Tag: Udupi Krishna Mutt

  • ಉಡುಪಿ ಕೃಷ್ಣ ಮಠಕ್ಕೆ ಸುಭದ್ರೆ ಕೊಡಲು ನಿರಾಕರಿಸಿದ ಹೊನ್ನಾಳಿ ಹಿರೇಕಲ್ಮಠ – ಸ್ಥಳದಲ್ಲಿ ಬಿಗುವಿನ ವಾತಾವರಣ

    ಉಡುಪಿ ಕೃಷ್ಣ ಮಠಕ್ಕೆ ಸುಭದ್ರೆ ಕೊಡಲು ನಿರಾಕರಿಸಿದ ಹೊನ್ನಾಳಿ ಹಿರೇಕಲ್ಮಠ – ಸ್ಥಳದಲ್ಲಿ ಬಿಗುವಿನ ವಾತಾವರಣ

    ದಾವಣಗೆರೆ: ಹೊನ್ನಾಳಿ ಹಿರೇಕಲ್ಮಠದ (Honnali Hirekal Mutt) ಆನೆ ಸುಭದ್ರೆಯನ್ನು (32) (Subhadre Elephant) ಕೊಂಡೊಯ್ಯಲು ಬಂದಿದ್ದ ಉಡುಪಿ ಮಠದ (Udupi Krishna Mutt) ಸಿಬ್ಬಂದಿಗೆ ನಿರಾಸೆಯಾಗಿದೆ. ಸುಭದ್ರೆಯನ್ನು ಕೊಡಲು ಹಿರೇಕಲ್ಮಠದಿಂದ ನಿರಾಕರಿಸಲಾಗಿದೆ.

    ಸುಭದ್ರೆಯನ್ನು ಕರೆದಕೊಂಡು ಹೋಗಲು ಏಕಾಏಕಿ ಲಾರಿ ಸಹಿತ ಉಡುಪಿ ಮಠದ ಸಿಬ್ಬಂದಿ ಬಂದಿದ್ದರು. ಈ ವೇಳೆ, ಮಠದ ಆವರಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ನಡುವೆ ಪ್ರವೇಶಿಸಿ, ಸಾಮರಸ್ಯದಿಂದ ಎಲ್ಲರೂ ನಡೆದುಕೊಳ್ಳೋಣ ಎಂದು ಮನವಿ ಮಾಡಿದರು. ಇದನ್ನೂ ಓದಿ: ದಸರಾ ಆನೆಗಳ ತಬ್ಬಿಕೊಂಡು ಯುವತಿ ರೀಲ್ಸ್‌: ದುಡ್ಡಿದ್ದವರ ದರ್ಬಾರ್‌ಗೆ ಅಧಿಕಾರಿಗಳು ಸಾಥ್‌?

    ಬಳಿಕ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರಿಗೆ ಕರೆ ಮಾಡಿ ಸುಭದ್ರೆಯನ್ನು ಹೊನ್ನಾಳಿ ಮಠದಲ್ಲಿ ಉಳಿಸುವಂತೆ ಮನವಿ ಮಾಡಲಾಯಿತು. ಇದಕ್ಕೆ ಸಚಿವರು ಸಹಮತ ವ್ಯಕ್ತಪಡಿಸಿದರು. ಇದರಿಂದ ಸಾವಿರಾರು ಭಕ್ತರ ಆಪೇಕ್ಷೆಯಂತೆ ಹೊನ್ನಾಳಿ ಮಠದಲ್ಲಿ ಸುಭದ್ರೆ ಉಳಿದುಕೊಂಡಿದೆ.

    ಯಾರು ಈ ಸುಭದ್ರೆ?
    ಈ ಹಿಂದೆ ಸುಭದ್ರೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಸೇರಿತ್ತು. ಆಗ ಆನೆ ಕಾಲಿಗೆ ಗ್ಯಾಂಗ್ರೀನ್ ಆಗಿ ಬಳಲುತ್ತಿತ್ತು. ಇದರಿಂದ ಸಾಕಲು ಆಗಲ್ಲ ಎಂದು 2019ರಲ್ಲಿ ಅರಣ್ಯ ಇಲಾಖೆಗೆ ವಾಪಸ್ ಮಾಡಲಾಗಿತ್ತು. ಬಳಿಕ ಶಿವಮೊಗ್ಗದ ಸಕ್ರೆಬೈಲ್‍ನಲ್ಲಿ ಆನೆಯನ್ನು ಇರಿಸಲಾಗಿತ್ತು. ಹೊನ್ನಾಳಿ ಹಿರೇಕಲ್ಮಠ, ಆನೆಗೆ 12.20 ಲಕ್ಷ ರೂ. ಖರ್ಚು ಮಾಡಿ ಚಿಕಿತ್ಸೆ ಕೊಡಿಸಿತ್ತು. ಆರೈಕೆಯಿಂದ 4 ಟನ್ ಇದ್ದ ಆನೆ ಈಗ 8 ಟನ್ ಆಗಿದೆ. ಇದನ್ನೂ ಓದಿ: ದಸರಾ ನಿಮಿತ್ತ ಸಿಡಿಮದ್ದು ತಾಲೀಮು – ವಿಚಲಿತಗೊಂಡ ಗಜಪಡೆಯ ಶ್ರೀಕಂಠ, ಹೇಮಾವತಿ

  • ಚಂದ್ರಗ್ರಹಣ; ಉಡುಪಿ ಕೃಷ್ಣ ಮಠದಲ್ಲಿ ಹಲವು ಬದಲಾವಣೆ

    ಚಂದ್ರಗ್ರಹಣ; ಉಡುಪಿ ಕೃಷ್ಣ ಮಠದಲ್ಲಿ ಹಲವು ಬದಲಾವಣೆ

    ಉಡುಪಿ: ಚಂದ್ರಗ್ರಹಣ (Chandra Grahan) ಇರುವುದರಿಂದ ಉಡುಪಿ ಶ್ರೀಕೃಷ್ಣ ಮಠದಲ್ಲಿ (Udupi Krishna Mutt) ಪೂಜೆ ಪುನಸ್ಕಾರ, ಅನ್ನಪ್ರಸಾದ ವಿಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

    10:30ಕ್ಕೆ ಕೃಷ್ಣಮಠದಲ್ಲಿ ಭೋಜನ ವ್ಯವಸ್ಥೆ ಆರಂಭವಾಗಲಿದ್ದು, ಊಟ 12 ಗಂಟೆಗೆ ಮುಕ್ತಾಯವಾಗುತ್ತದೆ. ಮಠದಲ್ಲಿ ಗ್ರಹಣ ಶಾಂತಿ ಹೋಮ-ಹವನಗಳ ವ್ಯವಸ್ಥೆ ಇರಲಿದೆ. ಗ್ರಹಣ ಆರಂಭಕ್ಕೂ ಮೊದಲು ನೈರ್ಮಲ್ಯ ವಿಸರ್ಜನ ಪೂಜೆ ನಡೆಯಲಿದೆ. ಇದನ್ನೂ ಓದಿ: ನಾಳೆ ರಕ್ತಚಂದ್ರಗ್ರಹಣ – ಕೌತುಕದ ಬಗ್ಗೆ ವಿಜ್ಞಾನಿಗಳು ಹೇಳೋದೇನು?

    ಗ್ರಹಣ ಸ್ಪರ್ಶಕಾಲ ಮಧ್ಯಕಾಲ ಮತ್ತು ಮೋಕ್ಷಕಾಲದಲ್ಲಿ ಮಧ್ವ ಸರೋವರದಲ್ಲಿ ಭಕ್ತರಿಗೆ ತೀರ್ಥ ಸ್ನಾನ ಮಾಡುವ ವ್ಯವಸ್ತೆ ಕಲ್ಪಿಸಲಾಗಿದೆ. ಚಂದ್ರಗ್ರಹಣ ಆರಂಭಕ್ಕೂ ಮೊದಲು ರಾತ್ರಿ ಪೂಜೆ ನಡೆದು ಅಲಂಕಾರಗಳನ್ನೆಲ್ಲ ತೆಗೆದು ನೈರ್ಮಲ್ಯ ವಿಸರ್ಜನ ಪೂಜೆ ನಡೆಸಲಾಗುತ್ತದೆ.

  • ಆಡಿಸಿದಳೆಶೋದೆ ಜಗದೋದ್ಧಾರನ.. – ಉಡುಪಿಯಲ್ಲಿ ಕೀರ್ತನೆ ಹಾಡಿದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

    ಆಡಿಸಿದಳೆಶೋದೆ ಜಗದೋದ್ಧಾರನ.. – ಉಡುಪಿಯಲ್ಲಿ ಕೀರ್ತನೆ ಹಾಡಿದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

    – ಉಡುಪಿಯಲ್ಲಿ ಶಿವಶ್ರೀ ತೇಜಸ್ವಿ ಸಂಗೀತ ಸೇವೆ

    ಉಡುಪಿ: ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ (Tejasvi Surya) ಮತ್ತು ಗಾಯಕಿ ಶಿವಶ್ರೀ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಗೀತ ಸೇವೆ ನೀಡಿದ್ದಾರೆ.

    ರಥಬೀದಿಯಲ್ಲಿ ನಡೆದ ನಿತ್ಯೋತ್ಸವದಲ್ಲಿ ಭಾಗಿಯಾದ ನವದಂಪತಿಯ ಕುಟುಂಬಗಳು, ಕೃಷ್ಣ ದೇವರ ಗರ್ಭಗುಡಿಯಲ್ಲಿ ನಡೆಯುವ ಮಹಾಪೂಜೆ ಮತ್ತು ಶಯನ ಪೂಜೆಯಲ್ಲಿ ಭಾಗಿಯಾಯ್ತು. ಈ ಸಂದರ್ಭದಲ್ಲಿ ಶಿವಶ್ರೀ ತೇಜಸ್ವಿ ದೇವರ ಮುಂದೆ ಸಂಗೀತ ಸೇವೆಯನ್ನು ನೀಡಿದರು. ಇದನ್ನೂ ಓದಿ: ಕಾರು ಬಿಟ್ಟು ಬಸ್‍ನಲ್ಲಿ ಸಂಚರಿಸಿ ಮಲೆನಾಡ ಸೌಂದರ್ಯ ಸವಿದ ತೇಜಸ್ವಿ ಸೂರ್ಯ ದಂಪತಿ

    ಜಗದೋದ್ಧಾರನಾ ಆಡಿಸಿದಳು ಯಶೋಧೆ.. ಮತ್ತು ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಹಾಡನ್ನು ಹಾಡಿದರು. ಪರ್ಯಾಯ ಪುತ್ತಿಗೆ ಮಠ ಮತ್ತು ಉಡುಪಿ ಶ್ರೀಕೃಷ್ಣ ಮಠದ ಸಂಗೀತಗಾರರಾದ ನಾರಾಯಣ ಶರಳಾಯರು ಸಂಗೀತದಲ್ಲಿ ಸಾಥ್ ನೀಡಿದರು. ಪತಿ ಸಂಸದ ತೇಜಸ್ವಿ ಸೂರ್ಯ ವೇದಘೋಷ ಮಾಡಿದರು.

  • ಉಡುಪಿಯಲ್ಲಿ ಅದ್ಧೂರಿ ಪುತ್ತಿಗೆ ಪರ್ಯಾಯ ಮೆರವಣಿಗೆ – ಏಳು ಮಠಾಧೀಶರು ಗೈರು

    ಉಡುಪಿಯಲ್ಲಿ ಅದ್ಧೂರಿ ಪುತ್ತಿಗೆ ಪರ್ಯಾಯ ಮೆರವಣಿಗೆ – ಏಳು ಮಠಾಧೀಶರು ಗೈರು

    ಉಡುಪಿ: ಶ್ರೀಕೃಷ್ಣ ಮಠದ (Krishna Mutt) ಪೂಜಾಧಿಕಾರ ಕೃಷ್ಣಾಪುರ ಮಠದಿಂದ ಪುತ್ತಿಗೆ ಮಠಕ್ಕೆ (Puttige Mutt) ಹಸ್ತಾಂತರ ಆಗಿದೆ. ಪರ್ಯಾಯ ಮೆರವಣಿಗೆ ಅದ್ದೂರಿಯಾಗಿ ಉಡುಪಿಯ ಪ್ರಮುಖ ರಸ್ತೆಗಳಲ್ಲಿ ನಡೆಯಿತು.

    ನೂರಕ್ಕೂ ಹೆಚ್ಚು ಭಜನಾ ತಂಡ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾದವು. ಜೋಡುಕಟ್ಟೆಯಿಂದ ನಡೆದ ಪರ್ಯಾಯ ಮೆರವಣಿಗೆ ಸುಮಾರು 3 ಗಂಟೆಗಳ ಕಾಲ ನಡೆಯಿತು. ಉಡುಪಿಯ ಅಷ್ಟಮಠಾಧೀಶರ ಪೈಕಿ ಏಳು ಮಠಗಳು ಪರ್ಯಾಯ ಮೆರವಣಿಗೆಗೆ ಗೈರಾಗಿದ್ದರು. ವಿದೇಶ ಪ್ರಯಾಣ ಮಾಡಿರುವ ಕಾರಣ ನಿಯಮ ಮೀರಿದ್ದಕ್ಕೆ ಉಳಿದ ಮಠಗಳು ಈ ನಿರ್ಧಾರ ಮಾಡಿದವು. ಇದನ್ನೂ ಓದಿ: ಜ.19ರಂದು ಬೆಂಗಳೂರಿಗೆ ಮೋದಿ – ಈ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧ

    ಪುತ್ತಿಗೆ ಸುಗುಣೇಂದ್ರ ತೀರ್ಥಶ್ರೀಪಾದರು, ಸುಶ್ರೀಂದ್ರ ತೀರ್ಥ ಸ್ವಾಮೀಜಿ ವಾಹನದ ಮೇಲಿರಿಸಿದ ಪಲ್ಲಕ್ಕಿಯಲ್ಲಿ ಏರಿ ಮಠಕ್ಕೆ ಸಾಂಪ್ರದಾಯಿಕವಾಗಿ ಬಂದು ಅಧಿಕಾರ ಸ್ವೀಕರಿಸಿದರು.

    ಪರ್ಯಾಯ ಅಧಿಕಾರ ಹಸ್ತಾಂತರ ಮಾಡಿದ ಅದಮಾರು ಸ್ವಾಮೀಜಿ
    ಪುತ್ತಿಗೆ ಶ್ರೀಗಳ ಚತುರ್ಥ ಪರ್ಯಾಯ ಉಡುಪಿಯಲ್ಲಿ ಆರಂಭವಾಗಿದೆ. ಕೃಷ್ಣಪೂಜೆಯ ಅಧಿಕಾರ ಹಸ್ತಾಂತರ ಕೃಷ್ಣ ಪೂಜೆ ಮುಗಿಸಿದ ಕೃಷ್ಣಾಪುರ ಸ್ವಾಮೀಜಿ ಮಾಡಬೇಕಿತ್ತು. ಪುತ್ತಿಗೆ ಸ್ವಾಮೀಜಿ ಸಾಗರೋಲ್ಲಂಘನ ಮಾಡಿರುವುದರಿಂದ ಕೃಷ್ಣಾಪುರ ಶ್ರೀಗಳ ಅನುಪಸ್ಥಿತಿಯ ನಡುವೆಯೂ ಅದಮಾರು ಶ್ರೀ ಗಳಿಂದ ಅಧಿಕಾರ ಹಸ್ತಾಂತರ ನಡೆಯಿತು. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ನೀಡಿದ್ದ SC ಒಳಮೀಸಲಾತಿಯನ್ನ ಪುನರ್ ಪರಿಶೀಲನೆ ಮಾಡ್ತೀವಿ: ಪರಮೇಶ್ವರ್

    ಅದಮಾರು ಸ್ವಾಮೀಜಿ ಸರ್ವಜ್ಞ ಪೀಠಾರೋಹಣ ಮಾಡಿಸಿದರು. ಅದಮಾರು ಮಠದ ವಿಶ್ವಪ್ರಿಯ ತೀರ್ಥರು ಧಾರ್ಮಿಕ ವಿಧಿ ನಿರ್ವಹಣೆ ಮಾಡಿದರು. ಅಕ್ಷಯ ಪಾತ್ರೆ ಹಾಗೂ ಅನ್ನದ ಸೆಟ್ಟುಗ ಹಸ್ತಾಂತರ ಮಾಡಿದರು. ಪೂಜಾಧಿಕಾರ ಹಸ್ತಾಂತರದ ನಂತರ ಅರಳು ಗದ್ದುಗೆಯಲ್ಲಿ ಖಾಸಗಿ ದರ್ಬಾರ್ ನಡೆಯಿತು.