Tag: UCIL

  • ಭೋಪಾಲ್‌ ಅನಿಲ ದುರಂತಕ್ಕೆ 39 ವರ್ಷ – ಇನ್ನೂ ಮಾಸಿಲ್ಲ 3,000ಕ್ಕೂ ಹೆಚ್ಚು ಜನರನ್ನ ಬಲಿ ಪಡೆದ ಕಹಿ ನೆನಪು

    ಭೋಪಾಲ್‌ ಅನಿಲ ದುರಂತಕ್ಕೆ 39 ವರ್ಷ – ಇನ್ನೂ ಮಾಸಿಲ್ಲ 3,000ಕ್ಕೂ ಹೆಚ್ಚು ಜನರನ್ನ ಬಲಿ ಪಡೆದ ಕಹಿ ನೆನಪು

    – ಚುನಾವಣಾ ಫಲಿತಾಂಶದ ಹೊತ್ತಿನಲ್ಲಿ ಸಿಎಂ ಶ್ರದ್ಧಾಂಜಲಿ ಸಲ್ಲಿಕೆ

    ಭೋಪಾಲ್‌: ಮಧ್ಯಪ್ರದೇಶದ ಚುನಾವಣಾ ಫಲಿತಾಂಶದ ಹೊತ್ತಿನಲ್ಲಿ ಹಾಲಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, 1984ರ ಡಿಸೆಂಬರ್‌ 2ರ ತಡರಾತ್ರಿ ನಡೆದ ಭೀಕರ ಅನಿಲ ದುರಂತವನ್ನು ನೆನಪಿಸಿಕೊಂಡಿದ್ದಾರೆ. ಅಂದು ದುರ್ಮರಣ ಹೊಂದಿದ 3 ಸಾವಿರಕ್ಕೂ ಹೆಚ್ಚು ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಅಂದು ಮಡಿದ ಜನರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಅಂತಹ ದುರಂತ ಮತ್ತೆಂದಿಗೂ ಮರುಕಳಿಸಬಾರದು. ಅದಕ್ಕಾಗಿ ನಿರಂತರವಾಗಿ ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: Madhya Pradesh: ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಸಿಎಂ ಅಭಿನಂದನೆ ಪೋಸ್ಟರ್‌ ಹಾಕಿದ ಕಾಂಗ್ರೆಸ್‌

    ಸಾವಿರಾರು ಜೀವಗಳನ್ನ ಬಲಿ ಪಡೆದ ದುರಂತ:
    1984ರ ಡಿ. 2ರ ಮಧ್ಯ ರಾತ್ರಿ (ಡಿಸೆಂಬರ್‌ 3ರ ಹೊತ್ತಿಗೆ) ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ವಿಷಕಾರಿ ಮಿಥೇಲ್ ಐಸೊಸೈನೇಟ್ (Methyl Isocyanate) ಅನಿಲವು ಸೋರಿಕೆಯಾಗಿತ್ತು. ಇದರಿಂದ ಉಂಟಾದ ಅನಾಹುತದಲ್ಲಿ ಸರಿಸುಮಾರು 3,800 ಮಂದಿ ಜೀವ ಕಳೆದುಕೊಂಡರು. 1 ಲಕ್ಷಕ್ಕೂ ಹೆಚ್ಚು ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. 5 ಲಕ್ಷಕ್ಕೂ ಹೆಚ್ಚು ಮಂದಿ ವಿಷಾನೀಲ ಸೇವಿಸಿದ್ದ ಪರಿಣಾಮ ಹೆಚ್ಚು ಜನರ ಮೇಲೆ ದೀರ್ಘಕಾಲದ ಆರೋಗ್ಯ ಪರಿಣಾಮ ಉಂಟು ಮಾಡಿತ್ತು. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ನರೋತ್ತಮ ಮಿಶ್ರಾ

    ಯುಎನ್ ಕಾರ್ಮಿಕ ಸಂಸ್ಥೆ, ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಬಿಡುಗಡೆ ಮಾಡಿದ 2020ರ ವರದಿಯು, 1984 ರಲ್ಲಿ ಭೋಪಾಲ್‌ನಲ್ಲಿನ ಯೂನಿಯನ್ ಕಾರ್ಬೈಡ್ ಕೀಟನಾಶಕ ಘಟಕದಿಂದ ಬಿಡುಗಡೆಯಾದ ಕನಿಷ್ಠ 30 ಟನ್ ಮೀಥೈಲ್ ಐಸೊಸೈನೇಟ್ ವಿಷ ಅನಿಲವು 6 ಲಕ್ಷಕ್ಕೂ ಹೆಚ್ಚು ಮಂದಿ ಮೇಲೆ ಪರಿಣಾಮ ಬೀರಿತು ಎಂಬ ಅಂಶವನ್ನು ಉಲ್ಲೇಖಿಸಿತ್ತು. ನಂತರ ಈ ದುರಂತವು 1919ರ ನಂತರ ನಡೆದ ವಿಶ್ವದ ಪ್ರಮುಖ ಕೈಗಾರಿಕಾ ಅಪಘಾತಗಳ ಪಟ್ಟಿಯನ್ನು ಸೇರಿತು.

    ನಂತರದ ವರ್ಷಗಳಲ್ಲಿ ಸರ್ಕಾರವು ದಾಖಲಿಸಿದ ಅಂಕಿ-ಅಂಶಗಳಲ್ಲಿ ಸುಮಾರು 15,000 ಸಾವುಗಳು ಸಂಭವಿಸಿದೆ ಎಂದು ಅಂದಾಜಿಸಲಾಗಿತ್ತು. ದುರಂತದಲ್ಲಿ ಬದುಕುಳಿದವರು ಉಸಿರಾಟ ಕಾಯಿಲೆ, ಅಂಗಾಗಳ ವೈಫಲ್ಯ, ಮಧುಮೇಹ ಇನ್ನಿತರ ಕಾಯಿಲೆಗಳಿಗೆ ತುತ್ತಾದರು ಎಂಬ ಅಂಶವನ್ನೂ ದಾಖಲಿಸಲಾಗಿತ್ತು. ಆದ್ರೆ ಇಂದಿಗೂ ಬದುಕುಳಿದ ಕೆಲ ಸಂತ್ರಸ್ತರಲ್ಲಿ ಕಾಯಿಲೆಗಳು ವಾಸಿಯಾಗಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ ಸ್ಥಳೀಯರು. ಇದನ್ನೂ ಓದಿ: ರಾಜಸ್ಥಾನದಲ್ಲಿ ಈ ಬಾರಿಯೂ ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ: ಅಶೋಕ್‌ ಗೆಹ್ಲೋಟ್‌ ವಿಶ್ವಾಸ