Tag: Twinkle Khanna

  • ಅಕ್ಷಯ್, ವಿಕ್ಕಿ ಕೌಶಲ್ ‘ಆಪರೇಷನ್ ಸಿಂಧೂರ’ ಸಿನಿಮಾಗಾಗಿ ಫೈಟ್ ಮಾಡ್ತಿಲ್ಲ: ಟ್ವಿಂಕಲ್ ಖನ್ನಾ

    ಅಕ್ಷಯ್, ವಿಕ್ಕಿ ಕೌಶಲ್ ‘ಆಪರೇಷನ್ ಸಿಂಧೂರ’ ಸಿನಿಮಾಗಾಗಿ ಫೈಟ್ ಮಾಡ್ತಿಲ್ಲ: ಟ್ವಿಂಕಲ್ ಖನ್ನಾ

    ಕ್ಷಯ್ ಕುಮಾರ್ (Akshay Kumar) ಮತ್ತು ವಿಕ್ಕಿ ಕೌಶಲ್ ‘ಆಪರೇಷನ್ ಸಿಂಧೂರ’ (Operation Sindoor) ಸಿನಿಮಾಗಾಗಿ ಫೈಟ್ ಮಾಡ್ತಿಲ್ಲ ಎಂದು ನಟ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ (Twinkle Khanna) ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಐಪಿಎಲ್ ಕುರಿತಾದ ಕ್ರೀಡಾ ಪ್ರಧಾನ ಚಿತ್ರದಲ್ಲಿ ಉಪ್ಪಿ-‘ಕರ್ವ’ ಡೈರೆಕ್ಟರ್ ಆ್ಯಕ್ಷನ್ ಕಟ್

    ನೈಜ ಕಥೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಸಿನಿಮಾ ಮಾಡಲು ಅಕ್ಷಯ್ ಕುಮಾರ್ ಮತ್ತು ವಿಕ್ಕಿ ಕೌಶಲ್ ನಡುವೆ ಪೈಪೋಟಿ ನಡೆಯುತ್ತಿದೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿತ್ತು. ಇದು ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ ಗಮನಕ್ಕೂ ಬಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿ ಫೇಕ್ ಸುದ್ದಿ ಎಂದಿದ್ದಾರೆ. ಈ ಸಿನಿಮಾಗಾಗಿ ಇಬ್ಬರೂ ಫೈಟ್ ಮಾಡ್ತಿಲ್ಲ. ಅಕ್ಷಯ್ ಮತ್ತು ವಿಕ್ಕಿ ತಾವು ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ರೆಡ್ಡಿ ಮಗನ ಜೊತೆ ಶ್ರೀಲೀಲಾ ಡ್ಯುಯೆಟ್- ‘ಜೂನಿಯರ್’ ಚಿತ್ರದ ಸಾಂಗ್ ಔಟ್

    ಪಾಕ್‌ಗೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಮೂಲಕ ಭಾರತೀಯ ಸೇನೆ ತಕ್ಕ ಪಾಠ ಕಲಿಸುತ್ತಿದೆ. ಇದನ್ನೇ ಸಿನಿಮಾ ಮಾಡಲು ಬಾಲಿವುಡ್ ನಿರ್ಮಾಪಕರಲ್ಲಿ ಪೈಪೋಟಿ ನಡೆಯುತ್ತಿದೆ. ಈ ವೇಳೆ, ಅಕ್ಷಯ್ ಮತ್ತು ವಿಕ್ಕಿ ಸಿನಿಮಾ ಮಾಡಲು ಕಿತ್ತಾಡುತ್ತಿದ್ದಾರೆ ಎಂಬ ಸುದ್ದಿ ಫೇಕ್ ಎಂದು ಕ್ಲ್ಯಾರಿಟಿ  ನೀಡಿದ್ದಾರೆ ಟ್ವಿಂಕಲ್ ಖನ್ನಾ.

    ಹೌಸ್‌ಫುಲ್ 5, ಜಾಲಿ ಎಲ್‌ಎಲ್‌ಬಿ 3, ವೆಲ್‌ಕಮ್ ಟು ದಿ ಜಂಗಲ್, ಕಣ್ಣಪ್ಪ ಸೇರಿದಂತೆ ಹಲವು ಚಿತ್ರಗಳು ಟ್ವಿಂಕಲ್ ಖನ್ನಾ ಕೈಯಲ್ಲಿವೆ. ವಿಕ್ಕಿ ಕೌಶಲ್ ಛಾವಾ ಸಕ್ಸಸ್ ಬಳಿಕ ಲವ್ & ವಾರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  • 21ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಜುಲ್ಮಿ ಜೋಡಿ

    21ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಜುಲ್ಮಿ ಜೋಡಿ

    ಮುಂಬೈ: ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ದಂಪತಿಯು ಇಂದು ತಮ್ಮ 21ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮಾಚರಣೆಯಲ್ಲಿದ್ದಾರೆ.

     

    View this post on Instagram

     

    A post shared by Twinkle Khanna (@twinklerkhanna)

    ದಂಪತಿ ತಮ್ಮ 21 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು ಟ್ವಿಂಕಲ್ ತನ್ನ ಪತಿಯೊಂದಿಗೆ ಕುಳಿತಿರುವ ಕ್ಯಾಂಡಿಡ್ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಲಾಕ್‍ಡೌನ್ ಬೇಡ- ಸರ್ಕಾರಕ್ಕೆ ಪ್ರತಾಪ್ ಸಿಂಹ ಒತ್ತಾಯ

    ಮುಂಬೈನ  ಪ್ರತಿಷ್ಠಿತ ರೆಸ್ಟೋರೆಂಟ್‍ನಲ್ಲಿ ಕುಳಿತಿರುವುದನ್ನು ನಾವು ನೋಡಬಹುದಾಗಿದ್ದು. ಅಕ್ಷಯ್ ಅವರು ಹೂಡಿ ಮತ್ತು ಜಾಗಿಂಗ್ ಟ್ರ್ಯಾಕ್ ಪ್ಯಾಂಟ್ ಧರಿಸಿದ್ದಾರೆ. ಟ್ವಿಂಕಲ್ ಬಿಳಿಯ ಟಾಪ್ ಮೇಲೆ ಸ್ಕಾರ್ಫ್ ಜೊತೆಗೆ ಪುಲ್ ಓವರ್ ಧರಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಚೇತರಿಕೆಗಾಗಿ ವಿಶೇಷ ಪೂಜೆ ಸಲ್ಲಿಸುತ್ತಿರುವ ಆಶಾ ಭೋಂಸ್ಲೆ

    ಚಿತ್ರಕ್ಕೆ ವಿಶೇಷವಾದ ಶೀರ್ಷಿಕೆಯನ್ನು ಟ್ವಿಂಕಲ್ ಅವರು ಬರೆದುಕೊಂಡಿದ್ದಾರೆ. ಅಕ್ಷಯ್ ಮತ್ತು ಟ್ವಿಂಕಲ್ ಜನವರಿ 17, 2001 ರಂದು ವಿವಾಹವಾಗಿದ್ದಾರೆ. ಅವರಿಗೆ ಆರವ್ ಕುಮಾರ್ ಮತ್ತು ಮಗಳು ನಿತಾರಾ ಕುಮಾರ್ ಎಂಬ ಇಬ್ಬರು ಮಕ್ಕಳಿದ್ದಾರೆ.

  • ಕೊರೊನಾ ಲಾಕ್‍ಡೌನ್- ಪತ್ನಿಗಾಗಿ ಕಾರ್ ರಸ್ತೆಗಿಳಿಸಿದ ಅಕ್ಷಯ್ ಕುಮಾರ್

    ಕೊರೊನಾ ಲಾಕ್‍ಡೌನ್- ಪತ್ನಿಗಾಗಿ ಕಾರ್ ರಸ್ತೆಗಿಳಿಸಿದ ಅಕ್ಷಯ್ ಕುಮಾರ್

    ನವದೆಹಲಿ: ಕೊರೊನಾ ವಿರುದ್ಧ ಹೋರಾಡಲು ಬರೋಬ್ಬರಿ 25 ಕೋಟಿ ರೂ.ಗಳ ಸಹಾಯ ಧನ ನೀಡುವ ಮೂಲಕ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮೆಚ್ಚುಗೆಗೆ ಪಾತ್ರರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸಹ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದೀಗ ಅವರು ಪತ್ನಿಗಾಗಿ ಕಾರನ್ನು ರಸ್ತೆಗಿಳಿಸಿದ್ದಾರೆ.

    ಅಕ್ಷಯ್ ಕುಮಾರ್ ಯಾವುದೇ ತುರ್ತು ಸಂದರ್ಭದಲ್ಲಿ ಸಹಾಯ ಮಾಡಲು ಎತ್ತಿದ ಕೈ. ಅದರಲ್ಲೂ ಯೋಧರ ವಿಚಾರದಲ್ಲಿ ಸಹಾಯ ಮಾಡಲು ಮುಂಚೂಣಿಯಲ್ಲಿರುತ್ತಾರೆ ಎಂಬುದು ತಿಳಿದೇ ಇದೆ. ಅದೇ ರೀತಿ ಈ ಬಾರಿ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾಗಿದ್ದು, ಈ ವೇಳೆಯೂ ಅತಿ ದೊಡ್ಡ ಮೊತ್ತವನ್ನು ನೀಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಅವರ ಈ ಕಾಳಜಿ ಹಾಗೂ ಸಮಾಜದ ಕುರಿತು ಅವರಿಗಿರುವ ದೃಷ್ಟಿಕೋನಕ್ಕೆ ಇಡೀ ಭಾರತೀಯರೇ ಮನಸೋತಿದ್ದಾರೆ.

    ಪ್ರಧಾನಿ ಟ್ವೀಟ್‍ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿ, ಈ ಸಮಯದಲ್ಲಿ ಜನರ ಪ್ರಾಣವೇ ಎಲ್ಲಕ್ಕಿಂತ ಮುಖ್ಯ. ಅದಕ್ಕಾಗಿ ಏನೆಲ್ಲ ಸಾಧ್ಯವೋ ಅದೆಲ್ಲವನ್ನು ನಾವು ಮಾಡಬೇಕು. ನನ್ನ ಉಳಿತಾಯದ ಹಣದಲ್ಲಿ 25 ಕೋಟಿ ರೂ. ಗಳನ್ನು ನರೇಂದ್ರ ಮೋದಿಯವರ ಪಿಎಂ-ಕೇರ್ಸ್ ಫಂಡ್‍ಗೆ ನೀಡುವುದಾಗಿ ಪ್ರಮಾಣಿಸುತ್ತಿದ್ದೇನೆ. ನಾವೆಲ್ಲ ಒಂದಾಗಿ ಜೀವ ಉಳಿಸೋಣ. ಜೀವ ಇದ್ದರೆ ಜಗತ್ತು’ ಎಂದು ಬರೆದುಕೊಂಡಿದ್ದರು.

    ಇದೀಗ ಅವರು ತಮ್ಮ ಪತ್ನಿಯನ್ನು ಕಾರ್ ನಲ್ಲಿ ಕರೆದುಕೊಂಡು ಹೋಗಿದ್ದು, ಈ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಯಾಕೆಂದರೆ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರಿಗೆ ಕಾಲಿನ ಮೂಳೆಗೆ ಪೆಟ್ಟಾಗಿದ್ದು, ತುಂಬಾ ನೋವು ಅನುಭವಿಸುತ್ತಿದ್ದರು. ಹೀಗಾಗಿ ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಕುರಿತು ಹೆಚ್ಚು ಜನ ಆತಂಕಗೊಂಡಿದ್ದು, ಅವರ ಅಭಿಮಾನಿಗಳು ಹಾಗೂ ಸ್ನೇಹಿತರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

    ಟ್ವಿಂಕಲ್ ಖನ್ನಾ ಅವರು ಈ ವಿಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ನಾವು ಆಸ್ಪತ್ರೆಯಿಂದ ಹಿಂದಿರುಗುವಾಗ ರಸ್ತೆ ಹೀಗಿದ್ದವು. ದಯವಿಟ್ಟು ಗಾಬರಿಯಾಗಬೇಡಿ ನಾನು ಬಕೆಟ್ ಒದಿಯುವ ಕುರಿತು ಮಾತನಾಡುತ್ತಿಲ್ಲ. ಏಕೆಂದರೆ ಈ ಸಂದರ್ಭದಲ್ಲಿ ಏನನ್ನೂ ಒದಿಯಲು ನನ್ನಿಂದ ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ಪೋಸ್ಟ್‍ನಲ್ಲಿ ಕರಣ್ ಕಪಾಡಿಯಾ ಅವರ ಸಲಹೆ ಮೇರೆಗೆ ನನ್ನ ಬಳಿ ಟಿಕ್-ಟಾಕ್-ಟೋ ಆಡಿದ್ದಾರೆ. ಕಾಲು ಮುರಿಯಲು ಎಂದಿಗೂ ಉತ್ತಮ ಸಮಯವಲ್ಲ. ಏಕೆಂದರೆ ನಾನಾದರೂ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

  • ಅಮ್ಮನ ಹೆಸರನ್ನು ವಿಶಿಷ್ಟವಾಗಿ ಸೇವ್ ಮಾಡಿ ಸುದ್ದಿಯಾದ ಅಕ್ಷಯ್ ಪುತ್ರ

    ಅಮ್ಮನ ಹೆಸರನ್ನು ವಿಶಿಷ್ಟವಾಗಿ ಸೇವ್ ಮಾಡಿ ಸುದ್ದಿಯಾದ ಅಕ್ಷಯ್ ಪುತ್ರ

    ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಪುತ್ರ ತನ್ನ ತಾಯಿಯ ಹೆಸರನ್ನು ಫೋನಿನಲ್ಲಿ ವಿಶಿಷ್ಟವಾಗಿ ಸೇವ್ ಮಾಡಿ ಸುದ್ದಿಯಾಗಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟ-ನಟಿಯ ಮಕ್ಕಳು ಏನೇ ಮಾಡಿದರು ಅದು ಸುದ್ದಿಯಾಗುತ್ತದೆ. ಅದೇ ರೀತಿಯಲ್ಲಿ ನಟ ಅಕ್ಷಯ್ ಕುಮಾರ್ ಅವರ ಪುತ್ರ ಆರವ್ ಕುಮಾರ್ ಅವರು ತಮ್ಮ ತಾಯಿ ಟ್ವಿಂಕಲ್ ಖನ್ನಾ ಅವರ ಫೋನ್ ನಂಬರ್ ಅನ್ನು ‘ಪೊಲೀಸ್’ ಎಂದು ಸೇವ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗುತ್ತಿದೆ.

    https://www.instagram.com/p/B7nEa-glbD7/?utm_source=ig_embed

    ಸದಾ ಸಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ ಅವರು, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಫ್ಯಾಮಿಲಿ ವಿಚಾರಗಳು ಹಾಗೂ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮನೋರಂಜನೆ ನೀಡುತ್ತಿರುತ್ತಾರೆ. ಈಗ ತಮ್ಮ ಮಗ ತನ್ನ ನಂಬರ್ ಅನ್ನು ಪೊಲೀಸ್ ಎಂದು ಸೇವ್ ಮಾಡಿರುವುದನ್ನು ಸ್ವತಃ ಅವರೇ ರಿವೀಲ್ ಮಾಡಿದ್ದಾರೆ.

    ಮಗ ತನ್ನ ನಂಬರ್ ಅನ್ನು ಪೊಲೀಸ್ ಎಂದು ಸೇವ್ ಮಾಡಿರುವ ಬಗ್ಗೆ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‍ವೊಂದನ್ನು ಹಾಕಿರುವ ಟ್ವಿಂಕಲ್ ಖನ್ನಾ ಅವರು, ತಾವು ಪೊಲೀಸ್ ವ್ಯಾನ್ ಮುಂದೆ ನಿಂತುಕೊಂಡಿರುವ ಫೋಟೋ ಹಾಕಿ. ನನ್ನ ಮಗ ನನ್ನ ನಂಬರ್ ಅನ್ನು ಅವನ ಫೋನಿನಲ್ಲಿ ಪೊಲೀಸ್ ಎಂದು ಸೇವ್ ಮಾಡಿದ್ದಾನೆ ಎಂದು ಬರೆದುಕೊಂಡಿದ್ದಾರೆ.

  • ಅಕ್ಷಯ್‍ರಿಂದ ಪತ್ನಿಗೆ ಈರುಳ್ಳಿ ಕಿವಿಯೋಲೆ ಗಿಫ್ಟ್

    ಅಕ್ಷಯ್‍ರಿಂದ ಪತ್ನಿಗೆ ಈರುಳ್ಳಿ ಕಿವಿಯೋಲೆ ಗಿಫ್ಟ್

    ಮುಂಬೈ: ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ತಮ್ಮ ಪತ್ನಿ, ನಟಿ ಟ್ವಿಂಕಲ್ ಖನ್ನಾ ಅವರಿಗೆ ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ.

    ಅಕ್ಷಯ್ ತಮ್ಮ ಮುಂಬರುವ ‘ಗುಡ್ ನ್ಯೂಸ್’ ಚಿತ್ರದ ಪ್ರಮೋಶನ್‍ಗಾಗಿ ‘ದಿ ಕಪಿಲ್ ಶರ್ಮಾ ಶೋ’ಗೆ ಹೋಗಿದ್ದರು. ಈರುಳ್ಳಿ ಕಿವಿಯೋಲೆಯನ್ನು ಅಕ್ಷಯ್ ಮೊದಲು ನಟಿ ಕರೀನಾ ಕಪೂರ್ ಅವರಿಗೆ ನೀಡಲು ಮುಂದಾದರು. ಆದರೆ ಕರೀನಾ ಅದನ್ನು ಸ್ವೀಕರಿಸಲಿಲ್ಲ. ನಂತರ ಅಕ್ಷಯ್ ತಮ್ಮ ಪತ್ನಿಗೆ ಆ ಕಿವಿಯೋಲೆ ನೀಡಿದ್ದಾರೆ. ಅಕ್ಷಯ್ ತಮ್ಮ ಪತ್ನಿ ಟ್ವಿಂಕಲ್ ಅವರಿಗೆ ಈರುಳ್ಳಿ ಕಿವಿಯೋಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಟ್ವಿಂಕಲ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಆ ಈರುಳ್ಳಿಯ ಕಿವಿಯೋಲೆಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ನನ್ನ ಸಂಗಾತಿ ‘ದಿ ಕಪಿಲ್ ಶರ್ಮಾ ಶೋ’ ಕಾರ್ಯಕ್ರಮದಿಂದ ಬಂದರು. ಈ ವೇಳೆ ಅವರು ಈರುಳ್ಳಿ ಕಿವಿಯೋಲೆ ತೋರಿಸಿ, ನಾನು ಇದನ್ನು ಕರೀನಾಗೆ ತೋರಿಸಿದೆ. ಆದರೆ ಅವರು ಆಕರ್ಷಿತರಾಗಿಲ್ಲ. ಇದು ನಿನಗೆ ಇಷ್ಟವಾಗಬಹುದು ಎಂದು ನನಗನಿಸಿತು. ಹಾಗಾಗಿ ನಿನಗೆ ನೀಡುತ್ತಿದ್ದೇನೆ. ಕೆಲವು ಬಾರಿ ಚಿಕ್ಕ ಹಾಗೂ ಸಾಧಾರಣಾ ವಸ್ತು ನಮ್ಮ ಮನಸ್ಸು ಗೆಲ್ಲುತ್ತದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಸದ್ಯ ಅಕ್ಷಯ್ ಕುಮಾರ್ ಅವರು ತಮ್ಮ ‘ಗುಡ್ ನ್ಯೂಸ್’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಅವರಿಗೆ ನಾಯಕಿಯಾಗಿ ನಟಿ ಕರೀನಾ ಕಪೂರ್ ನಟಿಸಿದ್ದಾರೆ. ಅಲ್ಲದೆ ದಿಲ್‍ಜಿತ್ ದೋಸನ್‍ಜ್ ಹಾಗೂ ಕಿಯಾರಾ ಅಡ್ವಾನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಡಿಸೆಂಬರ್ 27ರಂದು ಈ ಚಿತ್ರ ಬಿಡುಗಡೆಯಾಗಲಿದೆ.

  • ಮನೆಗೆ ಬಂದ್ರೆ ಸಾಯಿಸ್ತೀನಿ – ಪತಿಯ ಹುಚ್ಚು ಸಾಹಸಕ್ಕೆ ಟ್ವಿಂಕಲ್ ಖನ್ನಾ ಗರಂ

    ಮನೆಗೆ ಬಂದ್ರೆ ಸಾಯಿಸ್ತೀನಿ – ಪತಿಯ ಹುಚ್ಚು ಸಾಹಸಕ್ಕೆ ಟ್ವಿಂಕಲ್ ಖನ್ನಾ ಗರಂ

    ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಹುಚ್ಚು ಸಾಹಸಕ್ಕೆ ಅವರ ಪತ್ನಿ, ನಟಿ ಟ್ವಿಂಕಲ್ ಖನ್ನಾ ಅವರು ಗರಂ ಆಗಿ ಮನೆಗೆ ಬಂದ್ರೆ ಸಾಯಸ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ.

    ಅಕ್ಷಯ್ ಕುಮಾರ್ ನಟಿಸುತ್ತಿರುವ ತಮ್ಮ ಮೊದಲ ವೆಬ್ ಸಿರೀಸ್ ‘ದಿ-ಎಂಡ್’ ಬಗ್ಗೆ ಘೋಷಣೆ ಮಾಡಲು ತಮ್ಮ ದೇಹ ಹಾಗೂ ಕೈ- ಕಾಲುಗಳಿಗೆ ಬೆಂಕಿ ಹಚ್ಚಿಕೊಂಡು ಕಾರ್ಯಕ್ರಮಕ್ಕೆ ಎಂಟ್ರಿ ನೀಡಿದ್ದರು. ಅಲ್ಲದೇ ಅಕ್ಷಯ್ ಕುಮಾರ್ ತಾವು ಬೆಂಕಿ ಹಚ್ಚಿಕೊಂಡ ಫೋಟೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದರು.

    ಈ ಟ್ವೀಟ್‍ಗೆ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರು, “ನೀವು ಈ ರೀತಿ ಬೆಂಕಿ ಹಚ್ಚಿಕೊಂಡಿದ್ದೀರಿ ಎನ್ನುವುದು ಈಗ ನನಗೆ ಗೊತ್ತಾಯಿತು. ನೀವು ಈ ಬೆಂಕಿಯಲ್ಲಿ ಸತ್ತಿಲ್ಲ ಎಂದರೆ ನೀವು ಮನೆಗೆ ಬಂದಾಗ ನಾನೇ ಸಾಯಸುತ್ತೇನೆ” ಎಂದು ಟ್ವೀಟ್ ಮಾಡಿ, “ದೇವರೇ ನನ್ನನ್ನು ರಕ್ಷಿಸು” ಎಂಬ ಹ್ಯಾಶ್‍ಟ್ಯಾಗ್ ಬಳಸಿ ರೀ ಟ್ವೀಟ್ ಮಾಡಿದ್ದಾರೆ.

    ಟ್ವಿಂಕಲ್ ಅವರು ತಮಾಷೆಗಾಗಿ ಈ ರೀತಿ ಟ್ವೀಟ್ ಮಾಡಿದ್ದರೂ ಕೆಲವರು ಅಕ್ಷಯ್ ಮನೆಗೆ ಬಂದ ಮೇಲೆ ಏನಾಯಿತು. ನಮಗೆ ಅಪ್‍ಡೇಟ್ ಮಾಡಿ. ನಾವು ಕುತೂಹಲದಿಂದ ಇದ್ದೇವೆ ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

    ಸದ್ಯ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಚಿತ್ರ ಮಾರ್ಚ್ 21ರಂದು ಬಿಡುಗಡೆಯಾಗಲಿದೆ. ಅಲ್ಲದೇ ಅಕ್ಷಯ್ ‘ಹೌಸ್‍ಫುಲ್-4’, ‘ಗುಡ್ ನ್ಯೂಸ್’ ಹಾಗೂ ‘ಮಿಶನ್ ಮಂಗಲ್’ ಚಿತ್ರದಲ್ಲಿ ನಟಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv