Tag: Udgharsha

  • ಉತ್ಕರ್ಷ, ನಿಷ್ಕರ್ಷ, ಸಂಘರ್ಷ ಮತ್ತು ಉದ್ಘರ್ಷ!

    ಉತ್ಕರ್ಷ, ನಿಷ್ಕರ್ಷ, ಸಂಘರ್ಷ ಮತ್ತು ಉದ್ಘರ್ಷ!

    ಬೆಂಗಳೂರು: ಮರ್ಮ ಎಂಬ ಚಿತ್ರದಿಂದ ಆರಂಭವಾಗಿ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿಯವರು ಕನ್ನಡದ ಪ್ರೇಕ್ಷಕರಿಗೆ ಕೊಟ್ಟ ಖುಷಿಗಳು ಒಂದೆರಡಲ್ಲ. ಕನ್ನಡ ಚಿತ್ರರಂಗ ಒಂಥರಾ ಏಕತಾನತೆಯಿಂದ ಕೂಡಿದ್ದ ಕಾಲದಲ್ಲಿಯೇ ಹೊಸಾ ಬಗೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳ ರುಚಿ ಹತ್ತಿಸಿದ್ದವರು ಸುನೀಲ್ ಕುಮಾರ್ ದೇಸಾಯಿ. ಅವರೀಗ ಬಹು ಕಾಲದ ನಂತರ ನಿರ್ದೇಶನ ಮಾಡಿರೋ ಉದ್ಘರ್ಷ ಚಿತ್ರದ ಬಗ್ಗೆ ಕುತೂಹಲ ಹುಟ್ಟದಿರಲು ಹೇಗೆ ಸಾಧ್ಯ?

    ತರ್ಕ, ಉತ್ಕರ್ಷದಂಥಾ ಚಿತ್ರಗಳ ಮೂಲಕ ಹೊಸಾ ಟ್ರೆಂಡಿಂಗ್ ಹುಟ್ಟು ಹಾಕಿದ್ದವರು ದೇಸಾಯಿ. ಅವರು ಬಹು ಕಾಲದದ ನಂತರ ಈ ಕಥೆ ಮಾಡಿಕೊಂಡು ಅಖಾಡಕ್ಕಿಳಿದಾಗ ಅಂಥಾದ್ದೇ ರಗಡ್ ಸೌಂಡಿಂಗ್ ಇರೋ ಶೀರ್ಷಿಕೆಗಾಗಿ ಹುಡುಕಾಟ ನಡೆಸಿದ್ದರಂತೆ. ಕಡೆಗೂ ಅವರೇ ಉದ್ಘರ್ಷ ಅನ್ನೋ ಪದವನ್ನು ಹುಟ್ಟು ಹಾಕಿದ್ದರಂತೆ. ಅದರ ಅರ್ಥ ಅದೇನಿದೆಯೋ… ಆದರೆ ಅದರಲ್ಲೊಂದು ಸೌಂಡಿಂಗ್ ಇದೆ ಎಂಬ ಕಾರಣದಿಂದ ಅವರು ಈ ಟೈಟಲ್ ಅಂತಿಮಗೊಳಿಸಿದ್ದರಂತೆ.

    ಇದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಚಿತ್ರ. ಈಗಾಗಲೇ ಬಿಡುಗಡೆಗೊಂಡಿರುವ ಟ್ರೈಲರ್ ಮೂಲಕ ಉದ್ಘರ್ಷದ ಅಸಲೀ ಖದರ್ ಏನೆಂಬುದು ಜಾಹೀರಾಗಿದೆ. ಬಿಡುಗಡೆಯಾಗಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಈ ಟ್ರೈಲರ್ ಹುಟ್ಟಿಸಿರೋ ಸಂಚಲನ ಸಣ್ಣ ಮಟ್ಟದ್ದೇನಲ್ಲ. ಉದ್ಘರ್ಷ ಎಂಬ ಅನಿರೀಕ್ಷಿತವಾಗಿ ಹುಟ್ಟು ಪಡೆದ ಟೈಟಲ್ಲೀಗ ಎಲ್ಲರ ಬಾಯಲ್ಲೂ ನಲಿದಾಡುತ್ತಿದೆ.

    ಪ್ರೇಕ್ಷಕರನ್ನ ಪ್ರತೀ ಕ್ಷಣವೂ ಕುತೂಹಲದ ಕಾವಲಿಯಲ್ಲಿ ಕೂರಿಸುವಂಥಾ ಉದ್ಘರ್ಷ ಈ ವಾರ ತೆರೆ ಕಾಣುತ್ತಿದೆ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ಉದ್ಘರ್ಷದ ಅಬ್ಬರ ಈ ವಾರವೇ ಶುರುವಾಗಲಿದೆ!

  • ಉದ್ಘರ್ಷ ಟ್ರೇಲರ್ ಗೆ ಶಿವಣ್ಣ ಫಿದಾ, ದೇಸಾಯಿ ಬಗ್ಗೆ ಸೆಂಚುರಿ ಸ್ಟಾರ್ ಹೇಳಿದ್ದೇನು?

    ಉದ್ಘರ್ಷ ಟ್ರೇಲರ್ ಗೆ ಶಿವಣ್ಣ ಫಿದಾ, ದೇಸಾಯಿ ಬಗ್ಗೆ ಸೆಂಚುರಿ ಸ್ಟಾರ್ ಹೇಳಿದ್ದೇನು?

    ಬೆಂಗಳೂರು: ಉದ್ಘರ್ಷ.. ಉದ್ಘರ್ಷ.. ಉದ್ಘರ್ಷ.. ಇನ್ನೇನು ಇದೇ ಶುಕ್ರುವಾರ ಬಿಡುಗಡೆಯಾಗಲಿರೋ ಈ ಚಿತ್ರದ ಬಗ್ಗೆ ಕುತೂಹಲ ಹೆಚ್ಚುತ್ತಲೇ ಇದೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೇ ದೊಡ್ಡ ದೊಡ್ಡ ಸ್ಟಾರ್ ಗಳು ಸಹ ಉದ್ಘರ್ಷ ಚಿತ್ರಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

    ಬಹಳ ದಿನಗಳ ನಂತರ ಮತ್ತೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ದೇಸಾಯಿ ನಿರ್ದೇಶಿಸುತ್ತಿದ್ದಾರೆ ಅನ್ನೋ ಸುದ್ದಿ ಹೊರ ಬಿದ್ದಾಗಿನಿಂದಲೇ ಉದ್ಘರ್ಷ ಚಿತ್ರದ ಬಗ್ಗೆ ಇನ್ನಿಲ್ಲದ ಕುತೂಹಲ ಮನೆ ಮಾಡಿತ್ತು. ಅಲ್ಲದೇ ರಕ್ತ ಸಿಕ್ತ ಹುಡುಗಿಯ ಕಾಲಿನ ಫಸ್ಟ್ ಲುಕ್ ಬಿಡುಗಡೆ ಮಾಡುವುದರ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ದೇಸಾಯಿ, ಉದ್ಘರ್ಷ ಚಿತ್ರದ ಟ್ರೈಲರ್ ಗೆ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಬಳಿ ಧ್ವನಿ ಕೊಡಿಸಿ ಮತ್ತೊಂದು ಸರ್ಪ್ರೈಸ್ ಕೊಟ್ಟಿದ್ದರು. ನಂತರ ಆ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದು ಮತ್ತೊಂದು ಕಿಕ್ ಕೊಟ್ಟಿತ್ತು.

    ಈಗ ವಿಶೇಷ ಅಂದ್ರೆ ಟ್ರೇಲರ್ ನೋಡಿ ಫುಲ್ ಫಿದಾ ಆಗಿರೋ ಸೆಂಚುರಿ ಸ್ಟಾರ್ ಶಿವಣ್ಣ, ದೇಸಾಯಿ ಅವರ ಕೆಲಸವನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ, ದೇಸಾಯಿಯವರ ನಮ್ಮೂರ ಮಂದಾರ ಹೂವೆ ಹಾಗೂ ಪ್ರೇಮರಾಗ ಹಾಡು ಗೆಳತಿ ಚಿತ್ರದಲ್ಲಿ ನಟಿಸಿದ್ದನ್ನು ನೆನಪಿಸಿಕೊಂಡಿರೋ ಶಿವಣ್ಣ, ಉದ್ಘರ್ಷ ಮೂಲಕ ದೇಸಾಯಿ ಈಸ್ ಬ್ಯಾಕ್ ಅಂತಾ ಹೇಳಿದ್ದಾರೆ.

  • ಉದ್ಘರ್ಷ: ಚಿತ್ರಕಥೆಯೇ ನಿಜವಾದ ಹೀರೋ ಅಂದ್ರು ದೇಸಾಯಿ!

    ಉದ್ಘರ್ಷ: ಚಿತ್ರಕಥೆಯೇ ನಿಜವಾದ ಹೀರೋ ಅಂದ್ರು ದೇಸಾಯಿ!

    ಬೆಂಗಳೂರು: ಎಂಬತ್ತರ ದಶಕದಲ್ಲಿಯೇ ಈಗಿನ ಕಾಲಮಾನಕ್ಕೆ ತಕ್ಕುದಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದವರು ಸುನೀಲ್ ಕುಮಾರ್ ದೇಸಾಯಿ. ಅವರು ಬಹು ಕಾಲದ ನಂತರ ನಿರ್ದೇಶನ ಮಾಡಿರೋ ಉದ್ಘರ್ಷ ಚಿತ್ರದ ಬಗ್ಗೆ ಜನ ಆಕರ್ಷಿತರಾಗಿರೋದು ಕೂಡಾ ದೇಸಾಯಿಯವರ ಕ್ರಿಯೇಟಿವಿಟಿ ಮತ್ತು ದೂರದೃಷ್ಟಿಯ ಕಾರಣದಿಂದಲೇ.

    ಹಾಗೆ ಎಲ್ಲೆಡೆ ವ್ಯಾಪಕವಾಗಿ ಟಾಕ್ ಕ್ರಿಯೇಟ್ ಮಾಡಿರೋ ಉದ್ಘರ್ಷ ಚಿತ್ರ ಈ ವಾರ ಬಿಡುಗಡೆಗೊಳ್ಳುತ್ತಿದೆ. ಈ ಸಿನಿಮಾ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ಖಳನಟ ಠಾಕೂರ್ ಅನೂಪ್ ಸಿಂಗ್ ನಾಯಕನಾಗಿದ್ದಾರೆ. ಕಬಾಲಿ ಖ್ಯಾತಿಯ ದನ್ಷಿಕಾ, ತಾನ್ಯಾ ಹೋಪ್ ನಾಯಕಿಯರಾಗಿ ನಟಿಸಿದ್ದಾರೆ. ಇನ್ನುಳಿದಂತೆ ಬೇರೆ ಬೇರೆ ಭಾಷೆಗಳ ಖ್ಯಾತ ನಟನಟಿಯರ ತಾರಾಗಣವೇ ಈ ಚಿತ್ರದಲ್ಲಿದೆ.

    ದೇಸಾಯಿಯವರು ಮನಸು ಮಾಡಿದರೆ ಖ್ಯಾತ ಸ್ಟಾರ್ ನಟರನ್ನೇ ಹೀರೋ ಆಗಿ ಕರೆತರ ಬಹುದಿತ್ತು. ಆದರೆ ದೇಸಾಯಿ ಅವರೇಕೆ ಅಷ್ಟಾಗಿ ಪರಿಚಿತರಲ್ಲದ ನಟನಟಿಯರನ್ನ ಈ ಚಿತ್ರಕ್ಕೆ ಆರಿಸಿಕೊಂಡಿದ್ದಾರೆಂಬ ಪ್ರಶ್ನೆ ಹಲವರಲ್ಲಿದೆ. ಅದಕ್ಕೆ ದೇಸಾಯಿಯವರೇ ಉತ್ತರವನ್ನೂ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಚಿತ್ರಕಥೆಯೇ ಹೀರೋ ಸ್ಥಾನದಲ್ಲಿದೆಯಂತೆ. ಇಲ್ಲಿನ ಪಾತ್ರಗಳೆಲ್ಲವೂ ಅದನ್ನು ನಿರ್ವಹಿಸಿದ ಕಲಾವಿದರನ್ನು ಮೀರಿಕೊಂಡು ವಿಶಿಷ್ಠ ಪಾತ್ರಗಳಾಗಿಯಷ್ಟೇ ಪ್ರೇಕ್ಷಕರನ್ನ ಕಾಡಲಿವೆಯಂತೆ.

    ಒಟ್ಟಾರೆಯಾಗಿ, ಉದ್ಘರ್ಷ ಪ್ರತೀ ಕ್ಷಣವೂ ಪ್ರೇಕ್ಷಕರನ್ನು ತುದೀ ಸೀಟಿಗೆ ತಂದು ಕೂರಿಸುವಷ್ಟು ರೋಚಕವಾಗಿ ಮೂಡಿ ಬಂದಿದೆಯಂತೆ. ಕೇವಲ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಪ್ರೇಮಿಗಳಿಗೆ ಮಾತ್ರವಲ್ಲದೇ ಎಲ್ಲ ವರ್ಗದ ಪ್ರೇಕ್ಷಕರಿಗೂ ಉದ್ಘರ್ಷ ಇಷ್ಟವಾಗಲಿದೆ ಅನ್ನೋದು ಸುನೀಲ್ ಕುಮಾರ್ ದೇಸಾಯಿ ಅವರ ಭರವಸೆ.

  • ಉದ್ಘರ್ಷದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಹೇಳಿದ್ದೇನು?

    ಉದ್ಘರ್ಷದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಹೇಳಿದ್ದೇನು?

    ಬೆಂಗಳೂರು: ಸುನೀಲ್ ಕುಮಾರ್ ದೇಸಾಯಿ ಕನ್ನಡ ಚಿತ್ರರಂಗ ಕಂಡ ಅತ್ಯಂತ ಕ್ರಿಯೇಟಿವ್ ನಿರ್ದೇಶಕ. ಕನ್ನಡದಲ್ಲಿ ಒಂದು ಬಗೆಯ ಚಿತ್ರಗಳು ಮಾತ್ರವೇ ಗಿರಕಿ ಹೊಡೆಯುತ್ತಿದ್ದ ಕಾಲದಲ್ಲಿಯೇ ಏಕಾಏಕಿ ಥ್ರಿಲ್ಲರ್ ಚಿತ್ರಗಳ ಮೂಲಕ ಅಚ್ಚರಿ ಹುಟ್ಟಿಸಿದ್ದವರು ದೇಸಾಯಿ. ಇದೀಗ ಅವರು ನಿರ್ದೇಶನ ಮಾಡಿರುವ ಉದ್ಘರ್ಷ ಇದೇ ಮಾರ್ಚ್ 22ರಂದು ತೆರೆ ಕಾಣಲು ರೆಡಿಯಾಗಿದೆ.

    ದೇಸಾಯಿಯವರು ಈ ಸಿನಿಮಾ ಆರಂಭಿಸಿದಾಗಲೇ ಸುದ್ದಿ ಶುರುವಾಗಿತ್ತು. ಯಾಕೆಂದರೆ ಥ್ರಿಲ್ಲರ್ ಚಿತ್ರಗಳ ಮಾಸ್ಟರ್ ಡೈರೆಕ್ಟರ್ ಮತ್ತೆ ಮರಳಿದ್ದಾರೆಂದರೆ ಅಂಥಾ ಸಂಚಲನ ಸೃಷ್ಟಿಯಾಗೋದು ಸಹಜವೇ. ಒಟ್ಟಾರೆಯಾಗಿ ಈ ಚಿತ್ರದ ಅಂತರಾಳ ಏನನ್ನೋದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿರೋ ಟ್ರೈಲರ್ ಸಾಕ್ಷಿಯಾಗಿದೆ.

    ದರ್ಶನ್ ಬಿಡುಗಡೆ ಮಾಡಿರೋ ಟ್ರೈಲರ್ ಕಡಿಮೆ ಅವಧಿಯಲ್ಲಿಯೇ ಟ್ರೆಂಡ್ ಸೆಟ್ ಮಾಡಿತ್ತು. ಗಾಢವಾದ ಕುತೂಹಲ ಮತ್ತು ಬಾಲಿವುಡ್ ಚಿತ್ರಗಳಿಗೇ ಸೆಡ್ಡು ಹೊಡೆಯುವಂಥಾ ತಾಂತ್ರಿಕ ಶ್ರೀಮಂತಿಕೆಯೂ ಈ ಮೂಲಕವೇ ಪ್ರೇಕ್ಷಕರ ಅರಿವಿಗೆ ಬಂದಿತ್ತು. ಈ ಟ್ರೈಲರ್ ನೋಡಿ ಬಿಡುಗಡೆ ಮಾಡಿರೋ ದರ್ಶನ್ ಅವರೇ ಥ್ರಿಲ್ ಆಗಿದ್ದಾರೆ.

    ದೇಸಾಯಿಯವರು ಯಾವ ಚಿತ್ರವನ್ನೇ ಮಾಡಿದರೂ ಅದರಲ್ಲೊಂದು ಹೊಸತನವಿರುತ್ತೆ. ಉದ್ಘರ್ಷ ಕೂಡಾ ಅಂಥಾದ್ದೇ ಹೊಸತನದಿಂದ ಕೂಡಿರೋ ಸುಳಿವು ಸಿಕ್ಕಿದೆ. ಈ ಸಿನಿಮಾ ಕೂಡಾ ಸೂಪರ್ ಹಿಟ್ ಆಗಲಿ ಅಂತ ದರ್ಶನ್ ಹಾರೈಸಿದ್ದಾರೆ. ದರ್ಶನ್ ಅವರೇ ಮೆಚ್ಚಿಕೊಂಡಿರೋ ಈ ಚಿತ್ರವೀಗ ಐದು ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೆ ಅಣಿಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಥ್ರಿಲ್ಲರ್ ಚಿತ್ರಗಳ ಮಾಸ್ಟರ್ ದೇಸಾಯಿಯವರ ಉದ್ಘರ್ಷ ಮೋಡಿ!

    ಥ್ರಿಲ್ಲರ್ ಚಿತ್ರಗಳ ಮಾಸ್ಟರ್ ದೇಸಾಯಿಯವರ ಉದ್ಘರ್ಷ ಮೋಡಿ!

    ಬೆಂಗಳೂರು: ಸುನೀಲ್ ಕುಮಾರ್ ದೇಸಾಯಿ ಎಂಬ ಥ್ರಿಲ್ಲರ್ ಸಿನಿಮಾಗಳ ಮಾಸ್ಟರ್ ಮತ್ತೆ ಮೋಡಿ ಮಾಡಲು ತಯಾರಾಗಿದ್ದಾರೆ. ಅವರು ಬಹು ಕಾಲದ ನಂತರ ನಿರ್ದೇಶನ ಮಾಡಿರೋ ರೋಚಕ ಥ್ರಿಲ್ಲರ್ ಕಥೆಯ ಉದ್ಘರ್ಷ ಚಿತ್ರ ಇದೇ ಮಾರ್ಚ್ 22ರಂದು ಬಿಡುಗಡೆಗೆ ರೆಡಿಯಾಗಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು, ತಮಿಳು ಸೇರಿದಂತೆ ಐದೈದು ಭಾಷೆಗಳಲ್ಲಿ ಏಕಕಾಲದಲ್ಲಿಯೇ ಬಿಡುಗಡೆಯಾಗಲಿರೋ ಈ ಸಿನಿಮಾ ಮೂಲಕ ದೇಸಾಯಿ ಭರ್ಜರಿ ಗೆಲುವು ದಾಖಲಿಸೀ ಸಕಾರಾತ್ಮಕ ಲಕ್ಷಣಗಳೇ ಮಿರುಗುತ್ತಿವೆ.

    ಸುನೀಲ್ ಕುಮಾರ್ ದೇಸಾಯಿ ಎಂಬ ಹೆಸರು ಕೇಳಿದರೇನೇ ಥ್ರಿಲ್ಲರ್ ಕಥಾನಕಗಳ ಚಿತ್ರಗಳೆಲ್ಲ ಕಣುಂದೆ ಚಲಿಸಲಾರಂಭಿಸುತ್ತವೆ. ಎಂಭತ್ತರ ದಶಕದಲ್ಲಿಯೇ ಥ್ರಿಲ್ಲರ್ ಕಥೆಗಳ ರುಚಿ ಹತ್ತಿಸಿದ್ದ ದೇಸಾಯಿ ಇದೀಗ ಉದ್ಘರ್ಷ ಚಿತ್ರದ ಮೂಲಕ ಈ ಜನರೇಷನ್ನಿನ ಪ್ರೇಕ್ಷಕರನ್ನೂ ಆವರಿಸಿಕೊಳ್ಳಲು ತಯಾರಾಗಿದ್ದಾರೆ.

    ಉದ್ಘರ್ಷದ ಅಸಲೀ ಆವೇಗ ಎಂಥಾದ್ದೆಂಬುದಕ್ಕೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರೋ ಟ್ರೈಲರ್ ಗಿಂತ ಬೇರೆ ಪುರಾವೆ ಬೇಕಿಲ್ಲ. ಕಿಚ್ಚ ಸುದೀಪ್ ಹಿನ್ನೆಲೆ ಧ್ವನಿ ನೀಡಿರೋ ಈ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದ್ದರು. ಹಾಗೆ ಬಿಡುಗಡೆಯಾದ ಕ್ಷಣಾರ್ಧದಿಂದಲೇ ಇದು ಸದ್ದು ಮಾಡಿದ ರೀತಿ ಕಂಡು ಬೇರೆ ಭಾಷೆಗಳ ಚಿತ್ರರಂಗದಲ್ಲಿಯೂ ಅಚ್ಚರಿ ಮನೆ ಮಾಡಿತ್ತು.

    ಹೀಗೆ ಮೂಡಿಕೊಂಡಿರೋ ಎಲ್ಲ ಕುತೂಹಲಗಳನ್ನೂ ತೃಪ್ತಗೊಳಿಸುವಂತೆ ಉದ್ಘರ್ಷ ಮೂಡಿ ಬಂದಿದೆಯೆಂಬ ಭರವಸೆ ದೇಸಾಯಿಯವರದ್ದು. ಇಲ್ಲಿನ ದೃಶ್ಯಾವಳಿಗಳನ್ನು ಕ್ಷಣ ಕ್ಷಣವೂ ಚಿತ್ರ ವಿಚಿತ್ರ ತಿರುವುಗಳಿಂದ ಬೆಚ್ಚಿ ಬೀಳಿಸುವಂತೆ ದೇಸಾಯಿ ರೂಪಿಸಿದ್ದಾರಂತೆ. ಕೇವಲ ಥ್ರಿಲ್ಲರ್ ಕಥೆ ಮಾತ್ರವಲ್ಲ, ತಾಂತ್ರಿಕವಾಗಿಯೂ ಕೂಡಾ ಉದ್ಘರ್ಷ ಹೊಸಾ ಅನುಭವಗಳನ್ನೇ ಪ್ರೇಕ್ಷಕರಿಗೆ ನೀಡಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಿಚ್ಚನ ಧ್ವನಿಯಿರೋ ಉದ್ಘರ್ಷ ಟ್ರೈಲರ್ ಲಾಂಚ್ ಮಾಡಿದ್ರು ದರ್ಶನ್!

    ಕಿಚ್ಚನ ಧ್ವನಿಯಿರೋ ಉದ್ಘರ್ಷ ಟ್ರೈಲರ್ ಲಾಂಚ್ ಮಾಡಿದ್ರು ದರ್ಶನ್!

    ಬೆಂಗಳೂರು: ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರ ಟ್ರೈಲರ್ ಲಾಂಚ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಟ್ರೈಲರ್ ಅನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹೀಗೆ ಹೊರ ಬಂದಿರೋ ಈ ಟ್ರೈಲರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳ ಮಾಸ್ಟರ್ ಡೈರೆಕ್ಟರ್ ದೇಸಾಯಿ ಮತ್ತೆ ಮರಳಿರೋ ಸ್ಪಷ್ಟ ಸೂಚನೆಯನ್ನೇ ರವಾನಿಸಿದೆ!

    ಮರ್ಡರ್ ಮಿಸ್ಟರಿ, ಅದರ ಸುತ್ತಾ ಛಕಛಕನೆ ಸಾಗೋ ದೃಶ್ಯಾವಳಿ ಹೊಂದಿರೋ ಈ ಟ್ರೈಲರ್ ಒಟ್ಟಾರೆ ಚಿತ್ರದ ಬಗ್ಗೆ ಮತ್ತಷ್ಟು ಕ್ರೇಜ್ ಹುಟ್ಟುವಂತೆ ಮಾಡಿದೆ. ಅನೂಪ್ ಠಾಕೂರ್ ಸಿಂಗ್ ಎಂಬ ಅಜಾನುಬಾಹು ನಾಯಕನಿಗೆ ಸೆಡ್ಡು ಹೊಡೆಯುವಂಥಾ ಖಳನಟರ ಪಡೆಯೂ ಅಬ್ಬರಿಸಿರೋ ರೀತಿಯಂತೂ ಮಾಸ್ ಪ್ರೇಕ್ಷಕರನ್ನೂ ಉದ್ಘರ್ಷದತ್ತ ಆಕರ್ಷಿಸಿದೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುಗಡೆಗೊಳಿಸಿರುವ ಈ ಟ್ರೈಲರಿಗೆ ಕಿಚ್ಚ ಸುದೀಪ್ ಖಡಕ್ ವಾಯ್ಸ್ ನೀಡಿದ್ದಾರೆ. ಜೊತೆಗೆ ಈ ಚಿತ್ರದ ಮೂಲಕ ಸುನೀಲ್ ಕುಮಾರ್ ದೇಸಾಯಿ ಯುಗ ಮತ್ತೆ ಶುರುವಾಗಲಿದೆ ಎಂಬಂಥಾ ಹಿಂಟ್ ಅನ್ನೂ ಬಿಟ್ಟು ಕೊಟ್ಟಿದ್ದಾರೆ. ಎಂಭತ್ತರ ದಶಕದ ಆಚೀಚಿನ ದಿನಗಳಲ್ಲಿಯೇ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕಗಳ ರುಚಿ ಹತ್ತಿಸಿ ಗೆದ್ದವರು ಸುನೀಲ್ ಕುಮಾರ್ ದೇಸಾಯಿ. ಅವರು ನಿರ್ದೇಶನ ಮಾಡಿರೋ ಉದ್ಘರ್ಷ ಮತ್ತೊಂದು ಮಹಾ ಗೆಲುವಿನ ರೂವಾರಿಯಾಗೋ ಲಕ್ಷಣಗಳನ್ನು ಈ ಟ್ರೈಲರ್ ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉದ್ಘರ್ಷ ಚಿತ್ರಕ್ಕೆ ಸುದೀಪ್-ದರ್ಶನ್ ಸಾಥ್! – ಇನ್ನೆರಡು ದಿನಗಳಲ್ಲಿ ಬರಲಿದೆ ಟ್ರೈಲರ್!

    ಉದ್ಘರ್ಷ ಚಿತ್ರಕ್ಕೆ ಸುದೀಪ್-ದರ್ಶನ್ ಸಾಥ್! – ಇನ್ನೆರಡು ದಿನಗಳಲ್ಲಿ ಬರಲಿದೆ ಟ್ರೈಲರ್!

    ಬೆಂಗಳೂರು: ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಬಹು ನಿರೀಕ್ಷಿತ ಉದ್ಘರ್ಷ ಇನ್ನೇನು ಬಿಡುಗಡೆಯಾಗಲಿದೆ. ಈಗಾಗಲೇ ವಿಭಿನ್ನವಾದ ಪೋಸ್ಟರ್ ಸೇರಿದಂತೆ ಎಲ್ಲ ಬಗೆಯಲ್ಲಿಯೂ ಪ್ರೇಕ್ಷಕರನ್ನು ಆಕರ್ಷಿಸಿರುವ ಈ ಚಿತ್ರದ ಟ್ರೈಲರ್ ಇದೇ ತಿಂಗಳ 5ರಂದು ಬಿಡುಗಡೆಯಾಗಲಿದೆ.

    ವಿಶೇಷವೆಂದರೆ ಈ ಟ್ರೈಲರ್ ಗೆ ಕಿಚ್ಚ ಸುದೀಪ್ ಅವರು ಖಡಕ್ ವಾಯ್ಸ್ ನೀಡಿದ್ದಾರೆ. ಇದನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುಗಡೆಗೊಳಿಸಲಿದ್ದಾರೆ. ಈ ಮೂಲಕ ಈ ಕುಚಿಕು ಗೆಳೆಯರ ಸಮಾಗಮವಾಗಿದೆ. ಸುದೀಪ್ ಅವರಂತೂ ತಮ್ಮ ಗುರುಗಳಾದ ಸುನೀಲ್ ಕುಮಾರ್ ದೇಸಾಯಿ ಅವರ ಉದ್ಘರ್ಷಕ್ಕೆ ಆರಂಭದಿಂದಲೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಸಾಥ್ ನೀಡಲು ಮುಂದಾಗಿದ್ದಾರೆ.

    ಠಾಕೂರ್ ಅವರ ಖಡಕ್ ಲುಕ್ಕಿಗೆ ತಕ್ಕುದಾದ ಪಾತ್ರವನ್ನೇ ದೇಸಾಯಿ ಸೃಷ್ಟಿಸಿದ್ದಾರೆ. ಆರಂಭದಿಂದಲೂ ದೇಸಾಯಿ ಅವರ ಚಿತ್ರಗಳನ್ನು ನೋಡಿಕೊಂಡೇ ಬಂದಿದ್ದ ಆರ್. ದೇವರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಂಜುನಾಥ್.ಡಿ ಮತ್ತು ರಾಜೇಂದ್ರ ಕುಮಾರ್ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೆರೆ ಕಾಣುವ ಮೊದಲೇ ಹೆಚ್ಚಿದ ಬೇಡಿಕೆ, ಮಲಯಾಳಂಗೆ ಡಬ್ ಆಯ್ತು ‘ಉದ್ಘರ್ಷ’

    ತೆರೆ ಕಾಣುವ ಮೊದಲೇ ಹೆಚ್ಚಿದ ಬೇಡಿಕೆ, ಮಲಯಾಳಂಗೆ ಡಬ್ ಆಯ್ತು ‘ಉದ್ಘರ್ಷ’

    ಥ್ರಿಲ್ಲರ್ ಸಿನಿಮಾಗಳ ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ದಶಕಗಳ ನಂತರ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡ್ತಾರೆ ಅಂದಾಗಲೇ ಅವರ ಅಭಿಮಾನಿಗಳಲ್ಲಿ ಪುಳಕವುಂಟಾಗಿತ್ತು. ಇನ್ನು ದೇಸಾಯಿ ಉದ್ಘರ್ಷ ಚಿತ್ರದ ಫಸ್ಟ್‌ಲುಕ್, ಫಸ್ಟ್‌ಲುಕ್ ಟೀಸರ್, ಪೋಸ್ಟರ್ಸ್ ಒಂದಕ್ಕೊಂದು ವಿಭಿನ್ನವಾಗಿದ್ದು ಚಿತ್ರ ರಸಿಕರ ನಿರೀಕ್ಷೆಯನ್ನು ಹೆಚ್ಚಿಸಿದೆ.


    ಈ ನಡುವೆ ಇದೇ ಮೊದಲ ಬಾರಿಗೆ ಸುನೀಲ್ ಕುಮಾರ್ ದೇಸಾಯಿ ಬಹು ಭಾಷಾ ಚಿತ್ರ ಮಾಡಿದ್ದು ಉದ್ಘರ್ಷ ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಿದ್ದಾರೆ. ಅಲ್ಲದೇ, ತಮಿಳಿಗೆ ಉಚ್ಚಕಟ್ಟಂ ಅನ್ನೋ ಹೆಸರಿನಲ್ಲಿ ಡಬ್ ಕೂಡ ಮಾಡಿದ್ದಾರೆ. ಆದ್ರೆ, ಈಗ ಲೇಟೆಸ್ಟ್ ವಿಷಯವೆಂದರೆ, ದೇಸಾಯಿ ಚಿತ್ರಕ್ಕೆ ಮಲಯಾಳಂನಲ್ಲೂ ಬೇಡಿಕೆ ಬಂದಿದ್ದು, ಆ ಭಾಷೆಗೂ ಚಿತ್ರವನ್ನು ದೇಸಾಯಿ ಡಬ್ ಮಾಡಿದ್ದಾರೆ. ದೇಸಾಯಿ ಚಿತ್ರಗಳು ಈ ಹಿಂದೆಯೂ ಮಲಯಾಳಂಗೆ ಡಬ್ ಆಗಿದ್ದವು.

    ಈ ಬಗ್ಗೆ ವಿವರಣೆ ನೀಡಿರೋ ದೇಸಾಯಿ, ನನ್ನ ತರ್ಕ, ನಿಷ್ಕರ್ಷ, ಮರ್ಮ ಚಿತ್ರ ಈಗಾಗಲೇ ಮಲಯಾಳಂ ಭಾಷೆಗೆ ಡಬ್ ಆಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಇದೇ ಹಿನ್ನೆಲೆಯಲ್ಲಿ ಮಲಯಾಳಂ ಇಂಡಸ್ಟ್ರೀಯಿಂದ ಉದ್ಘರ್ಷಕ್ಕೂ ಬೇಡಿಕೆ ಬಂದ ಹಿನ್ನೆಲೆ, ನಾವೇ ಡಬ್ಬಿಂಗ್ ಮಾಡಿಸುತ್ತಿದ್ದೇವೆ. ಈ ಗಾಗಲೇ ಕನ್ನಡ, ತೆಲುಗು, ತಮಿಳು ಡಬ್ಬಿಂಗ್ ಮುಗಿದಿದ್ದು ಮಲಯಾಳಂ ಭಾಷೆಯ ಡಬ್ಬಿಂಗ್ ಕಾರ್ಯವೂ ಭರದಿಂದ ಸಾಗಿದೆ ಅಂತಾ ಹೇಳಿದ್ದಾರೆ. ಅಲ್ಲದೇ, ಅವರೇ ಹೇಳುವಂತೆ ಶೀಘ್ರದಲ್ಲಿಯೇ ನಾಲ್ಕೂ ಭಾಷೆಗಳಲ್ಲಿ ಶೀಘ್ರದಲ್ಲಿಯೇ ಚಿತ್ರದ ಟ್ರೈಲರ್ ಅನ್ನು ರಿಲೀಸ್ ಮಾಡಲಾಗುತ್ತಿದೆಯಂತೆ.


    ಯಾರೆಲ್ಲ ನಟಿಸಿದ್ದಾರೆ ಗೊತ್ತಾ..?!
    ಇನ್ನು, ಚಿತ್ರದಲ್ಲಿ ಸಿಂಗಂ 3 ಖ್ಯಾತಿಯ ಠಾಕೂರ್ ಅನೂಪ್ ಸಿಂಗ್ ನಾಯಕ ನಟರಾಗಿ ನಟಿಸಿದ್ದರೆ, ತಮಿಳಿನ ಕಬಾಲಿ ಖ್ಯಾತಿಯ ಧನ್ಸಿಕಾ ಹಾಗೂ ನವ ನಟಿ ತಾನ್ಯಾ ಹೋಪ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಅಲ್ಲದೇ ಬಾಲಿವುಡ್ ವಿಲನ್ ಕಬೀರ್ ಸಿಂಗ್ ದುಹಾನ್, ತೆಲುಗಿನ ಬಾಹುಬಲಿ ಖ್ಯಾತಿಯ ಪ್ರಭಾಕರ್, ಶ್ರವಣ್ ರಾಘವೇಂದ್ರ, ವಂಶಿ ಕೃಷ್ಣ, ಶ್ರದ್ಧಾ ದಾಸ್ ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಹುಭಾಷಾ ತಾರೆ, ಕನ್ನಡಿಗ ಕಿಶೋರ್ ಮತ್ತೊಂದು ಪ್ರಮುಖ ಹಾಗೂ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದರೆ, ಹರ್ಷಿಕಾ ಪೂಣಚ್ಚ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪಿ. ರಾಜನ್ ಹಾಗೂ ದಿವಂಗತ ವಿಷ್ಣುವರ್ಧನ್ ಅವರು ಕ್ಯಾಮರಾ ವರ್ಕ್ ಮಾಡಿದ್ದರೆ, ಹಿಂದಿಯ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಸಂಜೋಯ್ ಚೌಧುರಿ ಸಂಗೀತ ನೀಡಿದ್ದಾರೆ. ಇನ್ನು ಚಿತ್ರಕ್ಕೆ ನಿರ್ದೇಶಕ ದೇಸಾಯಿ ಅವರ ಸ್ನೇಹಿತ ಆರ್. ದೇವರಾಜ್ ಹಣ ಹೂಡಿದ್ದು, ರಾಜೇಂದ್ರ ಹಾಗೂ ಡಿ. ಮಂಜುನಾಥ್ ಸಹ ನಿರ್ಮಾಪಕರಾಗಿದ್ದಾರೆ. ಡಿ ಕ್ರಿಯೇಶನ್ಸ್ ಬ್ಯಾನರ್ ಅಡಿ ಚಿತ್ರ ಮೂಡಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • #MeToo ಅಭಿಯಾನಕ್ಕೆ ಜೈ ಅಂದ್ರು ಕಬಾಲಿ ಬೆಡಗಿ ಧನ್ಸಿಕಾ

    #MeToo ಅಭಿಯಾನಕ್ಕೆ ಜೈ ಅಂದ್ರು ಕಬಾಲಿ ಬೆಡಗಿ ಧನ್ಸಿಕಾ

    #MeToo ಅಭಿಯಾನವೀಗ ಕನ್ನಡ ಚಿತ್ರರಂಗದಲ್ಲಿಯೂ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ನಡುವೆಯೂ ಹಲವಾರು ನಟ ನಟಿಯರು ಇದರ ಪರ ಮತ್ತು ವಿರುದ್ಧವಾದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಉದ್ಘರ್ಷ ಚಿತ್ರದ ಮೂಲಕ ಕನ್ನಡಕ್ಕೆ ಬಂದಿರೋ ತಮಿಳು ಹುಡುಗಿ ಧನ್ಸಿಕಾ ಮಿ ಟೂ ಅಭಿಯಾನಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.

    ಮಿ ಟೂ ಎಂಬುದು ಮಹಿಳೆಯರ ಆತ್ಮಗೌರವ ಕಾಪಾಡಿಕೊಳ್ಳಲಾಗಿಯೇ ಹುಟ್ಟಿಕೊಂಡಿರೋ ಅಭಿಯಾನ. ಜನ್ಮ ನೀಡೋ ಹೆಣ್ಣನ್ನು ಗೌರವಿಸೋದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಹುಟ್ಟಿಕೊಂಡಿರೋ ಮಿ ಟೂ ಅಭಿಯಾನ ಒಳ್ಳೆಯ ಉದ್ದೇಶ ಹೊಂದಿದೆ. ಲೈಂಗಿಕ ಕಿರುಕುಳ ಅನುಭವಿಸಿದ ಹೆಣ್ಣುಮಕ್ಕಳೆಲ್ಲ ಈ ಮೂಲಕ ತಮ್ಮ ಯಾತನೆಯನ್ನು ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ನಾನು ಬೆಂಬಲ ಸೂಚಿಸುತ್ತೇನೆ ಅಂತ ಧನ್ಸಿಕಾ ಹೇಳಿಕೊಂಡಿದ್ದಾರೆ.

    ಧನ್ಸಿಕಾ ತಮಿಳು ಚಿತ್ರರಂಗದಲ್ಲಿ ಬೇಡಿಕೆ ಹೊಂದಿರೋ ನಟಿ. ಈಕೆ ಕಬಾಲಿ ಚಿತ್ರದಲ್ಲಿ ರಜನೀಕಾಂತ್ ಅವರ ಪುತ್ರಿಯಾಗಿಯೂ ಅಭಿನಯಿಸಿದ್ದರು. ಇದೀಗ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರದ ಮೂಲಕ ಕನ್ನಡದಲ್ಲಿಯೂ ಅಭಿನಯಿಸುತ್ತಿದ್ದಾರೆ. ಥ್ರಿಲ್ಲರ್ ಕಥೆ ಹೊಂದಿರೋ ಈ ಚಿತ್ರದ ಪಾತ್ರದ ಮೂಲಕ ಕನ್ನಡದಲ್ಲಿ ಮತ್ತೊಂದಷ್ಟು ಅವಕಾಶದ ನಿರೀಕ್ಷೆಯನ್ನೂ ಹೊಂದಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದರ್ಶನ್ ಅಭಿಮಾನಿಯಂತೆ ಉದ್ಘರ್ಷ ಹೀರೋ ಅನೂಪ್!

    ದರ್ಶನ್ ಅಭಿಮಾನಿಯಂತೆ ಉದ್ಘರ್ಷ ಹೀರೋ ಅನೂಪ್!

    ಬೆಂಗಳೂರು: ವಿಭಿನ್ನ ಪೋಸ್ಟರ್ ಮೂಲಕವೇ ಚಂದನವನದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಉದ್ಘರ್ಷ ಸಿನಿಮಾ ಹೊಸ ಆಲೋಚನೆಗಳನ್ನು ಪ್ರೇಕ್ಷಕರಲ್ಲಿ ಹುಟ್ಟು ಹಾಕಿತ್ತು. ಈ ಕುತೂಹಲಗಳನ್ನು ಮತ್ತಷ್ಟು ಹೆಚ್ಚು ಮಾಡಿ ಮೊದಲ ಬಾರಿಗೆ ಚಿತ್ರದ ತಂಡ ಮಾಧ್ಯಮಗಳ ಮುಂದೇ ಬಂದಿತ್ತು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಸುನಿಲ್ ದೇಸಾಯಿ ಅವರು, ಚಿತ್ರದ ಬಗ್ಗೆ ಈ ಸಂದರ್ಭದಲ್ಲಿ ಕಡಿಮೆ ಮಾತನಾಡುತ್ತೇನೆ. ಏಕೆಂದರೆ ಚಿತ್ರದ ನಾಯಕ ನಟ ಠಾಕೂರ್ ಅನೂಪ್ ಸಿಂಗ್ ಪರಿಚಯ ಮಾಡಬೇಕಿದೆ. ಅಲ್ಲದೇ ಚಿತ್ರಕ್ಕಾಗಿ ನಾನು ಅನೂಪ್ ಸಿಂಗ್ ಆಯ್ಕೆ ಮಾಡಿದ ಕುರಿತು ಹೇಳಬೇಕಿದೆ ಎಂದು ಮಾತು ಆರಂಭಿಸಿದರು.

    ಚಿತ್ರ ಕಥೆ ಸಿದ್ಧಗೊಂಡ ಬಳಿಕ ನಾಯಕನ ಹುಡುಕಾಟದಲ್ಲಿದ್ದೆ. ಆಕಸ್ಮಿಕವಾಗಿ ಠಾಕೂರ್ ಅನೂಪ್ ಸಿಂಗ್ ನಾನು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡೆವು. ಒಂದೇ ನೋಟದಲ್ಲಿ ನನ್ನ ಕಥೆಯ ನಾಯಕ ಅವರಲ್ಲಿ ಕಾಣಿಸಿದರು. ನನ್ನ ಸಿನಿಮಾಗೆ ನೀವು ನಾಯಕನಟರಾಗ ಬೇಕು ಎಂದು ಹೇಳುತ್ತಿದಂತೆ ಅನೂಪ್ ಅಚ್ಚರಿಗೊಳಗಾದರು. ಆದರೆ ಚಿತ್ರದ ಕಥೆ ಕೇಳಿದ ಮರುಕ್ಷಣದಲ್ಲಿ ಒಪ್ಪಿಕೊಂಡರು ಎಂದು ಚಿತ್ರ ನಾಯಕ ನಟನ ಹುಡುಕಾಟದ ಹಿಂದಿನ ಕುತೂಹಲ ಕಥೆ ಬಿಚ್ಚಿಟ್ಟರು.

    ಚಿತ್ರದ ಕಥೆಗೆ ಅಭಿನಯ ಮಾತ್ರವಲ್ಲದೇ ವಿಲನ್ ಲುಕ್ ಕೂಡ ಬೇಕಾಗಿದ್ದರಿಂದ ಅವರನ್ನೇ ಆಯ್ಕೆ ಮಾಡಲಾಯಿತು. ಚಿತ್ರದ ಕುರಿತು ಬಹಳ ಆತ್ಮವಿಶ್ವಾಸ ಇದ್ದು, ಸಿನಿ ರಸಿಕರು ನಮಗೇ ಬೆಂಬಲ ನೀಡುತ್ತಾರೆ. ಅನುಪ್ ಕೂಡ ನಾನು ಬಯಸಿದ್ದ ಅಂಶಗಳಿಗಿಂತ ಹೆಚ್ಚಿನದನ್ನು ಚಿತ್ರಕ್ಕೆ ನೀಡಿದ್ದಾರೆ. ಅವರ ಈ ಕೆಲಸ ಶೈಲಿ ಹಾಗೂ ಅವರಿಗೆ ಕೆಲಸ ಮಾಡಲು ಇರುವ ಹಠ ಎಲ್ಲರಿಗೂ ಇಷ್ಟವಾಗುತ್ತದೆ. ಚಿತ್ರೀಕರಣ ವೇಳೆ ಅವರು ಹಲವು ಬಾರಿ ಡ್ಯೂಪ್ ಇಲ್ಲದೇ ಸಾಹಸ ದೃಶ್ಯಗಳನ್ನು ನಡೆಸಿದ್ದಾರೆ. ಸಿನಿಮಾ ನೋಡಿದಾಗ ಅವರ ಶ್ರಮ ನಿಜವಾಗಿ ಅರಿವಾಗುತ್ತದೆ ಎಂದರು.

    ಇದೇ ವೇಳೆ ದರ್ಶನ್ ಬಗ್ಗೆ ಹಾಡಿ ಹೊಗಳಿದ ನಾಯಕ ಠಾಕೂರ್ ಅನೂಪ್ ಸಿಂಗ್, ನಾನು ದರ್ಶನ್ ಅವರ ದೊಡ್ಡ ಅಭಿಮಾನಿ. ಅವರ ಜೊತೆ ಯಜಮಾನ ಚಿತ್ರದಲ್ಲಿ ಅಭಿನಯಿಸಿದ್ದು ತುಂಬಾ ಖುಷಿ ತಂದಿದೆ. ಅವರು ಚಿತ್ರೀಕರಣಕ್ಕೆ ರಾಜನ ಹಾಗೆಯೇ ಬರುತ್ತಾರೆ, ರಾಜನ ಹಾಗೆಯೇ ಹೋಗುತ್ತಾರೆ. ಬಾಲಿವುಡ್‍ನ ಸಲ್ಮಾನ್ ಖಾನ್ ರೀತಿ, ಬಾದ್ ಷಾ ಅವರು. ನನ್ನ ಚಿತ್ರವನ್ನು ನೋಡಿ ಎಂದಿದ್ದಕ್ಕೆ, ತಮ್ಮ ಮೊಬೈಲ್ ನಂಬರ್ ಕೊಟ್ಟು ನಿನಗಾಗಿ ಬರುತ್ತೇನೆ ಎಂದು ಹೇಳಿದರು. ಅವರ ಸರಳ ವ್ಯಕ್ತಿತ್ವ ಕಂಡು ನನಗೆ ಹೆಮ್ಮೆಯಾಯಿತು ಎಂದು ಹೇಳಿದರು.

    ಉದ್ಘರ್ಷ ಚಿತ್ರ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಹಾಗು ಮಲಯಾಳಂನಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ನಿರ್ದೇಶಕರು ಚಿಂತನೆ ನಡೆಸಿದ್ದಾರೆ. ಅದ್ದರಿಂದಲೇ ನಾಲ್ಕು ಭಾಷೆಗಳಲ್ಲಿ ನಟಿಸಿರುವ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅನೂಪ್ ಈಗಾಗಲೇ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪರಿಚಿತರಾಗಿದ್ದು, ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಡೆಸಿದ್ದಾರೆ. ಕಬಾಲಿ ಚಿತ್ರದಲ್ಲಿ ರಜಿನಿಕಾಂತ್ ಪಕ್ಕ ಮಿಂಚಿದ್ದ ಧನ್ಸಿಕಾ, ತಾನ್ಯಾ ಹೋಪ್, ಕಬೀರ್ ಸಿಂಗ್ ದುಹಾನ್ ಹಾಗೂ ಬಾಹುಬಲಿ ಚಿತ್ರದಲ್ಲಿ ಕಾಲಕೇಯ ಪಾತ್ರದಲ್ಲಿ ನಟಿಸಿದ್ದ ಪ್ರಭಾಕರ್, ಶ್ರದ್ಧಾ ದಾಸ್ ಮುಂತಾದ ನಟರ ಬಹುದೊಡ್ಡ ಪಟ್ಟಿಯೇ ಈ ಚಿತ್ರದಲ್ಲಿ ಇದೆ.

    ಉಳಿದಂತೆ ಉದ್ಘರ್ಷ ಚಿತ್ರದಲ್ಲಿ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಮಂಜುನಾಥ್, ತಿರುಮಲೈ, ರಾಜೇಂದ್ರ ಕುಮಾರ್ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ ಸಂಜೋಯ್ ಚೌಧರಿ ಸಂಗೀತ, ವಿಷ್ಣು ವರ್ಧನ್ ಛಾಯಾಗ್ರಹಣ, ಕೆಂಪರಾಜು ಸಂಕಲನ ಹಾಗೂ ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ಸಾಹಸ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv