ಟದಲ್ಲಿ ಸರಳ ಪರ್ಯಾಯ: ಕೃಷ್ಣಾಪುರ ವಿದ್ಯಾಸಾಗರ ತೀರ್ಥ ಸ್ವಾಮೀಜಿ

    ಕೋವಿಡ್ ಕಾಲಘಟ್ಟದಲ್ಲಿ ಸರಳ ಪರ್ಯಾಯ: ಕೃಷ್ಣಾಪುರ ವಿದ್ಯಾಸಾಗರ ತೀರ್ಥ ಸ್ವಾಮೀಜಿ

    ಉಡುಪಿ: ಕೃಷ್ಣಾಪುರ ಮಠದ ಪರ್ಯಾಯ ಅಷ್ಟಮಠಗಳ ಇತಿಹಾಸದಲ್ಲಿ 251ನೇ ಪರ್ಯಾಯ ಆಗಿರುತ್ತದೆ. ಕೋವಿಡ್ ಕಾಲಘಟ್ಟದಲ್ಲಿ ನಮ್ಮ ಪರ್ಯಾಯ ಬಂದಿರುವುದರಿಂದ ಅದೇ ಕಾರಣಕ್ಕಾಗಿ ಸರಳವಾಗಿ ನಡೆಯಲಿದೆ ಜನರೆಲ್ಲರೂ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಿ ಎಂದು ಭಾವೀ ಪರ್ಯಾಯ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದರು.

    ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಧ್ವಾಚಾರ್ಯರು ಮತ್ತು ವಾದಿರಾಜಸ್ವಾಮಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಪರ್ಯಾಯ ನಡೆಸುತ್ತೇವೆ. ಎಲ್ಲರೂ ಶ್ರೀಕೃಷ್ಣ ಮುಖ್ಯಪ್ರಾಣರ ಅನುಗ್ರಹಕ್ಕೆ ಪಾತ್ರರಾಗಬೇಕು. ಒಬ್ಬ ವ್ಯಕ್ತಿಗಾಗಿ ಪರ್ಯಾಯ ಮಾಡುತ್ತಿಲ್ಲ. ದೇವರ ಪೂಜೆಗಾಗಿ ಪರ್ಯಾಯ ಮಹೋತ್ಸವವನ್ನು ಮಾಡುತ್ತಿದ್ದೇವೆ. ಎರಡು ವರ್ಷ ಲೋಕದ ಕಲ್ಯಾಣಕ್ಕಾಗಿ ಶ್ರೀಕೃಷ್ಣನಿಗೆ ಪ್ರಾರ್ಥನೆ ಪೂಜೆಯನ್ನು ಮಾಡುತ್ತೇವೆ ಎಂದರು. ಇದನ್ನೂ ಓದಿ: ಉಡುಪಿ ಪೇಟೆಯಲ್ಲಿ ಓಮಿಕ್ರಾನ್ ಓಡಾಟ – ಜನಜಾಗೃತಿ ಮೂಡಿಸಿದ ಪಬ್ಲಿಕ್ ಹೀರೋ

    ಆರೋಗ್ಯ ಇಲಾಖೆ ಕೊಟ್ಟಂತಹ ಅಧಿಸೂಚನೆಗಳನ್ನು ಪಾಲಿಸಿ, ಭಾಗವಹಿಸಿ ಲೋಕಕ್ಕೆ ಕಲ್ಯಾಣ ಆಗುತ್ತದೆ. ಜನರೆಲ್ಲರೂ ಸರ್ಕಾರದ ನಿಯಮವನ್ನು ಪಾಲಿಸಿದರೆ ನಮ್ಮ ಮನಸ್ಸಿಗೂ ಸಂತೋಷವಾಗುತ್ತದೆ. ಲೋಕಕ್ಕೆ ಉಪಕಾರ ಮಾಡಿದಂತೆ ಆಗುತ್ತದೆ. ಹತ್ತು ಜನರ ಕಲ್ಯಾಣೋದ್ದೇಶದಿಂದ ನಾವು ಪರ್ಯಾಯದ ಪೀಠಕ್ಕೆ ಬರುತ್ತಿದ್ದೇವೆ. ನಮ್ಮಿಂದ ಇತರೆ ಹತ್ತು ಜನಕ್ಕೆ ಯಾವುದೇ ಸಮಸ್ಯೆಗಳು ಆಗಬಾರದು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. ಇದನ್ನೂ ಓದಿ: ಕೋವಿಡ್ ಎಫೆಕ್ಟ್ ದಾಖಲೆ ಮಾರಾಟ – 358 ಕೋಟಿ ಡೋಲಾ ಟ್ಯಾಬ್ಲೆಟ್‍ಗಳು ಮಾರಾಟ

  • ಉಡುಪಿಯಲ್ಲಿ ಶ್ರೀರಾಮಸೇನೆ ಪ್ರತಿಭಟನೆ: ಪರಧರ್ಮ ದ್ವೇಷದ ಪರಮಾವಧಿ ಎಂದ ಪೇಜಾವರ ಶ್ರೀ

    ಉಡುಪಿಯಲ್ಲಿ ಶ್ರೀರಾಮಸೇನೆ ಪ್ರತಿಭಟನೆ: ಪರಧರ್ಮ ದ್ವೇಷದ ಪರಮಾವಧಿ ಎಂದ ಪೇಜಾವರ ಶ್ರೀ

    ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ನಡೆದ ಇಫ್ತಾರ್ ಕೂಟ ಮತ್ತು ನಮಾಜ್ ಕಾರ್ಯಕ್ರಮವನ್ನು ಖಂಡಿಸಿ ಉಡುಪಿಯಲ್ಲಿ ಶ್ರೀರಾಮಸೇನೆ ಭಜನೆ- ಪೂಜೆ ಮಾಡಿ ಪ್ರತಿಭಟನೆ ನಡೆಸಿದೆ. ನಗರದ ಸರ್ವೀಸ್ ಬಸ್ ನಿಲ್ದಾಣ ಸಮೀಪದ ಕ್ಲಾಕ್ ಟವರ್ ಮುಂಭಾಗ ಈ ಪ್ರತಿಭಟನೆ ನಡೆಯಿತು.

    ಶ್ರೀರಾಮಸೇನೆ ಸಂಘಟನೆಗೆ ಹಿಂದೂ ಜನಜಾಗೃತಿ ಸಮಿತಿ ಬೆಂಬಲಿಸಿತು. ಕ್ಲಾಕ್ ಟವರ್ ಮುಂಭಾಗ ಜಮಾಯಿಸಿದ ನೂರಾರು ಕಾರ್ಯಕರ್ತರು ಘಟನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ದೇವರ ನಾಮ ಮತ್ತು ಭಜನೆಗಳನ್ನು ಹಾಡುವ ಮೂಲಕ ಇಫ್ತಾರ್ ಕೂಟ ಮತ್ತು ನಮಾಜ್ ಪ್ರಕ್ರಿಯೆಯನ್ನು ತೀವ್ರವಾಗಿ ಖಂಡಿಸಿದರು.

    ಈ ಸಂದರ್ಭ ಮಾತನಾಡಿದ ಶ್ರೀರಾಮ ಸೇನೆಯ ಮಂಗಳೂರು ಪ್ರಾಂತ್ಯ ಪ್ರಮುಖ್, ಇಫ್ತಾರ್ ಕೂಟಕ್ಕೆ ನಮ್ಮ ವಿರೋಧವಿಲ್ಲ. ಮುಂದೆ ನಮಾಜ್ ಮಠದ ವ್ಯಾಪ್ತಿಯಲ್ಲಿ ನಡೆಯಬಾರದು. ಪೇಜಾವರ ಶ್ರೀಗಳು ನಮ್ಮ ಅತ್ಯುನ್ನತ ಗುರುಗಳು. ಅವರಿಗೆ ಸಮಾನವಾದ ಗುರುಗಳು ಮತ್ತೊಬ್ಬರಿಲ್ಲ. ಆದ್ರೆ ನಮಾಜ್ ಮಾಡಿದ್ದು ಸರಿಯಲ್ಲ ಎಂದರು. ಮುಂದಿನ ಬಾರಿ ಬೇರೆ ಕಡೆಯಲ್ಲಿ ಇಫ್ತಾರ್ ಆಯೋಜಿಸಿ. ಆವಾಗ ಶ್ರೀರಾಮ ಸೇನೆ ಕೂಡಾ ಪಾಲ್ಗೊಳ್ಳುತ್ತದೆ ಎಂದು ಹೇಳಿದರು.

    ಮಠದಲ್ಲಿ ನಡೆದ ಇಫ್ತಾರ್‍ಗೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ನಮ್ಮ ಮನಸ್ಸಿಗೆ ಆದ ನೋವನ್ನು ಈ ಮೂಲಕ ತೋರ್ಪಡಿಸಿದ್ದೇವೆ. ಹಿಂದೂ ಸಮಾಜಕ್ಕಾದ ನೋವನ್ನು ಈ ರೀತಿಯಲ್ಲಿ ತೋಡಿಕೊಂಡಿದ್ದೇವೆ ಎಂದು ವಕ್ತಾರ ಜಯರಾಮ ಅಂಬೇಕಲ್ ಹೇಳಿದರು.

    ಪರಧರ್ಮ ದ್ವೇಷದ ಪರಮಾವಧಿ: ಶ್ರೀರಾಮ ಸೇನೆಯ ಪ್ರತಿಭಟನೆಯ ವಿರುದ್ಧ ಗರಂ ಆಗಿ ಪೇಜಾವರ ಶ್ರೀ ಪ್ರತಿಕ್ರಿಯಿಸಿ, ಇದು ಪರಧರ್ಮ ದ್ವೇಷದ ಪರಮಾವಧಿ ಎಂದು ಚಾಟಿ ಬೀಸಿದರು. ಮುತಾಲಿಕ್ ನೀಡಿದ ಹಿಂಸಾತ್ಮಕ- ರಕ್ತಪಾತದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ. ನನ್ನ ಧೋರಣೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಇಫ್ತಾರ್ ಮಾಡಿದ್ದರಿಂದ ಧರ್ಮಕ್ಕೆ ಏನು ನಷ್ಟವಾಯ್ತು, ಏನು ಹಾನಿಯಾಯ್ತು..? ಎಂದು ಪ್ರಶ್ನೆ ಹಾಕಿದ್ದಾರೆ. ಇದನ್ನೆಲ್ಲ ವಿರೋಧಿಸುವವರಿಗೆ ಶಾಸ್ತ್ರವೇ ಗೊತ್ತಿಲ್ಲ. ಪ್ರತಿಭಟನೆಗಳಿಂದ ನಾನು ವಿಚಲಿತನಾಗಿಲ್ಲ ಎಂದರು.

    ಇದನ್ನೂ ಓದಿ: ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್

    ಕೃಷ್ಣಮಠವನ್ನು ಶುದ್ಧೀಕರಿಸುವ ಪ್ರಶ್ನೆಯೇ ಇಲ್ಲ ಎಂದ ಪೇಜಾವರ, ದೇವರ ಪ್ರಾರ್ಥನೆ ಮಾಡಿದರೆ ಅದು ತಪ್ಪಾ..? ಅದಕ್ಕೆ ಶುದ್ಧ ಮಾಡಬೇಕಾ. ಧರ್ಮಶಾಸ್ತ್ರಗಳ ವಿರೋಧ ನಾನು ಮಾಡಿಲ್ಲ. ಮಠವನ್ನು ಶುದ್ಧ ಮಾಡಲು ಕಾರಣ ಬೇಕಲ್ಲ. ಹಿಂದೂ ಧರ್ಮದಲ್ಲಿ ದ್ವೈತ- ಅದ್ವೈತ- ವಿಶಿಷ್ಟಾದ್ವೈತದ ಸಹಬಾಳ್ವೆ ಇದ್ದಂತೆ, ಬೇರೆ ಧರ್ಮಗಳ ನಡುವೆ ಸಹಿಷ್ಣುತೆ ಇದ್ದರೇನು ತಪ್ಪು ಎಂದು ಪ್ರಶ್ನಸಿದ್ದಾರೆ. ಧೈರ್ಯ ಇದ್ದರೆ ನನ್ನಲ್ಲಿ ಈ ಬಗ್ಗೆ ಚರ್ಚೆ ಮಾಡಲು ಬನ್ನಿ ಎಂದು ಪೇಜಾವರಶ್ರೀ ಮುತಾಲಿಕ್ ಗೆ ಹಾಗೂ ಶ್ರೀರಾಮ ಸೇನೆಗೆ ಶ್ರೀಗಳು ಬಹಿರಂಗ ಸವಾಲು ಹಾಕಿದ್ದಾರೆ.

    ಮುಸ್ಲಿಂ ಸಮುದಾಯದ ಮುಖಂಡ ರಹೀಂ ಉಚ್ಚಿಲ ಶ್ರೀಗಳ ಮಾತಿಗೆ ದನಿಗೂಡಿಸಿ, ರಕ್ತಪಾತ ಮಾಡುವುದಾದರೆ ಮೊದಲು ನಮ್ಮ ಮೇಲೆ ಮಾಡಲಿ. ನಾವು 2 ಸಾವಿರ ಮಂದಿ ಮುಸ್ಲಿಮರು ಮಠದ ಪರ ಇದ್ದೇವೆ. ವಿಶ್ವಮಟ್ಟದಲ್ಲಿ ಉಡುಪಿಗೆ ಪ್ರಖ್ಯಾತಿ ಇದೆ. ರಕ್ತಪಾತ ಎಂದು ಮುತಾಲಿಕ್ ಯಾರ ವಿರುದ್ಧ ಮಾತನಾಡುತ್ತಿದ್ದಾರೆ..? ಉಳ್ಳಾಲದ ದರ್ಗಾದ ಗರ್ಭಗುಡಿಯ ಒಳಗೆ ಬರುವಂತೆ ಪ್ರಮೋದ್ ಮುತಾಲಿಕ್‍ಗೆ ಸವಾಲು ಹಾಕಿದ್ರು.